ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಒಂದು ಗೆರೆ ಕಡಿಮೆಯಿದೆ..ನಿನ್ನ ಪಡೆಯುವ ನಸೀಬಿಗೆಒಂದು ಹನಿ ಕಡಿಮೆಯಿದೆ..ನಿನ್ನ ಮರೆಸುವ ಮಧುಬಟ್ಟಲಿಗೆ..!! ನೋವಿಗೆ ಹಳೆಯ ಗಿರಾಕಿಯ ಹುಸಿನಗುವ ಮನಕೆ…ಒಂದು ಉನ್ಮಾದ ಬೇಕಿದೆ,ಪುನಃ: ನಿನ್ನ ಪ್ರೀತಿಸುವ ಚಾಳಿಗೆ!! ದಿನದ ಲೆಕ್ಕಹಚ್ಚಿಟ್ಟೆನಗೆ ಹೋದೆ ದೂರಯಾನಕೆ..ಒಂದು ಶರಧಿ ಬಾಕಿಯಿದೆ,ನಿನ್ನ ಸೇರುವ ಪರಿಧಿಗೆ..!! ಸಿಕ್ಕ ಘಳಿಗೆಯನ್ನು ಸಂಭ್ರಮಿಸಲು ಬಿಡಲಿಲ್ಲ ಬದುಕು..ಒಂದು ಏಕಾಂತ ಬೇಕಿದೆ,ನಿನ್ನ ಸ್ಮರಿಸುವ ಮನಸ್ಸಿಗೆ..!! ಸೀತಾ,ರಾಮ,ಲಕ್ಷ್ಮಣರ ವನವಾಸಕ್ಕಿಂತ ದೀರ್ಘವಾಯ್ತು ನೋವುಒಂದು ವಿರಾಮ ಬೇಕಿದೆ,ನಿನ್ನ ಕಾಡುವ ಮೌನಪಾಳಿಗೆ..!! ಬಂಧನಕ್ಕೆ ಬೆನ್ನು ಮಾಡಿ ತುದಿನಗುವ ಕದ್ದವನೇ,,ಒಂದು ನೂಲಿನ ಅಂತರವಿದೆ…ನಿನ್ನ ಕೂಡುವ ಹಾದಿಗೆ..!! ಕಂಬನಿ ಕುಡಿದು ಸಾಕಾಯ್ತು ಜಯಾ,ಕೇಳಿಲ್ಲಿ ಗೆಳೆಯಾ..ಒಂದು ಕಿಡಿ ಕಡಿಮೆಯಿದೆ,ನನ್ನ ನಿನ್ನ ಒಂದಾಗಿಸುವಅಗ್ನಿಸಾಕ್ಷಿಗೆ…!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು”

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು” ಬೆಂದ ಜೀವದ ಬೇಗೆನಂದಿಸುವವರು ಯಾರುಹಸಿವಿನ ನರಳಾಟದಲ್ಲಿಸಾಯುತ್ತಿರುವವರು ನಾವು ಸಂಕಟದಲ್ಲಿ ಕೂಗಾಡಿದರೆಮೂರಡಿಯಲ್ಲಿ ಹೂಳುವರುತೋಪು ಬಂದೂಕುಗಳಿಲ್ಲದೆಹತವಾಗುತ್ತಿರುವ ಜೀವಗಳು ಹಸಿವಿನ ಚೀಲ ಬೆನ್ನು ಏರಿದೆಶಾಂತಿ ನೆಮ್ಮದಿಯ ವೇದಾಂತಗುನುಗುಟ್ಟುತ್ತಾ ಕಿವಿ ತಟ್ಟಿದೆಮೋಸ ವಂಚನೆ ಕೊರಳ ಉರುಳಾಗಿ ಬಿದ್ದಿವೆ ಬಾಳೊಂದು ಮಾಯೆ ಎಂದರು ಅನುಭಾವಿಗಳುಆಸೆಯೇ ದುಃಖಕ್ಕೆ ಮೂಲವೆಂದ ಬುದ್ಧಈ ಎಲ್ಲಕೂ ಕಡಿವಾಣ ಇಲ್ಲದ ಹಸಿವೆಂಬ ಮಾಯೆಮೆರೆಯುತ್ತಿದೆ ಏಕೆ? ಎಲುಬಿಲ್ಲದ ನಾಲಿಗೆಬಯಸುತ್ತಿದೆ ರುಚಿಹಸಿವು ತಣಿಸುವ ಮಂತ್ರವೇದಾಂತ ಯಾವುದಾದರೂ ಇದೆಯೇ ತಿಳಿಸು ಮನವೇ…ಒಮ್ಮೆ ತಿಳಿಸು ಮನವವೇ… ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು” Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ್‌ ಗಜಲ್ ಕೂಡಿಟ್ಟ ದುಃಖವ ಹೊರ ಹಾಕಿದ್ದೇನೆ ನೀ ಕಂಡ ಕ್ಷಣದಲ್ಲಿಹಿಡಿದಿಟ್ಟ ನೋವಿನಿಂದ ಅತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ ಬದುಕು ಶೂನ್ಯತೆಯ ಭಾವ ಮರೆಸಿ ಹೊಸತನ ಮೂಡಿಸಿದೆ ಈಗನೀ ಬಿಟ್ಟ ಸವಿ ನೆನಪುಗಳಿಂದ ನಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ ಎಷ್ಟೋ ಮಾತುಗಳು ಹೇಳದೆ ಮೌನದಲ್ಲಿ ಮರೆಯಾಗಿವೆನೋಡಬಾರದೆಂದಾಗಲೇ ಸಿಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ ಆಗಸದ ನಕ್ಷತ್ರಕ್ಕೂ ಒಮ್ಮೊಮ್ಮೆ ಕರಿಛಾಯೆ ಬಿಳಬಹುದು ಉಸಿರು ಬಿಗಿ ಹಿಡಿದು ಬದುಕಿ ಸತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ ಬದುಕಿನ ರಂಗಮಂದಿರದಲ್ಲಿ ಅವನೇ ಖಳನಾಯಕನಂತಾಗಿಹರೇಖೂ ಬಾಳ ನೌಕೆಯಲಿ ಗೆದ್ದು ಸೋತಿದ್ದೇನೆ ನೀ ಕಂಡ ಕ್ಷಣದಲ್ಲಿ ಡಾ.ರೇಖಾಉದಯ್

ಡಾ.ರೇಖಾ ಉದಯ್‌ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯಸಂಗಾತಿ ಎಮ್ಮಾರ್ಕೆ ಅವರ ಗಜಲ್ ಬೋಳುಮರವೂ ಭರವಸೆ ತೋರುತಿದೆ ಈಗಚಿಗುರೆಲೆ ಹೊಸತು ಸಂದೇಶ ಸಾರುತಿದೆ ಈಗ ಖಾಲಿ ಕೊಂಬೆ ಮೇಲೀಗ ಕೋಗಿಲೆ ದರ್ಬಾರುಕುಹೂ ಕುಹೂ ಕೂಗೋ ರಾಗ ಕೇಳುತಿದೆ ಈಗ ನೋವು-ನಲಿವುಗಳಿದ್ದಾಗಲೇ ಬಾಳಿಗೊಂದರ್ಥಬೇವು ಬೆಲ್ಲ ರುಚಿಯ ಜಿಹ್ವೆ ನೋಡುತಿದೆ ಈಗ ಸೃಷ್ಠಿ‌ ತಾ ಸೊಬಗು ತೋರೇ ಅದೆಂಥ ಗಾರುಡಿಕ್ರೋಧಿನಾಮ ಘಳಿಗೆ ಶುಭ ಕೋರುತಿದೆ ಈಗ ಕುಂಬಾರನಿಗೆ ಯುಗಾದಿಯೇ ಹೊಸ ವರ್ಷವುರತ್ನಪಕ್ಷಿಯೇ ಕಣ್ಣ ಮುಂದಣ ಹಾರುತಿದೆ ಈಗ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ. ರೇಣುಕಾತಾಯಿ. ಸಂತಬಾ ಅವರ ಗಜಲ್

ಕಾವ್ಯಸಂಗಾತಿ ಡಾ. ರೇಣುಕಾತಾಯಿ. ಸಂತಬಾ ಗಜಲ್ ನುಡಿಗೆ ಬೆರಗು ಮೂಡಿಸಿ ವಚನ ಬರೆದನು ನಮ್ಮ ಬಸವಣ್ಣದಯವಿಲ್ಲದ ಧರ್ಮವೆ ಇಲ್ಲವೆಂದು ಸಾರಿದನು ನಮ್ಮ ಬಸವಣ್ಣ.ll ಆಚಾರ ಸ್ವರ್ಗ ಅನಾಚಾರವೇ ನರಕವೆಂದ ನಮ್ಮ ಭಕ್ತಿ ಭಂಡಾರಿ,ಜಾತಿ ಮತ ಸರಿಸಿ ಸಮಾನತೆ ಬಿತ್ತಿದವನು ನಮ್ಮ ಬಸವಣ್ಣ.ll ಕಳಬೇಡ ಕೊಲ್ಲಬೇಡ ಹುಸಿ ನುಡಿಬೇಡವೆಂಬ ಮೌಲ್ಯ ಹೇಳಿಕೊಟ್ಟಮಾತಿನಲ್ಲಿಯೇ ಮುತ್ತುರತ್ನ ಜೋಡಿಸಿ ಇಟ್ಟವನು ನಮ್ಮ ಬಸವಣ್ಣ ll ಮೌಢ್ಯತೆಯ ದೊಡ್ಡ ಗೋಡೆ ದಾಟಿಸಿ ಹೊಸ ಬಾಗಿಲನು ತೆರೆದುಬಿಟ್ಟ,ಎಲ್ಲರನು ಇವ ನಮ್ಮವನೆಂದು ಹೇಳಿದವನು ನಮ್ಮ ಬಸವಣ್ಣ ll ತಾಯಿ ಅಕ್ಕಮ್ಮ ನೀಲಮ್ಮ ಶರಣೆಯರೆಲ್ಲರ ವಚನ ಗೌರವಿಸಿದ.ಶ್ರಮದಲಿ ಶಿವ ಕೈಲಾಸ ತೋರಿದ ಶರಣನು ನಮ್ಮ ಬಸವಣ್ಣ l ಡಾ. ರೇಣುಕಾತಾಯಿ. ಸಂತಬಾ. “ರೇಮಾಸಂತ”

ಡಾ. ರೇಣುಕಾತಾಯಿ. ಸಂತಬಾ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಮನದ ಮಗು ಹಠ ಮಾಡುವ ಮುನ್ನ ಬಂದುಬಿಡುನೊಂದು ಬಿಕ್ಕಿ ಅಳುವ ಮುನ್ನ ಬಂದುಬಿಡು ಇರಲಿ ಮೈಲುಗಟ್ಟಲೇ ಅಂತರ  ಇಬ್ಬರ ನಡುವೆ ನೆನಪು ನರಳುತ ಮಾಸುವ ಮುನ್ನ ಬಂದುಬಿಡು  ನನಗೂ ಇದೆ ಹಗಲು ದುಡಿಯುವ ಜವಾಬ್ದಾರಿಇರುಳ ಕನಸು ಸಾಯುವ ಮುನ್ನ ಬಂದುಬಿಡು ಜೊತೆ ಬಾಳುವ ಅವಕಾಶವೇ ಇಲ್ಲ ನಮಗೆಪ್ರೀತಿಯ ಎದೆಬಡಿತ ನಿಲ್ಲುವ ಮುನ್ನ ಬಂದುಬಿಡು ವಾಣಿಯ ಈ ಜನ್ಮವೆನೋ ಕಳೆಯುವುದು ವಿರಹದಿಮರುಜನ್ಮದಿ ಮತ್ಯಾರೋ ಕೈ ಹಿಡಿವ ಮುನ್ನ ಬಂದುಬಿಡು ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ್‌ ಗಜಲ್ ನಿನ್ನೊಳಗಿನ ಸೆಳೆತಕ್ಕೆ ಸೋತಿದ್ದೇನೆ ಕವಿತೆನನ್ನೊಳಗಿನ ಭಾವನೆಗಳ ಹೇಳಿದ್ದೇನೆ ಕವಿತೆ ಸೋತು ಗೆದ್ದು ನನ್ನೊಳಗೆ ನೀನಾಗಿದ್ದೀಯಲ್ಲೇನಿನ್ನಿಂದ ನವೀರಾದ ಭಾವ ತಾಳಿದ್ದೇನೆ ಕವಿತೆ ದುಗುಡ  ದುಮ್ಮಾನಗಳ ಸರಸಿ ಆವರಿಸಿದ್ದಿಯಲ್ಲೇನೀನಿಲ್ಲದ ನಾನು ಶೂನ್ಯಳೆಂದು ಕೇಳಿದ್ದೇನೆ ಕವಿತೆ ಮುದುಡಿದ ಮನಸ್ಸಿಗೆ ಹೊಸ ಸಂಚಲನ ಮೂಡಿಸಿದೆನನ್ನಲ್ಲಿ ತಿಳಿಯದೆ ನೀ ಅವಿತದ್ದು ನೋಡಿದ್ದೇನೆ ಕವಿತೆ ಒಣಗಿದ ಮರದಲ್ಲಿ ಹೊಸ ಚಿಗುರ ಕಂಡಂತಾಗಿದೆರೇಖೂಳ ಮೇಲಿರುವ ಆ ಒಲವಿಗೆ ನಕ್ಕಿದ್ದೇನೆ ಕವಿತೆ ಡಾ.ರೇಖಾ ಉದಯ್

ಡಾ.ರೇಖಾ ಉದಯ್‌ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಎದೆಗಡಲನು ಮಥಿಸಿ ಪಡೆದಿಹ ಅಮೃತವದು ಪ್ರೀತಿಭಾವದಲೆಯು ದಡವ ಸೇರಿದ ಸಂಗಮವದು ಪ್ರೀತಿ ತೋರಿಕೆಗೆ ತಳೆದ ಹೂ ಹೇರಿಕೆಗೆ ಹಬ್ಬಿದ ಬಳ್ಳಿಯಲ್ಲನೆಲ ಮುಗಿಲುಗಳ ನೆಚ್ಚಿ ಬಿರಿದ ಕುಸುಮವದು ಪ್ರೀತಿ ಅಹಮಿಕೆಯ ಅರಿವಿಲ್ಲ ಸಂಶಯಗಳ ಸುಳಿವೆನಿತಿಲ್ಲಗುಡಿಸಲನೇ ಗುಡಿಯ ಮಾಡಿದ ಪವಾಡವದು ಪ್ರೀತಿ ಹೆಚ್ಚು ಕಡಿಮೆ ಎಂಬ ಗಡಿಗಳಿಲ್ಲ ಗಡಿಬಿಡಿಯೂ ಇಲ್ಲಆಡಂಬರಕಾತುಕೊಳ್ಳದ ಸುಗ್ಗಿ ಸಂಭ್ರಮವದು ಪ್ರೀತಿ ಈ ಒಲವ ಜನನಕೆ ಮಹೂರ್ತ ಘಳಿಗೆಗಳು ಬೇಕಿಲ್ಲಬೆಸೆದ ಮನಗಳಂಗಳದ ನಿತ್ಯದ ಉತ್ಸವವದು ಪ್ರೀತಿ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಇಂದಿರಾ ಕೆ ಅವರ ಗಜಲ್

ಕಾವ್ಯ ಸಂಗಾತಿ ಇಂದಿರಾ ಕೆ ಗಜಲ್ ದೇಶ – ದೇಶ ನಡುವೆ ದ್ವೇಷ ಜ್ವಾಲೆ ಆರಿಸುವವರು ಯಾರಿಲ್ಲಿಮುಗಿಲು ಮುಟ್ಟಿದ ಅಳಲು ಆಕ್ರಂದನ ಆಲಿಸುವವರು ಯಾರಿಲ್ಲಿ ಯುದ್ಧ ರಣಾರ್ಭಟಕೆ ಬೆಚ್ಚಿ ಬಿದ್ದಿದೆ ಮನುಕುಲವುಜಗದಗಲ ಹರಡಿದ ಅಶಾಂತಿಯ ಅಳಿಸುವವರು ಯಾರಿಲ್ಲಿ ಬಲಿಷ್ಠತೆ ಮೆರೆದು ದೀನರಿಲ್ಲಿ ಬಲಿಪಶುಗಳಾದರುರಕ್ತ- ಸಿಕ್ತದಲಿ ಸಿಕ್ಕ ಹೆಣಗಳ ಎಣಿಸುವವರು ಯಾರಿಲ್ಲಿ ಅಸೂಯೆ ಅಹಂನ ಪ್ರದರ್ಶನ ಕರಾಮತ್ತೋಅಮಾಯಕರ ಜೀವ ಬೆಲೆ ತಿಳಿಸುವವರು ಯಾರಿಲ್ಲಿ ಕ್ರಾಂತಿ ಕಹಳೆ ಹೊತ್ತಿಸಿ ಕ್ಷಿಪಣಿಗಳ ಮಳೆಗೈಯುತಿವೆಹಲ್ಲೋಲ- ಕಲ್ಲೋಲ ಜಗತ್ತು ದಂಡಿಸುವವರು ಯಾರಿಲ್ಲಿ ಭಯದ ಭೀತಿ ಆವರಿಸಿದೆ ಅಳಿದುಳಿದ ಮನಗಳಲಿ  ವಿರಾಮವಿಲ್ಲದೆ ವಿರಾಜಿಸುತಿದೆ ವಿನಾಶ ಕದನ ತ್ಯಜಿಸುವವರು ಯಾರಿಲ್ಲಿ ವಿಶ್ವದಾದ್ಯಂತ ಶಾಂತಿ ಸ್ನೇಹ – ಭಾತೃತ್ವ ನೆಲೆಸಲೆಂದು ಪ್ರಾರ್ಥಿಸಿಬೇಕಿದೆ ಇಂದಿರೆದಾಳಿ – ಪ್ರತಿದಾಳಿಗೆ ನಲುಗಿದವರ ರಕ್ಷಿಸುವವರು ಯಾರಿಲ್ಲಿ ಇಂದಿರಾ ಕೆ

ಇಂದಿರಾ ಕೆ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಕಲ್ಪನಾ ಎಸ್‌ ಪಾಟೀಲ್‌ ಅವರ ಗಜಲ್

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ್‌ ಗಜಲ್ ತೆರೆದ ಎದೆಯ ಕದವ ಬಡೆಯುತಲೆ ಇದ್ದೆಅದಾವ ಊರ ಕನಸಿನೊಡೆಯನೊನೀನಾಗಿದ್ದೆ ಕನಸಲೆ ಕನಸುಗಳು ಬಹುದೂರದಿ ಸಾಗುತಲೆ ಇದ್ದವುನೀನು ಹೋದ ದೂರದೂರಿನ ದಾರಿಯಬೆನ್ನಟ್ಟಿಯೆ ಇದ್ದವು ನೀ ದಾರಿ ತಪ್ಪಿಸಿದರೂ ನೀನು ಕ್ರಮಿಸುವದಾರಿಯ ಮರೆಯದಂತೆ ಮಾಡಿದ್ದವು ಕನಸೆ ಗುರಿಯಾಗಿಸಿಕೊಂಡು ನಡೆದಿದ್ದೆ ನೀನುಆ ಕನಸೆ ಗುರಿಯ ತೀರ ತಲುಪಿಸಿದನು ಮರೆತೆ ಏನು ನನ್ನ ಕನಸೆ ನೀನು ನಿನ್ನ ಕನಸಿಗಾಗಿ ನಾನೆ ಎಂದೆನೀ ಬರಿ ಕನಸ ಕಂಡರೆ ಕಾವ್ಯಧರೆಗೆ ಕನಸೆ ನೀನಾಗಿದ್ದೆ ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ್‌ ಅವರ ಗಜಲ್ Read Post »

You cannot copy content of this page

Scroll to Top