ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಣ್ಣಿನೊಳಗೆ ಅದೆಷ್ಟು ಭಾವ ಬಂಧ
ಮಳೆಯೆಂದರೆ ಹಾಗೆ
ಹಸಿರು ಬೇರು ಎಳೆಚಿಗುರು
ಸುತ್ತ ಮುತ್ತ ನಗೆಯ ಬಗೆ

ಚಂದ ಮಾತು ತುಂಬಿದ ಮೌನ
ಬೀಸುವ ತಂಗಾಳಿಗೆ
ಉಳಿವ ಒಲವು ಮಣ್ಣ ಕಣದಿ
ಸಾವಿರ ಹನಿ ಮಳೆಗೆ

ಬಳ್ಳಿ ಬದುಕು ಭರವಸೆ ನೂರು
ಹಕ್ಕಿ ಹಾಡೊಳಗೆ
ಚಿತ್ರ ಸಾಲು ಮೋಡದ ತೇರು
ಕಣ್ಣ ಕವಿತೆಯೊಳಗೆ

ರಾಗ ಇಳೆ ತಾಳ ಕಾಡು
ಹಸಿರು ಉಸಿರ ಜಾಡು
ಕಡಲ ತೆರೆ ಕುಣಿವ ತೊರೆ
ಹೊಸತು ಸಾಲಿನ ಮೊರೆ

ಸಾಧ್ಯತೆ ಸಾವಿರ ಮಣ್ಣಿನಲ್ಲಿ
ಹೂವ ಸೊಬಗು ಚೆಲುವಿನಲ್ಲಿ
ಗೆಲುವು ಗುರುತು ಬುವಿಯಲ್ಲಿ
ನಾವು ಉಳಿವ ಲೋಕದಲ್ಲಿ


About The Author

5 thoughts on “ನಾಗರಾಜ ಬಿ.ನಾಯ್ಕ ಅವರ ಕವಿತೆ-ಸಾಧ್ಯತೆ……”

  1. ಹಸಿರು ಕಾಡು ಕಡಲು ನಮ್ಮ ಭೂತಾಯಿಯ ಮಡಿಲು ಇವುಗಳ ಬಗ್ಗೆ ಎಷ್ಟೇ ಬರೆದರೂ ಬರೆದು ಮುಗಿಯಲಾರದು … ಹೂವಿನ ಸೊಬಗಿನಂತೆ ಕವಿತೆಯ ಸೊಬಗು ಸಾಧ್ಯತೆಯನ್ನ ಮೀರಿ ಮನವ ಸೆಳೆಯುವಂತಿದೆ.. ಸುಂದರ ಸುಮಧುರ ಕವಿತೆಯನ್ನ ಮತ್ತೆ ಮತ್ತೆ ಓದಿದಾಗ ಹೊಸದೇ ಅನುಭ ನೀಡುವಂತಿದೆ..

    ನಾನಾ ಬಾಡ

  2. ಅಗೆದಷ್ಟು ಆಳ ಬಗೆದಷ್ಟು ಜ್ಞಾನ ಎಂಬ ಧೋರಣೆ ತಮ್ಮ ಕವಿತೆಯಲ್ಲಿ ವ್ಯ ಕ್ತ ವಾಗು ತ್ತ ದೆ.

Leave a Reply

You cannot copy content of this page

Scroll to Top