ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಏನು ಹೇಳಲಿ ನಮ್ಮೂರ ಸುದ್ದಿ
ಕೇಳಿದವರಿಗೆ ಬರುವುದಿಲ್ಲ ನಿದ್ದಿ

ಬರಗಾಲ ಬೆಂಬತ್ತಿ ಕಾಡುತ್ತಿದೆ
ಭೂಮಿ ನೀರಿಗಾಗಿ ಹಂಬಲಿಸುತ್ತಿದೆ

ಇದು ಯಾರ ಶಾಪವೋ
ಪ್ರಕ್ರುತಿಯ ವಿಕೊಪವೋ

ಪಶು ಪ್ರಾಣಿ ಪಕ್ಷಿಗಳ ಗೋಳು
ಉಪವಾಸ ವನವಾಸದ ಬಾಳು

ಯಾರಿಗೆ ಹೇಳಬೇಕು ರೈತರು
ಮಳೆ ಬೆಳೆ ಅವರ ಉಸಿರು

ಇಂಥದ್ದರಲ್ಲಿ ಯುವತಿ ಯುವಕ
ಹಾದಿತಪ್ಪಿ ಪಡುತ್ತಿದ್ದಾರೆ ನರಕ

ಕುಟಕಾ, ಮಾವಾ,ಮಾದಕ ತಿಂದು
ಸೆರೆ, ಸಿಂದಿ,ಮದ್ಯಪೇಯ ಕುಡಿದು

ಇಲ್ಲ ಅವರಿಗೆ ಯಾರ ಜವ್ಹಾಬ್ದಾರಿ,ಚಿಂತೆ
ಸಣ್ಣ ವಯಸ್ಸಿನಲ್ಲೇ ಮುಗಿಸುತ್ತಾರೆ ಸಂತೆ

ಎಷ್ಟೋ ಜೀವಗಳು ಮರಗುವರು ಹೊಟ್ಟೆ ಹಸಿದು
ಅದೆಷ್ಟೋ ಜನ ಖುಷಿಪಡುವರು ಅನ್ನ ಎಸೆದು

ಬಸವಣ್ಣಾ.. ನೀವು ಒಂಬತ್ತು ಶತಮಾನಗಳ ಹಿಂದೆ
ಬಂದು ಹೋದವರು ನಮ್ಮೂರಿಗೆ ಅಂದೆ

ಬದುಕುತ್ತಿರುವೇ..ಅಪ್ಪ ಬಸವಣ್ಣ ನಾ ಇಲ್ಲಿ
ನೀವು ಮತ್ತೆ ಬರುವಿರಿ ಎಂಬ ದಿಟ ಬರವಸೆಯಲ್ಲಿ

ಎಷ್ಟುಹೇಳಲಿ ನಮ್ಮೂರ ಸುದ್ದಿ
ಕೇಳಿದವರಿಗೆ ಬರುವುದಿಲ್ಲ ನಿದ್ದಿ


About The Author

Leave a Reply

You cannot copy content of this page

Scroll to Top