ಮಹಾಂತೇಶ್.ಬಿ.ನಿಟ್ಟೂರು ಅವರ ಕವಿತೆ,”ಹೊಸ ವರ್ಷದ ಹೊಸ್ತಿಲು ದಾಟುವಾಗ”
ಕಾವ್ಯ ಸಂಗಾತಿ ಮಹಾಂತೇಶ್.ಬಿ.ನಿಟ್ಟೂರು “ಹೊಸ ವರ್ಷದ ಹೊಸ್ತಿಲು ದಾಟುವಾಗ” ಒಂದೊಂದು ಹೊಸ ವರ್ಷದಹೊಸ್ತಿಲು ದಾಟುವಾಗ ಮುಂದೇನುಎಂದು ಹೇಳಲಾಗದಿದ್ದರೂ…… ಅದೇ ಗಾಳಿ; ಮತ್ತದರ ಪಾಳಿದಿಕ್ಕು ಬದಲಿಸಿಕಚಗುಳಿ ಇಡುವ ಚಾಳಿ ಅದೇ ನೀರು;ಮಳೆ ಬಂದಾಗ ಹರಿಯುವುದು ಜೋರುಇಲ್ಲದಿರೆ ಬರದ ಕಾರು-ಬಾರು ಅದೇ ಬೆಳಕು; ಜ್ಞಾನದ ಸೆಳಕು ಮಡಿ-ಮೈಲಿಗೆಯಿಂದಾಗಿದೆಭಯಂಕರ ಕೊಳಕು ಅದೇ ಭಾನು;ಮೋಡಗಳ ಹಾಜರಿಗೈರು ಹಾಜರಿಯ ನಡುವೆ ಕಮಾನು ಕಟ್ಟಿದ ಬಾನು ಅದೇ ಹಗಲು;ಸಕಲ ಜೀವ ಸಂಕುಲದ ಹೆಗಲುಹೆಜ್ಜೆಯ ಗೆಜ್ಜೆಯ ತುಂಬಾ ದಿಗಿಲು ಅದೇ ಇರುಳು;ಒಡಲು ತುಂಬುವ ಕರುಳುಕನಸಿನ ಕಿಟಕಿಯಿಂದ ಕಾಣುವನನಸು ಮಾಡುವ ಮನದಮಾತುಗಳ ತಿರುಳು ಅದೇ ನೆಲ;ಬಿತ್ತಿದಂತೆ ಬೆಳೆಯುವ ಹೊಲದೇಕರಿಕೆಗೆ ತಕ್ಕಂತೆ ಸಿಕ್ಕುವುದು ಫಲ ಅದೇ ಗೋಡೆಗೆ ನೇತು ಹಾಕುವಹೊಸ ವರ್ಷದ ಕ್ಯಾಲೆಂಡರ್ಸಾರಿ ಹೇಳುತ್ತದೆ; ಬದಲಾವಣೆ ಜಗದ ನಿಯಮ ಇಂತಿರಲು……..ಕುಡಿದು, ತಿಂದು, ಕೇಕೆ ಹಾಕಿಚರಂಡಿಗೆ ಬಿದ್ದು, ಹೊರಳಾಡಿ ಎದ್ದುಮನೆಗೆ ತಲುಪಿದಾಗ ಚಂದ್ರನೂರಿನಲ್ಲಿ ನಕ್ಷತ್ರಗಳ ಚಪ್ಪಾಳೆ ಸದ್ದು ಭೂಮಿಗೆ ಮುಟ್ಟಿತ್ತುಯಥಾ ಪ್ರಕಾರ ಮುಂಜಾವಿಗೆಕೋಳಿ ಕೂಗಿತ್ತು ಹೊಸ ವರ್ಷದ ಹೊಸ್ತಿಲು ದಾಟುವಾಗವಿನಾಕಾರಣ ಎಡವಿ ಬೀಳದಿರಲಿ,ಜಗತ್ತಿಗೆ ಕೇಡುಗಳು ಬಾರದಿರಲಿ,ಎಲ್ಲರಿಗೂ ಶುಭವಾಗಲಿ… ಮಹಾಂತೇಶ್.ಬಿ.ನಿಟ್ಟೂರು
ಮಹಾಂತೇಶ್.ಬಿ.ನಿಟ್ಟೂರು ಅವರ ಕವಿತೆ,”ಹೊಸ ವರ್ಷದ ಹೊಸ್ತಿಲು ದಾಟುವಾಗ” Read Post »









