ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸುಭಾಸ ಭಗತ ತಿಲಕರಿಂದ
ಪಟೇಲ ಭೀಮ ಪ್ರಸಾದರಾದಿ
ಗಾಂಧಿ ಶಾಸ್ತ್ರೀ ನಡೆದು ಬಂದ
ದಾರಿ ಕಂಡಿತೋ…. ನಮಗೆ ಹಾದಿ ತೋರಿತೋ….

ಕಾಶ್ಮೀರದ ಕಣಿವೆಯಲ್ಲಿ
ಕನ್ಯಾಕುಮಾರಿ ಮಡಿಲಿನಲ್ಲಿ
ಸಹ್ಯಾದ್ರಿಯ ಒಡಲಿನಲ್ಲಿ
ನಾವು ಧನ್ಯರೋ… ಇಲ್ಲಿ ನಾವು ಧನ್ಯರೋ…

ಮರಾಠಿಯ ಮೊಗ್ಗು ಬಿರಿದು
ಗುಜರಾತಿ ಘಮಲು ಹರಿದು
ಕನ್ನಡದ ಕಂಪು ಸುರಿದು
ತಂಪಾದಿತೋ…. ನೆಲವು ಇಂಪಾದಿತೋ…

ರಾಮ ರಹೀಮ ಯೇಸು ಬುದ್ಧ
ಒಂದೇ ಎಂಬ ಭಾವ ಶುದ್ಧ
ಐಕ್ಯತೆಯ ದೀಪದಿಂದ
ಬೆಳಕಾದಿತೋ… ನಾಡು ಬೆಳಕಾಯಿತೋ…

ಬಳ್ಳಿ ಹಲವು ತೋಟವೊಂದೆ
ಹೂವು ಹಲವು ಘಮಲು ಒಂದೇ
ಏಕತೆಯ ಮಂತ್ರ ಎಂಬ
ಸಸಿಯು ಮೊಳೆಯಿತೋ…. ಇಲ್ಲಿ ಹಸಿರು ಬೆಳೆದಿತೋ..

ಕೋಟಿ ಜಾತಿ ಪ್ರೀತಿ ಒಂದೇ
ನೂರು ಮತವು ಶಪಥ ಒಂದೇ
ಭಾರತಾಂಬೆ ತಾಯಿ ಎಂಬ
ಘೋಷ ಮೊಳಗಿತೋ… ಇಲ್ಲಿ ದೇಶ ಬೆಳಗಿತೋ..


About The Author

Leave a Reply

You cannot copy content of this page

Scroll to Top