ಡಾ. ರೇಣುಕಾತಾಯಿ. ಸಂತಬಾ ಅವರ ಗಜಲ್
ಕಾವ್ಯಸಂಗಾತಿ ಡಾ. ರೇಣುಕಾತಾಯಿ. ಸಂತಬಾ ಗಜಲ್ ನುಡಿಗೆ ಬೆರಗು ಮೂಡಿಸಿ ವಚನ ಬರೆದನು ನಮ್ಮ ಬಸವಣ್ಣದಯವಿಲ್ಲದ ಧರ್ಮವೆ ಇಲ್ಲವೆಂದು ಸಾರಿದನು ನಮ್ಮ ಬಸವಣ್ಣ.ll ಆಚಾರ ಸ್ವರ್ಗ ಅನಾಚಾರವೇ ನರಕವೆಂದ ನಮ್ಮ ಭಕ್ತಿ ಭಂಡಾರಿ,ಜಾತಿ ಮತ ಸರಿಸಿ ಸಮಾನತೆ ಬಿತ್ತಿದವನು ನಮ್ಮ ಬಸವಣ್ಣ.ll ಕಳಬೇಡ ಕೊಲ್ಲಬೇಡ ಹುಸಿ ನುಡಿಬೇಡವೆಂಬ ಮೌಲ್ಯ ಹೇಳಿಕೊಟ್ಟಮಾತಿನಲ್ಲಿಯೇ ಮುತ್ತುರತ್ನ ಜೋಡಿಸಿ ಇಟ್ಟವನು ನಮ್ಮ ಬಸವಣ್ಣ ll ಮೌಢ್ಯತೆಯ ದೊಡ್ಡ ಗೋಡೆ ದಾಟಿಸಿ ಹೊಸ ಬಾಗಿಲನು ತೆರೆದುಬಿಟ್ಟ,ಎಲ್ಲರನು ಇವ ನಮ್ಮವನೆಂದು ಹೇಳಿದವನು ನಮ್ಮ ಬಸವಣ್ಣ ll ತಾಯಿ ಅಕ್ಕಮ್ಮ ನೀಲಮ್ಮ ಶರಣೆಯರೆಲ್ಲರ ವಚನ ಗೌರವಿಸಿದ.ಶ್ರಮದಲಿ ಶಿವ ಕೈಲಾಸ ತೋರಿದ ಶರಣನು ನಮ್ಮ ಬಸವಣ್ಣ l ಡಾ. ರೇಣುಕಾತಾಯಿ. ಸಂತಬಾ. “ರೇಮಾಸಂತ”
ಡಾ. ರೇಣುಕಾತಾಯಿ. ಸಂತಬಾ ಅವರ ಗಜಲ್ Read Post »









