ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಹಾಂತೇಶ್.ಬಿ.ನಿಟ್ಟೂರು “ಯುದ್ಧ ಅಂದ್ರೆ ಸುಮ್ನೆ ಏನು?”

ಕಾವ್ಯಸಂಗಾತಿ ಮಹಾಂತೇಶ್.ಬಿ.ನಿಟ್ಟೂರು “ಯುದ್ಧ ಅಂದ್ರೆ ಸುಮ್ನೆ ಏನು?” ಪ್ರತಿಷ್ಠೆಗಾಗಿ ಪಣಬಲಾಬಲಕ್ಕಾಗಿ ಬಣ;ಹೊಡೆದಾಡಿ ಬಡಿದಾಡಿಒಂದಿವಸ ರಣಾಂಗಣದಲ್ಲಿಹೆಂಗೆಂಗೋ ಬಿದ್ದ ಹೆಣ ಗೆಲ್ಲಲೇಬೇಕು ಎಂದವನಿಗೆ ಸೋಲುಸೋತು ಸುಣ್ಣವಾಗಿ ನೆಲಕ್ಕೆಬೀಳುವಾಗ ಅದೃಷ್ಟವಶಾತ್ ಗೆಲುವು;ಇವೆರಡೂ ನಾಣ್ಯದ ಎರಡು ಮುಖಗಳುಕಂಡೂ ಕಾಣದಂತೆ ಕಳಚಿಬೀಳುತ್ತಿವೆ ಮುಖವಾಡಗಳು ಇತಿಹಾಸದ ಹಾಸುಗಲ್ಲಿನ ಮೇಲೆಬಿದ್ದ ರಕ್ತದ ಕಲೆ ಇನ್ನೂ ಒಣಗಿಲ್ಲ ಭೂಮಿಯನ್ನು ಹತ್ತಾರುಪಟ್ಟು ಸುಡುವಷ್ಟುಮದ್ದು ಗುಂಡು ಬಾಂಬುಗಳಸುಧಾರಿತ ಹೊಸ ತಳಿಗಳು;ವಿಜ್ಞಾನದ ಬಳುವಳಿಗಳು ಆರಂಭದ ಹೊರತು ಅಂತ್ಯಅರಿಯದು ಯುದ್ಧೋನ್ಮಾದ ಸೂರ್ಯೋದಯ, ಚಂದ್ರೋದಯಕ್ಕೆಪರಮಾಶ್ಚರ್ಯ; ನಿನ್ನೆ ಕಂಡ ಬೃಹತ್ಕಟ್ಟಡಗಳು ಇಂದು ನೆಲಸಮಕಾಡು, ಪ್ರಾಣಿ, ಪಕ್ಷಿ ಸಂಕುಲ ಸುಟ್ಟು ಭಸ್ಮ ಸರ್ವನಾಶದ ಕಿಚ್ಚು ಹೊತ್ತಿನರಕದ ಹೆಬ್ಬಾಗಿಲು ತೆರೆಯುತ್ತಿರುವಾಗನಾಳೆ ಮತ್ತೇನೋ…ಮತ್ತಿನ್ನೇನೋ… ಯುದ್ಧ ಅಂದ್ರೆ ಸುಮ್ನೆ ಏನು!? ಮಹಾಂತೇಶ್.ಬಿ.ನಿಟ್ಟೂರು,        

ಮಹಾಂತೇಶ್.ಬಿ.ನಿಟ್ಟೂರು “ಯುದ್ಧ ಅಂದ್ರೆ ಸುಮ್ನೆ ಏನು?” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ” ಕಾವ್ಯ ದಿನ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಕಾವ್ಯ ದಿನ” ಕಾವ್ಯ ಬರೆಯಲುಸ್ಪೂರ್ತಿಯಾದ ನಿಮಗೆಅಭಿನಂದನೆಗಳುಶುಭಾಶಯ ನನ್ನಅನಂತ ನಮನಗಳು // ನನ್ನ ಕಾವ್ಯಬರೆಯಲುಹುರಿದುಂಬಿಸಿಓದುವ ಕವಿಮನಗಳಿಗೆಲ್ಲಶುಭಾಶಯಶುಭಕಾಮನೆಗಳು // ಕಾವ್ಯ ಬರೆದಕವನ ಸಂಕಲನಪುಸ್ತಕ ಬಿಡುಗಡೆಮಾಡಿದ ಗಣ್ಯರಿಗೆಶುಭಾಶಯಶುಭ ನಮನಗಳು // ಕಾವ್ಯ ಬರೆಯುತ್ತಿರುವಕನ್ನಡ ನಾಡಿನಎಲ್ಲ ಕವಿಗಳಿಗೆಶುಭಾಶಯ ನಿಮಗೆಶುಭ ಹಾರೈಕೆಗಳು // ಮನದ ಭಾವನೆಗಳನ್ನುಕವನದ ರೂಪದಲ್ಲಿಹೊರ ತರುವಎಲ್ಲ ಹೃದಯಗಳಿಗೆಅನಂತ ಧನ್ಯವಾದಗಳು// ಇಂದು ವಿಶ್ವ ಕಾವ್ಯದಿನ ವರುಷವೆಲ್ಲವಿಶ್ವದ ತುಂಬೆಲ್ಲಪ್ರಜ್ವಲಿಸಿ ಪಸರಿಸಲಿಕಾವ್ಯ ಸುಧೆ  ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ” ಕಾವ್ಯ ದಿನ” Read Post »

ಕಾವ್ಯಯಾನ, ಗಝಲ್

ಕಲ್ಪನಾ ಎಸ್ ಪಾಟೀಲ ಅವರ ಗಜಲ್

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ ಗಜಲ್ ಜಗಕೆಲ್ಲ ತಿಳಿಸಿ ಹೇಳಲೆಬೇಕಿಲ್ಲ ಸಖಈ ಬದುಕು ನಮಗಾಗಿಯೇ ನಲ್ಲ ಜಗದಗೊಡವೆ ಏತಕೆ ಹೇಳು ನಲ್ಲಆಗದಿರಲಿ ನಿನ್ನಮನ ಗೊಂದಲದ ಗೂಡು ಕೊರಳ ಬಳಸಿ ಕಿವಿಯಲುಸಿರಿಲು ನೀನಾ ಎದೆಗೆ ಒರಗಿ ನಾಚಿದ ಆ ದಿನಗಳು ಆಣೆಯನೊಂದು ನೀ ಮಾಡಿದೆ ನಲ್ಲಹಕ್ಕಿಗೂಡು ಸಾಕ್ಷಿಯಾಗಿದೆ ಸಾಕಲ್ಲ ಕಾವ್ಯಧರೆ ಪ್ರಮಾಣಗಳನೆಂದು ನಂಬಿಲ್ಲನಿನ್ನನೇ ನಂಬಿಹಳು ನಿನಗೇಕೆ ತಿಳಿದಿಲ್ಲ ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಅವರ ಹೊಸ ಗಜಲ್‌

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್‌ ಹೆಣ್ಣಾಗಿ ಹುಟ್ಟಿಸು ಅಂತ ನಿನ್ನಲ್ಲೇನು ನಾನು ಮನ್ನತ್ ಮಾಡಿರಲಿಲ್ಲಎಲ್ಲರಂತೆ ಬದುಕಬಲ್ಲೆ, ಸುಖದಿಂದ ಬಾಳಲು ಜನ್ನತ್ ಬೇಡಿರಲಿಲ್ಲ ನಾನೇನು ಗುನಾ ಮಾಡಿದಿನೋ ಈ ದುರಾದೃಷ್ಟ ಸ್ಥಾನ ನೀಡಿರುವೆಪ್ರಾಣಿಯಾಗಿ ಹುಟ್ಟಿಸಬಹುದಿತ್ತು ಮನುಜನ ಶೌರತ್ ಅರಸಿರಲಿಲ್ಲ ಹೆಣ್ಣಿನ ಘನತೆ ಗೌರವ ಕಾಪಾಡುವ ಸುಂದರ ಸಮಾಜವಿರಬೇಕುಸಮಬಾಳು ನೀಡೆಂದೆನೇ ಹೊರತು ಸುಖದ ಸೌಲತ್ ಬಯಸಿರಲಿಲ್ಲ ಹೆಂಗರುಳಿನಲಿ ಪೋಣಿಸಿ ನಯ ನೆರಳಿನ ಸೂರಿನಡಿ ಇಡು ನನ್ನಮಾ ಬೆಹೆನ್ ಬಹು ಬೇಟಿಯಾಗಿ ನೋವಿರದ ನೌಲತ್ ನಡೆಸಿರಲಿಲ್ಲ ನೀ ಸೃಷ್ಟಿಸಿದ ಕರಾಮತ್ ನಲಿ ಜ್ಯೋತಿಗೆ ಔರತ್ ಸ್ಥಾನ ಸಿಕ್ಕಿದೆಸಾರ್ಥಕ ಸಾವೊಂದು ಸಾಕು ಇದಕ್ಕಿಂತ ದೊಡ್ಡ ದೌಲತ್ ಕೇಳಿರಲಿಲ್ಲ ಮನ್ನತ್ = ಹರಕೆಜನ್ನತ್ = ಸ್ವರ್ಗಶೌರತ್ = ಕೀರ್ತಿಸೌಲತ್ = ಸೌಲಭ್ಯನೌಲತ್ =ಶ್ರೇಷ್ಠ ಬದುಕುಔರತ್ = ಸ್ತ್ರೀದೌಲತ್ = ಶ್ರೀಮಂತಿಕೆಮಾ = ತಾಯಿಬಹೆನ್ = ಸಹೋದರಿಬೇಟಿ = ಮಗಳುಬಹು = ಸೊಸೆಕರಾಮತ್ = ಕೈಚಳಕಗಲತಿ = ತಪ್ಪುಗುನಾ= ಪಾಪ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಅವರ ಹೊಸ ಗಜಲ್‌ Read Post »

ಕಾವ್ಯಯಾನ

ವಾಣಿ ಶಿವಕುಮಾರ್ ಅವರ ಕವಿತೆ “ಮನದ ಮಿಡಿತ”

ಕಾವ್ಯ ಸಂಗಾತಿ ವಾಣಿ ಶಿವಕುಮಾರ್ “ಮನದ ಮಿಡಿತ” ಅಂದು ನೀನು ನನಗೆ ಆಗಂತುಕ..ಆದರಿಂದು ನೀನೇ ನನ್ನ ಸಖ..ಮನ ಬಯಸಿತು ನಿನ್ನ ಸನಿಹ..ಯಾರನ್ನೂ ನೋಡಿಲ್ಲ ನಿನ್ನ ವಿನಃ.. ಪ್ರೀತಿಯ ಜೇನು ಜಿನುಗುತಿದೆ ನನ್ನಲ್ಲಿ,.ನಿನ್ನ ರೂಪವೇ ಅಚ್ಚತ್ತಿದೆ ಹೃದಯದಲ್ಲಿ..ಸೋನೆ ಹನಿ ನಿನ್ನನ್ನು ನೆನಪಿಸಿದೆ..ಮನದ ಅಂತಪುರ ನಿನಗಾಗಿ ಕಾದಿದೆ.. ಗರಿ ತೆರೆದ ನವಿಲಿನಂತೆ ನರ್ತಿಸುತ್ತಿರುವೆ..ಒಂದಾಗಿ ಪ್ರೀತಿಯ ತಾಳವನ್ನು ಹಾಕಲು..ನಾಲ್ಕು ಕೈಗಳು ಒಂದಾಗಿ ಶ್ರುತಿ ಮೀಟಿದರೆ..ನಾದವಾಗಿ ಹೊಮ್ಮುತ್ತದೆರಸಧಾರೆ ಹರಿಯುತ್ತಿರೆ.. ಒಲವಿನ ಬೆಳಕು ಅನುರಾಗವನ್ನು ಚೆಲ್ಲಿದೆ..ಮನದಲಿ ಮೈನ ಹಾಡಿ ಬಾವವ ತುಂಬಿದೆ..ಚೂಪಾದ ನಯನಗಳು ಸಲ್ಲಾಪಕ್ಕೆ ಕರೆದಿದೆ..ಸದ್ದಿಲ್ಲದೆ ಬಂದು ನನ್ನನ್ನು ಆವರಿಸಿದೆ.. ವಾಣಿ ಶಿವಕುಮಾರ್

ವಾಣಿ ಶಿವಕುಮಾರ್ ಅವರ ಕವಿತೆ “ಮನದ ಮಿಡಿತ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಧಾರವಾಡ ಅವರದೊಂದು ಯುದ್ದದ ಕವಿತೆ “ರಕ್ತದ ಮಳೆ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ “ರಕ್ತದ ಮಳೆ” ಮಳೆ ಸುರಿಯಬೇಕಾದಆಕಾಶದಿಂದ ಇಂದುಸುರಿಯುತ್ತದೆ ರಕ್ತದ ಹನಿ,ಮಕ್ಕಳ ನಗು ಕೇಳಬೇಕಾದಬೀದಿಯಲ್ಲಿ, ಗುಂಡಿನ ಸದ್ದು ಧ್ವನಿ. ಅಮ್ಮನ ಮಡಿಲು ಇರಬೇಕಾದಜಾಗದಲ್ಲಿ ಬೂದಿಯಾಗಿದೆಕನಸಿನ ಮನೆ,ಬಾಲಕನ ಕೈಯಲ್ಲಿ ಪುಸ್ತಕ   ಹಿಡಿದಿದೆ ಭಯದ ಕರಿ ನೆರಳು ಯಾವ ಧರ್ಮ? ಯಾವ ದೇಶ?ಯಾರಿಗಾಗಿ ಈ ಹೊತ್ತಿಉರಿಯುವ  ಉರಿ ಬೆಂಕಿ?ಹೆಸರಿಲ್ಲದ ಶವಗಳ ಸಾಲಿನಲ್ಲಿಮಾನವೀಯತೆ ನಿಂತಿದೆ ಮಂಕಾಗಿ ಇಲ್ಲಿ ಗಾಳಿಯೇ ಕೇಳುತ್ತದೆ ಮೌನವಾಗಿಸಹೋದರತೆ ಸತ್ತು ಹೋಗಿದೆಭೂಮಿಯೇ ಅಳುತ್ತದೆ ಕಣ್ಣೀರಾಗಿ,“ನಿನ್ನ ಹೆಜ್ಜೆಗೆ ಕೆಂಪಾದ ಗಾಯ ಇದು?” ನಕ್ಷತ್ರಗಳು ಕೂಡ  ಮಾಯವಾಗಿವೆ,ಅವುಗಳ ಹೊಳಪು ಕಣ್ಣೀರಿಗೆ ಕರಗಿದೆ,ಶಾಂತಿಯ ಹಕ್ಕಿ ಹಾರಲು ಹೆದರುತ್ತಿದೆಹಕ್ಕಿಯ ರೆಕ್ಕೆಗೂ ಹೊಗೆ ತಗಲಿದೆ. ಬೂದಿಯಿಂದ   ನೋವು  ಕೂಗುತ್ತಿದೆಕತ್ತಲಿನ ನಡುವೆ ಬೆಂಕಿ ಚಿಮ್ಮುತ್ತಿದೆರಕ್ತದ ಮಳೆಯನ್ನೇ ಹೊಳೆಯಂತೆ ಮಳೆಯಾಗಿ ಹರಿಯುತ್ತಿದೆ ಕೈ ಹಿಡಿದು ಕಣ್ಣೀರ  ಒರೆಸಲೂಯಾರಿಲ್ಲ ಇಲ್ಲಿಮಾನವೀಯತೆಯನ್ನು ಮತ್ತೊಮ್ಮೆ ಜೀವಂತಗೊಳಿಸಲು ಸಾಧ್ಯವೇ??????? ಮಮತೆ ಕರುಣೆ ಕರಗಿಸತ್ತುಹೋಗಿದೆ.ಅಮಾಯಕ ಜೀವಗಳಬಲಿ ಏರುತ್ತಿದೆಯುದ್ಧ ಬೇಕಿತ್ತಾ??ಪರಿಣಾಮ ಘನಘೋರ ,, ಮರಗುತ್ತದೆ ಮನಕೊರಗುತ್ತದೆ ಜೀವ…. ಡಾ ತಾರಾ ಬಿ ಎನ್ ಧಾರವಾಡ

ಡಾ ತಾರಾ ಬಿ ಎನ್ ಧಾರವಾಡ ಅವರದೊಂದು ಯುದ್ದದ ಕವಿತೆ “ರಕ್ತದ ಮಳೆ” Read Post »

ಕಾವ್ಯಯಾನ

ಎನ್. ಜಯಚಂದ್ರನ್ ದಾಂಡೇಲಿ ಅವರಕವಿತೆ “ಮುಖವಾಡದ ಅಕ್ಷರ ಭಕ್ಷಕ”

ಕಾವ್ಯ ಸಂಗಾತಿ ಎನ್. ಜಯಚಂದ್ರನ್ ದಾಂಡೇಲಿ “ಮುಖವಾಡದ ಅಕ್ಷರ ಭಕ್ಷಕ” ಪದಗಳ ಹಬ್ಬವನ್ನು ಆಚರಿಸುವಂತೆಮುಖದಲ್ಲಿ ಮೃದು ನಗು ಮೂಡಿಸಿದ  ಅಕ್ಷರ ಭಕ್ಷಕನಿವನು ಅಂತರಂಗದ ಕತ್ತಲಲ್ಲಿಕಪಟದ ಬೀಜಗಳನ್ನು  ಬಿತ್ತಿದವನು. ಕವಿಗಳ ನಡುವೆ ಕವಿಯಂತೆ ನಿಂತುಸುಳ್ಳಿನ  ಧ್ವನಿಯನ್ನು ಸತ್ಯದಂತೆ ಹೊಗಳಿದವನು  ಒಳಗೊಳಗೆಸ್ವಾರ್ಥದ ಮನೆಗೆ ದೀಪ ಹಚ್ಚಿಕೊಂಡವನು . ಸಾಹಿತ್ಯದ ವೇದಿಕೆಯನ್ನುಸತ್ಯದ ಮಂಟಪವೆಂದು ನಟಿಸುತ್ತಾ ವೇದಿಕೆಯಲ್ಲಿಮೋಸದ ನರ್ತನ  ಮಾಡಿದವನು. ಪದಗಳ ಮಧುರತೆಯ ಹಿಂದೆವಂಚನೆ ,ದರ್ಪ ವಿಷವನ್ನು ಮರೆಮಾಡಿ,ಪರರ ಪ್ರತಿಭೆಯ ನೆರಳಲ್ಲಿತನ್ನ ಹೆಸರಿನ ಗೂಟವನ್ನುತನ್ನ ಸುತ್ತಲಿದ್ದವರಿಗೆ ಜಡಿದವನು ಸಾಹಿತ್ಯದ ತೇರಲ್ಲಿಮನೆಯ ಜೋಳಿಗೆ ತುಂಬಿ ಕೊಂಡವನು,  ಅಕ್ಷರ ಉದ್ಧಾರದ  ಹೆಸರಲ್ಲಿ ಸ್ವಂತ ಜಾತ್ರಿ ಮಾಡಿಕೊಂಡವನು ಪದಗಳ ಪಗಡೆಯನ್ನೇರಾಜಕೀಯದ ಚದುರಂಗ ಮಾಡಿದವನು. ಒಂದು ದಿನ ಸತ್ಯದ ಸೂರ್ಯಮುಖವಾಡಗಳನ್ನೆಲ್ಲ ಕರಗಿಸಿದಾಗ, ಸಾಹಿತ್ಯದ  ಮಂದಿರದಲ್ಲಿ  ಒಂದುಕಪಟತನ ಕಳಚಿದಾಗ  , ಬೆತ್ತಲಾಗಲು ಸಜ್ಜಾದವನು !! ಅಂಥದೊಂದು ದಿನಅಕ್ಷರ  ಆಲಯದಲ್ಲಿನಿಜವಾದ ಮನಸ್ಸುಗಳುಹೊಸ ಕಾವ್ಯವಾಗಿ  ಬೆಳಗುವವು. ಎನ್. ಜಯಚಂದ್ರನ್ .ದಾಂಡೇಲಿ

ಎನ್. ಜಯಚಂದ್ರನ್ ದಾಂಡೇಲಿ ಅವರಕವಿತೆ “ಮುಖವಾಡದ ಅಕ್ಷರ ಭಕ್ಷಕ” Read Post »

ಕಾವ್ಯಯಾನ

“ಅವಳಿಗೆ ಚಿನ್ನದ ಚಿಂತೆ ನನಗೆ ಪೆಟ್ರೋಲ್”‌ ಕವಿತೆ ಗೊರೂರು ಅನಂತರಾಜು

ಕಾವ್ಯ ಸಂಗಾತಿ ಗೊರೂರು ಅನಂತರಾಜು “ಅವಳಿಗೆ ಚಿನ್ನದ ಚಿಂತೆ ನನಗೆ ಪೆಟ್ರೋಲ್”‌ ನನ್ನವಳಿಗೆ ಗಡದ್ದು ನಿದ್ದೆನನಗೆ ದುಗುಡ ಸುದ್ದಿಇರಾನ್ ಇಸ್ರೇಲ್ ಅಮೇರಿಕಾ ದೇಶಗಳ ಕದನಬಾಂಬ್ ಸುರಿಮಳೆಯ ಸದ್ದುದಿನನಿತ್ಯದ ವಾರ್ ಗಿತ್ತಿಯರ ಧಾರಾವಾಹಿ ನೋಡಿ ಮಡದಿ ಕಣ್ತುಂಬಿ ಮಲಗಿದ್ದಾಳೆನನಗೆ ತಡೆಯಲಾಗದೆ ತಿವಿದೆಬ್ಬಿಸಿ ಕೇಳಿದೆಮಧ್ಯಪ್ರಾಚ್ಯದ ಯುದ್ದದ ಪರಿಣಾಮ ಗೊತ್ತೇನೇಥೂ ಮಧ್ಯದ ವಾಸನೆ ಆ ಕಡೆ ತಿರುಗಿ ಮಲಗಿಗಬ್ಬುನಾಥ ಹೇ ವಿಶ್ವನಾಥಮಂಪರು ನಿದ್ರೆಯಲ್ಲೂ ದೇವರ ನೆನೆದಳುನನ್ನಾಕೆ ಪತ್ರಿಕೆ ಓದುವವಳಲ್ಲಅವಳದೇ ಗೋಳಿನ ನಡುವೆಟಿವಿ ಧಾರಾವಾಹಿ ನೋಡುತ್ತಾಳೆನೋಡ್ರೀ ಅದೆಂತಹ ಕೆಟ್ಟ ಸೊಸೆಅತ್ತೇನೇ ಮನೆಯಿಂದ ಆಚೆಗೆ ಹಾಕಿದ್ದಾಳೆ ತಾಟಗಿತ್ತಿಈಗೇನು ನಾನು ಆಚೆಗೆ ಹೋಗಲೇರೀ, ಬೆಳಿಗ್ಗೆ ದೋಸೆ ಉಯ್ಯಲು ಒಳ್ಳೆಣ್ಣಿ ಇಲ್ಲಒಳ್ಳೆ ಸಮಯ ನೋಡಿ ಬೇಡಿಕೆ ಇಡುತ್ತಾಳೆನನಗೆ ನಾಳೆಗೆ ಗಾಡಿಗೆ ಪೆಟ್ರೋಲ್ ಚಿಂತೆಅಲ್ಲಿ ಯುದ್ದ ನೆಡೆದರೆ ಇಲ್ಲಿ ಬೆಲೆ ಏರಿಕೆಚಿನ್ನದ ಬೆಲೆ ಗಗನಕ್ಕೆ ಏರಿದೆಅವಳ ಸರ ಸವೆದಿದೆಯಂತೆಅದನ್ನು ಮುರಿಸಿ ಗಟ್ಟಿದು ಮಾಡಿಸಿಕೊಡಿ ಎಂದು ನಿತ್ಯ ಪೀಡಿಸುತ್ತಿದ್ದಾಳೆಯುದ್ದ ಮುಗಿಯಲಿ ತಡಿ ಚಿನ್ನ ಎನ್ನುತ್ತಿದ್ದೇನೆಅಡಿಗೆ ಗ್ಯಾಸ್ ಬೆಲೆ ಏರಿದೆಕೊಟ್ಟುಬಿಡಿ ನೋಬಲ್ ಪ್ರೈಜ್ ಟ್ರಂಪಿಗೆ ಗೊರೂರು ಅನಂತರಾಜು

“ಅವಳಿಗೆ ಚಿನ್ನದ ಚಿಂತೆ ನನಗೆ ಪೆಟ್ರೋಲ್”‌ ಕವಿತೆ ಗೊರೂರು ಅನಂತರಾಜು Read Post »

ಕಾವ್ಯಯಾನ

ಡಾ.ಕಾಡಜ್ಜಿ ಮಂಜುನಾಥ ಕವಿತೆ “ಯಜಮಾನಿಕೆಯ ಅಟ್ಟಹಾಸ….!!!!”

ಕಾವ್ಯ ಸಂಗಾತಿ ಡಾ.ಕಾಡಜ್ಜಿ ಮಂಜುನಾಥ “ಯಜಮಾನಿಕೆಯ ಅಟ್ಟಹಾಸ….!!!!” pic:chat gpt ವಸಾಹತುಷಾಹಿ ಮನಕೆಹೆಣ್ಣು ಹೊನ್ನು ಮಣ್ಣನುಬೆದರಿಕೆಯ ಕಪಿಮುಷ್ಠಿಯಲಿಪಡೆಯುವಬಯಕೆ…!!!! ಯಜಮಾನಿಕೆಯ ಎದೆಗೆಬಂದೂಕಿನಲಿಗುಲಾಮಗಿರಿಯಮೊಳಗಿಸಿಸರ್ವಾಧಿಕಾರಿ ಮೃಗಗಳದಹಿಸುವಕನವರಿಕೆ…!!!!  ಮುಗ್ದರ ಉಸಿರು ನಿಲ್ಲಿಸುವರಾಕ್ಷಸರಿಗೆತೈಲದ ಏಕಸ್ವಾಮ್ಯದಸಾಮ್ರಾಜ್ಯವಸ್ಥಾಪಿಸಿಜಗತ್ತನ್ನಾಳುವಹೆಬ್ಬಯಕೆ….!!!! ಮನುಷ್ಯತ್ವವಮಣ್ಣು ಮಾಡಿಮಾನವೀಯತೆಯರಕ್ತವನು ಹೀರಿಬಂಡವಾಳಶಾಹಿಯಕತ್ತಿಯಲಿಪರರ ಭೂಮಿಯನ್ನುಆಕ್ರಮಿಸುವಕನಲಿಕೆ….!!!! ಮುಗ್ದ ಜೀವಗಳಉಸಿರು ನಿಲ್ಲಿಸಿದಮೃಗವು ಕೂಡಕೊನೆಯಲ್ಲಿ ಉಸಿರುಚೆಲ್ಲಿಶವವಾಗಿ ಬಿಳುವೆನೆಂಬಸಹಜ ಜ್ಞಾನವುಆಸರ್ವಾಧಿಕಾರಿಮೃಗಕೆ ಇಲ್ಲದಿರುವುದುವಿಪರ್ಯಾಸ;ಕಾಲನ ಕರೆಗೆತಪ್ಪಿಸಿಕೊಳ್ಳಲಾಗಲ್ಲಆ ದೃಷ್ಟಅಧ್ಯಕ್ಷ …!! ಡಾ.ಕಾಡಜ್ಜಿ ಮಂಜುನಾಥ

ಡಾ.ಕಾಡಜ್ಜಿ ಮಂಜುನಾಥ ಕವಿತೆ “ಯಜಮಾನಿಕೆಯ ಅಟ್ಟಹಾಸ….!!!!” Read Post »

ಕಾವ್ಯಯಾನ, ಗಝಲ್

ಅಶ್ಫಾಕ್ ಪೀರಜಾದೆ ಕವಿತೆ “ಮನದ ಕಣಿವೆಯಲಿ…”

ಕಾವ್ಯ ಸಂಗಾತಿ ಅಶ್ಫಾಕ್ ಪೀರಜಾದೆ “ಮನದ ಕಣಿವೆಯಲಿ…” ರೆಪ್ಪೆ ಮುಚ್ಚಿದ ಕ್ಷಣಜಗತ್ತು ಕತ್ತಲಾಯಿತು ನಿಜ,ಅಂತರಂಗದ ಕಿಟಕಿಗಳೆಲ್ಲತೆರೆದುಕೊಂಡರೂ ಒಳಗೆಬಾರದ ಗಾಳಿ ಬೆಳಕು ​ಧ್ಯಾನದ ಆಳಕ್ಕೆ ಇಳಿದಷ್ಟುಮೌನದ ಪದರಗಳು ಕಳಚಿ ಬಿದ್ದವುಗುಲಾಬಿ ಹೂವಿನ ಎಸಳುಗಳಂತೆ ಕಣ್ಣೆದುರು ಈಗ ಶೂನ್ಯಮುಡುಗಟ್ಟಿದ ನೋವು ಹತಾಶೆಕೈಜಾರಿ ಹೋದ ಕಾಲದ ಹೆಜ್ಜೆ ಗುರುತುಗಳು ​ಒಂದೊಂದು ನೆನಪೂಒಂದೊಂದು ನಿಟ್ಟುಸಿರು,ಮನದ ಕಣಿವೆಯಲಿಈಗ ಗತಕಾಲದ ಆರ್ತನಾದ. ಅಶ್ಫಾಕ್ ಪೀರಜಾದೆ

ಅಶ್ಫಾಕ್ ಪೀರಜಾದೆ ಕವಿತೆ “ಮನದ ಕಣಿವೆಯಲಿ…” Read Post »

You cannot copy content of this page

Scroll to Top