ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಲಭಾ ಜೋಶಿಹಾವನೂರರವರ

ಹೊಸ ಕವಿತೆಗಳು

ಸೂರ್ಯ

ಸೂರ್ಯನಿಗೇನು ಗೊತ್ತು ಹೊಸವರುಷ
ನಿತ್ಯ ಬರುವಂತೆ ಬಂದ
ಆತ ನಿತ್ಯ ನೂತನ
ಸತ್ಯ ಚೇತನ.
ತಂದ ಆತ್ಮೀಯತೆಯ
ಅಮರತ್ವದ ಅನುಬಂಧ
ಅದೇ ಸುರಮ್ಯ ರಶ್ಮಿ
ಪ್ರಭಾವಳಿಯ ಪರ್ವಣಿ
ವಸುಂಧರೆಗೆ ಚಿಗುರು
ಚೈತನ್ಯವೇ ಹೊಸವರುಷ.
ಆಲಸ್ಯ ಜಡತ್ವ
ಕಿತ್ತೋಗೆಯೋ ಭಾಸ್ಕರ
ಸೂರ್ಯ ಮಿತ್ರ
ನಾ ನಿನಗೆ ಸದಾ
ನತಮಸ್ತಕ.

**

ಋತು ಪರ್ವ

ಮಳೆ ಬಿತ್ತು ಮಳೆ ಬಿತ್ತು
ತೊಯ್ದು ಬಸಿಯುತ್ತ
ಹಸಿರು ಹೂವು ಹಣ್ಣು ವೃಕ್ಷ ಅದೇ ವಸುಂಧರೆ
ನಿನ್ನ ಶೃಂಗಾರ.
ಎಳೆ ಬಿಸಿಲು ಎಳೆ ಬಿಸಿಲು ಎಳೆ ಎಳೆಯಾಗಿತ್ತು
ಎಳೆಯುತ್ತ ದಿನದ ತೇರು
ಚಳಿಯಿತ್ತು ಚಳಿಯಿತ್ತು

ತುಳಸಿಟ್ಟೆಯ ಸುತ್ತ
ಪಾರಿಜಾತ ಪರಿಮಳ
ಸಿಂಪಡಿಸಿತ್ತು
ಭುವನ ಪ್ರೀತಿಯ ಭಾವನಾ ತೋಟ
ಜಗವೆಲ್ಲಾ ಋತುಪರ್ವ
ಅಲ್ಲವೇ
ಯಥಾವತ್ ಕಥಾಸರಿತ
ಸಾಗರ.


About The Author

Leave a Reply

You cannot copy content of this page

Scroll to Top