ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಶಾಂತಿಯೆಂಬುದು ಮುಖ್ಯ ಜೀವನಕೆ
ಬ್ರಾಂತಿಯಾಗದೆ ಬಾಳುವುದು ಕಲಿ ಸಂತಸಕೆ
ಅಂಕು-ಡೊಂಕಿನ ರಸ್ತೆಯ ಬದುಕು ಇದು
ತ್ಯಾಗ ಬೇಕು ಯಾರ ಹಂಗಿಲ್ಲದೆ ಸಾಗು…

ಮನಸು ಮಾಡಿದರೆ ಮಾತ್ರ ಸಾಗುವೆ ವು ನಾವು
ಕನಸಾಗುವ ರೀತಿಯಲಿ ಇರಬೇಕು ನೋವು
ಕಷ್ಟದ ನೆರಳುಗಳ ಸೋಕದಂತೆ ನಡೆಯಬೇಕು
ಎಲ್ಲರ ಪ್ರೀತಿಗೆ ಸದಾ ಪಾತ್ರರಾಗಬೇಕು….

ಉಪಕಾರವನು ಮಾಡು ಅಪಕಾರ ಮಾಡದೆಯೇ
ಸಂಸ್ಕಾರವ ಮರೆಯದೆ ಸಾಗುತಿರು ಮರೆಯದೆಯೇ
ಭರವಸೆ ಕೊಟ್ಟವರು ಈಗಿಲ್ಲದಿರಬಹುದು
ಸಂಬಂಧಿಕರು ಈಗ ಜೊತೆಗಿರದಿರಬಹುದು…..

ನಿನ್ನ ಕಾರ್ಯಗಳೇ ಅವರ ಆಹ್ವಾನ ಮಾಡುವುದು
ಮರೆಯದೆಯ ಛಲದಿಂದ ಕಾರ್ಯವ ಮಾಡು
ಕಾದ ಕಾವಲಿಯಂತೆ ಆಗದಿರು ಶಾಂತಿಯಲಿ
ನಿರ್ಮಲವಾದ ನೀರಿನಂತೆ ಇದ್ದು ಸಾಗುತಿರು….

ನೆಟ್ಟ ಸಸಿ ಕಷ್ಟಪಡುವುದು ಬೆಳೆಯಲು
ನೀರಿರದಿದ್ದರೆ ಅದು ನಶಿಸುವುದು ತಿಳಿ
ಮನುಜನಿಗೂ ಬೇಕು ಧೈರ್ಯವು
ಆಗುವುದು ಎಲ್ಲಾ ಕಾರ್ಯ ನಿರಳವಾಗಿ…..


About The Author

Leave a Reply

You cannot copy content of this page

Scroll to Top