ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪರವಿನಬಾನು ಯಲಿಗಾರ ಅವರ ಕವಿತೆ “ಬದುಕು”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ಬದುಕು” ಬದುಕುವುದೆಂದರೆ ಕೆಲವರಿಗೆನೀರಿನ ಪ್ರವಾಹದ ಜೊತೆಹುಲು ಕಡ್ಡಿ ತೇಲಿದಷ್ಟೆ ಸರಳ…. ಬದುಕುವುದೆಂದರೆ ಕೆಲವರಿಗೆಸಮರಕ್ಕೆ ಸಿದ್ಧರಾದಂತೆಪ್ರತಿ ಕ್ಷಣವು ಸವಾಲುಗಳ ಜೊತೆ ಸೆಣಸಾಟ…. ಬದುಕುವುದೆಂದರೆ ಕೆಲವರಿಗೆಕಾರ್ಕೋಟಕ ವಿಷದ ಹನಿ ಸೇವಿಸಿದ ಹಾಗೆನಿಧಾನವಾಗಿ ನೀರ್ಜಿವವಾದಂತೆ…… ಬದುಕುವುದೆಂದರೆ ಕೆಲವರಿಗೆಜೇನಿನ ಹನಿಗಳ ಸವಿದಂತೆಕಹಿಯ ಪರಿಚಯವೇ ಇಲ್ಲದಂತೆ….. ಬದುಕುವುದೆಂದರೆ ಕೆಲವರಿಗೆಕೆಲವೊಮ್ಮೆ ಬದುಕುವುದೆ ಬೇಡ ಎನಿಸುವುದುಆದರೆ ಹೊಣೆಗಾರಿಕೆಗಾಗಿ ಬದುಕು ತೆವಳುವರು…. ಪರವಿನಬಾನು ಯಲಿಗಾರ.

ಪರವಿನಬಾನು ಯಲಿಗಾರ ಅವರ ಕವಿತೆ “ಬದುಕು” Read Post »

ಕಾವ್ಯಯಾನ

“ಹೆತ್ತವರ ಮಾತುಗಳಿಗೆ ಬೆಲೆಕೊಡದ ಈಪೀಳಿಗೆಯ ಮಕ್ಕಳು”ವನಜ ಮಹಾಲಿಂಗಯ್ಯ

ಕುಟುಂಬ ಸಂಗಾತಿ ವನಜ ಮಹಾಲಿಂಗಯ್ಯ “ಹೆತ್ತವರ ಮಾತುಗಳಿಗೆ ಬೆಲೆಕೊಡದ ಈಪೀಳಿಗೆಯ ಮಕ್ಕಳು” ಹಿಂದಿನ ಕಾಲದಲ್ಲಿ ಮನೆಯಲ್ಲಿ ಅಪ್ಪ-ಅಮ್ಮ ಎಂದರೆ ದೇವರು. ಅವರ ಮಾತು ಕಟ್ಟಳೆ. ಅವರ ಆಶೀರ್ವಾದವೇ ಜೀವನದ ದೊಡ್ಡ ಆಸ್ತಿ ಎಂದು ನಂಬಲಾಗಿತ್ತು. ಆದರೆ ಇಂದು? ಮೊಬೈಲ್‌ನ ಸ್ಕ್ರೀನ್‌ಗಿಂತ ಹೆಚ್ಚು ಗೌರವ ಸಿಗುವುದಿಲ್ಲ ಅಪ್ಪ-ಅಮ್ಮನಿಗೆ. “ಏನು ಹಳೇ ಕಾಲದ ಟಾಕ್” ಎಂದು ಒಂದು ಮಾತಿಗೆ ತಿರಸ್ಕರಿಸುವ ಮಕ್ಕಳು ಹೆಚ್ಚಾಗುತ್ತಿದ್ದಾರೆ. ಈ ಬದಲಾವಣೆ ಏಕೆ? ಇದರ ಹಿಂದಿನ ಕಾರಣಗಳೇನು? ಇದು ಕೇವಲ ತಪ್ಪೋ, ಅಥವಾ ಕಾಲದ ಬದಲಾವಣೆಯ ಸಹಜ ಪರಿಣಾಮವೋ?ಮೊದಲನೆಯದಾಗಿ – ಡಿಜಿಟಲ್ ಜಗತ್ತಿನ ಒಡಂಬಡಿಕೆಇಂದಿನ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಸ್ಮಾರ್ಟ್‌ಫೋನ್, ಇಂಟರ್ನೆಟ್, ಸೋಶಿಯಲ್ ಮೀಡಿಯಾ ಜೊತೆ ಬೆಳೆಯುತ್ತಾರೆ. ಈ ಜಗತ್ತಿನಲ್ಲಿ ಎಲ್ಲವೂ ತ್ವರಿತ. ಲೈಕ್, ಕಾಮೆಂಟ್, ಫಾಲೋವರ್‌ಗಳೇ ಮೌಲ್ಯ. ಅಪ್ಪ-ಅಮ್ಮನ ದೀರ್ಘಕಾಲದ ತ್ಯಾಗ, ರಾತ್ರಿ ಕಣ್ಣು ಮುಚ್ಚದೆ ದುಡಿದದ್ದು, ಮಕ್ಕಳಿಗಾಗಿ ಸ್ವಂತ ಆಸೆಗಳನ್ನು ಬಿಟ್ಟದ್ದು – ಇವೆಲ್ಲವೂ “ಸ್ಲೋ ಕಂಟೆಂಟ್”. ಇದನ್ನು ಸ್ಕ್ರೋಲ್ ಮಾಡಿ ಸ್ಕಿಪ್ ಮಾಡುವಷ್ಟು ಸುಲಭವಾಗಿದೆ. ಆದ್ದರಿಂದಲೇ “ನೀನು ಏನೂ ಅರ್ಥ ಮಾಡಿಕೊಳ್ಳದೆ ಇದ್ದೀಯಾ” ಎಂಬ ಮಾತುಗಳು ಮನೆಯಲ್ಲಿ ಸಾಮಾನ್ಯವಾಗಿವೆ.ಎರಡನೆಯದು – ಜನರೇಷನ್ ಗ್ಯಾಪ್ ದೊಡ್ಡದಾಗಿದೆಹಿಂದೆ ಅಪ್ಪ-ಅಮ್ಮ ತಮ್ಮ ಮಕ್ಕಳಿಗೆ ತಾವು ಬೆಳೆದ ರೀತಿಯಲ್ಲೇ ಬೆಳೆಸುತ್ತಿದ್ದರು. ಆದರೆ ಇಂದು ಒಂದು ದಶಕದಲ್ಲಿ ತಂತ್ರಜ್ಞಾನ, ಜೀವನಶೈಲಿ, ಆಲೋಚನೆಗಳು ತೀವ್ರ ಬದಲಾಗಿವೆ. ಅಪ್ಪನಿಗೆ ಇನ್‌ಸ್ಟಾಗ್ರಾಮ್ ರೀಲ್ಸ್ ಅರ್ಥವಾಗುವುದಿಲ್ಲ. ಮಗನಿಗೆ ಅಪ್ಪನ “ಹಳೇಯ ಕಾಲದ ಯೋಚನೆ” ಅರ್ಥವಾಗುವುದಿಲ್ಲ. ಈ ಅಂತರವೇ ಗೌರವ ಕೊರೆಯುವ ಮೂಲ. ಮಾತಿನಲ್ಲಿ ತಿರಸ್ಕಾರ ಬರುತ್ತದೆ. “ನೀನು ಏನೂ ಗೊತ್ತಿಲ್ಲ” ಎಂಬ ಭಾವನೆಯಿಂದ ಮಾತುಗಳು ಕಠಿಣವಾಗುತ್ತವೆ.ಮೂರನೆಯದು – ಮೌಲ್ಯಗಳ ಬದಲಾವಣೆಇಂದು ಯಶಸ್ಸು = ಹಣ + ಫೇಮ್ + ಸ್ವಾತಂತ್ರ್ಯ ಎಂಬ ಸಮೀಕರಣ ಮಕ್ಕಳ ಮನಸ್ಸಿನಲ್ಲಿ ಬಲವಾಗಿ ಕೂತಿದೆ. ಅಪ್ಪ-ಅಮ್ಮನ ತ್ಯಾಗವನ್ನು “ಡ್ಯೂಟಿ” ಎಂದು ತೆಗೆದುಕೊಂಡು, ಅದಕ್ಕೆ ಬೆಲೆ ಕಟ್ಟದೆ ಇರುವುದು ಸಹಜವೆನಿಸುತ್ತದೆ. “ನಾನು ಏನೂ ಕೇಳಿಲ್ಲ, ನೀನೇ ಮಾಡಬೇಕಿತ್ತು” ಎಂಬ ಧೋರಣೆ ಬರುತ್ತದೆ. ಆದರೆ ಒಂದು ಸತ್ಯ – ಯಾರ ಮೇಲೂ “ಬೇಕಾಬಿಟ್ಟಿ” ಪ್ರೀತಿ ಬರುವುದಿಲ್ಲ. ಅದು ಗಳಿಸಬೇಕಾದ ಭಾವನೆ.ಆದರೂ ಒಂದು ಆಶಾಕಿರಣಎಲ್ಲಾ ಮಕ್ಕಳೂ ಹೀಗಲ್ಲ. ಇನ್ನೂ ಸಾವಿರಾರು ಮನೆಗಳಲ್ಲಿ ಅಪ್ಪ-ಅಮ್ಮನ ಕೈ ಹಿಡಿದುಕೊಂಡು ನಡೆಯುವ ಮಕ್ಕಳಿದ್ದಾರೆ. ಅವರು ತಮ್ಮ ತಂದೆತಾಯಿಯವರನ್ನು ಗೌರವಿಸುತ್ತಾರೆ, ಕಾಳಜಿ ವಹಿಸುತ್ತಾರೆ. ಆದರೆ ಬಹುತೇಕ ಮನೆಗಳಲ್ಲಿ ಈ ಸಂವಾದದ ಕೊರತೆ ಇದೆ. ಮಕ್ಕಳು ಒಂದು ಬಾರಿ ಕೇಳಬೇಕು – “ನಾನು ದೊಡ್ಡವನಾದ ಮೇಲೆ ನನ್ನ ಮಗ ನನ್ನನ್ನು ಹೀಗೆಯೇ ನೋಡಿದರೆ ಎಷ್ಟು ನೋವಾಗುತ್ತದೆ?” ಎಂದು.ಅಪ್ಪ-ಅಮ್ಮನಿಗೆ ಬೆಲೆ ಕೊಡುವುದು ದೊಡ್ಡ ಉಡುಗೊರೆಯಲ್ಲ. ಅದು ಸಣ್ಣ ಸಣ್ಣ ಮಾತುಗಳು, ಒಂದು ಫೋನ್ ಕರೆ, ಒಂದು ಭೇಟಿ, ಒಂದು “ಥ್ಯಾಂಕ್ ಯು” – ಇಷ್ಟೇ ಸಾಕು. ಏಕೆಂದರೆ ಅವರು ನಿಮಗಾಗಿ ಕೊಟ್ಟದ್ದು ಜೀವನವೇ. ನೀವು ಕೊಡುವುದು ಕೇವಲ ಸ್ವಲ್ಪ ಗೌರವ.ಇಂದಿನ ಮಕ್ಕಳೇ, ಒಮ್ಮೆ ನಿಮ್ಮ ಅಪ್ಪ-ಅಮ್ಮನ ಕಣ್ಣುಗಳನ್ನು ನೋಡಿ. ಅಲ್ಲಿ ನಿಮಗಾಗಿ ಕಾದಿರುವ ಪ್ರೀತಿಯನ್ನು ಕಾಣಬಹುದು. ಆ ಪ್ರೀತಿಗೆ ಬೆಲೆ ಕಟ್ಟಲು ಆಗದು – ಆದರೆ ಅದನ್ನು ಗೌರವಿಸಲು ಸಾಧ್ಯ. ಅದನ್ನು ಮಾಡಿ. ಏಕೆಂದರೆ ನಾಳೆ ನೀವೂ ಅಪ್ಪ-ಅಮ್ಮ ಆಗುತ್ತೀರಿ. ಆಗ ನಿಮಗೆ ಈ ಗೌರವ ಬೇಕಾಗುತ್ತದೆ.ನಿಮ್ಮ ಅಭಿಪ್ರಾಯ ಏನು? ಈ ಬಗ್ಗೆ ನಿಮ್ಮ ಅನುಭವ ಹಂಚಿಕೊಳ್ಳಿ. ವನಜ ಮಹಾಲಿಂಗಯ್ಯ

“ಹೆತ್ತವರ ಮಾತುಗಳಿಗೆ ಬೆಲೆಕೊಡದ ಈಪೀಳಿಗೆಯ ಮಕ್ಕಳು”ವನಜ ಮಹಾಲಿಂಗಯ್ಯ Read Post »

ಕಾವ್ಯಯಾನ

ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ “ಸಾಂಸ್ಕೃತಿಕ ರಾಯಭಾರಿ”

ಕಾವ್ಯಸಂಗಾತಿ ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ “ಸಾಂಸ್ಕೃತಿಕ ರಾಯಭಾರಿ” ಬಡವರ ಬಾಳಿನ ವಿದ್ಯಾದಾತರುಅನಾಥ ಮಕ್ಕಳ ಪಾಲಿನ ಕಲ್ಪವ್ರಕ್ಷರುಅನ್ನ ಅಕ್ಷರ ಜ್ಞಾನ ದಾಸೋಹ ನೇತಾರರುಸಾಂಸ್ಕೃತಿಕ ಕ್ಷೇತ್ರದ ರಾಯಭಾರಿಗಳವರು/೧/ ಮನುಕುಲೋದ್ಧಾರಕ ಹಿತಚಿಂತಕರುಶರಣರ ಸಂದೇಶ ಪರಿಪಾಲಕರುದಯೆ ಮಮತೆ ಕರುಣಾ ಸಾಗರರುಸುತ್ತೂರ ಶ್ರೀ ಮಹಾಶಿವಯೋಗಿಗಳವರು/೨/‘ಅರಿವೆ ಗುರು’ ತತ್ವಾದರ್ಶ ಆರಾಧಕರುಜ್ಞಾನ ದೀಕ್ಷೆ ಸಂಸ್ಕೃತಿ ಹರಿಕಾರರುಸರಳ ಸಾಮಾಜಿಕ ಅಪೂರ್ವ ಸಾಧಕರುಕಾಯಕದಲ್ಲಿ ಕೈಲಾಸ ಕಂಡುಂಡವರು/೩/ಬಡವರೇಳ್ಗೆಗಾಗಿ ಚಿನ್ನಾಭರಣ ತ್ಯಜಿಸಿಹರುನಿರಾಡಂಬರ ನಿಸ್ವಾರ್ಥಕೆ ದಾರಿದೀಪರುಮನುಕುಲದ ವೈರತ್ವ ನಿವಾರಿಸಿಹರುವಿದೇಶಗಳಲ್ಲಿ ಸಾಂಸ್ಕೃತಿಕ ಪರಂಪರೆ ಬಿತ್ತರಿಸಿಹರು/೪/ಬಡತನದ ಬವಣೆಯಲಿ ಬೆಂದವರುನಾಡಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿಹರುಜನ್ಮಶತಮಾನೋತ್ಸವದ ಮಹಾನಾಯಕರುಶ್ರೀ ಶಿವರಾತ್ರಿ ರಾಜೇಂದ್ರ ಪರಮಪೂಜ್ಯರು/೫/ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಕರುಅಂತಾರಾಷ್ಟ್ರೀಯ ಸಂಘಟನಾ ಚತುರರುಸ್ನೇಹ ವಾತ್ಸಲ್ಯ ಮಮತೆಯ ಸ್ವರೂಪರುಸೂರ್ಯ ಚಂದ್ರರಂತೆ ಆಚಂದ್ರಾರ್ಕರು/೬/ಬಹು ಕ್ಷೇತ್ರ ಅನುಪಮ ಸಾಧಕವರೇಣ್ಯರುಗೌರವ ಡಾಕ್ಟರೇಟ್ ಪದವಿ ಪುರಸ್ಕೃತರುಕನ್ನಡ ನಾಡುನುಡಿಯ ಸೌಭಾಗ್ಯ ದೇವರುವಿಶ್ವಕೆ ಆದರ್ಶಪ್ರಾಯ ಮಹಾನ್ ದಾರ್ಶನಿಕರು/೭/ ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ

ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ “ಸಾಂಸ್ಕೃತಿಕ ರಾಯಭಾರಿ” Read Post »

ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ಒಲವ ಪದಗಳ ಸಾಲಿನಲಿ ಇಳಿಸಿಕವಿತೆ ಆಗಿಸು ಗೆಳೆಯಾಚೆಲುವ ಕವನದ ಭಾವಗಳ ಒಳಗೆಮನವ ಬಾಗಿಸು ಗೆಳೆಯಾ ಬಾಳೆಂಬ ಪುಸ್ತಕದ ಪುಟದಲಿ ಬರೆದುಗೀಚಿದ ಹಾಳೆಗಳು ಅದೆಷ್ಟೋಹೇಳಲು ಮುಜುಗರ ಪಡದಂತೆ ಆತ್ಮವಿಶ್ವಾಸ ತೂಗಿಸು ಗೆಳೆಯಾ ಕಾಲದ ಮಿತಿಯಲಿ ಎಲ್ಲವೂ ಚೆಂದವೇತಿಳಿದಂತೆ ನಡೆಯಬೇಕು ಎಚ್ಚರಬೇಲಿಯ ದಾಟದಂತೆ ವರ್ತುಲವ ಕಟ್ಟಲುಭಯವ ನೀಗಿಸು ಗೆಳೆಯಾ ಹಲವು ವಿಷಯವು ಚರ್ಚೆಗೆ ಗ್ರಾಸವಾಗಿಪರಿಹಾರ ಸಿಗುವುದು ಕಷ್ಟಛಲವು ತುಂಬಿರಲು ಎದೆಯಲಿ ದೃಢನಿರ್ಧಾರ ಸಾಗಿಸು ಗೆಳೆಯಾ ನಿಲುವು ಸ್ಪಷ್ಟವಾಗಿ ಇರಲು ಬದುಕಅಲ್ಲಾಡಿಸಿ ಕಾಡಲು ಅಸಾಧ್ಯಗೆಲುವು ಸಿಗಲು ಮಾಲೆಯ ಹಾಕುತರಾಧೆಯ ಬೀಗಿಸು ಗೆಳೆಯಾ ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ ಕವಿತೆ “ಚಂದ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಚಂದ” ಮನಸಾರೆ ಕರೆದರೆ ಬರಬೇಕು ಪ್ರೀತಿರೀತಿಗಳ ಮರೆತರೆ ಅಂಜದಿರ ಬೇಕು ನೀನು ನಾನೇ ಆಗಿಮನಸು ನಿನ್ನದಾಗಿ ಒಲವುನಗುವ ಹೂ ಗುಚ್ಛವಾಗ ಬೇಕು ಬೆಳಗಿನ ರವಿಯಾಗ ಬೇಕುರಾತ್ರಿಯ ಹುಣ್ಣಿಮೆಯಬೆಳಕಾಗ ಬೇಕುಏ ಜೀವ, ನೀನಿರ ಬೇಕು.   ತುಡಿತವಾಗಿ ಮಿಡಿಯ ಬೇಕುಹೃದಯದ ಧಾರೆಯಾಗ ಬೇಕು    ಚೆಂದವಾಗಿ ಧುಮ್ಮಿಕ್ಕ ಬೇಕುಅನಂತ ಉಸಿರಾಗಿರ ಬೇಕು ಪ್ರೀತಿ  ನಲಿಯುತ್ತಿರ ಬೇಕು! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಕವಿತೆ “ಚಂದ” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಕಾಲ ಎಲ್ಲವನ್ನೂ ಮರೆಸಿತು ನಿನ್ನ ನೆನಪೊಂದನು ಬಿಟ್ಟುಕಾಲ ಎಲ್ಲಾ ನೋವನ್ನು ಅಳಿಸಿತು ನೀ ಮಾಡಿದ ಗಾಯವೊಂದನು ಬಿಟ್ಟು..!! ಯುಗವುರಳಿ ಭಿನ್ನ ಮುಖ ಕಣ್ಣ ಮುಂದೆ ಚಲಿಸುತ್ತಿವೆ ಒಂದೊಂದೇಕಾಲ ಕಸದರಾಶಿಯಲೂ ಹೂ ಅರಳಿಸಿತು ನನ್ನ ಪಾಲಿನ ಹೂವೊಂದನು ಬಿಟ್ಟು!! ಮೊದಲಿಲ್ಲದ ಕೊನೆ,ಕೊನೆಯಿಲ್ಲದ ಮೊದಲು  ಒಂಟಿತನಕೆ ನಾಂದಿ ಬಯಸವುಕಾಲ ಎಲ್ಲಾ ಕಲಿಸಿತು ನನ್ನ ನೆರಳಿಗೆ ನಗಿಸುವುದೊಂದನು ಬಿಟ್ಟು!! ಈ ಶೋಕ ಒಂದು ಗಳಿಗೆಯದ್ದಲ್ಲಾ ಇಡೀ ಜೀವಮಾನದ್ದಾಯ್ತುಕಾಲ ಕಂಬನಿ ನಿಲ್ಲಿಸೆಂದಿತು ರಕ್ತ ಒಸರುವುದೊಂದನು ಬಿಟ್ಟು!! ಖಾಲಿತನದ ಹೆಜ್ಜೆ ಅನುಕಂಪದ ಪೆಟ್ಟಿಗೆಗೆ ಸರಿಯಬಹುದೆಂದುಕೊಂಡೆಕಾಲ ಛಿದ್ರ ಹಳಿಗಳನು ಒಂದುಗೂಡಿಸಿತು ಹಾದಿ ತಪ್ಪಿದ ಪ್ರೀತಿಯೊಂದನು ಬಿಟ್ಟು!! ಪ್ರೀತಿಯೆಂಬ ಪುಸ್ತಕದಿ ಉಳಿದಿದ್ದು ಹೆಸರೇ ಇಲ್ಲದ ನಾನು, ನೀನುಕಾಲ ಎಲ್ಲವನ್ನೂ ಉಳಿಸಿತು ನಿನ್ಹೆದೆಯಲಿ ನನ್ಹೆಸರೊಂದನು ಬಿಟ್ಟು!! ಕತ್ತಲು ಕನಸುಗಳ ನಡುವೆ ಮೌನ ಹೊದಿಕೆ ಹೊದ್ದು ಜಯವನ್ನು ಬೇಡಿದಾಗಕಾಲ ಕೊನೆಗೂ ಕನಿಕರಿಸಿತು ಸಾವೊಂದನು ಬಿಟ್ಟು!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

ಕಾವ್ಯಯಾನ

ಜಯಂತಿ ಕೆ ವೈ ಕವಿತೆ “ಜಗದ ವ್ಯಾಪಾರ”

ಕಾವ್ಯ ಸಂಗಾತಿ ಜಯಂತಿ ಕೆ ವೈ ಕವಿತೆ “ಜಗದ ವ್ಯಾಪಾರ” ಬದುಕಿನ ಯಾವುದೋಮೂಲೆಯಲ್ಲಿ ಅಡಗಿದ್ದ ಸಂತಸಕ್ಕೆಹಿಗ್ಗೋ ಹಿಗ್ಗು!ಯಾರ ಕೈಗೂ ಸಿಗದ ಹಾಗೆಕದ್ದು ಕುಳಿತು ಬೀಗುತಿತ್ತು!ದುಃಖವೊಂದು ಸುಖವನರಸಿಹಿಂಬಾಲಿಸುತ್ತಿತ್ತುನಗುವಿಗೆ ನೋವಿನ ಕಡಿವಾಣವಿತ್ತುನಗುವ ಕಿತ್ತುಕೊಂಡ ನೋವಿಗೆಹಬ್ಬದ ಸಂಭ್ರಮ!ನೋವಿಗೆ ನಗುವಿನ ಬಯಕೆದುಃಖಕೆ ಸುಖದ ಕನಸುಬಿಟ್ಟೂ ಬಿಡಲಾಗದ ಸಖ್ಯ!!ಅವ್ಯಕ್ತ ಭಾವವೊಂದು ಸದಾಕಾಡುವಾಗ ನೆಮ್ಮದಿಗೆಲ್ಲಿ ತಾಣ?ಅಂತರಂಗದ ವೇದಿಕೆಯಲಿನೊವು-ನಲಿವು, ಸುಖ-ದುಃಖಗಳಭೂತದ ಕೋಲಗಳ ಕುಣಿತನಡುವೆಯೇ ಸಜ್ಜಾಯಿತುಜಗದ ವ್ಯಾಪಾರಕೆನಗುವಿನ ಮುಖವಾಡ! ಜಯಂತಿ ಕೆ ವೈ

ಜಯಂತಿ ಕೆ ವೈ ಕವಿತೆ “ಜಗದ ವ್ಯಾಪಾರ” Read Post »

ಕಾವ್ಯಯಾನ

ಮಧುಮಾಲತಿರುದ್ರೇಶ್ ಬೇಲೂರು ಅವರ ಟಂಕಗಳು

ಕಾವ್ಯ ಸಂಗಾತಿ ಮಧುಮಾಲತಿರುದ್ರೇಶ್ ಟಂಕಗಳು ಬಣ್ಣ ಬಣ್ಣದಚಿಟ್ಟೆಯಂತೆ ಮನವುಹೊಸತನಕೆಸದಾ ಹಾತೊರೆವುದುಇರಲೆಮಗೆ ತಾಳ್ಮೆ 2)ಸಂಪತ್ತು ನಗುಮೊಗವೇವ್ಯಕ್ತಿತ್ವದ ಸಂಪತ್ತುನಗುನಗುತನೋವು ನಲಿವ ನುಂಗಿಬದುಕಬೇಕು ನಾವು 3)ಸುಪ್ರಭಾತ ಬಾನಂಚಿನಲ್ಲಿರವಿಯ ಹೊಂಗಿರಣಉಷೆ ಮೂಡಲುಹಕ್ಕಿಗಳ ನಿನಾದಸುಪ್ರಭಾತ ಕಿವಿಗೆ 4)ತುಂಗಭದ್ರ ಕನ್ನಡ ನಾಡುನದಿಗಳ ಬೀಡಿದುತುಂಗಭದ್ರೆಯುಜೀವ ಜೀವದುಸಿರುಹಸಿರಧಾತೆ ಈಕೆ 5)ಸಂತೋಷ ಸ್ವಾರ್ಥ ದುರಾಸೆತೊರೆದರೆ ಮನುಜನಿತ್ಯ ಸಂತೋಷಿಆತ್ಮ ತೃಪ್ತಿಯೇ ಸುಖಬದುಕು ಬಂಗಾರವು ಮಧುಮಾಲತಿರುದ್ರೇಶ್

ಮಧುಮಾಲತಿರುದ್ರೇಶ್ ಬೇಲೂರು ಅವರ ಟಂಕಗಳು Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ‌ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ‌ ಗಜಲ್ ಪ್ರೇಮ ನಶೆಯ ಮದಿರೆ ಏರಿದರಲ್ಲೆಯ ನಿದಿರೆಒಲವಿನುಯ್ಯಾಲೆಯಲಿ ತೂಗುತಲಿದ್ದರೆಲ್ಲಿಯ ನಿದಿರೆ ಕಳವಳದಲ್ಲಿ ಜೀವ ಕುಸುಮ ಮಂಪರಿಸುತ ಕಂಪನಪ್ರೀತಿಯ ಮಾಯೆಯಲಿ ಮೈಮರೆತರೆಲ್ಲಿಯ ನಿದಿರಿ ಹಗಲಿರುಳು ಹಂಬಲದ ಕೊಳದಿ ಅಲೆಗಳ ನಿಲ್ಲದ ಶಬ್ದಅಪ್ಪುಗೆಯಾಲಿಂಗನಕೆ ಕಾಯುತದಲಿದ್ದರೆಲ್ಲಿಯ ನಿದಿರೆ ಬಿಸಿಯುಸಿರು ಧಗೆಯಲಿ ದೇಹ ಧಗಧಗಿಸುವ ನೋವುಕನಸುಗಳ ಹಾಸಿ ಹೊತ್ತು ಮಲಗಿದರೆಲ್ಲಿಯ ನಿದಿರೆ ನೆನಪಿನಲೆಯ ಕೋಲಾಹಲ ತಾಳಲಾರದ ಸಿಹಿ ಸಂಕಟಕಣ್ಣ ಕೊಳದಲಿ ನೆಟ್ಟ ಚಿತ್ರ ಮಾಸದಿರೆಲ್ಲಿಯ ನಿದಿರೆ ಮನ ಮಂದಾರ ಬಿರಿಯುವ ಸಂಕಟ ಕಾತುರದ ಕೌತುಕಜೀವ ಕುಸುಮ ರವಿಗಾಗಿ ಕಾಯುತಲ್ಲಿದ್ದರೆಲ್ಲಿಯ ನಿದಿರೆ ಅನುರಾಗದಲೆಯಲಿ ಅನು ಕೊಚ್ಚಿ ಹೋಗುತಿಹಳು ತಾಳದೇರಾಗಕೆ ತಾಳ ಬೆರೆಸಲು ದುಂಬಿ ಬರದಿದ್ದರೆಲ್ಲಿಯ ನಿದಿರೆ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ‌ ಅವರ ಗಜಲ್ Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ “ಹೊಳೆಸಾಲು ಬಳ್ಳಿ”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ “ಹೊಳೆಸಾಲು ಬಳ್ಳಿ” ಹೊಳೆಸಾಲ ಬಳ್ಳಿ ಚೆಂದಹಳ್ಳಿಯ ನೆಲ ಅಂದಮಣ್ಣಿನ ವಾಸನೆಯ ಕಂಪುಬಲು ಚೆಂದ ಕೇಳವ್ವ ಹಸಿರು‌ ಬೊಟ್ಟಿನ ಸೀರೆಅಚ್ಚ ಕೆಂಪಿನ ಬಳೆತೊಟ್ಟಾಳ ನನ್ನವ್ವನಿಂತಾಳ ಬಳ್ಳಿಯಲಿ ಪುಂಡಿಯ ಪಲ್ಲೆಯಲಿಬಳ್ಳೊಳ್ಳಿ ಕಾರದಲಿಎಣ್ಣೆ  ಉಳ್ಳಾಗಡ್ಡಿ ರುಚಿ ಚೆಂದಹೊಳೆಸಾಲ ಬಳ್ಳಿಯಲಿ ಹೊಳೆಸಾಲ ಬಳ್ಳಿಯಲಿ ಬಣ್ಣಬಣ್ಣದ ಹೂಗಳುನಮ್ಮವ್ವ ಮುಡಿದ ಮಲ್ಲಿಗೆ ಹೂ ಚೆಂದಹಣಿಯಲಿ ವಿಭೂತಿ ಕೆಂಪುಬೊಟ್ಟಿನ ಗಂದಹೊಳೆಸಾಲದಬಳ್ಳಿಯಲಿ ನಮ್ಮವ್ವನ ಕಳೆ ಚೆಂದ ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ “ಹೊಳೆಸಾಲು ಬಳ್ಳಿ” Read Post »

You cannot copy content of this page

Scroll to Top