ಕಾವ್ಯ ಸಂಗಾತಿ ಜ್ಯೋತಿ ಮಾಳಿ ಬೆಳಗಾವಿ ಗಜಲ್ ಅಂದು ಹಸಿವಿನಿಂದ ಪರದಾಡಿದ ಪರದೇಶಿ ದಿನಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆಅಂತರಾಳದಲ್ಲಿಯ ಹಸಿ ಗಾಯಗಳ ರುಜು ಋಣಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಕರೆದು ಕೂಲಿಗೆ ಕಾಸು ಚೆಲ್ಲಿ ಸುಮ್ಮನೆ ಮನೆಗೆ ಕಳುಹಿಸಿದ್ದರೂಮರೆಯಬಹುದಿತ್ತು ನಾವುಕಲ್ಲಿನೇಟು ನೀಡಿ ,ಮುಳ್ಳುಗಳಿಂದ ತಿವಿದ ಜೀತ ಕ್ಷಣಗಳಿಂದು ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ನಾಳೆಗಾಗಿ ಬರಿಗಾಲಲಿ ನಡೆದು ನೆತ್ತರು ಸುರಿಸಿ ಕಳೆದು ಹೋಗುತಿವೆನಿತ್ಯ ಕಂಡ ಕನಸುಗಳುಬೆತ್ತಲೆ ಪಾದಗಳು ಸೀಳಿ ರಕ್ತ ಒಸರಿ ಬಾಯ್ಬಿಟ್ಟ ಆರ್ತನಾದಗಳಿಂದು ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಮಹಡಿ ಮನೆಗಳ ಮುಂಬಾಗಿಲಿಗೆ ಬಡವನನ್ನು ಸುಲಿದ ಚರ್ಮದತೋರಣ ಒಪ್ಪ ಓರಣವಾಗಿದೆಕನಸಿಗೆ ತೆರಿಗೆ ಹಾಕಿ,ಸಾವಿಗೂ ಸುಂಕ ಕಟ್ಟುವ ಹುನ್ನಾರುಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ನಿದ್ದೆ ಮಾಡುವವನು, ಕದ್ದು ಕರೆದರೂ ತುಸು ಎಚ್ಚರಗೊಳ್ಳುವನು ಅನಾಯಾಸವಾಗಿಆಳುವವರ ಮುಸುಕಿನಲ್ಲಿ ಸೋಗುಲಾಡಿತನದ ನಡೆಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಎಷ್ಟಂತ ತೇಪೆ ಹಾಕಿ, ಚಿತ್ತಾರ ಮೂಡಿಸಿ ಮನವ ಹಗುರಾಗಿಸೋಣ ಮರ್ಯಾದೆಗೆ ಅಂಜಿಅಪವಾದ, ಅವಮಾನಗಳಿಂದ ನುಜ್ಜುಗುಜ್ಜಾದ ಆಕ್ರಂದನಗಳಿಂದು ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ ಯಾರನ್ನೋ ದ್ವೇಷಿಸಿ, ದೂಷಿಸಿ, ಹಿಡಿಶಾಪ ಹಾಕಿ, ಕಣ್ಣೀರು ಹರಿಸಿದರೆ ಏನು ಪ್ರಯೋಜನ ಜ್ಯೋತಿಖಂಡ, ಮಾಂಸ, ಬೆವರು, ಬಿಸಿರಕ್ತಗಳ ಅಸಂಖ್ಯ ಬಲಿದಾನಗಳಿಂದುನಮ್ಮನ್ನು ಇಲ್ಲಿ ಹಿಡಿದಿಟ್ಟಿವೆಜ್ಯೋತಿ ಮಾಳಿ ಬೆಳಗಾವಿ