ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬದುಕಬಂಡಿ ಏರಿತ್ತು
ಎಳೆದತ್ತ ಸಾಗಿತ್ತು
ಮನದಲ್ಲಿ ಛಲವಿತ್ತು
ನನ್ನವರ ಒಲವಿತ್ತು

ಅವರ ಪ್ರೀತಿ ಒಲವು
ಮೂಡಿಸಿತ್ತು ಮನಕೆ ಛಲವು
ಸೋಲಿನಲ್ಲು ಗೆಲುವು
ಮನಕೆ ಧೈರ್ಯ ಸ್ಥೈರ್ಯವು

ಅಂದು ನೋವನಿತ್ತ ಜನರು
ಚುಚ್ಚಿ ಭರ್ಚಿಎದೆಗಿರಿದವರು
ಇಂದು ಮುಗುಳುನಗುವರು
ಸ್ವಾರ್ಥಿಗಳು ಇವರು

ಬದುಕುವ ಛಲ ನನಗೆ
ಚಿವುಟಿದಷ್ಟು ಚಿಗುರಾಗೆ
ಅಂತರಂಗದ ನೋವಹೊಗೆ
ನಿಟ್ಟುಸಿರಲಿ ಹಗುರಾಗೆ

ಸುಣ್ಣವಾದೆ ಸುಟ್ಟು ನಾನು
ಕಂಬನಿ ಉದುರಿದೆ ಏನು
ಅರಳಿದೆ ಬಣ್ಣವಾದೆನು
ನನ್ನವರ ಮನೆಗೆ ನಾನು

——————

About The Author

Leave a Reply

You cannot copy content of this page

Scroll to Top