ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಗಲು ಸೊರಗಿ ಇರುಳು ಅರಳಿ
ರಸ್ತೆ ಬದಿಯ ದೀಪವೆಲ್ಲಾ
ಮಂಕಾಗಿ ಮಿಂಚುತಲಿದ್ದವು
ಯಾವುದೊ ಮೂಲೆಯಲ್ಲಿ
ಮಲ್ಲಿಗೆಯ ಮನವು ಮರುಗುತಲಿತ್ತು

ಚಂದಿರನೊಬ್ಬ ಬಂದಿಹನಲ್ಲಿ
ಬಾನ ವಲ್ಲಿಯ ಮೇಲೆ…
ಹಾಲ್ಬೆಳಕನುಂಡಿತು ಹೊಳೆಯ ದಂಡೆ
ಅಲ್ಲೇ ಮಿಂಚುವ ಮಿಂಚುಳಗಳ ನಾ ಕಂಡೆ
ಮಾತಿಗಿಳಿಯಿತು ಮಲ್ಲಿಗೆ ಬಾನಿನೊಂದಿಗೆ ಬಂದಿಯಾದ ಚಂದಿರನೊಂದಿಗೆ

“ಒಲ್ಲದ ಮನಸ್ಸಲ್ಲಿ ಒರೆಮುಖವ
ಮಾಡಿದರು ನನ್ನ ಗಲ್ಲವ ತಿರುಗಿಸಿ
ಪ್ರೀತಿಯ ನಗೆ ಬೀರುವವರಿಲ್ಲ ಇಲ್ಲಿ
ನೀನಿರುವೆ ಅಲ್ಲಿ ಬಾನ ಬಂಧನದಲ್ಲಿ
ನಾನಿರುವೆ ಇಲ್ಲಿ ಬಳ್ಳಿಯ ಬಂಧನದಲ್ಲಿ”

ಒಲವೊಂದು ಬೆಸೆದು ಸೇತುವೆಯೊಂದು
ಹೊಸದಿದೆ ಬಾನು ಬಳ್ಳಿಯ ನಡುವೆ
ಬೆಳಕ ಚೆಲ್ಲುವನಲ್ಲಿ ಚಂದಿರ ಇಳೆಯ
ಹಂದರಕ್ಕೆ ಮಲ್ಲಿಗೆ ಮೊಗ ನೋಡಲು
ಪರಿಮಳವ ಸೂಸುವುದಿಲ್ಲಿ ಮಲ್ಲಿಗೆ
ತಂಗಾಳಿಯೊಂದು ತಲುಪಿಸಲಿ
ಚಂದಿರನಲ್ಲಿಗೆ ಎಂದು.‌‌…..!!

ಅನುರಾಗದ ಅಲೆಗಳ
ತಡೆಯುವವರು ಇಲ್ಲ ಇಲ್ಲಿ ….!!


About The Author

4 thoughts on “ಭಾರ್ಗವಿ.ಎಸ್.ನಾಯ್ಕ ಕವಿತೆ-ಚಂದಿರ ಮತ್ತು ಮಲ್ಲಿಗೆಯ ಒಲವು…‌‌”

Leave a Reply

You cannot copy content of this page

Scroll to Top