ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸೀಮಿತ, ಸ್ವಾರ್ಥ ಬಾಳು ನನಗೆ ಬೇಕಿಲ್ಲ
ಅಂತಹ ಬದುಕದು ಯಾಂತ್ರಿಕ…
ಪ್ರಕೃತಿಯೊಡ್ಡುವ ಸವಾಲುಗಳ ಸ್ವೀಕರಿಸಬೇಕು
ಆ ನಿಯಾಮಕನೊಬ್ಬ ಮಾಂತ್ರಿಕ.

ಒಂದಕಿಂನ್ನೊಂದೂಡುವುದೆ ನಿಯಮ
ಹಸಿವು ಹಿಂಗಿಸುವ ರಸವುಂಟು ನನ್ನಲ್ಲಿ.
ಭಯವೇಕೆ ತಣಿಸಿಕೋ ಪುಟ್ಟ ಉದರವನು
ಉಂಡು ತೃಪ್ತಿಪಡುವ ಹಸಿವುಂಟು ನಿನ್ನಲ್ಲಿ.

ಭಯದಿ ಏಕೆ ಬೆದರಿ ನಿಂತೆ
ತಿಳಿಯದು ನೀ ಕೀಟವೆಂದು.
ಉದಾಸೀನ ಮಾಡುವರೆಲ್ಲರೂ
ಹಸಿರೆಲೆಯದು ಇರಬಹುದೆಂದು.

ರೆಂಬೆಯಾಸರಕೆ ಬಾ ಜೀವಿಯೇ
ಎಲೆಗಳ ಸೆರಗಲಿ ಅವಿತುಕೋ.
ನಾಳೆ ಎಂತೋ ಯಾರು ಬಲ್ಲರು
ಇಂದಿನ ಸುಖವ ಬಾಚಿಕೋ.

ನಿಷ್ಪತ್ತಿಗೆ ಅಣಿಯಾದ ಫಲವು ನಾನಾಗಿರುವೆ
ಹೀರಿಬಿಡು ರಸವ ಹಗುರಾಗಿ ಉದುರುವೆ.
ಮಣ್ಣು, ನೀರಿನಾಸರೆಯ ಪಡೆದು,,
ಮರುಹುಟ್ಟು ಪಡೆದು ಫಲವ ನೀಡುವೆ.


About The Author

Leave a Reply

You cannot copy content of this page

Scroll to Top