ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಷಾಢದ ಸೋನೆಮಳೆ ಅಬ್ಬರಿಸಲು
ಭೂರಮೆ ಹಸಿರಿನ ಬಸಿರಾದಳು
ಸಿಡಿಲು ಮಿಂಚು ಗಾಳಿಯ ದಿನಗಳು
ಹಳ್ಳಿಯ ಕೃಷಿಕರ ಪಾಲಿನ ಕಷ್ಟದ ಗೋಳು
ತುಳುನಾಡ ಮನೆಗಳಲಿ ಭಯದ ಭುಗಿಲು
ಔತಣ ಸಮಾರಂಭಗಳಿಗೆ ಬಿಡುವಿತ್ತು
ಅಟ್ಟದ ಚನ್ನೆಮಣೆ ಜಗುಲಿಗೆ ಬಂದಿತ್ತು.
ನವದಂಪತಿಗಳಿಗೆ ವಿರಹದ ಬೇನೆ ಇತ್ತು
ಮಗಳಿಗೆ ತವರಿನ ಭಾಗ್ಯವಿತ್ತು
ಆಟಿ ಅಮಾವಾಸ್ಯೆಯ ಹಾಲೆ ತೊಗಟೆಕಷಾಯ ಎಲ್ಲರ ಧನವಂತರಿಯಾಯಿತು
ಅಡುಗೆ ಮನೆಯಲ್ಲಿ ಬಗೆ ಬಗೆ ಬಿಸಿ ಬಿಸಿ ಖಾದ್ಯಗಳಿತ್ತು
ಕಣಿಲೆ ಚಗಟೆ ಸೊಪ್ಪು ದಂಟು ಮಾವು ಹಲಸು ಕೆಸುವು
ಬಗೆ ಬಗೆ ಪತ್ರೊಡೆ, ಕಡುಬು ದೋಸೆ, ಉಪ್ಪಿನ ಕಾಯಿ ಚಟ್ನಿ ಘಮಘಮ ಸ್ವಾದವು

ದೈವ ದೇವರುಗಳ ಮನೆ ಖಾಲಿಯಾಗಿರಲು
ರೋಗರುಜಿನಗಳ ಅಟ್ಟಹಾಸ ಮೆರೆದಿರಲು
ಮಾರಿಕಳೆಯ ಬಂದ ಆಟಿಕಳೆಂಜ ಕುಣಿಯುತ ಸಾಂತ್ವಾನದ ತೆಂಬೆರೆ ಪಾಡ್ದನದಿಂದ
ಅಕ್ಕಿ, ತೆಂಗಿಕಾಯಿ, ಮೆಣಸು, ಉಪ್ಪು ,ಇದ್ದಿಲ ಕಾಣಿಕೆ ಸಾಕೆಂದ
ಆಟಿ ಅಪಶಕುನವಲ್ಲ ಬದುಕಿನ ತಿರುವೆಂದ


About The Author

Leave a Reply

You cannot copy content of this page

Scroll to Top