ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಜ್ಯೋತಿ ಬಿ ದೇವಣಗಾವ್

ಯಾಕೆ ಹೇಳು ಇದೆಂಥ ಮೌನ ರಾಹು ಬಡಿಯಿತೆ
ಕ್ಷಣಕ್ಷಣಕೂ ಮಿಡಿದ ವೀಣೆಯ ತಾರು ಕಡಿಯಿತೆ

ಒಲವ ಕಡಲಿಗೆ ಇಳಿದೇ ಬಿಟ್ಟೆವು ಉನ್ಮಾದದಲಿ
ನಿಂತ ನೆಲವು ಬಾಯಿ ಬಿಡದೆ ನನ್ನ ಉಳಿಸಿತೆ

ಆಣೆ ಭಾಷೆ ಎಲ್ಲ ಮರೆತು ಮಂಕು ಕವಿಯಿತು
ಚಲವತೊಟ್ಟು ತೊರೆದುಹೋಗುವ ಆಸೆ ಬಲಿಯಿತೆ

ನೀ ನಿತ್ತ ಗುಟುಕು ಪ್ರೀತಿ ಸಾಕು ಉಳಿದ ಜನುಮಕೆ
ಕೊಂದಾಡುತಿರಲಿ ಹೀಗೆ ನೆನಪು ನೆಪವ ಸೆಳೆದಿತೆ

ಒಂಟಿಯಾಗಿ ನಡೆಯುವೆ ಕೆಂಡಹಾಸಿದ ದಾರಿಗೆ
ಚಿಜ್ಜ್ಯೋತಿಯೊಂದು ಬೆಳಗಿ ತಾಪಕೆ ತಾನೇ ಕರಗಿತೆ


About The Author

Leave a Reply

You cannot copy content of this page

Scroll to Top