ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಈಮಲೆ ನಾಡಿನ ಹಚ್ಚಹಸಿರಿನ ಸೊಬಗಲಿ
ಕಣ್ಮನವ ಸೆಳೆಯುವ ನಿಸರ್ಗದ ಮಡಿಲಲಿ
ಈಭೂಮಿಗೆ ಇಳಿದು ಬಂದನು ಕುವೆಂಪು
ವಿಶ್ವದಿಕ್ಕಿಗೆ ಹಬ್ಬಿಸಿದನು ಗಂಧದ ಕಂಪು.

ರಸಋಷಿ ಕೈಯಿಂದ ಹರಿಯಿತು ಕನ್ನಡದ ಇಂಪು
ರಾಷ್ಟ್ರಕವಿಯ ಕೀರ್ತಿಯೇ ಕರ್ನಾಟಕಕೆ ತಂಪು
ಇವರoತರಾಳದಿ ಅಡಗಿದೆ ಜ್ಞಾನದ ನಿಧಿಯು
ಬಂದಿತು ಕರ್ನಾಟಕಕೆ ಜ್ಞಾನಪೀಠದ ಗರಿಯು.

ರೈತಬವಣೆ ಹಸಿರ ವರ್ಣನೆಯ ಸಂದೇಶ ಸಾರಿದರು
ಜಾತಿಧರ್ಮ ಸಮಾನತೆಲಿ ಬಾಳಲು ತಿಳಿಸಿದರು
ಸೂರ್ಯ ಚಂದ್ರರ ವಿಭಿನ್ನ ವರ್ಣನೆ ಬಣ್ಣಿಸಿದರು
ಮಕ್ಕಳ ಮನಮುಟ್ಟುವ ಕವನವನ್ನು ರಚಿಸಿದರು.

ಸಾಹಿತ್ಯ ಲೋಕಕಂಡ ದೈತ್ಯಪ್ರತಿಭೆ ಇವರು
ವಿಶ್ವಮಾನವ ಸಂದೇಶದ ಮುನ್ನುಡಿ ಬರೆದರು
ಯುಗದಕವಿ ಜಗದಕವಿ ಎಂದು ಖ್ಯಾತರಾದರು
ಕನ್ನಡಾoಬೆ ಕೀರ್ತಿಹೆಚ್ಚಿಸಿದ ದಿವ್ಯ ಚೇತನರಿವರು.


About The Author

Leave a Reply

You cannot copy content of this page

Scroll to Top