ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗೌತಮನಲ್ಲದ ಗೌತಮನಿಗೆ
ಬಲಿಯಾದ ಅಹಲ್ಯೆ
ಗೌತಮನ ಶಾಪಕೆ ಗುರಿಯಾಗಿ
ಶಿಲೆಯಾದಳು

ದಟ್ಟದಡವಿ ಮಧ್ಯ ಕಲ್ಲಾದರೂ
ಯಾರ ಸುಳಿವೂ ಇಲ್ಲಾ ಹತ್ತಿರ
ಏಕಾಂಗಿತನದ ಏಕಾಂತ ಸೃಷ್ಠಿಸಿದ
ಆ ಕಾಲ ಅದೆಷ್ಟು ಕ್ರೂರ

ಬಂದ ವಸಂತಗಳೆಲ್ಲಾ ಸಂತವಾದವು
ಆ ಕಾರ್ಗಲ್ಲ ರೂಪಕೆ
ಕಾರಿರುಳ ಕಾನನದಲ್ಲಿ ಒಂಟಿ ಇವಳು
ರಾಮ ಬರುವ ತನಕ

ತಪ್ಪಿಲ್ಲದ ತಪ್ಪಿನಲ್ಲಿ ಸಂದಿದ ಕ್ಷಣಕೆ
ಘೋರವಾದ ಧೀರ್ಘ ದೂರ
ವಿರಹಾಗ್ನಿ ಕುಂಡದಲ್ಲಿ ಬಂಡೆ ರೂಪದಲ್ಲಿ
ಒಂದೇ ನಿರಮ್ಮಳತೆ ಕೆಣಕುವರಿಲ್ಲಾ ಯಾರು

ಮಳೆಗಾಳಿ ಸಹಿಸುತ ಒಂದೇ ಚಿತ್ತ
ಧ್ಯಾನ ರಾಮನಾಮ
ನಿರ್ವಿಕಾರದೊಳ ಆಕಾರಕ್ಕೊಂದೇ ಧೈರ್ಯ
ನಿರ್ಲಕ್ಷದೊಳಗೂ ತಾನು ರಕ್ಷಿತ

ಹಸಿವು ದಾಹಗಳಿಲ್ಲದ ದೇಹ
ಒಳ ಒಳಗೆ ಕಸಿವಿಸಿಗೊಂಡರೂ
ಅಂದದ ಹೆಣ್ಣಿನ ಜನ್ಮಕ್ಕೆ
ಈ ರೂಪ ಪಡೆದಿದೆ

ಹೆಣ್ಣಾದ ಜನ್ಮ ಹಣ್ಣಾಗಿ ಹೋಗಿದೆ
ಪ್ರಶ್ನೆಗಳ ಪ್ರಶ್ನೆಗಳೂ ಮೌನವಾಗಿದೆ
ಘನ ತನಕ್ಕೆ ಕಾಮವೇ ಕಾರಣವಾದರೂ
ದೌರ್ಜ್ಯನ್ನಿಕೆಗೆ ಶಿಕ್ಷೆ ಮಾನ್ಯವೆ ?

ಪುರಾಣ ಇತಿಹಾಸಗಳಿಂದಲೂ ಇದೇ ಆಗಿದೆ
ಹೆಣ್ಣು ಭೋಗದ ವಸ್ತುವಾಗಿದೆ
ಬಾಯೊಳ ಮಾತು ನಡತೆಯಲಿಲ್ಲದೆ
ದೌರ್ಜ್ಯನ್ಯದ ಮೇಲೆ ದೌರ್ಜ್ಯನ್ಯವಾಗುತಿದೆ

ಇಂದಿಗೂ ಅದೆಷ್ಟೋ ಅಹಲ್ಯೆಯರು
ಮಾಡದ ತಪ್ಪಿಗೆ ಶಿಲೆಯಲ್ಲದ ಶಿಲೆಯಾಗಿ
ಜೀವ ಬದುಕಿನ ಮುಕ್ತಿಗಾಗಿ
ಬಾರದ ರಾಮನ ಕಾಯುತಿಹರು
ಕೆಲವರು ಮಣ್ಣಾಗಿಹರು……


About The Author

1 thought on “ಪ್ರಮೋದ ಜೋಶಿಯವರ ಕವಿತೆ-ಕಾಯುತಿಹರು”

Leave a Reply

You cannot copy content of this page

Scroll to Top