ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅನುವಾದ, ಕಥಾಗುಚ್ಛ

“ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು” ತೆಲುಗು ಸಣ್ಣಕಥೆ : ಜಿ. ಉಮಾಮಹೆೇಶ್ವರ್, ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು

ಕಥಾ ಸಂಗಾತಿ “ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು” ತೆಲುಗು ಸಣ್ಣಕಥೆ : ಜಿ. ಉಮಾಮಹೆೇಶ್ವರ್, ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು ದಿ ಮೇಕಿಂಗ್  ಆಫ್  ಅವರ್ ಡ್ರಾಮ-ದೇಶ ದ್ರೋಹಿಗಳುತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು “ಸಾರ್, ಈಬಾರಿ ಆಗಸ್ಟ್  ಹದಿನೈದರಂದು ನಾವು ಕೂಡಾ ಒಂದು ನಾಟಕ ಪ್ರದರ್ಶಿಸಲು ಬಯಸುತ್ತಿದೇವೆ ಸಾರ್”ಸ್ಟಾಫ್  ರೂಮಿನಲ್ಲಿ ಒಬ್ಬಂಟಿಯಾಗಿ ಸಿಕ್ಕಿದ್ದ ವಿಜಯಕುಮಾರ್ ಸಾರ್ ಮುಂದೆ ನಮ್ಮ ಬಯಕೆಯನ್ನು ನಾನು-ಮಲ್ಲಿ ಹೇಳಿಕೊಂಡೆವು.ವಿಜಯಕುಮಾರ್ ಸಾರ್  ತೆಲುಗು ಶಿಕ್ಷಕರಷ್ಟೇಅಲ್ಲ, ಸಾಹಿತ್ಯ ಮತ್ತು ನಾಟಕಗಳನ್ನು ತುಂಬಾ ಪ್ರೀತಿಸುತ್ತಿದ್ದರು. ಅಲ್ಲೆನ್ನ ಸಾರ್ ಜೊತೆ ಸೇರಿ ಹಲವುನಾಟಕಗಳು,ಮತ್ತು ಏಕಾಂಕಗಳನ್ನು ಪ್ರದರ್ಶಿಸಿದ ಅನುಭಅವ ಅವರಿಗಿದೆ.“ಯಾವ ನಾಟಕವಪ್ಪಾ?” ಎಂದುಕೇಳಿದರು.“ದೇಶದ್ರೋಹಿಗಳು” ನಾನು ಉತ್ತರಿಸಿದೆ.“ದೇಶದ್ರೋಹಿಗಳಾ ? ಎಂದೂ ಕೇಳಿಲ್ಲವಲ್ಲಾ, ಬರೆದವರು ಯಾರು? ಸ್ಕ್ರಿಪ್ಟ್ಇದೆಯೇ?” ಎಂದು ಕೇಳಿದರು.“ನಾನೇ ಬರೆಯುತ್ತಿದ್ದೇನೆ ಸಾರ್, ಇನ್ನೂ ಮುಗಿದಿಲ್ಲ, ಇನ್ನೆರಡು ದಿನಗಳಲ್ಲಿ ತೋರಿಸ್ತೇನೆ ಸಾರ್” ಅಂದೆ.ಅದಕ್ಕೂ ಮುಂಚೆ ಏಳನೇ ಕ್ಲಾಸ್ ನಲ್ಲಿ ನಮ್ಮ ECA (Extra Curricular Activities)ಪಿರಿಯಡ್ ನಲ್ಲಿ ನಾನು ಬರೆದ ‘ಈ ಸಮಾಜ ಬದಲಾಗದೆ?’ ಎಂಬ ಏಕಾಂಕ ನಾಟಕವನ್ನು,ಅದಕ್ಕೂ ಮುಂಚೆ ನಮ್ಮ ಕ್ಲಾಸ್ ಪುಸ್ತಕದಲ್ಲಿ ಇರುವ ‘ಬುರ್ರಕಥೆ’ ಯನ್ನು ಅನುಸರಿಸುತ್ತಾ  ಚಂದ್ರಶೇಖರ್, ನಾನು, ಕೂನ ಶ್ರೀನಿವಾಸ್ ಪ್ರದರ್ಶಿಸಿದ ವಿಷಯ ನೆನಪಿದ್ದರಿಂದ ಆಶ್ಚರ್ಯಪಡಲಿಲ್ಲ. ಆದರೆ ಎಷ್ಟು ಮಾತ್ರವೂ ಆಸಕ್ತಿ ತೋರಲಿಲ್ಲ. ಅಷ್ಟೇ ಅಲ್ಲದೆ,“ಏನೋ, ಸ್ಕ್ರಿಪ್ಟ್ ರೆಡೀ ಇರುವ ನಾಟಕಗಳಿಗೆ ರಿಹರ್ಸಲ್ಮಾಡಿಸಲು ಸಮಯ ಸಾಕಾಗುತ್ತದೋ, ಇಲ್ಲವೋ ಎಂದು ನಾವು ಯೋಚಿಸುತ್ತಿದ್ದರೆ, ನಿಮ್ಮ ಸ್ಕ್ರಿಪ್ಟ್ ಇನ್ನೂ ರೆಡೀನೇ ಇಲ್ಲ. ಯಾವಾಗ ಬರೆಯುತ್ತೀರಿ? ಯಾವಾಗ ಪ್ರಾಕ್ಟೀಸ್ ಮಾಡುತ್ತೀರಿ? ಇದು ಸಾಧ್ಯವಾಗುವ ಕೆಲಸ ಅಲ್ಲ” ಎಂದು ಹೇಳಿದರು.ನಮಗೆ ನಿರಾಶೆಯಾಯಿತು. ಆದರೆ ಹಿಂದೆ ಸರಿಯಲಿಲ್ಲ. ಅಲ್ಲಿರುವಾಗಲೇ ನಾನು, ಮಲ್ಲಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ, ಅವರನ್ನು ಹೇಗೆ ಒಪ್ಪಿಸುವುದು ಎಂದು ಯೋಚಿಸುತ್ತಿರುವಾಗ, ಏನಂದುಕೊಂಡರೊ ಏನೋ  ಅವರೇ-“ಸರಿ ಅಪ್ಪಾ, ಒಂದು ಕೆಲಸ ಮಾಡಿರಿ. ಇವತ್ತು ಇಪ್ಪತ್ತಾರು ಅಲ್ಲವೇ? ಮುವ್ವತ್ತನೇ  ತಾರೀಕಿನ  ಒಳಗೆ  ಸ್ಕ್ರಿಪ್ಟ್ ,ಟೀಮ್ ಎಲ್ಲಾ ರೆಡಿಯಾದರೆ ನಿಮ್ಮ ಡ್ರಾಮಾ  ಇರುತ್ತದೆ, ಇಲ್ಲದಿದ್ದರೆ ಮುಂದಿನ ವರ್ಷ ಹಾಕಿರಿ” ಎಂದರು.“ಸರಿ ಸಾರ್” ಎಂದು ನಾವು ಖುಷಿಯಿಂದ ಹೇಳಿ,ಇನ್ನೂ ಅಲ್ಲೇ ಇದ್ದರೆ, ಮತ್ತೆ ಎಲ್ಲಿ ಅವರ ಮನಸು ಬದಲಾಗುತ್ತದೋ ಎಂದು ಒಂದೇ ಹೆಜ್ಜೆಯಲ್ಲಿ ಹೊರ ಬಿದ್ದೆವು.ನಾವು ಹೊರಗೆ ಬಂದು ಯೋಚಿಸ ತೊಡಗಿದೆವು.ತಲೆಯಲ್ಲಿ ಹೀರೋ ಕೃಷ್ಣ ಅವರ ಸಿನಿಮಾಗಳು ಗಿರ್ರೆಂದು ಸುತ್ತುತ್ತಿದ್ದವು. ಗೂಢಚಾರಿ (ಗೂಢಚಾರ) 116, ಏಜೆಂಟ್  ಗೋಪಿ ಕಣ್ಣ ಮುಂದೆ ಕದಲುತ್ತಾ ಇರುತ್ತವೆ. ಅದಕ್ಕೆ ಮೊದಲೇ ತಯಾರಿ ಮಾಡಿಕೊಂಡಿದ್ದ  ರಫ್  ಸ್ಕೆಚ್ ಇದೆ. ಅದರ ತುಂಬಾ ಈಗ  ‘ವನ್ಸ್ ಮೋರ್ ‘ ಡೈಲಾಗ್‌ಗಳಿಂದ ತುಂಬಿಸಬೇಕು. ಇಡೀ ನಾಟಕ ತುಂಬಾ  ಬಂದೂಕಿನ     ವ್ಯವಹಾರವಾಗಿದ್ದರಿಂದ ಮಾತುಗಳು  ಕೂಡಾ ಗುಂಡುಗಳಂತೆ ಸಿಡಿಯಬೇಕು. ಖಳನಾಯಕನ‘ಚಾಲೆಂಜ್ ಮಾತುಗಳು, ಹೀರೋ ಪಂಚ್ ಡೈಲಾಗ್ ಗಳು  ಉತ್ಪ್ರೇಕ್ಷಿತ ಅಲಂಕಾರಗಳಿಂದ ನಡುಗಬೇಕು. ಫಿರದೌಸಿ ಷಾನಾಮಾ ಗ್ರಂಥಕ್ಕೆ ಪಟ್ಟಿರುವ ಕಷ್ಟವನ್ನು ಪಟ್ಟಿದ್ದೇನೆ. ತಿನ್ನುತಿದ್ದರೂ, ತರಗತಿಯಲ್ಲಿದ್ದರೂ, ಮನೆಗೆ,ಶಾಲೆಗೆ ಹೋಗುತ್ತಿದ್ದರೂ, ಅವೇ ಆಲೋಚನೆಗಳು. ಯಾವಾಗ  ಯಾವ ಡೈಲಾಗ್ ಮನಸ್ಸಿಗೆ ಹೊಳೆಯುತ್ತದೋ ತಿಳಿಯದು, ಅದರಿಂದ, ನಾಟಕ ಬರೆಯುತ್ತಿದ್ದ ಲೇಪಾಕ್ಷಿ ನೋಟ್ ಬುಕ್ ಯಾವಾಗಲೂ ನನ್ನೊಂದಿಗೆ ಇರುತ್ತಿತ್ತು. ಎಷ್ಟೋ ಬರಹಗಳು, ಹೊಡೆದು ಹಾಕುವುದು, ತಿದ್ದುಪಡಿಗಳಾದ ಮೇಲೆ  ಇಡೀ ಸ್ಕ್ರಿಪ್ಟ್  ಒಂದು ಸ್ತರಕ್ಕೆ ಬಂದಿತ್ತು. ಈಗ ನಮಗೆ ನಟೀ ನಟರು ಬೇಕು. ಹೀರೋ  ಇನ್ ಸ್ಪೆಕ್ಟರ್ ಆದ್ದರಿಂದ ಇನ್ನೂ ಇಬ್ಬರು ಅಥವಾ ಮೂವರು ಪೋಲೀಸು ಪೇದೆಗಳು ಇರಬೇಕು. ವಿಲನ್  ದೊಡ್ಡ ಡಾನ್. ಅದ್ದರಿಂದ ಅವನಿಗೆ  ಅನುಚರಗಣ ಇರಬೇಕು. ಅವರು ಇಬ್ಬರು ಅಥವಾ ಮೂವರು ಇರಬೇಕು. ದೊಡ್ಡ ದೊಡ್ಡ ಅಪರಾಧಗಳನ್ನು ಮಾಡುತ್ತಾ ಪೊಲೀಸರಿಂದ ತಪ್ಪಿಸಿಕೊಳ್ಳುವ ಡಾನ್‌ನ್ನ ಗುಪ್ತವೇಷದಲ್ಲಿ ಬಂದಿರುವ ಹೀರೋ ಹೇಗೆ ವಿಲನ್ ಕಥೆಯನ್ನು ಮುಗಿಸುತ್ತಾನೆ ಎಂಬುದು ಕಥಾಂಶ.   ಆಗಲೂ ನಮ್ಮ ಮಿತ್ರರಾದವರು, ನಮ್ಮ ಮಾತು ಕೇಳುವವರು ಎಂಬ ಅಂಶಗಳ ಆಧಾರದಮೇಲೆ ನಟಿ ನಟರ ಆಯ್ಕೆ ಮುಗಿಸಿದ್ದೇನೆ. ಪಾತ್ರಗಳು- ಪಾತ್ರಧಾರಿಗಳು ಎಂಬ ಪೇಪರ್ ಮುಂದೆ ಇಟ್ಟುಕೊಂಡು, ಬಾಕಿ ಸ್ಕ್ರಿಪ್ಟ್ ಎಲ್ಲ ಬರೆದಿರುವ ನೋಟ್ ಬುಕ್ ಹಿಡಿದುಕೊಂಡು ವಿಜಯಕುಮಾರ್ ಸಾರ್ ರೂಮಿಗೆ ಹೋದೆ.ಅಷ್ಟುಹೊತ್ತಿಗೆ ಸಾರ್  ಬೇರೆ ತರಗತಿಗೆ ಹೋಗುವ ಆತುರದಲ್ಲಿದ್ದರು. ಒಮ್ಮೆ ಇಡೀ ಸ್ಕ್ರಿಪ್ಟ್ ಇದೆಯೋ ಇಲ್ಲೋ ಎಂದು ನೋಡಿಕೊಂಡು ಸಮಾಧಾನಪಟ್ಟೆ.“ಸರಿ ಕಣಯ್ಯ, ಎಷ್ಟು ಸಮಯತೆಗೆದು ಕೊಳ್ಳುತ್ತದೆ?” ಎಂದು ಕೆಳಿದರು,ಡಸ್ಟರ್, ಚಾಕ್ ಪೀಸ್ ತೆಗೆದುಕೊಳ್ಳುತ್ತ-“ಇನ್ನೂ ನೋಡಿಲ್ಲ ಸಾರ್, ಇವತ್ತು ಸಾಯಂಕಾಲ ಎಲ್ಲರನ್ನು ಬರುವಂತೆ ಹೇಳಿದ್ದೀನಿ. ಒಮ್ಮೆ ರಿಹರ್ಸಲ್ಸ್ ಮಾಡಿದ್ರೆ ಗೊತ್ತಾಗುತ್ತೆ” ಎಂದೆ.“ಅದು ಬೇಕಾಗಿಲ್ಲ, ನಿನಗೆ ಎಲ್ಲರೂ ಸಿಕ್ಕಿ, ಎಲ್ಲರಿಗೂ ಡೈಲಾಗ್‌ಗಳು ಬಾಯಿಗೆ ಬಂದು ಅವರು ಅಭ್ಯಾಸ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ನೀನೆ ಎಲ್ಲ ಡೈಲಾಗ್ ಗಳನ್ನು ಹೇಗೆ ಬರೆದಿದ್ದೀಯೋ  ಹಾಗೆ ಓದುತ್ತಾ, ನಡುವೆ ನಡುವೆ ಗ್ಯಾಪ್ ಕೊಡುತ್ತಾ ಹೋದರೆ ನಿನಗೆ ಗೊತ್ತಾಗುತ್ತೆ. ಎಷ್ಟು ಸಮಯ ತೆಗೆದುಕೊಳ್ಳುತ್ತದೋ ನನಗೆ ಸಂಜೆಗೆ ಹೇಳು” ಅಂದರು.ನಾನು ಕೂಡಲೇ ನನ್ನ ತರಗತಿಗೆ ಹೋದೆ. ಮಧ್ಯಾಹ್ನ ಲಂಚ್ ಸಮಯದಲ್ಲಿ ಬೇಗಬೇಗನೆ ಮುಗಿಸಿ, ಎಲ್ಲ ಪಾತ್ರಧಾರಿಗಳ ಡೈಲಾಗ್ ಗಳನ್ನು ಅಭಿನಯಿಸುತ್ತಾ ಹೋದರೆ  ಹದಿನೈದು ನಿಮೊಷಗಳು ತೆಗೆದುಕೊಳ್ಳಿತ್ತು. ಸಂಜೆ ನಾನು ಹೋಗಿ ಸಾರ್ ಗೆ ಹೇಳಿದೆ. ಅವರು ಸ್ಟೇಜ್ ಬದಲಾವಣೆಗಳು ಮತ್ತು ವಿರಾಮಗಳನ್ನು ಒಳಗೊಂಡಂತೆ ಇಪ್ಪತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರ್ಧರಿಸಿದರು.“ಸರಿ, ನೀವು ಹೋಗಿ ರಿಹರ್ಸಲ್ಸ್  ಮಾಡಿಕೊಳ್ಳಿ.ಹನ್ನೆರಡನೇ ತಾರೀಖಿಗೆ  ನಾನು, ಅಲ್ಲೆನ್ನ ಸಾರೂ ಬಂದು ನೋಡ್ತೀವಿ” ಎಂದು ಹೇಳಿದಾಗ ಹೃದಯ ಸಂತೋಷದಿಂದ ಕುಣಿಯಿತು.  ನಾನು ತಕ್ಷಣ ಮಲ್ಲಿ ಕಡೆಗೆ ಹೋದೆ. . ಅವನು ಕೂಡಾ ತನ್ನ ಪಾತ್ರಕ್ಕೆ ತಕ್ಕ ಕೆಲವು ಡೈಲಾಗ್ ಗಳನ್ನು ಬರೆದುಕೊಂಡು ಸಿದ್ದವಾಗಿದ್ದ.ನಾವಿಬ್ಬರೂ ಕುಳಿತು ಫೈನಲ್  ಸ್ಕ್ರಿಪ್ಟ್  ಸಿದ್ಧಪಡಿಸಿದೆವು. ಮರುದಿನದಿಂದ ರಿಹಾರ್ಸಲ್ಸ್  ಎಂದು ಹೇಳಿ ಎಲ್ಲರನ್ನು ಸಂಜೆ ಶಾಲೆ ಮುಗಿದಮೇಲೆ ತರಗತಿ ಕೋಣೆಯಲ್ಲೇ ಇರಲು ಹೇಳಿದೆ. ಹಾಗೆ ಮರುದಿನ ನಾವು ಎಲ್ಲರೂ ಸೇರಿದವು. ಆಗಲೇ ನಾನು ಎಲ್ಲರಿಗೂ ಅವರವರ ಡೈಲಾಗ್ ಗಳು ಪ್ರತ್ಯೇಕವಾಗಿ ಬರೆದು ಹಂಚಿದೆ. ಕಡಿಮೆ ಡೈಲಾಗ್ ಗಳು ಬಂದವರುಸ್ವಲ್ಪ ಮುಖ ಸಪ್ಪಗೆ ಮಾಡಿಕೊಂಡರು. ಅವನು ಎಸ್‌.ಐ.ಆದರೆ  ನಾನು ಕಾನಸ್ಟೇಬಲ್ ಆಗುವುದಿಲ್ಲ ಎಂದು ಕೆಲವರು ಹಠ ಹಿಡಿದರು. ಡಾನ್‌ ಆಗಿ ನಾನಿರುತ್ತೇನೆ ಎಂದು ಕೆಲವರು ಡಿಮಾಂಡ್  ಮಾಡಿದರು. ಎಲ್ಲರನ್ನು ಸಮಾಧಾನಮಾಡಿ, ಬೇಡಿಕೊಂಡು, ದಾರಿಗೆ ತರಲು ಆ ದಿನ ಕಳೆದುಹೋಯಿತು.ಮರುದಿನ ತರಗತಿಯಲ್ಲಿ ಎಲ್ಲರೂ ಈ ವಿಷಯವನ್ನು ಚರ್ಚಿಸುತ್ತಿದ್ದಾಗ,ಹಿಂದಿನದಿನ ಒಪ್ಪಿಕೊಂಡವರು ತಮ್ಮ‌ ಹಿತೈಷಿಗಳ ಮಾತು ಕೇಳಿ  ರಿಹರ್ಸಲ್ಸ್ ಗೆ ಬರಲು ನಿರಾಕರಿಸಿದರು. ಯಾರು ಅನಿವಾರ್ಯವಾಗಿ/ ಅವಶ್ಯಕವಾಗಿ  ಬೇಕೋ ನಿರ್ಧರಿಸಿ, ಉಳಿದ ಪಾತ್ರಗಳಿಗೆ ಇಬ್ಬರು ಮೂವರನ್ನು ಸ್ಪೇರ್  ಆಗಿ ಇಟ್ಟುಕೊಂಡು, ಅವರಿಗೆ ಅಸಿಸ್ಟೆಂಟ್  ಡೈರೆಕ್ಟರ್ ಸ್ಥಾನಮಾನ ಕೊಟ್ಟು, ನಾಟಕದಲ್ಲಿ ಸಾಧ್ಯವಾದರೆ ಒಂದು ಪಾರ್ಟ್ ಕೊಡುತ್ತೇನೆ ಎಂದು ಆಶೆ ತೋರಿಸಿ ಒಪ್ಪಿಸಲು ಸಾಕುಸಾಕಾಯಿತು.ಇಷ್ಟೆಲ್ಲಾ ಮಾಡಿದ ಮೇಲೆ ನಮ್ಮ ಫುಲ್ ರಿಹರ್ಸಲ್ಸ್  ಶುರುವಾಗಲಿಕ್ಕೆ ಮೂರುದಿನ ಬೇಕಾಯಿತು.ವೇದಿಕೆಯ ಅಲಂಕಾರ, ನಡುವೆ ನಡುವೆ ಅಂಕಗಳು ಬದಲಾಗುವುದು ಅವೆಲ್ಲಾ ಲೆಕ್ಕಿಸಲಾಗಲಿಲ್ಲ. ನಿಜಕ್ಕೆ ನಾವು ಬಣ್ಣಗಳು ಬಳೆದುಕೊಂಡು,ಒಳ್ಳೆಯ ಸ್ಟೇಜ್ ಮೇಲೆ ವೇಷ ಧರಿಸುತ್ತೇವೆ ಎಂದು ಭಾವಿಸಿರಲಿಲ್ಲ.ನಮಗೆ ಸ್ವಲ್ಪ ಸಮಯ ಕೊಡುತ್ತಾರೆ . ನಾವು ಮಾಡಬೇಕಾದ್ದು ಮಾಡುತ್ತೇವೆ ಎಂದು ಭಾವಿಸುತ್ತಿದ್ದೆವು. ರಿಹಾ ರ್ಸಲ್ಸ್  ನಡೆಯುತ್ತಿದ್ದವು. ಪಾತ್ರಗಳು ಸಿಗದವರು,  ನಮ್ಮನ್ನು ತಮಾಷೆ ಮಾಡುತ್ತಿದ್ದರು. ಗೇಲಿಮಾಡುತ್ತಿದ್ದರು. ಹಿಂದೆ ಸೇರಿಕೊಂಡು ಕಾಮೆಂಟ್  ಮಾಡುತ್ತಿದ್ದರು.ಅವರ ಕಾಮೆಂಟ್‌ಗಳಿಗೆ,ನೊಂದುಕೊಂಡವರು ನಾಟಕದಿಂದ  ಹೊರಟುಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು. ಮರುದಿನದಿಂದ ಸಾರ್ ಗೆ ಹೇಳಿ ನಮ್ಮ ಟೀಮನ್ನು  ರೂಮಿನೊಳಗೆ ಬರಮಾಡಿಕೊಂಡು ಬಾಗಿಲುಗಳು ಮುಚ್ಚಿಕೊಂಡು ಪ್ರಾಕ್ಟೀಸ್ ಮಾಡಿದೆವು.  ಆದರೂ ಕೆಲವರು ಕಿಟಕಿಯ ಬಳಿ ನಿಂತು,ಬಾಗಿಲಿನ ಸಂದುಗಳಿಂದ ಕಾಮೆಂಟ್ ಗಳು ಮಾಡುತ್ತಲೇ ಇದ್ದರು.ಹತ್ತು ದಿನಗಳ ನಂತರ ಇಡೀ ವಿಷಯ ಒಂದು ಹಂತಕ್ಕೆಬಂದಿತು. ಅಷ್ಟರೊಳಗೆ ಹನ್ನೆರಡನೆ ತಾರೀಕು ಬಂದಿತ್ತು. ವಿಜಯಕುಮಾರ್ ಸಾರ್ , ಮತ್ತು ಅಲ್ಲೆನ್ನ  ಸಾರ್  ಬಂದರು. ನಾವು ಅವರಿಗಾಗಿ ನಮ್ಮ ನಾಟಕವನ್ನು ಪ್ರದರ್ಶಿಸಿದೆವು. ಸಣ್ಣಸಣ್ಣ ಬದಲಾವಣೆಗಳನ್ನುಸೂಚಿಸಿದರು. ಒಟ್ಟಾರೆ ಲಾಜಿಕಲ್ ಆಗಿ ನೋಡಿದರೆ ಚನ್ನಾಗಿದೆ  ಎಂದರು ಅಲ್ಲೆನ್ನ ಸಾರ್.  ವಿಜಯಕುಮಾರ್ ಸಾರ್  ಏನನ್ನೂ ಮಾತಾಡಲಿಲ್ಲ. ಅವರು ನನ್ನನ್ನು ಕರೆದು  ಯಾವ ದೃಶ್ಯಕ್ಕೆ ಯಾವ ಹಿನ್ನೆಲೆ ಇರಬೇಕು, ಸ್ಟೇಜ್ ಮೇಲೆ ಯಾವ ಯಾವವಸ್ತುಗಳು ಅಗತ್ಯವೋ ವಿವರವಾಗಿ ಬರೆಯಬೇಕೆಂದು, ಅದರ ಪ್ರಕಾರವೇ  ಅಲಂಕಾರಮಾಡುತ್ತಾರೆಂದು ಹೇಳಿದರೇ ಆಶ್ಚರ್ಯ ಪಟ್ಟೆ. ಇಷ್ಟೆಲ್ಲಾ ವ್ಯವಸ್ಥೆ ಇರುತ್ತದೆಂದು, ಇಷ್ಟು ಆಡಂಬರವಾಗಿ ಇರುತ್ತದೆಂದು ನನಗೆ ಗೊತ್ತಿರಲಿಲ್ಲ. ಊಹಿಸಿರಲಿಲ್ಲ. ಆಶಿಸಿರಲೂ ಇಲ್ಲ. ನನ್ನ ಜೀವನದಲ್ಲಿ ನಾನು ಆಶಿಸಿದ್ದು ಬಹಳ ಕಡಿಮೆ. ಹಾಗಾಗಿ ನಿರೀಕ್ಷೆಗಿಂತಲೂ ಹೆಚ್ಚಾಗಿ ಸಿಕ್ಕಿದೆ. ಮೊದಲನೆಯ ನಾಟಕ–ಅಷ್ಟು ಜನರ ಮುಂದೆ!ನನ್ನ ಉತ್ಸಾಹ ದುಪ್ಪಟ್ಟಾಯಿತು. ಮಲ್ಲಿ, ಜೈನುಲ್ಲಾ, ಚೆನ್ನಯ್ಯ, ರಮಣ, ಜಾಕೀರ್, ಅಚ್ಚಯ್ಯ, ನಾವೆಲ್ಲರೂ ತಯಾರಾಗಿದ್ದೇವೆ. ಆಗಾಗ ಡೈಲಾಗ್ ಗಳನ್ನು ಮನನಮಾಡಿಕೊಂಡು,ಎಲ್ಲಾ  ದೃಶ್ಯಗಳನ್ನು ರಿವೈಂಡ್ ಮಾಡಿಕೊಳ್ಳುತ್ತಿದ್ದೆ. ತರಗತಿಯಲ್ಲಿ ನಾಟಕದ ಬಗ್ಗೆ  ಸಾಕಷ್ಟು ಗಲಾಟೆ ನಡೆಯುತ್ತಿತ್ತು. ಗೆಳೆಯರನ್ನು ನಾಟಕದ ಹೆಸರಿನಿಂದ ಕರೆಯುವುದು, ನಾವು ಪ್ರಾಕ್ಟೀಸ್  ಮಾಡುವಾಗ ನೋಡಿದ, ಕೇಳಿದ  ಡೈಲಾಗ್ ಗಳು ತರಗತಿಯಲ್ಲಿ ಬೇರೆಯವರಮೇಲೆ ಪ್ರಯೋಗಿಸುವುದು,‘ಅರೆ!,ಗಬ್ಬರ್  ಬರುತ್ತಿದ್ದಾನೋ’ ಎಂದು ತಮಾಷೆ ಮಾಡುವುದು ಮಾಮೂಲು ವಿಷಯವಾಯಿತು. ಈಗ ಅದು ನೆನೆದರೆ ನಗು ಬರುತ್ತದೆ, ಆದರೆ ವಿಪರೀತವಾದ ಕೊಪವೂ ಬಂದು, ನಾಟಕದಲ್ಲಿ ಬಳಸಿದ ಡಮ್ಮೀ  ಗನ್ನು  ನಿಂದ ಷೂಟ್ ಮಾಡಬೇಕೆಂದು ಅನ್ನಿಸುತ್ತಿತ್ತು. ಅಷ್ಟು ಗಲಭೆ ಮತ್ತು ಅಪಹಾಸ್ಯನಡೆಯುತ್ತಿತ್ತು.ಆಗಸ್ಟ್  ಹದಿನೈದು ಬಂತು. ಎಲ್ಲಾ ತೊಡಕುಗಳನ್ನು ದಾಟಿ,ನಾವು ಗ್ರೀನ್ ರೂಮಿನಲ್ಲಿಮುಖಕ್ಕೆ ಬಣ್ಣ ಬಳಿದು ಕೊಳ್ಳುತ್ತಿದ್ದರೆ ಅದೊಂದು ಅನಿರ್ವಚನೀಯ ಅನುಭವ.ಮೊದಲು ನಮ್ಮ ನಾಟಕ ಮುಗಿಸಿದನಂತರ ವಿಜಯಕುಮಾರ್ ಸಾರ್ ಅವರ ನಾಟಕ ಪ್ರದರ್ಶಿಸಬೇಕು. ನಾಟಕದ ಡೈಲಾಗ್‌ಗಳು ನೆನಪಿಲ್ಲದಿದ್ದರೇ, ಪ್ರಾಂಪ್ಟರ್  ಇರುತ್ತಾನೆಂದು ಕೂಡಾ ತಿಳಿಯದು. ಅದರಿಂದ ಯಾರನ್ನು ಆ ಕೆಲಸಕ್ಕೆ ನೇಮಿಸಲಿಲ್ಲ. ವಿಜಯಕುಮಾರ್ ಸಾರ್ ಅವರೇ ನಮ್ಮಸ್ಕ್ರಿಪ್ಟ್  ತೆಗೆದುಕೊಂಡು ಎರಡು ಮೂರು ಬಾರಿ ಹಿಂದೆ ಮುಂದೆ ತಿರುಗಿಸಿ ಸ್ಟೇಜ್ ಹಿಂದೆ ನಿಂತು ಆ ಪಾತ್ರವನ್ನುನಿರ್ವಹಿಸಿದರು. ಮಲ್ಲಿ ಸರಿಯಾಗಿ ಸ್ಟೇಜ್ ಬರುವ ಮುಂಚೆ ಕೆಳಗೆ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡ. ಅದರಿಂದ ಕುಂಟುತ್ತಾ ನಡೆಯಬೇಕಾಯಿತು. ಅವನು ತುಂಬಾ –ಸಮಯಸ್ಪೂರ್ತಿಯಿಂದ ಕುಂಟುತ್ತಾ ನಡೆಯುವುದು ವಿಲನ್ ಮ್ಯಾನೇರಿಜಮ್ ಅಂತೆ ಬದಲಿಸಿ ನಟಿಸಿದ. ಒಳ್ಳೆಯ ಮೆಚ್ಚುಗೆಯನ್ನು ಪಡೆದ.  ನಾನು ಮಾಡಿದ ಹೀರೋ ಇನ್ ಸ್ಪೆಕ್ಟರ್  ಪಾತ್ರಕ್ಕಿಂತ ವಿಲನ್  ಪಾತ್ರದಲ್ಲಿ ಮಲ್ಲಿ ಅದ್ಭುತವಾಗಿ ನಟಿಸಿದ್ದ. ಎಲ್ಲರೂ ತಮ್ಮತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದರು. ಅಲ್ಲೊಂದು ಇಲ್ಲೊಂದು ಕೆಲವು‌ ದೋಷಗಳೊಂದಿಗೆ (ಮಿಷ್ಟರ್ ಗೋಪಿ, ವಾಟ್ ಈಜ್ ಯುವರ್ ನೇಮ್… ಇತ್ಯಾದಿ)ಒಟ್ಟಾರೆ ನಾಟಕ ತುಂಬಾ ಚೆನ್ನಾಗಿತ್ತು. ಅದಾವುದೂ ಸಿನಿಮಾ ಷೂಟಿಂಗ್ ನಡೆದಂತೆ ಮೂರು ನಾಲ್ಕು ಡೈಲಾಗ್ ಗಳಿಗೆ ಒಂದು ಸೀನ್  ಚೇಂಜ್ ಮಾಡುತ್ತಾ ಹೋದರೆ,ಪ್ರತಿಬಾರಿಯೂ ಸ್ಟೇಜ್ ಅಲಂಕರಿಸಲು ಅಲ್ಲಿಯ ಸಹಾಯಕರು ತುಂಬಾನೇ ಕಷ್ಟಪಟ್ಟರು. ಸಿನಿಮಾವನ್ನು ಕಲ್ಪಿಸಿಕೊಂಡು ನಾಟಕ ಬರೆದರೆ ಎಷ್ಟು ತೊಂದರೆ ಯಾಗುತ್ತದೆ ಎಂದು ಅರ್ಥವಾದಾಗ ನಮ್ಮ ನಾಟಕ ಮುಗಿಯಿತು.ವಿಜಯಕುಮಾರ್ ಸಾರ್, ಪಾತ್ರಗಳು- ಪಾತ್ರಧಾರಿಗಳು ಎಂದು ಎಲ್ಲರನ್ನು ಪರಿಚಯಿಸಿದರು. ಅಂದುನಾನು ‘ಮೇಘ ಸಂದೇಶಂ’ ಪೋಸ್ಟರ್ ಗಳ ಮೇಲೆ ಬರೆದಿರುವ ಕಥೆ, ಸಂಭಾಷಣೆ, ಸ್ಕ್ರೀನ್ ಪ್ಲೇ –ದಾಸರಿ ನಾರಾಯಣರಾವ್ ಎಂಬ  ನೆನಪಿನ ಆಧಾರದ ಮೇಲೆ ಹಾಗೆ ಬರೆದು

“ದಿ ಮೇಕಿಂಗ್ ಆಫ್ ಅವರ್ ಡ್ರಾಮ-ದೇಶ ದ್ರೋಹಿಗಳು” ತೆಲುಗು ಸಣ್ಣಕಥೆ : ಜಿ. ಉಮಾಮಹೆೇಶ್ವರ್, ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು Read Post »

ಅನುವಾದ, ಇತರೆ, ಜೀವನ

“ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ವೀಣಾ ಹೇಮಂತ್ ಗೌಡ ಪಾಟೀಲ್ 

ವಿಶೇಷ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್  “ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ಘಟನೆ ಒಂದು…ಅಪಘಾತದಲ್ಲಿ ತನ್ನ ಒಬ್ಬನೇ ಮಗ ನನ್ನು ಕಳೆದುಕೊಂಡ ಆ ಹೆಣ್ಣುಮಗಳು ಮಗನ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗದೆ ಮಾನಸಿಕ ಆಘಾತಕ್ಕೆ ಒಳಗಾದಳು.ಘಟನೆ ಎರಡು.. ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದ ಆ ವ್ಯಕ್ತಿ ಬಹಳ ದಿನಗಳ ಕಾಲ ಹಾಸಿಗೆ ಹಿಡಿದು ಮಲಗಿದ್ದ… ಆತನ ಸಾವಿನ ಸಮಯದಲ್ಲಿ ಆತನ ಹೆಂಡತಿ ಮಕ್ಕಳು ಅತ್ಯಂತ ಸಂಯಮದಿಂದ ವರ್ತಿಸಿದರು.ಕಾರಣ ಇದು ಹೀಗೆ ಆಗುತ್ತದೆ ಎಂಬ ವಾಸ್ತವದ ಅರಿವು ಅವರಿಗೆ ಇತ್ತು.ಘಟನೆ ಮೂರು… ದೂರದ ಶಹರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಮ್ಮ ಮಗ/ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅದನ್ನು ನಂಬಲಾಗದೆ ಒದ್ದಾಡುವ, ಅತ್ತು ಕರೆಯುವ ಜನರನ್ನು ನಾವು ನೋಡುತ್ತೇವೆ.ಘಟನೆ ನಾಲ್ಕು…ತುಂಬು ಬದುಕನ್ನು ನಡೆಸಿದ ವ್ಯಕ್ತಿಯ ಸಾವಿನ ಸಮಯದಲ್ಲಿ ಅದನ್ನು ಒಂದು ಸರಳ ಘಟನೆ ಎಂಬಂತೆ ಅವರನ್ನು ಗೌರವ ಪೂರ್ವಕವಾಗಿ ಬೀಳ್ಕೊಡುವ, ಅವರ ಬದುಕನ್ನು ಸಂಭ್ರಮಿಸುವ ಮೂಲಕ ಅವರ ಸಾವನ್ನು ಸಹಜವಾಗಿ ಸ್ವೀಕರಿಸುವುದನ್ನು ಕೂಡ ನಾವು ಕಾಣುತ್ತೇವೆ.ಮತ್ತೊಂದು ಘಟನೆಯಲ್ಲಿ ಖ್ಯಾತ ಚಲನಚಿತ್ರ ನಟರೊಬ್ಬರು ತೀರಿಕೊಂಡಾಗ ಅವರ ಪತ್ನಿ ಅತ್ಯಂತ ಸ್ಥಿತಪ್ರಜ್ಞತೆಯಿಂದ ಪತಿಯ ಪಾರ್ಥಿವ ಶರೀರದ ಹಣೆಗೆ ಮುತ್ತಿಕ್ಕಿದರು. ಮನೆಗೆ ಬಂದ ಸ್ನೇಹಿತ ವಲಯದವರೊಂದಿಗೆ ಸಹಜವಾಗಿ ಇದ್ದ ಅವರ ನಡೆ-ನುಡಿಯನ್ನು ಮಾಧ್ಯಮಗಳಲ್ಲಿ ನೋಡಿದ ಜನರು ಆಕೆಯ ಕುರಿತು ಇಲ್ಲ ಸಲ್ಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು… ಅಂತೆಯೇ ಆಕೆಯ ಹಿನ್ನೆಲೆಯನ್ನು ಕೆಟ್ಟದಾಗಿ ಬಿಂಬಿಸಿದರು…. ಕೆಲವೊಮ್ಮೆ ನಿರ್ಲಿಪ್ತತೆಗೆ ತೆರಬೇಕಾದ ಬೆಲೆ ಇಷ್ಟು ದುಬಾರಿಯಾಗಿರುತ್ತದೆಯೇ? ಎಂದು ಕೂಡ ಅನ್ನಿಸಬಹುದು ಅಲ್ವೇ ?ಹೌದಲ್ವೇ ಸ್ನೇಹಿತರೇ, ಮೇಲಿನ ಎಲ್ಲ ಘಟನೆಗಳಲ್ಲಿ ಸಾವು ಎಂಬ ಸಹಜ ಪ್ರಕ್ರಿಯೆಯು ಅದೆಷ್ಟು ವಿಭಿನ್ನವಾಗಿ ಎದುರಿಸಲ್ಪಡುತ್ತದೆ ಎಂಬುದನ್ನು ನೋಡಿದಾಗ ವಿಚಿತ್ರ ಎನಿಸಿದರೂ ಶಾಶ್ವತ ಸತ್ಯದ ಅರಿವು ನಮಗೆ ಮೂಡುತ್ತದೆ. ಸಾವು ಎಂಬುದು ಒಬ್ಬ ವ್ಯಕ್ತಿಯನ್ನು ಭೌತಿಕವಾಗಿ ನಮ್ಮಿಂದ ಶಾಶ್ವತವಾಗಿ ದೂರ ಮಾಡುವ ಪ್ರಕ್ರಿಯೆ… ಉಳಿಯುವುದು ಕೇವಲ ಅವರೊಂದಿಗಿನ ಒಡನಾಟ, ಸ್ನೇಹ, ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯಗಳ ನೆನಪುಗಳು ಮಾತ್ರ.ಯಾವುದೇ ವ್ಯಕ್ತಿಯಾದರೂ ತನ್ನ ಬದುಕಿನಲ್ಲಿ ಶಾಶ್ವತವಾಗಿ ಒಬ್ಬರನ್ನು ಕಳೆದುಕೊಂಡಾಗ ನೋವು, ಸಂಕಟ ಹಾಗೂ ಅಭದ್ರತೆಯಿಂದ ಬಳಲುತ್ತಾನೆಕಳೆದುಕೊಂಡ ತಕ್ಷಣ ಉಂಟಾಗುವ ದಿಗ್ಭ್ರಮೆ ಕೆಲವರಲ್ಲಿ ಇನ್ನಿಲ್ಲದ ದುಃಖವನ್ನು ಸೃಷ್ಟಿಸಿದರೆ, ಮತ್ತೆ ಕೆಲವರು ಹಲವಾರು ದಿನಗಳ ಕಾಲ ಮೌನಕ್ಕೆ ಜಾರುತ್ತಾರೆ. ಇನ್ನು ಕೆಲವರು ಒಬ್ಬಂಟಿಯಾಗಿ ಕುಳಿತು ಅವರನ್ನು ನೆನೆಯುತ್ತಾರೆ. ಮತ್ತೆ ಕೆಲವರು ತಮ್ಮ ಮಾತುಗಳಲ್ಲಿ ಅವರ ಕುರಿತು ನೆನೆಯುತ್ತಾ ಇತರರ ಮುಂದೆ ಹೇಳುತ್ತಾ ಹಗುರವಾಗುತ್ತಾರೆ.ಆದರೆ ನಿಜವಾಗಿಯೂ ಒಬ್ಬರನ್ನು ಕಳೆದುಕೊಂಡಾಗ ಆಗುವ ದುಃಖ, ನೋವು ಐದು ಹಂತಗಳಲ್ಲಿ ನಮ್ಮನ್ನು ಕಾಡುತ್ತದೆ ಎಂದರೆ ನೀವು ನಂಬಲೇಬೇಕು.ಮೊದಲ ಹಂತ ಬದುಕು ಅತ್ಯಂತ ಸರಳವಾಗಿ ನಡೆಯುತ್ತಿರುವ ಅಥವಾ ಹಾಗೆ ಭಾವಿಸಿರುವಾಗ ಕುಟುಂಬದ ಓರ್ವ ಸದಸ್ಯ ಒಮ್ಮಿಂದೊಮ್ಮೆಲೆ ತೀರಿ ಹೋದಾಗ ವ್ಯಕ್ತಿ ಆ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾನೆ. ಇದು ಮೊದಲನೆಯ ಹಂತ. ಈ ಸಮಯದಲ್ಲಿ ಆತ ನಡೆದ ಘಟನೆಯನ್ನು ನಂಬಲು ಸಿದ್ದನಾಗುವುದಿಲ್ಲ…. ಸಂಪೂರ್ಣವಾಗಿ ನಿಶ್ಚಲನಾಗುವ ವ್ಯಕ್ತಿ ಕೆಲ ಗಳಿಗೆಗಳ ಮಟ್ಟಿಗಾದರೂ ತನ್ನ ಮಾನಸಿಕ ಅರಿವನ್ನು ಕಳೆದುಕೊಳ್ಳುತ್ತಾನೆ..ವೈಜ್ಞಾನಿಕವಾಗಿ ಆ ರೀತಿ ಆಗಲು ಕಾರಣ ಅವರು ಇನುಳ ನಮ್ಮ ಜೊತೆಗೆ ಇರುವುದಿಲ್ಲ, ಅವರ ಪಾತ್ರ ನಮ್ಮ ಬದುಕಿನಲ್ಲಿ ಮುಗಿಯಿತು ಎಂಬ ಬಹುದೊಡ್ಡ ಭಾರದ ಒತ್ತಡವನ್ನು ತಡೆದುಕೊಳ್ಳಲು ಅವರ ಮೆದುಳು ಸಿದ್ಧವಿರುವುದಿಲ್ಲ, ಕಾರಣ ಅದು ವ್ಯಕ್ತಿಯ ಮಾನಸಿಕ ಭಾರವನ್ನು ಕಡಿಮೆ ಮಾಡಲು ನಿರಾಕರಣೆ ಮಾಡುವ ಮೂಲಕ ಮೆದುಳನ್ನು ರಕ್ಷಿಸುವ ರಕ್ಷಣಾತ್ಮಕ ತಂತ್ರಕ್ಕೆ ಕೈ ಹಾಕುತ್ತದೆ.ಎಷ್ಟೋ ಬಾರಿ ಉಳಿದೆಲ್ಲ ವಿಷಯಗಳಲ್ಲಿ ಸರಿಯಾಗಿ ವರ್ತಿಸುವ ಜನರು ತಮಗೆ ಅತ್ಯಂತ ಆಪ್ತರಾದವರ ಸಾವಿನ ಕುರಿತು ಮಾತನಾಡುವಾಗ ಆ ವಿಷಯ ತಮಗೆ ಸಂಬಂಧಿಸಿಯೇ ಇಲ್ಲವೇನೋ ಎಂಬಂತೆ ಬೇರೆಡೆ ನಮ್ಮ ಚಿತ್ತವನ್ನು ಸೆಳೆಯುತ್ತಾರೆ.ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಅದು ಕೆಲವೊಮ್ಮೆ ಸಿಟ್ಟು, ಕೋಪದ ರೂಪದಲ್ಲಿ ಅನಾವರಣವಾಗುತ್ತದೆ. ಹೀಗೆ ಕಳೆದುಕೊಳ್ಳಲು ಕಾರಣವಾದ ದೇವರನ್ನು ಹಳಿಯುವ ಅವರು ಆತ ಇದ್ದಿದ್ದರೆ ಹೀಗಾಗಲು ಬಿಡುತ್ತಿರಲಿಲ್ಲವಾದ್ದರಿಂದ ದೇವರೇ ಇಲ್ಲ ಎಂದೂ,ಇದ್ದರೂ ಆತನಿಗೆ ಕಣ್ಣಿಲ್ಲ ಎಂದು ದೈವವನ್ನು ಹಳಿಯುತ್ತಾರೆ. ಮತ್ತೆ ಕೆಲವರು ತೀರಿ ಹೋದವರು ಅಪಘಾತ ಮತ್ತು ಅವಘಡ ಗಳಿಗೆ ಉಂಟಾಗಿ ತೀರಿಹೋಗಿದ್ದರೆ ಅದಕ್ಕೆ ಸಂಬಂಧಪಟ್ಟವರನ್ನು ಸಾಪಳಿಸುತ್ತಾರೆ. ಇಲ್ಲವೇ ತೀರಿ ಹೋದವರು ನೋವು ಸಂಕಟಗಳಿಗೆ ಈಡಾಗಿದ್ದರೆ ಅದಕ್ಕೆ ಕಾರಣರಾದವರನ್ನು ದೂಷಿಸುತ್ತಾರೆ. ಇಲ್ಲವೇ ತಮ್ಮ ಹಣೆಬರಹವನ್ನು ಅಳೆಯುತ್ತಾರೆ ಮತ್ತು ಕೆಲವರು ಸತ್ತುಹೋದವರನ್ನೇ ಉದ್ದೇಶಿಸಿ ನೀವು ಹೀಗೆ ಕೈ ಬಿಟ್ಟು ಹೋದರೆ ನಮ್ಮ ಗತಿ ಏನು ಎಂದು ಅತ್ತು ಕರೆದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಅವರ ಕೋಪಕ್ಕೆ ಸತ್ತ ವ್ಯಕ್ತಿ ಆತನಿಗೆ ಸಂಬಂಧಿಸಿದವರು, ಘಟನೆ, ಸನ್ನಿವೇಶಗಳು ತುತ್ತಾಗುತ್ತವೆ.ಮೂರನೆಯ ಹಂತದಲ್ಲಿ ವ್ಯಕ್ತಿಯು ಚೌಕಾಶಿ ಮಾಡಲು ಆರಂಭಿಸುತ್ತಾರೆ… ಇಲ್ಲಿ ಯಾವುದೇ ವ್ಯಾಪಾರ ವ್ಯವಹಾರದ ಚೌಕಾಶಿ ಯನ್ನು ನಾವು ಯೋಚಿಸುವುದು ಬೇಡ…. ಅಯ್ಯೋ ಇನ್ನೂ ಒಳ್ಳೆಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಬದುಕುತ್ತಿದ್ದರೋ ಏನೋ ಎಂಬಲ್ಲಿಂದ ಹಿಡಿದು ಹೇಗಾದರೂ ಮಾಡಿ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಗಳು ಇದ್ದವು, ಆ ಸಾಧ್ಯತೆಗಳನ್ನು ನಾವು ತಳ್ಳಿ ಹಾಕಿದೆವು ಎಂದು ತಮ್ಮನ್ನು ತಾವು ಹಳಿದುಕೊಳ್ಳುತ್ತಾರೆ. ಆತ್ಮಹತ್ಯೆಯಂತಹ ಸಾವುಗಳಲ್ಲಿ ಅವರು ಹಿಂದಿನ ದಿನ ತಮಗೆ ಕರೆ ಮಾಡಿದಾಗ ತಾವು ಸ್ವೀಕರಿಸದೆ ಇದ್ದ ಕಾರಣವನ್ನು ಮುಂದೊಡ್ಡಿ ತಮಗೆ ತಾವೇ ದೂಷಿಸಿಕೊಳ್ಳುತ್ತಾರೆ. ಒಂದೊಮ್ಮೆ ಹೀಗೆ ಮಾಡಿದ್ದರೆ !ಎಂಬ ಹಲವಾರು ರೇ ಗಳ ಭಾವ ಅವರನ್ನು ಕಾಡುತ್ತದೆ.ಮತ್ತೆ ಕೆಲವರು ನಾಲ್ಕನೆಯ ಹಂತವಾದ ಖಿನ್ನತೆಗೆ ಜಾರುತ್ತಾರೆ. ಖಿನ್ನತೆಯು ಅತ್ಯಂತ ಆಳವಾದ ನೋವಿನಿಂದ ಕೂಡಿದ್ದು ವಾಸ್ತವತೆಯ ಅರಿವು ಮೂಡಿಸುತ್ತದೆ ಎಂಬುದು ನಿಜವಾದರೂ ತಮ್ಮ ನೋವನ್ನು ಇತರರಿಗೆ ಹೇಳಿಕೊಳ್ಳಲು ಸಾಧ್ಯವಾಗದೆ ಮಾನಸಿಕವಾಗಿ ತೊಳಲಾಡುತ್ತಾರೆ. ನಂತರ ಸಮಯ ಸರಿದಂತೆ ನಿಧಾನವಾಗಿ ಅವರಿಲ್ಲದ ಬದುಕನ್ನು ಎದುರಿಸುವ ನಿಟ್ಟಿನಲ್ಲಿ ಹೊಸ ಬದುಕಿಗೆ ಒಗ್ಗಿಕೊಳ್ಳುತ್ತಾರೆ.ಕೊನೆಯ ಹಂತದಲ್ಲಿ ಪರಿಸ್ಥಿತಿಯನ್ನು ಅದು ಇರುವಂತೆಯೇ ಒಪ್ಪಿಕೊಳ್ಳುವುದು…. ಸಾಮಾನ್ಯವಾಗಿ ವಾಸ್ತವ ವಾದಿಗಳು, ಬದುಕಿನ ಆಳವನ್ನು ಅರಿತವರು, ಬುದ್ಧಿಜೀವಿಗಳು ತಮ್ಮವರ ಸಾವನ್ನು ಅತ್ಯಂತ ಸಹಜವಾಗಿ ಒಪ್ಪಿಕೊಳ್ಳುತ್ತಾರೆ. ನಿರ್ಲಿಪ್ತತೆಯನ್ನು ಹೊಂದಿರುತ್ತಾರೆ. ಮತ್ತೆ ಕೆಲಬಾರಿ ಅವರ ಸ್ಥಿತಪ್ರಜ್ಞತೆಯನ್ನು ಕಂಡು ಲೌಕಿಕ ಜಗತ್ತಿನ ಜನರು ಅಯ್ಯೋ ಅವರಿಗೇನು! ಹಡೆದ ತಂದೆ ತಾಯಿ ಸತ್ತರೂ ಸಂಗಾತಿಯನ್ನು ಕಳೆದುಕೊಂಡರೂ ಹನಿ ಕಣ್ಣೀರು ಹಾಕಲಿಲ್ಲ ಎಂದು ದೂಷಿಸುತ್ತಾರೆ.ಮತ್ತೆ ಕೆಲ ಬಾರಿ ಹೀಗೆ ತೀರಿಕೊಂಡವರು ದೀರ್ಘಾಯುಷ್ಯವನ್ನು ಹೊಂದಿ ಬದುಕಿನ ಎಲ್ಲಾ ಮೊದಲುಗಳನ್ನು ಕಂಡಿದ್ದರೆ ಇನ್ನೂ ಕೆಲವರು ದೀರ್ಘಕಾಲದ ಅನಾರೋಗ್ಯ, ತೊಂದರೆಗಳಿಂದ ಹಾಸಿಗೆ ಹಿಡಿದು ಮಲಗಿರುತ್ತಾರೆ ಅಲ್ಲವೇ? ಅಲ್ಲಿಯೂ ಕೂಡ ಈ ರೀತಿಯ ನಿರ್ಲಿಪ್ತತೆ ಕಾಣುತ್ತದೆ. ಏಕೆಂದರೆ ಅವರಿಗೆ ಮುಂದೆ ಏನಾಗಬಹುದು ಎಂಬ ಪರಿಕಲ್ಪನೆಯನ್ನು ಸತ್ತ ವ್ಯಕ್ತಿಯ ಜೀವಿತದ ಕೊನೆಯ ದಿನಗಳು ತೋರಿಸಿರುತ್ತವೆ.ಮಾನಸಿಕವಾಗಿ ಅತ್ಯಂತ ಪಕ್ವವಾಗಿರುವವರು ಲೌಕಿಕ ಜಂಜಡಗಳಿಂದ ದೂರವಾಗಿರುವವರು ಕೂಡ ಸಾವುಗಳನ್ನು ಅತ್ಯಂತ ಸಹಜವಾಗಿ ಸ್ವೀಕರಿಸಿ ಬದುಕಿನಲ್ಲಿ ಮುಂದೆ ಸಾಗುತ್ತಾರೆ.ನಾವೆಲ್ಲರೂ ನಮ್ಮ ಬದುಕಿನ ಹಂತದಲ್ಲಿ ಒಂದಲ್ಲ ಒಂದು ಆತ್ಮೀಯರ, ಪರಿಚಿತರ ಸಾವುಗಳನ್ನು ಎದುರಿಸಿಯೇ ಇರುತ್ತೇವೆ. ಸತ್ತವರ ಮನೆಯಿಂದ ಸ್ಮಶಾನದವರೆಗೆ ಭೌತಿಕ ಶರೀರದ ಅಂತಿಮ ಯಾತ್ರೆಗೆ ಹೋಗುವ ನಮ್ಮ ಬಾಯಲ್ಲಿ ಬರುವುದು ವೇದಾಂತದ ಮಾತುಗಳು. ಅಯ್ಯೋ ಬದುಕೇ ಇಷ್ಟು ? ಅವರವರು ಪಡೆದುಕೊಂಡು ಬಂದದ್ದು, ಹುಟ್ಟಿನ ಜೊತೆಗೆ ಸಾವನ್ನು ಕಟ್ಟಿಕೊಂಡೇ ಬಂದಿರುತ್ತೇವೆ, ಇಂದು ಅವರು ನಾಳೆ ಇನ್ನಾರೋ? ನಮ್ಮದು ಒಂದು ದಿನ ಆಪಾಳಿ ಬಂದೇ ಬರುತ್ತದೆ ಎಂದೆಲ್ಲ ಮಾತನಾಡುವ ಜನರು ಅಂತಿಮ ನಮನ ಸಲ್ಲಿಸಿ ಮನೆಗೆ ಬಂದು ತಲೆಯ ಮೇಲೆ ನೀರು ಹಾಕಿಕೊಂಡು ಹೊರಗೆ ಬರುವಷ್ಟರಲ್ಲಿ ಹೊಟ್ಟೆ ತನ್ನ ಇರವನ್ನು ತೋರಿಸುತ್ತದೆ.. ಇದೇ ಬದುಕು ಅಲ್ವೇ ಸ್ನೇಹಿತರೆ ?ಆದರೆ ನಮಗೆ ಸಾಧ್ಯವಾಗದ ಯಾವುದೋ ಒಂದು ನಿರ್ಲಿಪ್ತತೆಯನ್ನು, ಸ್ಥಿತಪ್ರಜ್ಞತೆಯನ್ನು ಇತರರು ಸಾಧಿಸಿದ್ದು ಸಾವಿನಲ್ಲೂ ಹಾಗೆ ಮುಂದುವರೆದಿದ್ದರೆ ಅವರನ್ನು ದೂಷಿಸಬೇಡಿ. ಅದು ಅವರು ಸಾವನ್ನು ಕಂಡುಕೊಂಡ ರೀತಿ.ಸಾವನ್ನು ಎದುರಿಸುವ ಈ ಹಂತಗಳನ್ನು ನೀವು ಅರಿತುಕೊಂಡಿದ್ದರೆ ಮತ್ತೊಬ್ಬರ ಭಾವನೆಗಳನ್ನು ಗುರುತಿಸಿ, ಗೌರವಿಸಿ ಸುಮ್ಮನಿರಲು ಸಹಕಾರಿಯಾಗುತ್ತದೆ.ಏನಂತೀರಾ ಸ್ನೇಹಿತರೆ ? ವೀಣಾ ಹೇಮಂತ್ ಗೌಡ ಪಾಟೀಲ್

“ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ವೀಣಾ ಹೇಮಂತ್ ಗೌಡ ಪಾಟೀಲ್  Read Post »

ಅನುವಾದ, ಕಥಾಗುಚ್ಛ, ನಿಮ್ಮೊಂದಿಗೆ

“ಡಾಟಾ ಕೇಂದ್ರದಲ್ಲಿ ದೆವ್ವ” ತೆಲುಗು ಕಥೆಯ ಅನುವಾದ,ರಂಗನಾಥ ರಾಮಚಂದ್ರರಾವು.ತೆಲುಗು ಮೂಲ : ಜಿ. ಉಮಾಮಹೇಶ್ವರ್

ಅನುವಾದ ಸಂಗಾತಿ ಡೇಟಾ ಕೇಂದ್ರದಲ್ಲಿ ದೆವ್ವ ತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು ಡೇಟಾ ಕೇಂದ್ರದಲ್ಲಿ  ದೆವ್ವತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು  “ಈ ಘಟನೆ ನಡೆದು ಸುಮಾರು ಆರು ವರ್ಷಗಳೇ ಕಳೆದಿವೆ,’’ ಎಂದು ಕುಲಕರ್ಣಿ ಉಪೋದ್ಘಾತದಂತೆ ಹೇಳಿದರು. “ಈ ಪರಿಸ್ಥಿತಿಯಲ್ಲಿ, ಈ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಸೂಕ್ತವೆಂದು ತೋರುತ್ತದೆ. ಈ ಘಟನೆಗೆ ನೇರವಾಗಿ ಸಂಬAಧಿಸಿದ ಮೂರ್ತಿ ಅವರು ಕೂಡ ಇಲ್ಲಿಯೇ ಇದ್ದಾರೆ. ಅವರು ಸಹ ನಮಗೆ ಕೆಲವು ವಿಷಯಗಳನ್ನು ಹೇಳುತ್ತಾರೆ. ಎಲ್ಲರೂ ಆಸಕ್ತಿಯಿಂದ ನೋಡುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆಯಿAದ ನಡೆಸಲಾದ ಅಲ್ಪಾವಧಿ ತರಬೇತಿ ಸಮಾರೋಪ ಸಭೆಗೆ ಕುಲಕರ್ಣಿ ಅವರನ್ನು ಮುಖ್ಯ ಅತಿಥಿಗಳಾಗಿ ಸಂಘಟಕರು ಕರೆದಿದ್ದರು. ಕುಲಕರ್ಣಿ ಅವರು ಇಂಟೆಲಿಜೆನ್ಸ್ ಕಛೇರಿಯಲ್ಲಿ ಐಟಿ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿ ಇತ್ತೀಚೆಗೆ ನಿವೃತ್ತರಾಗಿದ್ದರು. ಅವರ ಸರ್ವೀಸ್‌ನಲ್ಲಿ ಪರಿಹರಿಸಲಾಗದ ಮುಖ್ಯವಾದ ಕೇಸುಗಳನ್ನು, ಛೇದಿಸಿದ ಕೆಲವು ಆಸಕ್ತಿಕರವಾದ ಸವಾಲುಗಳನ್ನು ಕುರಿತು ಒಂದು ಪುಸ್ತಕವಾಗಿ ಹೊರ ತರಲಿದ್ದಾರೆ. ವಿಷಯ ಯಾವುದಾದರೂ ಒಳ್ಳೆಯ ಕಥೆಯಂತೆ, ಜನರಂಜಕವಾಗಿ ಅವರು ಹೇಳುತ್ತಾರೆಂದು ಅವರನ್ನು ಅನೇಕ ಸಭೆಗಳಿಗೆ ಕರೆಯುತ್ತಾರೆ. ಅವರು ವೃತ್ತಿಪರವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರೂ ಹೈದರಾಬಾದ್‌ನೊಂದಿಗೂ ಅವರ ಅನುಬಂಧವನ್ನು ಮರೆಯಲು ಸಾಧ್ಯವಿಲ್ಲವೆಂದು ಅವರೇ ಹೇಳಿಕೊಳ್ಳುತ್ತಾರೆ. “ಈ ಒಂದು ವಾರದ ತರಬೇತಿಯು ನಿಮಗೆ ಹೊಸ ವಿಷಯಗಳನ್ನು ಪರಿಚಯಿಸಿದೆ ಎಂದು, ನೀವು ಇಲ್ಲಿ ಕಲಿತ ವಿಷಯಗಳನ್ನು ನಿಮ್ಮ ವೃತ್ತಿ ಜೀವನದಲ್ಲಿ ಅನುಸರಿಸಿ, ಅದರಿಂದ ಪ್ರಯೋಜನ ಪಡೆಯುತ್ತಿರುವಿರೆಂದು ಆಶಿಸುತ್ತೇನೆ” ಎಂದು ಒಂದು ನಿಮಿಷ ತಡೆದು ಸಭಾಂಗಣದಲ್ಲಿರುವ ಎಲ್ಲಾ ಅತಿಥಿಗಳನ್ನು ಗಮನಿಸಿ ನೋಡಿದರು. ಐವತ್ತು ಜನ ಇಂಟಲಿಜೆನ್ಸ್ ಇನ್ಸ್ಪೆಕ್ಟರ್‌ಗಳು ತಮ್ಮ ರಿಫ್ರೆಷರ್ ತರಬೇತಿಯನ್ನು ಮುಗಿಸಿಕೊಂಡು ಮತ್ತೆ ತಮ್ಮ ತಮ್ಮ ಕರ್ತವ್ಯಗಳಿಗೆ ಹೋಗುವ ಮೊದಲು ಆಯೋಜಿಸಿದ್ದ ವಿದಾಯ ಸಮಾವೇಶವಿದು. ಬಹಳಷ್ಟು ಜನ ಅವರವರ ಮನೆಗಳನ್ನು, ಕುಟುಂಬಗಳನ್ನು ಬಿಟ್ಟು ಬಂದು ಒಂದು ವಾರವಾಗಿರುವುದರಿಂದ, ತರಬೇತಿ ಮುಗಿಯುವುದನ್ನೇ ಕಾಯುತ್ತ, ಯಾವಾಗ ರೈಲು ಹತ್ತುತ್ತೇವೆ ಎಂಬAತೆ ಇದ್ದರು. ಕುಲಕರ್ಣಿ ಅವರು ಸಣ್ಣಗೆ ನಕ್ಕರು – ನಿಮ್ಮ ತರಬೇತಿ ಕಾರ್ಯಕ್ರಮಕ್ಕೆ ಮೂರ್ತಿ ಅವರು ಕೋ ಆರ್ಡಿನೇಟರ್ ಆಗಿ ಇದ್ದರೆಂದರೆ – ಅವರು ಈ ವಾರದ ದಿನಗಳಲ್ಲಿ ನಿಮಗೆ ನಿಮ್ಮ ಅತ್ತೆಯವರ ಮನೆಯನ್ನು ಖಂಡಿತವಾಗಿ ನೆನಪಿಸಿರುತ್ತಾರೆ. ಅವರ ಆತಿಥ್ಯವನ್ನು ಅನುಭವಿಸಿದ್ದರಿಂದ ಆ ವಿಷಯವನ್ನು ನಾನು ಖಚಿತವಾಗಿ ಹೇಳಬಲ್ಲೆ. ಮೂರ್ತಿ ಅವರು ತುಂಬಾ ತಮಾಷೆ ಮನುಷ್ಯ. ಬಹುಶಃ ನೀವು ಈ ವಾರದಲ್ಲಿ ಅದನ್ನು ಗಮನಿಸಿಯೇ ಇರಬಹುದು. ಅದು ಮನೆಯಾದರೂ, ಕಛೇರಿಯಾದರೂ ಸುತ್ತಲಿನ ಪರಿಸರವನ್ನು ಹಿತಕರವಾಗಿ ಪರಿವರ್ತಿಸಬಲ್ಲ ಜಾಣ್ಮೆ, ಕೌಶಲ ಕೆಲವೇ ಜನರಿಗೆ ಇರುತ್ತದೆ. ಅದರಲ್ಲಿ ಮೂರ್ತಿಯವರು ಮೊದಲ ಸಾಲಿನಲ್ಲಿ ಇರುತ್ತಾರೆ.” ಎಂದು ಸ್ವಲ್ಪ ನಿಲ್ಲಿಸಿ, ಎಲ್ಲರೂ ಹೌದೆನ್ನುವಂತೆ ತಲೆದೂಗುತ್ತಿದ್ದರೆ, ತಾವೂ ಅದಕ್ಕೆ ಒಪ್ಪುವವರಂತೆ ತಲೆಯಾಡಿಸಿ, “ಅಂತಹ ಮೂರ್ತಿಯವರಿಗೆ ಒಂದು ರಾತ್ರಿ ನಿದ್ರೆಯನ್ನು ದೂರ ಮಾಡಿದ ಕಥೆ ಇದು” ಅಂದರು. ಎಲ್ಲರ ಮುಖದಲ್ಲೂ ನಗುಗಳು ಚಿಗುರಿವೆ. ಕುಲಕರ್ಣಿ ತನ್ನ ಲ್ಯಾಪ್‌ಟಾಪ್‌ನ ಬಟನ್ ಒತ್ತಿ ತನ್ನ ಎದುರಿಗಿದ್ದ ಸ್ಕಿçÃನ್ ಮೇಲೆ ಆ ಗೊಂಬೆ ಕಾಣಿಸುತ್ತಿದೆ ಎಂದು ನಿರ್ಧರಿಸಿಕೊಂಡು – “ಇದೇ ನಮ್ಮ ಕಥೆಯ ಸ್ಥಳ” ಎಂದು ಪ್ರೊಜೆಕ್ಟರ್ ಸ್ಕಿçÃನ್ ಮೇಲೆ ಗೊಂಬೆ ತೋರಿಸುತ್ತಾ ಹೇಳಿದರು, ಆ ನಂತರ ಸ್ಲೆöÊಡ್‌ನಲ್ಲಿ ಆ ಗೊಂಬೆಗೆ ಸಂಬAಧಿಸಿದ ವಿವರಗಳು ಹೀಗೆ ಇದ್ದವು. “2010 ವರ್ಷದಲ್ಲಿ ಪ್ರಾರಂಭಿಸಿ 2012ನಲ್ಲಿ ಮುಗಿಸಿದ ಕೇಂದ್ರ ಡೇಟಾ ಸೆಂಟರ್ ಆವರಣ. ಅದರ ವಿಸ್ತೀರ್ಣ 50 ಎಕರೆ. ನಗರಕ್ಕೆ 30 ಕಿಲೋಮೀಟರ್ ದೂರ. ಹೆದ್ದಾರಿಯಿಂದ 3 ಕಿಲೋಮೀಟರ್ ಒಳಗೆ, ರಂಗನಪಲ್ಲಿ ಗ್ರಾಮ ಪಂಚಾಯತಿ ಹತ್ರ. ಡೇಟಾ ಸೆಂಟರ್ ಸಾಮರ್ಥ್ಯ 500 ರಾಕ್ ಸ್ಪೇಸ್. ಹತ್ತು ಸಾವಿರ ಸರ್ವರ್‌ಗಳು, 10 ಜೇಟಾ ಬೈಟ್‌ಗಳ ಸ್ಟೋರೇಜ್. ಒಟ್ಟು ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಎಲ್ಲಾ ಇಲಾಖೆಗಳು, ಸಂಸ್ಥೆಗಳು ತಮ್ಮ ತಮ್ಮ ವಿಭಾಗಗಳ ಒಟ್ಟು ಮಾಹಿತಿಯನ್ನು ಇಲ್ಲೆ ಭದ್ರವಾಗಿ ಸಂಗ್ರಹಿಸುತ್ತಾರೆ. ವಿದ್ಯುತ್ ಸರಬರಾಜಿಗೆ ಅಡಚಣೆಯಾದರೆ 24 ಗಂಟೆಗಳವರೆಗೆ ಪರ್ಯಾಯ ವಿದ್ಯುತನ್ನು ಒದಗಿಸುವ ಜನರೇಟರ್‌ಗಳು, ಸಿಸಿಟಿವಿಗಳು, ಹಗಲು ರಾತ್ರಿ ಸುಶಿಕ್ಷಿತರಾದ ಕಾವಲುಗಾರರು… ದೇಶಕ್ಕೆ ಮಿದುಳಿನಂತಿದೆ ಈ ಸೆಂಟರ್.” ಪ್ರೊಜೆಕ್ಟರ್ ಆಫ್ ಮಾಡಿ ಮತ್ತು ಮೈಕ್‌ಅನ್ನು ಕೈಯಲ್ಲಿ ತೆಗೆದುಕೊಂಡು – “ಅಂತಹ ಸೆಂಟರ್‌ಗೆ ಮೂರ್ತಿ ಅವರು ಆಡಳಿತ ಮತ್ತು ನಿರ್ವಹಣಾಧಿಕಾರಿಯಾಗಿದ್ದರು. ಒಳ್ಳೆಯ ಕಲಾಭಿರುಚಿಯ ಮೂರ್ತಿ ಅವರು ಆ ಆವರಣವನ್ನು ಸುಂದರವಾಗಿ ರೂಪಿಸಿದರು. ಐವತ್ತು ಜನ ಟೆಕ್ನಿಕಲ್ ಸ್ಟಾಫ್, ಇನ್ನೂ ಐವತ್ತು ಜನ ಸಪೋರ್ಟ್ ಸ್ಟಾಫ್ ಇರಬಹುದೆಂದು ಭಾವಿಸುತ್ತೇನೆ. ಅಲ್ಲಿ ಎಲ್ಲರಿಗೂ ಕ್ವಾರ್ಟರ್ಸ್ ಇತ್ತು. ಆದರೆ ಕೆಲವರು ಸಿಟಿಯಿಂದ ಅಪ್ ಅಂಡ್ ಡೌನ್ ಮಾಡುತ್ತಿದ್ದರು. ಸೆಕ್ಯೂರಿಟಿ ಸ್ಟಾಫ್‌ಗೂ ಉತ್ತಮ ವಸತಿ ವ್ಯವಸ್ಥೆ ಇತ್ತು. ಸಿಟಿಯಿಂದ ದೂರ ಎಂಬ ಭಾವನೆ ಹೊರತು ಎಲ್ಲವೂ ಇತ್ತು. ಹೌದಲ್ಲವೇ ಮೂರ್ತಿ?” ಎಂದು ಮೂರ್ತಿಯವರ ಒಪ್ಪಿಗೆಗೆ ಒಂದು ಕ್ಷಣ ಬಿಟ್ಟು, ಮತ್ತೆ – “ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುತ್ತಿರುವ ದಿನಗಳಲ್ಲಿ, ಡೇಟಾ ಮಾತ್ರವೇ ಇರಬೇಕಾದ ಆ ಸೆಂಟರ್‌ನಲ್ಲಿ ಒಂದು ದೆವ್ವ ಬಂದಿದೆ.” ಎಲ್ಲರೂ ಮುಗುಳ್ನಗೆ ನಗುತ್ತಿದ್ದದ್ದು ನೋಡಿ, “ಅರೆ, ನೀವು ಸರಿಯಾಗಿ ಕೇಳಿದ್ದೀರಿ. ಆದರೆ, ಆ ದೆವ್ವ ಹೇಗೆ ಬಂತು ಎಂದು ಅದರ ಸಂಪೂರ್ಣ ವಿಷಯವೇನು ಅಂತ ಆಗಿನ ಆ ಸೆಂಟರ್ ನಿರ್ವಹಣಾಧಿಕಾರಿಯಾಗಿದ್ದ ಮೂರ್ತಿ ಅವರಿಂದಲೇ ಕೇಳೋಣ. ನಂತರ ನಾನು ಮುಂದುವರಿಯುತ್ತೇನೆ”ಎAದು ಹೆಳಿ ಮೈಕನ್ನು ಮೂರ್ತಿ ಕೈಗೆ ಕೊಟ್ಟ, ಮೂರ್ತಿ – ಈ ಅನಿರೀಕ್ಷಿತ ವಿನಂತಿಯನ್ನು ನಿರಾಕರಿಸಲು ಸಾಧ್ಯವಾಗದೆ ನಗುತ್ತಾ – “ಖಂಡಿತ” ಎಂದು ಹತ್ತು ಸೆಕೆಂಡುಗಳ ನಂತರ” ಎಲ್ಲಿಂದ ಪ್ರಾರಂಭಿಸ ಬೇಕೋ ನನಗೆ ತಿಳಿಯುತ್ತಿಲ್ಲ” ಎಂದ. ಮತ್ತೆ – “ಡೇಟಾ ಸೆಂಟರ್ ಕಾರ್ಯಕ್ರಮಗಳು ಪ್ರಾರಂಭವಾಗಿ ಎರಡು ವರ್ಷಗಳವರೆಗೂ ನಮಗೆ ವಿಪರೀತವಾದ ಕೆಲಸ ಇರುತ್ತಿತ್ತು. ಹೊಸಬರಿಗೆ ವಸತಿ ವ್ಯವಸ್ಥೆ, ಮಾರಾಟಗಾರರ ರಶ್, ಸರ್ಕಾರದ ಆದೇಶಗಳ ಪ್ರಕಾರ ನಮ್ಮೊಂದಿಗೆ ಡೇಟಾವನ್ನು ಭದ್ರಪಡಿಸಲು ಅಗತ್ಯವಾದ ವ್ಯವಸ್ಥೆಗಳು, ಅದಕ್ಕೆ ಸೂಕ್ತವಾದ ತರಬೇತಿಗಳು, ಹೀಗೆ ಎರಡು ವರ್ಷಗಳು ಬಿಡುವಿಲ್ಲದೇ ಕಳೆದು ಹೋದೆವು. ಅದರ ನಂತರ ಎಲ್ಲವೂ ಶಾಂತವಾದಾಗ ಒಂದು ಬೇಸಿಗೆಯ ಮಧ್ಯಾಹ್ನ ಸಾಹು ಎಂಬ ಇಂಜನಿಯರ್ ನನ್ನ ಕೋಣೆಯೊಳಗೆ ಬಂದ. ಸಾಮಾನ್ಯವಾಗಿ ಎಂಜಿನಿಯರ್‌ಗಳಿಗೆ ನನ್ನೊಂದಿಗೆ ಹೆಚ್ಚು ಕೆಲಸಗಳೇನು ಇರುವುದಿಲ್ಲ. ಅವರ ನಿವಾಸಗಳಲ್ಲಿ ಏನಾದರೂ ರಿಪೇರಿಗಳು ಇದ್ದರೆ, ಅಥವಾ ನಗರಕ್ಕೆ ಹೋಗಿ ಬರಲು ವಾಹನದ ವ್ಯವಸ್ಥೆಕ್ಕಾಗಿ ಈ ರೀತಿಯ ಸಣ್ಣಪುಟ್ಟ ಅಗತ್ಯಗಳಿರುತ್ತವೆ. ಆದರೇ ನಾನೇ ಅವರೊಂದಿಗೆ ಬೇಕೆಂದೇ ಮಾತನಾಡುತ್ತಾ ಸಂಜೆಗಳನ್ನು ಉತ್ಸಾಹ ಭರಿತವಾಗಿ ಕಳೆಯಲು ಟೆನ್ನಿಸ್ ಕೋರ್ಟ್ ಹಾಕಿಸಿ, ಇಂಡೋರ್ ಗೇಮ್ಸ್ ಆಟಗಳನ್ನು ಏರ್ಪಡಿಸಿ, ದೇಶದೆಲ್ಲೆಡೆಯಿಂದ ಬಂದವರಿಗೆ ಬೇಸರವಾಗದಂತೆ ನೋಡಿಕೊಳ್ಳುತ್ತಿದ್ದೆ. ಹೀಗಾಗಿಯೇ ಎಲ್ಲರೂ ಅದನ್ನು ನೆನಪಿಸಿಕೊಳ್ಳುವ ಸಲುಗೆ ಇರುತ್ತಿತ್ತು. ಬಂದವನು ಏನೂ ಮಾತಿಲ್ಲದೆ ಹಾಗೆ ನಿಂತಿದ್ದಾನೆ. ಯಾವುದಾದರೂ ದೊಡ್ಡ ವಿಷಯವೇನೋ ಎಂದು ಕುಳಿತುಕೊಳ್ಳಲು ಕುರ್ಚಿ ತೋರಿಸಿದೆ. ಆ ಹುಡುಗ ಸ್ವಲ್ಪ ಮುಜುಗರ, ಸಂಕೋಚದಿAದ … ಯಾವುದೋ ವಿಷಯವನ್ನು ಹೇಳಬೇಕೋ, ಇಲ್ಲವೋ ಎಂಬ ಅನುಮಾನದಿಂದ ಇದ್ದಂತೆ ನೆಲವನ್ನು ನೋಡುತ್ತಾ, ಮಾತಾಡಲು ತೊದಲುತ್ತಿದ್ದ. ನಾನೇ ಸಲುಗೆಯಿಂದ “ಹೇಳಿ, ಡೊಂಟ್ ವರಿ… ನನ್ನೊಂದಿಗೆ ನೀವು ಯಾವ ವಿಷಯವಾದರೂ ನಿರಭ್ಯಂತರವಾಗಿ, ನಿಸ್ಸಂದೇಹವಾಗಿ ಮಾತಾಡಬಹುದು” ಎಂದು ಭರವಸೆ ನೀಡಿದ ನಂತರ, “ಸರ್, ನೀವು ಬೇರೆ ರೀತಿಯಲ್ಲಿ ಅಂದುಕೊಳ್ಳುವುದಿಲ್ಲ ಎಂದರೆ ನಾನೊಂದು ವಿಷಯ ಹೇಳ್ತೇನೆ” ಎಂದು ಗುಟ್ಟನ್ನು ಹೇಳುವ ಹಾಗೆ ಮೇಜಿನ ಮೇಲೆ ಬಾಗಿ ಒರಗುತ್ತಾ, ನನ್ನ ಮುಖ ನೋಡುತ್ತಾ – “ಸರ್, ನಮ್ಮ ಡೇಟಾ ಸೆಂಟರ್ ಸುತ್ತಾ ರಾತ್ರಿಯಲ್ಲಿ ದೆವ್ವ ಸುತ್ತಾಡುತ್ತಿದೆ ಸಾರ್!” ನಾನು ಲಘುವಾಗಿ ಮುಗುಳ್ನಕ್ಕೆ. ತಕ್ಷಣ ಮುಖವೆಲ್ಲಾ ಗಂಭೀರವಾಗಿ ಇಟ್ಟುಕೊಂಡು – “ಅದನ್ನು ನೋಡಿದ್ದೀರಾ?” ಎಂದು ನಾನು ಮುಗಿಸುವುದರೊಳಗೆ, “ನೀವು ಖಂಡಿಸಲು ಸಿದ್ಧವಾಗುತ್ತಿದ್ದೀರಿ… ದಯವಿಟ್ಟು ನನ್ನ ಮಾತು ಕೇಳಿ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಿಗೆ ಒಂದು ಐದು ದಿನಗಳಿಂದ, ಒಂದು ದೆವ್ವ ನಮ್ಮ ಸರ್ವರ್ ರೂಮ್ ಬಳಿ ಸುತ್ತಾಡುತ್ತಿದೆ. ನಮ್ಮ ನೆಟ್‌ವರ್ಕ್ ಇಂಜನೀಯರ್ ಕೂಡಾ ರಾತ್ರಿ ಯಲ್ಲಿ ಒಬ್ಬನೇ ಡ್ಯೂಟಿಯಲ್ಲಿ ಇದ್ದಾಗ ಆ ಚಪ್ಪಾಳೆಗಳನ್ನು ಕೇಳಿದ್ದಾನೆ. ಒಂದು ನೆರಳು ಚಲಿಸುತ್ತಾ ಹೋಗುವುದು, ನಡುನಡುವೆ ವಿಚಿತ್ರ ಶಬ್ದಗಳು ಮಾಡುವುದು, ಇವನ್ನೆಲ್ಲಾ ನೋಡಿದರೆ ನಮ್ಮ ಹಳೆಯ ಸೆಕ್ಯುರಿಟಿ ನರ್ಸಿಂಗ್ ಹೇಳಿದ ವಿಷಯ ನಿಜವೆನಿಸುತ್ತಿದೆ’’ ಎಂದು ವಿರಾಮವಿಲ್ಲದೆ ಮಾತಾಡಿದ. ಸಿದ್ಧವಾಗುತ್ತಿದ್ದೀರಿ ಅರ್ಥವಾಗಲಿಲ್ಲ. “ಅವನಿಗೆ ಹಲವು ರೀತಿಯಲ್ಲಿ ತಿಳಿಸಿ ಹೇಳಲು ಪ್ರಯತ್ನಿಸಿದೆ. ಆದರೆ ಅವರ ಅಭಿಪ್ರಾಯ ಬದಲಾಗಲಿಲ್ಲ.” ಮೂರ್ತಿಯವರ ಮಾತಿಗೆ ಅಡಚಣೆ ಮಾಡುತ್ತಾ ಕೇಳುಗರಲ್ಲಿ ಒಬ್ಬನು- “ಅದಕ್ಕೂ ಮುಂಚೆ ಸೆಕ್ಯುರಿಟಿ ಗಾರ್ಡ್ ಏನು ಹೇಳಿದನೋ ನೀವು ಹೇಳ್ಳಿಲ್ಲ.” ಮೂರ್ತಿ ಮುಗುಳ್ನಕ್ಕೂ, “ಸಿ.ಐ.ಎಸ್.ಎಫ್. ಅವರ ಆಗಮನದ ಮೊದಲು, ನರ್ಸಿಂಗ್ ಎಂಬ ಸ್ಥಳೀಯ ಏಜೆನ್ಸಿಯ ಸೆಕ್ಯುರಿಟಿ ಗಾರ್ಡ್ ಇದ್ದನು.. ಅವನೊಬ್ಬ ವಾಚಾಳಿ. ಅಲ್ಲಿನ ಕೆಲಸಗಾರರಿಗೆ, ಈ ಸ್ಥಳವು ಒಂದು ಕಾಲದಲ್ಲಿ ಸ್ಮಶಾನವೆಂದು, ಅಲ್ಲಿ ದೆವ್ವಗಳು ಓಡಾಡುತ್ತಿರುತ್ತವೆ ಎಂದು ಕಥೆಗಳನ್ನು ಹೇಳುತ್ತಿದ್ದನು. ಸೆಂಟರ್ ಚಟುವಟಿಕೆಗಳು ಸಿ.ಐ.ಎಸ್.ಎಫ್. ಅವರು ಪೂರ್ತಿ ಜಾಗವನ್ನು ತಮ್ಮ ಹತೋಟಿ ಒಳಗೆ ತೆಗೆದುಕೊಂಡಾಗ, ಅಲ್ಲೇ ತೋಟಗಾರನಾಗಿ ಮುಂದುವರೆದರು. ಆ ಸಮಯದಲ್ಲಿ, ತನ್ನ ಭಯವನ್ನು ಹೋಗಲಾಡಿಸಲು, ಒಂದು ಹನುಮಂತನ ಚಿತ್ರವನ್ನು ಇಟ್ಟು ಅದರ ಸುತ್ತಲೂ ನಾಲ್ಕು ಕಲ್ಲುಗಳನ್ನು ಹೂತಿಟ್ಟಿದನು., ಈ ಆಂಜನೇಯಸ್ವಾಮಿ ಇರುವವರೆಗೂ ಆ ದೆವ್ವಗಳು ಅಲ್ಲಿಗೆ ಬರುವುದಿಲ್ಲವೆಂದು ಎಲ್ಲರಿಗೂ ಹೇಳುವವವನು. ಕೆಲವು ದಿನಗಳ ನಂತರ, ಡ್ಯೂಟಿಯಲ್ಲಿ ಕುಡಿದು ಬಂದಿದ್ದಕ್ಕೆ ಕೆಲಸಕ್ಕೆ ಬರಬೇಡವೆಂದು ಹೇಳಿದರೆ ಸಿಟಿಯಲ್ಲಿರುವ ಅವರ ಮಗನ ಕಡೆ ಹೋಗಿಬಿಟ್ಟಿದ್ದಾನೆ. ಆದರೆ ಅಲ್ಲಿರುವ ದಿನಗಳು ದೆವ್ವದ ಬಗ್ಗೆ ಸುಮ್ಮನೆ ಗಡಿಬಿಡಿ ಮಾಡುವವನು. ಆ ವಿಷಯವನ್ನೇ ಸಾಹು ನೆನಪಿಸಿದ. ಮತ್ತೆ ನಮ್ಮ ಸಾಹು ಕಡೆಗೆ ಬಂದರೆ, ಆ ಹುಡುಗ ನನ್ನ ಮಾತುಗಳಿಂದ ಕನ್ವಿನ್ಸ್ ಆಗಲಿಲ್ಲ ಎಂದು ನಂತರದ ಅನೇಕ ಘಟನೆಗಳಿಂದ ನನಗೆ ಅರ್ಥವಾದವು. ಪ್ರತಿಯೊಂದು ಸಣ್ಣ ವಿಷಯವನ್ನು ಭೂತಗನ್ನಡಿಯಿಂದ ನೋಡುವುದು, ಪ್ರತಿ ವೈಫಲ್ಯವನ್ನು ದೆವ್ವಕ್ಕೆ ಆರೋಪಿಸುವುದು, ಅವನ ಮಾತಿನ ನಡುವೆ, ದೇವರಿದ್ದಾನೆಂದು ನಂಬಿದರೆ ದೆವ್ವಗಳೂ ಇವೆ ಎಂದು ನಂಬಬೇಕು ಅಲ್ಲವೇ, ಅವರ ಹಳ್ಳಿಯಲ್ಲಿ ಅವರ ಸಂಬAಧಿಕರಿಗೆ ಸಂಭವಿಸಿದ ಕೆಲವು ಅನುಭವಗಳು, ಹಾರರ್ಚಲನ ಚಿತ್ರಗಳ ಚರ್ಚೆ, ಈ ರೀತಿಯ ಇನ್ನೂ ಕೆಲವು. ಆದರೆ ಅವನ ಸ್ನೇಹಿತರು ಕೂಡಾ ಅವನನ್ನು ಚುಡಾಯಿಸುತ್ತಿದ್ದರು. ಯಾವುದಾದರೂ ವಸ್ತುವನ್ನು ಬಚ್ಚಿಟ್ಟುವುದು, ಅದನ್ನು ದೆವ್ವಕ್ಕೆ ಆರೋಪಿಸಿ ಸತಾಯಿಸುವುದು, ಹುಡುಗರು, ಒಬ್ಬಂಟಿಗರು, ಆ ವಯಸ್ಸಿನಲ್ಲಿ ಏನೇನು ಮಾಡಬೇಕೋ ಅವೆಲ್ಲಾ ಮಾಡಿ ತಮಾಷೆ ನೋಡುತ್ತಿದ್ದರು. ಒಮ್ಮೆ ಒಂದು ಅಪ್ಲಿಕೇಷನ್ ಸರ್ವರ್ ಕೆಲಸ ಮಾಡಲಿಲ್ಲ. ಸಾಹೂ ಸರ್ವರ್ ಅಡ್ಮಿನಿಸ್ಟೆçÃಟರ್. ಎಲ್ಲಾ ಸರ್ವರ್‌ಗಳು ಉತ್ತಮವಾಗಿವೆ, ಆದರೆ ಇದು ಮಾತ್ರ ಪ್ರತಿಕ್ರಿಯಿಸುತ್ತಿಲ್ಲ. ಆಗ ಅವನು ಎಷ್ಟು ಅವಸರ ಮಾಡಿದ್ದನೆಂದರೆ, ಯಾರೋ ತನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು, ತನ್ನ ಮೇಲೆ ಮಾಟ-ಮಂತ್ರ ಪ್ರಯೋಗಗಳು ಜರುಗುತ್ತಿದ್ದವೆಂದು, ಅದರ ಫಲವಾಗಿ ಆ ಸರ್ವರ್ ಕೆಲಸ ಮಾಡುತ್ತಿಲ್ಲವೆಂದು ಗೋಳಿಡುತ್ತಿದ್ದ. ಅವನನ್ನು ಹೊರಗೆ ಕಳಿಸಿ, ಕುಲಕರ್ಣಿ ಅವರಿಗೆ ಫೋನ್ ಮಾಡಿದೆವು. ಒಂದು -ಎರಡು ಗಂಟೆಗಳ ತನಿಖೆಯ ನಂತರ ನಮಗೆ ಗೊತ್ತಾದ ವಿಷಯವೇನೆಂದರೆ, ಅದೇನೋ ಡಿಡಾಸ್ ಎಟಾಕ್ ಎಂದು ಕರೆಯಲಾಗುತ್ತದೆ, ಅದರಿಂದ ಈ ಅನರ್ಥ ನಡೆದಿದೆ ಎಂದು ಕುಲಕರ್ಣಿ ತಂಡ ತೀರ್ಮಾನಿಸಿತು. ಯಾವುದೇ ಸಂದರ್ಭದಲ್ಲಿ ಡೇಟಾ ಸೆಂಟರ್‌ಗೆ ಇಂಟರ್ನೆಟ್ ಅನ್ನು ಕನೆಕ್ಟ್ ಮಾಡಬಾರದೆಂದು ಸೂಚಿಸಿದರು. ಅಲ್ಲಿಗೆ ವಿವಾದ ಇತ್ಯರ್ಥವಾಯಿತು. ಮೂರ್ತಿಯವರು ನಿರ್ವಾಹಕರನ್ನು ನೀರಿಗಾಗಿ ಕೇಳಿ ಎರಡು ಗುಟುಕುಗಳು ಕುಡಿದರು. “ನಿಮ್ಮ ಸಮಯವನ್ನು ಹೆಚ್ಚು ತೆಗೆದುಕೊಳ್ಳದೆಯೇ ವಿಷಯಕ್ಕೆ ಬರುತ್ತೀನಿ! ಈ ಡಿಡಾಸ್ ಘಟನೆ ನಂತರ

“ಡಾಟಾ ಕೇಂದ್ರದಲ್ಲಿ ದೆವ್ವ” ತೆಲುಗು ಕಥೆಯ ಅನುವಾದ,ರಂಗನಾಥ ರಾಮಚಂದ್ರರಾವು.ತೆಲುಗು ಮೂಲ : ಜಿ. ಉಮಾಮಹೇಶ್ವರ್ Read Post »

ಅನುವಾದ

ತೆಲುಗು ಕವಿತೆ “ನ್ಯೂ ಸಿಲಬಸ್” ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿ,ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್

ಅನುವಾದ ಸಂಗಾತಿ “ನ್ಯೂ ಸಿಲಬಸ್” ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್ ನ್ಯೂ ಸಿಲಬಸ್ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್ ಈಗ ನಾವೆಲ್ಲರೂ ಕೇಳಲೇಬೇಕು!ಮಕ್ಕಳು ಹೇಳುತ್ತಿರುವುದನ್ನು ಕೇಳಬೇಕು.ನಿನ್ನೆಯವರೆಗೂ ಈ ಮಕ್ಕಳೆಲ್ಲ ತಡಬಡ ಹೆಜ್ಜೆ ಹಾಕುತ್ತಾ,ಮುದ್ದಾದ ಮಾತುಗಳನ್ನಾಡುತ್ತಾ,ತುಟಿಗಳ ಮೇಲೆ ಮುಗ್ಧತೆಯನ್ನು ಜೀವಂತವಾಗಿರಿಸಿಕೊಂಡು,‘ಮಮ್ಮಿ’, ‘ಪಾಪ್ಪಾ’ ಎಂದು ಓಡಿ ಬಂದವರೇ.ಅವರನ್ನು ಇನ್ನು ಮುಂದೆ ಅದೇ ದೃಷ್ಟಿಯಿಂದ ನೋಡಬೇಕಾಗಿಲ್ಲ.ನಮ್ಮ ಬಾಡಿಗೆ ಯೋಚನೆಗಳಲ್ಲಿ ಅವರನ್ನು ಮುಳುಗಿಸಬೇಕಾಗಿಲ್ಲ.ಮಕ್ಕಳಿಗೂ ಕನಸುಗಳಿರುತ್ತವೆ,ಬಣ್ಣಗಳು, ರಾಗಗಳೂ ಇರುತ್ತವೆ.ಮಕ್ಕಳನ್ನು ಬೆಳೆಸುವುದೆಂದರೆ ಅಂಕಗಳು, ರ್ಯಾಂಕ್‌ಗಳು..ಪ್ಲೇಸ್‌ಮೆಂಟ್‌ಗಳಷ್ಟೇ ತಾನೇ ನಮಗೆ ತಿಳಿದಿದ್ದು?ಆದರೆ ಈ ಮೂರು ಎಲೆಗಳ ಆಟವನ್ನು ದಾಟಿನಾಲ್ಕು ದಿಕ್ಕುಗಳನ್ನೂ ಈ ಮಕ್ಕಳೇ ಕಂಡುಕೊಂಡಿದ್ದಾರೆ.ಸಿಸ್ಟಮ್‌ನಲ್ಲಿ ಹುಡುಕಬೇಕಾದದ್ದು ‘ಮೌಲ್ಯ’ ವಲ್ಲ,ನಾವು ಕಳೆದುಕೊಂಡ ‘ಬಾಲ್ಯ’ ಎನ್ನುತ್ತಿದ್ದಾರೆ,ಆ ದಿಕ್ಕಿನತ್ತ ನಮ್ಮನ್ನು ನೋಡಲು ಕರೆಯುತ್ತಿದ್ದಾರೆ.ಫ್ರೇಮ್‌ಗಳಲ್ಲಿ ನಾವಿರಲಾರೆವು, ಬಾಕ್ಸ್‌ಗಳಲ್ಲಿ ಬಂಧಿಯಾಗಿರಲಾರೆವು ಎಂದುಖಡಾಖಂಡಿತವಾಗಿ ಹೇಳುತ್ತಿದ್ದಾರೆ.ನಾವು ಕಂಡ ದೂರವನ್ನು ಮೀರಿದ ದಿಗಂತಗಳನ್ನುಅವರು ಕಾಣುತ್ತಿದ್ದಾರೆ.ನಾವು ರೂಢಿಸಿಕೊಂಡ ಲೋಕವನ್ನು ಸಮಾಧಿ ಮಾಡಿ,ತಾವು ಕನಸು ಕಾಣುವ ಹೊಸ ಜಗತ್ತನ್ನು ನೋಡಲು ಹೇಳುತ್ತಿದ್ದಾರೆ.ಭ್ರಷ್ಟಾಚಾರ, ಅಕ್ರಮ, ಅನ್ಯಾಯ, ದೌರ್ಜನ್ಯ—ನಮ್ಮ ಜಾತಿಗೆ ‘ವೆರಿ ನಾರ್ಮಲ್’ .ಆದರೆ ಮಕ್ಕಳು ಈಗ ಅವುಗಳನ್ನು ‘ಅಬ್‌ನಾರ್ಮಲ್’ ಎನ್ನುತ್ತಿದ್ದಾರೆ.ಅವರು ‘ಜೆನ್ ಜೀ’ಗಳು ಅಲ್ಲವೇ!‘ ಜೀ ಹುಜೂರ್’ ಎಂಬ ಗುಲಾಮಗಿರಿಯನ್ನು ಬಿಟ್ಟು,ಆತ್ಮಗೌರವದಿಂದ ಬದುಕುತ್ತಾ,ತಮ್ಮ ಭಾಷೆಯ ಎಬಿಸಿಡಿಗಳನ್ನು ನಮ್ಮನ್ನು ಕಲಿಯಲು ಹೇಳುತ್ತಿದ್ದಾರೆ.‘ಟೆಕ್ನೋ ಕಿಡ್ಸ್’ ಆಗಿ ಬೆಳೆಸಿದ್ದೇವೆ ಅಲ್ಲವೇ…ಇವರಿಗೇನು ಭಾವನೆಗಳಿರುತ್ತವೆ ಅಂದುಕೊಂಡಿದ್ದೇವೆ.ರೋಬೋ ಪೀಳಿಗೆ,ಇವರಿಗೇನು ಅನುಬಂಧಗಳಿರುತ್ತವೆ ಅಂದುಕೊಂಡಿದ್ದೇವೆ.ಆದರೆ ‘ಜಂತರ್ ಮಂತರ್’ ಸಾಕ್ಷಿಯಾಗಿ ಹೇಳುತ್ತಿದ್ದಾರೆ—ಅವರ ಭಾವನೆಗಳು ಈ ಮಣ್ಣಿನೊಂದಿಗೆ..ಈ ಅಣಕಿಸಲ್ಪಟ್ಟ ಜನರೊಂದಿಗೆ..ತಮ್ಮನ್ನು ಸುತ್ತುವರಿದ ಪ್ರಕೃತಿಯೊಂದಿಗೆ..‘ಪ್ರಶಾಂತ’ವಾದ ನಾಳೆಯೊಂದಿಗೆ ಹೆಣೆದಿವೆ!ಇದನ್ನು ಕೇವಲ ‘ಪೇಪರ್ ಲೀಕ್’ ಕನ್ನಡಕದಿಂದಷ್ಟೇ ನೋಡಬೇಡಿ,ಅವರು ಕಳೆದುಕೊಂಡ ವ್ಯವಸ್ಥೆಯ ಮೇಲಿನಅಪನಂಬಿಕೆಯ ಪರಾಕಾಷ್ಠೆಯಾಗಿ ನೋಡಿ.ಟಿಯರ್ ಗ್ಯಾಸ್, ವಾಟರ್ ಗನ್, ಲಾಠಿಚಾರ್ಜ್‌ಗಳುಅವರ ಮನೋಬಲದ ಮುಂದೆತಲೆಬಾಗಲೇಬೇಕು ಎಂಬುದನ್ನು ಅರಿತುಕೊಳ್ಳಿ.ಇದು‘ಜನ್’ ತರಂಗ – ‘ಮನ್’ ತರಂಗ.ಈಗ ಅವರಿಗೆ ನಾವುಗಳೇ ಮಕ್ಕಳು!ಕ್ಲೈಮ್ಯಾಕ್ಸ್‌ಗೆ ಬಂದಿರುವ ಈ ಕಥೆಯಲ್ಲಿಬೇಕಾಗಿರುವುದು ‘ಐಮ್ಯಾಕ್ಸ್’ ಸೀನ್‌ಗಳಲ್ಲ,‘ಜೆನ್ ಜೀ’ ಗುರುಕುಲದ ಪಾಠಗಳು!ಅವರ ಸಿಲಬಸ್ ಅನ್ನು ಅವರ ಭಾಷೆಯಲ್ಲೇ ಕಲಿಯೋಣ ಬನ್ನಿ.ಈ ವಯಸ್ಸಿನಲ್ಲಿ ಮತ್ತೊಮ್ಮೆ ಮಕ್ಕಳಾಗಿ,ಬುದ್ಧಿಯಲ್ಲಿ ಹಿರಿಯರಾದ ಅವರ ಗುರುತ್ವದಲ್ಲಿಹೊಸ ಗಾಳಿಯನ್ನು ಉಸಿರಾಡೋಣ.ಹೊಸ ಲೋಕದಲ್ಲಿ ಹೊಸ ಆಧಾರ್ ಕಾರ್ಡ್‌ಗೆ ಅರ್ಜಿ ಹಾಕೋಣ,ನಮ್ಮ ಪಾಸ್‌ಪೋರ್ಟ್ ಅನ್ನುಮತ್ತೊಮ್ಮೆ ಹೊಸದಾಗಿ ನಾವೇ ಹುಡುಕಿಕೊಳ್ಳೋಣ.ಬನ್ನಿ ಹೋಗೋಣ,‘ಜೆನ್ ಜಿ’ ಗುರುಕುಲಗಳಿಗೆ..‘ಮತ್ತೊಮ್ಮೆ ಹುಟ್ಟೋಣವೇ?’

ತೆಲುಗು ಕವಿತೆ “ನ್ಯೂ ಸಿಲಬಸ್” ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿ,ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್ Read Post »

ಅನುವಾದ

ತೆಲುಗು ಕವಿತೆ “ಜೆನ್ ಜಿ (Gen Z)”ಕನ್ನಡಾನುವಾದ,ಕೊಡೀಹಳ್ಳಿ  ಮುರಳೀಮೋಹನ್

ಅನುವಾದ ಸಂಗಾತಿ ಜೆನ್ ಜಿ (Gen Z) ತೆಲುಗು ಮೂಲ: ಕೋಟ್ಲ ವೆಂಕಟೇಶ್ವರ ರೆಡ್ಡಿಕನ್ನಡ ಅನುವಾದ: ಕೊಡೀಹಳ್ಳಿ  ಮುರಳೀಮೋಹನ್ ಎಲ್ಲಾ ತಲೆಮಾರುಗಳೂಗಾಣದ ಎತ್ತುಗಳಂತೆ ಕಾಲವನ್ನು ಹೊರಲೊಲ್ಲವುಅವು ಜಿರಳೆಗಳೇ ಆಗಿರಬಹುದು;ಆದರೆಒಂದೇ ಕಡೆ ಗುಂಪಾದರೆಭೂಕಂಪದ ಕಂಪನಗಳೇ!ಒಂದು ತಲೆಮಾರು ತರ್ಕಿಸಿಒಮ್ಮತಕ್ಕೆ ಬಂದಿತೆಂದರೆ,ಹಿಂದಿನ ಕಾಲದ  ಮೌಲ್ಯಗಳೆಲ್ಲಾತಲೆಕೆಳಗಾಗುವುದು ಖಂಡಿತ!ಜನತಂತ್ರವುಅಪಾಯಕ್ಕೆ ಸಿಲುಕಿದಾಗ,ಒಂದು ಇನ್‌ಸ್ಟಾಗ್ರಾಮ್ ಸಾಕುಸರಣಿ ಬಿರುಗಾಳಿಗಳನ್ನುಎಬ್ಬಿಸಲು!ಬಲಿಷ್ಠ ಕೈಗಳು ಇನ್ನು ಮುಂದೆಉಗುರು ಕಚ್ಚುತ್ತಾ ಕೂರುತ್ತವೆಂಬಭ್ರಮೆ ಬೇಡ,ಅವು ಅಡಿಪಾಯವನ್ನೇ ಅಗೆದು ನೋಡುತ್ತವೆ.ಕೈಯಲ್ಲಿನ ಮೊಬೈಲ್‌ಗಳುಎಲ್ಲರನ್ನೂ ಒಂದಾಗಿಸುತ್ತವೆ!ಒಂದೇ ಒಂದು ಕರೆ ಸಾಕು,ಮೇಡಿಹಣ್ಣಿನಂತಿರುವಓ ಜನತಂತ್ರವೇ,ನಿನ್ನ ಗುಪ್ತ ತಂತುಗಳನ್ನು ಕಿತ್ತು,ಬೆಂಕಿಯ ಜ್ವಾಲೆಗಳನ್ನು ಹಚ್ಚಲು!ದೇಶದ ಬೆನ್ನೆಲುಬುಗಳುನೆಟ್ಟಗೆ ನಿಲ್ಲಲು ಯತ್ನಿಸುತ್ತಿರುವಾಗ,ಬದುಕಲಾರದೆ ಬದುಕು ತಳ್ಳುತ್ತಿರುವಹಿರಿಯ ತಲೆಮಾರೇ,ಎದ್ದು ಚಪ್ಪಾಳೆ ತಟ್ಟಲೇಬೇಕು!! ತೆಲುಗು ಮೂಲ: ಕೋಟ್ಲ ವೆಂಕಟೇಶ್ವರ ರೆಡ್ಡಿಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್

ತೆಲುಗು ಕವಿತೆ “ಜೆನ್ ಜಿ (Gen Z)”ಕನ್ನಡಾನುವಾದ,ಕೊಡೀಹಳ್ಳಿ  ಮುರಳೀಮೋಹನ್ Read Post »

ಅನುವಾದ, ಕಥಾಗುಚ್ಛ

ತೆಲುಗು ಕಥೆ “ಶೋಭನ್‌ ಬಾಬು-ಗಣೇಶ್‌ ಬೀಡಿ” ತೆಲುಗುಮೂಲ ಜಿ.ಉಮಾಮಹೇಶ್ವರ್‌ , ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು

ಅನುವಾದ ಸಂಗಾತಿ ಶೋಭನ್‌ ಬಾಬು-ಗಣೇಶ್‌ ಬೀಡಿ ತೆಲುಗುಮೂಲ ಜಿ.ಉಮಾಮಹೇಶ್ವರ್‌ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು ಶ್ರೀಶೈಲದಂತಹ ಆಧ್ಯಾತ್ಮಿಕ ಕ್ಷೇತ್ರದ ಅಂಚಿನಲ್ಲಿ ಇರುವುದರಿಂದಲೋ ಅಥವಾ ಮಧ್ಯಮ ವರ್ಗದ ನೌಕರರ  ಕುಟುಂಬಗಳು ಅಧಿಕವಾಗಿ ಇರುವುದರಿಂದಲೋ ಮತ್ತು ಸುನ್ನಿಪೆಂಟದಲ್ಲಿ  ಭಕ್ತಿ ಕಾರ್ಯಕ್ರಮಗಳು, ಮತ್ತು ಹಬ್ಬಗಳ ಸಂಭ್ರಗಳು ಚೆನ್ನಾಗಿ ಇರುತ್ತಿದ್ದವು. ವಿನಾಯಕಚವಿತಿಗೆ, ರಾಮನವಮಿಗೆ ಚಪ್ಪರಗಳನ್ನು ಹಾಕುವವರು. ಒಂಬತ್ತು ದಿನಗಳ ಹಬ್ಬದ ಗಡಿಬಿಡಿಯಲ್ಲಿ ನಾಟಕಗಳು, ಹರಿಕಥೆಗಳು, ಬುರ್ರಕಥೆಗಳು ಅದರಲ್ಲಿ ಭಾಗವಾಗಿದ್ದವು. ಚಿಕ್ಕಮಕ್ಕಳಿಗೆ ಹಾಡುಗಳು, ಏಕಪಾತ್ರಾಭಿನಯಗಳು, ನೃತ್ಯಸ್ಪರ್ಧೆಗಳಲ್ಲಿ ಬಹುಮಾನಗಳು ವಿತರಿಸುವವರು. ಶಿವರಾತ್ರಿಗೆ ಸಿನಿಮಾ ಹಾಲುಗಳಲ್ಲಿ ತ್ರೀ ಶೋಸ್ ಹಾಕುವವರು. ಧನುರ್ಮಾಸದಲ್ಲಿ ನಗರ ಸಂಕೀರ್ತನೆಗಳು ಚಳಿಯನ್ನು ಜಯಿಸುತ್ತವೆ. ಸಂಕ್ರಾಂತಿಗೆ ಅಘೋಷಿತ ರಂಗೋಳಿ ಸ್ಪರ್ಧೆಗಳು ನಡೆಯುತ್ತಿದ್ದವು. ಯಾರ ರಥ ಎಷ್ಟು ದೂರ ಸಾಗಿತೋ ಎಂದು ಅಳೆಯುತ್ತಿದ್ದರು. ದೊಡ್ಡ ದೊಡ್ಡ ರಂಗೋಳಿಗಳಿಗೆ ವಿಶೇಷ ಪ್ರಶಂಸೆಗಳು ದೊರೆಯುತ್ತಿದ್ದವು. ಅಕ್ಕಾತಂಗಿಯರು,ತಾಯಿ-ಆತ್ತೆಗಳು ರಂಗೊಳಿಗಳು ಹಾಕುತ್ತಿದ್ದಾರೆ  ಅಣ್ಣ-ತಮ್ಮಂದಿರು, ತುಂಟ ಮಕ್ಕಳು ಸ್ವಂತ ರಂಗೊಳಿಗಳಿಗೆ ಕಾಪಾಲಾ ಕಾಯುತ್ತಾ, ಹೊರಗಿನ ರಂಗೊಳಿಗಳನ್ನು ವಿಶ್ಲೇಷಿಸುತ್ತಾ ತಿರುಗಾಡುತ್ತಿದ್ದರು. ಸುನ್ನಿಪೆಂಟಗೆ ಸಂಬಂಧಿಸಿದವರೆಗೂ ಸತ್ಯನಾರಾಯಣಸ್ವಾಮಿ ದೇವಸ್ಥಾನ, ರಾಮಮಂದಿರಗಳು ಭಕ್ತಿ ಮತ್ತು ಆಧ್ಯಾತ್ಮಿಕ ಕೇಂದ್ರಗಳಾಗಿವೆ.ಶ್ರೀಶೈಲದಲ್ಲಿ ಸಹಜ ಸಿದ್ಧವಾಗಿ ಕೆಲವುರು ಸಾಧುಗಳು, ಸನ್ಯಾಸಿಗಳು ಯಾವಾಗಲೂ ಕಂಡು ಬರುತ್ತಿರುತ್ತಾರೆ. ಇವರಲ್ಲದೆ, ಹೊರ ಪ್ರದೇಶಗಳಿಂದಲೂ ಕೆಲವರು ಬಂದು ಇಲ್ಲಿ ಯಾವುದೋ ಸತ್ರದಲ್ಲಿ ಊಟ ಮಾಡುತ್ತಾ, ಕಾಲ ಕಳೆಯುತ್ತಾ   ಬದುಕುವವರು ಅನೇಕರು ಇರುವವರು. ಮುಮುಕ್ಷುವುರಾದ ಸಾಧುಗಳು ಯಾರೋ, ಭಿಕ್ಷುಕುರಾದ ಸನ್ಯಾಸಿಗಳು ಯಾರೋ ಕಂಡುಹಿಡಿಯುವುದು ತುಂಬಾಕಷ್ಟ. ಉಡುಗೆ ತೊಡುಗೆಗಳಿಂದ, ಹಾವಭಾವಗಳಿಂದ, ಮಾತಿನ ಪದ್ಧತಿ ಸುಮಾರಾಗಿ ಒಂದೇ ವಿಧವಾಗಿ ಇರುತ್ತದೆ.ಒಮ್ಮೆ ಪೂರ್ಣಾನಂದ ಸ್ವಾಮಿ ಎಂಬ ಸ್ವಾಮಿಗಳು ತಮ್ಮ ಪತ್ನಿಸಮೇತ ಶ್ರೀಶೈಲಕ್ಕೆ ಬಂದರು.  ಅಯ್ಯಪ್ಪಸ್ವಾಮಿಯ ದೇವಸ್ಥಾನದಲ್ಲಿ ಕೆಲವು ದಿನಗಳು, ಮತ್ತು ಸತ್ಯನಾರಾಯಣ ಸ್ವಾಮಿಯ ದೇವಸ್ಥಾನದಲ್ಲಿ ಕೆಲವು ದಿನಗಳು ಪ್ರವಚನಗಳನ್ನು ಹೇಳುತ್ತಾ ಸುಮಾರು ಮೂರುತಿಂಗಳ ಕಾಲವು ಅವರು ಸುನ್ನಿಪೆಂಟದಲ್ಲಿ ಕಳೆದರು. ಹಾಗಾಗಿ ಪೂರ್ಣಾನಂದಸ್ವಾಮಿಗಳು ಶ್ರೀಶೈಲದಲ್ಲಿದ್ದ ಮೂರುತಿಂಗಳಲ್ಲಿ ಒಂದುತಿಂಗಳು ನಮ್ಮ ಮನೆಯಲ್ಲಿಯೇ ಇದ್ದರು. ಪೂರ್ಣಾನಂದಸ್ವಾಮಿಗಳು, ತಾವು ವೇದಾಂತಂ ಲಕ್ಷ್ಮಯ್ಯನವರ ಶಿಷ್ಯರೆಂದು, ಅವರ ಊರು ಕಡಪಜಿಲ್ಲೆಯ ಮಾಮಿಡಾಲಪಲ್ಲೆ ಎಂದೋ, ಇನ್ನೂ ಯವುದೋ ಊರು ಎಂದು ಹೇಳಿದ್ದು ನೆನಪಿದೆ. ಪ್ರತಿದಿನ, ಸಾಯಂಕಾಲ ಆರರಿಂದ ಏಳರ ವರೆಗೆ ಅವರು  ಉಪದೇಶ ಮಾಡುತ್ತಿದ್ದರು. ಆಗ ಹೆಂಗಸರೆಲ್ಲ ಆ ಸಮಯಕ್ಕೆ  ಸೇರಿ ಸ್ವಲ್ಪ ಹೊತ್ತು ಕಾಲಕ್ಷೇಪ ಮಾಡುತ್ತಿದ್ದರು. ಭಾನುವಾರಗಳಲ್ಲಿ ಮಾತ್ರ ಮಧ್ಯಾಹ್ನ ಮೂರರಿಂದ ನಾಲ್ಕರವರೆಗೂ ಹೇಳುತ್ತಿದ್ದರು.ಒಂದುದಿನ ಯಾವುದೋ ಕೆಲಸಕ್ಕೆ ನನ್ನ ತಾಯಿಯನ್ನು ಕರೆದುಕೊಂಡು ಬರಬೇಕೆಂದು ಅಪ್ಪ ಹೇಳಿದರೇ ನಾನು ದೇವಸ್ಥಾನಕ್ಕೆ ಹೋಗಿದ್ದೆ. ಇನ್ನೊಂದು ಐದು ನಿಮಿಷಗಳಲ್ಲಿ ಮುಗಿಯುತ್ತದೆ. ಕೂತ್ಕೋ ಅಂದರೆ, ನಾನೂ ಕೂತ್ಕೊಂಡು ಕೇಳುತ್ತಿದ್ದೇನೆ. ಅವರು ಶ್ಯಾಸೆದ ಬಗ್ಗೆ, ಶ್ಯಾಸೆ ಮೇಲಿನ ಧ್ಯಾಸದ ಬಗ್ಗೆ, ಮೌನವಾಗಿ ಮಾಡುವ ಧ್ಯಾನದ ಬಗ್ಗೆ ಹೇಳುತ್ತಾ  ಅಧ್ಯಾತ್ಮಿಕ ಸಂಬಂಧವಾದ ಮಾತುಗಳೇನೊ ಹೇಳಿತ್ತಿದ್ದರು.ನಾನು ಏನೋ  ಯೋಚಿಸುತ್ತಾ ಕೂತಿದ್ದಾರೆ ನಾಗಮಣಿ ಅತ್ತೆ ನನ್ನನ್ನು ಹತ್ತಿರಕ್ಕೆ ಕರೆದು –“ಈ ಸ್ವಾಮಿ ಇಷ್ಟೊಂದು ಮಾತುಗಳು ಹೇಳ್ತಾನೆ, ಆದರೆ, ಇವರಿಗೆ ಸಿನಿಮಾ ಹುಚ್ಚು ಹೋಗಿಲ್ಲ” ಎಂದಳು.ವಾಸ್ತವಕ್ಕೆ ಈ ಚರ್ಚೆಯಲ್ಲಿ ಚಲನ ಚಿತ್ರಗಳ ಪ್ರಸ್ತಾವನೆ ಏಕೆ ಬಂದವೋ ನನಗೆ ಅರ್ಥವಾಗಿಲ್ಲ. ಆ ಅತ್ತೆ ಸಿನಿಮಾಗಳು ಚೆನ್ನಾಗಿ ನೋಡುತ್ತಾಳೆ. ಚೆನ್ನಾಗಿ ಫಾಲೋ ಆಗುತ್ತಾಳೆ  ಕೂಡಾ. ಇವರಿಗೆ ಸಿನಿಮಾಹುಚ್ಚು ಎಂದು ಹೇಗೆ ನಿರ್ಧರಿಸಿದ್ದಾಳೋ  ತಿಳಿಯದೆ ನಾನು ತಲೆ ಕೆಡಿಸಿಕೊಂಡಾಗ, ಅವರೇ ನನ್ನನ್ನು ಮತ್ತಿಷ್ಟೂ ಹತ್ತಿರಕ್ಕೆ ಕರೆದು-“ಬೇಕಿದ್ದರೆ ಕೇಳು, ಅವರು ಮಾತು ಮಾತಿಗೆ ಶೋಭನ್ ಬಾಬು, ಶೋಭನ್ ಬಾಬು ಎನ್ನುತ್ತಿದ್ದಾನೆ”ನಾನು ಸ್ವಲ್ಪ ಕಿವಿಕೊಟ್ಟು ಶ್ರದ್ಧೆ ಯಿಂದ ಕೇಳಿದಾಗ, ಹಾಗೆ ಅನಿಸಿತು, ಆದರೆ ಅದಲ್ಲ ಅಂತಲೂ ಅನಿಸಿತು. ನನಗೆ ತೆಲುಗು ಭಾಷೆಯೆಂದರೆ ಒಲವು, ಮನೆಯಲ್ಲಿದ್ದ ಪುಸ್ತಕಗಳನ್ನು(ಪೂರ್ಣಾನಂದಸ್ವಾಮಿ ಅವರವು ಕೂಡಾ) ನೋಡಿದ್ದೇನೆ. ಅದರಿಂದ ಮತ್ತಿಷ್ಟೂ ಶ್ರದ್ಧೆಯಿಂದ ಕೇಳಿದರೆ  ಆಗ  ಸ್ಫುರಿಸಿತು ಆ ಪದವು, ಅದರ ಅರ್ಥ್!ಆ ಅತ್ತೆ ಮತ್ತೆ ಕರೆದು  “ಗಮನಿಸಿದ್ದೀಯಾ?” ಎಂದು ಕೇಳಿದಳು.ಆಗ ನಾನು ಅವಳಿಗೆ ಹೇಳಿದೆ –“ಅತ್ತೆ, ಅದು ನೀವು ಅಂದುಕೊಂಡಂತೆ ಶೋಭಾನ್ ಬಾಬು ಅಲ್ಲ – ಸೋಹಂ ಭಾವ – ಅಂದರೆ ನಾನೇ ದೇವರು ಎಂಬ ಭಾವನೆ ” ಎಂದು ಹೇಳಿದರೆ  ಅವಳ ಮುಖ ಸಂಪೂರ್ಣವಾಗಿ ಕಳೆಗುಂದಿತ್ತು. ನಂಬಿದಂತೆ ಕಾಣಿಸಲಿಲ್ಲ. ಮನೆಗೆ ಬಂದಮೇಲೆ ನನ್ನ ಅಕ್ಕಗೆ ಹೇಳಿದೆ. ಈಗಲೂ  ಆ ವಿಷಯವನ್ನು ನೆನೆದರೆ  ತಡೆಯಲಾರದಷ್ಟು ನಗು ಬರುತ್ತದೆ.ಇನ್ನೊಂದು ಸಲ ಸನ್ಯಾಸಿಯೊಬ್ಬರು ಮಹದೇವಪ್ಪನವರನ್ನು ಭೇಟಿಮಾಡಿ  ತಾನು ಬಂದು ವ್ರತವನ್ನು ಸಂಕಲ್ಪಿಸಿದ್ದೇ ನೆಂದು ಅದು ಮುಗಿಯುವ ತನಕ ಅವರ ಸಹಾಯ ಬೇಕೆಂದು ಕೇಳಿದ. ಬೋಳ ಶಂಕರನಂತಹ  ಮಹದೇವಪ್ಪ ಮಾಮಾ ಆ ವ್ರತವು ಏನು, ಅದು ಮುಗಿಸಲು ಎಷ್ಟು ದಿನಗಳು ಬೇಕಾಗುತ್ತವೋ  ಅದಕ್ಕೆ  ಏನೇನು ಬೇಕಾಗುತ್ತವೋ ಏನೂ  ಕೇಳದೆ ಅವರಿಗೆ ಅಭಯ ಕೊಟ್ಟರು.  ಅಯ್ಯಪ್ಪಸ್ವಾಮಿಯ ದೇವಸ್ಥಾನದಲ್ಲಿ ಆಶ್ರಯವೂ ಕೊಡಿಸಿದರು. ಒಂದುವಾರ ಅವರಿಗೆ ಎರಡು ಸಲ ಊಟ ಕಳುಹಿಸುವ ಸರದಿ ನಮ್ಮದಾಗಿತ್ತು.ದೇವಸ್ಥಾನದ ಈಶಾನ್ಯದ  ಮೂಲೆಯಲ್ಲಿ ಸ್ವಲ್ಪ ಖಾಲೀ ಜಾಗವಿತ್ತು. ಅಲ್ಲಿಯೇ ಅವರು ತಮ್ಮ ಚೀಲ ಇಟ್ಟುಕೊಂಡು, ಅಲ್ಲಿಯೇ ಇದ್ದ ನಲ್ಲಿಯ ಬಳಿ ಸ್ನಾನ ಮಾಡುತ್ತಿದ್ದರು. ಅವರು ಅಷ್ಟೊಂದು ಪೂಜೆ ಪುಂಸ್ಕಾರಗಳು ಮಾಡಿದಂತೆ ಕಾಣಿಸುತ್ತಿರಲಿಲ್ಲ. ಯಾವಾಗಲೂ ಮೌನವಾಗಿ ಏನೋ ಯೋಚಿಸುತ್ತಿದ್ದವನಂತೆ ಇರುವವನು. ಆಗಾಗ, ಕೆಲವೊಮ್ಮೆ ಗೋಡೆಗೆ ಒರಗಿ ಮಲಗಿದ್ದೇನೋ  ಧ್ಯಾನ ಮಾಡುತ್ತಿದ್ದಾನೋ ತಿಳಿಯದ ಸ್ಥಿತಿಯಲ್ಲಿ ಇರುತ್ತಿದ್ದ.ಅಯ್ಯಪ್ಪಸ್ವಾಮಿ ದೇವಸ್ಥಾನ ನಮ್ಮ  ಕಾರ್ಯಕಲಾಪಕ್ಕೆ ಮುಖ್ಯವಾದ ಜಾಗಾ. ಅದು ದೊಡ್ಡ  ಜನಸಂದಣಿ ಇರುವ ದೇವಸ್ಥಾನ ವಲ್ಲ. ಆ ಪ್ರಾಜೆಕ್ಟ್ ನಲ್ಲಿ ಉದ್ಯೋಗಿಯೊಬ್ಬರು ಆ ದೇವಸ್ಥಾನಕ್ಕೆ ಧರ್ಮ ಕರ್ತ, ಪೂಜಾರಿ  ಎಲ್ಲಾ ಅವನೇ ಆಗಿ ನಡೆಸುತ್ತಿದ್ದನು. ಆ ದೇವಸ್ಥಾನ, ಅವರ ಮನೆ ಪೂಜಾ ಕೋಣೆಗೆ ತುಂಬಾ ದೊಡ್ಡದಾಗಿದಂತೆ,  ಮತ್ತು ಸಾಂಪ್ರದಾಯಿಕ ದೇವಸ್ಥಾನಗಳಿಗೆ ತುಂಬಾ ಚಿಕ್ಕದಾಗಿದಂತೆ ಕಾಣಿಸುತ್ತಿತ್ತು. ಅವರ ಮನೆ ಒಳೆಗೆಯಿಂದ ದೇವಸ್ಥಾನಕ್ಕೆ ದಾರಿಯಿತ್ತು. ದೇವಸ್ಥಾನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ, ಪೂಜೆ, ನೈವೇದ್ಯ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಅವರ ಮಗನ  ಹೆಸರು ಮಣಿಕಂಠ. ಅದೇನೇ ಇರಲಿ, ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿಯ ವರೆಗೂ ಅದು ಮಕ್ಕಳ ಆಟಗಳ  ಜಾಗಾವಾಗಿತ್ತು.ಶನಿವಾರ ಸಂಜೆ ಏಳುಗಂಟೆಗೆಲ್ಲಾ , ‘ಈಗಲಪೆಂಟ’ದಿಂದ ಒಬ್ಬ ಮಲಯಾಳ/ ತಮಿಳ ಭಜನ ತಂಡ ಬರುತ್ತಿತ್ತು. ಅಲ್ಲಿಯ ವರೆಗೂ ಅಲ್ಲಲ್ಲಿ ಆಟವಾಡುತ್ತಿದ್ದ ಮಕ್ಕಳೆಲ್ಲರು ಮನೆಗೆ  ಹೋಗಿ ಕೈಕಾಲೂ ತೊಳೆದುಕೊಂಡು ಬಂದು  ಭಜನೆಯಲ್ಲಿ ಭಾಗ ವಹಿಸುವವರು. ಘಂಟೆಸಾಲ ಅವರ ಶುಕ್ಲಾಂಬರಧರಂದಿಂದ ಪ್ರಾರಂಭವಾಗಿ “ಸುಬ್ರಹ್ಮಣ್ಯಂ ಸುಬ್ರಹ್ಮಣ್ಯಂ”, “ಚಂದ್ರಶೇಖರ, ಚಂದ್ರಶೇಖರ” ಎಂಬ ಭಜನೆಗಳ ಮೂಲಕ  “ಒನ್ರಾಮ್ ತಿರುಪ್ಪಡಿ ಶರಣಂ ಪುನ್ನಯ್ಯಪ್ಪ” ಎಂದು  ಸಾಗುವ ಸೋಪಾನದ ಗೀತೆಯೊಂದಿಗೆ ಕೊನೆಗೊಳ್ಳುವುದು.  ಸೋಪಾನಗಳ ಹಾಡು ಉಂಬಾ ಉತ್ಸಾಹದಿಂದ  ತುಂಬಿ ತುಳುಕುತ್ತಿತ್ತು. ಪ್ರತಿಯೊಂದು ಸೋಪಾನಕ್ಕೆ ಒಂದು ಚರಣವಿದೆ. ಪ್ರತಿಚರಣ ಮುಗಿಯುತ್ತಿದ್ದಂತೆ, ಪ್ರಸಾದಕ್ಕೆ ಹತ್ತಿರವಾಗುತ್ತಿದ್ದ ತೃಪ್ತಿ. ನಡುವೆ ಕಾಲಕ್ಷೇಪಕ್ಕಾಗಿ ನಾನು ಶಿವ ಶಿವ ಶಂಕರ…  ಎನ್ನುತ್ತಾ ಭಕ್ತ  ಕನ್ನಪ್ಪ ಗೀತವನ್ನು ಹಾಡುತ್ತಿದ್ದೆ.  ಆ ಭಜನ ತಂಡಕ್ಕೇ ನನ್ನ ಹೆಸರು ಶಿವ ಶಿವ ಶಂಕರ ಎಂದೇ ಗುರುತು. ಕೊನೆಗೆ ಮಂಗಳಾರತಿಯ ನಂತರ ಅರ್ಚಕರು ಬಿಸಿಬಿಸಿ ಚಕ್ಕರ ಪೊಂಗಲಿಯನ್ನು  ಚಿಕ್ಕ ಚಿಕ್ಕ  ದೊನ್ನೆಗಳಲ್ಲೋ , ಎಲೆಗಳಲ್ಲೋ  ಹಂಚುವವರು.  ಅಂದು ರಾತ್ರಿ ಆರತಿ ಮುಗಿಸಿದ ಮೇಲೆ ತಿನ್ನುವ ಆ ಪ್ರಸಾದ ಅದ್ಬುತವಾದ ರುಚಿಯಿಂದ, ಆಹಾ… ಅನ್ನಿಸುವಷ್ಟು ರುಚಿಯಾಗಿ ಇರುತ್ತಿತ್ತು. ಬಹಳಷ್ಟು ಬಾರಿ  ಆ ಪ್ರಸಾದದ ಮೇಲೆ ಅನುರಕ್ತಿಯಿಂದ ದೇವಸ್ಥಾನಕ್ಕೆ ಹೋಗುತ್ತಿದ್ದೇವೆ ಎಂದರೆ  ಅದರಲ್ಲಿ ಸ್ವಲ್ಪವಾದರೂ ಸುಳ್ಳು ಇಲ್ಲ..ಹಾಗೆ ಆದಿವಾರದ ಬೆಳಿಗ್ಗೆ ತಮ್ಮ ತಮ್ಮ ಮನೆಗಳಲ್ಲಿ ತಾವು ತಿಂಡಿ ಮುಗಿಸಿಕೊಂಡು ಎಲ್ಲಿ ಆಟ ಆಡಬಹುದು, ಏನು ಆಡಬೇಕು ಎಂದು ಚರ್ಚಿಸಿತ್ತಿದ್ದೆವು. ಹಾಗೆ ನಾವು ಚರ್ಚಿಸಲು ಹೋಗುವ ಮೊತ್ತ ಮೊದಲಿನ ಪ್ರದೇಶ ಅಯ್ಯಪ್ಪಸ್ವಾಮಿ ದೇವಸ್ಥಾನವು.  ಆ ದಿನವೂ ಎಂದಿನಂತೆ ಎಲ್ಲರೂ ಗುಂಪು ಸೇರಿ ಯಾವಾವು ಆಟಗಳು ಆಡಬೇಕೋ ಚರ್ಚಿಕೊಳ್ಳುತ್ತಿದ್ದರೆ ಸಾಧುವು ನನ್ನನು ಆತ್ತ ಇತ್ತ  ನೋಡಿ  ಇಲ್ಲಿಬಾ ಎಂಬಂತೆ ಕೈ ಸನ್ನೆ ಮಾಡಿದ.  ನನ್ನೇ ಎಂದು ನಿರ್ಧರಿಸಿಕೊಂಡು ನಾನೇ ಅವಾರ ಕಡೆಗೆ ಹೋದ. ಅವರು ನನ್ನನ್ನು ದೇವಸ್ಥಾನದ ಹಿಂಭಾಗಕ್ಕೆ ಕರೆದೊಯ್ದು, ಮೇಲಿನ ಜೇಬಿನಿಂದ ಒಂದು ರೂಪಾಯಿ ನೋಟು ತೆಗೆದು, ‘ಒಂದು ಗಣೇಶ್ ಬೀಡಿ ಕಟ್ಟು ತೆಗೆದುಕೊಂಡು ಬಾ ಮಗು. ಹಾಗೆ ನಿನಗೂ ಬೇಕಾದರೆ,  ಐದುಪೈಸೆಗೆ ಏನಾದರೂ  ಕೊಂಡುಕೋ’  ಎಂದು ಹೇಳಿ ಆ ರೂಪಾಯನ್ನು ಕೈಯಲ್ಲಿ ಇಟ್ಟ.ನಾನು ಏನೂ ಯೋಚಿಸದೆಯೇ  ಅಂಗಡಿಯ ಕಡೆಗೆ ಓಡಿದೆ. ಮಲ್ಲಿಕಾರ್ಜುನ ಟಾಕೀಸುಗೆ ತಿರುಗುವ ಮೂಲೆಯಲ್ಲಿ ಒಂದು ಅಂಗಡಿ ಇತ್ತು. ಅಲ್ಲೇ ನಾವು ರೂಢಿಯಾಗಿ ಸಾಮಾನುಗಳನ್ನು ತಂದುಕೊಳ್ಳುತ್ತಿದ್ದೆವು. ಆ ಅಂಗಡಿಯಲ್ಲಿ ಇಬ್ಬರು ಸಹೋದರರು ಇರುತ್ತಿದ್ದರು. ನಾವು ಅವರನ್ನು ಚಿಕ್ಕ ಶೆಟ್ಟಿ  ಮತ್ತು ದೊಡ್ಡ ಶೆಟ್ಟಿ ಎಂದು ಕರೆದುಕೊಳ್ಳುತಿದ್ದೆವು.   .ಚಿಕ್ಕ ಶೆಟ್ಟಿ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡುತ್ತಾ, ಉತ್ತಮ ಗ್ರಾಹಕರ ಪ್ರಜ್ಞೆಯನ್ನು ತೋರಿಸುವವನು. ನಾನು ಬೀಡಿ ಕೇಳಿದೊಡನೆ ಒಂದು ಕಟ್ಟು ಕೊಟ್ಟು ಏನೋ ಕೇಳುತ್ತಿದ್ದಾಗ ನಾನು ಓಡುತ್ತಾ ಬಂದುಬಿಟ್ಟೆ. ದೇವಸ್ಥಾನದಲ್ಲಿ ಗಣೇಶ್ ಬೀಡಿಗಳ ಕಟ್ಟು, ಉಳಿದ ಚಿಲ್ಲರೆ, ಸಾಧುವಿಗೆ ನೀಡಿ, ನನ್ನ ಆಟಗಳಲ್ಲಿ ನಾನು ಮುಳುಗಿಹೋದೆ.ಒಂದು ವಾರದ ನಂತರ, ಅಪ್ಪ ಯಥಾಲಾಪವಾಗಿ  ಪಡಶಾಲೆಯಲ್ಲಿ ಇದ್ದ ನನ್ನನ್ನು ಕರೆದು “ಏನೋ ಬೀಡಿ ಸೇದುತ್ತಿದ್ದೀಯಾ?”  ಎಂದು ಸ್ವಲ್ಪ ಕಟುವಾಗಿಯೇ ಕೇಳಿದರು.  ನನ್ನ ಬಾಯಿಂದ ಮಾತು ಬರಲಿಲ್ಲ. ಅಷ್ಟರಲ್ಲಿ ಅಮ್ಮನೂ ಬಂದಳು. ವಿಷಯ ತಿಳಿದುಕೊಂಡು, “ಛ, ಚ ಅವನು ಏಕೆ ಸೇದುತ್ತಾನೆ? ” ಎಂದು ನನ್ನನ್ನು ಸಮರ್ಥಿಸಿದಳು.ಮತ್ತೆ ತಾನೇ “ಇಷ್ಟಕ್ಕೂ ನಿಮಗೆ ಯಾರು ಹೇಳಿದರು?” ಎಂದು ಕೇಳಿದಾಗ, ಅಪ್ಪ “ಯಾರೋ ಹೇಳಿದರೆ ನಾನೇಕೆ ನಂಬುತ್ತೇನೆ,  ಯಾರ ಹತ್ರ  ಇವನು ಖರೀದಿಸಿದನೋ  ಅವನೇ, ಚಿಕ್ಕಶೆಟ್ಟಿ ಹೇಳಿದ” ಎಂದ.ನನಗೆ ವಿಷಯವು ಅರ್ಥವಾಯಿತು. ನಾನು ಮುಗುಳ್ನಗುತ್ತಾ “ಓಹ್, ಅದಾ, ದೇವಸ್ಥಾನದಲ್ಲಿ ಸ್ವಾಮಿ ಇದ್ದಾನಲ್ಲ, ಕಳೆದ ಭಾನುವಾರ ಅವರು ಖರೀದಿಸಿಕೊಂಡು ಬಾ ಅಂತ ಹೇಳಿದರು. ಆಗ ನಾನು  ಖರೀದಿಸಿದೇ. ನಾನು ಕುಡಿಯಲು ಅಲ್ಲ.”ಎಂದೆ.ಅಪ್ಪ ನಂಬುವಂತೆ ಕಾಣಲಿಲ್ಲ. “ನೀವು ತಪ್ಪು ಮಾಡಿದ್ದು ಅಲ್ಲದೆ, ಅಪರಾಧವನ್ನು ಇನ್ನೊಬ್ಬರಿ ಮೇಲೆ ಹಾಕುವೇ ” ಎಂದು ಅವರು ಪ್ರತಿದಾಳಿ ನಡೆಸಿದರು.ಆ ಮಾತುಗಳಿಗೆ ನನ್ನ ಮುಖವು ಕೆಂಪಾಯಿತು. ದುಃಖವಾಯಿತು. ಕೀಚಲು ಧ್ವನಿಯಲ್ಲಿ ನಮ್ಮಮ್ಮಯೊಂದಿಗೆ, “ಬೇಕಾದರೆ ಈಗಲೇ ದೇವಸ್ಥಾನಕ್ಕೆ ಹೋಗೋಣ. ಅವರಿಂದಲೇ ಮಾತನಾಡಿಸುವೆ” ಎಂದೆ.ನನ್ನ  ನಿರಪರಾಧತ್ವ ಮೇಲೆ ನನಗಿಂತಲೂ ಜಾಸ್ತಿ ನಂಬಿಕೆ ಇರುವ ಅಮ್ಮ ತಕ್ಷಣ-“ಹೋಗಿ ಅವರನ್ನೇ ಕೇಳೋಣ” ಎಂದಳು.ನನ್ನ ತಂದೆಯೂ ಅಂಗಿ ಧರಿಸುತ್ತಾ-“ತಕ್ಷಣ ಹೋಗಿ ಮಹದೇವಪ್ಪ ಮಾಮನವರನ್ನು ಕರೆದುಕೊಂಡುಬಾ ಹೋಗು, ಇಲ್ಲಿ ಇದ್ದಂತೆ ಬರಬೇಕು. ಏಕೆ ಎಂದು ಕೇಳಿದರೆ ಬಂದಾಗಾ ಅಪ್ಪ ಹೇಳುತ್ತರಂತೆ ಎಂದು ಹೇಳು. ನಾವು ದೇವಸ್ಥಾನದ ಹೊರಗೆ ಇರುತ್ತೇವೆ” ಎಂದೆ.ನಾನು ಮಿಂಚಿನ ವೇಗದಿಂದ ಹೋಗಿ ಹತ್ತು ನಿಮಿಷದಲ್ಲಿ ಮಹದೇವಪ್ಪ ಮಾಮಾನ ಜೊತೆ ದೇವಸ್ಥಾನಕ್ಕೆ ಬಂದೆ. ಅಪ್ಪ ಮಾಮನೊಂದಿಗೆ ಏನೋ ಮಾತಾಡಿದರು. ಮಾಮ, ಹಿಂದೆ ಅಪ್ಪ, ಆ ಹಿಂದೆ ಅಮ್ಮ, ನಾನು ದೇವಸ್ಥಾನದ ಒಳಗೆ ಹೋಗಿ ಸ್ವಾಮಿ ಕುಳಿತಿದ್ದ ಜಾಗಕ್ಕೆ ಸೇರೀದೆವು .ನಮ್ಮ ಬರುವಿಕೆಯನ್ನು ನಿಜಕ್ಕೆ ಊಹಿಸದ ಅವರು, ‘ರಾತ್ರಿ ಊಟ ತೆಗೊಂಡು ಯಾರೋ ಭಕ್ತರು ಬರಬೇಕಾದ ಸಮಯದಲ್ಲಿ ಇವರು ಬಂದಿದ್ದರೇನು?’ ಎಂದು ಆಶ್ಚರ್ಯ ಹೋದ. ಸ್ವಲ್ಪ ತಬ್ಬಿಬ್ಬಾದ.ಮಹದೇವಪ್ಪ ಮಾಮ ಅವು ಇವು ಮಾತಾಡಿ-“ನೀವು ಈ ಹುಡುಗನೊಂದಿಗೆ ಹೋದ ವಾರ

ತೆಲುಗು ಕಥೆ “ಶೋಭನ್‌ ಬಾಬು-ಗಣೇಶ್‌ ಬೀಡಿ” ತೆಲುಗುಮೂಲ ಜಿ.ಉಮಾಮಹೇಶ್ವರ್‌ , ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು Read Post »

ಅನುವಾದ

“ಮೇಣದ ಬತ್ತಿಯಂತೆ ಕರಗಬಲ್ಲೆ, ಬೆಳಗಬಲ್ಲೆ!” ತೆಲುಗು ಮೂಲ: ಆಶಾರಾಜು,ಕನ್ನಡ ಅನುವಾದ: ಕೋಡೀಹಳ್ಳಿ  ಮುರಳೀ ಮೋಹನ್

ಅನುವಾದ ಸಂಗಾತಿ “ಮೇಣದ ಬತ್ತಿಯಂತೆ ಕರಗಬಲ್ಲೆ, ಬೆಳಗಬಲ್ಲೆ!” ತೆಲುಗು ಮೂಲ: ಆಶಾರಾಜು, ಕನ್ನಡಕ್ಕೆ: ಕೋಡೀಹಳ್ಳಿ  ಮುರಳೀ ಮೋಹನ್ ಇಲ್ಲಿ ನಗುವುದೇ ನಿಷಿದ್ಧ,ನನಗೆ ನಗುವುದು ಗೊತ್ತು.ಇಲ್ಲಿ ಶಬ್ದವೇ ನಿಷಿದ್ಧ,ನನಗೆ ಮಾತಾಡುವುದು ಗೊತ್ತು.ಇಲ್ಲಿ ಪ್ರಶ್ನೆಗಳೇ ನಿಷಿದ್ಧ,ನನಗೆ ಕಾರಣಗಳನ್ನು ಹುಡುಕುವುದು ಗೊತ್ತು.ನಾನು ಮೇಣದ ದೀಪ.ಸುಡುತ್ತಾ ಕರಗಿಹೋಗುವುದು ಗೊತ್ತು;ಬೆಳಗಾಗುವವರೆಗೂ ಹೊಳೆಯುವುದೂ ಗೊತ್ತು.ಕಣ್ಣೀರು ವಿಚಿತ್ರವಾದ ಇತಿಹಾಸ ಹೊಂದಿವೆ.ಕೋಪದಂತೆ ಉರಿಯಾಗಿ ಬರುತ್ತವೆ,ಶಾಂತಿಯಂತೆ ತಂಪಾಗಿ ಇಳಿಯುತ್ತವೆ.ಸೋತಾಗ ಉಕ್ಕಿ ಹರಿಯುತ್ತವೆ,ಗೆದ್ದಾಗಲೂ ಮಿನುಗುತ್ತವೆ.ವೀರರು ಇದನ್ನೇ ಧೈರ್ಯ ಎನ್ನುತ್ತಾರೆ,ಕವಿಗಳು ಇದನ್ನೇ ಅಲುಗದ, ಬೆದರದ ಬದುಕು ಎನ್ನುತ್ತಾರೆ! ತೆಲುಗು ಮೂಲ: ಆಶಾರಾಜುಕನ್ನಡ ಅನುವಾದ: ಕೋಡೀಹಳ್ಳಿ  ಮುರಳೀ ಮೋಹನ್

“ಮೇಣದ ಬತ್ತಿಯಂತೆ ಕರಗಬಲ್ಲೆ, ಬೆಳಗಬಲ್ಲೆ!” ತೆಲುಗು ಮೂಲ: ಆಶಾರಾಜು,ಕನ್ನಡ ಅನುವಾದ: ಕೋಡೀಹಳ್ಳಿ  ಮುರಳೀ ಮೋಹನ್ Read Post »

ಅನುವಾದ

“ಅಫ್ಟ್ರಾಲ್ ವಾಚ್ಮನ್” ತೆಲುಗು ಮೂಲ ಉಪ್ಪುಲ ಲಿಂಗಯ್ಯ ಕನ್ನಡಕ್ಕೆ ಧನಪಾಲ ನಾಗರಾಜಪ್ಪ

ಅನುವಾದ ಸಂಗಾತಿ ಅಫ್ಟ್ರಾಲ್ ವಾಚ್ಮನ್ ತೆಲುಗು : ಉಪ್ಪುಲ ಲಿಂಗಯ್ಯಕನ್ನಡಕ್ಕೆ : ಧನಪಾಲ ನಾಗರಾಜಪ್ಪಅ vಕೊರಿಯರ್ ಪಾರ್ಸಲ್ಮೇಲಕ್ಕೆ ತಂದುಕೊಡುಟಿಫನ್ ತಂದುಕೊಡುದಿನಸಿ ಸರಕುಗಳನ್ನು ತಂದುಕೊಡುಕನ್ನಡಕ ಮೇಲಿಟ್ಟು ಮರೆತಿರುವೆತೆಗೆದುಕೊಂಡು ಬಾಬಸ್ ನಿಲ್ದಾಣದ ಬಳಿ ಬಿಟ್ಟಿರುವಗಾಡಿಯನ್ನು ಹಾಕಿಕೊಂಡು ಬಾಇದನ್ನು ಒರೆಸು, ಅಲ್ಲಿಗೆ ಹೋಗು…ಒಮ್ಮೊಮ್ಮೆ ಒಂದೊಂದು ಕೆಲಸಒಮ್ಮೊಮ್ಮೆ ಒಂದೊಂದು ಗದರಿಕೆಪ್ರೀತಿಯಿಂದ ಹೇಳುವವರು ಕೆಲವರುಒದರುವಂತೆ ಹೇಳುವವರು ಕೆಲವರು ಡ್ಯೂಟಿ ಅಂತಾರೆಆದರೆ…ಇವೆಲ್ಲಾ ಡ್ಯೂಟಿಯನ್ನು ಮೀರಿದ ಕೆಲಸಗಳುಮಾಡಬೇಕನಿಸುತ್ತದೆಆಗಾಗ ಮಾಡಬಾರದನಿಸುತ್ತದೆಮೈಕೈ ನುಜ್ಜುಗುಜ್ಜಾಗುತ್ತದೆಜೀವ ದಣಿದು ಹೋಗುತ್ತದೆಹೇಳಿದ ರೀತಿಗೆ ಚುರುಕ್ ಅನ್ನುತ್ತದೆ“ಈಗ ಆಗುವುದಿಲ್ಲ ಸರ್ಗೇಟಿನ ಬಳಿ ಯಾರೂ ಇಲ್ಲ ಸರ್”ತಡಬಡಿಸುತ್ತ ನಾನು ಹೇಳಿದೊಡನೆಅವರು ಹೇಳುವರು…“ಅಫ್ಟ್ರಾಲ್ ವಾಚ್ಮನ್ನಮ್ಮ ಮಾತಿಗೇ ಎದುರು ಮಾತಾಡುವೆಯಾನಿನ್ನ ಕೆಲಸ ಕಿತ್ತುಹಾಕುವೆ” ಎಷ್ಟು ಸಲ ಎಷ್ಟೆಲ್ಲಾ ಮಾಡಿದೆನಲ್ಲಎಷ್ಟೋ ಸಲ ನಿದ್ದೆಯನ್ನೇ ತೊರೆದನಲ್ಲಇದೇನಿದು…ಒಂದು ಸಲ ಆಗುವುದಿಲ್ಲ ಎಂದರೆಅಫ್ಟ್ರಾಲ್ ವಾಚ್ಮನ್ ಆಗಿಬಿಡುವೆಎಲ್ಲರನ್ನೂ ಕಾಯುವ ನಾನು ಅಫ್ಟ್ರಾಲ್ ವಾಚ್ಮನ್ ಹೇಗಾಗುವೆ! ತೆಲುಗು : ಉಪ್ಪುಲ ಲಿಂಗಯ್ಯಕನ್ನಡಕ್ಕೆ : ಧನಪಾಲ ನಾಗರಾಜಪ್ಪ

“ಅಫ್ಟ್ರಾಲ್ ವಾಚ್ಮನ್” ತೆಲುಗು ಮೂಲ ಉಪ್ಪುಲ ಲಿಂಗಯ್ಯ ಕನ್ನಡಕ್ಕೆ ಧನಪಾಲ ನಾಗರಾಜಪ್ಪ Read Post »

ಅನುವಾದ

ಮಲಯಾಳಂ ಕವಿತೆ “ಒಂದು ನುಡಿ?”ಮೂಲ ತಾಜುದ್ದೀನ್‌ ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ.

ಅನುವಾದ ಸಂಗಾತಿ ಮಲಯಾಳಂ ಕವಿತೆ “ಒಂದು ನುಡಿ?” ಮೂಲ ತಾಜುದ್ದೀನ್‌ ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ. ಸಹ ಪ್ರಯಾಣಿಕನೇ…….,ಈ ತಿರುವಿನಲ್ಲಿಯೂಅಥವಾಮುಂದಿನ ತಿರುವಿನಲ್ಲಿಯೂನಾವು ಬೇರೆಯಾಗುತ್ತೇವೆ….!ನೀನು ಪುನಃಯಾತ್ರೆಯನ್ನು ಮುಂದುವರಿಸುವಾಗನನ್ನ  ‘ಶವಪೆಟ್ಟಿಗೆ ‘ಯನ್ನುಹೊತ್ತುಕೊಂಡು ಸಾಗಬೇಡಾ….!!!. ಯಾರದ್ದರೂನನ್ನ ಕುರಿತು ಕೇಳಿದ್ದರೇ…….,ನಾನುಜೊತೆಗೆ ಇದ್ದುನಷ್ಟವಾದ ದುರಾದೃಷ್ಟವಂತ….!ಬಾಳಿನಿಂದ ದೂರವಾದಪಾತ್ರದಾರ……ಎಂದು ಮಾತ್ರ ಹೇಳಬೇಕು….!‘ ದರಿದ್ರ’ನಾಗಿದ್ದೆ ಎಂದುಮಾತ್ರ ಹೇಳಬಾರದು…..!!! ನನ್ನ ನೋಟಗಳಲ್ಲಿಬರೆಯದೇ ಇದ್ದದ್ದುಓದಿದ್ದರೇ……ಅಳಿಸಿ ಹಾಕಲುನೀನು ‘ಅವಳ ‘ಬಳಿ ಹೇಳಬೇಕು….!!! ನಾನು ಒಂದು‘ಹೂವು’ ಸಹಕಿತ್ತು ಹಾಕಿಯೇಇಲ್ಲ….!!!. ಮಲಯಾಳಂ ಮೂಲ: ತಾಜುದ್ದೀನ್.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.                                 

ಮಲಯಾಳಂ ಕವಿತೆ “ಒಂದು ನುಡಿ?”ಮೂಲ ತಾಜುದ್ದೀನ್‌ ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ. Read Post »

ಅನುವಾದ, ಕಾವ್ಯಯಾನ

ಡಾ. ದೇವರಾಜು ಮಹಾರಾಜು ಅವರ ತೆಲುಗು ಕವಿತೆ”ಜಲಭಾಷೆ” ಕನ್ನಡಾನುವಾದ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ “ಜಲಭಾಷೆ” ತೆಲುಗು ಮೂಲ:ಡಾ. ದೇವರಾಜು ಮಹಾರಾಜು ಕನ್ನಡಾನುವಾದ ರಂಗನಾಥ ರಾಮಚಂದ್ರರಾವು ಕವನ ಒಂದು ಪ್ರತ್ಯೇಕ ಪರಿಭಾಷೆಅದು ಎಲ್ಲಾ ಭಾಷೆಗಳಿಗೂ ಬಗ್ಗುತ್ತದೆಎಲ್ಲಾ ಭಾಷೆಗಳನ್ನು ಬಗ್ಗಿಸಿಕೊಳ್ಳುತ್ತದೆತಲೆ ಬಗ್ಗಿಸಿದಂತೆ ಬಗ್ಗಿಸಿ, ಎಲ್ಲಾ ಪ್ರಕಾರಗಳನ್ನುತನ್ನ ರೆಕ್ಕೆಗಳ ಕೆಳಗೆ ಎಳೆದುಕೊಳ್ಳುತ್ತದೆಕಾಲದೊಂದಿಗೆ ಸಾಗುತ್ತಾಒಂದೊಂದು ಸಲ ಕಾಲವನ್ನೂ ದಾಟಿಹೋಗುತ್ತದೆಕವನ ಒಂದು ಜಲ ಭಾಷೆಅದು ಯಾವ ಪಾತ್ರೆಯಲ್ಲಾದರೂ ತುಂಬುತ್ತದೆ –ಒದಗುತ್ತದೆ ಕವನ ಒಂದು IDEOGRAMಅದು ಛಂದಸ್ಸಿನಲ್ಲಿ ಬದುಕುವುದೇಮಾತ್ರಾ ಛಂದಸ್ಸಿನಲ್ಲಿ ಬದುಕುವುದೇವಚನದಲ್ಲಿ ಬದುಕುತ್ತದೆ ಎಂಬ ಚರ್ಚೆಎಷ್ಟು ಅರ್ಥರಹಿತವೆಂದರೆ …ಜೀವವು ಯಾವ ರೀತಿಯ ಜೀವಿಯಾಗಿ ನಿಲ್ಲುತ್ತದೆಪ್ರಾಣಿಗಳು ಹುಟ್ಟುತ್ತವೆ, ಸಾಯುತ್ತವೆ , ಆದರೆ …ನಿರಂತರವಾಗಿ ಮುಂದುವರಿಯುವುದು ಜೀವಶಕ್ತಿ ಮಾತ್ರವೇ!ಪ್ರಕಾರಗಳೂ ಅಷ್ಟೇ !!ಅಂತರ್ಗತವಾಗಿ ಸಾಗುವುದು ಕವನಶಕ್ತಿ ಮಾತ್ರವೇ!ಅದೊಂದೇ ಕಾಲಕ್ಕೂ ಜೀವನಕ್ಕೂ ಮಾನವತೆಗೂತಳಮಟ್ಟದಲ್ಲಿ ಹರಿಯುವುದುಆಧಾರವಾಗಿ ಇರುತ್ತಿರುವುದುಕವನ ಒಂದು ಫ್ರತ್ಯೇಕ ಭಾಷೆಅದು ಎಲ್ಲಾ ಜೀವಿಗಳ ಜೀವ ಭಾಷೆಗಳಲ್ಲಿ ಪ್ರಕಟಗೊಳ್ಳುತ್ತದೆ ! ತೆಲುಗುಮೂಲ: ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು

ಡಾ. ದೇವರಾಜು ಮಹಾರಾಜು ಅವರ ತೆಲುಗು ಕವಿತೆ”ಜಲಭಾಷೆ” ಕನ್ನಡಾನುವಾದ ರಂಗನಾಥ ರಾಮಚಂದ್ರರಾವು Read Post »

You cannot copy content of this page

Scroll to Top