ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್‌ ವಿಶೇಷ

ಗಜಲ್

ಭಾರತಿ ರವೀಂದ್ರ

ಕವಿತೆ ಬರೆಯಲು ಹೊರಟು
ಕಥೆಯಾಗಿ ಬಂದೆಯಲ್ಲ ನೀನು
ಮಮತೆ ಮೆರೆಯಲು ಪ್ರೀತಿಯ
ಸನಿಹಕೆ ತಂದೆಯಲ್ಲ ನೀನು

ಚಳಿಯ ಗಾಳಿ ಬೀಸಲು
ಬಿಸಿ ಅಪ್ಪುಗೆ ಬೇಕಾಯಿತೆ ಹೇಳು
ಸ್ನೇಹದ ಛಾಯೆ ಆವರಿಸಿ
ಮನದಲ್ಲಿ ಬೆಂದೆಯಲ್ಲ ನೀನು

ರವಿಯು ಕಾಣುವ ಕನಸಿಗೆ
ಮೋಡ ಅಡ್ಡಿಯಾಯಿತು ನೋಡು
ಕವಿಯ ಅಂತರಂಗದ ನಗೆ
ಅರಳಿಸಿ ನಿಂದೆಯಲ್ಲ ನೀನು

ಸಿಹಿ ಮಾತಿನ ಮೋಡಿಯು
ನೋವ ಹಗುರವಾಗಿಸಿದೆ ಗೆಳೆಯ
ಹೊಸ ಆಸೆಯಗಳ ಹೊತ್ತು
ಕಹಿ ಕ್ಷಣವ ಕೊಂದೆಯಲ್ಲ ನೀನು

ಸೂರ್ಯ ರಶ್ಮಿಯು ಹೊಂಬೆಳಕನು
ಮೂಡಿಸಿದೆ ನವ ಬಾಳಿಗೆ
ಆರ್ಯ ಪುತ್ರನ ನೆನಪಿನಲ್ಲಿ
ದಿನವೂ ಮಿಂದೆಯಲ್ಲ ನೀನು.


About The Author

Leave a Reply

You cannot copy content of this page

Scroll to Top