ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅದೃಷ್ಟದ ಮರಕೆ
ಬಳ್ಳಿಯ ಆಲಿಂಗನ,
ನಿತ್ಯ ಪಡೆಯುತಿದೆ
ಸುಮದ ಸುವಾಸನೆ.

ಬಳ್ಳಿಯು, ನೀರುಣಿಸಿ
ಸಾಕಿದ ಕುವರಿಗೆ
ಮರಳಿ ನೀಡುತಿದೆ
ವಾಸನೆಯ ಮಲ್ಲಿಗೆ.

ಚಂದದ ಗುಲಾಬಿಯು
ಆಕ್ರಮಣಕಂಜಿದೆ.
ಒಡಹುಟ್ಟಿದ ಮುಳ್ಳು
ಕಾವಲು ಕಾಯುತಿದೆ.

ಬಿದಿರ ಮಡಿಲಲಿ
ಚಿಗುರಿದ ಕಳಿಲು
ಬಲಿತು ಉಲಿಯಿತು
ಮಧುರದಿ ಕೊಳಲು.

ಹಸಿಯಾದ ಭೂಮಿಯು
ಹಾತೊರೆದು ಬೀಜಕೆ.
ಬೀಜ ಅನ್ನವ ಮಾಡಿ
ಸಲಹೋದು ಜಗಕೆ.

Preview in new tab

ಮೊಗ್ಗಿನ ಬಳಿ ಬಂದು
ಗುಂಯೆಂದ ಮಧುಕರ.
ಆಲಿಸಿದ ಆ ಮೊಗ್ಗು
ಹೂವಾಗಿ ಅರಳಿತು.

ಗುಂಯನ್ನೋದ ನಿಲ್ಲಿಸಿ
ದುಂಬಿ ಬಂತು ಮೆಲ್ಲಗೆ,
ಮೌನ ಸಮ್ಮತಿಯಲಿ
ಘಮಿಸಿತು ಮಲ್ಲಿಗೆ.


About The Author

Leave a Reply

You cannot copy content of this page

Scroll to Top