ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯಸಂಗಾತಿ ಹಮೀದಾಬೇಗಂ ದೇಸಾಯಿ ಗಜಲ್ ಮರಳ  ಹೆಜ್ಜೆಗಳನು ಕಡಲು ಅಳಿಸಿದಂತಾಗಿದೆ  ಈ ಬದುಕುಇರುಳು ಕಂಡ ಬಾವಿಗೆ  ಹಗಲು  ಬಿದ್ದಂತಾಗಿದೆ ಈ ಬದುಕು ತಣ್ಣಗೆ  ಉರಿಯುವ  ಬೂದಿಮುಚ್ಚಿದ  ಕೆಂಡ  ಇದಲ್ಲವೇಕೆಸರಿನಲಿ ಅವಿತ ಮುಳ್ಳಿನ ಮೊನೆಯಂತಾಗಿದೆ  ಈ ಬದುಕು ಸಂತೈಸುವ ಕೈಗಳೇ  ಬಸಿರಿಗೆ ಕೊಳ್ಳಿ ಇಟ್ಟು ನಗುತಿವೆಕತ್ತಲೆಯ ಗರ್ಭದಿ ಬೆಳಕು ಕಳೆದಂತಾಗಿದೆ ಈ ಬದುಕು ಹಗಲು ವೇಷಧಾರಿಗಳ ಮೋಜು ಬಲುಜೋರು ಇಲ್ಲಿಸತ್ತ ಹೆಣಗಳ ಸಿಂಗಾರ ನೋಡುವಂತಾಗಿದೆ ಈ ಬದುಕು ಭಾವಗಳ ರೆಕ್ಕೆ  ಮುರಿದು ಬೆತ್ತಲೆಯಾಗಿವೆ ನೊಂದು ಬೇಗಂಪ್ರೀತಿಯನು ಎದೆಯ ಗೋರಿಯಲಿ ಹುಗಿದಂತಾಗಿದೆ ಈ  ಬದುಕು ಹಮೀದಾಬೇಗಂ ದೇಸಾಯಿ

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ದೇಹವೀಣೆಯಿದು ನಿಲ್ಲದೆ ಕಂಪಿಸುತಿದೆ ನೀ ನುಡಿಸದೇಮನ ಮಂದಾರವಿದು ತಾಪದಿ ಮರುಗುತಿದೆ ನೀ ಬರದೇ ನೆನಪಿನಂಗಳದ ತುಂಬ ಕನಸುಗಳ ಬಣ್ಣದ ರಂಗೋಲಿಜೀವತಂತಿಯಿದು ಬಿಗಿದು ಗಟ್ಟಿಗೊಂಡಿದೆ ನೀ ಬಾರಿಸದೇ ದುಃಖ ಉಮ್ಮಳಿಸಿ ಕಣ್ಣೀರ ಹನಿ ಧಾರೆಯಾಗಿ ಸುರಿಯುತಿವೆಸ್ಪರ್ಶಸುಖವಿಲ್ಲದೆ ರಕ್ತ ಹೆಪ್ಪುಗಟ್ಟಿ ಕೊಲ್ಲುತಿದೆ ನೀ ಸೋಕದೇ ತಂಗಾಳಿಯ ಚಾಮರವೂ ಸುಡುತಿದೆ ಕ್ಷಣ ಕ್ಷಣ ಪ್ರತಿಕ್ಷಣವಿರಹವೇದನೆ ಒಂದೇ ಸವನೇ ಬಾಧಿಸುತಿದೆ ನೀ ಸೇರದೇ ಬಾನ ಬಯಲಲ್ಲೆಲ್ಲಾ ಒಲವಿನೋಲೆಯ ಅಕ್ಷರಗಳ ಕಲರವಎದೆಪುಟದಚ್ಚಾದ ಪ್ರೇಮದ ಚಿತ್ರ ಕೊರೆಯುತಿದೆ ನೀ ಇರದೇ ಅಂತರಂಗದಲ್ಲೆಲ್ಲಾ ನಿನ್ನ ಪ್ರೀತಿ ಪರಿಮಳದ ನೀನಾದದ ಸದ್ದುಕನವರಿಕೆಯ ತರಂಗಗಳ ಭೋಗ೯ರೆತ ಕೊಚ್ಚುತಿದೆ ನೀ ತಬ್ಬದೇ ಅನುಳ ಭಾವಬಿಂದಿಗೆಯಲಿ ಹೊಮ್ಮೊ ಬಯಕೆಗಳ ತೊಳಲಾಟಮುತ್ತಿನಾ ಕತ್ತು ಒತ್ತರಿಸಿ ಮೈಮರೆಸಿ ಮರುಗಿಸಿದೆ ನೀ ಕೂಡದೇಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಎ.ಹೇಮಗಂಗಾ ಅವರ ಗಜಲ್

ಕಾವ್ಯ ಸಂಗಾತಿ ಎ.ಹೇಮಗಂಗಾ ಅವರ ಗಜಲ್ ಬೇಕೆನಿಸಿದ ಕ್ಷಣಗಳಲಿ ನೀ ತೊರೆದು ಹೋದೆವಿರಹದ ಕಾವ್ಯಕೆ ಮುನ್ನುಡಿ ಬರೆದು ಹೋದೆ ನಡೆವ ಹಾದಿಗೆ ಸುರಿದ ಪ್ರೀತಿ ಸುಮಗಳೆಷ್ಟೋಕೊಂಚವೂ ದಯೆಯಿರದೇ ತುಳಿದು ಹೋದೆ ನಿನ್ನ ಕೈಯಲಿ ಕೀಲುಗೊಂಬೆ ನಾನಾಗಿ ಕುಣಿದೆಕಟು ಮಾತಿನ ಕೂರಂಬುಗಳಲಿ ಇರಿದು ಹೋದೆ ನಂಬಿ ಬಂದ ಈ ಜೀವಕೆ ಅದೆಷ್ಟು ಆಘಾತಗಳು !ತೋರಿದ ಅಸೀಮ ಒಲವನು ಜರೆದು ಹೋದೆ ನನಸಾಗದ ಕನಸುಗಳ ನೀ ಕಾಣದಿರು *ಹೇಮ*ನಿನಗಾಗಿ ಮಿಡಿದ ಹೃದಯವ ಮುರಿದು ಹೋದೆ ಎ. ಹೇಮಗಂಗಾ

ಎ.ಹೇಮಗಂಗಾ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್                                            ಅವಳ ಕಂಗಳ ಮಿಂಚನು ಅರಸುತಾ ಕಾಡಿನಿಂದ ಬಂದೀನಿಅವಳಿಗಾಗಿ ಸುಂದರ ಕನಸುಗಳ ಮೂಟೆ ಹೊತ್ತು ತಂದೀನಿ ಅವಕುಂಠದೊಳಗಿನ ಮೊಗವು ನಗೆ ಜೊನ್ನ ಚೆಲ್ಲುತಿದೆಮಾನಸ ‌ಸರೋವರದೊಳಗಿನ ಬಿರಿದ ನೈದಿಲೆ ಹಿಡಿದು ನಿಂತೀನಿ ಕರದೊಳಗಿನ ಕುಸುಮ ಜಾರಿದರೂ ಕಂಪು ಉಳಿದಿದೆ ದುಂಬಿ ಯಾಗಿ ಅವಳ ಒಡಲೊಳಗೆ ಪರಾಗ ತುಂಬೀನಿ ನಾನು ಅವಳ ವ್ಯಾಮೋಹದ ಬಲೆಯಲಿ ಸಿಲುಕಿರುವೆ ನೋಡುಹೊಳೆವ ಅವಳ ಕಪೋಲದ ಮೇಲೆ ಪ್ರೇಮದುಂಗುರ ಒತ್ತೀನಿ ಬೆಳದಿಂಗಳ ಇರುಳು ಅರಳಿದ ಪಾರಿಜಾತದ ಘಮಲು ಹರಡಿದೆಅನುರಾಗದ ಕಡಲಿಂದ ಪ್ರಭೆಯ ಹೃದಯದ ಮುತ್ತನು ಕದ್ದೀನಿ ಪ್ರಭಾವತಿ ಎಸ್ ದೇಸಾಯಿ

ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಮತ್ತು ವೈ.ಎಂ.ಯಾಕೊಳ್ಳಿ ಅವರುಗಳ “ಗಜಲ್‌ ಜುಗಲ್‌ ಬಂದಿ”

ಕಾವ್ಯ ಸಂಗಾತಿ ಅರುಣಾ ನರೇಂದ್ರ /ವೈ.ಎಂ.ಯಾಕೊಳ್ಳಿ “ಗಜಲ್‌ ಜುಗಲ್‌ ಬಂದಿ”. ಅವಳನ್ನು ಸದಾ ಮೆಚ್ಚಿಸುವ ಸಾಲುಗಳ ಎಲ್ಲಿಂದ ತರಲಿಅವಳ ಚಿತ್ತ ನನ್ನತ್ತ ಹೊರಳಿಸುವ ಮಾತುಗಳ ಎಲ್ಲಿಂದ ತರಲಿ ನುಡಿಯುವ ವೀಣೆಯ ತಂತಿಗಳು ಹರಿದು ಜಖಂಗೊಂಡಿವೆಒಲವ ಆಲಾಪ ಹೊರಹೊಮ್ಮಿಸುವ ರಾಗಗಳ ಎಲ್ಲಿಂದ ತರಲಿ ಅವಳು ನನ್ನ ನೋಡಿಯೂ ನೋಡದಂತೆ ನಡೆದಿದ್ದಾಳೆತಡೆದು ನಿಲ್ಲಿಸಿ ನಗಿಸುವ ಚಟಾಕಿಗಳ ಎಲ್ಲಿಂದ ತರಲಿ ಶತಮಾನದ ವಿರಹ ಎದೆಯನ್ನೇ ಸುಡುತಿದೆ ಹೇಳಲಿ ಹೇಗೆಅವಳನ್ನು ನಂಬಿಸುವ ನೂರು ದಾಖಲೆಗಳ ಎಲ್ಲಿಂದ ತರಲಿ ಜೋಗಿ ತನಗಾಗಿ ಹಂಬಲಿಸುತ್ತಾನೆಂದು ಅವಳಿಗೂ ಗೊತ್ತಿದೆಅವಳನು ಮಂಜಂತೆ ಕರಗಿ ನೀರಾಗಿಸುವ ಚಳಕಗಳ ಎಲ್ಲಿಂದ ತರಲಿ ವೈ ಎಂ ಯಾಕೊಳ್ಳಿ ಅವನನ್ನು ಮೆತ್ತಗೆ ಮೇಣವಾಗಿಸುವ ಶಬ್ದಗಳ ಎಲ್ಲಿಂದ ತರಲಿ ಉರಿಯುವ ಕೋಪ ತಣ್ಣಗಾಗಿಸುವ ಪದಗಳ ಎಲ್ಲಿಂದ ತರಲಿ ಸ್ವರ ನುಡಿಸುವ ಕೊಳಲೇಕೋ ಉಸಿರು ಮರೆತು ಮೂಲೆ ಸೇರಿದೆಮನಕ್ಕೆ ಮುದ ನೀಡಿ ಖುಷಿಗೊಳಿಸುವ ಗೀತೆಗಳ ಎಲ್ಲಿಂದ ತರಲಿ ಅವನು ಎಲ್ಲವನ್ನು ಮರೆಯಬೇಕೆಂದು ಮಧು ಶಾಲೆ ಸೇರಿದ್ದಾನೆ ಮತ್ತೆ ಮತ್ತೆ ನನ್ನ ನೆನಪಾಗಿಸುವ ಚಿತ್ರಗಳ ಎಲ್ಲಿಂದ ತರಲಿ ಖಾಲಿಯಾಗಿರುವ ಬಟ್ಟಲನ್ನೇ ನೋಡಿ ಬಡ ಬಡಿಸುತ್ತಾನೆ ಅವನು ಜನುಮದ ಅನುಬಂಧ ತಿಳಿಸುವ ಉಸ್ತಾದ್ ಗಳ ಎಲ್ಲಿಂದ ತರಲಿ ಅವನಿಗಂತೂ ಗೊತ್ತಿದೆ ದಿನ್- ರಾತ್ ಅರುಣಾ ಕೊರಗುತ್ತಾಳೆಂದು ಉದಾಸೀನಕ್ಕೆ ಮದ್ದರೆದು ಮೆಚ್ಚಿಸುವ ತಂತ್ರಗಳ ಎಲ್ಲಿಂದ ತರಲಿ ಅರುಣಾ ನರೇಂದ್ರ              

ಅರುಣಾ ನರೇಂದ್ರ ಮತ್ತು ವೈ.ಎಂ.ಯಾಕೊಳ್ಳಿ ಅವರುಗಳ “ಗಜಲ್‌ ಜುಗಲ್‌ ಬಂದಿ” Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ಅವನನ್ನು ಮೆತ್ತಗೆ ಮೇಣವಾಗಿಸುವ ಶಬ್ದಗಳ ಎಲ್ಲಿಂದ ತರಲಿ ಉರಿಯುವ ಕೋಪ ತಣ್ಣಗಾಗಿಸುವ ಪದಗಳ ಎಲ್ಲಿಂದ ತರಲಿ ಸ್ವರ ನುಡಿಸುವ ಕೊಳಲೇಕೋ ಉಸಿರು ಮರೆತು ಮೂಲೆ ಸೇರಿದೆಮನಕ್ಕೆ ಮುದ ನೀಡಿ ಖುಷಿಗೊಳಿಸುವ ಗೀತಗಳ ಎಲ್ಲಿಂದ ತರಲಿ ಅವನು ಎಲ್ಲವನ್ನು ಮರೆಯಬೇಕೆಂದು ಮಧು ಶಾಲೆ ಸೇರಿದ್ದಾನೆ ಮತ್ತೆ ಮತ್ತೆ ನನ್ನ ನೆನಪಾಗಿಸುವ ಚಿತ್ರಗಳ ಎಲ್ಲಿಂದ ತರಲಿ ಖಾಲಿಯಾಗಿರುವ ಬಟ್ಟಲನ್ನೇ ನೋಡಿ ಬಡ ಬಡಿಸುತ್ತಾನೆ ಅವನು ಜನುಮದ ಅನುಬಂಧ ತಿಳಿಸುವ ಉಸ್ತಾದ್ ಗಳ ಎಲ್ಲಿಂದ ತರಲಿ ಅವನಿಗಂತೂ ಗೊತ್ತಿದೆ ದಿನ್- ರಾತ್ ಅರುಣಾಕೊರಗುತ್ತಾಳೆಂದುಉದಾಸೀನಕ್ಕೆ ಮದ್ದರೆದು ಮೆಚ್ಚಿಸುವ ತಂತ್ರಗಳ ಎಲ್ಲಿಂದ ತರಲಿ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ.ರೇಖಾಉದಯ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾಉದಯ್‌ ಗಜಲ್ ನಾನೆಂಬ ಅಹಂಕಾರ ನಿನ್ನನ್ನೇ ಸುಡುವುದು ಮರುಳೇಅಂತಿಮದಲ್ಲಿ ನಿನ್ನನ್ನೇ ನಾಶ ಮಾಡುವುದು ಮರುಳೇ. ಪ್ರೇಮ ಪ್ರೀತಿಯಲ್ಲಿ ಗೆಲ್ಲಬಹುದು ಜಗದ ಜೀವಿಗಳನ್ನದ್ವೇಷ ಹಗೆಗಳು ಪಾತಾಳಕ್ಕೆ ದೂಡುವುದು ಮರುಳೇ ಹಿರಿಯರು ಕಿರಿಯರೆಂಬ ಗೌರವ ನೀಡುವುದ ಕಲಿತುಕೋನಾನೆಂದು ಮೆರೆದರೆ ಆತ್ಮವೇ ಕಾಡುವುದು ಮರುಳೇ ಹಿತಚಿಂತಕರು ಹಿತಶತ್ರುಗಳ ಗುರುತಿಸುವುದ ತಿಳಿದುಕೋದುರ್ಬುದ್ಧಿಯೊಳಿದ್ದರೆ ವಿಧಿ ಬೇರೆ ಆಡುವುದು ಮರಳೇ ರೇಖೂ ಇರುವ ಬದುಕನು ಚಂದದಿ ಬದುಕಲು ಹೇಳಿಬಿಡುದುರುಳರ ಸಂಗದಿ ನಿನ್ನ ಬದುಕೇ ಕೆಡುವುದು ಮರುಳೇ ಡಾ.ರೇಖಾಉದಯ್

ಡಾ.ರೇಖಾಉದಯ್‌ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ.ರೇಣುಕಾತಾಯಿ. ಸಂತಬಾ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಣುಕಾತಾಯಿ. ಸಂತಬಾ ಗಜಲ್ ಬಾಳ ತಿರುಗುಣಿಯಲಿ ತಿರುಗಿ ತಿರುಗಿ ತಂದನು ತರಹೇವಾರಿ ಕನಸನುಸಂಸಾರದ ಸಂತೆಯಲಿ ತೂಗಿ ತೂಗಿ ತಂದನು ತರಹೇವಾರಿ ಬಣ್ಣವನು.ll ರಾತ್ರಿ ಹಗಲೆನ್ನದೆ ಗಾಣದ ಎತ್ತಿನಂತೆ ದಣಿಯಲಾರದ ದಣಿಯಿವನು,ದೋತರದಲಿ ಕಷ್ಟದ ಗಂಟು ಕಟ್ಟಿ ತಂದನು ತರಹೇವಾರಿ ಸುಖವನು.ll ಬಿಸಿಲು ಮಳೆಯನ್ನದೆ ದುಡಿ ದುಡಿದು ಸಣ್ಣಗೇನೆ ನರಳಿದವನು,ಮಮತೆಯಲಿ ಬಾನಷ್ಟು ಬಾಗಿ ತಂದನು ತರಹೇವಾರಿ ನಕ್ಷತ್ರವನು.ll ಬೊಗಸೆಯಷ್ಟು ನಿದ್ರೆಯನು ಮಾಡಿ ಸಾಗರದಷ್ಟು ಎಚ್ಚರವಿದ್ದವನು.ಗಂಧದಂತೆ ನುಣ್ಣಗೆ ತೇದು ತೇದು ತಂದನು ತರಹೇವಾರಿ ಸುಗಂಧವನು.ll ತಾಯಿಗೆ ಕೈ ತುಂಬಾ ಪ್ರೀತಿಯ ಮಲ್ಲಿಗೆ ಕೊಟ್ಟು ಮೆಲ್ಲಗೆ ಸರಿದವನು,ಅವ್ವನ ಸಿಡುಕಿಗೆ ನಕ್ಕು ಮರಳಿ ತಂದನು ತರಹೇವಾರಿ ಸಾಮಾನನು.ll ಡಾ.ರೇಣುಕಾತಾಯಿ. ಸಂತಬಾ.

ಡಾ.ರೇಣುಕಾತಾಯಿ. ಸಂತಬಾ ಅವರ ಗಜಲ್ Read Post »

ಕಾವ್ಯಯಾನ, ಗಝಲ್

 ಮಧು ವಸ್ತ್ರದ ಅವರ ಗಜಲ್               

ಕಾವ್ಯ ಸಂಗಾತಿ  ಮಧು ವಸ್ತ್ರದ ಗಜಲ್                ವೈಶಾಖದ ಶಾಖದಿ ಬಳಲಿ ತಪಿತಳಾಗಿಹ ಮಹಾಇಳೆಗೆ ತಂಪನು ನೀಡಲು ಬಾ ಮುಂಗಾರು ಮಳೆಯೇವಿಶಾಖದ ಹಿಂಗಾರು ಬರುವವರೆಗೂ ಮೆರೆವ ಭುವಿಯ ಚೆಲುವ ನೋಡಲು ಬಾ ಮುಂಗಾರು ಮಳೆಯೇ ಅಂಜೂರ,ಖರ್ಜೂರದ ಮರಗಳು ಚಿಗುರನೊಡೆಯದೆ ನಿನ್ನ ಆಗಮನದ ನಿರೀಕ್ಷೆಯಲಿ ಕುಳಿತಿಹವುಬಂಜರು ಭಾವದಿ ನೊಂದಿಹ ‌ಹೊಲಗದ್ದೆಗೆ ಅಮೃತ ಸಿಂಚನ ಮಾಡಲು ಬಾ ಮುಂಗಾರು ಮಳೆಯೇ ಬತ್ತಿ ತಳ ಕಾಣುತಿರುವ ಕೆರೆ ಬಾವಿಗಳಲ್ಲಿ ಮತ್ತೆ ಹೊಸ ಚೈತನ್ಯಜಲವ ತುಂಬಿಸುವ ಹೊಣೆ ನಿನ್ನದಾಗಿದೆಉತ್ತು ಬಿತ್ತಿ, ಸಮೃದ್ಧ ಫಸಲ ಬಯಸುವ ರೈತನೊಡನೆ ನೇಗಿಲ ಹೂಡಲು ಬಾ ಮುಂಗಾರು ಮಳೆಯೇ ಓಡುತಿಹ ಕರಿಮೋಡಗಳ ಕಂಡು ಗಿರಿನವಿಲು, ಮಳೆ ಸುರಿಸಿರಿ, ನಾ ಗರಿಗೆದರಿ ನರ್ತಿಸುವೆ ಎನುತಿದೆಕಾಡಿನ ಕೋಗಿಲೆಯೊಡನೆ ಮೇಘಮಲ್ಹಾರ ರಾಗದಿ ಋತುಗೀತೆ ಹಾಡಲು ಬಾ ಮುಂಗಾರು ಮಳೆಯೇ ಅಡ್ಡಾದಿಡ್ಡಿಯಾಗಿ ಸುರಿಯುತ ನಿನ್ನೆಲ್ಲ ಉತ್ಸಾಹ ಉಲ್ಲಾಸವನು ಧರಣಿಯೊಡನೆ ಹಂಚಿಕೊಂಡುಬಿಡುಗುಡ್ಡಗಾಡಿನಿಂದಿಳಿದು ಶರಧಿಯ ಸೇರಲು ತುಡಿವ ನದಿಯೊಡನೆ ಓಡಲು ಬಾ ಮುಂಗಾರು ಮಳೆಯೇ ಗುಡುಗು ಸಿಡಿಲುಗಳ ನಡುವೆ ಮಿಂಚುತ ಆರ್ಭಟಿಸುತ ಆಕಾಶದಿಂದ ಧರೆಯೆಡೆಗೆ ಸುರಿಯಬಾರದೇಗಡಗಡ ನಡುಗುತ ಶಾಲೆಗೆ ಹೋಗುವ ಮಕ್ಕಳೊಡನೆ ನೀರಾಟ ಆಡಲು ಬಾ ಮುಂಗಾರು ಮಳೆಯೇ ಮಧುರ ಭಾವದ ಕಬ್ಬಿಗರ ಮನದಲಿ ಮೊದಲ ಮಳೆ ಸ್ಪೂರ್ತಿ ಕಾರಂಜಿಯನು ಉಕ್ಕಿಸಬಲ್ಲದುಅಧರದಂಚಲಿ ನಗೆ ಸೂಸುವಂತಹ ಚೆಂದದ ಕವಿತೆಯಾಗಿ ಮೂಡಲು ಬಾ ಮುಂಗಾರು ಮಳೆಯೇ ————- ಮಧು ವಸ್ತ್ರದ

 ಮಧು ವಸ್ತ್ರದ ಅವರ ಗಜಲ್                Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಗಜಲ್(ಅರುಣಾ ಮೇಡಂ ಅವರ ಗಜಲ್ ನಿಂದ ಪ್ರೇರಿತ ) ಅಂತರವಿದ್ದರೂ ಅಂತರಂಗ ಸೇರುವ ನಿನ್ನ ಕಲೆಗೆ ಏನೆನ್ನಲಿಇರುಳಾದರೆ ಕಣ್ಣ ಸೇರಿ ಕನಸಾಗುವ ಪರಿಗೆ ಏನೆನ್ನಲಿ ನಾ ನೋಡಿದರೇ, ನಾನೇ ಕಾಣಿಸಬೇಕಲ್ಲವೇ ಸಾಕಿದರ್ಪಣದಿ ನೀ, ನನ್ನ ಪ್ರತಿಬಿಂಬವಾಗುವ ಪ್ರೀತಿಗೆ ಏನೆನ್ನಲಿ ಮೌನವೂ,ಪದಗಳಾಗಿ ಮನ ಸೇರಲು ಹಪಹಪಿಸುವವೇನನ್ನ ಏಕಾಂತಕೆ,ನೀ ದನಿಯಾಗುವ ನಡೆಗೆ ಏನೆನ್ನಲಿ ಪ್ರತಿ ನೋವಿಗೂ ಹಕೀಮನಲ್ಲಿ ಔಷಧಿಯಿರುವುದಿಲ್ಲ ನಿಜನೀ ಕಾಣದ ಗಾಯಗಳನೂ ಮಾಯಿಸುವ ಮೋಡಿಗೆ ಏನೆನ್ನಲಿ ಬಿಸಿಲಿಗೆ ವಾಣಿ ನಿಂತರೇ,ನೀ ಬೆವರುವೆಯಾ ಗೆಳೆಯದೂರವಿದ್ದು ಹೀಗೆ ಸನಿಹವಾಗುವ ಸನ್ನೆಗೆ ಏನೆನ್ನಲಿ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

You cannot copy content of this page

Scroll to Top