“ಕಟ್ಟಬೇಕಿದೆ ನಾಡೊಂದನು” ಬಸವರಾಜ್ ಚೌಡ್ಕಿ
ಕಾವ್ಯ ಸಂಗಾತಿ “ಕಟ್ಟಬೇಕಿದೆ ನಾಡೊಂದನು” ಬಸವರಾಜ್ ಚೌಡ್ಕಿ ಕಟ್ಟಬೇಕಿದೆ ನಾವು ನಾಡೊಂದನಸರಿ ಸಮಾನತೆಯ ಬಿಡೊಂದನ.!!ಪ!! ಬಿತ್ತರಿಸುತಿಹರಿಂದು ಆ ಜಾತಿ ನಂದೆಂದುಕತ್ತರಿಸಿ ಹಾಕೋಣ ಜಾತಿಯ ಗಿಡವಿಂದುಎಚ್ಚರಿಸಿ ನಡೆ ನೀ ಮೌಢ್ಯತೆಯ ಕೊಂದುಉಚ್ಚರಿಸು ನಾವೆಲ್ಲ ಭಾರತೀಯರೆಂದು ಕಟ್ಟಿಹರು ನಾಡ ಬಿಸಿಲು ಬೇವರಲಿ ಬೆಂದುಕೊಟ್ಟಿಹರು ಸ್ವಾತಂತ್ರ್ಯ ಲಕ್ಷ ಬಲಿದಾನ ಗೈದುಬರೆದರು ಸಂವಿಧಾನ ಸಮಪಾಲಿರಲೆಂದುಕರೆ ಕೊಟ್ಟರು ಅಸ್ಪೃಶ್ಯತೆ ತೊಲಗಲಿ ಎಂದು ಸ್ಮರಿಸೋಣ ನಮ್ಮವರ ತ್ಯಾಗ ಬಲಿದಾನವನ್ನುಕೊರೋಣ ಹಿರಿ ಜೀವಗಳಿಗೆ ಶಾಂತಿಯನ್ನುತೊರೆಯೋಣ ನಾವು ಜಾತಿ ಮತ ಪಂಥಗಳನ್ನಮರೆಯೋಣ ಅಸೂಯೆ ಬೇಧ ಭಾವಗಳನ್ನು ಕಿತ್ತೋಣ ಜಾತಿ ಧರ್ಮದ ಜಾಲಿಯ ಮುಳ್ಳುಬಿತ್ತೋಣ ಮನುಜ ಮತದ ಪ್ರೀತಿ ಬಿಳಿ ಎಳ್ಳುಹಚ್ಚೋಣ ಅನ್ಯೋನ್ಯತೆಯ ಅಮೃತ ಬಳ್ಳಿಬಿಚ್ಚೋಣ ಕಟ್ಟಿರುವ ಕೋಮುವಾದದ ಸರಪಳಿ ಬಸವರಾಜ್ ಚೌಡ್ಕಿ
“ಕಟ್ಟಬೇಕಿದೆ ನಾಡೊಂದನು” ಬಸವರಾಜ್ ಚೌಡ್ಕಿ Read Post »









