ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತೆಂಗಿನ ಗರಿಗಳು ಬಾನನೇ ನೋಡುತ
ಮೆಲ್ಲನೆ ಭೂಮಿಗೆ ಬಾಗುವುದು
ಮನುಷ್ಯನ ಆಯುಷ್ಯ ಖುಷಿಯನ್ನೇ ಕೊಟ್ಟರು
ಒಂದು ದಿನ ಮಣ್ಣಲ್ಲಿ ಕರಗುವುದು

ಒಳಿತು ಮಾಡುವ ಮನಸುಗಳಿರಲು
ತಪ್ಪು ಕಲ್ಪನೆ ಬಿಡಬೇಕು
ಅತ್ತಿತ್ತ ಎತ್ತತ್ತ ಹೋದರು ನೀನು
ನ್ಯಾಯದ ಪರವೇ ಇರಬೇಕು

ಗಿಡುಗನ ದೃಷ್ಟಿಯು ಅದೆಂತಹ ಸೃಷ್ಟಿ
ಬೇಟೆಯು ಎಂದೂ ತಪ್ಪದು
ಜನನ ಅಂದಾಗ ಅದೆಷ್ಟೋ ಸಂತಸ
ಮರಣದ ದುಃಖವು ಇರುವುದು.

ಬಾಳಿನ ಸಂತೆಯಲಿ ಮಾರಾಟಗಾರನ
ಅಳತೆಗೂ ಸಿಗದ ಹೆಜ್ಜೆಗಳು
ಹರಿಯುವ ನದಿಯಲ್ಲಿ ತೇಲುವ ದೋಣಿ
ಪ್ರೀತಿಯು ಜೊತೆಗೆನೇ ಇರಬೇಕು

ಮಣ್ಣಿನ ಸೃಷ್ಟಿ ಮಣ್ಣನ್ನೇ ತಿಂದು
ಮರಳಿ ಮಣ್ಣಿಗೆ ಹೋಗುವುದು
ಮಣ್ಣಿನ ಸತ್ವ ಮನುಜನ ಬೆಳಸಿ
ಮಣ್ಣು ಶಕ್ತಿಯ ಮೆರೆಯುವುದು


About The Author

Leave a Reply

You cannot copy content of this page

Scroll to Top