ಕೆ.ಬಿ.ವೀರಲಿಂಗನಗೌಡ್ರ ಅವರ ಕವಿತೆ “ಜಮಾ-ಖರ್ಚು”
ಕಾವ್ಯ ಸಂಗಾತಿ ಕೆ.ಬಿ.ವೀರಲಿಂಗನಗೌಡ್ರ ಅವರ “ಜಮಾ-ಖರ್ಚು” ಅವರುನನ್ನನ್ನು ಕಳೆದುಕೊಂಡರುಕಳೆದುಕೊಳ್ಳುವ ನಡಾವಳಿಯನ್ನುಹಿಂದಿನ ರಾತ್ರಿಯೇ ಬರೆದುಕೊಂಡಿದ್ದರುಬೆಳಗು ನನ್ನ ಪಾಲಿಗಷ್ಟೇ ಕಾರ್ಗತ್ತಲಾಗಿತ್ತು ಅವರುನಾಯಿಯಂತೆಬಾಲ ಅಲ್ಲಾಡಿಸಿಕೊಂಡುಬಾಗಿಲಿಗೆ ಬಂದು ನಿಂತೇ ನಿಲ್ತಾನೆನಾವು ಕಳೆದರೂ ಅವ ಕೂಡ್ತಾನೆಂದು ನಡಾವಳಿ ದಿನವೇ ಲೆಕ್ಕಾಚಾರವಾಗಿತ್ತಂತೆ ಅವರುಆಲಯದಿಂದ ದಬ್ಬಿದರುಬಯಲಲಿ ಅಣ್ಣ ಅಕ್ಕ ತಬ್ಬಿದರುತಬ್ಬಲಿತನ ನನಗಂತೂ ಕಾಡಲಿಲ್ಲಕಾಡು ಕಡಲು ಹಾಡು ಸಂತೈಸಿದವು ಅವರುಕಳೆದುಕೊಳ್ಳದಿದ್ದರೆಕೂಡಿಕೊಳ್ಳುವ ಪ್ರೀತಿಯನ್ನುಅಕ್ಷರಶಃ ನಾನು ಅನುಭವಿಸುತ್ತಿರಲಿಲ್ಲಬುದ್ಧ ಬಸವರು ಅರ್ಥವೂ ಆಗತಿರಲಿಲ್ಲ ಇಷ್ಟೇಅವರುಬುದ್ಧಿವಂತರುನನ್ನನ್ನು ಕಳೆದುಕೊಳ್ಳಲುತುಂಬಾ ಬುದ್ಧಿ ಖರ್ಚು ಮಾಡಿದ್ದಾರೆದೇವರು ಅವರಿಗೆ ಅಷ್ಟೂ ಜಮೆ ಮಾಡಲಿನನ್ನಂತಹವರನ್ನು ಮತ್ತೆ ಮತ್ತೆ ಕಳೆದುಕೊಳ್ಳಲಿ. ಕೆ.ಬಿ.ವೀರಲಿಂಗನಗೌಡ್ರ.
ಕೆ.ಬಿ.ವೀರಲಿಂಗನಗೌಡ್ರ ಅವರ ಕವಿತೆ “ಜಮಾ-ಖರ್ಚು” Read Post »









