ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತದನಂತರ ಧಾರಣ
ಧ್ಯಾನ ಸಮಾಧಿ

ಮೊಟ್ಟೆ ಒಡೆದು
ಮರಿ ಹೊರಬಂದಂತೆ
ಕವಚ ಕಟ್ಟಿದ
ಸುಖದ ಕ್ಷಣಗಳು
ಪಟ ಪಟನೆಬಿರಿದು
ಚಟಪಟಿಸಿ ಬೆಳಕ
ಲೋಕವ ಕಂಡು
ಕತ್ತಲೆಯ ಅನುಭವಿಸಿ

ಪ್ರತಿ ಹೆಜ್ಜೆಗು ಹುಡುಕಾಟ
ಕಲಿಕೆ ಕನಸಿನ ಸರಸ
ಕೈ ಚಾಚಿ ಆಗಸಕೆ
ಬಾಚಿ ತಬ್ಬುವೆ
ಸುಖವ ನಾನೆನುತ
ಮೈ ಮರೆತು
ಮರೆತು ಬಾಲ್ಯ, ಹರೆಯದ
ಹದ ಮಧುರ ಸಿರಿ ಬದುಕ

ಮರು ಬದುಕು
ಪ್ರೀತಿ ಪ್ರೇಮದ ಆಟ
ಆಟ ಚುಂಬನ ಚಮತ್ಕಾರ
ಸ್ವಾರ್ಥ ಕಗ್ಗಂಟನಲಿ ಸಿಲುಕಿ
ಧಾರಣ ವಿಲ್ಲದ
ಪೂಜೆ ಇಲ್ಲದ ನೈವ್ಯೆದ್ಯ

ಮರೆತ ಧಾರಣ ಧ್ಯಾನ ವೈಭವ
ಬೆಟ್ಟದಂಚಿನ
ಶಿಖರ ಕೊನೆಯಲಿ
ಹೊರಗೆ ಕತ್ತಲು ಕವಿಯೆ
ಒಳಗಬೆಳಕದು ಬೆಳಗಿ
ಬೆಳಕಾಗಿ
ಆಗಿ
ಧಾರಣ ಧ್ಯಾನ
ಸಮಾಧಿ
ಸಂಭ್ರಮ
ತದನಂತರ ನಂತರ
ತಾನೆ ತಾನಗಿ
ತರಗೆಲೆಯಂತಾಗಿ
ಆಗಿ……

About The Author

Leave a Reply

You cannot copy content of this page

Scroll to Top