ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಧಕಾರದ ಕತ್ತಲೆಯ ತೊಳೆವ
ಮಿನುಗುತ ದೀಪ ಹೊಳೆವ
ಮಾಡುತ ಜಗದಿ ಪ್ರಕಾಶವ
ಭರವಸೆಯಿಂದ ಬದುಕುವ

ಆತ್ಮ ವಿಶ್ವಾಸವೆಂಬ ಆಭರಣ
ಧೈರ್ಯ ತುಂಬುವ ಅಂತಃಕರಣ
ಪ್ರತಿಭೆಯ ಪ್ರದರ್ಶಿಸುವ ಅನಾವರಣ
ಭರವಸೆಯ ಜೀವನದ ಪ್ರತಿಫಲನ

ಬದುಕು ಅನಿವಾರ್ಯ ನಿರಂತರ
ಭರವಸೆಯೇ ಜೀವನದ ಆಧಾರ
ಸಾಧನೆಯ ಹಾದಿಯ ಪ್ರಕಾರ
ಗುರಿ ತಲುಪುವ ಮುಟ್ಟುತ ಅಂಬರ

ನೆನಸಿಟ್ಟ ಉದ್ದಿನ ಬೇಳೆ ಉಪಯೋಗಕ್ಕೆ
ಮುಂಜಾನೆ ಎದ್ದರೆ ಇಡ್ಲಿ ಉಪಹಾರಕ್ಕೆ
ಇರದೇ ಹೋದರೆ ಉದ್ದಿನ ವಡೆ ಶ್ರಾದ್ಧಕ್ಕೆ
ಆದರೂ ಬದುಕುವೆ ಎಂಬುವ ಭರವಸೆ ಜೀವಕ್ಕೆ


About The Author

Leave a Reply

You cannot copy content of this page

Scroll to Top