ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ದೇವರಾಜ್ ಹುಣಸಿಕಟ್ಟಿ

ನೆಟ್ಟ ಸರಹದ್ದುಗಳ ದಾಟುವುದು ಯಾವಾಗ
ಮನುಷ್ಯ ಮನುಷ್ಯನಾಗುವುದು ಯಾವಾಗ

ಅದೆಷ್ಟು ಧರ್ಮಾoದತೆಯ ಹೊದ್ದು ಮಲಗಿದ್ದೀರಿ
ಮತದ ಬೇಡಿಗಳ ಕಿತ್ತೆಸೆಯುವುದು ಯಾವಾಗ

ಬಣ್ಣ ಬಳಿದೆರೆಷ್ಟು ಬಿಳಿಚಲೇಬೇಕು ಕಾಲನಾಟಕ್ಕೆ
ತೊಟ್ಟ ಮುಖವಾಡಗಳ ಕಳೆಚುವುದು ಯಾವಾಗ

ಮಸಣವದು ಕರೆದು ತಂದಾಗಿದೆ ಮನ ಮನೆ-ಮನೆಗೆ
ಸತ್ತ ಮನುಷ್ಯತ್ವದ ಗಬ್ಬು ವಾಸನೆ ತೊಳೆಯುವುದು ಯಾವಾಗ

ಓಣಿಗೊಂದರಂತೆ ಗುಡಿ ಗುಂಡಾರ ಕಟ್ಟಿದ್ದೆ ಬಂತು
ಹೃದಯದರಮನೆಯಲಿ ‘ದೇವ ‘ ನೆಲೆಸುವುದು ಯಾವಾಗ


About The Author

Leave a Reply

You cannot copy content of this page

Scroll to Top