ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಡಗಡನೆ ನಡುಗಿತು ಪಾಶ್ಚಾತ್ಯ
ಸಿಡಿಲಮರಿಯ ಘರ್ಜನೆಗೆ ಬೆದರಿ
ಪಲಾಯನಗೊಂಡಿತು ಪಾಶ್ಚಿಮಾತ್ಯ
ಸೋಲಿಗಂಜದ ಯುವ ಚೈತನ್ಯಕ್ಕೆ ಹೆದರಿ……

ಸ್ವಾಮಿ ವಿವೇಕಾನಂದರ ಅಪಾರ ಪಾಂಡಿತ್ಯ
ಯುವಶಕ್ತಿಯ ಮುನ್ನಡೆಸುವ ದಾರಿ
ತ್ಯಾಗ,ನಿಷ್ಠೆ,ಶ್ರದ್ಧೆಯ ಸಾಂಗತ್ಯ
ಮತಿಗೇಡಿಗಳ ಮೇಲದುವೆ ಸವಾರಿ…..

ಆಧ್ಯಾತ್ಮದ ಕಿಚ್ಚನು ಬಿತ್ತಿದರು ನಿತ್ಯ
ಚಿಕಾಗೋ ಸಮ್ಮೇಳನಕ್ಕೆ ಆದರಿವರು ರುವಾರಿ
ಬಡಿದೆಬ್ಬಿಸಿದರು ಸ್ವಾಭಿಮಾನ ಅನುನಿತ್ಯ
ಗುರು ರಾಮಕೃಷ್ಣ ಪರಮಹಂಸರೊಡನೆ ಸೇರಿ…..

ದೇಶ ಕಂಡ ಅಪ್ರತಿಮ ದೈತ್ಯ
ವಿಶ್ವಕ್ಕೆಲ್ಲ ಈ ಯುಗಪುರುಷನೇ ಅಂಬಾರಿ
ವಿದೇಶಿ ಸಂಸ್ಕೃತಿಗೆ ಹಾಡಿದರು ಅಂತ್ಯ
ಹಿಂದುತ್ವದ ಸಂದೇಶವ ಯುವಜನತೆಗೆ ಸಾರಿ…


About The Author

7 thoughts on “ಪ್ರಜ್ವಲಾ ಶೆಣೈಕವಿತೆ ಸಿಡಿಲಮರಿ”

Leave a Reply

You cannot copy content of this page

Scroll to Top