ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್(ಮೂರಕ್ಷರದ ಕಾಫಿಯ ನಲ್ಲಿ ರವಿ, ರವೊಫ್ ನ್ನು ಹೊಂದಿಸಿದ ಕಾಫಿಯಾನ ಗಜಲ್.) ಬಾಗೇಪಲ್ಲಿ

ಕಾವ್ಯ ಸಂಗಾತಿ ಬಾಗೇಪಲ್ಲಿ ಗಜಲ್ (ಮೂರಕ್ಷರದ ಕಾಫಿಯ ನಲ್ಲಿ ರವಿ, ರವೊಫ್ ನ್ನು ಹೊಂದಿಸಿದ ಕಾಫಿಯಾನ ಗಜಲ್.) ಜೀವನದಿ ಒಮ್ಮೆ ಪ್ರೇಮವೆಂಬ ಸುಳಿಗೊಮ್ಮೆ ಬೀಳಿರಿವಿರಹದ ಬಗ್ಗೆ ಹೇಗೆಂದು ನಂತರ ನೀವಯೇ ಹೇಳಿರಿ ಮನೋರಮೆಯ ಒಮ್ಮೆ ಏಕಾಂತದಿ ಭೇಟಿಮಾಡಿಅಗಲಿಗೆಯ ಸಮಯದಿ ನೋವಾದರೆ ತಾಳ್ಮೆ ತಾಳಿರಿ ಒಳ್ಳೆಯ ಗಂಡ ಚಂದದ ಪತ್ನಿ ಎಲ್ಲವೂ ಮಾತಷ್ಟೇದಕ್ಕಿದ ಹೆಣ್ಣ ಚಂದ ಹೆಂಡತಿಯಾಗಿಸಿ ಬಾಳ ಬಾಳಿರಿ ಹೊಂದಿಕೆಯ ಬಾಳಲಿ ನಿಜ ಸುಖವಿದೆ ತಿಳಿದಿರಲಿಸುಪ್ರೇಮ ಲೋಕವನು ಮಹಾರಾಜನಂತೆ ಅಳಿರಿ ಬತ್ತದ ಗದ್ದೆಯಲಿ ನಡೆದಂತೆ ಜೀವನ ಜಾರಬಹುದುಕೆಸರಲಿ ಬಿದ್ದರೂ ಸ್ವ ಸಂಬಾಳಿಸಿಕೊಂಡು ಏಳಿರಿ ಕೃಷ್ಣಾ! ಗೀತೆಯ ವಾಕ್ಯದಂತೆ ಜಾಗೃತ ಜಾಗೃತರಾಗಿರಿಭುವಿಯ ಸುಖದಲಿ ಸ್ವರ್ಗ ಸುಖವ ಕೂಡಿ ಕಳೀರಿ. ಬಾಗೇಪಲ್ಲಿ

ಗಜಲ್(ಮೂರಕ್ಷರದ ಕಾಫಿಯ ನಲ್ಲಿ ರವಿ, ರವೊಫ್ ನ್ನು ಹೊಂದಿಸಿದ ಕಾಫಿಯಾನ ಗಜಲ್.) ಬಾಗೇಪಲ್ಲಿ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್ ಬೆಸೆದ ಮನಸು ಕನಸುಗಳ ಮೇಲೊಂದು ದೂರು ನೀಡಬೇಕಿದೆಬಸಿದ ಹನಿಯು ನಯನಗಳ ಮೇಲೊಂದು ದೂರು ನೀಡಬೇಕಿದೆ ತೊರೆದು ಭಾವ ಉರಿದ ಎದೆಯು ತಾಳಲಾರದು ಬೇಗುದಿಮುರಿದು ಮೌನವು  ಮಾತುಗಳ ಮೇಲೊಂದು ದೂರು ನೀಡಬೇಕಿದೆ ಎರೆದ ಪ್ರೀತಿ ಇರಿದ ರೀತಿ ತನುಮನಕೆ ತಾಗಿನಿಂತು ನರಳಿದೆಬೆಂದ ಎದೆಯು ತುಡಿತಗಳ ಮೇಲೊಂದು ದೂರು ನೀಡಬೇಕಿದೆ ಮುರಿದ ವೀಣೆ ಹರಿದ ತಂತಿ ಹಾಡಲಾಗದ ಅಪಸ್ವರಬೆರೆತ ಸ್ವರವು ಬೆರಳುಗಳ ಮೇಲೊಂದು ದೂರು ನೀಡಬೇಕಿದೆ ಬರೆದ ಕವಿಯು ಬ್ರಹ್ಮನಲ್ಲ ಗೀಚುತಿರುವನು  ತನ್ನ ಲಯದಲಿಉರಿದ ಜ್ಯೋತಿಯು ತೆರೆಗಳ ಮೇಲೊಂದು ದೂರು ನೀಡಬೇಕಿದೆ

ಜ್ಯೋತಿ ಮಾಳಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಪ್ರಪಂಚ ಪ್ರಾಮಾಣಿಕರನ್ನೇ ಪರೀಕ್ಷಿಸುತ್ತದೆಯಂತೆ ನಿಜವೇಆ ದೇವರು ಒಳ್ಳೆಯವರನ್ನೇ ಒರೆಗೆ ಹಚ್ಚುತ್ತಾನಂತೆ ನಿಜವೇ ಕೆಡುಕಿನ ಕೋಣಕ್ಕೆ ಮೂಗುದಾನವೇ ಇಲ್ಲವೇನೊ ಅನಸ್ತದವಿಧಿ ದುಡಿವವರನ್ನೇ ದಾರಿದ್ರ್ಯಕ್ಕೆ ದೂಡುತ್ತದೆಯಂತೆ ನಿಜವೇ ಅರ್ಧಕ್ಕಿಂತ ಹೆಚ್ಚು ಜನರಿಲ್ಲಿ ಅಡ್ಡದಾರಿಯನ್ನೇ ಹಿಡಿದಿದ್ದಾರೆಸರಿ ದಾರೀಲಿ ನಡೆವವರೇ ದಿಕ್ಕುತಪ್ಪಿ ಬಂದವರಂತೆ ನಿಜವೇ ಆಗುಹೋಗುಗಳೆಲ್ಲವೂ ಸೋಗು ಧರಿಸಿಯೇ ಜರುಗುತ್ತಲಿವೆಮುಖವ ತೋರಿಸಿದವರ ಮೇಲೆ ಮೊಕದ್ದಮೆಯಂತೆ ನಿಜವೇ ಮನುಷ್ಯತ್ವ ಹುಡುಕುವುದರಲ್ಲೇ ಮಹಾಂತ ಕಾಲಕಳೆದನಂತೆವ್ಯರ್ಥ ಹುಡುಕಾಟ ಅರ್ಥ ಕಳೆದುಕೊಂಡಿದೆಯಂತೆ ನಿಜವೇ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜಯಶ್ರೀ.ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ ಜಯಶ್ರೀ.ಭ.ಭಂಡಾರಿ ಗಜಲ್ ಹಸಿರ ಹುಲ್ಲಿನ ಮೇಲೆ ನವಿರು ಬೆಳಕು ಬೀರುತಿದೆ ಉಸಿರಲಿ ಬೆರೆದ ಜೋಡಿಗೆ ಪವನ ಹರಸಿದಂತೆ ತೋರುತಿದೆ. ದೂರದಲಿ ಹೆಂಚಿನ ಮನೆ ಇದ್ದರೆ ಅದೆಷ್ಟು ಚೆಂದವಲ್ಲವೇ ಕರಗಳ ಚಾಚಿ ಮಲಗಿದ ದೃಶ್ಯ ಮೋಜು ತರುತಿದೆ. ಎತ್ತರದ ಮರಗಳು ಸೂರ್ಯನ ಕಿರಣಗಳ ಬಾಚಿ ತಬ್ಬಿಕೊಂಡಿವೆ.ಉತ್ತರದ ದಿಕ್ಕಿನಲಿ ಉದ್ದಕ್ಕೆ ದಾರಿ ಸ್ವಾಗತ ಕೋರುತಿದೆ. ಮಂಗಳದ ಕೋಮಲೆಗೆ ಸುಖದ ದಾಂಪತ್ಯ ನಾಂದಿ ಹಾಡಿದೆಅಂಗಳದ ರಾತ್ರಿರಾಣಿ ಮದಿರೆಯಲಿ  ಕನಸು ಕರಗಿ ಸೋರುತಿದೆ. ಜೀವನದ ಸಿಹಿಕಹಿಗಳ ಅರಿವು ಜಯದ ಸೋಪಾನ ತೂಗುವುದು ಪಾವನದ ಬದುಕು ದಾಂಪತ್ಯಕ್ಕೆ ಅಡಿಯಿಟ್ಟು ಸಂಭ್ರಮ ಏರುತಿದೆ.ಶ್ರೀಜಯ.ಭ.ಭಂಡಾರಿ.

ಜಯಶ್ರೀ.ಭ.ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ತಪ್ಪು ಯಾರದೇ ಆಗಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆಸರಿ ನಿಮ್ಮದೇ ಇದ್ದಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ನಾ ನೀ ಅವರಿವರು ಮೇಲು ಕೀಳು ಬಿಟ್ಟುಹಾಕಿಹಿಂದೆ ಏನೇ ನಡೆದಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಸೇಡಿನಿಂದೇ ಕೇಡು ಕೋಪ ತಾಪ ಸುಟ್ಟು ಹಾಕಿಅರಿಯದ ಪ್ರಮಾದವಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ತಪ್ಪಿ ಆಡಿದ ಮಾತು ಕೊಟ್ಟ ಭಾಷೆ ಬದಲಾಗದುಸರಿ ತಪ್ಪುಗಳು ತೆಪ್ಪಗಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಕಲಹಗಳು ಇಂದಿನವಲ್ಲ ಬಾಳು ಕಟ್ಟಿದಂದಿನವುತೆರವು ಕೊಡುವುದಾಗಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ನಾಗರೀಕನೆನಿಸಿದ್ದೆ ಈ ನಾಲಿಗೆಯ ನಲಿವಿನಿಂದಅವರೇ ದೊಡ್ಡವರಾಗಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಅನುಳ ಅಂತರಂಗದಿ ಪ್ರಶಾಂತತೆ ಮನೆ ಮಾಡಲಿಆತುರದ ಎಡರುತೊಡರಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ  ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ  ಗಜಲ್ ಹುಟ್ಟಿ ಬಂದಿಹೆ ನೀನು ಈ ಭುವಿಯಲಿಅನುಭವಿಸಲೆಲ್ಲವನು ಈ ಬದುಕಲಿ.. ಸುಖದ ಜೊತೆಗೆ ಸ್ವಲ್ಪ ದುಃಖವಿರಲಿಬೆಲ್ಲದ ಜೊತೆ ತುಸು ಬೇವು ಇರಲಿ.. ನೋವುನಲಿವುಗಳು ಕೂಡಿ ಬರಲಿಮೊಗದಿಎಂದೆಂದೂ ನಗುತುಂಬಿರಲಿ.. ಹಗಲು ಬರುವುದು ಇರುಳಸರಿಸುತಲಿದೀಪಬೆಳಗುವುದುತಿಮಿರದೂಡುತಲಿ.. ಸ್ನೇಹಪ್ರೀತಿಗಳು ಹೃದಯದೊಳಿರಲಿಕೋಪ ಅಸೂಯೆಎಲ್ಲ ಭಸ್ಮವಾಗಲಿ.. ಒಲವಝರಿಯೊಂದುಜಿನುಗುತಿರಲಿಮನದೊಳೆಂದೂ ಅದು ಚಿಮ್ಮುತಿರಲಿ..  *ಇರುವಂತೆ ಇರಬೇಕು* ದೇವನೊಲುಮೆಯಲಿಬಾಳಿಗದು ಭದ್ರತೆ ನಿನಗೆ ನೆನಪಿರಲಿ.. ಜಗದ ಟೀಕೆಗಳ ನೀ  ಮರೆಯುತಿರಲಿಏನೇ ಆದರೂ ಎಂದೂ  ಹೂ ಮನವಿರಲಿ…! ಹಮೀದಾ ಬೇಗಂ ದೇಸಾಯಿ 

ಹಮೀದಾ ಬೇಗಂ ದೇಸಾಯಿ  ಅವರ ಗಜಲ್ Read Post »

ಕಾವ್ಯಯಾನ, ಗಝಲ್

 ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್

ಕಾವ್ಯ ಸಂಗಾತಿ  ಡಾ. ಶ್ರೀಶೈಲ ಮಾದಣ್ಣವರ ಗಜಲ್ ಎತ್ತ ನೋಡಿದತ್ತ ಕತ್ತಲು ಬೀಗುತಿದೆ ಸಾಕಿಸೂರ್ಯೋದಯ ಯಾವಾಗಮತಿ ಭ್ರಮಣೆಗೆ ಚಿತ್ತ ವಿಕಾರವಾಗುತಿದೆ ಸಾಕಿನವೋದಯ ಯಾವಾಗ ಕದ್ದೂ ಕಾಣದಿರುವ ಮುದ್ದು ಮುಖಗಳನುಒದ್ದು ಹೊರ ತರುತಿಹರುಸಜ್ಜನರ ಮುಖವಾಡ ಬಯಲಾಗುತಿದೆ ಸಾಕಿ,ಶುದ್ಧೋದಯ ಯಾವಾಗ ಅತಂತ್ರ ಜೀವನದಲಿ ಯಾಂತ್ರಿಕ ಬದುಕಿನತ್ತನಡೆದಿದೆ ಜಗತ್ತುಮನದಿ ಬೆಳದಿಂಗಳು ಮರೆಯಾಗುತಿದೆ ಸಾಕಿಚಂದ್ರೋದಯ ಯಾವಾಗ ದುಶ್ಚಟಕೆ ದಾಸರಾಗಿ ದುರ್ಜನರ ಸಂಗಕೆಸಾಯುತಿವೆ ಎಳೆ ಮನಗಳುಹೂವಿನಂತ ಬದುಕು ಹಾಳಾಗುತಿದೆ ಸಾಕಿಶುಭೋದಯ ಯಾವಾಗ ಕನಸು ಹುಗಿದರು, ಮನಸು ಹುಗಿದರು, ಈಗಮನುಜತೆಯನೂ ಹುಗಿದರುಪ್ರೀತಿ ಸಿಗದೆ ಹೃದಯ ಘಾಸಿಯಾಗುತಿದೆ  ಸಾಕಿಭಾಗ್ಯೋದಯ ಯಾವಾಗ  ಡಾ. ಶ್ರೀಶೈಲ ಮಾದಣ್ಣವರ

 ಡಾ. ಶ್ರೀಶೈಲ ಮಾದಣ್ಣವರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಬೆಳಗಾವಿ ಗಜಲ್ ಸುಂದರ ಬಾಳಿಗೆ ಅಂದ ಅನುಭೂತಿಯೇ ಗೆಳೆತನಹಸಿರು ಹಂದರ ಹಾಕಿ ತಂಪೆರೆಯುವುದೇ ಗೆಳೆತನ ಕರೆಯದೆ ಬರುವ ನಿಜ ಆಪತ್ಬಾಂಧವನಿವನುಪ್ರತಿಕ್ಷಣಗಳಲಿ ಜೊತೆಯಲಿ ಇರುವುದೇ ಗೆಳೆತನ ನಡೆದ ಹಾದಿ ಬದಲಾಗಲುಬಹುದು ಬಾಳಿನಲಿಎಂದೂ ಬದಲಾಗದೆ ಉಳಿಯುವುದೇ ಗೆಳೆತನ ನಗುವಿನಲಿ ಅಳುವಿನಲಿ ಮೌನದಲೂ ಜೊತೆಗೆದೂರದಲ್ಲಿದ್ದರೂ ಮನವನಾಳುವುದೇ ಗೆಳೆತನ ಬಾಳ ದಾರಿಗಳು ಬಲು ದುಸ್ತರವಾಗಿವೆ ಸಾಕಿ,ಗುರುಗುಟ್ಟದೆ ಹೆಜ್ಜೆಗುರುತಾಗಿರುವುದೇ ಗೆಳೆತನ ಅಂಟೆ ತಂಟೆಗಳಿಲ್ಲದ ಪ್ರಾಮಾಣಿಕ ಹೃದಯಒಂಟಿತನವ ಕುಂತು ನೀಗಿಸುವುದೇ ಗೆಳೆತನ ನೋವಿನಲೂ ನವಿರಾದ ಭಾವಗಳ ಸಂಗಾತಿನಲಿವಿನ ಸವಿ ಸುಧೆ ಸುರಿಸುವುದೇ ಗೆಳೆತನ ಗೆಳೆತನಕ್ಕೆ ಒಂದು ದಿನವಿರಬಹುದು ವರುಷದಿಹಗಲಿರುಳೂ ನಿತ್ಯ ಹಸಿರಾಗಿರುವುದೇ ಗೆಳೆತನ ಜ್ಯೋತಿಯ ನೋವುಗಳಿಗೆ ಮದ್ದಿನ ಬರವಿಲ್ಲಮಂದ ಬೆಳಕಿರಲಿ ಸದಾ ಬೆಳಗುವುದೇ ಗೆಳೆತನ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಬೆಳಗಾವಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ  ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ  ಗಜಲ್ ಹಣ್ಣಾಗಿ ಉದುರಿದೆಲೆಗಳು ಮತ್ತೆ ಚಿಗುರಿ ಹಸಿರಾಗಬಹುದೇ ಹೇಳುಮುಪ್ಪಾಗಿ ಬಾಗಿದ ಕಾಯ ಮರಳಿ ತರುಣವಾಗಬಹುದೇ ಹೇಳು ಕಳೆದು ಹೋದ ಸಮಯ ತಿರುಗಿ ಬಾರದು ಅಲ್ಲವೇಬೆಳೆದು ನಿಂತ ಮರ ಕೆಳಗೆ ಬಾಗಬಹುದೇ ಹೇಳು ಪಂಜರದ ಗಿಳಿಯು ರೆಕ್ಕೆ ಬಡಿಯುತ ಚಡಪಡಿಸಿದೆ ನೋಡುಬೀಸುವ ಗಾಳಿಯ ಅಲೆಗಳನು ಗಿರಿಶಿಖರ ತಡೆಯಬಹುದೇ ಹೇಳು ಅರಳಿದ ಹೂಗಳ ಪರಿಮಳ ಸುತ್ತ  ಆವರಿಸಿ ಘಮಘಮಿಸಿದೆಕೆರಳಿದ ಗಾಯಗಳ ನೋವು ಮನದಿಂದ ಬೇರೆಯಾಗಬಹುದೇ ಹೇಳು ದುಃಖಗಳ ಮೂಟೆ ಹೊತ್ತು ನಿಂತಿಹುದು ನೊಂದ ಜೀವಸವಿದಂಥ ಸುಖಗಳ ಬೇಗಂ ಎಂದಾದರೂ ಮರೆಯಬಹುದೇ ಹೇಳು. ಹಮೀದಾ ಬೇಗಂ ದೇಸಾಯಿ 

ಹಮೀದಾ ಬೇಗಂ ದೇಸಾಯಿ  ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್‌ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್‌ ಗಜಲ್ ಮರೆಯಲಾಗುತ್ತಿಲ್ಲಾ ನಿನ್ನೂರಿನ ವಿಳಾಸವನು ದೊರೆಯೆಎಣಿಸಲಾಗುತ್ತಿಲ್ಲಾ ನೀ ಮಾಡಿದ ಗಾಯಗಳನು ದೊರೆಯೆ!! ಯಾರಿಗೇಳಿದರೆ ತಾನೇ ಕಳೆದೀತು,ಇಳಿದೀತು ಈ ದು:ಖ?ಹುಡುಕಲಾಗುತ್ತಿಲ್ಲಾ ಅಂತಹವನೊಬ್ಬ ಚಿಕಿತ್ಸಕನನು ದೊರೆಯೆ!! ಯಾರಿಗೆ ಗೊತ್ತಿತ್ತು,ಪ್ರೇಮದ ನಶೆಯೆಂದುಕೊಂಡೆತಿಳಿಯಲಾಗುತ್ತಿಲ್ಲಾ ನೀ ವಿಷವುಣಿಸಿ ಕೊಲ್ಲುವ ಕಲೆಯನು ದೊರೆಯೆ!! ನಗುವ ಅಭ್ಯಾಸವಿದ್ದವಳಿಗೆ ಅಳುವಿನ ಅಭ್ಯಂಜನ ಮಾಡಿಸಿದೆಒರೆಸಲಾಗುತ್ತಿಲ್ಲಾ ಕಡಲಂತೆ ಉಕ್ಕುವ ಕಂಬನಿಯನು ದೊರೆಯೆ!! ಪ್ರೀತಿಗೆ ಇಷ್ಟೊಂದು ಶಕ್ತಿಯೇ? ತಲಾಷೇ ಬೇಕಿಲ್ಲಾನಂಬಲಾಗುತ್ತಿಲ್ಲಾ ಹೀಗೂ ಸಾಯಬಹುದೆಂಬ ಸತ್ಯವನು ದೊರೆಯೆ!! ಮನಸ್ಸನ್ನು ಮುಟ್ಟಿ ನೋಡಿದರೆ ತಿಳಿಯ ಬಹುದಿತ್ತುಉಳಿಸಿಕೊಳ್ಳಲಾಗುತ್ತಿಲ್ಲಾ ನಿನಗೆ ಶಾಶ್ವತ ಪ್ರೀತಿಯನು ದೊರೆಯೆ!! ಬದುಕು ತೆರೆದಿಡುವ ಪಠ್ಯದೊಳಗೆ ಪ್ರೇಮ ಒಂದು ಭಾಗವೆಂಬುದ ಮರೆತೆಕಲಿಯಲಾಗುತ್ತಿಲ್ಲಾ ಇಷ್ಟಾದರೂ ಜಯಾ, ದ್ರೋಹ ಮಾಡುವುದನು ದೊರೆಯೆ!! ಜಯಂತಿ ಸುನಿಲ್

ಜಯಂತಿ ಸುನಿಲ್‌ ಅವರ ಗಜಲ್ Read Post »

You cannot copy content of this page

Scroll to Top