ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿನ್ನ ಕೊಳಲಿನ ಮಾಧುರ್ಯಕೆ ಮನಸೋತು
ಓಡಿ ನಾ ಬಂದರೆ
ಎಲ್ಲಿ ಮಾಯವಾಗಿ ಹೋದೆ ಹೇಳು ಎನ್ನ ದೊರೆ ?

ತಾಳೆನು ಈ ಮನದ ತಳಮಳ,
ನೀನಿಲ್ಲದೇ ಬರಿದಾಗಿದೆ ಈ ಸುಂದರ ಗೋಕುಲ,
ನನ್ನ ವೇದನೆ ನಿನಗೆ ಮಾತ್ರ ಅರ್ಥವಾಗುವುದು ನಲ್ಲಾ
ಬೇಗ ಬಾ ನನ್ನ ಮನಗೆದ್ದ ಗೊಲ್ಲಾ….

‘ರಾಧೇಶ್ಯಾಮ’ ನೆಂಬ ಬಿರುದುನ್ನು ಹೊತ್ತಿರುವೆ
ನಿನ್ನುಸಿರಲ್ಲಿ ಸದಾ ಉಸಿರಾಗಲು ನಾ ಬಯಸುವೆ.
ನೀ ಬಳಿ ಬಂದು ಕುಳಿತಂತೆ
ಕನಸು ಕಾಣುತ್ತಿರುವೆ
ಒಮ್ಮೆ ಚಿವುಟಿ ಎಬ್ಬಿಸಲಾರೆಯಾ ಕೃಷ್ಣ
ನಿನ್ನ ಕಣ್ತುಂಬ ನೋಡುವೆ..


About The Author

1 thought on “ಸವಿತಾ ಇನಾಮದಾರ್ ಅವರ ಕವಿತೆ-ರಾಧೇಶ್ಯಾಮ.”

Leave a Reply

You cannot copy content of this page

Scroll to Top