ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇದ್ದದ್ದು ಇದ್ದ ಹಾಗೇ ಇದೆ
ಅದೇ ಮಣ್ಣು ಗಾಳಿ ಬೆಳಕು
ಬದಲಾಗಿವೆ ಮನಗಳು
ದ್ವೇಷ ಮತ್ಸರದ ಬಿರುಗಾಳಿ

ಬೆಳಕಿಗೂ ಮಲೀನ ಮೈಲಿಗೆ
ಅವರವರದೇ ನ್ಯಾಯ ನೀತಿ
ಸತ್ತು ಹೋದ ಸಮತೆ ಪ್ರೀತಿ
ಎಂದೋ ಮಹಾತ್ಮರ ಜೊತೆಗೆ

ಸೇರಿವೆ ಮಣ್ಣು
ಇಗೋ ಇಲ್ಲಿ ಬದಲಾವಣೆ ಸಮಯ ಬದಲಾಗಲೇ ? ನನ್ನವರಿಗಾಗಿ
ಅಂದ ಚಂದವಿಲ್ಲದ ಬಾಹ್ಯ ಅಲಂಕಾರಕ್ಕೆ

ಅರಿಯುವ ಮೇಲೊಬ್ಬ
ಅಪ್ಪಿ ಮುನ್ನಡೆಸುವ
ನನ್ನದೇ ಸೃಷ್ಟಿ ಜಗತ್ತೆಂದು
ಹಿಡಿದಿರುವ ಹಿಡಿಯಷ್ಟು
ಪ್ರೀತಿ ಕೊಟ್ಟು

ಹುಡುಕುವ ನೂರೆಂಟು
ಸಮಸ್ಯೆಗಳ ಸುಳಿಯಲಿ ಸುಲಿಕಿಕೊಂಡಿದೆ ಸೃಷ್ಟಿ
ಬರುವೆಯಾ ? ಒಡೆಯಾ
.ನಾಳೆಯ ದಿನಗಳಿಗಾಗಿ

ಸುಂದರ ಚಿತ್ತಾರದ
ನಗು ಬೆಳಕಿಗೆ
ಗೆಲುವಾಗಿ ನೆರಳಾಗಿ
ನಿಲ್ಲುವೆಯಾ ? ಖಂಡಿತ ಇಲ್ಲ ಬಿಡು

ನಂಗೊತ್ತು ಬೆಳಕಿಗೂ ಮೈಲಿಗೆ
ಬೆಳೆಯುವ ಸಿರಿದೇವಿಗೆ ಅಲಂಕಾರ
ಬದಲಾಗಲೇ ಬೇಕು ಬೂತ ಮರೆತು
ಭವಿಷ್ಯತ್ತಿಗಾಗಿ

ಇದಿರು ಕಾಯುವೆ
ನೆರಳ ಬಯಸಿ
ಬರೀ ಸೃಷ್ಟಿಗಾಗಿ
ಬರೀ ಬದಲಾವಣೆಗಾಗಿ ಮಾತ್ರ …


About The Author

1 thought on “ಡಾ ಸಾವಿತ್ರಿ ಕಮಲಾಪೂರ-ಬದಲಾಗುವುದೇ ? ಸೃಷ್ಟಿ”

Leave a Reply

You cannot copy content of this page

Scroll to Top