ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸೋತೆನೆಂದು ಕುಗ್ಗಬೇಡವೆ ಮಗಳೆ
ಮರಳಿ ಪ್ರಯತ್ನವ ಮಾಡುತ ಬೆಳೆ
ತುಂಬಿ ಹರಿಯಲಿ ಗೆಲುವಿನ ಹೊಳೆ
ಮತ್ತೆ ಅರಳಲಿ ಮೊಗದಲಿ ಹೂ ಕಳೆ

ಪರರ ನಿಂದನೆಗಳನು ನಿರ್ಲಕ್ಷಿಸು
ಭಯ ಭೀತಿ ದುಗುಡಗಳನು ತ್ಯಜಿಸು
ಮುಂದೆ ಸಾಗು ಬಿಡುತ ಮುನಿಸು
ಮತ್ತೆ ಅರಳಲಿ ನೀನು ಕಂಡ ಕನಸು

ನೋಡುವ ದೃಷ್ಟಿ ಉತ್ತುಂಗದಲ್ಲಿರಲಿ
ಕಾಯಕದಲಿ ಸತತ ಪರಿಶ್ರಮವಿರಲಿ
ಮನದಲ್ಲಿ ಗೆಲ್ಲುವೆನೆಂಬ ಛಲವಿರಲಿ
ಮತ್ತೆ ಅರಳಲಿ ನಿನ್ನ ಕಾರ್ಯ ಶೈಲಿ

ತಂಪಾಗಿ ಆರಿಸು ಮನದ ಉರಿ
ನಿತ್ಯವು ಮೂಡಲಿ ಸಾಧನೆಯ ಗರಿ
ಪ್ರತಿ ಹೆಜ್ಜೆಗು ನಿನ್ನದಾಗಲಿ ಜಯಭೇರಿ
ಮತ್ತೆ ಅರಳಲಿ ನಿನ್ನ ಪ್ರತಿಭೆಯ ಸಿರಿ

ಬುದ್ಧ ಬಸವರ ಪಥದಲಿ ಸಾಗುತ
ದ್ವೇಷ ಮರೆತು ಪ್ರೀತಿಯ ಹಂಚುತ
ಪರಿಶುದ್ಧ ಕಾಯಕದಲಿ ತೊಡಗುತ
ಮತ್ತೆ ಅರಳಲಿ ಅರಿವಿನ ಜ್ಞಾನಾಮೃತ

ದೂರ ಸರಿಯಲಿ ದುಃಖ ನೋವು
ಹೆಚ್ಚಲಿ ಸುಖ ಸಂತೋಷ ನಲಿವು
ತುಟಿಯಂಚಲ್ಲಿ ಇರಲಿ ಸದಾ ನಗುವು
ಮತ್ತೆ ಅರಳಲಿ ಬಾಡಿದ ಮೊಗವು


About The Author

2 thoughts on “ಜಯಶ್ರೀ ಎಸ್ ಪಾಟೀಲ ಧಾರವಾಡ ಅವರ ಕವಿತೆ-“ಮತ್ತೆ ಅರಳಲಿ””

Leave a Reply

You cannot copy content of this page

Scroll to Top