ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಸಿರು ಸಿರಿ ನಡುವೆ ಆಸೀನರು ಜಾನಕಿ ರಾಮ
ಉಸಿರು ಉರದಲಿ ಬೆಸೆದಿದೆ ನಿರ್ಮಲ ಪ್ರೇಮ

ಪತಿಪ್ರೀತಿಗಾಗಿ ವನಸೇರಿದ ಸೌಂದರ್ಯರಾಣಿ
ಸತಿಧರ್ಮ ಪಾಲಿಸಿದ ಪತಿವ್ರತಾ ಶಿರೋಮಣಿ

ಪ್ರೇಮಭಾವದಿ ಶ್ರೀರಾಮ ಹೆಣೆದಿಹನು‌ ಹೆರಳು
ಕೋಮಲೆ ಸೀತೆ ನಾಚಿ ಬಾಗಿಸಿಹಳು ಕೊರಳು

ಅಪ್ಪಿದ ಕಣ್ರೆಪ್ಪೆಗಳ ಭಾವ ಅನಿರ್ವಚನೀಯ
ಒಪ್ಪಿದ ಬಾಂಧವ್ಯದ ನಿಶ್ಚಯ ಅವರ್ಣನೀಯ

ನೋಡಿ ಇವರೊಲವ ಚುಕ್ಕಿತಾರೆ ಮಂತ್ರಮುಗ್ಧ
ಕಾಡಿನ ಹಕ್ಕಿಪಕ್ಷಿ ಮೃಗಗಳೆಲ್ಲ ಕುಳಿತಿಹವು ಸ್ಥಬ್ದ

ಬಾಲರವಿಗಾಯ್ತು ಇವರೊಲವ ಕಂಡು ಪುಳಕ
ಮೇಲೇರದೆ ನಿಂತು ಚೆಲ್ಲಿಹ ತುಸು ಬೆಳ್ಳಿ ಬೆಳಕ

ಗಂಧ ಹರಡಿವೆ ಎಲ್ಲೆಡೆ ಬಿರಿದ‌ ವನಸುಮಗಳು
ಬಂಧ ಬಿಚ್ಚಿ ತೂಗಿ ತಂಗಾಳಿ ಬೀಸಿವೆ ಲತೆಗಳು

ಬತ್ತಳಿಕೆಗೆ ಅಲ್ಪವಿರಾಮವಿತ್ತಿಹನು ರಘುರಾಮ
ಬಿತ್ತರಿಸಿಹನು ಜಗಕೆ ನಿಜ ಆದರ ಪತ್ನಿ ಪ್ರೇಮ

ಏಕಪತ್ನೀವ್ರತಸ್ಥ ರಘುನಂದನನ ಈ ಸಂಪ್ರೀತಿ
ನಾಕಸದೃಶ ಭಾರತದ ಜನತೆಗೆ ಸದಾ ಸ್ಪೂರ್ತಿ..


About The Author

Leave a Reply

You cannot copy content of this page

Scroll to Top