ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನಸು ನೂರು ಕಣ್ಣಿನಲ್ಲಿ
ಹಾಗೆಯೇ ನೆಲೆಸಿದೆ
ಮನಸು ಹೊಸಹೊಸ
ಕನಸುಗಳ ಮತ್ತೆ ಹೆಣೆದಿದೆ

ಹುಚ್ಚು ಕನಸುಗಳ ಜೊತೆಗೆ
ಬದುಕು ಸಾಗಿದೆ
ದಿನ ಕಳೆದಂತೆಲ್ಲ ಮನಸು
ಹೆಚ್ಚು ಹೆಚ್ಚು ಮಾಗಿದೆ

ಕಾಡುವ ನೋವುಗಳಿಗೆ
ಮನವು ನೊಂದಿದೆ
ಫಲಿಸದ ಆಸೆಗಳಿಗೆ
ನಿರಾಸೆ ಒಂದಿಷ್ಟು ಕಾಡಿದೆ

ಎತ್ತೆತ್ತಲೋ ಓಡುತ್ತಿದ್ದ ಮನಸು
ಇಂದು ಸರಿದಾರಿಗೆ ಬಂದಿದೆ
ಸೋಲಿಗೆ ಅಂಜಿ ಶರಣಾಗದೆ
ಎಡೆಬಿಡದೆ ಪ್ರಯತ್ನವನ್ನು
ಮುಂದುವರೆಸಿದೆ

ಕಷ್ಟವ ಮರೆತು ಇಷ್ಟದ ಜೊತೆಗೆ
ಹೆಜ್ಜೆಯನ್ನು ಇಟ್ಟಿದೆ
ಮರಳಿ ಪ್ರಯತ್ನವ ಮಾಡುತ
ಯಶಸ್ಸಿನ ದಾರಿಗೆ ಮರಳಿದೆ

ಸೋಲು ಗೆಲುವು
ನೋವು ನಲಿವುಗಳ
ಲೆಕ್ಕಾಚಾರ ಬಿಟ್ಟಾಗ ಇಷ್ಟವು
ಕೈ ಹಿಡಿದು ಮುಂದೆ ನಡೆಸಿದೆ

ಬದುಕಿನ ದಾರಿಯು ಹೊಸದಾಗಿದೆ
ಹಸಿರಾಗಿದೆ ಉಸಿರಾಗಿದೆ
ನಡೆಯುವ ದಾರಿಯ ತುಂಬ
ಹೂವು ಅರಳಿ ನಗುವ ಬೀರಿದೆ


About The Author

2 thoughts on “ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮನಸ್ಸು”

  1. ಕನಸು ನೂರು ಕಣ್ಣಿನಲ್ಲಿ ಹಾಗೆಯೇ ನೆಲೆಸಿವೆ….. … ಹೂ ಅರಳಿ ನಗೆಯ ಬೀರಿದೆ. ಮನಸ್ಸಿನ ಏರಿಳಿತಗಳ ಅಲೆಗಳನ್ನು ಜೋಡಿಸಿ ಸುಂದರ ಕವನವನ್ನು ಹೆಣೆದಿದ್ದೀರಿ ಹಾರ್ದಿಕ ಅಭಿನಂದನೆಗಳು.
    …ಡಾ ಬಿ ಆರ್ ಅಣ್ಣಾಸಾಗರ

Leave a Reply

You cannot copy content of this page

Scroll to Top