ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಳಗೊಂದು ಬಿಂದು
ಮನಸೊಳಗೆ ಭಾವದೊಳಗೆ
ಪರಿಧಿ ಹಾಕಿ ಉಳಿದು
ಗೆರೆ ಎಳೆದು ಬಿಡುವುದು
ಅಂತರಂಗ ಭರವಸೆ
ನೋವು ತಲ್ಲಣಗಳ
ಪರಿಚಯಿಸಿ ಜಗವ
ಸುತ್ತಿಸಿ ಮನಸೊಳು
ಇದ್ದು ಬಿಡುವುದು
ಮೂಲೆಯೊಳಗಿನ ಮೌನ
ಮಾತಾಗುವಂತೆ
ಮಾತೊಳಗಿನ ಗೌಣ
ಬದುಕಾಗುವಂತೆ
ಚಿತ್ರ ವಿಚಿತ್ರಗಳಾಚೆ
ಸಚಿತ್ರಗಳದೇ ಕಂತೆ
ಸತ್ವದೊಳಗಿನ ಸುತ್ತ
ಉಳಿದು ಹೋಗುವ ಸಂತೆ
ಸುತ್ತುವ ಸುಳಿವ
ಸುಳಿಗಾಳಿಗೂ ಕೇಂದ್ರ
ಬಿಂದು ನಂಟಂತೆ
ಮನದೊಳಗಿನ ಬಿಂದು
ಒಲವು ಅಂದಂತೆ

About The Author

1 thought on “ನಾಗರಾಜ ಬಿ.ನಾಯ್ಕ ಅವರ ಕವಿತೆ ಸತ್ವ ಸುತ್ತ”

  1. ಒಳ್ಳೆಯ ವಿಚಾರ ಪೇಪರನಲ್ಲಿ ಮೊಡಿದೆ ನಿನ್ನ ವಿಚಾರಗಳಲ್ಲ ಈ ರೀತಿ ಪ್ರಕಟ ಪಡಿಸುತ್ತಲೇ ಇರು ಅದು ಮನಸ್ಸಿನಲ್ಲೇ ಇದ್ದು ಹುದುಗಿ ಹೋಗದಿರಲಿ

    ಉಮೇಶ

Leave a Reply

You cannot copy content of this page

Scroll to Top