ಜಯಶ್ರೀ .ಭ.ಭಂಡಾರಿ ಕವಿತೆ”ನೀನುಬಂದ ಮೇಲೆ”
ಕಾವ್ಯಸಂಗತಿ ಜಯಶ್ರೀ .ಭ.ಭಂಡಾರಿ “ನೀನುಬಂದ ಮೇಲೆ” ಪತ್ರ ಬರೆಯುವ ಸಂಸ್ಕೃತಿಮಾಯವಾಯಿತುಬರೀ ಫೋನಿನಲ್ಲಿ ಮಾತುಕತೆಮುಗಿಯುವಂತಾಯ್ತು. ಎಳ್ಳು ಬೆಲ್ಲ, ಬನ್ನಿ ಕೊಡುವ ಸಂಪ್ರದಾಯಕಡಿಮೆಯಾಯಿತುಇವೆಲ್ಲಾ ಇಮೇಜುಗಳ ಮೂಲಕವಾಟ್ಸಾಪ್ನಲ್ಲಿ ಕಾಣುವಂತಾಯಿತು. ಮನೆ ಮನೆಗೆ ಹೋಗಿ ಆಮಂತ್ರಣ ಪತ್ರಿಕೆಕೊಡ್ತಿದ್ವಿಈಗ ಮೊಬೈಲ್ ನಲ್ಲಿ ಕಳಿಸಿ ಬನ್ನಿ ಅಂತಕರಿತಿವಿ. ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಹುಡುಕಿಓದುತ್ತಿದ್ವಿಈಗ ಏನಿದ್ದರೂ ಗೂಗಲ್ ಸರ್ಚ್ ಮಾಡಿಪಡಕೊಂತೀವಿ. ದಿನಪತ್ರಿಕೆಗಳು ಮನೆಗೆ ತರಿಸುವದುಕಡಿಮೆಯಾಯಿತುಸಮಯ ಸಿಕ್ಕಾಗ , ತಾಳ್ಮೆ ಇದ್ದಾಗ ಮಾತ್ರಮೊಬೈಲ್ ನಲ್ಲಿ ಓದುವಂತಾಗಿದೆ. ಪಿಯಾನೋ ಪೆಟ್ಟಿಗೆ, ತಬಲಾ ತಂದು ವಾರ್ಷಿಕ ಸಮ್ಮೇಳನಪ್ರಾಕ್ಟೀಸ್ ಮಾಡಸ್ತಿದ್ವಿ.ಈಗ ಮಕ್ಕಳು ಮೊಬೈಲ. ನೋಡಿಭರ್ಜರಿ ಡ್ಯಾನ್ಸ್ ಮಾಡ್ತಾರೆ. ಒಂದು ಹೊತ್ತಿನ ಊಟ ಇರದಿದ್ದರೂಜೀವನ ನಡೆದೀತು..ಒಂದು ಕ್ಷಣ ಮೊಬೈಲು ಕೈಗೆ ಸಿಗದಿದ್ದರೆಜೀವವೇ ಹೋದೀತು.. ನೀನಿಲ್ದಾಗ ಅದೆಷ್ಟು ಚಂದ ಇದ್ವಿಕೂಡಿ ಬದುಕುತ್ತಿದ್ದಿ ಕೂಡಿ ಮಾತಾಡ್ತಿದ್ವಿನೀ ಬಂದ್ಮೇಲೆ ನಿನ್ ಕೈಯಾಗ ಸಿಕ್ಕುಒದ್ದಾಡ್ತಿದ್ದೀವಿ. ಜಯಶ್ರೀ .ಭ.ಭಂಡಾರಿ.
ಜಯಶ್ರೀ .ಭ.ಭಂಡಾರಿ ಕವಿತೆ”ನೀನುಬಂದ ಮೇಲೆ” Read Post »









