ವೃತ್ತಿ ವೃತ್ತಾಂತ
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೨೭
ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ ಬೊಮ್ಮಾ ಸಾವಿಲ್ಲದ ಮನೆಯ ಸಾಸಿವೆ ಹುಡುಕುತ್ತ… ಒಂದೊಂದು ಸಲ ಬದುಕು ಅಂದ್ರ ಏನಂತ ತಿಳಿವಲ್ದು. ರಾತ್ರಿ ಮಲಕ್ಕೊಂಡು ಮರುದಿನದ ಬೆಳಕು ನೊಡಿದ್ರ ಅದೇ ಬದುಕು. ಮುಂದಿನ ಕ್ಷಣ ಏನು ಎತ್ತ ಅಂತ ಚಿಂತಿ ಮಾಡೊವಷ್ಟರಾಗ ಏನೇನೊ ಘಟಿಸಿ ಬಿಡಲತದ. ಚಿಕ್ಕವರಿದ್ದಾಗ ಸಾವು ವಯಸ್ಸಾದವ್ರಿಗಿ ಮಾತ್ರ ಬರತದ ಅಂತ ತಿಳಕೊಂಡ ಕಾಲ ಒಂದಿತ್ತು. ಹಾಗೆ ಘಟಿಸತಿತ್ತು.ಆತ್ಮಹತ್ಯೆ ಅಂದರ ಏನು ಅಂತ ಕೂಡ ತಿಳದಿರಲಿಲ್ಲ.ಈಗಿಗ ಚಿಕ್ಕ ಪ್ರಾಯದವರ ಸಾವು ಬಹಳ ಕಂಗೆಡಸತದ.ಬದುಕು ಕಾಣಬೇಕಾದವ್ರು ಅಕಾಲಿಕವಾಗಿ ತೀರಿ ಹೋದ್ರ ಮನಸ್ಸು ಒಂಥರಾ ವಿಷಾದ ಆಗತದ.ಅದರಲ್ಲೂ ಆತ್ಮಹತ್ಯೆ ಅಂತ ಸಾವುಗಳಿಗಿ ಮರುಗಬೇಕೋ ಸಿಟ್ಟು ಮಾಡ್ಕೋಬೇಕೋ ತಿಳಿವಲ್ದು. ಆತ್ಮಹತ್ಯೆಗಳಿಗಿ ಚಿಕ್ಕವಯಸ್ಸಿನವರೆ ಹೆಚ್ಚು ಬಲಿ ಆಗತಿದ್ದಾರ.ದುಡುಕಿನ ಮತ್ತು ಸಿಟ್ಟಿನಲ್ಲಿ ತಗೊಂಡ ನಿರ್ದಾರಗಳು ಅದೆಷ್ಟು ಬೇಗ ಜೀವ ತಗೊಂಡು ಬಿಡತಾವ. ಸಾಯಲಕ್ಕ ತೋರಿಸೋ ದೈರ್ಯ ಬದುಕಲಕ್ಕ ಯಾಕ ತೋರಿಸೋದಿಲ್ಲ..! ಸಾಯುವಷ್ಟು ದೈರ್ಯ ಬದುಕಲಿಕ್ಕ ಬೇಕಾಗಿಯೂ ಇಲ್ಲ. ಬದುಕು ಅದರ ಪಾಡಿಗದು ನಡಿತಿರತದ.ಆದ್ರ ಈಗಿನ ಯುವ ಜನ ಒಂದು ಸ್ವಲ್ಪ ಜೀವನದಾಗ ಏರು ಪೇರಾದ್ರೂ ಜೀವಕ್ಕ ಸಂಚಕಾರ ತಂದುಕೊಳ್ಳತಿದ್ದಾರ. ಚಿಕ್ಕ ವಯಸ್ಸಿನವವರದು ದುಡುಕಿನ ನಿರ್ದಾರ ಅನ್ನಬಹುದು. ಜೀವನದ ಅರ್ದ ಶತಮಾನದ ಏಳು ಬೀಳುಗಳನ್ನು ನೋಡಿದವ್ರು ಯಾವದೊ ಒಂದು ಕಾರಣಕ್ಕ ಜೀವನಾನೆ ಬಲಿ ತಗೊಂಡು ಬಿಡತಿದ್ದಾರಂದ್ರ ..ಏನು ಕಾರಣ ಹುಡುಕಬೇಕು. ಆತ್ಮ ಹತ್ಯೆಗ ಮುಖ್ಯ ಕಾರಣ ಖಿನ್ನತೆ ಅಂತ ಮೇಲ್ನೋಟಕ್ಕೆ ತಿಳಿಬಹುದು.ಜೊತೆಗಿರುವವರು ಖಿನ್ನತೆಗೆ ಒಳಪಟ್ಟವರನ್ನು ಹೇಗೆ ಗುರುತಿಸಬೇಕು.ಎಲ್ಲರ ಜೋತೆ ಚಂದ ಉಂಡು ಓಡಾಡಿ ಮಾತಾಡಿ ಯಾವದೊ ಒಂದು ಕ್ಷಣದಲ್ಲಿ ತಂತಾನೆ ಲೋಕದಿಂದ ನಿರ್ಗಮಿಸಿ ಬಿಟ್ಟ ಸಂಬಂಧ ಪಟ್ಟವರು ತಡಕೊಳ್ಲೋದು ಎಷ್ಟು ಕಷ್ಟ.ಜೀವನ ಪರ್ಯಂತ ಅವರ ಸಾವಿಗಿ ಕಾರಣ ಹುಡುಕಾಡೊದು ಬಿಟ್ಟು ಮತ್ತೆನು ಮಾಡ್ಲಿಕ್ಕಾಗತದ. ನಾನು ನೋಡಿದ ಮಟ್ಟಿಗಿ ಖಿನ್ನತೆ ಕಾಡುವದು ಎಲ್ಲಾ ಉಳ್ಳವರಿಗಿ.ದಿನಾ ದುಡದು ತಿನ್ನೊವರ್ರಿಗಿ ಇದು ಹೆಚ್ಚಾಗಿ ಕಾಡಲ್ಕ ಅನಿಸ್ತದ. ಮೈ ಮುರಿದು ದುಡಿಯೋರಿಗಿ ಮನಸ್ಸು ಖುಷಿಯಾಗಿ ಇರಲು ಬೇಕಾದ ಡೂಪ್ ಮೀನ್ ಎಂಬ ಹಾರ್ಮೊನ್ ತನ್ನ ತಾನೆ ಉತ್ಪತ್ತಿ ಆಗತದ. ಎಲ್ಲಾ ಸೌಲಭ್ಯ ಇರೋರು , ಸದಾ ಕಂಫರ್ಟ ಝೊನ್ ನಲ್ಲಿ ಇರೋರಿಗಿ , ಮೈಗಳ್ಳರಿಗಿ ,ದೇಹಕ್ಕ ವ್ಯಾಯಾಮ ಇಲ್ದವರಿಗಿ ಡೋಪ್ ಮೀನ್ ಹಾರ್ಮೊನ್ ಉತ್ಪತ್ತಿ ಆಗೋದೆ ಇಲ್ಲ. ಆಗ ಮನಸ್ಸು ಬೇಜಾರು , ನಿರಾಸೆಗೆ ಒಳಪಡತದ.ಎಲ್ಲದರ ಮ್ಯಾಲಿನ ಆಸಕ್ತಿ ಕಮ್ಮಿ ಆಗತದ.ಎಲ್ಲರೊಂದಿಗೆ ಛಲೋ ವರ್ತಿಸತಿದ್ರು ಅವ್ರು ಒಳಗ ಅಸಮಾಧಾನದಿಂದ ಇರತಾರ.ಸದಾ ಒಂಟಿ ಆಗಿ ಇರಲಕ್ಜ ಬಯಸ್ತಾರ. ಇಲ್ಲ ಬರೀ ಪೋನ್ ನೊಂದಿಗೆ ಇರತಾರ.ಪೋನ್ ನೊಡೊದ್ರಿಂದ ಮಿದುಳಿನಾಗ ಡೂಪ್ಮೀನ್ ಹಾರ್ಮೊನು ಉತ್ಪತ್ತಿ ಆಗಿ ಮನಸ್ಸು ಸಮಾಧಾನದಿಂದ ಇಡತದ.ಅದಕ್ಕ ಎಲ್ರೂ ಈಗ ಪೋನ್ ವ್ಯಸನಿಗಳಾಗಿರೋದು. ಪೋನ್ ಹಿಡಕ್ಕೊಂಡು ಕುಂತಷ್ಟು ಹೊತ್ತು ತಲೆಯೊಳಗ ಯಾವ್ದೆ ಆಲೋಚನೆ ಬರಲಾರದೆ ಈ ಹಾರ್ಮೊನ್ ತಡಿತದ. ಪೋನ್ ಬಿಟ್ಟ ತಕ್ಷಣ ಮತ್ತ ಮತ್ತ ಪೋನ್ ಕಡಿಗೆ ಮನಸ್ಸು ಏಳಿತದ. ಅಲ್ಕೋಹಾಲ್ ಕುಡಿದಾಗ , ಗುಟಕಾ ತಿನ್ನುವಾಗ , ದೂಮಪಾನ ಮಾಡುವಾಗ ಹೀಗೆ ಈ ಎಲ್ಲಾ ಚಟಗಳು ಆ ಸಮಯದಲ್ಲಿ ನಮ್ಮ ದೇಹದ ಖುಷಿಯ ಹಾರ್ಮೋನ್ ಬಿಡುಗಡೆಗೊಳಿಸಿ ನಮ್ಮನ್ನು ಪದೆ ಪದೆ ಅದನ್ನೆ ಮಾಡಲು ಪ್ರೇರೆಪಿಸ್ತದ. ಆದ್ರ ಈ ಎಲ್ಲಾ ಚಟಗಳು ನಮಗ ಯಾವಾಗ ವ್ಯಸನಗಳಾಗಿ ಬದಲಾಗತಾವ ನಮಗ ಅರಿವಿಗಿ ಬರೊದಿಲ್ಲ.ಅಷ್ಟರಲ್ಲಿ ತಡ ಆಗಿರತದ.ವ್ಯಸನ ಮನುಷ್ಯ ನನ್ನು ಖಿನ್ನತೆಗೆ ಒಳಪಡಸ್ತದ. ವ್ಯಸನಗಳಿಲದೆಯು ಮನುಷ್ಯ ಖಿನ್ನತೆಗೆ ಹೋಗಬಹುದು.ಚಿಕ್ಕವಯಸ್ಸಿನಲ್ಲಿ ಆಗಿರೋ ಅಹಿತಕರ ಘಟನೆಗಳು , ಅಥವಾ ಪೋಷಕರಿಂದ ಸಿಗಬೇಕಾದ ಪ್ರೀತಿ ಮಮತೆಗಳು ಸಿಗದೆ ಇದ್ದಾಗ , ಕೌಟುಂಬಿಕ ದೌರ್ಜನ್ಯ ಗಳು , ಪ್ರೀತಿ ಪಾತ್ರರನ್ನು ಕಳಕೊಂಡ ನೋವು ಇವುಗಳು ಖಿನ್ನತೆಗೆ ದೂಡತಾವ.ಆದ್ರ ಇದರ ಅರಿವು ಆಗೊವಷ್ಟರಲ್ಲಿ ಅವ್ರು ಪೂರ್ಣವಾಗಿ ಖಿನ್ನತೆಯೊಳಗ ಜಾರಿಬಿಟ್ಟಿರತಾರ. ಜೀವನದ ಬಗ್ಗೆ ಬ್ಯಾಸರ. ನಿರಾಸಕ್ತಿ , ಯಾವದರಲ್ಲೂ ಆಸಕ್ತಿ ಇಲ್ಲದಿರೋದು , ನಿದ್ಧೆ ಬರದೆ ಇರೋದು , ಅತೀ ಭಾವುಕರಾಗೋದು , ಸದಾ ನೆಗೆಟಿವ್ ಆಲೋಚನೆಗಳು , ನಾನು ಎಲ್ಲರಿಂದ ನಿರಾದರಕ್ಕ ಒಳಪಟ್ಟಿದ್ದೆನೆಂಬ ಭ್ರಮೆ , ಇವೆಲ್ಲವೂ ಖಿನ್ನತೆಯ ಲಕ್ಷಣಗಳು. ಅವರಿಗೆ ಗೊತ್ತಿಲ್ಲದಂತೆ ಮನಸ್ಸಿನಾಗ ಆತ್ಮಹತ್ಯೆ ವಿಚಾರಗಳು ಬರತಾವ.ಒಟ್ಟು ಜೀವನ ಕೊನೆಗಾಣಿಸಬೇಕು ಎಂಬ ತುಡಿತ ಸದಾ ಇರತದ.ಇಂತಹ ವಿಚಾರಗಳು ಅವ್ರು ಯಾರ ಹತ್ರನೂ ಹಂಚಿಕೊಳ್ಳೊದಿಲ್ಲ.ಒಂದು ವ್ಯಾಳೆ ಹೇಳಿದ್ರು ಮನೆಯವರು ಮೊದಲು ಮಾಡೋದೆ ದೇವ್ರು ದೆವ್ವ ಎಂಬ ಪ್ರಯೋಗಗಳು.ಮಾನಸಿಕ ರೋಗ ತಜ್ಞ ರಲ್ಲಿ ಹೋಗಬೇಕೆಂಬ ಆಲೋಚನೆಯೂ ಮಾಡೊದಿಲ್ಲ. ಎಷ್ಟೋ ಜನ ನಾವು ಖಿನ್ನತೆಗೆ ಒಳಪಟ್ಟಿವಿ ಎಂದು ನಂಬಲಿಕ್ಕೂ ತಯ್ಯಾರಿರಲ್ಲ.ಖಿನ್ನತೆ ಅಂದ್ರ ಹುಚ್ಚು ಅಂತ ತಿಳಕೊಂಡಿರೋರು ಇದ್ದಾರ.ಅಂತವರು ಮಾನಸಿಕ ರೋಗ ತಜ್ಞ ರ ಹೆಸರು ಕೆಳಿದ್ರ ಅಂಜತಾರ. ಅಂತ ಡಾಕ್ಟರ ಹತ್ದ ಹೊದ್ರ ಜನ ಎಲ್ಲಿ ತಮಗ ಹುಚ್ಚರ ಪಟ್ಟ ಕಟ್ಟಾತಾರೋ ಅನ್ನೊ ಅಂಜಿಕಿ ಇರತದ. ತಮ್ಮ ಖಿನ್ನತೆ ನಿಭಾಯಿಸಲಕ್ಕ ಆಗ್ಧ ಕೊನೆಗೆ ಸಾವಿನಲ್ಲಿ ಪರಿಹಾರ ಕಾಣತಾರ. ಮಕ್ಕಳಲ್ಲಿ ಖಿನ್ನತೆ ಲಕ್ಷಣ ಹ್ಯಾಂಗ್ ಗುರುತಿಸಬೇಕು.ಅವ್ರು ದಿನಾ ಉಣ್ಣತಾರ ,ತಿಂತಾರ , ಸಾಲಿಗಿ ಹೋಗತಾರ ,ನಗತಾರ ,ಅಳತಾರ ,ಜಗಳ ಆಡತಾದ..ಒಟ್ಟಿನಾಗ ಎಲ್ರೂ ಇರೊ ಹಂಗ ಇರತಾರ . ಒಮ್ಮ ನೇಣಿಗಿ ಶರಣಾಗತಾದ.ಆಗ ಯಾವ ಕಾರಣ ಹುಡುಕಬೇಕು.ಹೆತ್ತವರು ಹ್ಯಂಗ್ ಬದುಕಬೇಕು.ಜೀವನ ಪರ್ಯಂತ ಈ ಪ್ರಶ್ನೆಗೆ ಉತ್ತರ ಹುಡುಕ್ಕೊಂತ ಬದುಕುವ ಅವರ ಪಾಡು ಹ್ಯಾಂಗ್ ವರ್ಣಿಸಬೇಕು..! ಕಾಲೇಜು , ಹಾಸ್ಟೆಲ್ ನಲ್ಲಿರುವ ಮಕ್ಕಳು ಈ ರೀತಿ ಮಾಡಿಕೊಳ್ಳುವದಕ್ಕ ಮುಖ್ಯ ಕಾರಣ ಖಿನ್ನತೆ.ಒತ್ತಡ. ಓದುವ ಅಥವಾ ಪ್ರೆಮ ವೈಫಲ್ಯ , ಮನೆಯವರು ಬೈದರೆಂದು , ಶಿಕ್ಷಕರು ಹೊಡೆದರೆಂದು , ಮೊಬೈಲ್ ಕಸಕೊಂಡರು ಎಂದು ಸಣ್ಣ ಸಣ್ಣ ಕಾರಣಗಳಿಗಿ ಆತ್ಮಹತ್ಯೆ ಮಾಡ್ಕೊಳ್ಳೊದು ಹೆಚ್ಚು ಆಗಲತದ. ಇದಕ್ಕ ಕಾರಣ ಹುಡುಕಿದ್ರ ಮೊಟ್ಟಮೊದಲು ಕಾಣೋದು ಮಕ್ಳು ಮತ್ತು ಹರೆದವರಿಗಿ ಒತ್ತಡ ನಿಭಾಯಿಸಲಿಕ್ಕ ಆಗ್ದೆ ಇರೋದು.ಸದಾ ಆರಾಮ ಮತ್ತು ಕಂಫರ್ಟ ನ್ನು ಹೆತ್ತವರು ಮಕ್ಳಿಗಿ ಕೊಡತಿದ್ದಾರ.ಅವ್ರು ಬೇಡಿದ್ಚು ಕೊಡ್ಸಿ ಅವ್ರು ಕೇಳಿದ್ದು ತಿನ್ಸಿ ಅವ್ರನ್ನ ಏನು ಮಾಡ್ಲಿಕ್ಕ ಬಿಡದಂಗ ಮಾಡಿ ಅವ್ರನ್ನ ಒಂದು ಕಂಫರ್ಟ ಎಂಬ ಒಂದು ವರ್ತುಲ ದೊಳಗ ಸಿಕ್ಕಿ ಹಾಕ್ತಿವಿ.ಹೊರಗ ಏನು ಚಂದಿಲ್ಲ ಎಂಬ ನಿಗರಾನಿಯೊಳಗ ಬೆಳೆಸ್ತಿವಿ .ಒಂದಿಷ್ಟು ಜೀವನದೊಂದಿಗೆ ಹೋರಾಡೋ ಶಕ್ತಿನೂ ಅವ್ರರಲ್ಲಿ ತುಂಬದೆ ಬೆಳೆಸಿತಿದ್ದಿವಿ.ಯಾವದೋ ಒಂದು ಹಂತದಲ್ಲಿ ಒತ್ತಡ ನಿಭಾಯಿಸ್ಲಿಕ್ಕ ಆಗ್ದೆ ಆತ್ಮಹತ್ಯೆ ಗೆ ಶರಣಾಗತಾರ. ಎಷ್ಟು ದುಡುಕಿನ ನಿರ್ಧಾರ. ಮಕ್ಕಳು ಮನಬಿಚ್ಚಿ ತಂದೆತಾಯಿಯೊಂದಿಗೆ ಮಾತಾಡಲಾರದಂಗ ಆಗತುದ್ದಾರ.ತಮ್ಮ ಆತಂಕಗಳನ್ನು ಅಲೆಕ್ಸಾ ಅಥವಾ ಗೂಗಲ್ ಗೆ ಹೇಳತಾರ ಹೊರತಾಗಿ ಹೆತ್ತವ್ರಿಗಿ ಹೇಳಲ್ಲ.ಎಷ್ಟು ವಿಪರ್ಯಾಸ. ಸಾವು ಎಂಬುದು ಹುಟ್ಟುತ್ತಲೆ ಬದುಕಿಗೆ ಅಂಟಿಕೊಂಡೆ ಬಂದಿರತದ.ಅದು ಬರುವಾಗ ಬಂದೆ ಬರತದ.ಅಲ್ಲಿವರೆಗೆ ಬದುಕಬೇಕು.ಸುಖ ದುಃಖ ಗಳೆಲ್ಲ ಚಕ್ರದಂಗ ತಿರುಗತಾ ಇರತಾವ.ಒಂದರ ಬೆನ್ನಿಗಿ ಒಂದು. ಚಕ್ರ ನಿಲ್ಲಿಸಲಿಕ್ಕ ಆಗೊದಿಲ್ಲ.ಕೆಟ್ಟ ಸಂದರ್ಭಗಳಲ್ಲಿ ತಾಳ್ಮೆ ಒಂದೇ ಸಂಜೀವಿನಿ. ಹಣಕಾಸಿನ ಸಮಸ್ಯೆ ಮತ್ತು ಆರೋಗ್ಯ ಸಮಸ್ಯೆ ಎರಡು ಜೀವನದ ದೊಡ್ಡ ಶತ್ರುಗಳು.ಇದು ಜೀವನಾನೆ ಅಲ್ಲೊಲ ಕಲ್ಲೋಲ ಮಾಡ್ತದ.ಹಾಗಂತ ಜೀವ ಕಳಕೊಳ್ಳೊದು ಮೂರ್ಖತನ. ಹೌದು ,ಎಷ್ಟೊಂದು ಓದಿರತಿವಿ , ಕೇಳಿರತೀವಿ , ಉಪದೇಶನೂ ಮಾಡಿರತೀವಿ.ಆದ್ರ ಖಿನ್ನತೆ ಅದಾವ ಮಾಯದಾಗ ಆವರಿಸಿಕೊಂಡು ಬಿಡತದ ಅರಿವುಗೂ ಬರಲ್ಲ.ಇದಕ್ಕ ಪರಿಹಾರ ಅಂದ್ರ ಮನಸ್ಸು ಬಿಚ್ಚಿ ಮಾತಾಡೋದು.ತಂದೆತಾಯಿ ಗೆಳೆಯರು ಬಳಗದವ್ರು ಯಾರೊಂದಿಗಾದ್ರೂ ಮನಸ್ಸು ಬಿಚ್ಚಿ ಮಾತಾಡೋದು.ಯಾರಿಗೂ ಹೇಳಬೇಕು ಅನಿಸದಿದ್ರ ಬರೆದು ಬಿಸಾಕೋದು. ಖಿನ್ನತೆಯನ್ನು ಬೆರೆಯವರು ಗುರುತಿಸೊದಕ್ಕಿಂತ ಮೊದಲು ನಾವೆ ಅದನ್ನ ಪತ್ತೆ ಹಚ್ಚಕೊಳ್ಳಬೇಕು.ಎಲ್ಲರೊಂದಿಗೆ ಇದ್ರು ಒಂಟಿತನ ಭಾದಿಸ್ತಾ ಇದ್ರೆ.ರಾತ್ರಿ ನಿದ್ರೆ ಬರದಿದ್ರೆ ನಿರುತ್ಸಾಹ ನಿರಾಸಕ್ತಿಇವೆಲ್ಲ ಬಾಳ ದಿನಗಳಿಂದ ನಮಗ ಕಾಡತಿದ್ರ ಮಾನಸಿಕ ತಜ್ಞ ರಲ್ಲಿ ಹೋಗೊದಕ್ಕ ಹಿಂದಮುಂದ ನೋಡ್ಲೆಬಾರ್ದು.ನಮ್ಮ ಜೊತೆಗಿರುವವರಿಗೆ ಈ ಸಮಸ್ಯೆ ಗಳು ಕಾಡತಿದ್ರೆ ಅವ್ರನ್ನ ಡಾಕ್ಟರ್ ಹತ್ರ ಕರಕೊಂಡು ಹೋಗಲು ಒಪ್ಪಿಸಬೇಕು. ಎಷ್ಟೋ ತಿಳವಳಿಕೆ ಉಳ್ಳವ್ರು ಸಾಯುವಂತ ದುಡುಕಿನ ನಿರ್ಧಾರ ತಗೊಳ್ತಿರೋದು ಆತಂಕದ ಸಂಗತಿ. ಬುಧ್ದಿಯಿಂದ ಅತಿ ಶಕ್ತಿಶಾಲಿಯಾದ ಮನುಷ್ಯ ಆತ್ಮಹತ್ಯೆ ಯಂತ ನಿರ್ಣಯಗಳಲ್ಲಿ ಎಷ್ಟು ದುರ್ಬಲನಾಗತಾನ. ಅತೀ ವಿದ್ಯಾವಂತರೆ ಇಂತಹ ಘಟನೆಗಳಿಗೆ ಬಲಿಯಾಗ್ತಿರೋದು ಯಾಕೆ ಎಂದು ತಿಳಿತಿಲ್ಲ.ಸದಾ ಎಲ್ಲರ ಮುಂದೆ ಒಳ್ಳೆಯವರಾಗಿರಬೇಕು , ಶ್ರೇಷ್ಟರಾಗಿರಬೇಕು , ಜಾಣ ಎನಿಸಿಕೊಳ್ಳಬೇಕು ಎಂಬ ಇಂತಹ ಹಂಬಲಗಳು ಕೂಡ ಮನುಷ್ಯ ಗ ದುರ್ಬಲ ಮಾಡಿಬಿಡತಾವ.ಅತೀ ಮಹತ್ವಾಕಾಂಕ್ಷೆಯು ಮನುಷ್ಯ ನನ್ನು ದುಃಖಿತ ನನ್ನಾಗಿಸ್ತದ.ಭಾವನೆಗಳನ್ನು ನಿಯಂತ್ರಿಸಿಕೊಳ್ಳೊದು ಕಲಿತರೆ ಜೀವನ ಅರ್ಧ ಗೆದ್ದಂಗೆ.ಅದರಲ್ಲೂ ಸಿಟ್ಟಿನ ಕೈಗೆ ಬುದ್ದಿ ಎಂದೂ ಕೋಡ್ಲೆಬಾರದು. ಈಗೀಗ ನಾವು ಎಷ್ಟು ಒಂಟಿ ಆಗತಿದ್ದೆವೆ ಅಂದ್ರ ನಮ್ಮ ಸಮಸ್ಯೆ ಹೆತ್ತವ್ರಿಗೆ ಗೆಳೆಯರಿಗೆ ತಿಳಿಸಲಿಕ್ಕೆ ಆಗದಿರುವಷ್ಟು.ಆಪ್ತ ಸಮಾಲೋಚರಿಗೆ ನಮ್ಮ ಸಮಸ್ಯೆ ಮುಕ್ತ ವಾಗಿ ಹೇಳಿಕೊಂಡಷ್ಟು ನಮ್ಮ ಜೊತೆಗಿರುವರಿಗೆ ಹೇಳಕೊಳ್ಳಕ್ಕ ಆಗ್ತಿಲ್ಲ ಅಂದ್ರ ಸಂಭಂಧಗಳು ಎಷ್ಟು ಅರ್ಥಹೀನ ಆಗ್ತಿವೆ ಎಂದು ಚಿಂತಿಸಬೇಕಾಗ್ತದ. ಆತ್ಮಹತ್ಯೆ ಒಂದು ಸಾಮಾಜಿಕ ಪಿಡುಗು.ಇದನ್ನು ತಡೆಯಲು ನಾವು ಪ್ರಯತ್ನಿಸಬೆಕಂದ್ರೆ ನಮ್ಮ ಸುತ್ತಲಿರುವವರೊಂದಿಗೆ ಮನಸ್ಸು ಬಿಚ್ಚಿ ಮಾತಾಡೋದು.ಆತಂಕವನ್ನು ಮತ್ತೊಬ್ಬ ರೊಂದಿಗೆ ಹಂಚಕೊಳ್ಳೊದು.ಪ್ರೀತಿ ಕೊಟ್ಟು ಪಡಕೊಳ್ಳೊದು.ಖಿನ್ನತೆ ಬಗ್ಗೆ ತಿಳಿದುಕೊಂಡು ಮತ್ತೊಬ್ಬರಿಗೆ ಅದರ ಬಗ್ಗೆ ತಿಳಿಸೊದು.ಪ್ರಯತ್ನ ನಿರಂತರ ಜಾರಿಯಲ್ಲಿರಲಿ. ಜ್ಯೋತಿ ಡಿ ಬೊಮ್ಮಾ ಜ್ಯೋತಿ ಡಿ , ಬೊಮ್ಮಾ ಅವರು ಕಲಬುರಗಿ ಜಿಲ್ಲೆಯವರು. ನಾಲ್ಕು ಕವನ ಸಂಕಲನಗಳು , ಎರಡು ಪ್ರಭಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಪ್ರತಿ ತಿಂಗಳು ಸಂಗಾತಿ ಪತ್ರಿಕೆಗಾಗಿ ಅವರ ದೇಸಿ ನುಡಿಗಟ್ಟಿನಲ್ಲಿ ಅಂಕಣ ಬರಹವನ್ನು ಪ್ರಕಟಿಸುತ್ತಾರೆ
“ಬೇಂದ್ರೆ ಅಜ್ಜನ ನೆನಪು”ಶಿವಕುಮಾರ ಕೋಡಿಹಾಳ ಮೂಡಲಗಿ
ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ ಮೂಡಲಗಿ “ಬೇಂದ್ರೆ ಅಜ್ಜನ ನೆನಪು” ಜನೇವರಿ ತಿಂಗಳ ಬಂತಂದ್ರ ನೆನಪಾಗೋ ಜೀವ ಅಂದ್ರ ಬೇಂದ್ರೆ ಅಜ್ಜಾ§ನನಕ್ಕು ಸಾಯ್ರೋ ನಕ್ಕು ಸಾಯ್ರಿ ಅಂತಾ ನಮಗೆಲ್ಲಾ ಹೇಳಿ ನಕ್ಕೋತ ಹೋದ ದತ್ತು ಮುತ್ಯಾಬಡತನಕ ಹೇಸಿದಾವಲ್ಲ ಮೆಟ್ಟಿ ನಿಂತಾವಬೆಂದು ಬೇಂದ್ರೆಯಾದಾವ ರಾಮಚಂದ್ರ ಅಂಬೂತಾಯಿಯ ಮಗನಾಗಿಗೋದೂಬಾಯಿ ನೆರಳಿನಾಗ ಕನ್ನಡ ನಾಡಿನ ಆಲದ ಮರಾ ಆಗಿದ್ದಾ§ವಮಾತು ಆಡಿದರ ಹಸಿ ಗೋಡ್ಯಾಗ ಹಳ್ಳ ಒಗದಂಗ ಮಾತಾಡಾವಕನ್ನಡದವ್ವ ಅಂದ್ರ ನಿನಗ ಪಂಚಪ್ರಾಣತಾಯಿ ಋಣ ತೀರಸಾಕ ಅಕ್ಷರದ ಮಹಲು ಕಟ್ಟಿದಾವ ತನ್ನ ಹಾಡಿನಾಗಮಲ್ಲಿಗಿ ಹೂವಿನಗಮಗಮಕುರುಡು ಕಾಂಚಾಣದ ಜಣಜಣಕರಡಿ ಕುಣಿತದತಕತಕ ಮೂಡಲ ಮನೆಯಚುಮು ಚುಮುಕಾಣಿಸಿದಾವ ಇನ್ನೂ ಯಾಕ ಬರಲಿಲ್ಲಾವ ಹುಬ್ಬಳ್ಳಿಯಾವ ಅಂತ ಹೇಳಿಕನಸಿನೊಳಗೆ ಬಂದು ಕನಸು ಬಿತ್ತಿದಾವನಮಗೆಲ್ಲಾ ಹುಸಿನಗುತ ಬಂದೀರಿನಸುನಗುತ ತೆರಳಿಅಂತಾ ನೀತಿ ಪಾಠ ಹೇಳಿದಾವ ಕನ್ನಡದವರು ಮನಸು ಮಾಡಿದರ ಚರಿತ್ರೆ ಸೃಷ್ಟಿಸ್ಯಾರ ಆ ಕಡೆ ಲಕ್ಷ್ಯ ಕೊಡ್ರಿ ಎಂದು ಹೇಳಿನಮಗೆಲ್ಲಾ ತಾಯಿ ಸೇವೆ ಮಾಡಾಕ ಹಚ್ಚಿದಾಂವಕನ್ನಡ ನಮ್ಮ ಮೈಯಾಗ ಕಣಕಣದಾಗ ಬೆರತೈತಿ ಅನ್ನೋ ಸತ್ಯ ತಿಳಿಸಿದಾವ ಗುಂಗುರು ಕೂದಲಿನ ಮುತ್ಯಾಮಾತಿನ ಮಲ್ಲ ಶಬ್ದ ಗಾರುಡಿಗನಮ್ಮ ನಾಡಿನ ಮಾಣಿಕ್ಯನಮಗಅರಳು ಮರಳು ಆದ್ರೂನಿನ್ನ ನೆನಪು ಎಂದೂ ಸಾಯುವುದಿಲ್ಲನೀನು ನಮ್ಮ ನಾಡಿನಾಗ ಹುಟ್ಟಿದ್ದೇ ಒಂದು ಪವಾಡನಿನ್ನ ಜನುಮದಿನ ನಮಗೆಲ್ಲಾ ಹಬ್ಬನಮಗೆಲ್ಲಾ ಹಬ್ಬಆಶೀರ್ವಾದ ಮಾಡು ಮುತ್ಯಾ ಶಿವಕುಮಾರ ಕೋಡಿಹಾಳ ಮೂಡಲಗಿ
“ಬೇಂದ್ರೆ ಅಜ್ಜನ ನೆನಪು”ಶಿವಕುಮಾರ ಕೋಡಿಹಾಳ ಮೂಡಲಗಿ Read Post »
“ಅರ್ಥವಾಗದವಳು”ಡಾ ತಾರಾ ಬಿ ಎನ್ ಧಾರವಾಡ
ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ “ಅರ್ಥವಾಗದವಳು” ನಿಶ್ಶಬ್ದದೊಳಗೆ ಮಾತಾಡುವವಳು,ನಗುವಿನ ಹಿಂದೆ ಸಾವಿರ ಪ್ರಶ್ನೆಗಳನ್ನು ಮರೆಸುವವಳು.ಕಣ್ಣಲ್ಲಿ ಕನಸುಗಳ ನದಿ ಹರಿದರೂಕಾಣದವರ ಮಧ್ಯೆ ಬದುಕುವವಳು.ತನ್ನತನವನ್ನು ತಾನೇ ಹೊತ್ತುಕೊಂಡುಪ್ರಪಂಚದ ತೂಕವನ್ನೂಸಹ ನಗುತ್ತಲೇ ಸಾಗಿಸುವವಳು,“ಬಲಿಷ್ಠ” ಎಂದರೆ ಕಲ್ಲಿನಂತೆಇರಬೇಕು ಎಂದುಕೊಂಡವರಿಗೆಹೂವಿನಂತೆ ಮೃದುವಾಗಿಬಲವಾಗಿರುವವಳು.ಮೌನವನ್ನು ಅಹಂಕಾರವೆಂದವರುಅಳುವನ್ನು ದುರ್ಬಲತೆ ಎಂದರು, ಪ್ರಶ್ನೆಗಳನ್ನು ಬಂಡಾಯವೆಂದರು,ಆದರೆ ಅವಳೊಳಗಿನ ಸತ್ಯವನ್ನುಯಾರೂ ಕೇಳಲಿಲ್ಲ.ತನ್ನವರ ನಡುವೆ ಇದ್ದೂಒಂಟಿಯಾಗಿದ್ದಳು,ತನ್ನ ಭಾಷೆಯನ್ನೇ ಮಾತಾಡುತ್ತಿದ್ದರೂ ಅಂತರಂತೆ,ಅನ್ಯಭಾಷೆಯಂತೆಅವಳ ಮನಸ್ಸಿನ ಅಕ್ಷರಗಳುಅವರ ಕಣ್ಣಿಗೆ ಒಂದಾಗಲೇ ಇಲ್ಲ, ಅಸ್ಮಿತೆ ಕಾಣಲೇ ಇಲ್ಲ.ತನ್ನ ನೋವಿಗೆ ತಾನೇಸಮಾಧಾನ ಹೇಳಿಕೊಂಡಳು,ತನ್ನ ಕಣ್ಣೀರಿಗೆ ತಾನೇ ಉತ್ತರವಾದಳು.ಬಿದ್ದಾಗ ಕೈ ಹಿಡಿಯುವವರುಇರಲಿಲ್ಲ,ಆದರೂಮತ್ತೆ ನಿಂತು ನಡೆಯುವ ಧೈರ್ಯಅವಳು ಕಳೆದುಕೊಳ್ಳಲಿಲ್ಲ,ಅವಳು ವಿಭಿನ್ನ. ವಿಶಿಷ್ಟ,ಅವಳು ದುರ್ಬಲ ಅಲ್ಲ,ಅವಳು ಆಳವಾದಳು.ಒಂದು ದಿನ…ಅವಳನ್ನು ಅರ್ಥಮಾಡಿಕೊಳ್ಳದ ಲೋಕವೇಬೆಳಕಿಗೆ ದಾರಿ ಕೇಳುತ್ತದೆ.ಆಗಲೂ ಕಹಿಯಾಗುವುದಿಲ್ಲ,ನಗುಮುಖದಿಂದಲೇ ದಾರಿದೀಪವಾಗುತ್ತಾಳೆ.ಏಕೆಂದರೆನನ್ನವರಿಗೇ ಅರ್ಥವಾಗದವಳುಒಂದು ದಿನತನ್ನನ್ನೇ ಸಂಪೂರ್ಣವಾಗಿ ಅರ್ಥಮಾಡಿಕೊಂಡವಳು. ಡಾ ತಾರಾ ಬಿ ಎನ್ ಧಾರವಾಡ
“ಅರ್ಥವಾಗದವಳು”ಡಾ ತಾರಾ ಬಿ ಎನ್ ಧಾರವಾಡ Read Post »
ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ ಅವರ ಕೃತಿ “ಅಂತರಂಗದ ಪ್ರಣತಿ” ಅವಲೋಕನ ಅಂಬಿಕಾ ಅವಟಿ ಚಡಚಣ
ಪುಸ್ತಕ ಸಂಗಾತಿ ಅಂಬಿಕಾ ಅವಟಿ ಚಡಚಣ ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ “ಅಂತರಂಗದ ಪ್ರಣತಿ” ಅವಲೋಕನ ಅಂತರಂಗದ ಪ್ರಣತಿ… ಅಲ್ಪಾಕ್ಷರಗಳಲ್ಲಿ ಅನಂತದರ್ಶನಕನ್ನಡ ಸಾಹಿತ್ಯ ಲೋಕಕ್ಕೆ ‘ತನಗ’ ಎಂಬ ಫಿಲಿಪೈನ್ಸ್ ಮೂಲದ ಕಾವ್ಯ ಪ್ರಕಾರವನ್ನು ಪರಿಚಯಿಸಿ, ಅದರಲ್ಲಿ ದೇಸೀ ಸೊಬಗನ್ನು ತುಂಬಿದವರು ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ (ಕನ್ನಡದ ಕಂದ). ಈ ಕೃತಿಯನ್ನು ಲೇಖಕರು ಅತ್ಯಂತ ಪ್ರೀತಿ ಮತ್ತು ಸ್ನೇಹಪೂರ್ವಕವಾಗಿ ನನಗೆ ಉಡುಗೊರೆಯಾಗಿ ಕಳಿಸಿಕೊಟ್ಟಿದ್ದು, ಇದನ್ನು ಓದಿದಾಗ ಮನಸ್ಸಿಗೆ ಅಪಾರ ಸಂತೋಷವಾಯಿತು. ಅವರ ‘ಅಂತರಂಗದ ಪ್ರಣತಿ’ ಸಂಕಲನವು ಕೇವಲ ನಾಲ್ಕು ಸಾಲುಗಳಲ್ಲಿ ಬದುಕಿನ ಮಹೋನ್ನತ ಸತ್ಯಗಳನ್ನು ಹಿಡಿದಿಡುವ ಅದ್ಭುತ ಪ್ರಯತ್ನವಾಗಿದೆ. “ಕಡಿಮೆ ಪದಗಳಲ್ಲಿ ಹೆಚ್ಚಿನ ಅರ್ಥ” ಇದು ಆಲಮೇಲರ ಕಾವ್ಯದ ಮಂತ್ರ. ಸಾಗರದ ಅಲೆಗಳು ಮೌನವಾಗಿ ತೇರನ್ನು ಎಳೆಯುವಂತೆ, ಇವರ ತನಗಗಳು ಓದುಗರ ಮನಸ್ಸನ್ನು ಮೌನವಾಗಿ ಆವರಿಸಿಕೊಳ್ಳುತ್ತವೆ. ಇಲ್ಲಿ ಶಬ್ದಗಳ ಆರ್ಭಟವಿಲ್ಲ, ಬದಲಾಗಿ ಅರ್ಥದ ಗಾಂಭೀರ್ಯವಿದೆ. ಮುಂಜಾನೆಯ ಮಂಜಿನ ಚೆಲ್ಲಾಟದಿಂದ ಹಿಡಿದು ಋತುಮಾನಗಳ ಬದಲಾವಣೆಯವರೆಗೆ ಪ್ರಕೃತಿಯ ಪ್ರತಿ ಚಲನೆಯನ್ನು ಇವರು ಕಾವ್ಯವಾಗಿಸಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ಬಣ್ಣಿಸುತ್ತಲೇ, ಬದುಕಿನ **”ಹೊಸತನದ ಹಂದರ”**ವನ್ನು ಕವಿ ಇಲ್ಲಿ ಅನಾವರಣಗೊಳಿಸುತ್ತಾರೆ. ಜಗತ್ತು ಎಂಬ ಮಾಯಾಜಾಲದಲ್ಲಿ ಮನುಷ್ಯ ಅನುಭವಿಸುವ ಒದ್ದಾಟ, ದುಶ್ಚಟಗಳು, ಮೋಸ ಮತ್ತು ಅಸತ್ಯಗಳ ಕುರಿತು ಈ ತನಗಗಳು ಎಚ್ಚರಿಸುತ್ತವೆ. ಗುರುವಿನ ಮಹತ್ವ ಮತ್ತು ಜ್ಞಾನದ ಅಗತ್ಯವನ್ನು ಶಕ್ತವಾಗಿ ಪ್ರತಿಪಾದಿಸಲಾಗಿದೆ. ಜನನ ಮರಣಗಳ ನಡುವಿನ ಹೋರಾಟ, ನಂಬಿಕೆ ಮತ್ತು ವಿಶ್ವಾಸಗಳ ಮಹತ್ವವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಸೂರ್ಯ, ಚಂದ್ರ ಹಾಗೂ ಹೆಣ್ಣಿನ ಸೌಂದರ್ಯವನ್ನು ಕೇವಲ ನಾಲ್ಕು ಸಾಲುಗಳಲ್ಲಿ ಹಿಡಿದಿಡುವುದು ಒಂದು ಸವಾಲೇ ಸರಿ. ಆದರೆ ಆಲಮೇಲರು ಪ್ರೀತಿಯ ಉತ್ತುಂಗವನ್ನು ಮತ್ತು ಪ್ರಕೃತಿಯ ಚೆಲುವನ್ನು ಸೋಜಿಗವೆನಿಸುವಂತೆ ಅಲ್ಪ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಡಾ. ಮಲ್ಲಿಕಾರ್ಜುನ ಸರ್ ಅವರಿಗೆ ಒಂದೆರಡು ಚೆನ್ನುಡಿಗಳು. ಅಕ್ಷರಗಳ ಹಣತೆಯಲ್ಲಿ ಜ್ಞಾನದ ಎಣ್ಣೆ ಹೊಯ್ದು, ಸ್ನೇಹದ ಬತ್ತಿಯ ಮೂಲಕ ‘ಅಂತರಂಗದ ಪ್ರಣತಿ’ಯನ್ನು ಬೆಳಗಿದ್ದೀರಿ ಸರ್. ನಿಮ್ಮ ಈ ಕೃತಿ ಕೇವಲ ಕಾವ್ಯವಲ್ಲ, ಅದು ಬದುಕಿನ ದಾರಿದೀಪ. ತನಗ ಸಾಹಿತ್ಯದ ಮೂಲಕ ಕನ್ನಡದ ಕಣಜಕ್ಕೆ ಹೊಸ ಮೆರುಗು ನೀಡಿದ ನಿಮ್ಮ ಲೇಖನಿ ಹೀಗೆಯೇ ನಿರಂತರವಾಗಿ ಸಾಗಲಿ. ಒಟ್ಟಾರೆಯಾಗಿ ಹೇಳಬೇಕು ಅಂದರೆ‘ಅಂತರಂಗದ ಪ್ರಣತಿ’ ಕೃತಿಯು ಸಾಮಾಜಿಕ ಮತ್ತು ವೈಯಕ್ತಿಕ ಜೀವನದ ವಾಸ್ತವಗಳನ್ನು ಕನ್ನಡಿಯಂತೆ ಪ್ರತಿಫಲಿಸುತ್ತದೆ. ಫಿಲಿಪೈನ್ಸ್ ಮೂಲದ ಕಾವ್ಯ ಪ್ರಕಾರವನ್ನೇ ಬಳಸಿ ಕನ್ನಡ ಕಾವ್ಯದ ಕಣಜವನ್ನು ಶ್ರೀಮಂತಗೊಳಿಸಿರುವ ಡಾ. ಮಲ್ಲಿಕಾರ್ಜುನ ಆಲಮೇಲರ ಪ್ರಯತ್ನ ಶ್ಲಾಘನೀಯ. ಇದು ಅಂತರಂಗವನ್ನು ಬೆಳಗುವ ನಿಜವಾದ ಪ್ರಣತಿ… ಅಂಬಿಕಾ ಅವಟಿ ಚಡಚಣ.
ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ ಅವರ ಕೃತಿ “ಅಂತರಂಗದ ಪ್ರಣತಿ” ಅವಲೋಕನ ಅಂಬಿಕಾ ಅವಟಿ ಚಡಚಣ Read Post »
“ಹುಬ್ಬಳಿಯಾಂವ” ಕವಿತೆ ಎಮ್ಮಾರ್ಕೆ
ಕಾವ್ಯ ಸಂಗಾತಿ ಎಮ್ಮಾರ್ಕೆ “ಹುಬ್ಬಳಿಯಾಂವ” ಈ ಭೂಮಿಗಿ ಬಿದ್ದಾಂವಆ ಬಾನಿಗಿ ಎದ್ದಾಂವ,ಇದ್ದುದೆಲ್ಲಾನು ಗೆದ್ದಾಂವನೀ ಹುಬ್ಬಳಿಯಾಂವ ಪದ ಪದವ ಕುಣಿಸಾಂವಮುದದಿ ಉಣಿಸಾಂವ,ಎದಿಗುದಿಯ ತಣಿಸಾಂವಅಂದತ್ತನ ನೆನೆಸಾಂವ ಬ್ಯಾನಿ ಹೊತ್ತ ನಡದಾಂವಜ್ಞಾನಪೀಠ ಪಡದಾಂವ,ಮೂಗುದಾನ ಹಿಡದಾಂವಬಿಗುಮಾನ ಬಿಡದಾಂವ ನಿದ್ದಿ ನೀರಡಿಕಿ ಕೆಡಸಾಂವಗಾರುಡಿಯ ನಡಸಾಂವಹಾಳು ಹಂಗು ಬಿಡಸಾಂವಗುಂಗೊಂದ ಹಿಡಸಾಂವ ಬಾಳಿನುದ್ದಕೂ ಬೆಂದಾಂವಬೆಂದ ಬೇಂದ್ರೆಯಾದಾಂವ,ದತ್ತ ಅಂದತ್ತನೇ ಆದಾಂವಇಂದೆತ್ತ ಎದ್ದ ಹೋದಾಂವ ಎಮ್ಮಾರ್ಕೆ
“ಹುಬ್ಬಳಿಯಾಂವ” ಕವಿತೆ ಎಮ್ಮಾರ್ಕೆ Read Post »
ಜಯಶ್ರೀ ಎಸ್ ಪಾಟೀಲ ಧಾರವಾಡ ಕವಿತೆ “ನಿಸ್ವಾರ್ಥ ಭಾವ”
ಕಾವ್ಯ ಸಂಗಾತಿ ಜಯಶ್ರೀ ಎಸ್ ಪಾಟೀಲ “ನಿಸ್ವಾರ್ಥ ಭಾವ” ಚಳಿ ಇರಲಿ ಮಳೆ ಇರಲಿಅಂಜದೆ ಅಳುಕದೆಗಟ್ಟಿಯಾಗಿ ನಿಲ್ಲುವೆ ಬಿಸಿಲಿರಲಿ ಬರಡಿರಲಿಆಸೆಗಳನು ಅಳಿಸದೆಕನಸು ಕಾಣುತಲಿರುವೆ ಕೊಡಲಿ ಪೆಟ್ಟು ಬಿದ್ದರೂಟೊಂಗೆಗಳುರುಳಿದರೂಎಲ್ಲ ಸಹಿಸಿಕೊಳ್ಳುವೆ ಮೌನವಾಗಿ ಸಹಿಸುತಛಲವ ಮಾತ್ರ ಬಿಡದೆಮತ್ತೆ ಮತ್ತೆ ಚಿಗುರುವೆ ಕೆಡುಕು ಬಯಸಿದಸ್ವಾರ್ಥ ಮನುಜನಿಗೆನೆರಳಾಗಿ ನಿಲ್ಲುವೆ ಗಿಡ ಮರಗಳನಿಸ್ವಾರ್ಥ ಭಾವ ಅರಿತರೆಮನುಜ ನೀ ಬಾಳುವೆ ಜಯಶ್ರೀ ಎಸ್ ಪಾಟೀಲ
ಜಯಶ್ರೀ ಎಸ್ ಪಾಟೀಲ ಧಾರವಾಡ ಕವಿತೆ “ನಿಸ್ವಾರ್ಥ ಭಾವ” Read Post »
“ಬೇಂದ್ರೆ_ ಕಾವ್ಯಾಸ್ವಾದ” ಸುಜಾತಾ ರವೀಶ್
ಕಾವ್ಯ ಸಂಗಾತಿ ಸುಜಾತಾ ರವೀಶ್ “ಬೇಂದ್ರೆ_ ಕಾವ್ಯಾಸ್ವಾದ” ಇಂದು ಡಾ. ದಾರಾ ಬೇಂದ್ರೆ ಅವರ ೧೩೦ ನೆಯ ಜಯಂತಿ ಪ್ರಯುಕ್ತ ಅವರದೊಂದು ಪ್ರಸಿದ್ಧ ಭಾವಗೀತೆಯ ಬಗ್ಗೆ ತಿಳಿಯುವ ಪ್ರಯತ್ನ. ಕಾವ್ಯ ಗಾರುಡಿಗ ಬೇಂದ್ರೆಯವರ ಕವಿ ದೃಷ್ಟಿ ಬರೀ ಪ್ರಕೃತಿಯ ಬೆಡಗಿನ ಬಗ್ಗೆ ಅಷ್ಟೇ ಅಲ್ಲ ಸಾಮಾಜಿಕ ಸ್ಥಿತ್ಯಂತರಗಳನ್ನು ಸೂಕ್ಷ್ಮ ದೃಷ್ಟಿಯಿಂದ ಪರೀಕ್ಷಿಸುತ್ತಿತ್ತು ಎನ್ನುವುದಕ್ಕೆ ನಿದರ್ಶನ ಈ ಕವನ “ಇನ್ನೂ ಯಾಕೆ ಬರಲಿಲ್ಲಾ ಹುಬ್ಬಳ್ಳಿಯಂವಾ” ಅಂದಿನ ದಿನಮಾನದಲ್ಲಿ ಪ್ರಚಲಿತವಿದ್ದುದು ಜೋಗತಿ ಪದ್ಧತಿ . ಅಂತಹ ಜೋಗತಿ ಹೆಣ್ಣುಮಗಳಿಬ್ಬಳು ತನ್ನ ಗೆಣೆಕಾರನನ್ನು ನೆನೆಸಿ ಅವನು ಬಾರದಿರಲು ಹಲುಬುವ ಪ್ರಸಂಗವನ್ನು ಕವಿ ಇಲ್ಲಿ ಕವಿತೆಯಾಗಿಸಿದ್ದಾರೆ . ಹೆಣ್ಣೊಬ್ಬಳ ಅಂತರಂಗದ ಧ್ವನಿ ಹಾಗೆಯೇ ಅಂದಿನ ಸಾಮಾಜಿಕ ಸ್ಥಿತಿಯ ಕನ್ನಡಿ ಯಾಗಿಯೂ ಹೊರಹೊಮ್ಮಿರುವ ಈ ಕವನ ರಾಧೆ ಕೃಷ್ಣನಿಗಾಗಿ ಪರಿತಪಿಸುವ ಸಂದರ್ಭವನ್ನು ನೆನಪಿಸುತ್ತದೆ. ಹೋಲಿಕೆ ಅಸಮಂಜಸವೂ ಅನುಚಿತವೂ ಇರಬಹುದು. ಆದರೆ ಬೇರೆಲ್ಲವನ್ನೂ ಒತ್ತಟ್ಟಿಗಿಟ್ಟು ಪ್ರೇಮಿಕೆಯೊಬ್ಬಳು ಪ್ರೇಮಿಗಾಗಿ ತನ್ನ ಆಂತರ್ಯ ತೆಗೆದಿಡುವ ಭಾವವನ್ನೇ ತೆಗೆದುಕೊಂಡಿದ್ದೇನೆ ತಪ್ಪಿದ್ದರೆ ಕ್ಷಮೆ ಇರಲಿ ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ ಆ ಜೋಗತಿಯ ಮನೆಗೆ ಸಾಮಾನ್ಯವಾಗಿ ವಾರಕ್ಕೆ ಮೂರು ಸಾರಿ ಭೇಟಿ ಕೊಡುವ ಅಭ್ಯಾಸವಿಟ್ಟುಕೊಂಡಿದ್ದ ಗೆಳೆಯ ಈ ಬಾರಿ ಬಂದೇ ಇಲ್ಲ ಎಂದು ದುಃಖಿಸುತ್ತಿದ್ದಾಳೆ. ಏನೋ ಮುನಿಸು ಅಸಮಾಧಾನದಿಂದ ಅವನು ಬಾರದಿರಲು ಇವಳಿಗೆ ದುಮ್ಮಾನ. (೧)ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾಇನ್ನೂ ಯಾಕ……….ಮುಂದೆ ಅವನನ್ನು ಅವನ ವೇಷಭೂಷಣವನ್ನು ವರ್ಣಿಸುತ್ತಾ ಜರಿಯ ರುಮಾಲು ಸುತ್ತಿ ಕೊಂಡವನು ತುಂಬು ಮೀಸೆಯನ್ನು ತೀಡಿಕೊಳ್ಳುತ್ತಾ ನಗುನಗುತ್ತ ಹಾಸ್ಯ ಮಾಡಿ ನಗಿಸುತ್ತಾ ಮಾತಿಗೆ ಮಾತು ಸೇರಿಸುತ್ತಾ ಹಾಡು ಕಟ್ಟುವವನು ಎನ್ನುತ್ತಾಳೆ. ಜರದ ರುಮಾಲಿನ ಶ್ರೀಮಂತ ಅಷ್ಟೇ ಅಲ್ಲ ಸ್ನೇಹಮಯಿ ರೂಪವಂತ ಹಸನ್ಮುಖಿ ಎಂದೆಲ್ಲಾ ಅವನ ವರ್ಣನೆ. (೨)ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾಜೋಗತಿಯರು ಮದುವೆಯಾಗಿ ತಾಳಿ ಧರಿಸುವಂತಿಲ್ಲ ದೇವರ ಹೆಸರಲ್ಲಿ ಮುತ್ತು ಕಟ್ಟಿಕೊಳ್ಳುವ ಪದ್ಧತಿ ಆದರೆ ಅವನು ಅವಳಿಗೆ ಮದುವೆಯಾಗುವ ಆಹ್ವಾನವನ್ನಿತ್ತಿದ್ದಾನೆ. ಹಾಗೆಯೇ ಜೋಗತಿಗೆ ಭಂಡಾರ ಅರಿಸಿನ ಕುಂಕುಮ ತುಂಬಾ ಅಮೂಲ್ಯ ಬಂಗಾರದ ಹುಡಿಯಲ್ಲಿ ಭಂಡಾರ ಮಾಡಿಸುವೆ ಎಂದು ಹೇಳಿದ್ದನಂತೆ ಮತ್ತೆ ಮೂರನೆಯ ಸಾಲಿನಲ್ಲಿ ಅಂದಿನ ಕಾಲದ ಗಣಿಕೆಯರ ಸ್ತರವನ್ನು ಹೇಳುತ್ತಾರೆ . ಕಸಬೇರು ಒಂದು ಕೆಳಗಿನ ಸ್ತರ ಅದಕ್ಕಿಂತ ಮೇಲಿನದು ಬಸವಿಯರು ಅದಕ್ಕೂ ಮೇಲಿನದ್ದು ಜೋಗತಿಯರು. ಈಕೆ ಅಂತಹ ಜೋಗತಿ ಆ ಜೋಗತಿಯರಲ್ಲಿ ನೀನು ನನಗೆ ಮೂಗುತಿ ಅಂದರೆ ಶ್ರೇಷ್ಠ ಎಂದು ಅವಳನ್ನು ಹೊಗಳುತ್ತಾನೆ . (೩)ಇರು ಅಂದರ ಬರತೇನಂತ ಎದ್ದು ಹೊರಡಾಂವಾಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾಇನ್ನೂ ಯಾಕ………. ಅವನು ಹೊರಟಾಗ ಬೇಡ ಎಂದು ತಡೆದರೂ ಕೇಳುವುದಿಲ್ಲ. ಆದರೆ ಮುಖ ಸಪ್ಪಗೆ ಮಾಡಿಕೊಂಡರೆ ಮತ್ತೆ ಉಳಿಯುತ್ತಾನೆ. ಕೈತುಂಬಾ ರೊಕ್ಕ ಕೊಡಲು ಬಂದು ಕೈಚಾಚಿದರೆ ಹಣ ಕೊಡದೇ ಕೈ ಹಿಡಿದೆಳೆದು ರಸಿಕತನ ತೋರಿಸುತ್ತಾನೆ ಎಂದು ನೆನೆಸುತ್ತಾಳೆ (೪)ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾಇನ್ನೂ ಯಾಕ……….ಏನಾದರೂ ಅಲ್ಲಿ ಸಾಮಾಜಿಕ ಔಚಿತ್ಯವನ್ನು ಮೀರದ ರೂಪಕ ಕಟ್ಟಿಕೊಡುತ್ತಾರೆ. ಚಹಾಕ್ಕೆ ಚೂಡಾ ಧಾರವಾಡದವರ ನೆಚ್ಚಿನ ಜೋಡಿ. ನೀನು ನನಗೆ ಹಾಗೆ ಎನ್ನುತ್ತಾನೆ .ಅವಳನ್ನು ರಮಿಸಲು ನೀನು ಚೂಡಾಮಣಿ ಚೌಡಿ ಯಲ್ಲ ಎಂದು ಮೆರೆಸುತ್ತಾ ನೆ. ಅವಳಿಗೆ ಬೆರಳುಂಗುರ ಮೂಗಿನ ಬಟ್ಟು ಕೊಡಿಸುತ್ತಾನಂತೆ. ಅವೆರಡೂ ಮದುವೆಯಾಗುವ ಸೂಚನೆಗಳು ಆಭರಣಕ್ಕಿಂತ ಪ್ರೀತಿಯ ಮೆಚ್ಚುಗೆಯ ದ್ಯೋತಕವಾಗಿರು ತ್ತದೆ ಇಲ್ಲಿ . ಅಂತಹವನು ಬಾರದಿದ್ದರೆ ಸಂತಾಪವಲ್ಲದೆ ಇನ್ನೇನು? (೫)ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾಇನ್ನೂ ಇವನು ಹುಟ್ಟಿನಿಂದಲೇ ನಗುವೆಂಬ ಕೇದಗೆಯ ಗಂಧ ವಿರುವ ಸ್ನೇಹಮಯಿ .ಇವನ ಹಿಂದೆ ಹೆಣ್ಣುಗಳು ತಾವಾಗಿ ಬೀಳುತ್ತಾರೆ. ಆದರೆ ಇವನು ಮಾತ್ರ ನಿನ್ನ ಜನ್ಮ ಜನ್ಮಕ್ಕೂ ನಾನೇ ಗೆಳೆಯ ಎನ್ನುತ್ತಾನೆ .(ಇಲ್ಲಿಯೂ ಗಮನಿಸಿ ಗಂಡ, ಪತಿ ಎನ್ನದೆ ಗೆಳೆಯ ಎಂದಿದ್ದಾರೆ) ನನ್ನನ್ನು ತನ್ನ ಎದೆಯಲ್ಲಿ ಇಟ್ಟುಕೊಂಡಿದ್ದಾನೆ ಎನ್ನುವುದೇ ಸಂತಸ ಅವಳಿಗೆ . (೬) ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾಹಾದಿ ಬೀದಿ ಹುಡುಕತೈತ್ರೇ ಬಿಟ್ಟು ಎಲ್ಲ ಹ್ಯಾಂವಾಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ?ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ?ಇನ್ನೂ ಯಾಕ ಬರಲಿಲ್ಲಾ ? ಕಡೆಯ ಪ್ಯಾರಾದಲ್ಲಿ ಹಾದಿ ಬೀದಿಗಳಲ್ಲಿ ಅವನನ್ನು ಹುಡುಕುತ್ತಾ ಮಲ್ಲಿ ತಾರಿ ಪಾರಿ ನಿಂಗಿ ಸಂಗೀ ಸಾವಂತರಿ ಅಂತ ಕಂಡವರನ್ನೆಲ್ಲ ತನ್ನ ಗೆಳೆಯನ ಕಂಡಿರಾ ಎಂದು ಕೇಳುತ್ತಾ ಹುಡುಕುವ ಚಿತ್ರಣ. ಸಿಟ್ಟು ಮಾಡಿಕೊಂಡು ಹೋದ ಆ ಶೆಟ್ಟರ ಹುಡುಗನ್ನು ಅರಸುವ ಈ ಕ್ರಿಯೆಯಲ್ಲಿ ಪ್ರೀತಿಯೊಂದಿಗೆ ಅನಿವಾರ್ಯತೆಯ ಎಳೆಯನ್ನು ಕಾಣಬಹುದು . ಕವಿ ಇಲ್ಲಿ ಹತಾಶೆ ಅನಿವಾರ್ಯತೆ ಪ್ರೀತಿ ಎಲ್ಲವನ್ನೂ ಒಳಗೊಂಡ ಆರ್ಥಿಕವಾಗಿಯೂ ಮಾನಸಿಕವಾಗಿಯೂ ವ್ಯಕ್ತಿಯೊಬ್ಬನ ಮೇಲೆ ಭಾವುಕಳಾಗಿ ಅವಲಂಬಿತಳಾದ ಜೋಗತಿಯೊಬ್ಬಳ ಮನದಾಳದ ಮಾತುಗಳನ್ನು ಆಂತರ್ಯದ ಧ್ವನಿಯನ್ನು ಅಭಿವ್ಯಕ್ತಿಸಿದ್ದಾರೆ. ಕಣ್ಣಿಗೆಆ ಹುಡುಕುವಿಕೆಯ ತೀವ್ರತೆಯನ್ನು ಭಾವವಿಷಾದತೆಯನ್ನು ಕಟ್ಟಿಕೊಡಲು ಸಮರ್ಥರಾಗಿದ್ದಾರೆ .ಒಂದು ರೀತಿಯ ಸಂತಾಪವನ್ನು ಹುಟ್ಟಿಸುವ ಕವಿತೆ . ಬೇಂದ್ರೆಯವರ ಸಖೀ ಗೀತದ ಇಪ್ಪತಾಲ್ಕನೆಯ ಕವನವಾಗಿರುವ ಇದನ್ನು ಅವರ ಸಮಗ್ರ ಕಾವ್ಯ ಔದುಂಬರ ಗಾಥೆಯ 4ನೇ ಸಂಪುಟ ವಿನ್ಯಾಸದಲ್ಲಿ ಸೇರಿಸಲಾಗಿದೆ ಸುಜಾತಾ ರವೀಶ್
“ಬೇಂದ್ರೆ_ ಕಾವ್ಯಾಸ್ವಾದ” ಸುಜಾತಾ ರವೀಶ್ Read Post »
“ಬೇಂದ್ರೆ ಅಜ್ಜರ ಹುಟ್ಟುಹಬ್ಬಕ್ಕೊಂದು ಕವಿತೆ” ಶ್ರೀನಿವಾಸ್ ಕೆ ಎಂ
ಕಾವ್ಯ ಸಂಗಾತಿ ಶ್ರೀನಿವಾಸ್ ಕೆ ಎಂ “ಬೇಂದ್ರೆ ಅಜ್ಜರ ಹುಟ್ಟುಹಬ್ಬಕ್ಕೊಂದು ಕವಿತೆ” ಮೂಡಣದ ಬಾನಲಿ ಹೊನ್ನ ಕಿರಣವ ಸೂಸುವಉದಿಸಿತೊಂದು ತಾರೆ,ಅಂಬಿಕಾ ತನಯರಾಗಿ,ಅರವಿಂದರ ತತ್ವದೊಳು,ರವೀಂದ್ರರ ಕಾವ್ಯದಲಿಮಿಂದು ಪುನೀತರಾದರಂದು, ಶಬ್ಧಗಾರುಡಿಗಾನಾಗಿ,ಮಾತು ಮಾತು ಮಥಿಸಿ,ನಾದವ ಝೇಂಕರಿಸುತಅಕ್ಕರದ ಅಕ್ಕರೆಯ ಪದವ ಹೊಸೆಯುತ ,ಶಬ್ಧ ನಿಶ್ಶಬ್ಧಗಳ ಜೊತೆಆಡಿ, ಹಾಡಿ, ಕುಣಿದು, ನಲಿಸಿದಾತ,ಹೃದಯಗವ್ವರದೊಳುಒಲವ ಹಣತೆಯ ಬೆಳಗಿಸಿ,ಒಳಗಣ್ಣ ತೆರಸಿ ಅಂತಃಕರಣದಕದವ ತಟ್ಟಿ ಎಬ್ಬಿಸಿದಾತಬದುಕು ಹಿಡಿಗಾಳಿನಂತಿರಲಿಬಿಡಿಗಾಳಿನಂತೆ ಬಿಡಿಯಾಗದಿರಲಿಸರಸದೊಂದಿಗೆ ಸೇರಿವಿರಸವ ತೊರೆದುಸಮರಸದ ಬದುಕನುಜಗಕೆ ತಿಳಿಸಿದಾತ ವಿಧಾತ. ಶ್ರೀನಿವಾಸ ಕೆ.ಎಮ್.
“ಬೇಂದ್ರೆ ಅಜ್ಜರ ಹುಟ್ಟುಹಬ್ಬಕ್ಕೊಂದು ಕವಿತೆ” ಶ್ರೀನಿವಾಸ್ ಕೆ ಎಂ Read Post »
ಡಾ ಅನ್ನಪೂರ್ಣ ಹಿರೇಮಠ ಗಜಲ್
ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ಚೂರಾದ ಹೃದಯ ತೆರೆದು ತೋರಿಸಲಿ ಹೆಂಗ ಹೇಳನೋವಿನಲಿ ಒದ್ದಾಡೊ ಮನಸ ಬಚ್ಚಿಡಲಿ ಹೆಂಗ ಹೇಳ ನೂರು ಮಾತು ಎದೆಯಲ್ಲೇ ಉಳಿದು ಕೊರೆಯುತಿವೆಉಕ್ಕೊ ಬಯಕೆ ಬಾಂಧಳವ ಬತ್ತಿಸಲಿ ಹೆಂಗ ಹೇಳ ದುಃಖದೊಡಲ ಕೊರೆದ ನೋವಿನಲೆಗಳು ಬೊಬ್ಬಿಡುತಿವೆದಿನರಾತ್ರಿ ಕಂಡ ಕನಸನೆಲ್ಲ ಕೊಂದುಬಿಡಲಿ ಹೆಂಗ ಹೇಳ ತುಂಟತನದಿ ಮಾಡಿದ ಆ ಗಾಯಕೆ ಮುಲಾಮು ಸಿಕ್ಕೀತೇಕಂಗೋಳಿಸುವ ಆಸೆಗಳ ತೋಟಕೆ ಕಿಚ್ಚಚ್ಚಲಿ ಹೆಂಗ ಹೇಳ ಕಾದು ಕಾದು ಕಂಗೆಟ್ಟು ಬೆಂಗಾಡ ಹೊಕ್ಕು ಬೆಚ್ಚಿಬಿದ್ದಿರುವೆಒತ್ತರಿಸಿ ಬರೋ ಹಂಬಲದ ಹಸಿವ ಹಿಂಗಿಸಲಿ ಹೆಂಗ ಹೇಳ ಸಂಗದಾಟ ತಂದ ಸಂಕಷ್ಟದ ಬೇನೆ ಸುಡುತಿವೆ ನನ್ನೊಡಲತಾಳದ ತುಡಿತಗಳ ತಾಪವೇರಿರಲು ತಗ್ಗಿಸಲಿ ಹೆಂಗ ಹೇಳ ಅನು ಹತ್ತು ಜನುಮಕಾಗುವಷ್ಷು ಅನುರಾಗ ಕಟ್ಟಿಟ್ಟಿದ್ದಳುತೋಡಿದ ಒಲವಿನೊರತೆ ಬತ್ತುತಿರಲು ಸಹಿಸಲಿ ಹೆಂಗ ಹೇಳ ಡಾ ಅನ್ನಪೂರ್ಣ ಹಿರೇಮಠ
ಡಾ ಅನ್ನಪೂರ್ಣ ಹಿರೇಮಠ ಗಜಲ್ Read Post »









