ಮಹಾಂತೇಶ್.ಬಿ.ನಿಟ್ಟೂರು “ಯುದ್ಧ ಅಂದ್ರೆ ಸುಮ್ನೆ ಏನು?”
ಕಾವ್ಯಸಂಗಾತಿ ಮಹಾಂತೇಶ್.ಬಿ.ನಿಟ್ಟೂರು “ಯುದ್ಧ ಅಂದ್ರೆ ಸುಮ್ನೆ ಏನು?” ಪ್ರತಿಷ್ಠೆಗಾಗಿ ಪಣಬಲಾಬಲಕ್ಕಾಗಿ ಬಣ;ಹೊಡೆದಾಡಿ ಬಡಿದಾಡಿಒಂದಿವಸ ರಣಾಂಗಣದಲ್ಲಿಹೆಂಗೆಂಗೋ ಬಿದ್ದ ಹೆಣ ಗೆಲ್ಲಲೇಬೇಕು ಎಂದವನಿಗೆ ಸೋಲುಸೋತು ಸುಣ್ಣವಾಗಿ ನೆಲಕ್ಕೆಬೀಳುವಾಗ ಅದೃಷ್ಟವಶಾತ್ ಗೆಲುವು;ಇವೆರಡೂ ನಾಣ್ಯದ ಎರಡು ಮುಖಗಳುಕಂಡೂ ಕಾಣದಂತೆ ಕಳಚಿಬೀಳುತ್ತಿವೆ ಮುಖವಾಡಗಳು ಇತಿಹಾಸದ ಹಾಸುಗಲ್ಲಿನ ಮೇಲೆಬಿದ್ದ ರಕ್ತದ ಕಲೆ ಇನ್ನೂ ಒಣಗಿಲ್ಲ ಭೂಮಿಯನ್ನು ಹತ್ತಾರುಪಟ್ಟು ಸುಡುವಷ್ಟುಮದ್ದು ಗುಂಡು ಬಾಂಬುಗಳಸುಧಾರಿತ ಹೊಸ ತಳಿಗಳು;ವಿಜ್ಞಾನದ ಬಳುವಳಿಗಳು ಆರಂಭದ ಹೊರತು ಅಂತ್ಯಅರಿಯದು ಯುದ್ಧೋನ್ಮಾದ ಸೂರ್ಯೋದಯ, ಚಂದ್ರೋದಯಕ್ಕೆಪರಮಾಶ್ಚರ್ಯ; ನಿನ್ನೆ ಕಂಡ ಬೃಹತ್ಕಟ್ಟಡಗಳು ಇಂದು ನೆಲಸಮಕಾಡು, ಪ್ರಾಣಿ, ಪಕ್ಷಿ ಸಂಕುಲ ಸುಟ್ಟು ಭಸ್ಮ ಸರ್ವನಾಶದ ಕಿಚ್ಚು ಹೊತ್ತಿನರಕದ ಹೆಬ್ಬಾಗಿಲು ತೆರೆಯುತ್ತಿರುವಾಗನಾಳೆ ಮತ್ತೇನೋ…ಮತ್ತಿನ್ನೇನೋ… ಯುದ್ಧ ಅಂದ್ರೆ ಸುಮ್ನೆ ಏನು!? ಮಹಾಂತೇಶ್.ಬಿ.ನಿಟ್ಟೂರು,
ಮಹಾಂತೇಶ್.ಬಿ.ನಿಟ್ಟೂರು “ಯುದ್ಧ ಅಂದ್ರೆ ಸುಮ್ನೆ ಏನು?” Read Post »









