ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಾಸಿಯಾಗದ ರೋಗಕೆ ಮದ್ದನು ಕೊಟ್ಟವನು ನೀನು
ಹಾಸಬೀರುತ ಮನಸಿನಲಿ ನೆಮ್ಮದಿ ಇಟ್ಟವನು ನೀನು

ಜೊತೆಗೆ ದೇವರಂತೆ ನೀನಿರುವಾಗ ಚಿಂತೆಯೇಕೆ ಹೇಳು
ಮತಿಗೆಟ್ಟು ಹೋದಾಗ ವಿಶ್ವಾಸವೃಕ್ಷ ನೆಟ್ಟವನು ನೀನು

ಕಾಯಿಲೆಗಳ ಗೂಡಾಗಿ ಅವಿರತ ಶರೀರ ಬಳಲಿತಲ್ಲ
ಹಯದಂತೆ ಕಷ್ಟಗಳನು ದೂರತಳ್ಳಿ ಬಿಟ್ಟವನು ನೀನು

ಧೈರ್ಯವನು ತುಂಬುತ ನೋವು ಗುಣಪಡಿಸಿದೆ ಸಖ
ಕಾರ್ಯದಲಿ ಯಶಸಿಗೆ ಹರಸಾಹಸ ಪಟ್ಟವನು ನೀನು

ಜೀವವನು ರಕ್ಷಿಸುತ ಅಂಬರದಿ ಮೆರೆಸಿದೆ ಧನ್ವಂತರಿ
ಧಾವಿಸಿದ ಪ್ರಾಣದುಳಿವಿಗೆ ಪಣ ತೊಟ್ಟವನು ನೀನು


About The Author

1 thought on “ಶಂಕರಾನಂದ ಹೆಬ್ಬಾಳ ಅವರ ಗಜಲ್”

  1. Shobha Mallikarjun

    ಗಜಲ್ ತುಂಬಾ ಪ್ರಸ್ತುತ, ಅರ್ಥಪೂರ್ಣವೂ ಆಗಿದೆ ಸರ್ ಅಭಿನಂದನೆಗಳು

Leave a Reply

You cannot copy content of this page

Scroll to Top