ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“80ನೇ ಸ್ವಾತಂತ್ರ್ಯೋತ್ಸವ…. ಒಂದು ವಿವೇಚನೆ” ವೀಣಾ ಹೇಮಂತ್ ಗೌಡ ಪಾಟೀಲ್

ಸ್ವಾತಂತ್ರ್ಯ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ 80ನೇ ಸ್ವಾತಂತ್ರ್ಯೋತ್ಸವ…. ಒಂದು ವಿವೇಚನೆ”  ತಾಯ್ನಾಡಿನ ರಕ್ಷಣೆಗಾಗಿ ಆಕೆಯ ಸ್ವಾತಂತ್ರ್ಯಕ್ಕಾಗಿ ಸಹಸ್ರಾರು ಜನ ಪ್ರಾಣ ತೆತ್ತಿರುವ ಸ್ವಾತಂತ್ರ್ಯ ಸೇನಾನಿಗಳ ಉಗ್ರ ಹೋರಾಟ ಮತ್ತು ಹಲವಾರು ಶಾಂತಿಯುತ ಹೋರಾಟಗಳ ಚಳುವಳಿಗಳ ಫಲವಾಗಿನಾವು ಗಳಿಸಿಕೊಂಡ ಸ್ವಾತಂತ್ರ್ಯಕ್ಕೆ ಇದೀಗ 78ರ ಹರಯ. ಇಷ್ಟು ವರ್ಷಗಳ ಸ್ವತಂತ್ರ ಭಾರತದಲ್ಲಿ ನಾವು ಗಳಿಸಿದ್ದೇನು?.ಉಳಿಸಿದ್ದೇನು? ದೇಶಕ್ಕೆ ಕೊಟ್ಟದ್ದೇನು? ದೇಶದಿಂದ ಪಡೆದುಕೊಂಡದ್ದು ಏನನ್ನು ಎಂದು ಯೋಚಿಸಿದಾಗ ಒಂದೆಡೆ ಹೆಮ್ಮೆಯ ಭಾವ ಸ್ಫುರಿಸಿದರೆ ಮತ್ತೊಂದೆಡೆ ವಿಷಾದ ಮಡುಗಟ್ಟುತ್ತದೆ. ‘ದೇ ದೀ ಹಮೆ ಆಜಾದಿ.. ಬಿನಾ ಖಡ್ಗ ಬಿನಾ ಡಾಲ್: ಎಂಬ ಹಾಡನ್ನು ಹಾಡುವ ಮೂಲಕ ನಮ್ಮ ರಾಷ್ಟ್ರಪಿತನನ್ನು ನೆನೆಸಿಕೊಳ್ಳುವ ನಾವುಗಳು ಗಾಂಧೀಜಿಯವರು ಹಾಕಿಕೊಟ್ಟ ಸತ್ಯ ಅಹಿಂಸೆ ಮತ್ತು ಶಾಂತಿಯ ಮಾರ್ಗದಲ್ಲಿ ನಡೆದು ಸರ್ವಧರ್ಮ ಸಾಮರಸ್ಯವನ್ನು, ಬಂಧುತ್ವವನ್ನು ತೋರುವ ಅಖಂಡ ಭಾರತವನ್ನು ಸೃಷ್ಟಿಸಿದ್ದೇವೆಯೇ?! ಅವರು ಕಂಡ ರಾಮ ರಾಜ್ಯದ ಕನಸನ್ನು ನನಸು ಮಾಡಿದ್ದೇವೆಯೇ ಎಂದರೆ… ಉಹೂಂ ಕನಸಿನಲ್ಲಿಯೂ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಬಹುದು. ವಿಶ್ವದ ನೂರಾರು ದೇಶಗಳ ರಾಜ್ಯ ನೀತಿಗಳನ್ನು ಅರಿತು ಅರಗಿಸಿಕೊಂಡು ಭಾರತದಂತಹ ಬಹುದೊಡ್ಡ ಪ್ರಜಾತಂತ್ರ ದೇಶಕ್ಕೆ ಅತ್ಯವಶ್ಯಕವಾದ ಸಂವಿಧಾನವನ್ನು ರೂಪಿಸಿಕೊಟ್ಟ ಅಂಬೇಡ್ಕರ್ ಅವರ ಕನಸಿನ ಭಾರತ ನಿರ್ಮಾಣಗೊಂಡಿದೆಯೇ ಎಂದರೆ…. ಖಂಡಿತವಾಗಿಯೂ ಇಲ್ಲ ಎಂದೇ ಹೇಳಬಹುದು.  ನಿಜ, ಭಾರತ ಹಿಂದೆಂದಿಗಿಂತಲೂ ಹೆಚ್ಚು ಆರ್ಥಿಕವಾಗಿ ಬಲಿಷ್ಠವಾಗಿದೆ…. ಆದರೆ ಬಡತನ, ನಿರುದ್ಯೋಗ, ಸುಸ್ಥಿರ ಬದುಕು ಇನ್ನೂ ಕನಸಾಗಿದೆ. ಮೂರು ಹೊತ್ತಿನ ಊಟ ಬಿಡಿ…ಒಪ್ಪತ್ತಿನ ಊಟಕ್ಕೂ ತತ್ವಾರವಾದ ಜನರ ಬವಣೆಗಳು ನಮ್ಮ ಕಣ್ಣ ಮುಂದೆ ಇವೆ. ತಲೆಯ ಮೇಲೆ ಸೂರಿಲ್ಲದ, ಇದ್ದರೂ ಜೋರಾದ ಗಾಳಿ, ಬಿರುಸಾದ ಮಳೆಗೆ ಯಾವಾಗ ಬೀಳುತ್ತದೆ ಎಂಬ ಆತಂಕವನ್ನು ಉಂಟು ಮಾಡುವ, ಹಾಗೊಂದು ವೇಳೆ ಬಿದ್ದರೆ ಮುಂದೇನು? ಎಂದು ಭವಿಷ್ಯದ ಕುರಿತು ಚಿಂತಿಸುವ ಜನರು ನಮ್ಮ ಕಣ್ಣ ಮುಂದೆ ಇದ್ದಾರೆ. ಕೆಲವಷ್ಟು ವಲಯಗಳಲ್ಲಿ ಆರ್ಥಿಕತೆ ತನ್ನ ಛಾಪನ್ನು ಮೂಡಿಸಿದ್ದರೂ ಕೂಡ ನಾವಿನ್ನೂ ಮೂಲಭೂತ ಸೌಕರ್ಯಗಳನ್ನು ಹೊಂದಲು ಒದ್ದಾಡುತ್ತಿದ್ದೇವೆ. ಜನಸಂಖ್ಯೆಯ ದೃಷ್ಟಿಯಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳ ಸಾಲಿನಲ್ಲಿ ಮೊದಲ ಸಾಲಿನಲ್ಲಿಯೇ ನಿಲ್ಲುವ ನಾವು ಕಾರ್ಯಶೀಲತೆಯ ದೃಷ್ಟಿಯಲ್ಲಿ ನೋಡಿದಾಗ ಬಹಳಷ್ಟು ಹಿಂದೆ ಉಳಿದಿದ್ದೇವೆ. ನಮ್ಮನ್ನು ಬೃಹದಾಕಾರವಾಗಿ ಕಾಡುವ ಸಮಸ್ಯೆಗಳು ಹತ್ತು ಹಲವು. ಯುವಕರು, ಮಧ್ಯಮ ವಯಸ್ಸಿನವರು, ಮುದುಕರು ಎನ್ನದೆ ಎಲ್ಲರೂ ಕೂಡ ತಮ್ಮ ಕೈಯನ್ನು ಕೋಳವನ್ನಾಗಿಸಿಕೊಂಡು ದಿನದ ಹಲವಾರು ಗಂಟೆ ಮೊಬೈಲ್ನ ಮಾಯೆಯಲ್ಲಿ ಸಿಲುಕಿದ್ದಾರೆ.ಪರಿಣಾಮವಾಗಿ ನೀರ್ವೀರ್ಯತೆ ನಮ್ಮನ್ನು ಆಳುತ್ತಿದೆ. ಶೈಕ್ಷಣಿಕವಾಗಿ ನಾವು ಸಾಕ್ಷರರಾಗುತ್ತಿದ್ದೇವೆ ನಿಜ…. ಆದರೆ ವಿದ್ಯೆ?. ಸಾವಿರಾರು ವರ್ಷಗಳಿಂದ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಮೌಲ್ಯಗಳು ನಶಿಸುತ್ತಿವೆ. ಹಲವಾರು ಮನೆಗಳು ಸಿರಿವಂತಿಕೆಯಿಂದ, ಪೀಠೋಪಕರಣಗಳಿಂದ ತುಂಬಿ ತುಳುಕುತ್ತಿದ್ದರೂ ಮನಸ್ಸು ದ್ವೇಷ ಅಸೂಯೆ ಅಸಹನೆಗಳನ್ನು ಹೊಂದಿ ಪ್ರೀತಿ ವಿಶ್ವಾಸ ಬಾಂಧವ್ಯ ಬಂಧುತ್ವ ಗಳನ್ನು ಹೊರಹಾಕಿವೆ. “ವಸುದೈವ ಕುಟುಂಬಕಂ” ಎಂದು ಜಗತ್ತಿಗೆ ಸಾರಿದ ನಮ್ಮ ದೇಶದಲ್ಲಿ ಕೌಟುಂಬಿಕ ಸಾಮರಸ್ಯ ನಶಿಸುತ್ತಿದೆ. ನೆರೆಹೊರೆಯವರನ್ನು ಬಂಧು ಬಾಂಧವರಂತೆ ಕಾಣುತ್ತಿದ್ದ ನಾವೀಗ ಮನೆಯ ಸದಸ್ಯರನ್ನೇ ನೀವ್ಯಾರು? ಎಂಬಂತೆ ಬದುಕುತ್ತಿದ್ದೇವೆ.ಮನೆ ಮನಗಳು ಛಿದ್ರವಾಗುತ್ತಿವೆ.  ‘ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ’ ಎಂದು ಪಶು ಪಕ್ಷಿಗಳು ಕೂಡ ಹಾಡಿ ಹೊಗಳಿರುವ ನಮ್ಮ ದೇಶದಲ್ಲಿ ಮೌಲ್ಯಗಳು ಮರೆಯಾಗುತ್ತಿವೆ. ಸಾಮಾಜಿಕವಾಗಿ ಒಂದಾಗಿ ಬಾಳಬೇಕಿರುವ, ಸರ್ವಧರ್ಮ ಸಮನ್ವಯದ ನಾಡು ಇದೀಗ ಜಾತಿಯ ವಿಷ ಬೀಜಗಳನ್ನು ಬಿತ್ತುವ, ಧರ್ಮಾಂಧತೆಯನ್ನು ತುಂಬುವ ನಾಡಾಗಿ ಪರಿವರ್ತನೆಯಾಗಿದೆ. ಸಾಮಾಜಿಕ ಸಮಾನತೆ ಎನ್ನುವುದನ್ನು ಪುಸ್ತಕಗಳಲ್ಲಿ ಮಾತ್ರ ಕಾಣಬಹುದು…. ಉಳ್ಳವರು ಮತ್ತಷ್ಟು ಶ್ರೀಮಂತರಾಗುವ, ಬಡವರು ಮತ್ತಷ್ಟು ಬಡವರಾಗುವ ದೈನೇಸಿ ಸ್ಥಿತಿ ನಮ್ಮದಾಗಿದೆ. ಕೆಲವರಿಗೆ ತಿನ್ನಲು ಸಾಧ್ಯವಾಗದಷ್ಟು ಆಹಾರ ಮಿಕ್ಕಿ ತಿಪ್ಪೆ ಸೇರಿದರೆ ಆ ತಿಪ್ಪೆಯಲ್ಲಿ ಕುಳಿತು ಚೆಲ್ಲಿದ ಆಹಾರವನ್ನು ತಿನ್ನಲು ಬರುವ ನಾಯಿಗಳನ್ನು ಓಡಿಸಿ ತಾವು ತಿನ್ನುವ ಸ್ಥಿತಿಯಲ್ಲಿರುವ ಜನರು ನಮ್ಮಲ್ಲಿದ್ದಾರೆ. ಬಡ ಜನರ ಅನುಕೂಲಕ್ಕಾಗಿ ಸರಕಾರಗಳು ಕೊಡ ಮಾಡುವ ಯೋಜನೆಗಳು ನಿಜವಾಗಿಯೂ ಅವಶ್ಯಕತೆ ಉಳ್ಳವರನ್ನು ತಲುಪುವ ಮುನ್ನವೇ ಮಧ್ಯವರ್ತಿಗಳ ಮತ್ತು ಖೊಟ್ಟಿ ಬಡವರ ಕೈ ಸೇರುತ್ತಿದ್ದು ಬಹಳಷ್ಟು ಬಾರಿ ಈ ಯೋಜನೆಯ ಫಲಾನುಭವಿಗಳು ಕನ್ನಡಿಯಲ್ಲಿನ ಗಂಟಿನಂತೆ ಈ ಸೌಲಭ್ಯಗಳಿಗಾಗಿ ಎದುರು ನೋಡುವುದೇ ಆಗಿದ್ದು ನೀರಿನಲ್ಲಿ ಹೋಮ ಮಾಡಿದಂತೆ ನಿಷ್ಪ್ರಯೋಜಕವಾಗಿವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವ್ಯವಸ್ಥೆಯು ಸಾಕಷ್ಟು ಹೆಣಗಾಡುತ್ತಿದ್ದರೂ ಕೂಡ ಆಗಾಗ ಅಲ್ಲಲ್ಲಿ ಜಾತಿ, ಮತ, ಪಂಥ, ಗುಂಪುಗಾರಿಕೆಗಳ ಕಾರಣ ಜನರ ಮಾನ, ಜೀವ ಹಾನಿ ಆಗುತ್ತಿದೆ. ಸರ್ವಧರ್ಮ ಸಮಭಾವದಿಂದ ನೋಡುತ್ತಿದ್ದ ದೇಶದಲ್ಲಿ ಇಂದು ಪ್ರತಿಯೊಂದು ಜಾತಿಗಳಲ್ಲಿನ ಒಳ ರಾಜಕೀಯಗಳು ಭಾವೈಕ್ಯತೆಯ ಬದುಕನ್ನು ಶಿಥಿಲಗೊಳಿಸಿವೆ. ಹೆಣ್ಣನ್ನು ದೇವತೆ ಎಂದು ಪೂಜಿಸುತ್ತಿದ್ದ ನಾಡಿನಲ್ಲಿ ಇಂದು ಹಾಡು ಹಗಲೇ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಹತ್ಯೆಗೈಯುತ್ತಿದ್ದಾರೆ. ಬಹುತೇಕ ಶಿಕ್ಷಣವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿದ ಪರಿಣಾಮವಾಗಿ ಉನ್ನತ ಶಿಕ್ಷಣ ಎಂಬುದು ಉಳ್ಳವರ ಸ್ವತ್ತಾಗಿದ್ದು, ಬಡವರಿಗೆ ಗಗನ ಕುಸುಮವಾಗಿದೆ. ಉದ್ಯೋಗಾಧಾರಿತ ಶಿಕ್ಷಣಗಳು ದೊರೆಯದೆ ಇರುವ ಕಾರಣ ನಮ್ಮಲ್ಲಿ ಪದವೀಧರರು ಇದ್ದರೂ ಅವರಲ್ಲಿ ಇರಬೇಕಾದ ಅವಶ್ಯಕ ಜಾಣ್ಮೆ, ಕಾರ್ಯಶೀಲತೆ ಕಣ್ಮರೆಯಾಗಿದ್ದು ಒಬ್ಬರೇ ಮಾಡಬಹುದಾದ ಕೆಲಸವನ್ನು ಹತ್ತಾರು ಜನರು ಮಾಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಗುಲಾಮಿ ಪ್ರವೃತ್ತಿಯನ್ನು ಹೊಂದಿರುವ ಜನರು ಉದ್ಯೋಗಕ್ಕಾಗಿ ಅಲೆಯುತ್ತಾರೆಯೇ ಹೊರತು ಉದ್ಯೋಗವನ್ನು ಸೃಷ್ಟಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಐತಿಹಾಸಿಕವಾಗಿ ಸಮೃದ್ಧವಾಗಿರುವ ನಮ್ಮ ಇತಿಹಾಸವನ್ನು, ಶೈಕ್ಷಣಿಕ ಜ್ಞಾನದ ವ್ಯವಸ್ಥೆಯನ್ನು ಹಿಂದಿಕ್ಕೆ ಆಂಗ್ಲರು ಜಾರಿಗೆ ತಂದಂತಹ ಶೈಕ್ಷಣಿಕ ಪದ್ಧತಿಗೆ ಜೋತು ಬಿದ್ದಿರುವ ನಾವುಗಳು ಸೀಡ್ ಲೆಸ್ ಶಿಕ್ಷಕರನ್ನು ಸೃಷ್ಟಿಸುತ್ತಿದ್ದೇವೆ. ಜನರು ಶಿಕ್ಷಿತರಾಗಿದ್ದಾರೆ ನಿಜ, ಆದರೆ ಸುಶಿಕ್ಷಿತರಾಗಿಲ್ಲ. ನ್ಯಾಯ, ಧರ್ಮ, ಸತ್ಯ, ನಿಷ್ಠೆ, ಪ್ರೀತಿ, ಮಮತೆ ಮುಂತಾದ ಮೌಲ್ಯಗಳು ಇಂದಿನ ಜನತೆಯ ಪಾಲಿಗೆ ಹಳೆಯ ಸವಕಲು ನಾಣ್ಯದಂತಾಗಿದ್ದು ಆ ಜಾಗದಲ್ಲಿ ದ್ವೇಷ ಅಸೂಯೆ, ಮತ್ಸರಗಳು ತುಂಬಿ ಮೌಲ್ಯಗಳ ಅಪಮೌಲೀಕರಣವಾಗುತ್ತಿದೆ. ರಾಮಾಯಣ ಮಹಾಭಾರತ, ಭಗವದ್ಗೀತೆಯಂತಹ ಮಹಾನ್ ಗ್ರಂಥಗಳನ್ನು ಜಗತ್ತಿಗೆ ಕಾಣಿಕೆಯಾಗಿ ನೀಡಿದದೇಶದಲ್ಲಿ ಕವಿ, ಸಾಹಿತಿ, ಕಲೆ ಮತ್ತು ಕಲಾವಿದರನ್ನು ಕೆಲಸಕ್ಕೆ ಬಾರದವರು ಎಂಬಂತೆ ಕಾಣಲಾಗುತ್ತಿದೆ. ಹೊಡಿ ಬಡಿ ಲಾಂಗು ಮಚ್ಚು ಹಿಂಸೆಯನ್ನು ವೈಭವೀಕರಿಸುವ ಚಲನಚಿತ್ರಗಳು ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿಕೊಂಡು ಅದರ ಹೀರೋಗಳು ಜನನಾಯಕರಾಗಿ ಮೆರೆದರೆ, ಸಮಾಜವನ್ನು ಕಟ್ಟುವ ಶಿಕ್ಷಕರು, ದೇಶವನ್ನು ಕಾಯುವ ಯೋಧರನ್ನು ಅಸಡ್ಡೆಯಿಂದ ಕಾಣಲಾಗುತ್ತದೆ. ಶೈಕ್ಷಣಿಕ ಸೇವೆ ಮತ್ತು ವೈದ್ಯಕೀಯ ಸೇವೆಗಳು ಇದೀಗ ಕಾರ್ಪೊರೇಟ್ ರೂಪವನ್ನು ಪಡೆದುಕೊಂಡಿದ್ದು ಸೇವೆಯ ಬದಲಾಗಿ ದಂಧೆಗಳಾಗಿ ಪರಿವರ್ತನೆ ಹೊಂದಿವೆ. ರಕ್ತ ಬೀಜಾಸುರನ ಸಂತತಿಯಂತೆ ದೇಶವನ್ನೆಲ್ಲಾ ವ್ಯಾಪಿಸಿರುವ ಇವರ ಜಾಲವು ಜನರ ಶೈಕ್ಷಣಿಕ ಗುಣಮಟ್ಟವನ್ನು, ಆರೋಗ್ಯವನ್ನು ಕಟ್ಟಿಕೊಡುವ ಭರವಸೆಯನ್ನು ನೀಡುತ್ತವೆ, ನಿಜ ಆದರೆ ಅದರ ಜೊತೆಗೆ ಆರ್ಥಿಕ ದಿವಾಳಿತನಕ್ಕೆ ಕಾರಣವಾಗುತ್ತದೆ. ಇನ್ನು ಕೃಷಿ ಪ್ರಧಾನವಾದ ಭಾರತ ದೇಶ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ನಮ್ಮ ದೇಶದಲ್ಲಿ ರೈತನ ಬದುಕು ಮೂರಾಬಟ್ಟೆಯಾಗಿದೆ. ಸಮಯಕ್ಕೆ ಸರಿಯಾಗಿ ಬಾರದ ಮಳೆ, ಸಿಗದ ಬಿತ್ತನೆ ಬೀಜಗಳು ಗೊಬ್ಬರಗಳು ಬಿತ್ತಿದ್ದು ಬೆಳೆಯಾಗದೆ, ಬೆಳೆದದ್ದು ಸರಿಯಾಗಿ ಕೈಗೆ ಬರದೆ ಕೈಗೆ ಬಂದರೂ ದಲ್ಲಾಳಿಗಳ ಮಧ್ಯವರ್ತಿಗಳ ನಡುವೆ ಸಿಲುಕಿ ಮಾರಾಟ ಮಾಡಿದಾಗ ಹಿಡಿಯಷ್ಟು ಹಣವನ್ನು ಕೈಯಲ್ಲಿ ಮನೆಗೆ ಹಿಡಿದು ಬರುವ ರೈತ ತನ್ನ ಮನೆಯವರ ಕಣ್ಣಿನಲ್ಲಿಯೇ ಸಸಾರವಾಗುತ್ತಾನೆ. ದೇಶದ ಬೆನ್ನೆಲುಬು ರೈತ ಎಂದು ನಮ್ಮ ಜನ ಹಾಡಿ ಹೊಗಳುವರು ….ಆದರೆ ಆ ರೈತನ ಬೆನ್ನೆಲುಬೇ ಮುರಿದುಹೋಗಿದೆ.  ಓಟು ಪಡೆಯುವ ಮುನ್ನ ಮತದಾರ ಪ್ರಭುವಿನ ಎದುರು ಶಿರಬಾಗಿ ನಮಿಸುವ ಮತ ಯಾಚಿಸುವ ನಾನು ನಿಮ್ಮವನು ಎಂದು ಹೇಳುವ ರಾಜಕಾರಣಿಗಳು ಒಂದೊಮ್ಮೆ ಗೆದ್ದು ಅಧಿಕಾರ ಸೂತ್ರವನ್ನು ಹಿಡಿದಾಗ ಇವನ್ಯಾರವ ಎಂದು ಕೇಳುವ, ಅಧಿಕಾರ ಚಲಾಯಿಸುವ, ತಮ್ಮ ಮುಂದಿನ ಮೂರು ತಲೆಮಾರಿನ ಜನರು ಕುಳಿತು ತಿನ್ನುವಷ್ಟು ಹಣವನ್ನು ಆಸ್ತಿಯನ್ನು ಸಂಗ್ರಹಿಸುವುದನ್ನು ನೋಡಿದರೆ ಅಸಹ್ಯವೆನಿಸುತ್ತದೆ. ‘ಶ್ವಾಸ ಬಿಟ್ಟರೂ ಆಶ್ವಾಸನೆ ಕೊಡುವುದನ್ನು ಬಿಡುವುದಿಲ್ಲ ಎಂಬಂತೆ ವರ್ತಿಸುವ ಜನ ಸೇವಕರು ಮುಂದೆ ಜನ ನಾಯಕರಾಗಿ ಪ್ರಜಾಪ್ರಭುತ್ವವನ್ನೇ ತಮ್ಮ ಕಾಲಡಿಯಲ್ಲಿ ತುಳಿದು ಅಟ್ಟಹಾಸಗೈಯುವುದನ್ನು ನಾವು ನೋಡುತ್ತೇವೆ.  ನಿಜ! ರಸ್ತೆಗಳ ಅಗಲೀಕರಣ ಮಾಡುವುದರಿಂದ ಫ್ಲೈ ಓವರ್ ಗಳನ್ನು ನಿರ್ಮಿಸುವುದರಿಂದ, ಬೃಹದಾಕಾರದ ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದರಿಂದ ನಮ್ಮ ದೇಶ ಅಭಿವೃದ್ಧಿಯಾಗುವುದಿಲ್ಲ. ದೇಶದ ಅಭಿವೃದ್ಧಿಯನ್ನು 360° ಕೋನದಲ್ಲಿ ನೋಡಬೇಕು. ದೇಶದ ಅಭಿವೃದ್ಧಿಯನ್ನು ಮೂಲಭೂತ ಸೌಲಭ್ಯಗಳನ್ನು ಒದಗಿಸುವ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಅತ್ಯವಶ್ಯಕವಾದ ಮಾರ್ಗಗಳನ್ನು ಅನುಸರಿಸಲು ಸರಕಾರಗಳು ಹೆಣಗಾಡುತ್ತಿವೆ ನಿಜ…. ಆದರೆ ಪ್ರಯತ್ನ ಮತ್ತು ಕಾರ್ಯಶೀಲತೆ ಒಂದೇ ನಾಣ್ಯದ ಎರಡು ಮುಖಗಳು. ಒಬ್ಬರಿಗೊಬ್ಬರು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಲೇಬೇಕು. ಮುಖ್ಯವಾಗಿ ಯುವ ಜನತೆಯಲ್ಲಿ ಮೌಲ್ಯಗಳ ಪುನರುತ್ಥಾನವಾಗಬೇಕು. ಬದುಕಿನಲ್ಲಿ ಭರವಸೆಯ ಜೊತೆಗೆ ಭದ್ರ ಭವಿಷ್ಯದ ಕನಸುಗಳು ಸಾಕಾರಗೊಳ್ಳುವ ನಿಶ್ಚಯಗಳು ಇರಬೇಕು. ಬಹಳಷ್ಟು ಇಲ್ಲಗಳ ನಡುವೆಯೂ ಕೂಡ ಸತತ ಪ್ರಯತ್ನಕ್ಕೆ ಜಯವಿದೆ ಎಂಬ ಮಾತಿನಂತೆ ದೇಶದ ನಾಲ್ಕು ಅಂಗಗಳು ಸಂವಿಧಾನವು ನಮಗೆ ನೀಡಿರುವ ಅಧಿಸೂಚನೆಗಳಂತೆ ಕಾರ್ಯನಿರ್ವಹಿಸಿದರೆ ಮುಂದಿನ ಕೆಲವೇ ದಶಕಗಳಲ್ಲಿ ನಾವು ಸುಸ್ಥಿರವಾದ ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳುವ ಯುವ ಪೀಳಿಗೆಯನ್ನು ನೋಡಬಹುದು.  ಒಂದು ದೇಶದ ಅಭಿವೃದ್ಧಿಯನ್ನು ಕೇವಲ ಅಂಕಿ ಅಂಶಗಳ ಆಧಾರದಿಂದ ನೋಡದೆ ಆ ದೇಶದ ಜನರ ಬದುಕಿನ ಸ್ಥಿತಿಗತಿಗಳು, ಆರ್ಥಿಕ ಸ್ಥಿರತೆ, ಸಾಮಾಜಿಕ ಭದ್ರತೆ, ಸಾಂಸ್ಕೃತಿಕ ಮೌಲ್ಯಗಳ ಅಳವಡಿಸಿಕೊಳ್ಳುವಿಕೆ, ಉತ್ತಮ ನಾಯಕತ್ವದ ಸಜ್ಜನಿಕೆಯ ದೂರ ದೃಷ್ಟಿಯುಳ್ಳ ವೈಯುಕ್ತಿಕ ಹಿತಾಸಕ್ತಿಯನ್ನು ಮೀರಿದ ರಾಜಕಾರಣ,ಸರ್ವಧರ್ಮ ಸಮಾನತೆಯ ಸಂಘಟನಾತ್ಮಕವಾದ ಜಾತ್ಯತೀತ, ಧರ್ಮಾತೀತ ಸಮಾಜ, ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಮಾಜವನ್ನು, ಮಹಿಳೆಯರ ಸದಲೀಕರಣವನ್ನು ಹೊಂದಿರುವ ನಿಟ್ಟಿನಲ್ಲಿ ನಾವು ನೋಡುವುದು. ಇದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲರೂ ನೀಡಬೇಕಾಗಿರುವ ನಮ್ಮ ನಮ್ಮ ಸಾಲಿನ ಕಾಣಿಕೆ.ಇನ್ನಾದರೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗೋಣ…. ಸುಸ್ಥಿರ ಸಮಾಜದ ಭದ್ರಬುನಾದಿಗೆ ಅಸ್ತಿ ಭಾರವನ್ನು ಹಾಕೋಣ ಎಂಬ ಆಶಯದೊಂದಿಗೆಎಲ್ಲರಿಗೂ 08ನೇ ಸ್ವಾತಂತ್ರ್ಯ ದಿನೋತ್ಸವದ ಶುಭಾಶಯಗಳು ವೀಣಾ ಹೇಮಂತ್ ಗೌಡ ಪಾಟೀಲ್

“80ನೇ ಸ್ವಾತಂತ್ರ್ಯೋತ್ಸವ…. ಒಂದು ವಿವೇಚನೆ” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ, ಜೀವನ

ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ

ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ

ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ Read Post »

ಇತರೆ, ನಿಮ್ಮೊಂದಿಗೆ

“ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ” ಕೇಂದ್ರ ಸಾಹಿತ್ಯ ಅಕಾಡೆಮಿ,ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಡಾ.ಸಿದ್ದರಾಮ ಹೊನ್ಕಲ್‌ ಮಂಡಿಸಿದ ಪ್ರಬಂಧ.( ಪ್ರತಿಯೊಬ್ಬ ಕನ್ನಡ ಕವಿಯೂ ಓದಲೇಬೇಕಾದ ಬರಹ.)

ವಿಶೇಷ ಸಂಗಾತಿ ಡಾ.ಸಿದ್ದರಾಮ ಹೊನ್ಕಲ್ “ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ” ಕೇಂದ್ರ ಸಾಹಿತ್ಯ ಅಕಾಡೆಮಿ,ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಡಾ.ಸಿದ್ದರಾಮ ಹೊನ್ಕಲ್‌ ಮಂಡಿಸಿದ ಪ್ರಬಂಧ.( ಪ್ರತಿಯೊಬ್ಬ ಕನ್ನಡ ಕವಿಯೂ ಓದಲೇಬೇಕಾದ ಬರಹ.) *ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ..*(ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ. ಪ್ರತಿಯೊಬ್ಬ ಕನ್ನಡದ ಕವಿಗಳು ಓದಬೇಕು.)ಲೇಖಕ – *ಡಾ.ಸಿದ್ಧರಾಮ ಹೊನ್ಕಲ್* ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಮುಗಿದು ಈಗಾಗಲೇ 79 ವರ್ಷಗಳ ಸಂಭ್ರಮದಲ್ಲಿ ಈ ಅಗಸ್ಟ ೧೫ ರಂದು ನಾವು ಭಾರತದ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸ್ವಾತಂತ್ರ್ಯ ಹೋರಾಟದ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆಯನ್ನು ಕುರಿತು ಮಾತಾಡಲು ನನಗೆ ಅವಕಾಶ ಒದಗಿಸಿದ್ದಕ್ಕೆ ಮೊಟ್ಟ ಮೊದಲನೆಯದಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯವರಿಗೆ ಅದರ ಎಲ್ಲ ಸದಸ್ಯರಿಗೆ ಮತ್ತು ಅಧ್ಯಕ್ಷರಿಗೆ ಗೌರವಯುತ ವಂದನೆಗಳನ್ನು ಅರ್ಪಿಸಿ ನನ್ನ ಮಾತುಗಳನ್ನು ಆರಂಭಿಸುತ್ತಿದ್ದೇನೆ.ಆ ಸ್ವಾತಂತ್ರ್ಯ ಪೂರ್ವದ ಸಂಗ್ರಾಮಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಸಾಕಷ್ಟು ಇದೆ. ನನಗೆ ಕಾವ್ಯ ಕ್ಷೇತ್ರದಿಂದ ಆದಂತಹ ಕೊಡುಗೆಯನ್ನು ಕುರಿತು ವಿಷಯ ಕೊಟ್ಟಿರುವದರಿಂದ ಹಾಗೂ ಹದಿನೈದು ನಿಮಿಷಗಳ ಸಮಯದ ಮಿತಿಯಲ್ಲಿ ಪ್ರಬಂಧ ಮಂಡಿಸಲು ಹೇಳಿರುವದರಿಂದ ಆ ನಿಗದಿತ ಅವಧಿಗೆ ಸಾಧ್ಯವಾಗುವಷ್ಟು ಇಲ್ಲಿ ನಾನು ನನಗೆ ದೊರೆತ ಆಕರಗಳ, ಕವಿತೆಗಳ ಹಿನ್ನೆಲೆಯಲ್ಲಿ ಪ್ರಾಮಾಣಿಕವಾಗಿ ನನ್ನ ಅನಿಸಿಕೆ ಹಂಚಿಕೊಳ್ಳಲು ಪ್ರಯತ್ನಿಸುವೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ.ನಮ್ಮ ಈ ಭಾರತದ ಬಹುತೇಕ ಜನತೆಗೆ ಒಂದು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತ್ರ ಗೊತ್ತು.ಅದು 1947 ಅಗಸ್ಟ್ ಹದಿನೈದರಂದು ದೊರೆತ  ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತ್ರ.ಆದರೆ ನಾನು ಬಂದಿರುವ‌ ಹೈದರಾಬಾದ್ ಕರ್ನಾಟಕದ ಅಂದರೆ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶದವರಾದ ನಮಗೆ ಈ ಸ್ವಾತಂತ್ರ್ಯ ಒಂದು ವರ್ಷ ಒಂದು ತಿಂಗಳು ತಡವಾಗಿ ದೊರೆಯಿತು.ಇಡೀ ದೇಶ‌ ಸ್ವಾತಂತ್ರ್ಯ ದ ಸಂಭ್ರಮದಲ್ಲಿ ಪುಳಕಗೊಂಡು ಜೈ ಭಾರತಮಾತೆ..ಎಂದು ಹರ್ಷದಿಂದ ಉದ್ಗಾರ ಮಾಡುವಾಗ ನಾವು ನಮ್ಮ ಪ್ರದೇಶದ ಜನ‌ ಅಖಂಡ ಭಾರತದ ಒಕ್ಕೂಟದಲ್ಲಿ ಸೇರದೇ ಹೊರಗೆ ಉಳಿದ ಹೈದರಾಬಾದ್ ನ ನಿಜಾಂನ ಹಾಗೂ ಆತನ ಸೇನಾಧಿಪತಿ ಕಾಸಿಂ ರಜ್ವಿ ಕಟ್ಟಿದ‌ ಖಾಸಗಿ ಸೈನ್ಯ ರಜಾಕಾರರ ಬೂಟು ಗಾಲಿನಿಂದ ಒದೆ ತಿನ್ನುತ್ತಾ,ಅವರ ದೌರ್ಜನ್ಯ,ಹಿಂಸೆ ಅತ್ಯಾಚಾರಕ್ಕೆ ಒಳಗಾಗಿ ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಿದ ತಿರಂಗಿ ಧ್ವಜ ದ ಸಂಭ್ರಮ ನೋಡಲಾಗದೇ; ಅದನ್ನು ಕಲ್ಪಿಸಿಕೊಳ್ಳಲು‌ ಸಹ ಭಯ ಭೀತರಾದಂತಹ ಪರಸ್ಥಿತಿಯಲ್ಲಿ ನಲುಗಿ ಹೋಗಿದ್ದರು. ಆ ಹಿನ್ನೆಲೆಯಲ್ಲಿ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕರೆ, ನಿಜಾಂ ಸರ್ಕಾರದ ಅಡಿಯಲ್ಲಿದ್ದ ಹೈದರಾಬಾದ್ ಕರ್ನಾಟಕದ ನಮಗೆ ಮತ್ತೋಂದು ಬಹು ಭೀಕರ ಹೋರಾಟ ಮಾಡಿದ ನಂತರ ಒಂದು ವರ್ಷ ಒಂದು ತಿಂಗಳು ತಡವಾಗಿ ಸ್ವಾತಂತ್ರ್ಯ ಸಿಕ್ಕಿತು.ಆ ಹಿನ್ನೆಲೆಯಲ್ಲಿ ನಾನು ಈ ಸಂದರ್ಭದಲ್ಲಿ ಎರಡು ಹೋರಾಟಗಳ ಕುರಿತು ನಮ್ಮ ಕನ್ನಡ ಕಾವ್ಯವನ್ನು ಗಮನಿಸಿ ಕಟ್ಟಿಕೊಡಲು ಯತ್ನಿಸುತ್ತೇನೆ.ಯಾವುದೇ ಕಾಲಮಾನದಲ್ಲಿ ಲೇಖಕ,ಕವಿ,ಕಲಾವಿದ ನಾದವನು ಆ ಒಂದು ಕಾಲಮಾನದ ಸಾಕ್ಷಿ ಪ್ರಜ್ಞೆ ಯಾಗಿರುತ್ತಾನೆ. ತನ್ನ ಕಾಲಮಾನದಲ್ಲಿ ನಡೆದ ಯಾವುದೇ ವಿದ್ಯಮಾನಗಳಿಗೆ ಸ್ಪಂದಿಸುತ್ತಾನೆ.ಕವಿ ಲೇಖಕ ಬರಹಗಾರ ಒಟ್ಟಾರೆ ಅಕ್ಷರಬಲ್ಲ ಸೃಜನಜನಶೀಲ ವ್ಯಕ್ತಿ ಕಲಾವಿದ ಹೋರಾಟಗಾರ ಇವರೆಲ್ಲರೂ ಆ ಸಂದರ್ಭದಲ್ಲಿ ಸ್ಪಂದಿಸದೇ ಹೋದರೆ ಆತ ಸಮಾಜಿಮುಖಿ‌, ಜನಮುಖಿ ಕವಿಯಾಗಲಾರ.ಹೋರಾಟಗಾರನಾಗಲಾರ.ಕಲಾವಿದ ಆಗಲಾರ. ಸಾಮಾನ್ಯ ಜನತೆ ಒಬ್ಬ ಅಥವಾ ಒಂದು ಸಮೂಹ ನಾಯಕತ್ವದಲ್ಲಿ ಯಾವುದೇ ಒಂದು ಹೋರಾಟವನ್ನು ರೂಪಿಸಿದವರ ಜೊತೆ ಆ ಹೋರಾಟಕ್ಕೆ ಕೈ‌ ಜೋಡಿಸುತ್ತಾರೆ. ಆಗ ಯಾವುದೇ ಒಂದು ಹೋರಾಟಕ್ಕೆ ಬೇಕಾದ ಹೋರಾಟದ‌ ಹಾಡುಗಳು,ಕವಿತೆಗಳು,ಮಾತುಗಳು,ಭಿತ್ತಿ ಚಿತ್ರಗಳು,ಒಟ್ಟಾರೆ ಆಗ ಸೃಷ್ಠಿಯಾದ ಸಾಹಿತ್ಯ ಬಹುಮುಖ್ಯ ವಾಗಿ ಜನಮನ ಸೆಳೆದು ಹೋರಾಟದ ಕಡೆಗೆ ಜನರನ್ನು ಆಕರ್ಷಿಸುವ ಹಾಗೂ ತಮ್ಮ ಆ ಹೋರಾಟದ ಹಿಂದಿನ‌ ಕೈ‌ಗೆ ಹಾಕಿದ ಬೇಡಿಯನ್ನು, ಬಂಧನವನ್ನು ಕಳಚಿಕೊಳ್ಳುವ‌ ಆ ಸಂದರ್ಭದಲ್ಲಿ ಆಗಬೇಕಾದ ದೈಹಿಕ ಮಾನಸಿಕ ಶಿದ್ಧತೆಗೆ ಒಂದು ಪ್ರೇರಣೆಯನ್ನು ಖಂಡಿತಾ ಸಾಹಿತ್ಯ ಕ್ಷೇತ್ರ ಒದಗಿಸುತ್ತದೆ.ಆ ಎಲ್ಲಾ ಹಿನ್ನೆಲೆಯಲ್ಲಿ ಈಗ ಮೊದಲನೆದಾಗಿ ನಾನು ಅಗಷ್ಟ ೧೫-೧೯೪೭ ರಲ್ಲಿ ದೊರೆತ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮ ಕನ್ನಡದ ಕವಿಗಳ ಕಾವ್ಯದ ಕೊಡುಗೆ ಹಿನ್ನೆಲೆಯಲ್ಲಿ ಚರ್ಚಿಸುತ್ತೇನೆ.*ನಮ್ಮದಿ ನಮ್ಮದಿ ಭರತಭೂಮಿ ಹೆರವರ ನಂಬದಲೇ**ಜಗದೀಶ್ವರಂ ತಾನೇ ಧರಸಿ ನಾನಾವತಾರಗಳನು**ಕರೆವ ಸರ್ವಸ್ವಮಂ ಧರೆಯ ಸಂರಕ್ಷಿಸುವ ತೆರೆವ**ಕಲಿಸಿದ ಪೂರ್ವ ಪಾಠಶಾಲೆ…*ಜೈ ಭಾರತ ರಾಷ್ಟ್ರಗೀತೆಯ ಕೃತಿಯಲ್ಲಿರುವ ಈ ಕವಿತೆಯ,ಹಾಡಿನ ಮೂಲಕ ೧೯ ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ರಾಷ್ಟ್ರಾಭಿಮಾನಿ ಕವಿ ಎಂದೇ ಖ್ಯಾತರಾಗಿರುವ *ಶಾಂತಕವಿ* ಎಂಬ ಕಾವ್ಯನಾಮದ ಬಾಳಾಚಾರ್ಯ ಸಕ್ರಿಯವರ ಈ ಕವಿತೆಯ ಮೂಲಕ  ಹರಿದು ಬಂದ ಸ್ವಾತಂತ್ರ್ಯ ಸಂಗ್ರಾಮದ ಕಾವ್ಯವನ್ನು ಗಮನಿಸಬಹುದಾಗಿದೆ.ಸ್ವಾತಂತ್ರ ಪೂರ್ವದ ಬ್ರಿಟಿಷರ ಆಳ್ವಿಕೆಯಲ್ಲಿ ನಲುಗಿದ ಭಾರತಾಂಬೆಯನ್ನು , ಈ ಭರತ ಭೂಮಿಯನ್ನು ಸ್ವತಂತ್ರಗೊಳಿಸಬೇಕೆಂಬ ಕಲ್ಪನೆ ಅದಾಗಲೇ ಕವಿ, ಲೇಖಕ, ಹೋರಾಟಗಾರರು, ಕಲಾವಿದರಲ್ಲಿ ಸೂಪ್ತವಾಗಿ ಮೊಳಕೆ ಒಡೆಯುತ್ತಿದ್ದ ಕಾಲವದು.ನವೋದಯ ಸಾಹಿತ್ಯದ ಹರಿಕಾರರಾದ ಬಿ ಎಂ ಶ್ರೀ ಅವರಿಂದ ಆರಂಭಗೊಂಡು ಆ ಕಾಲಮಾನದ ಎಲ್ಲ ಕವಿಗಳು ಸ್ವಾತಂತ್ರದ ಹೋರಾಟಕ್ಕೆ ತಮ್ಮ ಕಾವ್ಯದ ಮೂಲಕ ಸ್ಪಂದಿಸಿದ್ದು ಸ್ವಾತಂತ್ರ್ಯ ಹೋರಾಟದ ಇತಿಹಾಸ ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.*ತಂತ್ರ ವಾದ್ಯವು ಲೇಸು**ಮಂತ್ರಿಯ ಕಳೆ ಲೇಸು**ಯಂತ್ರ ವಾಹಕನ ದಯೆ ಲೇಸು**ಜಗದೀ ಸ್ವಾತಂತ್ರ್ಯವೇ ಲೇಸು*ಎಂದು ನಮ್ಮ ಲೋಕ ಸಂಚಾರಿ, ಲೋಕಾನುಭವಿ ಕವಿ ಸರ್ವಜ್ಞನು. ಈ ಜಗಕ್ಕೆ ಸ್ವಾತಂತ್ರ್ಯವೇ ಲೇಸು ಎಂದು ತಮ್ಮ ಬದುಕಿನ ಕಾಲ ಘಟ್ಟದಲ್ಲಿ ಹೇಳಿರುವುದು ಇಲ್ಲಿ ಉಲ್ಲೇಖನೀಯ.12ನೇ ಶತಮಾನದ ಬಸವಾದಿ ಶರಣರ ಕಾಲದಿಂದಲೇ ಸ್ವತಂತ್ರ ವಿಚಾರಧಾರೆ ಜನಮನಕ್ಕೆ ತಲುಪಿ ಪ್ರತಿಯೊಬ್ಬರಲ್ಲಿ ವ್ಯಕ್ತಿ ಗೌರವ, ಆತ್ಮವಿಶ್ವಾಸ, ಸಮಾನತೆ, ಸ್ವಾತಂತ್ರ್ಯದ ಪರಿಕಲ್ಪನೆ ಈ ನೆಲದಲ್ಲಿ ಬಿಜಾಂಕುರವಾಗಿತ್ತು. ಇದು ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಹೆಮ್ಮರವಾಗಿ ಬೆಳೆದು ಇಡೀ ನಾಡು ನುಡಿ ಗಡಿದಾಟಿ ಇಡೀ ದೇಶವನ್ನೇ ವ್ಯಾಪಿಸಿದ್ದು ಸುಳ್ಳಲ್ಲ.ಮುಖ್ಯವಾಗಿ ಯಾವುದೇ ದೇಶದ ಜನ ಸಮೂಹ ಹೆರವರ ಕಟ್ಟುಪಾಡುಗಳಲ್ಲಿ, ಉಸಿರುಗಟ್ಟಿಸುವ ವಾತಾವರಣದಲ್ಲಿ ತೆಲೆ ತಗ್ಗಿಸಿ ಬಹುದಿನ ಬದುಕಲಾಗುವುದಿಲ್ಲ.ಆ ಕಾಲಮಾನದ ಸಾಕ್ಷಿ ಪ್ರಜ್ಞೆಯುತ್ತಿರುವ ಕವಿ, ಲೇಖಕ, ಬರಹಗಾರ, ಪತ್ರಕರ್ತ ಸುಮ್ಮನೆ ಮೌನ ಪ್ರೇಕ್ಷಕರಾಗಿ ಉಳಿಯಲಾರರು.ಅದೇ ರೀತಿ ಈ ಸ್ವಾತಂತ್ರ್ಯದ ಸಂದರ್ಭದಲ್ಲಿ ಸಹ ತಮ್ಮ ಕಾವ್ಯದ ಮೂಲಕ ಸ್ವಾತಂತ್ಯ್ರದ ರೊಚ್ಚು ಕೆಚ್ಚು ಜನಮನಕ್ಕೆ ತಲುಪಿಸಿ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬಂತೆ ತಮ್ಮ ಕಾವ್ಯವನ್ನು ನೂರಾರು ಕವಿಗಳು ಹರಿಸಿದ್ದಾರೆ.ಅಕ್ಷರ ಬಾರದವರು ಜನಪದ ಹಾಡು,ಹಲಾಹಿ ಹಾಡು, ಲಾವಣಿ,ಭುಲಾಯಿ, ಗೀಗಿಪದಗಳ ಮೂಲಕ ತಮ್ಮ ರಾಷ್ಟ್ರಾಭಿಮಾನವನ್ನು ಪ್ರದರ್ಶಿಸಿ ಒಟ್ಟಾರೆ ಸ್ವಾತಂತ್ರ್ಯ ದ ಹೋರಾಟದಲ್ಲಿ ತೊಡಗಿದ ಮಹಾತ್ಮನನ್ನು ಒಳಗೊಂಡ ಎಲ್ಲಾ ಸಮರ ಸೇನಾನಿಗಳಿಗೆ ,ಮುಂದಾಳುಗಳಿಗೆ ಪೂರಕವಾಗಿ ಕೆಲಸ ಮಾಡಿದ್ದು ಗಮನೀಯವಾಗಿದೆ.*ಭಾರತಾಂಬೆಯ ಹೀನ ಸ್ಥಿತಿಯನ್ನು ಕಣ್ಣು ತೆರೆಯುತ ನೋಡಿರಿ**ಪಾರತಂತ್ರ್ಯದಿ ಸಿಲುಕಿ ಬಳಲುವ ತಾಯಿಯನು ನೀವು ಬಿಡಿಸಿರಿ*@*ನಮ್ಮ ನಾಡಿನ ಹೆಣ್ಣು ಮಕ್ಕಳು ವೀರಶ್ರೀಯನು  ಬೀರುತ**ಒಮ್ಮನಸಿನೊಳೇ ರಾಷ್ಟ್ರ ಕಾರ್ಯಕ್ಕೆ ಪ್ರಾಣ ಕೊಡುತಿಹರಲ್ಲವೇ**ನಮ್ಮ ದೇಶದ ಸಿರಿಯು ಎಲ್ಲವೂ ಅನ್ಯ ದೇಶವ ಸೇರಿತು* *ಒಮ್ಮೆಯಾದರೂ ಹೊಟ್ಟೆ ತುಂಬಾ ಅನ್ನ ಸಿಗದಂತಾಯಿತು**ದೇಶ ಸೇವೆಯ ಸಮರ ಕಾಲದಿ ಪ್ರಾಣ ಹೋದರು ನೋಡದೆ**ದೇವ ಕೃಪೆಯನು ಪಡೆದು ದೇಶವನುಳಿಸಿಕೊಳ್ಳಲು ನಡೆಯಿರಿ*(ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಸಮರ ಕೃತಿಯ ಅನಾಮಿಕ ಕವಿಯೊಬ್ಬರ ಕವಿತೆ)  ಹೀಗೆ ಅಜ್ಞಾತ ಕವಿ ಒಬ್ಬ ರಾಷ್ಟ್ರ ಪ್ರೇಮವನ್ನು ಮೆರೆದು,ಹಿಂದಿನ ಸಿರಿ ಸಂಪತ್ತಿನ ನಮ್ಮ ಭಾರತ ಹೇಗಾಗಿದೆ ನೋಡಿ. ತುತ್ತು ಅನ್ನವು ಸಿಗದಂತಾಗಿದೆ ಬಡ ಬಗ್ಗರಿಗೆ ಎಂದು ಎಚ್ಚರಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬನ್ನಿ. ಇದಕ್ಕಾಗಿ ಪ್ರಾಣ ಹೋದರು ಪರವಾಗಿಲ್ಲ. ದೇವಕೃಪೆಯಿಂದ ಹೋರಾಡಿ ಗೆಲ್ಲೋಣವೆಂದು ಹೇಳಿದ ಈ ಮೇಲಿನ ಕವಿತೆಯ ಆಶಯ ಇಡೀ ಕನ್ನಡ ಕಾವ್ಯದ ಒಳ ಹರಿವಾಗಿತ್ತು ಅನಿಸದಿರದು.*ಸತ್ತಂತಿಹರನ್ನು ಬಡಿದೆಚ್ಚರಿಸು …ಎಂಬ ಕವಿ ಕುವೆಂಪುರವರು**ಸಾರಿ ಬಾ ಸರ್ವರ್ಗೆ  ಸ್ವಾತಂತ್ರ್ಯಮಂ**ಸಾರಿ ಬಾ ಸರ್ವರ್ಗೇ ಸಾಮ್ಯತ್ವಮಂ *ಸರ್ವಂಗೆ ಸಾರಿ ಬಾ ಸೌಹಾರ್ದಮಂ**ಸರ್ವ ಲೋಕದ ಸರ್ವ ಸಂತೋಷ ಮಂ *ಸರ್ವರಿಂ  ಸರ್ವರಾ ಉದ್ಧಾರಮಮಂ* ( ಭಾರತ ಸ್ವಾತಂತ್ರ ಗಾಯತ್ರಿ ಕೃತಿಯ ಕವಿತೆ) ಕವಿತೆಯಲ್ಲಿ  ಉದಾತ್ತವಾಗಿ ಸರ್ವರಿಗೂ ಸ್ವಾತಂತ್ಯ ದ ಜೊತೆ ಜೊತೆಗೆ ಸೌಹಾರ್ದತೆ,ಸಂತೋಷ,ಸ್ವಾಮ್ಯತ್ವ ಹಾಗೂ ಏಳಿಗೆಯನ್ನು ಬಯಸುವ ಮೂಲಕ ಸ್ವಾತಂತ್ರ್ಯದ ಮೂಲಕ ದೊರೆಯಬಹುದಾದ ಸರ್ವ ಕನಸುಗಳನ್ನು ಕಟ್ಟಿಕೊಟ್ಟಿದ್ದಾರೆ. ಮುಂದುವರಿದು,ಮಹಾ ಕವಿ ಕುವೆಂಪು ಅವರು ಹೀಗೆ ಹೇಳಿದ್ದಾರೆ.ಒಂದು ರಾಜ್ಯವ ಗೆದ್ದು ಸಿರಿಯನೆಲ್ಲವ ಕದ್ದುಬಲವಂತರಾದವರು ಬಲವಿಲ್ಲದವರುಗಳತುಳಿಯುತ್ತಿರಲು ಜನರ ಮೊರೆ ಬಾನೆಡೆಗೆಮುಟ್ಟುತ್ತಿರಲು ಉರುಳುರುಳು ಹಗಲಿರಲುಎಲೆ ಧರಣಿ! ನೀ ನಿಷ್ಕರುಣಿಹೀಗೆ ಜನಮನದ ತವಕ ತಲ್ಲಣಗಳನ್ನು ಪಾರತಂತ್ರದ ಹಿನ್ನೆಲೆಯಲ್ಲಿ ಕವಿ ಕುವೆಂಪು ಅವರು ಅತ್ಯಂತ ಸಾತ್ವಿಕವಾಗಿಯೇ ಕಟ್ಟಿಕೊಟ್ಟು ರಾಜ್ಯದ ಸಿರಿಯನು ಕದ್ದವನು ಒಳಗಿನವನಾದರೂ ಅಷ್ಟೇ,ಅವನು ಹೊರಗಿನವನಾದರೂ ಅಷ್ಟೇ ಎಂದು ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ದೂರ್ತತನವನ್ನು ತೆರೆದಿಟ್ಟಿದ್ದಾರೆ.@*ಗೇಣು ಭೂಮಿಗಾಗಿ ಎನ್ನ ಪ್ರಾಣ ಹೋಗಲಿ ಎಂದೆನ್ನುವಿ ಕಾಣದೇನೋ ನಾಡೇ ಪರಾಧೀನವಾಗಿರುವುದು ಮನುಜಾ ಮಾತೃಭೂಮಿಯ..*ಕವಿ ಮುದವೀಡು ಕೃಷ್ಣರಾಯರು..ಹೀಗೆ ಕಾವ್ಯದ ಮೂಲಕ ಕರೆನೀಡಿ ಒಡ ಹುಟ್ಟಿದವರ ಜೊತೆ ಒಡೆದಾಡುವ ನೀ ಪರಕೀಯರು ನಾಡೇ ಕಬಳಸಿದಾರೆ ಹೋರಾಡು ಎಂದು ಹೇಳುವುದು ಮನನೀಯವಾಗಿದೆ.@*ಹಿಂದು ಮಾತೆ ಬಂಧು ಭಾವದಿಂದ ನಿನ್ನ ಕಂದರು**ಒಂದು ಗೂಡಿ ಪಾರತಂತ್ರ್ಯ ಬಂಧವ ಹರಿದೊಗೆವೆವು*ಎಂದು ಕವಿಭೂಷಣ ಬೆಟಗೇರಿ ಕೃಷ್ಣಶರ್ಮ ಅವಳನ್ನು ತಾಯಿಗೆ ಹೋಲಿಸಿ ಅವಳ ಬಿಡುಗಡೆಗಾಗಿ ನಾವೆಲ್ಲ ಒಂದಾಗಬೇಕೆಂಬ ಸಂದೇಶ‌ ನೀಡಿದ್ದಾರೆ.@*ಭಾರತಾಂಭೆಯ ಹೀನ ಸ್ಥಿತಿಯನ್ನು ಕಣ್ಣು ತೆರೆಯುತ ನೋಡಿರಿ**ಪಾರತಂತ್ರ್ಯದಿ ಸಿಲುಕಿ ಬಳಲುವ ತಾಯಿಯನು ನೀವು ಬಿಡಿಸಿರಿ*ಎಂದು ಅನಾಮಿಕ ಕವಿಯೊಬ್ಬರ ಕವಿತೆಯ ಸಾಲುಗಳು ಇವು.ಇಂತಹ ನೂರಾರು ಅನಾಮಿಕ ಕವಿಗಳ ಕವಿತೆ ನಮಗೆ ಕಾಣಬರುತ್ತವೆ.ಕವಿ ಡಾ.ಸೂರ್ಯನಾಥ ಕಾಮತ ಅವರು ಸುಮಾರು ನೂರಾರು ಜನರ ನಾಲ್ಕು ನೂರಕ್ಕಿಂತ ಹೆಚ್ಚು ಕವಿತೆಗಳನ್ನು ಕವಿ ಜೆ ಎಸ್ ಎಸ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಇದ್ದಾಗ ಅವರ ಸಲಹೆ ಮೇರೆಗೆ ಸಂಪಾದಿಸಿಕೊಟ್ಟದ್ದನ್ನು ಬಿಡುಗಡೆಯ ಹಾಡುಗಳು ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.ಆ ಸಂದರ್ಭದಲ್ಲಿ ದೇಶಿಯ ದುಮದುಮೆ ಬರೆದ ದಿ.ಶ್ರೀಧರ  ಖಾನೋಲ್ಕರ್ ಅವರ ಕಾವ್ಯನಾಮ ಸೀತಾತನಯ ಎಂಬವರದು ಪ್ರಕಟಿಸಿದ್ದ ಕಾರಣಕ್ಕೆ ದಿ.ರಂ.ರಾ.ದಿವಾಕರ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿತ್ತು. ಅವರ ತಾಯಿಯ ಹೆಸರು ಸೀತಾ ಇರುವ ಕಾರಣಕ್ಕೆ .ಹೀಗಾಗಿ ಅನೇಕ ಕವಿಗಳು ತಮ್ಮ ಹೆಸರು ಮರೆ ಮಾಚಿಕೊಂಡು ಭೂಗತವಾಗಿದ್ದುಕೊಂಡೆ ಜನತೆಯಲ್ಲಿ ಸ್ವಾತಂತ್ರ್ಯ ದ ಕಿಚ್ಚು ಹಚ್ಚಿದ್ದು ಕಾಣಬಹುದಾಗಿದೆ. *ವೀರರನ್ನು ನೆನೆದು ನೆನೆದು ವೀರರಾಗಿ ಉಳಿಯುವಾ* ಎಂಬ ಬೇಂದ್ರೆಯವರ ಕಾವ್ಯ ಎಂತಹವರನ್ನೂ ಕಾಡುವಂತಹದು. 1918ರ ಮುಂಚೆಯೇ ಬೇಂದ್ರೆಯವರು ತುತ್ತೂರಿ ಮತ್ತು ಆಹಾ ಸ್ವಾತಂತ್ರದೇವಿ.. ಎಂಬ ಕವಿತೆ ಬರೆದು ಜೈಲಿಗೂ ಹೋಗಿ ಬಂದಿದ್ದರು. ಹಕ್ಕಿಹಾರುತಿದೆ ನೋಡಿದಿರಾ, ಸ್ವಾತಂತ್ರ್ಯದ ರೆಕ್ಕೆ ಬಿಚ್ಚಿ ನೋಡಿದಿರಾ ಎಂದು ಕೇಳುವ ಬೆಂದ್ರೆಯವರು  ಕನ್ನಡವೂ, ಭಾರತವೂ ಜಗವೆಲ್ಲ ಒಂದೇ ಎಂಬ ಬಹು ವಿಶಾಲ ನೆಲೆಯಲ್ಲಿ ಈ ಸ್ವಾತಂತ್ರ್ಯದ ಹೋರಾಟದ ಕವಿತೆಗಳನ್ನು ನವೋದಯದ ಸಂಪ್ರದಾಯದ ನಂತರ ಇಡೀ ಕನ್ನಡ ಕಾವ್ಯ ಪ್ರಪಂಚಕ್ಕೆ ಹರಡಿದ್ದು ಅದು ಕಾವ್ಯದ ಅಂತ ಸತ್ವವೇ ಆಗಿದೆ. ಆರಂಭದಲ್ಲಿ ಮೈಸೂರು, ಕರಾವಳಿ ಪ್ರದೇಶದಲ್ಲಿಯ ಈ ನವೋದಯ ಕಾವ್ಯದ ಹರಿವು ನಂತರ ಉತ್ತರ ಕರ್ನಾಟಕ ಮುಂಬೈ ಕರ್ನಾಟಕದ ಕಡೆಗೆ ಸ್ವಲ್ಪ ವ್ಯಾಪಿಸಿತ್ತು.ಆದರೆ ದೇಶಿ ಕಾವ್ಯ ಪರಂಪರೆಯಲ್ಲಿ ಮುಳುಗಿದ್ದ ಹೈದರಾಬಾದ್ ಕರ್ನಾಟಕಕ್ಕೆ ನವೋದಯ ಸಾಹಿತ್ಯವಾಗಲಿ,ನವ್ಯ ಸಾಹಿತ್ಯವಾಗಲಿ ಗಾಢವಾಗಿ ಪರಿಚಯವೇ ಆಗಲಿಲ್ಲ.ಆ ಕಾರಣದಿಂದ ಈ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಆ ಭಾಗದ ಕವಿಗಳಿಗೆ ಈ ಕಾವ್ಯ ಪ್ರೇರಣೆ

“ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ” ಕೇಂದ್ರ ಸಾಹಿತ್ಯ ಅಕಾಡೆಮಿ,ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಡಾ.ಸಿದ್ದರಾಮ ಹೊನ್ಕಲ್‌ ಮಂಡಿಸಿದ ಪ್ರಬಂಧ.( ಪ್ರತಿಯೊಬ್ಬ ಕನ್ನಡ ಕವಿಯೂ ಓದಲೇಬೇಕಾದ ಬರಹ.) Read Post »

ಅನುವಾದ, ಇತರೆ, ಜೀವನ

“ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ವೀಣಾ ಹೇಮಂತ್ ಗೌಡ ಪಾಟೀಲ್ 

ವಿಶೇಷ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್  “ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ಘಟನೆ ಒಂದು…ಅಪಘಾತದಲ್ಲಿ ತನ್ನ ಒಬ್ಬನೇ ಮಗ ನನ್ನು ಕಳೆದುಕೊಂಡ ಆ ಹೆಣ್ಣುಮಗಳು ಮಗನ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗದೆ ಮಾನಸಿಕ ಆಘಾತಕ್ಕೆ ಒಳಗಾದಳು.ಘಟನೆ ಎರಡು.. ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದ ಆ ವ್ಯಕ್ತಿ ಬಹಳ ದಿನಗಳ ಕಾಲ ಹಾಸಿಗೆ ಹಿಡಿದು ಮಲಗಿದ್ದ… ಆತನ ಸಾವಿನ ಸಮಯದಲ್ಲಿ ಆತನ ಹೆಂಡತಿ ಮಕ್ಕಳು ಅತ್ಯಂತ ಸಂಯಮದಿಂದ ವರ್ತಿಸಿದರು.ಕಾರಣ ಇದು ಹೀಗೆ ಆಗುತ್ತದೆ ಎಂಬ ವಾಸ್ತವದ ಅರಿವು ಅವರಿಗೆ ಇತ್ತು.ಘಟನೆ ಮೂರು… ದೂರದ ಶಹರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಮ್ಮ ಮಗ/ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅದನ್ನು ನಂಬಲಾಗದೆ ಒದ್ದಾಡುವ, ಅತ್ತು ಕರೆಯುವ ಜನರನ್ನು ನಾವು ನೋಡುತ್ತೇವೆ.ಘಟನೆ ನಾಲ್ಕು…ತುಂಬು ಬದುಕನ್ನು ನಡೆಸಿದ ವ್ಯಕ್ತಿಯ ಸಾವಿನ ಸಮಯದಲ್ಲಿ ಅದನ್ನು ಒಂದು ಸರಳ ಘಟನೆ ಎಂಬಂತೆ ಅವರನ್ನು ಗೌರವ ಪೂರ್ವಕವಾಗಿ ಬೀಳ್ಕೊಡುವ, ಅವರ ಬದುಕನ್ನು ಸಂಭ್ರಮಿಸುವ ಮೂಲಕ ಅವರ ಸಾವನ್ನು ಸಹಜವಾಗಿ ಸ್ವೀಕರಿಸುವುದನ್ನು ಕೂಡ ನಾವು ಕಾಣುತ್ತೇವೆ.ಮತ್ತೊಂದು ಘಟನೆಯಲ್ಲಿ ಖ್ಯಾತ ಚಲನಚಿತ್ರ ನಟರೊಬ್ಬರು ತೀರಿಕೊಂಡಾಗ ಅವರ ಪತ್ನಿ ಅತ್ಯಂತ ಸ್ಥಿತಪ್ರಜ್ಞತೆಯಿಂದ ಪತಿಯ ಪಾರ್ಥಿವ ಶರೀರದ ಹಣೆಗೆ ಮುತ್ತಿಕ್ಕಿದರು. ಮನೆಗೆ ಬಂದ ಸ್ನೇಹಿತ ವಲಯದವರೊಂದಿಗೆ ಸಹಜವಾಗಿ ಇದ್ದ ಅವರ ನಡೆ-ನುಡಿಯನ್ನು ಮಾಧ್ಯಮಗಳಲ್ಲಿ ನೋಡಿದ ಜನರು ಆಕೆಯ ಕುರಿತು ಇಲ್ಲ ಸಲ್ಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು… ಅಂತೆಯೇ ಆಕೆಯ ಹಿನ್ನೆಲೆಯನ್ನು ಕೆಟ್ಟದಾಗಿ ಬಿಂಬಿಸಿದರು…. ಕೆಲವೊಮ್ಮೆ ನಿರ್ಲಿಪ್ತತೆಗೆ ತೆರಬೇಕಾದ ಬೆಲೆ ಇಷ್ಟು ದುಬಾರಿಯಾಗಿರುತ್ತದೆಯೇ? ಎಂದು ಕೂಡ ಅನ್ನಿಸಬಹುದು ಅಲ್ವೇ ?ಹೌದಲ್ವೇ ಸ್ನೇಹಿತರೇ, ಮೇಲಿನ ಎಲ್ಲ ಘಟನೆಗಳಲ್ಲಿ ಸಾವು ಎಂಬ ಸಹಜ ಪ್ರಕ್ರಿಯೆಯು ಅದೆಷ್ಟು ವಿಭಿನ್ನವಾಗಿ ಎದುರಿಸಲ್ಪಡುತ್ತದೆ ಎಂಬುದನ್ನು ನೋಡಿದಾಗ ವಿಚಿತ್ರ ಎನಿಸಿದರೂ ಶಾಶ್ವತ ಸತ್ಯದ ಅರಿವು ನಮಗೆ ಮೂಡುತ್ತದೆ. ಸಾವು ಎಂಬುದು ಒಬ್ಬ ವ್ಯಕ್ತಿಯನ್ನು ಭೌತಿಕವಾಗಿ ನಮ್ಮಿಂದ ಶಾಶ್ವತವಾಗಿ ದೂರ ಮಾಡುವ ಪ್ರಕ್ರಿಯೆ… ಉಳಿಯುವುದು ಕೇವಲ ಅವರೊಂದಿಗಿನ ಒಡನಾಟ, ಸ್ನೇಹ, ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯಗಳ ನೆನಪುಗಳು ಮಾತ್ರ.ಯಾವುದೇ ವ್ಯಕ್ತಿಯಾದರೂ ತನ್ನ ಬದುಕಿನಲ್ಲಿ ಶಾಶ್ವತವಾಗಿ ಒಬ್ಬರನ್ನು ಕಳೆದುಕೊಂಡಾಗ ನೋವು, ಸಂಕಟ ಹಾಗೂ ಅಭದ್ರತೆಯಿಂದ ಬಳಲುತ್ತಾನೆಕಳೆದುಕೊಂಡ ತಕ್ಷಣ ಉಂಟಾಗುವ ದಿಗ್ಭ್ರಮೆ ಕೆಲವರಲ್ಲಿ ಇನ್ನಿಲ್ಲದ ದುಃಖವನ್ನು ಸೃಷ್ಟಿಸಿದರೆ, ಮತ್ತೆ ಕೆಲವರು ಹಲವಾರು ದಿನಗಳ ಕಾಲ ಮೌನಕ್ಕೆ ಜಾರುತ್ತಾರೆ. ಇನ್ನು ಕೆಲವರು ಒಬ್ಬಂಟಿಯಾಗಿ ಕುಳಿತು ಅವರನ್ನು ನೆನೆಯುತ್ತಾರೆ. ಮತ್ತೆ ಕೆಲವರು ತಮ್ಮ ಮಾತುಗಳಲ್ಲಿ ಅವರ ಕುರಿತು ನೆನೆಯುತ್ತಾ ಇತರರ ಮುಂದೆ ಹೇಳುತ್ತಾ ಹಗುರವಾಗುತ್ತಾರೆ.ಆದರೆ ನಿಜವಾಗಿಯೂ ಒಬ್ಬರನ್ನು ಕಳೆದುಕೊಂಡಾಗ ಆಗುವ ದುಃಖ, ನೋವು ಐದು ಹಂತಗಳಲ್ಲಿ ನಮ್ಮನ್ನು ಕಾಡುತ್ತದೆ ಎಂದರೆ ನೀವು ನಂಬಲೇಬೇಕು.ಮೊದಲ ಹಂತ ಬದುಕು ಅತ್ಯಂತ ಸರಳವಾಗಿ ನಡೆಯುತ್ತಿರುವ ಅಥವಾ ಹಾಗೆ ಭಾವಿಸಿರುವಾಗ ಕುಟುಂಬದ ಓರ್ವ ಸದಸ್ಯ ಒಮ್ಮಿಂದೊಮ್ಮೆಲೆ ತೀರಿ ಹೋದಾಗ ವ್ಯಕ್ತಿ ಆ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾನೆ. ಇದು ಮೊದಲನೆಯ ಹಂತ. ಈ ಸಮಯದಲ್ಲಿ ಆತ ನಡೆದ ಘಟನೆಯನ್ನು ನಂಬಲು ಸಿದ್ದನಾಗುವುದಿಲ್ಲ…. ಸಂಪೂರ್ಣವಾಗಿ ನಿಶ್ಚಲನಾಗುವ ವ್ಯಕ್ತಿ ಕೆಲ ಗಳಿಗೆಗಳ ಮಟ್ಟಿಗಾದರೂ ತನ್ನ ಮಾನಸಿಕ ಅರಿವನ್ನು ಕಳೆದುಕೊಳ್ಳುತ್ತಾನೆ..ವೈಜ್ಞಾನಿಕವಾಗಿ ಆ ರೀತಿ ಆಗಲು ಕಾರಣ ಅವರು ಇನುಳ ನಮ್ಮ ಜೊತೆಗೆ ಇರುವುದಿಲ್ಲ, ಅವರ ಪಾತ್ರ ನಮ್ಮ ಬದುಕಿನಲ್ಲಿ ಮುಗಿಯಿತು ಎಂಬ ಬಹುದೊಡ್ಡ ಭಾರದ ಒತ್ತಡವನ್ನು ತಡೆದುಕೊಳ್ಳಲು ಅವರ ಮೆದುಳು ಸಿದ್ಧವಿರುವುದಿಲ್ಲ, ಕಾರಣ ಅದು ವ್ಯಕ್ತಿಯ ಮಾನಸಿಕ ಭಾರವನ್ನು ಕಡಿಮೆ ಮಾಡಲು ನಿರಾಕರಣೆ ಮಾಡುವ ಮೂಲಕ ಮೆದುಳನ್ನು ರಕ್ಷಿಸುವ ರಕ್ಷಣಾತ್ಮಕ ತಂತ್ರಕ್ಕೆ ಕೈ ಹಾಕುತ್ತದೆ.ಎಷ್ಟೋ ಬಾರಿ ಉಳಿದೆಲ್ಲ ವಿಷಯಗಳಲ್ಲಿ ಸರಿಯಾಗಿ ವರ್ತಿಸುವ ಜನರು ತಮಗೆ ಅತ್ಯಂತ ಆಪ್ತರಾದವರ ಸಾವಿನ ಕುರಿತು ಮಾತನಾಡುವಾಗ ಆ ವಿಷಯ ತಮಗೆ ಸಂಬಂಧಿಸಿಯೇ ಇಲ್ಲವೇನೋ ಎಂಬಂತೆ ಬೇರೆಡೆ ನಮ್ಮ ಚಿತ್ತವನ್ನು ಸೆಳೆಯುತ್ತಾರೆ.ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಅದು ಕೆಲವೊಮ್ಮೆ ಸಿಟ್ಟು, ಕೋಪದ ರೂಪದಲ್ಲಿ ಅನಾವರಣವಾಗುತ್ತದೆ. ಹೀಗೆ ಕಳೆದುಕೊಳ್ಳಲು ಕಾರಣವಾದ ದೇವರನ್ನು ಹಳಿಯುವ ಅವರು ಆತ ಇದ್ದಿದ್ದರೆ ಹೀಗಾಗಲು ಬಿಡುತ್ತಿರಲಿಲ್ಲವಾದ್ದರಿಂದ ದೇವರೇ ಇಲ್ಲ ಎಂದೂ,ಇದ್ದರೂ ಆತನಿಗೆ ಕಣ್ಣಿಲ್ಲ ಎಂದು ದೈವವನ್ನು ಹಳಿಯುತ್ತಾರೆ. ಮತ್ತೆ ಕೆಲವರು ತೀರಿ ಹೋದವರು ಅಪಘಾತ ಮತ್ತು ಅವಘಡ ಗಳಿಗೆ ಉಂಟಾಗಿ ತೀರಿಹೋಗಿದ್ದರೆ ಅದಕ್ಕೆ ಸಂಬಂಧಪಟ್ಟವರನ್ನು ಸಾಪಳಿಸುತ್ತಾರೆ. ಇಲ್ಲವೇ ತೀರಿ ಹೋದವರು ನೋವು ಸಂಕಟಗಳಿಗೆ ಈಡಾಗಿದ್ದರೆ ಅದಕ್ಕೆ ಕಾರಣರಾದವರನ್ನು ದೂಷಿಸುತ್ತಾರೆ. ಇಲ್ಲವೇ ತಮ್ಮ ಹಣೆಬರಹವನ್ನು ಅಳೆಯುತ್ತಾರೆ ಮತ್ತು ಕೆಲವರು ಸತ್ತುಹೋದವರನ್ನೇ ಉದ್ದೇಶಿಸಿ ನೀವು ಹೀಗೆ ಕೈ ಬಿಟ್ಟು ಹೋದರೆ ನಮ್ಮ ಗತಿ ಏನು ಎಂದು ಅತ್ತು ಕರೆದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಅವರ ಕೋಪಕ್ಕೆ ಸತ್ತ ವ್ಯಕ್ತಿ ಆತನಿಗೆ ಸಂಬಂಧಿಸಿದವರು, ಘಟನೆ, ಸನ್ನಿವೇಶಗಳು ತುತ್ತಾಗುತ್ತವೆ.ಮೂರನೆಯ ಹಂತದಲ್ಲಿ ವ್ಯಕ್ತಿಯು ಚೌಕಾಶಿ ಮಾಡಲು ಆರಂಭಿಸುತ್ತಾರೆ… ಇಲ್ಲಿ ಯಾವುದೇ ವ್ಯಾಪಾರ ವ್ಯವಹಾರದ ಚೌಕಾಶಿ ಯನ್ನು ನಾವು ಯೋಚಿಸುವುದು ಬೇಡ…. ಅಯ್ಯೋ ಇನ್ನೂ ಒಳ್ಳೆಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಬದುಕುತ್ತಿದ್ದರೋ ಏನೋ ಎಂಬಲ್ಲಿಂದ ಹಿಡಿದು ಹೇಗಾದರೂ ಮಾಡಿ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಗಳು ಇದ್ದವು, ಆ ಸಾಧ್ಯತೆಗಳನ್ನು ನಾವು ತಳ್ಳಿ ಹಾಕಿದೆವು ಎಂದು ತಮ್ಮನ್ನು ತಾವು ಹಳಿದುಕೊಳ್ಳುತ್ತಾರೆ. ಆತ್ಮಹತ್ಯೆಯಂತಹ ಸಾವುಗಳಲ್ಲಿ ಅವರು ಹಿಂದಿನ ದಿನ ತಮಗೆ ಕರೆ ಮಾಡಿದಾಗ ತಾವು ಸ್ವೀಕರಿಸದೆ ಇದ್ದ ಕಾರಣವನ್ನು ಮುಂದೊಡ್ಡಿ ತಮಗೆ ತಾವೇ ದೂಷಿಸಿಕೊಳ್ಳುತ್ತಾರೆ. ಒಂದೊಮ್ಮೆ ಹೀಗೆ ಮಾಡಿದ್ದರೆ !ಎಂಬ ಹಲವಾರು ರೇ ಗಳ ಭಾವ ಅವರನ್ನು ಕಾಡುತ್ತದೆ.ಮತ್ತೆ ಕೆಲವರು ನಾಲ್ಕನೆಯ ಹಂತವಾದ ಖಿನ್ನತೆಗೆ ಜಾರುತ್ತಾರೆ. ಖಿನ್ನತೆಯು ಅತ್ಯಂತ ಆಳವಾದ ನೋವಿನಿಂದ ಕೂಡಿದ್ದು ವಾಸ್ತವತೆಯ ಅರಿವು ಮೂಡಿಸುತ್ತದೆ ಎಂಬುದು ನಿಜವಾದರೂ ತಮ್ಮ ನೋವನ್ನು ಇತರರಿಗೆ ಹೇಳಿಕೊಳ್ಳಲು ಸಾಧ್ಯವಾಗದೆ ಮಾನಸಿಕವಾಗಿ ತೊಳಲಾಡುತ್ತಾರೆ. ನಂತರ ಸಮಯ ಸರಿದಂತೆ ನಿಧಾನವಾಗಿ ಅವರಿಲ್ಲದ ಬದುಕನ್ನು ಎದುರಿಸುವ ನಿಟ್ಟಿನಲ್ಲಿ ಹೊಸ ಬದುಕಿಗೆ ಒಗ್ಗಿಕೊಳ್ಳುತ್ತಾರೆ.ಕೊನೆಯ ಹಂತದಲ್ಲಿ ಪರಿಸ್ಥಿತಿಯನ್ನು ಅದು ಇರುವಂತೆಯೇ ಒಪ್ಪಿಕೊಳ್ಳುವುದು…. ಸಾಮಾನ್ಯವಾಗಿ ವಾಸ್ತವ ವಾದಿಗಳು, ಬದುಕಿನ ಆಳವನ್ನು ಅರಿತವರು, ಬುದ್ಧಿಜೀವಿಗಳು ತಮ್ಮವರ ಸಾವನ್ನು ಅತ್ಯಂತ ಸಹಜವಾಗಿ ಒಪ್ಪಿಕೊಳ್ಳುತ್ತಾರೆ. ನಿರ್ಲಿಪ್ತತೆಯನ್ನು ಹೊಂದಿರುತ್ತಾರೆ. ಮತ್ತೆ ಕೆಲಬಾರಿ ಅವರ ಸ್ಥಿತಪ್ರಜ್ಞತೆಯನ್ನು ಕಂಡು ಲೌಕಿಕ ಜಗತ್ತಿನ ಜನರು ಅಯ್ಯೋ ಅವರಿಗೇನು! ಹಡೆದ ತಂದೆ ತಾಯಿ ಸತ್ತರೂ ಸಂಗಾತಿಯನ್ನು ಕಳೆದುಕೊಂಡರೂ ಹನಿ ಕಣ್ಣೀರು ಹಾಕಲಿಲ್ಲ ಎಂದು ದೂಷಿಸುತ್ತಾರೆ.ಮತ್ತೆ ಕೆಲ ಬಾರಿ ಹೀಗೆ ತೀರಿಕೊಂಡವರು ದೀರ್ಘಾಯುಷ್ಯವನ್ನು ಹೊಂದಿ ಬದುಕಿನ ಎಲ್ಲಾ ಮೊದಲುಗಳನ್ನು ಕಂಡಿದ್ದರೆ ಇನ್ನೂ ಕೆಲವರು ದೀರ್ಘಕಾಲದ ಅನಾರೋಗ್ಯ, ತೊಂದರೆಗಳಿಂದ ಹಾಸಿಗೆ ಹಿಡಿದು ಮಲಗಿರುತ್ತಾರೆ ಅಲ್ಲವೇ? ಅಲ್ಲಿಯೂ ಕೂಡ ಈ ರೀತಿಯ ನಿರ್ಲಿಪ್ತತೆ ಕಾಣುತ್ತದೆ. ಏಕೆಂದರೆ ಅವರಿಗೆ ಮುಂದೆ ಏನಾಗಬಹುದು ಎಂಬ ಪರಿಕಲ್ಪನೆಯನ್ನು ಸತ್ತ ವ್ಯಕ್ತಿಯ ಜೀವಿತದ ಕೊನೆಯ ದಿನಗಳು ತೋರಿಸಿರುತ್ತವೆ.ಮಾನಸಿಕವಾಗಿ ಅತ್ಯಂತ ಪಕ್ವವಾಗಿರುವವರು ಲೌಕಿಕ ಜಂಜಡಗಳಿಂದ ದೂರವಾಗಿರುವವರು ಕೂಡ ಸಾವುಗಳನ್ನು ಅತ್ಯಂತ ಸಹಜವಾಗಿ ಸ್ವೀಕರಿಸಿ ಬದುಕಿನಲ್ಲಿ ಮುಂದೆ ಸಾಗುತ್ತಾರೆ.ನಾವೆಲ್ಲರೂ ನಮ್ಮ ಬದುಕಿನ ಹಂತದಲ್ಲಿ ಒಂದಲ್ಲ ಒಂದು ಆತ್ಮೀಯರ, ಪರಿಚಿತರ ಸಾವುಗಳನ್ನು ಎದುರಿಸಿಯೇ ಇರುತ್ತೇವೆ. ಸತ್ತವರ ಮನೆಯಿಂದ ಸ್ಮಶಾನದವರೆಗೆ ಭೌತಿಕ ಶರೀರದ ಅಂತಿಮ ಯಾತ್ರೆಗೆ ಹೋಗುವ ನಮ್ಮ ಬಾಯಲ್ಲಿ ಬರುವುದು ವೇದಾಂತದ ಮಾತುಗಳು. ಅಯ್ಯೋ ಬದುಕೇ ಇಷ್ಟು ? ಅವರವರು ಪಡೆದುಕೊಂಡು ಬಂದದ್ದು, ಹುಟ್ಟಿನ ಜೊತೆಗೆ ಸಾವನ್ನು ಕಟ್ಟಿಕೊಂಡೇ ಬಂದಿರುತ್ತೇವೆ, ಇಂದು ಅವರು ನಾಳೆ ಇನ್ನಾರೋ? ನಮ್ಮದು ಒಂದು ದಿನ ಆಪಾಳಿ ಬಂದೇ ಬರುತ್ತದೆ ಎಂದೆಲ್ಲ ಮಾತನಾಡುವ ಜನರು ಅಂತಿಮ ನಮನ ಸಲ್ಲಿಸಿ ಮನೆಗೆ ಬಂದು ತಲೆಯ ಮೇಲೆ ನೀರು ಹಾಕಿಕೊಂಡು ಹೊರಗೆ ಬರುವಷ್ಟರಲ್ಲಿ ಹೊಟ್ಟೆ ತನ್ನ ಇರವನ್ನು ತೋರಿಸುತ್ತದೆ.. ಇದೇ ಬದುಕು ಅಲ್ವೇ ಸ್ನೇಹಿತರೆ ?ಆದರೆ ನಮಗೆ ಸಾಧ್ಯವಾಗದ ಯಾವುದೋ ಒಂದು ನಿರ್ಲಿಪ್ತತೆಯನ್ನು, ಸ್ಥಿತಪ್ರಜ್ಞತೆಯನ್ನು ಇತರರು ಸಾಧಿಸಿದ್ದು ಸಾವಿನಲ್ಲೂ ಹಾಗೆ ಮುಂದುವರೆದಿದ್ದರೆ ಅವರನ್ನು ದೂಷಿಸಬೇಡಿ. ಅದು ಅವರು ಸಾವನ್ನು ಕಂಡುಕೊಂಡ ರೀತಿ.ಸಾವನ್ನು ಎದುರಿಸುವ ಈ ಹಂತಗಳನ್ನು ನೀವು ಅರಿತುಕೊಂಡಿದ್ದರೆ ಮತ್ತೊಬ್ಬರ ಭಾವನೆಗಳನ್ನು ಗುರುತಿಸಿ, ಗೌರವಿಸಿ ಸುಮ್ಮನಿರಲು ಸಹಕಾರಿಯಾಗುತ್ತದೆ.ಏನಂತೀರಾ ಸ್ನೇಹಿತರೆ ? ವೀಣಾ ಹೇಮಂತ್ ಗೌಡ ಪಾಟೀಲ್

“ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ವೀಣಾ ಹೇಮಂತ್ ಗೌಡ ಪಾಟೀಲ್  Read Post »

ಇತರೆ

“ಮಂಡಲ ಕಲೆ….ಎಂಬ ಅದ್ವಿತೀಯ ಕಲಾ ರಚನೆ”‌ ವೀಣಾ ಹೇಮಂತ್‌ ಗೌಡಪಾಟೀಲ

ಕಲಾ ಸಂಗಾತಿ ವೀಣಾ ಹೇಮಂತ್‌ ಗೌಡಪಾಟೀಲ “ಮಂಡಲ ಕಲೆ…. ಎಂಬ ಅದ್ವಿತೀಯ ಕಲಾ ರಚನೆ”‌ ಮಂಡಲ ಕಲೆ….ಎಂಬ ಅದ್ವಿತೀಯ ಕಲಾ ರಚನೆ ಒಂದೇ ರೀತಿಯ ಸಮ್ಮಿತಿಯ ರಚನೆಯನ್ನು ಹೊಂದಿರುವ ಮಂಡಲ ಕಲೆಗೆ ತನ್ನದೇ ಆದ ಶ್ರೀಮಂತ ಇತಿಹಾಸವಿದೆ ಆಧ್ಯಾತ್ಮಿಕ ಅಭಿವ್ಯಕ್ತಿಯ ಈ ಕಲೆಗೆ ಶತಶತಮಾನಗಳ ಹಲವಾರು ಸಾಂಸ್ಕೃತಿಕ ಅಭಿವ್ಯಕ್ತಿಯ ಮಹತ್ವವಿದೆ.ಮಂಡಲ ಕಲೆಗೆ ಅತ್ಯಂತ ದುಬಾರಿ ಸಾಮಾನುಗಳ ಅವಶ್ಯಕತೆ ಇದೆ ಎಂದು ಸಾಕಷ್ಟು ಜನ ಭಾವಿಸುತ್ತಾರೆ.ಬಗೆ ಬಗೆಯ ಪೆನ್ಸಿಲ್ ಗಳು ವಿವಿಧ ವಿನ್ಯಾಸಗಳನ್ನು ಚಿತ್ರಿಸುವ ಸಲಕರಣೆಗಳು ಬೇಕೇ ಬೇಕು ಎಂದೇನಿಲ್ಲ. ಕೇವಲ ಒಂದು ಪೆನ್ನು ಮತ್ತು ಪೆನ್ಸಿಲ್ ನ್ನು  ಬಿಳಿಹಾಳೆಯ ಮೇಲೆ ಮೂಡಿಸುವ ಮೂಲಕ ನಾವು ಮಂಡಲಕಲೆಯನ್ನು ರಚಿಸಬಹುದು.ಸಮತೋಲನ, ವಿವಿಧ ಬಗೆಯ ವಿನ್ಯಾಸ ಹಾಗೂ ಭಾವನೆಗಳ ಮಿಶ್ರಣ ಮಂಡಲಕಲೆ ಇದರಲ್ಲಿ ಬರುವ ವೃತ್ತಗಳು ಮಂಡಲಕಲೆಯ ಭಾಗವೇ ಹೊರತು ನಿಯಮಗಳಲ್ಲ…. ಬಹಳಷ್ಟು ಜನ ಮಂಡಲ ಕಲೆಯನ್ನು ವೃತ್ತಗಳನ್ನು ಹಾಕುವ ವಿಧಾನ ಎಂದು ಭಾವಿಸುತ್ತಾರೆ ಆದರೆ ಅದು ಸಂಪೂರ್ಣ ನಿಜವಲ್ಲ.ಆಸಕ್ತಿ ಇರುವ ಯಾರು ಬೇಕಾದರೂ ಮಂಡಲ ಕಲೆಯನ್ನು ಕಲಿಯಬಹುದು ಇದರಲ್ಲಿ ಕಲಾತ್ಮಕ ಅಭಿವ್ಯಕ್ತಿಯ ಅವಶ್ಯಕತೆ ಇಲ್ಲ ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ, ನಿರಂತರ ಪ್ರಯತ್ನ ಹಾಗೂ ತರಬೇತಿ. ಮಂಡಲ ಕಲೆಯನ್ನು ಕಲಿಯುವವರು ಕಲಾವಿದರೇ ಆಗಬೇಕೆಂದಿಲ್ಲ ಕಲಾವಂತಿಕೆಯನ್ನು ಮೆಚ್ಚುವ ಆಸ್ವಾದಿಸುವ ಹಾಗೂ ರಚಿಸುವ ಆಶಯ ಹೊಂದಿದ್ದರೆ ಸಾಕು.ಮೊದಲ ಬಾರಿಗೆ ಮಂಡಲ ಕಲೆ ಪರಿಪೂರ್ಣತೆ ಹಾಗೂ ಸಾಮ್ಯತೆಯನ್ನು ಹೊಂದಿರಲೇಬೇಕಿಲ್ಲ. ಇಲ್ಲಿ ನಮ್ಮ ಗುರಿ ಕೇವಲ ಪರಿಪೂರ್ಣತೆಯಲ್ಲ , ಧ್ಯಾನಪೂರ್ವಕವಾದ ಅಭ್ಯಾಸವಾಗಿರಬೇಕು.ಬಹುತೇಕ ಜನರು ಮಂಡಲ ಕಲೆಯನ್ನು ಮಾನಸಿಕ ನೆಮ್ಮದಿ ಹಾಗೂ ವಿಶ್ರಾಂತಿಗಾಗಿ ರಚಿಸುತ್ತಾರೆ ಎಂಬ ಭಾವ ಜನರಲ್ಲಿದೆ. ಮಂಡಲ ಕಲೆಯು ಮೆದುಳಿನ ನರಗಳನ್ನು ಶಾಂತವಾಗಿಸುತ್ತದೆ ಎಂಬುದು ನಿಜ, ಆದರೆ  ಅದೇ ಸಮಯದಲ್ಲಿ ಮಂಡಲಕಲೆಯ ನಿರಂತರ ಅಭ್ಯಾಸವು ನಿಖರವಾದ ಗುರಿ, ಕ್ರಿಯಾಶೀಲತೆ ಹಾಗೂ ಸ್ವಯಂ ಅಭಿವ್ಯಕ್ತಿಯನ್ನು ತೋರ್ಪಡಿಸುತ್ತದೆ.ಮಂಡಲ ಕಲೆಯ ನಿಜ ಪಯಣ ಆರಂಭವಾಗುವುದು ಒಂದು ಪುಟ್ಟ ಗುರಿಯ ಮೂಲಕ. ವಿವಿಧ ವಿನ್ಯಾಸಗಳನ್ನು ರಚಿಸುವ ನಿಟ್ಟಿನಲ್ಲಿ ನಮ್ಮ ಸಂಪೂರ್ಣ ಲಕ್ಷವನ್ನು ಕೊಡುವ ಮೂಲಕ. ವಿನ್ಯಾಸಗಳ ರಚನೆಯ ಸಮಯದಲ್ಲಿ ಮಾನಸಿಕವಾಗಿ ಅತ್ಯಂತ ಪ್ರಶಾಂತ ಭಾವ ಉದ್ಭವವಾಗುತ್ತದೆ, ಜೊತೆಗೆ ಸೃಜನಶೀಲತೆಗೂ ಕೂಡ ಅವಕಾಶ ದೊರೆಯುತ್ತದೆ. ಮಂಡಲ ಕಲೆಯು ಸ್ವಯಂ ಪ್ರೀತಿಯನ್ನು ಅಭಿವ್ಯಕ್ತಿಸುವ ಅತ್ಯುತ್ತಮ ರೇಖಾಚಿತ್ರವಾಗಿರುತ್ತದೆ.ಮಂಡಲಕಲೆಯನ್ನು ಕಲಿಯಬೇಕು ಎಂದು ಇಚ್ಛಿಸುವವರು ಮೊದಲು ತಮ್ಮೊಳಗಿನ ಸೃಜನಶೀಲತೆಯು ಹೊಮ್ಮುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕು. ಪ್ರತಿದಿನವೂ ಹಂತ ಹಂತವಾಗಿ ರಚನೆಯನ್ನು ಆರಂಭಿಸಿ ಹೆಚ್ಚಿಸುತ್ತಾ ಹೋಗಬೇಕು, ಜಾಣ್ಮೆಯನ್ನು ಹೆಚ್ಚಿಸಿಕೊಳ್ಳಬೇಕು, ಜೊತೆಗೆ ರಚನೆಯ ಸಮಯವನ್ನು ಆನಂದಿಸಬೇಕು ಹಾಗೂ ಅದರಲ್ಲಿಯೇ ವಿಶ್ರಾಂತಿಯ ಅನುಭವವನ್ನು ಪಡೆಯಬೇಕು.ಮಂಡಲ ಕಲೆಯು ನಮ್ಮ ನಿಖರತೆಯನ್ನು ಹಾಗೂ ವಿವಿಧ ವಿನ್ಯಾಸಗಳನ್ನು ಹೆಚ್ಚಿಸಿಕೊಳ್ಳುವ ಕಲೆಯಾಗಿದೆ. ಪ್ರತಿ ಬಾರಿಯೂ ನೀವು ರಚಿಸುವ ಮಂಡಲ ಕಲೆ ಚಿತ್ರವು ಪರಿಪೂರ್ಣವಾಗಿರಬೇಕಾಗಿಲ್ಲ ಅದು ನಿಮ್ಮ ಅಭಿವ್ಯಕ್ತಿಯಾಗಿದ್ದರೆ ಸಾಕು. ನೀವು ಎಳೆಯುವ ಪ್ರತಿ ರೇಖೆಯು ಉನ್ನತಿಕೆಯ ಸಂಕೇತ.ನಿಮ್ಮ ಅಭಿವ್ಯಕ್ತಿಯ ಈ ಕಲೆಯನ್ನು ಇತರರ ಕಲೆಯೊಂದಿಗೆ ಹೋಲಿಸಬೇಡಿ ನಿಮ್ಮ ಮಂಡಲ ಕಲೆಯ ಪಯಣ ವಿಶಿಷ್ಟ ಹಾಗೂ ಕೇವಲ ನಿಮ್ಮದಾಗಿದ್ದರೆ ಸಾಕು.ಮಂಡಲ ಕಲೆಗೆ ಸಾಕಷ್ಟು ಸಮಯದ ಅವಶ್ಯಕತೆ ಇದೆ, ನಿಜ ಹಾಗೆಂದು ಒಂದೇ ಸಮನೆ ದಣಿದು ಮಾಡುವುದು ಬೇಡ. ಮಧ್ಯದಲ್ಲಿ ಒಂದಷ್ಟು ಬ್ರೇಕ್ ತೆಗೆದುಕೊಳ್ಳುವುದು ಒಳ್ಳೆಯದು ವಿಶ್ರಾಂತಿ ತೆಗೆದುಕೊಳ್ಳುವುದು ಎಂದರೆ ಒಂದು ಹೆಜ್ಜೆ ಹಿಂದೆ ಸರಿದಂತಲ್ಲ ಅದು ಈ ಕಲಿಯುವಿಕೆಯ ರಚನೆಯ ಒಂದು ಭಾಗ.ಮಂಡಲ ಕಲೆಯು ನಿಮ್ಮ ಅಭಿವ್ಯಕ್ತಿಯ ಭಾಗ ಎಂದು ಹೇಳುತ್ತಾರಲ್ಲವೇ… ಇದಕ್ಕೆ ಕಾರಣವೂ ಇದೆ* ನೀವು ರಚಿಸುವ ವೃತ್ತಗಳು ಹಾಗೂ ಚುಕ್ಕಿಗಳು ನೀವು ಸಮಗ್ರತೆಯನ್ನು, ಸಾಮರಸ್ಯವನ್ನು ಹಾಗೂ ಇತರರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಇಚ್ಛಿಸುತ್ತೀರಿ ಎಂಬುದನ್ನು ತೋರುತ್ತದೆ.* ಮುಕ್ತ ಹಾಗೂ ಭೂಮಿ ತೂಕದ ಮನಸ್ಥಿತಿ ನಿಮ್ಮದಾಗಿದ್ದು ನೀವು ಮಾಡುವ ಎಲ್ಲಾ ಕೆಲಸದಲ್ಲೂ ಒಂದು ಸಮತೋಲನವನ್ನು ನೀವು ಹೊಂದಿರುತ್ತೀರಿ.* ಹೂವಿನ ದಳಗಳು… ನೀವು ಹೂವಿನ ದಳಗಳನ್ನು ರಚಿಸುತ್ತಿದ್ದರೆ ನೀವು ಸಹಾನುಭೂತಿಯನ್ನು ಹೊಂದಿರುವ ಪೋಷಕ ಗುಣವನ್ನು ಹೊಂದಿರುವ ಹಾಗೂ ಸೌಂದರ್ಯ ಪ್ರಜ್ಞೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದೀರಿ ಎಂದರ್ಥ.* ವ್ಯಕ್ತಿಯ ಸಮಗ್ರ ಬೆಳವಣಿಗೆ, ಪ್ರಕೃತಿ ಹಾಗೂ ಅರ್ಥಪೂರ್ಣ ಬಾಂಧವ್ಯಗಳಲ್ಲಿ ನಿಮಗೆ ಆಸಕ್ತಿ ಇದೆ ಎಂಬುದನ್ನು ಇದು ತೋರುತ್ತದೆ.ಸುರುಳಿ ರಚನೆಗಳು… ಸುರುಳಿ ಆಕಾರದ ರಚನೆಗಳನ್ನು ನೀವು ಇಷ್ಟಪಟ್ಟು ರಚಿಸುತ್ತೀರಿ ಎಂದಾದರೆ ನೀವು ಬೆಳವಣಿಗೆ ಮತ್ತು ಆತ್ಮ ಸಾಕ್ಷಾತ್ಕಾರದ ಭಾವವನ್ನು ಹೊಂದಿದ್ದೀರಿ ಎಂದರ್ಥ.*ನೀವು ಅತ್ಯಂತ ಸುಲಭವಾಗಿ ಬದಲಾವಣೆಯನ್ನು ಒಪ್ಪಿಕೊಳ್ಳುತ್ತೀರಿ. ಬದುಕಿನ ಪ್ರಕ್ರಿಯೆಗಳನ್ನು ನೀವು ನಂಬುತ್ತೀರಿ ಹಾಗೂ ನಿಮ್ಮನ್ನು ನೀವು ಹೆಚ್ಚು ಪ್ರೀತಿಸುತ್ತೀರಿಎಂದರ್ಥ.* ಜಾಮಿತಿಯ ಆಕಾರಗಳು.. ನೀವು ತಾರ್ಕಿಕವಾಗಿ ನಿಖರ ಗುರಿಯ ಕುರಿತು ಹಾಗೂ ಉತ್ತಮ ರಚನಕಾರರಾಗಿ ಇರುವಿರಿ. ನಿಮ್ಮಲ್ಲಿ ಸ್ಪಷ್ಟತೆ ಇದ್ದು ನಿಖರವಾದ ಗುರಿಯನ್ನು ಹೊಂದಿರುತ್ತೀರಿ. ಅನವಶ್ಯಕ ಗೊಂದಲಗಳನ್ನು ಸರಿ ಮಾಡಿ ಸಮತ್ವವನ್ನು ತರುತ್ತೀರಿ.* ಹೃದಯದಾಕಾರದ ಚಿಹ್ನೆಗಳನ್ನು ನೀವು ಬಳಸುತ್ತೀರಿ ಎಂದಾದರೆ ನೀವು ಪ್ರೀತಿ, ಕರುಣೆ ಮತ್ತು ಅತ್ಯಂತ ಆಳವಾದ ಭಾವನಾತ್ಮಕ ಭಾವಗಳನ್ನು ಹೊಂದಿದ್ದೀರಿ.ನೀವು ಉಧಾರಿಗಳಾಗಿದ್ದು ಸಹಾನುಭೂತಿಯನ್ನು ಹೊಂದಿರುತ್ತೀರಿ. ಜೊತೆಗೆ ನೀವು ಅತ್ಯಂತ ಆಳವಾದ ಹಾಗೂ ಅಧಿಕೃತ ಸಂಬಂಧಗಳನ್ನು ಗೌರವಿಸುತ್ತೀರಿ ಎಂದರ್ಥ.* ಪ್ರಾಕೃತಿಕ ವಸ್ತುಗಳ ರಚನೆ…. ನಿಮ್ಮ ರಚನೆಗಳಲ್ಲಿ ಪ್ರಾಕೃತಿಕ ವಸ್ತುಗಳನ್ನು ನೀವು ಅಳವಡಿಸಿದ್ದರೆ ನೀವು ಅತ್ಯಂತ ಮುಕ್ತ ಹಾಗೂ ಸ್ವತಂತ್ರ ಮನಸ್ಥಿತಿಯ ವ್ಯಕ್ತಿಯಾಗಿದ್ದು ಪ್ರಕೃತಿಯೊಂದಿಗೆ ಉತ್ತಮ ಸಮತೋಲನವನ್ನು ಹೊಂದಿರುತ್ತೀರಿ. ಪ್ರಕೃತಿಯಲ್ಲಿ ನೀವು ಅತ್ಯಂತ ನೆಮ್ಮದಿ ಹಾಗೂ ಭರವಸೆಯನ್ನು ಹೊಂದಿರುತ್ತೀರಿ. ಬದುಕಿನ ನೈಸರ್ಗಿಕ ಹರಿವನ್ನು ಬಯಸುವ ನೀವು ನಿಮಗೆ ಪ್ರಾಕೃತಿಕವಾಗಿ ದೊರೆಯುವ ಸಂಜ್ಞೆ ಗಳನ್ನು ಬಲವಾಗಿ ನಂಬುತ್ತೀರಿ.ಮಂಡಲಕಲೆಯಲ್ಲಿ ಯಾವುದೇ ಸರಿ ಅಥವಾ ತಪ್ಪು ರಚನೆಗಳು ಇಲ್ಲ . ನೀವು ರಚಿಸುವ ಮಂಡಲದ ಕಲೆಯು ನಿಮ್ಮ ಭಾವಾಭಿವ್ಯಕ್ತಿ ಯು ಪ್ರತಿಫಲನ. ಅತ್ಯಂತ ಸುಂದರ, ಅನನ್ಯ ಹಾಗೂ ವಿಕಸಿತ ಸೌಂದರ್ಯ ಮಂಡಲ ಕಲೆಯದ್ದು.ಮಂಡಲಕಲೆಯನ್ನು ಒಂದೇ ಬಾರಿಗೆ ಅವಸರದಿಂದ ಕಲಿಯುವ ಅವಶ್ಯಕತೆ ಇಲ್ಲ ಇದೊಂದು ನಿಧಾನ ಪ್ರಕ್ರಿಯೆ… ನಿಜವಾದ ಮಂಡಲ ಕಲೆಯ ಸೌಂದರ್ಯ ಅಡಗಿರುವುದು ಅದರ ವಿಶಿಷ್ಟವಾದ ಪ್ರಕ್ರಿಯೆಯಲ್ಲಿ.ವಿವಿಧ ವಿನ್ಯಾಸಗಳನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ನಿಮ್ಮ ಕ್ರಿಯಾಶೀಲತೆಯನ್ನು ಬಳಸಿ, ರಚನೆಗಳನ್ನು  ಸಹಜವಾಗಿ ಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿ.ಮಂಡಲ ಕಲೆ ರಚನೆಯಲ್ಲಿ ವಿಶ್ರಾಂತಿ, ಉಸಿರಾಟ ಕ್ರಿಯೆ ಹಾಗೂ ರಚನೆಯ ಪ್ರಕ್ರಿಯೆಗಳು ಹೆಚ್ಚು ಪ್ರಮುಖ ಪಾತ್ರವನ್ನು ವಹಿಸುತ್ತವೆ.ಮಂಡಲ ಕಲೆಯಲ್ಲಿ ನೀವು ಒಮ್ಮಿಂದೊಮ್ಮೆಲೆ ಕಲಾವಿದರಾಗಲು ಸಾಧ್ಯವಿಲ್ಲ ನಿಧಾನವಾಗಿ ನಿಮ್ಮ ಕಲೆ ವಿಕಸಿತವಾಗುತ್ತಾ ಹೋಗುತ್ತದೆ. ನಿಧಾನವಾಗಿ ನೀವು ನಿಮ್ಮ ಕೈಯಾರೆ ತಯಾರಿಸಿದ ರಚನೆಯನ್ನು ಇತರರಿಗೆ ಉಡುಗೊರೆಯಾಗಿ ನೀಡಬಹುದು ಆ ರೀತಿ ನಿಮ್ಮ ಉಡುಗೊರೆಯನ್ನು ಸ್ವೀಕರಿಸಿದವರ ಕಣ್ಣಲ್ಲಿನ ಹೊಂಬೆಳಕನ್ನು ಸಂಭ್ರಮಿಸಿ.ಮಂಡಲ ಕಲೆ ಬ್ರಹ್ಮ ವಿದ್ಯೆಯೇನಲ್ಲ…ಕಲಿಯುವ ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಖಂಡಿತವಾಗಿಯೂ ನಿಮಗೆ ಆ ಕಲೆ ಹಸ್ತಗತವಾಗುತ್ತದೆ ಅಷ್ಟೇ?ಏನಂತೀರಾ ಸ್ನೇಹಿತರೆ? ವೀಣಾ ಹೇಮಂತ್ ಗೌಡ ಪಾಟೀಲ್

“ಮಂಡಲ ಕಲೆ….ಎಂಬ ಅದ್ವಿತೀಯ ಕಲಾ ರಚನೆ”‌ ವೀಣಾ ಹೇಮಂತ್‌ ಗೌಡಪಾಟೀಲ Read Post »

ಇತರೆ

“ಅನೇಕಮ್‌ ಶಾಲೆಯಮಕ್ಕಳು ಬರೆದ ಕನ್ನಡ ಬರಹಗಳು”ಡಾ. ಮಮತ, ಶಿಕ್ಷಕರು,ಅನೇಕಮ್‌ ಬೆಂಗಳೂರು

ಮಕ್ಕಳ ಸಂಗಾತಿ ಡಾ. ಮಮತ, ಶಿಕ್ಷಕರು, ಅನೇಕಮ್‌ ಬೆಂಗಳೂರು “ಅನೇಕಮ್‌ ಶಾಲೆಯ ಮಕ್ಕಳು ಬರೆದ ಕನ್ನಡ ಬರಹಗಳು” ಮರದ ಮಹತ್ವ ಒಂದು ಹಳ್ಳಿಯಲ್ಲಿ ಅನಿಕೇತ್ ಎಂಬ ಬಾಲಕನಿದ್ದನು. ಅವನು ಪ್ರತಿದಿನ ಶಾಲೆಗೆ ಹೋಗುವಾಗ ಒಂದು ದೊಡ್ಡ ಮಾವಿನ ಮರದ ಕೆಳಗೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದನು. ಒಂದು ದಿನ ಆ ಮರದ ಕೆಳಗೆ ಒಂದು ಚಿಕ್ಕ ಗಿಡ ಒಣಗುತ್ತಿರುವುದನ್ನು ಅವನು ಗಮನಿಸಿದನು. ಅದನ್ನು ಕಂಡ ಅನಿಕೇತ್‌ಗೆ ತುಂಬಾ ಬೇಸರವಾಯಿತು. ಆ ದಿನದಿಂದ ಪ್ರತಿದಿನ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಹಿಂದಿರುಗುವಾಗ ಆ ಗಿಡಕ್ಕೆ ನೀರು ಹಾಕಿ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದನು. ಕೆಲವು ವಾರಗಳ ನಂತರ ಆ ಗಿಡ ಹಸಿರಾಗಿ ಬೆಳೆದು ದೊಡ್ಡ ಮರವಾಯಿತು. ಅದರ ನೆರಳಿನಲ್ಲಿ ಪಕ್ಷಿಗಳು ಗೂಡು ಕಟ್ಟಿದವು. ದಾರಿಹೋಕರು ಅದರ ತಂಪಾದ ನೆರಳಿನಲ್ಲಿ ವಿಶ್ರಾಂತಿ ಪಡೆಯತೊಡಗಿದರು. ಒಂದು ದಿನ ಪಂಚಾಯಿತಿಯವರು ರಸ್ತೆ ವಿಸ್ತರಣೆಗಾಗಿ ಆ ಮರವನ್ನು ಕಡಿಯಲು ಬಂದರು. ಆಗ ಊರಿನ ಜನರು ಆ ಮರದ ಮಹತ್ವವನ್ನು ತಿಳಿಸಿ, ಅದನ್ನು ಕಡಿಯಬಾರದೆಂದು ಮನವಿ ಮಾಡಿದರು. ಜನರ ಮನವಿಯನ್ನು ಗೌರವಿಸಿದ ಪಂಚಾಯಿತಿಯವರು ಮರವನ್ನು ಉಳಿಸಲು ನಿರ್ಧರಿಸಿದರು. ಈ ವಿಷಯವನ್ನು ತಿಳಿದ ಅನಿಕೇತ್ ತುಂಬಾ ಸಂತೋಷಪಟ್ಟನು. ತಾನು ಪ್ರೀತಿಯಿಂದ ಬೆಳೆಸಿದ ಗಿಡ ಇಂದು ದೊಡ್ಡ ಮರವಾಗಿ ಅನೇಕರಿಗೆ ನೆರಳು, ಆಶ್ರಯ ಮತ್ತು ಸಂತೋಷ ನೀಡುತ್ತಿರುವುದನ್ನು ಕಂಡು ಹೆಮ್ಮೆಪಟ್ಟನು. ಆಗಿನಿಂದ ಅವನು ಇನ್ನೂ ಹೆಚ್ಚು ಮರಗಳನ್ನು ನೆಡುವ ಸಂಕಲ್ಪ ಮಾಡಿದರು. ನೀತಿ: ಒಂದು ಮರ ನೂರಾರು ಜೀವಗಳಿಗೆ ಆಸರೆಯಾಗುತ್ತದೆ. ಆದ್ದರಿಂದ ಮರಗಳನ್ನು ನೆಟ್ಟು, ಬೆಳೆಸಿ, ಕಾಪಾಡೋಣ .ಮೋನಿಶ್7 ನೇ ತರಗತಿಅನೇಕಮ್ ಶಾಲೆಬೆಂಗಳೂರು ಹಸಿರು ಲೋಕದ ಸಿರಿ ನನಗೆ ಪ್ರಕೃತಿ ತುಂಬಾ ಇಷ್ಟ. ಬೆಳಿಗ್ಗೆ ಪಕ್ಷಿಗಳ ಚಿಲಿಪಿಲಿ, ಹಸಿರು ಮರಗಳು, ಬಣ್ಣ ಬಣ್ಣದ ಹೂಗಳು ಮತ್ತು ತಂಪಾದ ಗಾಳಿ ನನಗೆ ತುಂಬಾ ಸಂತೋಷವನ್ನು ನೀಡುತ್ತವೆ. ಪ್ರಕೃತಿಯ ಸೌಂದರ್ಯ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಮರಗಳು ನಮಗೆ ಶುದ್ಧ ಗಾಳಿಯನ್ನು ನೀಡುತ್ತವೆ. ನದಿಗಳು, ಕೆರೆಗಳು ಮತ್ತು ಮಳೆಯ ನೀರು ನಮ್ಮ ಜೀವನಕ್ಕೆ ಆಧಾರವಾಗಿವೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಔಷಧೀಯ ಸಸ್ಯಗಳು ಪ್ರಕೃತಿಯ ಅಮೂಲ್ಯ ಕೊಡುಗೆಗಳಾಗಿವೆ. ಪ್ರಕೃತಿ ನಮಗೆ ಶುದ್ಧ ಗಾಳಿ, ನೀರು ಮತ್ತು ಆಹಾರವನ್ನು ನೀಡುತ್ತದೆ. ಆದ್ದರಿಂದ ನಾವು ಪ್ರಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ನಾನೂ ಮರಗಳನ್ನು ನೆಡುತ್ತೇನೆ. ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸುತ್ತೇನೆ. ನನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುತ್ತೇನೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ. ಇತರರಿಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸುತ್ತೇನೆ. ಪ್ರಕೃತಿಯನ್ನು ಪ್ರೀತಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಕೃತಿ ಚೆನ್ನಾಗಿದ್ದರೆ ನಮ್ಮ ಜೀವನವೂ ಆರೋಗ್ಯಕರ, ಸುಂದರ ಮತ್ತು ಸಂತೋಷಕರವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಹಸಿರು ಭೂಮಿಯನ್ನು ಉಳಿಸಬೇಕು. ನೀತಿ: ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಜೀವಿತ8 ನೇ ತರಗತಿಅನೇಕಮ್ ಶಾಲೆಬೆಂಗಳೂರು ಜವಾಬ್ದಾರಿಯ ಮಹತ್ವ ಶಾಂತಿನಗರ ಎಂಬ ಊರಿನಲ್ಲಿ ಒಂದು ಕುಟುಂಬ ವಾಸಿಸುತ್ತಿತ್ತು. ಆ ಕುಟುಂಬದಲ್ಲಿ ಒಬ್ಬ ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ಇದ್ದರು. ಆ ಇಬ್ಬರು ಮಕ್ಕಳ ಹೆಸರು ಪ್ರಿಯಾ ಮತ್ತು ಶ್ವೇತ. ಅವರು ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದರು. ಅಜ್ಜಿ ಮನೆ ಕೆಲಸದ ಜೊತೆಗೆ ಕೈತೋಟದ ಕೆಲಸವನ್ನೂ ಮಾಡುತ್ತಿದ್ದರು. ಒಂದು ದಿನ ಅಜ್ಜಿ ತಾನು ಸಂಪಾದಿಸಿದ ಹಣದಿಂದ ಮಕ್ಕಳೊಂದಿಗೆ ಸಂತೆಗೆ ಹೋದರು. ಅಜ್ಜಿ ಇಬ್ಬರಿಗೂ ತಲಾ ೫೦೦ ರೂಪಾಯಿ ನೀಡಿ, ಮನೆಯ ದಿನಸಿ ಸಾಮಾನುಗಳನ್ನು ತಂದುಕೊಡಲು ಹೇಳಿದರು. ಪ್ರಿಯಾ ಅಜ್ಜಿ ಹೇಳಿದಂತೆ ಬೇಕಾದ ಎಲ್ಲಾ ದಿನಸಿ ಸಾಮಾನುಗಳನ್ನು ಖರೀದಿಸಿ ಮನೆಗೆ ತಂದಳು. ಆದರೆ ಶ್ವೇತ ಅಜ್ಜಿ ಹೇಳಿದ ವಸ್ತುಗಳನ್ನು ತರದೆ, ತನ್ನ ಇಷ್ಟದ ವಸ್ತುಗಳನ್ನು ಖರೀದಿಸಿಕೊಂಡು ಬಂದಳು. ಇದನ್ನು ಕಂಡ ಅಜ್ಜಿಗೆ ತುಂಬಾ ದುಃಖವಾಯಿತು. ಆ ರಾತ್ರಿ ಅಜ್ಜಿ ಮತ್ತು ಪ್ರಿಯಾ ಸೇರಿ ಶ್ವೇತಳಿಗೆ ಹಣದ ಮೌಲ್ಯ ಹಾಗೂ ಜವಾಬ್ದಾರಿಯ ಮಹತ್ವವನ್ನು ತಿಳಿಸಿ ಬುದ್ಧಿ ಹೇಳಿದರು. ಮುಂದಿನ ಬಾರಿ ಸಂತೆಗೆ ಹೋದಾಗ ಅಜ್ಜಿ ಶ್ವೇತಳಿಗೆ ಸ್ವಲ್ಪ ಹಣ ನೀಡಿ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಲು ಹೇಳಿದರು. ಆಗ ಶ್ವೇತ ತನ್ನ ತಪ್ಪನ್ನು ಅರಿತುಕೊಂಡಳು. ಅಜ್ಜಿಯ ಬಳಿ ಕ್ಷಮೆ ಕೇಳಿ, ಇನ್ನು ಮುಂದೆ ಹಣವನ್ನು ಜಾಗರೂಕತೆಯಿಂದ ಬಳಸುವುದಾಗಿ ಮಾತು ಕೊಟ್ಟಳು. ನೀತಿ: ಹಣವನ್ನು ಜವಾಬ್ದಾರಿಯಿಂದ ಬಳಸಬೇಕು ಮತ್ತು ಹಿರಿಯರ ಮಾತನ್ನು ಗೌರವಿಸಬೇಕು. ಕವನ7 ನೇ ತರಗತಿಅನೇಕಮ್ ಶಾಲೆಬೆಂಗಳೂರು ನಮ್ಮೂರ ಕೆರೆ ಸುತ್ತಮುತ್ತಲಿನ ಊರುಗಳಲ್ಲಿ ಮುತ್ತಿನಂತಿರುವುದು ನಮ್ಮೂರಿನ ಕೆರೆ. ಕೆರೆಯ ಸುತ್ತಲೂ ಹಸಿರಿನಿಂದ ಕಂಗೊಳಿಸುವ ಮರಗಳ ಸಾಲು. ಒಂದೊಂದು ಮರದಲ್ಲಿ ಹತ್ತಾರು ಗೂಡುಗಳು, ಪ್ರತಿಯೊಂದು ಗೂಡಿನಲ್ಲಿ ನೂರಾರು ಹಕ್ಕಿಗಳ ಕಲರವ. ಬೆಳ್ಳಿಯ ತಟ್ಟೆಯಂತೆ ಹೊಳೆಯುವ ನೀರು, ಮಿಂಚಿನ ಬಳ್ಳಿಯಂತೆ ತಲತಲ ಹೊಳೆಯುವ ಮೀನುಗಳು, ಕಪ್ಪೆಗಳ ಟರ್ರ್-ಟರ್ರ್ ಧ್ವನಿ – ಇವೆಲ್ಲವೂ ಕೆರೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಕೆರೆಯ ಸುತ್ತ ಮೇವು, ಗಿಡಗಂಟಿಗಳು, ದನ-ಕರುಗಳಿಗೆ ಆಹಾರ, ಗಾಳಿಗೆ ತಲೆಯಾಡಿಸುವ ಹಸಿರು ಹುಲ್ಲು – ಇವೆಲ್ಲವೂ ಪ್ರಕೃತಿಯ ಸೊಬಗನ್ನು ಹೆಚ್ಚಿಸುತ್ತವೆ. ಆದರೆ ಕಾಲಕ್ರಮೇಣ ಕಾರ್ಖಾನೆಗಳ ತ್ಯಾಜ್ಯ, ಕೊಳಚೆ ನೀರು ಮತ್ತು ಪ್ಲಾಸ್ಟಿಕ್ ಕಸ ಕೆರೆಯಲ್ಲಿ ಸೇರಿ ನೀರು ಕಲುಷಿತವಾಯಿತು. ಕೆರೆ ಬತ್ತಿ, ಬಿರುಕು ಬಿಟ್ಟಿತು. ಇದನ್ನು ಕಂಡ ಊರಿನ ಜನರೆಲ್ಲ ಸಭೆ ಸೇರಿ ಕೆರೆಯನ್ನು ಉಳಿಸಲು ನಿರ್ಧರಿಸಿದರು. ಕಾರ್ಖಾನೆಗಳ ಕಲುಷಿತ ನೀರನ್ನು ಕೆರೆಗೆ ಬಿಡದಂತೆ ಕ್ರಮ ಕೈಗೊಂಡರು. ಪ್ಲಾಸ್ಟಿಕ್ ಬಳಕೆಗೆ ವಿದಾಯ ಹೇಳಿದರು. ಎಲ್ಲರೂ ಸೇರಿ ಕೆರೆಯನ್ನು ಸ್ವಚ್ಛಗೊಳಿಸಿ, ಮರಗಳನ್ನು ನೆಟ್ಟರು. ಕೆಲವೇ ದಿನಗಳಲ್ಲಿ ಕೆರೆ ಮತ್ತೆ ನೀರಿನಿಂದ ತುಂಬಿತು. ಹಸಿರು ಮರಗಳಲ್ಲಿ ಹಕ್ಕಿಗಳ ಹಾಡು ಮತ್ತೆ ಮೊಳಗತೊಡಗಿತು. ನೀತಿ:ನೀರು ಜೀವದ ಮೂಲ. ಪ್ರಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ತಪ್ಪು ಮಾಡಿದವರು ನಾವೇ; ಅದನ್ನು ಸರಿಪಡಿಸುವ ಜವಾಬ್ದಾರಿಯೂ ನಮ್ಮದೇ. ತೇಜಸ್7ನೇ ತರಗತಿಅನೇಕಾಮ್ ಶಾಲೆಬೆಂಗಳೂರು. ಸ್ನೇಹದ ಪಯಣ ಆರನೇ ತರಗತಿಯಲ್ಲಿ ಅನು ಮತ್ತು ಮೀರಾ ಎಂಬ ಇಬ್ಬರು ಹುಡುಗಿಯರು ಮೊದಲ ಬಾರಿಗೆ ಭೇಟಿಯಾದರು. ಆರಂಭದಲ್ಲಿ ಅವರು ಒಬ್ಬರಿಗೊಬ್ಬರು ಪರಿಚಯವಿಲ್ಲದವರಾಗಿದ್ದರು. ಮೊದಲ ದಿನ ಸ್ವಲ್ಪ ನಾಚಿಕೆಪಟ್ಟು ಮಾತನಾಡಿದರೂ, ಕೆಲವೇ ದಿನಗಳಲ್ಲಿ ಉತ್ತಮ ಸ್ನೇಹಿತರಾದರು. ಅವರು ತರಗತಿಯಲ್ಲಿ ಓದಿನಲ್ಲಿ ಹಾಗೂ ಆಟಗಳಲ್ಲಿ ಆರೋಗ್ಯಕರ ಸ್ಪರ್ಧೆ ನಡೆಸುತ್ತಿದ್ದರು. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡರು. ಕೆಲವೊಮ್ಮೆ ತಮಾಷೆ ಮಾಡುತ್ತಿದ್ದರು, ಶಿಕ್ಷಕರಿಂದ ಬೈಗುಳವೂ ತಿನ್ನುತ್ತಿದ್ದರು. ಅವರ ನಡುವಿನ ಸ್ಪರ್ಧೆ ಎಷ್ಟೇ ಗಟ್ಟಿಯಾಗಿದ್ದರೂ, ಅದರ ಹಿಂದೆ ಪ್ರೀತಿ ಮತ್ತು ಪರಸ್ಪರ ಗೌರವ ಅಡಗಿತ್ತು. ಶಾಲೆಯ ಅಂತಿಮ ವರ್ಷದ ವಾರ್ಷಿಕೋತ್ಸವದಲ್ಲಿ ಇಬ್ಬರೂ ಒಬ್ಬರ ಸಾಧನೆಯನ್ನು ಮತ್ತೊಬ್ಬರು ಹೃತ್ಪೂರ್ವಕವಾಗಿ ಸಂಭ್ರಮಿಸಿದರು. ಆ ಕ್ಷಣ ಅವರ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಏಳನೇ ತರಗತಿಯಲ್ಲಿ ಅವರ ಸ್ನೇಹ ಮತ್ತಷ್ಟು ಗಾಢವಾಯಿತು. ತಮ್ಮ ಸಂತೋಷ, ದುಃಖ, ಕನಸುಗಳು ಹಾಗೂ ರಹಸ್ಯಗಳನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಅಗತ್ಯವಿದ್ದಾಗ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಆದರೆ ಎಂಟನೇ ತರಗತಿಗೆ ಬಂದಾಗ ಪರಿಸ್ಥಿತಿ ಬದಲಾಯಿತು. ಮೀರಾಗೆ ಶಾಲೆ ಬದಲಾಯಿಸಬೇಕಾದ ಕಾರಣ ಇಬ್ಬರೂ ಬೇರ್ಪಡಬೇಕಾಯಿತು. ಆ ದಿನ ಇಬ್ಬರ ಕಣ್ಣಲ್ಲೂ ಕಣ್ಣೀರು ತುಂಬಿತ್ತು. ಆದರೂ ಅವರ ಸ್ನೇಹ ಅಲ್ಲಿಗೆ ಕೊನೆಗೊಳ್ಳಲಿಲ್ಲ. ಪ್ರತಿದಿನ ಸಂದೇಶಗಳು ಮತ್ತು ಮಾತುಕತೆಗಳ ಮೂಲಕ ಅವರು ತಮ್ಮ ಸ್ನೇಹವನ್ನು ಮುಂದುವರಿಸಿದರು. ವಯಸ್ಕರಾದ ಮೇಲೂ ಅವರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು. ಜೀವನದ ಪ್ರತಿಯೊಂದು ಸಂತೋಷ, ದುಃಖ, ಗೆಲುವು, ಸೋಲು—ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಒಬ್ಬರಿಲ್ಲದೆ ಮತ್ತೊಬ್ಬರು ಇರಲಾರರು ಎಂಬಷ್ಟು ಆತ್ಮೀಯರಾಗಿದ್ದರು. ನೀತಿ:ನಿಜವಾದ ಸ್ನೇಹವು ಸ್ಪರ್ಧೆ, ದೂರ, ಕಾಲ ಮತ್ತು ಪರಿಸ್ಥಿತಿಗಳನ್ನೂ ಮೀರಿ ಸದಾ ಉಳಿಯುತ್ತದೆ. ಸತ್ಯ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ಕಟ್ಟಿದ ಸ್ನೇಹವೇ ಜೀವನದ ಅಮೂಲ್ಯ ಸಂಪತ್ತು. ಅರ್ಷಿಯಾ8ನೇ ತರಗತಿಅನೇಕಾಮ್ ಶಾಲೆಬೆಂಗಳೂರು ಅನೇಕಮ್‌ ಶಾಲೆ

“ಅನೇಕಮ್‌ ಶಾಲೆಯಮಕ್ಕಳು ಬರೆದ ಕನ್ನಡ ಬರಹಗಳು”ಡಾ. ಮಮತ, ಶಿಕ್ಷಕರು,ಅನೇಕಮ್‌ ಬೆಂಗಳೂರು Read Post »

ಇತರೆ

ಬೋರನಿಗೆ  ಡೆಂಗ್ಯೂ ಜ್ವರ ಬೆಂಗಳೂರಿಗೆ ಬರೊಲ್ಲಾ…! ಹಾಸ್ಯ ಬರಹ, ಗೊರೂರು ಅನಂತರಾಜು, ಹಾಸನ.

ಹಾಸ್ಯ ಸಂಗಾತಿ ಗೊರೂರು ಅನಂತರಾಜು ಬೋರನಿಗೆ  ಡೆಂಗ್ಯೂ ಜ್ವರ ಬೆಂಗಳೂರಿಗೆ ಬರೊಲ್ಲಾ…! ಬೋರನಿಗೆ ಹುಟ್ಟೂರುನಾಯಕರಹಳ್ಳಿಯಲ್ಲಿ  ಒಬ್ಬನೇ ಕುಂತು ತುಂಬಾ ಬೋರಾಗಿತ್ತು. ಅವನ ಗೆಳೆಯರೆಲ್ಲಾ  ಕೆಟ್ಟು ಪಟ್ಟಣ ಸೇರಿದ್ರು. ಇವನು ಮಾತ್ರ ಒಳ್ಳೆಯವನಾಗೇ ಹಳ್ಳಿಯಲ್ಲಿ ಉಳಿದುಬಿಟ್ಟಿದ್ದ. ಮನೆಗೆ ಸುಣ್ಣ ಬಣ್ಣ ಹೊಡೆಸಿ ಬಹಳ ದಿನ ಆಗಿತ್ತು. ಇಟ್ಟಿಗೆ.ಸಿಮೆಂಟ್,ಸಕಲೇಶಪುರದ ನಾಟಿ ಮರಳು ಇಲ್ಲದೇ ಇವರಪ್ಪ ಕೆಂಚ ಜೇಡಿ ಮಣ್ಣಲ್ಲೇ ಗೋಡೆ ಕಟ್ಟಿ, ಆರ್‌ಸಿಸಿ ಶೀಟ್ ಹೊದಿಸಿ ಲಲಿತ ಮಹಲ್ ಕಟ್ಟಿದ್ದ. ಅಪ್ಪ ಸತ್ತು ಇಪ್ಪತ್ತು ವರ್ಷ ಆಗಿತ್ತು. ಸತ್ತು ಹನ್ನೊಂದನೇ ದಿನಕ್ಕೆ ಹೊಡೆಸಿದ್ದು ಸುಣ್ಣ ಬಣ್ಣ. ಅವತ್ತು ಪುಣ್ಯ ಮಾಡಿಸ್ಕೊಂಡಿದ್ದ ಪುಣ್ಯಾತ್ಮ ಇವತ್ತಿನವರೆಗೂ ಗೋಡೆಗೆ ಸುಣ್ಣ ಬಣ್ಣ ಹೊಡೆಸಿರಲಿಲ್ಲ, ಆ ಜೇಡಿಮಣ್ಣಿನ  ಗೋಡೆ ಜಡಿಮಳೆಗೆ ಬಿರುಕು ಬಿಟ್ಟಿದ್ದು ತಿಗಣೆ, ಜಿರಲೆಸೇರ್ಕೊಂಡು ಬೋರನಿಗೆ ಬಹಳ ಕಾಟ ಕೊಡ್ತಿದ್ವು. ಹಗಲು ಹೊತ್ತಿನಲ್ಲಿ ಜಿರಲೆ ಕಾಟ. ರಾತ್ರಿ ವೇಳೆ ತಿಗಣೆ ಕಾಟ. ಯಾರೋ ಹೆಲ್ತ್ ಇನ್ಸ್ ಪೆಕ್ಟರ್ ಮನೆ ಹತ್ರ ಬಂದು ಮನೆ ಮುಂದೆ ಚರಂಡಿ ನೀಟಾಗಿ ಮಡಿಕೊ ಬೋರ.  ಚರಂಡಿಯಲ್ಲಿ ನೀರು ನಿಂತ್ರೆ ಸೊಳ್ಳೆಗಳು ನೀರಲ್ಲಿ ಮೊಟ್ಟೆ ಇಡ್ತವೆ.  ಅವು ಮರಿಯಾಗಿ ಅಭಿವೃದ್ಧಿ ಹೊಂದಿ ರೆಕ್ಕೆ ಬೆಳೆದು ಹಾರಿ ಬಂದು ನಿನ್ನ ಕಚ್ತವೆ. ಅವು ನಿನ್ನ ಹಗಲು ಹೊತ್ತು ಕಡಿದ್ರೆ ಡೆಂಗ್ಯೂ ಜ್ವರ.  ರಾತ್ರಿ  ಕಡಿದ್ರೆ ಮಲೇರಿಯಾ ಅಂತ ತಿಳ್ಕೋ.  ಸೊಳ್ಳೆಯಲ್ಲೂ ಎರಡು ಜಾತಿ ಐತೆ.. ಅಂತ ಜಾತ್ಯಾತೀತ ಭಾಷಣ ಮಾಡುತ್ತಿರಲು‘”ಇನ್ಸ್ ಸ್ಪೆಕ್ಟ್ರೇ, ನೀವೇನೋ ಉದ್ದುದ್ದ ಭಾಷಣ ಮಾಡಿ ಜನ ಜಾಗೃತಿ ಮಾಡ್ತಿದ್ದಿರಿ ತುಂಬಾ ಥ್ಯಾಂಕ್ಸ್..  ಇವೆಲ್ಲಾ ಸೈನ್ಸ್  ಮಾತು ನನ್ನ ನೈಸ್ ರೋಡ್ ತಲೆಗೆ ಹತ್ತಕ್ಕಿಲ್ಲ. ಸದ್ಯ ನನ್ನ ತಲೇಲಿ ಹೇನು ಕಾಟ ತಪ್ಪಕ್ಕಿಲ್ಲ. ತಿಗಣಿಗೆ ಹೊಡಿಯೋ ಔಷಧಿ ತರಹ ಹೇನು  ನಾಶಕ್ಕೆ ಏನಾದ್ರು ಆಯಿಲ್ ಇದ್ರೇ ಹೇಳಿ. ನಾನು ಸ್ಟ್ರೇ ಮಾಡ್ಕೋತಿನಿ.. ಎನ್ನಲು ಹೆಲ್ತ್ ಇನ್ಸ್ ಸ್ಪೆಕ್ಟರ್ ದೂಸ್ರ ಮಾತ್ನಾ ಡದೆ ತಲೆ ಕೆರೆದುಕೊಂಡು ಹೆರಿಗೆ ಆಸ್ಪತ್ರೆ ಕಡೆಗೆ ಹೊಂಟೋಗಿದ್ರು. ಛೇ ಏನು ಮಾಡೋದು ಮನೆಯಲ್ಲಿ ಮಲಗೊಂಗಿಲ್ಲ. ಈ ಸೊಳ್ಳೆ, ಜಿರಳೆ, ತಿಗಣಿ ಕಾಟ. ಹಲ್ಲಿ ಲೊಚ ಲೊಚ ಶಕುನ ಜ್ಯೊತಿಷ್ಯ ಭಯ!  ಅದ್ಕೇ ಏನ್ ಮಾಡೊದು..? ರಾತ್ರಿಯೆಲ್ಲಾ ಕುಂತು ಯೋಚ್ನೇ ಮಾಡ್ದ. ಬೆಳಿಗ್ಗೆ   ಹೊತ್ಗೆ ಒಂದು ಪ್ಲಾನ್ ತಲೇಲಿ ಹೊಳಿತು. ಅದೇನು ಐದು ವರ್ಷದ ಪಂಚವಾರ್ಷಿಕ ಯೋಜನೆ ಅಲ್ಲಾ. ಐದು ದಿನಗಳಲ್ಲಿ ಮುಗಿಸಬಹುದಾದ ಯೋಜನೆ. ತನ್ನ ಪಾಲಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಬಂದಿದ್ದ ಐದು ಗುಂಟೆ ಜಮೀನಿನಲ್ಲಿ ಒಂದು ಎತ್ತರವಾಗಿ ಅಟ್ಟಣಿ ಕಟ್ಟಿ ರಾತ್ರಿ ಅಲ್ಲೆ ಮಲಗೋದು. ಇತ್ತ ರಾತ್ರಿ ಕಾಡು ಹಂದಿ ಹೊಲಕ್ಕೆ ನುಗ್ಗಿ ಫಸಲು ಹಾಳು ಮಾಡ್ಡಂಗೆಕಾಯ್ದಂಗೂ ಆಗ್ತದೆ. ಅತ್ತ ಜಿರಳೆ ಕಾಟನೂ ತಪ್ತದೆ. ಸೊಳ್ಳೆಗಳು ಕೂಡ ಅಷ್ಟು ಎತ್ತರಕ್ಕೆ ಹಾರೋದು ಡೌಟು ಅಂತ ಥಾಟ್ಸ್ ಮಾಡಿದ್ದ.ಮಾರನೇ ದಿನ ಬೆಳಿಗ್ಗೆ ಎದ್ದು ಲುಂಗಿ ಸೊಂಟಕ್ಕೆ ಬಿಗಿಯಾಗಿ ಸಿಗಿಸಿಕೊಂಡು ಹೊಳೆ ಕಡೆ ಹೊರಟ. ಬೋರ ಮನೆಯಲ್ಲೇ ಕುಂತುoಡು ಹೊಟ್ಟೆ ಸ್ವಲ್ಪ ಮುಂದೆ ಬಂದಿತ್ತು. ಬಿಳಿ ಪಂಚೆ ಬೇಗ ಕೊಳೆ ಆಗ್ತದೆ ಅಂತ ಅಡ್ಡಡ್ಡ  ಗೆರೆ  ಇರೋ ಪಟೆಪಟೆ ಲುಂಗಿನ ಸಿ.ನಂಜಪ್ಪನ ಅಂಗಡಿಯಲ್ಲಿ ಖರೀದಿಸಿ ತಂದಿದ್ದ. ಅದು ಪಕ್ಕ ಕಾಟನ್ ಪೇಟೆ  ಕಾಟನ್ ಲುಂಗಿ. ಒಂದೇ ಒಗೆತಕ್ಕೆ ಸಿಂಕ್ ಆಗಿಬಿಡ್ತು.  ಇವ  ಹದಿನಾರು ಮೊಳದ ಲುಂಗಿತಗಳೊದು ಬಿಟ್ಟು ಹನ್ನೆರೆಡು ಮೊಳದ್ದು ತಗೊಂಡಿದ್ದ. ಅದೇ ಎಡವಟ್ಟಾಗಿತ್ತು. ಅದನ್ನು ಪೂರಾ ಸೊಂಟಕ್ಕೆ ಸುತ್ಕೊಂಡು ಹಿಂದ್ಗಡೆ ಕಟ್ಟಿಕೊಳ್ಳೊಕ್ಕೆ ಆಗ್ತಿರಲಿಲ್ಲ. ಹೀಗಾಗಿ ಆಗಾಗ್ಗೆ ಜಾರಿ ಹೋಗ್ತಿದ್ದ ಲುಂಗಿನ ಸಿಗಿಸಿಕೊಂಡು ಸಿಗಿಸಿಕೊಂಡು ಸುಸ್ತಾಗಿದ್ದ. ಇತ್ತ ಬೋರ ಬೆಳಿಗ್ಗೆ ಎದ್ದೇಟಿಗೆ ಹೊಳೆ ಹತ್ರ ಬರುತ್ತಿರಲು ಅತ್ತ ಊರಿನ ಹಿರಿಯ ಈರಯ್ಯ ಮೇಷ್ಟು ಹೊಳೆ ಬದಿಯ ಎಲ್ಲಾ ನಿತ್ಯಕರ್ಮ ಮುಗಿಸಿಕೊಂಡು ಟರ್ಕಿ ಟವಲ್ ನಲ್ಲಿ ಮುಖ ಒರಸ್ಕೊoಡು ಸೂರ್ಯ ದೇವರಿಗೆ ನಮಸ್ಕಾರ ಮಾಡ್ತಿದ್ರು,‘ ಏನ್ ಮೇಷ್ಟ್ರೇ, ನಮ್ಮ ಹೇಮಾವತಿ ಹೊಳೆಲಿ ಎಷ್ಟು ಟಿಎಂಸಿ ನೀರು ಐತೆ..?ಬೋರನ ಈ ತರಲೆ ಪ್ರಶ್ನೆಗೆ ಈರಯ್ಯ ಮೇಷ್ಟ್ರು ಏನ್ ತಾನೇ ಉತ್ತರ ಕೊಟ್ಟಾರು?“ಲೋ, ಬೋರ, ನಿನ್ಗೆ ತಿ.. ಮುಖ ತೊಳ್ಕೊಳಕ್ಕೆ ಎಷ್ಟು ನೀರು ಬೇಕು ಅಷ್ಟೇ ಐತೆ ಹೋಗ್ಲ.. ರಾಜ್ಯದ ಉಸಾಬರಿ ಎಲ್ಲಾ ನಿನಗ್ಯಾಕೆ.. ರಾಜಧಾನಿಯಲ್ಲಿ  ಇರೋ ನಮ್ಮ ಮಂತ್ರಿ ಮಾನ್ಯರು ಅದನ್ನು ನೋಡ್ಕೊತ್ತಾರೆ. ಅದ್ಕೆ ಅಂತ್ಲೇ ನಾವು  ಹೆಬ್ಬಟ್ಟು ಒತ್ತಿ ಓಟ್ ಹಾಕಿ ಗೆಲ್ಸಿ ಕಳಿಸಿಲ್ವಾ..“ಮೇಷ್ಟ್ರೇ, ನಾಳೇ ಬೆಂಗಳೂರಿಗೆ ಹೋಗೋಕೆ ನಮ್ಮ ಊರಿಂದ ಜನ ಎಲ್ಲಾ ಹೊಂಟೋರೆ. ನೀನು ಬಾರಲಾ ಬೋರ ಅಂತ ಆ ವೆಂಕಟಸ್ವಾಮಿ ಹೇಳ್ವನೆ. ನಾನೂ ಬೆಂಗಳೂರಿಗೆ ಹೋಗಿ ಬಹಳ ದಿನ ಆಯ್ತು.  ಈಗೇನೋ ಅದ್ನ ಮೆಗಾಸಿಟಿ ಮಾಡೋಕೆ ಹೊಂಟೊರಂತೆ..!‘ ನೀನ್ಗೆ ನರೇಗದಲ್ಲಿ ಏನೂ ಕೂಲಿ ಕೆಲಸ ಸಿಕ್ಕಿಲ್ಲ ಅಂದ್ರೇ ಬೆಂಗಳೂರಿಗೆ ಹೋಗಿ ಬಾ. ಹಾಗೇ ಬರ್ತಾ ತಮಿಳುನಾಡಿನ ಸಿಎಂ ನಟಿಸಿರೋ ಮೆಗಾ ಹಿಟ್ ಸಿನಿಮಾನೂ ನೋಡ್ಕೊಂಡು ಬಾ..‘ ಆಯ್ತು ಮೇಷ್ಟ್ರೇ, ನೀವು ಬನ್ನಿ ಆ ಸ್ಟ್ರೈಕ್ ನಲ್ಲಿ ನೀವು ವಸಿ ಎಂಟರ್ ಟೈನ್ ಮೆಂಟ್ ತಗೊಳಿರಂತೆ..‘ ನಮಗ್ಯಾಕ್ಲ ಬೋರ ಮನರಂಜನೆ. ಕಾಡು ಬಾ ಅಂತದೆ ಊರು ಹೋಗು ಅಂತದೆ.  ಈ ಊರಲ್ಲಿ ಹುಟ್ಟಿ ಇದನ್ನೇ ಜನ್ಮಭೂಮಿ ನಮ್ಮ ಕರ್ಮಭೂಮಿ ಅನ್ಕೊಂಡು ಕಾಲ ಹಾಕೋ ಮಂದಿ ನಾವು.ನಾನು  ಹುಡ್ಗುನಾಗಿದ್ದಾಗ ಕೂಲಿಮಠದ ಮೇಷ್ಟ್ರು ಹತ್ರ ನಾಲ್ಕು ಅಕ್ಷರ ಮರಳಲ್ಲಿ ಬರ್ದಿ ಕಲ್ತಿದ್ದೆ.  ಅದು ನನ್ಗೆ  ಈಗ ರಾಮಾಯಣ, ಮಹಾಭಾರತ, ಭಾಗವತ ಓದಿಕೊಳ್ಳೊಕೆ ನೆರವಾಗ್ತಿದೆ. ನಮ್ಮಪ್ಪ ಲಕ್ಷ್ಮೇಗೌಡ್ರುಸುತ್ತಮುತ್ತಲ ಊರಿಗೆ ಹೋಗಿ ಪೌರಾಣಿಕ ನಾಟಕ ಕಲಿಸ್ತಿದ್ರು.  ಅಪ್ಪ  ಬಿಟ್ಟು ಹೋಗಿದ್ದು ಅದೊಂದೆ ಹಳೇ ಹಾರ್ಮೊನಿಯಂ ಮತ್ತು ಮರದ  ಪೆಟ್ಟಿಗೆ. ಆಗೆಲ್ಲಾ ನಾನು ನಮ್ಮಪ್ಪನ ಜೊತೆ ನಾಟಕ ನೋಡೋಕೆ ಹಳ್ಳಿ ಹಳ್ಳಿಗೆ ಹೋಗ್ತ ಇದ್ದೆ.  ಅವರಿವರು ಸಮಯ ಸಂದರ್ಭ ಏನೇನೋ ಕಾರಣ ಹೇಳಿ ನಾಟಕದ ಪ್ರದರ್ಶನ ದಿನ ತಪ್ಪಿಸಿಕೊಂಡಾಗ ಆ ಪಾರ್ಟು ನಾನೇ ಮಾಡ್ತಿದ್ದೆ. ನಮ್ಮಪ್ಪ  ಹಾರ್ಮೋನಿಯಂ ನುಡಿಸ್ತಿದ್ದನ್ನೇ ನೋಡ್ಕೊಂಡು, ಮನೇಲಿ ಕುಂತು ಅಭ್ಯಾಸ ಮಾಡಿ ಅಂತೂ ಇಂತು ಹಾರ್ಮೋನಿಯಂ ಮೇಷ್ಟ್ರಾಗಿ ನಿಮ್ಮಂತಹ ಕಲಿಯುಗದ ನಾಟಕ ಕಲಿಯುವ ಊರ ಹುಡುಗರಿಗೆಲ್ಲಾ ನಾಟಕ ಕಲಿಸಿದೆ. ಅದ್ಕೆ ನೀವೆಲ್ಲಾ ನಾಟಕದ ಮೇಷ್ಟ್ರು ಅಂತ ಆಗ ನನ್ನನ್ನು ಕರಿತಿದ್ರಿ. ಈಗ ನನ್ಗೂ ವಯಸ್ಸಾಯ್ತು. ನೀವೆಲ್ಲಾ ನನ್ನ ಕೈ ಬಿಟ್ರಿ. ಅದ್ಕೇ ಈಗ ನಾನು ಬರೇ ಮೇಷ್ಟ್ರು ಆಗಿ ಉಳಿದಿದ್ದೀನಿ ಅಷ್ಟೇ..” ಬೇಜಾರು ಮಾಡ್ಕೋಬೇಡಿ ಮೇಷ್ಟೇ. ಹಳೇ ಮೇಷ್ಟ್ರು ರಿಟೈರ್ಡ್ ಆದ್ಮೇಲೆ ಹೊಸ ಮೇಷ್ಟ್ರು ಬರಬೇಕಲ್ವೇ.! ಹಂಗೆ ಈ ದೇಶದ ಪಾಲಿಟಿಕ್ಸ್ ನಲ್ಲಿ ಹಳೇ ಪಾರ್ಟಿಗಳೆಲ್ಲಾ ಟೆಂಟ್ ಸಿನಿಮಾಗಳಂತೆ ಪ್ಯಾಕಪ್ ಆಗ್ತಿವೆ.  ಈಗೇನೋ ಹೊಸದಾಗಿ ಜಿರಲೆ ಪಾರ್ಟಿ ಅಂತ ಜೋರಾಗಿ ಹವಾ ಹುಟ್ಟಾಕ್ತ  ಐತೆ..ನಾನು ಆ ಪಾರ್ಟಿ ಸೇರೋಣ ಅಂತ ಯೋಚ್ನೆ ಮಾಡಿವ್ನಿ..‘ಲೇ ತರಲೇ, ನಿಮ್ಮಂತಹ ಎಸ್.ಎಸ್.ಎಲ್.ಸಿ. ಫೇಲಾದ ಹುಡುಗರಿಗೆಲ್ಲಾ ಆ ಪಾರ್ಟಿಯಲ್ಲಿ ಸೀಟು ಸಿಕ್ಕಲ್ಲ ಹೋಗ್ಲಾ ನಿನ್ನ ಕೆಲಸ   ನೋಡ್ಕೋ. ಈ ಹಳ್ಳಿಯಲ್ಲಿ ನೀನು ಕಷ್ಟ ಪಟ್ಟು ದುಡಿಮೆ ಮಾಡಿ ನಿನ್ನ ಹೊಟ್ಟೆಪಾಡು ಹೇಗೋ ನಡಿತಾ ಐತೆ.  ನಾಳೆ ಬೆಂಗಳೂರಿಗೆ ನೀನು ಹೋಗಿ ಬಾ  ಬೇಡ ಅನ್ನಲ್ಲಾ. ಏನಾದ್ರೂ ವಿರೋಧ ಪಕ್ಷದವರು  ಐನೂರು ಸಾವಿರ ಕೊಟ್ರೇ ಹೋಗಿ ಬಾ. ನಿನಗೆ ನಷ್ಟ ಏನೂ ಆಗಲ್ಲ. ಪುಕ್ಸಟ್ಟೆ ಬಸ್ ಮಾಡವರೇ ಅಂತ ಮನೆ ಕೆಲಸ ಎಲ್ಲಾ ಬಿಟ್ಟು ಸಿಟಿಗೆ ಹೋಗಿ ಗಲಾಟೆ ಮಾಡಿ ಏಟು ತಿಂದು ಬರಬ್ಯಾಡ ದಡ್ಡ..ಎಂದು ಬಿಳಿ ಗಡ್ಡ ಕೆರೆದುಕೊಂಡರುಈರಯ್ಯ ಮೇಷ್ಟು. ” ನೀವು ಹೇಳೋ ಮಾತಿನಲ್ಲೂ ಸತ್ಯ ಐತೆ ಮೇಷ್ಟ್ರೇ. ನಾನೂ ಕೂಡ ನಮ್ಮ ಹೊಲದಲ್ಲಿ ಒಂದು  ಅಟ್ಟಣಿ ಕಟ್ಟಬೇಕು ಅಂತ ಇವತ್ತು ಬೆಳಿಗ್ಗೆ  ತಾನೇ ಯೋಚನೆ ಮಾಡಿವ್ನಿ. ನಾಳೆ ಬೆಂಗಳೂರು ಚಲೋ ಚಳುವಳಿಗೆ ನಾನು ಬರೊಲ್ಲಾ. ನಂಗೆ ಡೆಂಗ್ಯೂ ಜ್ವರ ಬಂದೈತೆ ಅಂತ ವೆಂಕಟಸ್ವಾಮಿಗೆ ಒಂದು ಸುಳ್ಳು ಹೇಳಿ ಸಾಗ ಹಾಕ್ತಿನಿ..” ಸರಿ, ಈಗ ಹೇಮಾವತಿ ಹೊಳೆಯಲ್ಲಿ ಇರೋ ಡೆಡ್ ಸ್ಟೊರೇಜ್ ವಾಟರ್ ನಲ್ಲಿ ಒಂದಿಷ್ಟು ಎಡದಂಡೆ ನಾಲೇಲಿ ನೀರು ಬಿಟ್ಟವರೇ.. ನಾಳೆ ಏನ್ ಮಾಡ್ತಾರೋ ಗೊತ್ತಿಲ್ಲ.  ಸಧ್ಯ ಈಗ ಹೇಮಾವತಿ  ಹೊಳೆಯಲ್ಲಿ ಹರಿತಿರೋ ಈ ಶುದ್ಧವಾದ ನೀರಲ್ಲಿ ಮುಖ ತೊಳ್ಕೊಂಡು ಆ ಆಕಾಶ  ದೇವನಿಗೆ ಮೋಡ ಕಟ್ಟಿ ಮಳೆ ಹುಯ್ಸಪ್ಪ ಅಂತ ಪ್ರಾರ್ಥನೆ ಮಾಡಿ,  ಮನೆಗೆ ಹೋಗಿ ಹೆಂಡ್ತಿ ಮೈನಾವತಿ ಮಾಡಿಟ್ಟಿರೋ ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ ತಿಂದು ಗೊರೂರು  ಗ್ರಾಮ ಪಂಚಾಯ್ತಿ ಆಫೀಸ್ ಹತ್ರ ಹತ್ತು ಗಂಟೆ ಹೊತ್ತಿಗೆ  ಸರಿಯಾಗಿಬಾ. ಗೊರೂರು ಮಧ್ಯೆ ಹಾಯ್ದ ಹೋಗಿರುವ ಚಂಗರವಳ್ಳಿ ನಾಲೆಯಲ್ಲಿ  ಹೂಳು ತುಂಬಿಕೊಂಡೈತೆ. ಇದರಿಂದ ನಮ್ಮೂರ ತನಕ ನೀರು ಬರ್ತಿಲ್ಲಾ. ಆ ಹೊಳನ್ನೆಲ್ಲಾನರೇಗ ಸ್ಕಿಂ ನಲ್ಲಿ ಬಿಲ್ ಮಾಡಿ ತೆಗಿಸಿಬಿಡಪ್ಪ.  ಬೋರನಂತಹ ಹಳ್ಳಿಯಲ್ಲಿ ಉಳಿದಿರುವ ಶ್ರಮಿಕ ಕೂಲಿ ಕಾರ್ಮಿಕರ ಕೈಗೆ ಒಂದಿಷ್ಟು ಕೆಲಸ ಕೊಡಪ್ಪ   ಅಂತ ಹೊಸದಾಗಿ  ಅಪಾಯಿಂಟ್ ಆಗಿ ಬಂದಿರೋ ಪಿಡಿಯೋ ಸಾಹೇಬ್ರಿಗೆ ಹೇಳ್ತಿನಿ. ಪಾಪ ಆತ ನೀಟಾಗಿ  ಮನೇಲಿ ಕುಂತು  ಓದಿ ನೀಟ್ ಪರೀಕ್ಷೆ ಬರೆದು ಮುಂದೆ ಬಿಇ ಸಿವಿಲ್ ಇಂಜಿನಿಯರಿಂಗ್ ಪದವಿ ಮುಗಿಸಿ,  ಐಎಎಸ್, ಐಪಿಎಸ್, ಕೆಪಿಎಸ್ಸಿ ಪರೀಕ್ಷೆಗೆ ಅಂತೆಲ್ಲಾ ಓದ್ಕೊಂಡು   ಸದ್ಯಕ್ಕೆ ಈ ಪಿಡಿಓ ಉದ್ಯೋಗಕ್ಕೆ ಬಂದವ್ನೇ.  ಪುಣ್ಯಾತ್ಮ ತಾನು   Rank ಸ್ಕೂಡೆಂಟ್ ಅಂತ ಕೆಲಸ ಹುಡಿಕ್ಕೊಂಡು ವಿದೇಶಕ್ಕೆ ಹಾರಿ ಹೋಗಿಲ್ಲ.  ಹೊಸ ಮನುಷ್ಯ ಲಂಚದ ಆಮಿಷಕ್ಕೆ ಇನ್ನೂ ಬಗ್ಗಿಲ್ಲ.  ಮುಂದೆ ಎಲ್ಲಿ ಈ ಗುತ್ತಿಗೆದಾರರು ಆಮಿಷ ತೋರಿ ಏನು ಹಾಳು  ಮಾಡ್ತಾರೋ ಗೊತ್ತಿಲ್ಲ. ಇರಲಿ ಸಧ್ಯಕ್ಕಂತೂ ಆತ  ನಯ ವಿನಯ ಇರೋ ವ್ಯಕ್ತಿಯಾಗಿ  ಕಾಣ್ಸಿತ್ತಾವ್ನೆ..”  ಹೌದ ಮೇಷ್ಟ್ರೇ, ನೀವು ಹೇಳಿದ ಹೊತ್ತಿಗೆ ಸರಿಯಾಗಿ ಬರ್ತಿನಿ. ಕಡೆದಾಗಿ ಒಂದು ಪ್ರಶ್ನೆ. ಅದೇನೋ  ಹಳೇ ನರೇಗ  ಹೋಗಿ ಈಗ ಹೊಸದಾಗಿ..ರಾಗ ಎಳೆದ“ಹೋಗ್ಲ ಬೋರ.. ನಮ್ಮ  ಮಾತು ಹೀಗೆ ಕಂಬಿ ಇಲ್ಲದ ರೈಲಿನಂತೆ ಹೋಗ್ತ ಇದ್ರೇ ಡೆಡ್ ಲೈನ್ ಇರೊಲ್ಲ…—ಗೊರೂರು ಅನಂತರಾಜು,ಹುಣಸಿನಕೆರೆ ಬಡಾವಣಿ,29ನೇ ವಾರ್ಡ್, 3 ನೇ ಕ್ರಾಸ್,ಹಾಸನ.

ಬೋರನಿಗೆ  ಡೆಂಗ್ಯೂ ಜ್ವರ ಬೆಂಗಳೂರಿಗೆ ಬರೊಲ್ಲಾ…! ಹಾಸ್ಯ ಬರಹ, ಗೊರೂರು ಅನಂತರಾಜು, ಹಾಸನ. Read Post »

ಇತರೆ, ಜೀವನ

“ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ವಿಶೇಷ ಲೇಖನ ಜಯಶ್ರೀ. ಜೆ. ಅಬ್ಬಿಗೇರಿ

ವಿಶೇಷ ಸಂಗಾತಿ ಜಯಶ್ರೀ. ಜೆ. ಅಬ್ಬಿಗೇರಿ “ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ಒಂದು ಹಳ್ಳಿಯಲ್ಲಿ ಸೋಮಣ್ಣ ಎಂಬ ಒಬ್ಬ ಕೃಷಿಕನಿದ್ದನು. ಅವನು ತುಂಬಾ ದಯಾಳುವಾಗಿದ್ದರೂ, ಅತಿಯಾದ ಸೋಮಾರಿಯಾಗಿದ್ದನು. “ನಾಳೆ ಮಾಡೋಣ ಬಿಡು” ಎಂದು ಪ್ರತಿಯೊಂದು ಕೆಲಸವನ್ನೂ ಮುಂದೂಡುವುದು ಅವನ ಹವ್ಯಾಸವಾಗಿತ್ತು.ಒಂದು ದಿನ ಅವನ ಹಳ್ಳಿಗೆ ಒಬ್ಬ ಸಾಧು ಬಂದರು. ಸೋಮಣ್ಣನ ಬಡತನ ಮತ್ತು ಸೋಮಾರಿತನವನ್ನು ಕಂಡು ಅವರಿಗೆ ಮರುಕ ಉಂಟಾಯಿತು. ಸಾಧುಗಳು ಅವನಿಗೆ ಒಂದು ಕಪ್ಪಾದ ವಿಚಿತ್ರ ಕಲ್ಲನ್ನು ನೀಡಿ ಹೀಗೆ ಹೇಳಿದರು, “ಸೋಮಣ್ಣ, ಇದು ಕೇವಲ ಕಲ್ಲಲ್ಲ, ಇದೊಂದು ‘ಪರಸಮಣಿ’ ಇದನ್ನು ನೀನು ಯಾವುದೇ ಕಬ್ಬಿಣಕ್ಕೆ ಮುಟ್ಟಿಸಿದರೂ ಅದು ಚಿನ್ನವಾಗುತ್ತದೆ. ಆದರೆ ನೆನಪಿಡು, ನಾನು ನಾಳೆ ಸಂಜೆ ಸರಿಯಾಗಿ ಆರು ಗಂಟೆಗೆ ಇದನ್ನು ಮರಳಿ ಪಡೆಯಲು ಬರುತ್ತೇನೆ. ಅಷ್ಟರೊಳಗೆ ನಿನಗೆ ಎಷ್ಟು ಬೇಕೋ ಅಷ್ಟು ಚಿನ್ನ ಮಾಡಿಕೊ ಹಾಗೂ ನಿನ್ನ ಬಡತನ ನೀಗಿಸಿಕೊ” ಎಂದು ಹೇಳಿ ಹೊರಟರು.ಸೋಮಣ್ಣನಿಗೆ ಅಪಾರ ಸಂತೋಷವಾಯಿತು. ಅವನು ಯೋಚಿಸಿದನು, “ನನ್ನ ಬಳಿ ನಾಳೆ ಸಂಜೆಯವರೆಗೆ ಸಮಯವಿದೆಯಲ್ಲ! ಈಗ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ನಾಳೆ ಬೆಳಿಗ್ಗೆ ಮಾರುಕಟ್ಟೆಗೆ ಹೋಗಿ ತುಂಬಾ ಕಬ್ಬಿಣ ತಂದು, ಚಿನ್ನವಾಗಿ ಬದಲಾಯಿಸುತ್ತೇನೆ.”ಮಾರನೇ ದಿನ ಬೆಳಿಗ್ಗೆ ಎದ್ದ ಸೋಮಣ್ಣ, “ಇನ್ನೂ ತುಂಬಾ ಸಮಯವಿದೆ, ಮಧ್ಯಾಹ್ನ ಹೋದರಾಯಿತು” ಎಂದುಕೊಂಡು ಆರಾಮವಾಗಿ ಊಟ ಮಾಡಿ ನಿದ್ದೆ ಹೋದನು. ಮಧ್ಯಾಹ್ನ ಮೂರು ಗಂಟೆಗೆ ಎದ್ದಾಗ ಅವನಿಗೆ ಮಾರುಕಟ್ಟೆಗೆ ಹೋಗಿ ಕಬ್ಬಿಣ ತರಬೇಕು ಎಂದು ನೆನಪಾಯಿತು. ಆದರೆ ಸೋಮಾರಿತನದಿಂದಾಗಿ, “ಸಂಜೆಯಾಗಲು ಇನ್ನು ಮೂರು ಗಂಟೆ ಇದೆಯಲ್ಲ, ನಿಧಾನವಾಗಿ ಹೋಗೋಣ” ಎಂದುಕೊಂಡು ನಿಧಾನವಾಗಿ ಹೆಜ್ಜೆ ಹಾಕಿದನು.ಅವನು ಮಾರುಕಟ್ಟೆಗೆ ತಲುಪಿ, ಕಬ್ಬಿಣವನ್ನು ಖರೀದಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ಸರ‍್ಯ ಮುಳುಗುತ್ತಿದ್ದನು. ಅವನು ಓಡೋಡುತ್ತಾ ಮನೆಗೆ ಬಂದು ಕಬ್ಬಿಣಕ್ಕೆ ಆ ಮಾಂತ್ರಿಕ ಕಲ್ಲನ್ನು ಮುಟ್ಟಿಸಲು ಹೋದನು.ಆದರೆ ಅಷ್ಟರಲ್ಲೇ ಸರಿಯಾಗಿ ಸಂಜೆ ಆರು ಗಂಟೆಯಾಗಿತ್ತು!ಸಾಧುಗಳು ಅವನ ಮನೆ ಬಾಗಿಲಿಗೆ ಬಂದು ನಿಂತಿದ್ದರು. ಅವರು ಸೋಮಣ್ಣನ ಕೈಲಿದ್ದ ಮಾಂತ್ರಿಕ ಕಲ್ಲನ್ನು ಮರಳಿ ಪಡೆದರು. ಸೋಮಣ್ಣನು ಅಳುತ್ತಾ, “ಸ್ವಾಮಿ, ನನಗೆ ಇನ್ನೊಂದು ಐದು ನಿಮಿಷ ಕೊಡಿ, ನಾನು ಕಬ್ಬಿಣವನ್ನು ಚಿನ್ನ ಮಾಡಬೇಕು” ಎಂದು ಬೇಡಿಕೊಂಡನು.ಅದಕ್ಕೆ ಸಾಧುಗಳು ಶಾಂತವಾಗಿ ಹೇಳಿದರು, “ಸೋಮಣ್ಣ, ಯಾರು ಸಮಯದ ಬೆಲೆಯನ್ನು ಅರಿಯುವುದಿಲ್ಲವೋ, ಅವರಿಗೆ ಅದೃಷ್ಟವೂ ಒಲಿಯುವುದಿಲ್ಲ. ನಿನಗೆ ಪರ‍್ತಿ ಒಂದು ದಿನ ಸಿಕ್ಕರೂ ನೀನು ಸಮಯವನ್ನು ವ್ರ‍್ಥ ಮಾಡಿದೆ. ಕಳೆದುಹೋದ ಸಮಯ ಮತ್ತು ಕಳೆದುಕೊಂಡ ಅವಕಾಶಗಳು ಮತ್ತೆ ಎಂದಿಗೂ ಮರಳಿ ಬರುವುದಿಲ್ಲ.”ಸೋಮಣ್ಣನಿಗೆ ತನ್ನ ಸೋಮಾರಿತನದ ಅರಿವಾಯಿತು, ಆದರೆ ಅಷ್ಟರಲ್ಲೇ ಸಮಯ ಮೀರಿಹೋಗಿತ್ತು.ಕಥೆಯ ನೀತಿ:ಸಮಯವು ಅತ್ಯಂತ ಅಮೂಲ್ಯವಾದದ್ದು. ಇಂದಿನ ಕೆಲಸವನ್ನು ಇಂದೇ ಮಾಡಬೇಕು. ನಾಳೆಗೆ ಮುಂದೂಡುವ ಅಭ್ಯಾಸವು ನಮ್ಮ ಯಶಸ್ಸಿನ ದಾರಿಗೆ ಅತಿ ದೊಡ್ಡ ಶತ್ರು.ಶ್ರೇಷ್ಠ ಸಾಧಕಇತಿಹಾಸದ ಶ್ರೇಷ್ಠ ಸಾಧಕರ ಜೀವನವನ್ನು ಗಮನಿಸಿದರೆ, ಅವರು ಎಂದಿಗೂ ನಾಳೆಗಾಗಿ ಕಾಯಲಿಲ್ಲ ಎಂಬ ಸತ್ಯ ನಮಗೆ ಮನವರಿಕೆಯಾಗುತ್ತದೆ. ಭಾರತದ ಹೆಮ್ಮೆಯ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರು ಸಮಯ ಪಾಲನೆಗೆ ಮತ್ತು ತತ್‌ಕ್ಷಣದ ರ‍್ತವ್ಯ ಪ್ರಜ್ಞೆಗೆ ಹೆಸರಾಗಿದ್ದರು. ಒಮ್ಮೆ ಅವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹಳಿಯ ಶಬ್ದದಲ್ಲಾದ ಸಣ್ಣ ವ್ಯತ್ಯಾಸವನ್ನು ಆ ಕ್ಷಣದಲ್ಲೇ ಗ್ರಹಿಸಿ ತಕ್ಷಣವೇ ರೈಲಿನ ಅಪಘಾತ ಸರಪಳಿಯನ್ನು ಎಳೆದರು. “ನಾಳೆ ನೋಡೋಣ” ಅಥವಾ “ಮುಂದಿನ ನಿಲ್ದಾಣದಲ್ಲಿ ಹೇಳೋಣ” ಎಂದು ಅವರು ಅಂದು ಉದಾಸೀನತೆ ತೋರಿದ್ದರೆ ನೂರಾರು ಜೀವಗಳು ಬಲಿಯಾಗುತ್ತಿದ್ದವು. ಅವರು ಇಂದಿನ ಕ್ಷಣದ ಮಹತ್ವವನ್ನು ಅರಿತು ಕರ‍್ಯಪ್ರವೃತ್ತರಾದ ಕಾರಣಕ್ಕೇ ದೊಡ್ಡ ದುರಂತ ತಪ್ಪಿತು. ಇದನ್ನೇ ಮಹಾತ್ಮರು “ನಾಳೆ ಮಾಡುವುದನ್ನು ಇಂದೇ ಮಾಡು, ಇಂದು ಮಾಡುವುದನ್ನು ಈ ಕ್ಷಣವೇ ಮಾಡು” ಎಂದು ಬಣ್ಣಿಸಿದ್ದಾರೆ.ಚಲನಶೀಲ ಬದುಕಿನ ಯಶಸ್ಸಿನ ಸೂತ್ರಬದುಕಿನ ಹಾದಿಯಲ್ಲಿ ಸಮಯ ಮತ್ತು ಅವಕಾಶಗಳು ನದಿಯ ನೀರಿನಂತೆ, ಅವು ಸದಾ ಹರಿಯುತ್ತಲೇ ಇರುತ್ತವೆ. “ಹೋದ ಆಯುಷ್ಯ, ಚಲಿಸಿದ ನದಿ ಮತ್ತು ಕಳೆದುಹೋದ ಸಮಯ ಎಂದಿಗೂ ಮರಳಿ ಬರುವುದಿಲ್ಲ” ಎಂಬ ಪ್ರಕೃತಿಯ ಕಠೋರ ನಿಯಮವನ್ನು ನಾವು ಅರಿತಾಗ ಮಾತ್ರ ಪ್ರಸ್ತುತ ಕ್ಷಣದ ನಿಜವಾದ ಮೌಲ್ಯ ನಮಗೆ ತಿಳಿಯುತ್ತದೆ. ಮನುಷ್ಯನ ಅತಿ ದೊಡ್ಡ ದರ‍್ಬಲ್ಯವೆಂದರೆ ಆಲಸ್ಯ ಮತ್ತು ಮುಂದೂಡುವಿಕೆ. ಇಂದು ಸಿಕ್ಕ ಅವಕಾಶವನ್ನು ನಾಳೆಗೆ ಮುಂದೂಡುವಾಗ ನಾವು “ಇದ್ದಾಗ ಇರದ ಮೌಲ್ಯ, ಹೋದಾಗ ತಿಳಿಯಿತು” ಎಂಬ ಗಾದೆ ಮಾತನ್ನು ಮರೆತುಬಿಡುತ್ತೇವೆ. ಇಂದಿನ ಸುಂದರ ಕ್ಷಣಗಳನ್ನು, ಸಂಬಂಧಗಳನ್ನು ಅಥವಾ ಸಿಕ್ಕ ಸುರ‍್ಣಾವಕಾಶಗಳನ್ನು ನರ‍್ಲಕ್ಷಿಸಿ ನಾಳೆಯ ಭ್ರಮೆಯಲ್ಲಿ ಬದುಕುವುದೇ ಜೀವನದ ಅತಿ ದೊಡ್ಡ ಸೋಲು.ನಮ್ಮ ವಿದ್ಯರ‍್ಥಿ ಜೀವನವಿರಲಿ ಅಥವಾ ವೃತ್ತಿ ಬದುಕಿರಲಿ, ನಮಗೆ ಸಿಗುವ ಸಣ್ಣ ಅವಕಾಶವನ್ನೂ ಕಡೆಗಣಿಸಬಾರದು.ನಾಳೆಯ ಭ್ರಮೆಯಲ್ಲಿಇಂದಿನ ಸುಂದರ ಕ್ಷಣಗಳನ್ನು, ಸಂಬಂಧಗಳನ್ನು ಅಥವಾ ಸಿಕ್ಕ ಸುರ‍್ಣಾವಕಾಶಗಳನ್ನು ನರ‍್ಲಕ್ಷಿಸಿ ನಾಳೆಯ ಭ್ರಮೆಯಲ್ಲಿ ಬದುಕುವುದೇ ಜೀವನದ ಅತಿ ದೊಡ್ಡ ಸೋಲು.ನಮ್ಮ ಕಣ್ಣೆದುರಿನ ನಿತ್ಯ ಸತ್ಯಗಳು:💡 ಬೆಳಕಿನ ಬೆಲೆ: ಹಗಲಿಡೀ ಸರ‍್ಯನ ಬೆಳಕಿದ್ದಾಗ ಅದರ ಬೆಲೆ ನಮಗೆ ತಿಳಿಯುವುದಿಲ್ಲ, ಆದರೆ ರಾತ್ರಿಯ ಕತ್ತಲಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಹೋದಾಗ ಮಾತ್ರ ಒಂದೇ ಒಂದು ಸಣ್ಣ ಮೇಣದಬತ್ತಿಯ ಬೆಳಕು ಎಷ್ಟು ಅಮೂಲ್ಯ ಎಂಬುದು ಮನವರಿಕೆಯಾಗುತ್ತದೆ. ನೀರಿನ ಮೌಲ್ಯ: ನಲ್ಲಿಯಲ್ಲಿ ನೀರು ಬರುತ್ತಿರುವಾಗ ಬೇಕಾಬಿಟ್ಟಿ ಪೋಲು ಮಾಡುವ ನಾವು, ಬೇಸಿಗೆಯಲ್ಲಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಬಂದಾಗ ಮಾತ್ರ ನೀರಿನ ನಿಜವಾದ ಯೋಗ್ಯತೆಯನ್ನು ಅರಿಯುತ್ತೇವೆ.ಅಮ್ಮನ ಕೈರುಚಿಪ್ರತಿದಿನ ಅಮ್ಮ ಪ್ರೀತಿಯಿಂದ ಮಾಡುವ ಅಡುಗೆಯಲ್ಲಿ ನಾವು ನೂರು ತಪ್ಪುಗಳನ್ನು ಹುಡುಕುತ್ತೇವೆ, ಆದರೆ ಮನೆಯಿಂದ ದೂರದ ಊರಿಗೆ ಹೋಗಿ ಹೋಟೆಲ್ ಊಟ ತಿಂದಾಗ ಮಾತ್ರ ಅಮ್ಮನ ಕೈರುಚಿಯ ನಿಜವಾದ ಮೌಲ್ಯ ನೆನಪಾಗಿ ಕಣ್ಣೀರು ಬರುತ್ತದೆ. ಸಂಬಂಧಗಳು, ಆರೋಗ್ಯ ಮತ್ತು ಸಮಯ ನಮ್ಮ ಕೈಯಲ್ಲಿದ್ದಾಗಲೇ ಅವುಗಳನ್ನು ಗೌರವಿಸಬೇಕುಸಣ್ಣ ಅವಕಾಶಚಲನಚಿತ್ರ ರಂಗದ ಮಹಾನಾಯಕ ಅಮಿತಾಭ್ ಬಚ್ಚನ್ ಅವರು ೯೦ರ ದಶಕದಲ್ಲಿ ತಮ್ಮದೇ ಕಂಪನಿಯ ನಷ್ಟದಿಂದಾಗಿ ಸಂಪರ‍್ಣ ದಿವಾಳಿಯಾಗಿದ್ದರು. ಆ ಕಠಿಣ ಸಮಯದಲ್ಲಿ ಅವರಿಗೆ ದೂರರ‍್ಶನದ ‘ಕೌನ್ ಬನೇಗಾ ಕರೋಡ್ ಪತಿ’ ಕರ‍್ಯಕ್ರಮದ ಆಫರ್ ಬಂದಾಗ, ಅದನ್ನು ಸಣ್ಣ ಅವಕಾಶವೆಂದು ಅವರು ತಳ್ಳಿಹಾಕಲಿಲ್ಲ. ಅಂದು ಸಿಕ್ಕ ಆ ಒಂದು ಅವಕಾಶವನ್ನು ಅತ್ಯಂತ ಶ್ರದ್ಧೆಯಿಂದ ಬಳಸಿಕೊಂಡಿದ್ದರಿಂದಲೇ ಅವರು ಮತ್ತೆ ಯಶಸ್ಸಿನ ಶಿಖರಕ್ಕೇರಲು ಸಾಧ್ಯವಾಯಿತು. ಅವರು ಅಂದು ಇಂದಿನ ಅವಕಾಶವನ್ನು ಕಳೆದುಕೊಂಡಿದ್ದರೆ ನಾಳೆಯ ವೈಭವ ಸಿಗುತ್ತಿರಲಿಲ್ಲ.ಹೆಚ್ಚಿನ ಸಮಯನಮ್ಮ ಹಿರಿಯರು “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂದು ಸುಮ್ಮನೆ ಹೇಳಿಲ್ಲ; ಸಿಕ್ಕ ಅವಕಾಶವನ್ನು ಆರಂಭದಲ್ಲೇ ಬಳಸಿಕೊಳ್ಳುವ ಜಾಣ್ಮೆ ನಮ್ಮದಾಗಬೇಕು.ಅದೇ ರೀತಿ, ಬಡತನ ಮತ್ತು ಕಡು ನಿರಾಶೆಯಲ್ಲಿದ್ದ ಲೇಖಕಿ ಜೆ.ಕೆ. ರೌಲಿಂಗ್ ಅವರು ತಮಗೆ ಕಲ್ಪನೆಗಳು ಮೂಡಿದ ತಕ್ಷಣ ಸಿಕ್ಕ ಹರಿದ ಕಾಗದದ ಚೂರುಗಳ ಮೇಲೆಯೇ ಹ್ಯಾರಿ ಪಾಟರ್ ಕಥೆಯನ್ನು ಬರೆಯಲು ಶುರು ಮಾಡಿದರು. ಒಂದು ವೇಳೆ ಅವರು ಮನಸ್ಸಿನ ಸ್ಥಿತಿ ಸರಿಯಿಲ್ಲ ಎಂದು ಇಂದಿನ ಬರವಣಿಗೆಯನ್ನು ನಾಳೆಗೆ ಮುಂದೂಡಿದ್ದರೆ, ಜಗತ್ತಿನ ಅತ್ಯಂತ ಯಶಸ್ವಿ ಸಾಹಿತ್ಯ ಸರಣಿ ಎಂದಿಗೂ ಸೃಷ್ಟಿಯಾಗುತ್ತಿರಲಿಲ್ಲ. ಬದುಕಿನಲ್ಲಿ “ಸಮಯವು ಹಣಕ್ಕಿಂತ ಹೆಚ್ಚು ಅಮೂಲ್ಯವಾದುದು; ನೀವು ಹೆಚ್ಚು ಹಣವನ್ನು ಗಳಿಸಬಹುದು, ಆದರೆ ಹೆಚ್ಚಿನ ಸಮಯವನ್ನು ಗಳಿಸಲು ಸಾಧ್ಯವಿಲ್ಲ” ಎಂಬ ಸತ್ಯಕ್ಕೆ ರೌಲಿಂಗ್ ಅವರ ಜೀವನವೇ ಸಾಕ್ಷಿ.ಕೊನೆಯದಾಗಿ ಹೇಳಬೇಕೆಂದರೆ,“ಇಂದು” ಎಂಬುದು ಪ್ರಕೃತಿ ನಮಗೆ ನೀಡಿರುವ ಅಮೂಲ್ಯವಾದ ಉಡುಗೊರೆ. “ದೂರವಿರುವ ಬೆಟ್ಟ ಕಣ್ಣಿಗೆ ನುಣುಪಾಗಿ ಕಾಣುವುದು ಸಹಜ, ಆದರೆ ಬಾಯಾರಿಕೆ ಇಂಗಿಸುವುದು ನಮ್ಮ ಕಾಲ ಬುಡದಲ್ಲಿ ಹರಿಯುವ ಸಣ್ಣ ತೊರೆ ಮಾತ್ರ” ಎಂಬಂತೆ, ನಾಳೆಯ ಸುಳ್ಳು ಭರವಸೆಗಳಿಗಾಗಿ ಇಂದಿನ ವಾಸ್ತವವನ್ನು ಕಳೆದುಕೊಳ್ಳಬಾರದು. ಸಂಬಂಧಗಳು, ಆರೋಗ್ಯ ಮತ್ತು ಸಮಯ ನಮ್ಮ ಕೈಯಲ್ಲಿದ್ದಾಗಲೇ ಅವುಗಳನ್ನು ಗೌರವಿಸಬೇಕು. ಇಂದು ಸಿಕ್ಕ ಅವಕಾಶವನ್ನು ಇಂದೇ ಸದುಪಯೋಗಪಡಿಸಿಕೊಂಡು, ನಾಳೆಯ ಪಶ್ಚಾತ್ತಾಪದಿಂದ ಮುಕ್ತಿ ಪಡೆದು ಯಶಸ್ಸಿನತ್ತ ಹೆಜ್ಜೆ ಇಡುವುದೇ ನಿಜವಾದ ಬುದ್ಧಿವಂತಿಕೆ. ಜಯಶ್ರೀ. ಜೆ. ಅಬ್ಬಿಗೇರಿ

“ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ವಿಶೇಷ ಲೇಖನ ಜಯಶ್ರೀ. ಜೆ. ಅಬ್ಬಿಗೇರಿ Read Post »

ಇತರೆ

ಕವಿತಾ ಶ್ರೀನಿವಾಸ್ ನಾಯಕ್ “ಆಯ್ಕೆ”

ಲೇಖನ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್  ಆಯ್ಕೆ “ಆಯ್ಕೆ” ಎಂಬ ಪದ ಚಿಕ್ಕದಾದರೂ, ಅದರ ಅರ್ಥ ಮತ್ತು ಪರಿಣಾಮ ಬಹಳ ದೊಡ್ಡದು.ನಮ್ಮ ಜೀವನವೇ ಆಯ್ಕೆಗಳ ಮೇಲೆ ನಿಂತಿದೆ.ಮಾರುಕಟ್ಟೆಗೆ ಹೋದಾಗ ತಾಜಾ ತರಕಾರಿಯನ್ನು ಆಯ್ಕೆ ಮಾಡುತ್ತೇವೆ. ಅಂಗಡಿಯಲ್ಲಿ ದಿನನಿತ್ಯದ ಸಾಮಾನುಗಳನ್ನು ಗುಣಮಟ್ಟ ನೋಡಿ ಆಯ್ಕೆ ಮಾಡುತ್ತೇವೆ. ಬಟ್ಟೆ, ಮನೆ, ವಾಹನ, ಉದ್ಯೋಗ, ಶಿಕ್ಷಣ—ಪ್ರತಿಯೊಂದರಲ್ಲೂ ನಮ್ಮ ಆಯ್ಕೆ ಇರುತ್ತದೆ.ನೆಂಟಸ್ತಿಕೆ ಆಗುವಾಗ, ಹೆಣ್ಣು ಹಾಗೂ ಗಂಡಿನ ಯೋಗ್ಯತೆ, ಸಂಸ್ಕಾರ, ಶಿಕ್ಷಣ, ಸ್ವಭಾವ ಎಲ್ಲವನ್ನೂ ಗಮನಿಸಿ ಆಯ್ಕೆ ಮಾಡಲಾಗುತ್ತದೆ.ರಾಜಕೀಯದಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ಜನಪ್ರತಿನಿಧಿಗಳ ಆಯ್ಕೆ ನಡೆಯುತ್ತದೆ. ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ವಿವಿಧ ಪದಾಧಿಕಾರಿಗಳ ಆಯ್ಕೆ ನಡೆಯುತ್ತದೆ. ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆ, ಕ್ರೀಡಾ ತಂಡದಲ್ಲಿ ಆಟಗಾರರ ಆಯ್ಕೆ, ಉದ್ಯೋಗದಲ್ಲಿ ಅಭ್ಯರ್ಥಿಗಳ ಆಯ್ಕೆ—ಹೀಗೆ ಜೀವನದ ಪ್ರತಿಯೊಂದು ಹಂತದಲ್ಲೂ ಆಯ್ಕೆ ಅನಿವಾರ್ಯ.ಸಾಮಾನ್ಯವಾಗಿ ನಾವು ಒಳ್ಳೆಯದನ್ನೇ, ಯೋಗ್ಯವಾದದ್ದನ್ನೇ ಅಥವಾ ಒಳ್ಳೆಯ ವ್ಯಕ್ತಿಯನ್ನೇ ಆಯ್ಕೆ ಮಾಡಲು ಬಯಸುತ್ತೇವೆ.ಆದರೆ, ಕೆಲವು ಆಯ್ಕೆಗಳು ಮನಸ್ಸಿಗೆ ನೋವು ಕೊಡುತ್ತವೆ.ಕೆಲವರು ಗೆಳೆತನದಲ್ಲಿ, ಪ್ರೀತಿಯಲ್ಲಿ ಅಥವಾ ಗಂಡ-ಹೆಂಡತಿಯ ಸಂಬಂಧದಲ್ಲಿಯೂ ಎದುರಿನ ವ್ಯಕ್ತಿಯನ್ನು ಮೊದಲ ಆದ್ಯತೆಯಾಗಿ ಅಲ್ಲ, ಕೇವಲ “ಆಯ್ಕೆ”ಯಾಗಿ ಇಟ್ಟುಕೊಳ್ಳುತ್ತಾರೆ.ಅವರಿಗೆ ಸಮಯ ಇದ್ದಾಗ ಮಾತ್ರ ನೆನಪಾಗುತ್ತದೆ. ಬೇಸರವಾದಾಗ ಮಾತ್ರ ಕರೆ ಮಾಡುತ್ತಾರೆ. ಬೇರೆಯವರು ಸಿಗದಿದ್ದಾಗ ಮಾತ್ರ ಮಾತನಾಡುತ್ತಾರೆ. ಅಗತ್ಯವಿದ್ದಾಗ ಮಾತ್ರ ಹತ್ತಿರವಾಗುತ್ತಾರೆ. ಕೆಲಸ ಮುಗಿದ ನಂತರ ಮತ್ತೆ ದೂರವಾಗುತ್ತಾರೆ.ಇಂತಹ ಸಂಬಂಧದಲ್ಲಿ ಪ್ರೀತಿ ಇರುವುದಿಲ್ಲ; ಸ್ವಾರ್ಥ ಮಾತ್ರ ಇರುತ್ತದೆ.ನಿಜವಾದ ಸಂಬಂಧ ಎಂದರೆ, ಅನುಕೂಲಕ್ಕೆ ತಕ್ಕಂತೆ ನೆನಪಾಗುವ ವ್ಯಕ್ತಿಯಾಗಿರುವುದಲ್ಲ. ಸುಖದಲ್ಲೂ ದುಃಖದಲ್ಲೂ ಜೊತೆಯಾಗುವ, ಗೌರವ ಕೊಡುವ, ವಿಶ್ವಾಸ ಉಳಿಸಿಕೊಳ್ಳುವ ವ್ಯಕ್ತಿಯಾಗಿರುವುದು.ಯಾರ ಜೀವನದಲ್ಲೂ “ಆಯ್ಕೆ”ಯಾಗಿ ಉಳಿಯುವುದಕ್ಕಿಂತ, “ಆದ್ಯತೆ”ಯಾಗಿ ಬದುಕುವುದು ಹೆಚ್ಚು ಮೌಲ್ಯಯುತ.ಏಕೆಂದರೆ, ನಮ್ಮನ್ನು ಬೇಕಾದಾಗ ಮಾತ್ರ ನೆನಪಿಸಿಕೊಳ್ಳುವವರಿಗಿಂತ, ಯಾವಾಗಲೂ ನಮ್ಮನ್ನು ಗೌರವಿಸುವವರೇ ನಿಜವಾದ ಸಂಬಂಧಗಳು.“ನಮ್ಮನ್ನು ಕೇವಲ ಒಂದು ‘ಆಯ್ಕೆ’ಯಾಗಿ ನೋಡುವವರ ಹಿಂದೆ ಓಡುವುದಕ್ಕಿಂತ, ನಮ್ಮನ್ನು ‘ಆದ್ಯತೆ’ಯಾಗಿ ಕಾಣುವವರನ್ನು ಗೌರವಿಸೋಣ. ಅದೇ ಸಂಬಂಧದ ನಿಜವಾದ ಮೌಲ್ಯ.” ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

ಕವಿತಾ ಶ್ರೀನಿವಾಸ್ ನಾಯಕ್ “ಆಯ್ಕೆ” Read Post »

ಇತರೆ, ವರ್ತಮಾನ

“ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ವಿಶೇಷ ಲೇಖನ,ಆರ್ ಜಿ ಹಳ್ಳಿ ನಾಗರಾಜ

ಕನ್ನಡ ಸಂಗಾತಿ ಆರ್ ಜಿ ಹಳ್ಳಿ ನಾಗರಾಜ “ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ಕನ್ನಡ – ಕನ್ನಡಿಗ – ಕರ್ನಾಟಕದ ಅಸ್ಮಿತೆಯ ಸಂಕೇತವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ 112 ವರ್ಷಗಳ ಪ್ರಾಯ. ಮೈಸೂರಿನ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ ಈ ಸಂಸ್ಥೆಯ ಧ್ಯೇಯೋದ್ದೇಶಗಳು ಆರೇಳು ದಶಕಗಳ ಕಾಲ ಸಮಸ್ಯೆ ಇಲ್ಲದೆ ನಡೆದುಕೊಂಡು ಹೋದವು. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ – ಇವುಗಳ ರಕ್ಷಣೆ ಹಾಗೂ ಅಭಿವೃದ್ಧಿಯ ಮುಖ್ಯ ಉದ್ದೇಶದಿಂದ 1915ರಲ್ಲಿ ಸ್ಥಾಪಿತವಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಅಂದಿನಿಂದಲೂ ಈ ಮಹಾ ಸಂಸ್ಥೆ ಅನೇಕ ವಿದ್ವಾಂಸರ, ನಾಡು ನುಡಿಯ ಅಭಿಮಾನಿಗಳ ಮತ್ತು ಸರಕಾರದ ಪ್ರೋತ್ಸಾಹ ಪಡೆದುಕೊಂಡು ಜನತೆಯಲ್ಲಿ ಹೊಸ ಹೊಸ ಉತ್ಸಾಹವನ್ನೂ ಭಾಷಾ ಅಭಿಮಾನವನ್ನೂ ಬೆಳೆಸುತ್ತ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ಅಧಿಕೃತವಾಗಿ ಸಾಹಿತ್ಯ ಪರಿಷತ್ತಿನ ಇತಿಹಾಸ ಪ್ರಕಟಿಸಿದೆ. ಅದರ ದಾಖಲೆಯಲ್ಲಿ  – “ಕರ್ನಾಟಕ ಈಗಿರುವಂತೆ ಸಂಘಟಿತವಾಗುವುದಕ್ಕೆ ಮೊದಲು ಹಲವಾರು ಆಡಳಿತಗಳಡಿ ಹಂಚಿ ಹೋಗಿತ್ತು. ಮದರಾಸು, ಬೊಂಬಾಯಿ ಪ್ರಾಂತಗಳಿಗೆ ಹಾಗೂ ಮೈಸೂರು, ಹೈದರಾಬಾದ್ ಸಂಸ್ಥಾನಗಳಿಗೆ ಕನ್ನಡ ನಾಡಿನ ಕೆಲವು ಭಾಗಗಳು ಸೇರಿದ್ದವು. ಕೊಡಗು ಒಂದು ಪ್ರತ್ಯೇಕ ಆಡಳಿತಕ್ಕೆ ಒಳಪಟ್ಟಿತ್ತು. ಬ್ರಿಟಿಷ್ ಇಂಡಿಯಾ ಸರಕಾರದ ಆಡಳಿತಕ್ಕೆ ಒಳಪಟ್ಟಿದ್ದ ಮದರಾಸು, ಬೊಂಬಾಯಿ ಪ್ರಾಂತಗಳಲ್ಲಿ ದ್ವೀಪಗಳಂತೆ ಸೊಂಡೂರು, ಸವಣೂರು, ರಾಮದುರ್ಗ ಮುಂತಾದ ಹಿರಿ ಕಿರಿಯ ಸಂಸ್ಥಾನಗಳು ಇದ್ದವು. ಕನ್ನಡ ಜನ ಭಿನ್ನ-ಭಿನ್ನ ಆಡಳಿತ ಘಟಕಗಳ ಹಿಡಿತದಲ್ಲಿದ್ದರು. ಅವರು ಆಡುತ್ತಿದ್ದ ಕನ್ನಡ ಭಾಷೆಯ ಮೇಲೆ ಅನ್ಯಭಾಷಾ ಪ್ರಭಾವ ಬಿದ್ದು, ಉಚ್ಚಾರಣೆಯಲ್ಲಿ ವ್ಯತ್ಯಾಸಗಳು ಉಂಟಾಗಿದ್ದವು. ಇವುಗಳ ಪರಿಣಾಮವಾಗಿ ವಿವಿಧ ಪ್ರದೇಶಗಳ ಕನ್ನಡಿಗರು ಅಪರಿಚಿತರಂತೆ ಕಾಣುತ್ತಿತ್ತು” ಎಂಬ ಅಂಶದ ಮೇಲೆ‌ ಬೆಳಕು ಚೆಲ್ಲುತ್ತದೆ. ಕನ್ನಡ ಭಾಷೆ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಕನಸು ಕಂಡ ಅನೇಕ ಹಿರಿಯ ಸಾಹಿತಿಗಳು ಸರ್ಕಾರ ನೀಡಿದ ಅನುದಾನದಲ್ಲಿ ಉಪನ್ಯಾಸ, ಪುಸ್ತಕ, ಪತ್ರಿಕೆ ಪ್ರಕಟಣೆ, ಕನ್ನಡ ಜನತೆ ಒಗ್ಗೂಡಲು ಸಾಹಿತ್ಯ ಸಮ್ಮೇಳನ ನಡೆಸುತ್ತಾ ಬಂದು ಜನಮನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಟ್ಟಿಯಾಗಿ  ನೆಲೆ ಊರಿತು. ಕನ್ನಡಿಗರ ವಿಶ್ವಾಸ ಗಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಶತಮಾನದ 70ರ ದಶಕದ ಕೊನೆಯಲ್ಲಿ ವಿವಾದಕ್ಕೊಳಗಾಗಿತ್ತು. ನಂತರ ಮತದಾರರಿಂದ ಆಯ್ಕೆಯಾಗಿ ಬಂದ ಅಧ್ಯಕ್ಷರು ಅದಕ್ಕೆ ಚ್ಯುತಿ ಬಾರದಂತೆ ಮುನ್ನಡೆಸಿಕೊಂಡು ಹೋದರು. ಆದರೆ, ಕಳೆದ 11 ವರ್ಷದಲ್ಲಿ ಬಂದ ಇಬ್ಬರು ಕಸಾಪ ರಾಜ್ಯಾಧ್ಯಕ್ಷರಿಂದ ಪರಿಷತ್ತಿಗೆ ಕಳಂಕ ಒದಗಿತು. ಆಡಳಿತ ವಿಫಲವಾಗಿವೆ. ಪ್ರಕಟಣೆ, ವಿಚಾರ ಸಂಕಿರಣ, ಸಮ್ಮೇಳನಗಳು ನೆನೆಗುದಿಗೆ ಬಿದ್ದಿವೆ. ಅಧಿಕಾರದಾಹ, ಸರ್ವಾಧಿಕಾರ, ಭ್ರಷ್ಠಾಚಾರ ಅಲ್ಲಿ ತಾಂಡವಾಡಿದೆ. ಕಸಾಪ ಮರ್ಯಾದೆ ಕಳೆಯಲು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಲ್ಲಿ ಭ್ರಷ್ಟಾಚಾರ ಎಸಗಿದ್ದು ಮೇಲು ನೋಟಕ್ಕೆ ಸಾಬೀತು ಆಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇಂದಿನ  ಈ ದುಸ್ಥಿತಿಗೆ ನಿಕಟಪೂರ್ವ ಅಧ್ಯಕ್ಷ  ಮಾನ್ಯ ಮನು ಬಳಗಾರ ಅವರು ಕಾರಣ. ಅವರ ಅಧಿಕಾರದಾಹ, ಸ್ವಾರ್ಥಕ್ಕೆ ಕಸಾಪ ಬಲಿಯಾಯ್ತು. 3 ವರ್ಷ ಇದ್ದ ಅಧ್ಯಕ್ಷರ ಅವಧಿಯನ್ನು ಹಿಗ್ಗಿಸಿಕೊಂಡರು. ಪರಿಷತ್ತು ಅದರ ಪಾಡಿಗೆ ಅದು ನಡಕ್ಕೊಂಡು ಹೋಗ್ತಿತ್ತು. ಇವರು ಎಲ್ಲೋ ದ.ಕ.  ಜಿಲ್ಲೆಯ  ಮೂಲೆಯಲ್ಲಿ ಕಳ್ಳಾಟದಿಂದ ಸರ್ವ ಸದಸ್ಯರ ಸಭೆ ನಡೆಸಿ ಅಲ್ಲಿ ತನ್ನದೇ ಅವಧಿಯ 3 ವರ್ಷದ  ಅಧಿಕಾರವನ್ನು 5 ವರ್ಷಕ್ಕೆ ವಿಸ್ತರಿಸಿಕೊಂಡರು! ಆಯ್ತು, 5 ವರ್ಷವಾದ ನಂತರವಾದರೂ ಗೌರವದಿಂದ ನಿರ್ಗಮಿಸಬೇಕು ಬೇಕು ತಾನೆ? ಇಲ್ಲ! ಕಳ್ಳಿಗೊಂದು ಪಿಳ್ಳೆ ನೆವ ಅಂತ ಕರೋನಾ ಕಡೆ ಬೆರಳು ತೋರಿ, ನನಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಕಸಾಪ ಕೆಲಸ ಬೆಟ್ಟದಷ್ಟಿದೆ! ಅಂತ ಬೋಂಗ್ ಬಿಟ್ಟು ಬರೋಬ್ಬರಿ 6 ವರ್ಷ ಪೂರೈಸಿದರು ಈ ಮಹಾಶಯರು! ಅಲ್ಲಿಗೆ ಮೂರು ವರ್ಷಕ್ಕೆ  ಇನ್ನೊಬ್ಬರು ರಾಜ್ಯ, ಜಿಲ್ಲಾ ಅಧ್ಯಕ್ಷರಾಗಿ ಬರೋದನ್ನ ತಪ್ಪಿಸಿದ ಪಾಪ ಅಂಟಿಸಿಕೊಂಡು ನಿರ್ಗಮಿಸಿದರು. ಆದರೆ, “ನಾನು ಬಿಟ್ಟರೆ ಇನ್ನೊಬ್ಬರು ಈ ರಾಜ್ಯದಲ್ಲಿ ಕಸಾಪ ಅಧ್ಯಕ್ಷರಾಗಲು ಅರ್ಹರಿಲ್ಲ!” ಎಂಬ ಅಹಂನಿಂದ  ಮತ್ತೆ ಮುಂದಿನ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು‌ ಚಾಪೆ ಹಾಕಿ, ಕನಸು ಕಟ್ಟಿ ಹಲವು ಜಿಲ್ಲೆಗಳಲ್ಲಿ ಪ್ರವಾಸವನ್ನೂ ಮಾಡಿಯಾಯ್ತು. ನನ್ನನ್ನು ಒಳಗೊಂಡು ಹಲವರು “ಬಳಿಗಾರರು ಪುನಃ ಸ್ಪರ್ಧಿಸಿದರೆ ಠೇವಣಿ‌ ಕಳೆಯಿರಿ” ಎಂಬ ಅಭಿಯಾನ ಶುರು ಮಾಡಿದೆವು. ಬಹುಶಃ ನಮ್ಮ ಪ್ರತಿರೋಧ ಗೊತ್ತಾಗಿಯೋ, ನನ್ನಂತಹವರ ಹೊಡೆತ ತಾಳಲಾರದೆಯೋ  ಮುಂದೆ ಮತ್ತೊಬ್ಬರು ಸ್ಪರ್ಧಿಸುತ್ತಾರೆಂದು ಸಾಹಿತಿ ಒಬ್ಬರ  ಹೆಸರನ್ನ ತೇಲಿಬಿಟ್ಟು  ಜಾಗ ಖಾಲಿ ಮಾಡಿದರು. ಆದರೆ ಅವರು ಸಾತ್ವಿಕ ಸಾಹಿತಿ! ಕನ್ನಡ ಸಾಹಿತ್ಯ ಪರಿಷತ್ತು ಉಳಿಸಲು “ಕನ್ನಡ ನಾಡು – ನುಡಿ ಹೋರಾಟ ಸಮಿತಿ” ಭ್ರಷ್ಟಾತಿ ಭ್ರಷ್ಟ ಜೋಶಿ ವಿರುದ್ಧ ಹೋರಾಡುತ್ತಿದ್ದರೆ ನನಗೂ ಇದಕ್ಕು ಸಂಬಂಧ ಇಲ್ಲ ಎಂದು ತಮ್ಮಪಾಡಿಗೆ ತಾವಿದ್ದರು. ಇನ್ನೊಬ್ಬರು ಐಎಎಸ್ ಅಧಿಕಾರಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಹುರಿಯಾಳು. ಅವರಾಗಲಿ, ಅವರ ಬೆಂಬಲಿಗ “ಓರಟಗಾರ!”ರಾಗಲಿ “ಕಸಾಪಗೆ ಮಸಿ ಬಳಿದ ‘ಜೋಸಿ’ ವಿರುದ್ಧ ಒಂದೇ ಒಂದು ಹೇಳಿಕೆಯನ್ನು ಕೊಡಲಿಲ್ಲ! ಒಳ ಒಪ್ಪಂದ ಏನಾದರೂ‌ ಆಗಿರಲೂಬಹುದೇನೋ… ಗೊತ್ತಿಲ್ಲ. *ಜೋಶಿ ಇಚ್ಛೆಯಂತೆ ಬೈಲಾ!* ಪಕ್ಕಾ ಹಿಂದುತ್ವವಾದಿ ಮಹೇಶ ಜೋಶಿ ತನ್ನ ಅಂತರಂಗದ ಸನಾತನವಾದ, ಸರ್ವಾಧಿಕಾರದಿಂದ  ಸುಳ್ಳು ಹೇಳಿ, ಜನರಿಗೆ ಮಂಕು ಬೂದಿ ಎರಚಿ ಅಧ್ಯಕ್ಷರಾದವರು, ಎಲ್ಲರ ಠೇವಣಿ ಕಳೆದು ಗೆದ್ದು ಬಂದಿದ್ದೇನೆ ಎಂದು ಮೀಸೆ ತಿರುವಿದರು. ಸೋತ ಅಭ್ಯರ್ಥಿಯನ್ನು ನಿಕೃಷ್ಟವಾಗಿ ಕಂಡರು. ಹಿಯಾಳಿಸಿದರು. ದಿನದಿಂದ ದಿನಕ್ಕೆ ಸಾಹಿತ್ಯೇತರ ಚಟುವಟಿಕೆಗಳೆ ಹೆಚ್ಚಾದವು. ಅಸಾಹಿತಿಯಾದ ಈ ಮನುಷ್ಯ ಸಾಹಿತ್ಯ ಗಂಟು ಮೂಟೆ ಕಟ್ಟಿ ಏನೆಲ್ಲಾ ಕ್ರಿಮಿನಲ್ ಆಟ ಆಡಿದ ಅಂತ ನೋಡಿದೆವು…! ಇವರಿಗೆ ಸಾಹಿತ್ಯದ ಗಂಧಗಾಳಿ ಇಲ್ಲದಿದ್ದರಿಂದ, ಯಾವ ಸಾಹಿತಿಗೂ ಗೌರವ ಕೊಡಲಿಲ್ಲ. ಎಲ್ಲರನ್ನು ಕೇವಲವಾಗಿ ಕಂಡು, ದುರಹಂಕಾರದಿಂದ  ಠೇಂಕರಿಸುತ್ತ  ಏನೆಲ್ಲ ಭ್ರಷ್ಟಾಚಾರ ಎಸಗಿದ್ದು ಮಾಧ್ಯಮಗಳಲ್ಲಿ ಬಿಂಬಿತವಾಗಿದೆ. ಜೋಶಿ ಗೆದ್ದ ನಂತರ ಪರಿಷತ್ತಿನ “ನಿಬಂಧನೆ” (ಬೈಲಾ)  ತನ್ನಿಚ್ಚೆಯಂತೆ ಅಮೂಲಾಗ್ರ ತಿದ್ದುಪಡಿ ಮಾಡಿದ್ದು ಚರ್ಚೆಗೆ ಗ್ರಾಸವಾಯ್ತು. ನಾಮಕಾವಸ್ತೆಗೆ ಈ ಬೈಲಾ ತಿದ್ದುಪಡಿಗೆ ನಿವೃತ್ತ ನ್ಯಾಮೂರ್ತಿ ಅರಳಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದ್ದರೂ, ಅಲ್ಲಿನ ಎಲ್ಲ ವಿಚಿತ್ರ ನಿಯಮಗಳು ಅಧ್ಯಕ್ಷನಿಗೆ ಪರಮಾಧಿಕಾರ  ಒಳಗೊಂಡಿದ್ದವು. ಇದಕ್ಕೆಲ್ಲ ಅಧ್ಯಕ್ಷ ಜೋಶಿಯ ಕೈವಾಡವೆ ಕಾರಣವಾಯ್ತು. *ಸಚಿವ ದರ್ಜೆ ಸ್ಥಾನ ಎಂಬ ಭೂತ* ಹಿಂದಿನ ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರರನ್ನು ಹಿಡಿದು, ಕೇಶವಕೃಪಾದಿಂದ ಪ್ರಭಾವ ಬೀರಿಸಿ ಸಚಿವದರ್ಜೆ ಸ್ಥಾನಮಾನ ಗಿಟ್ಟಿಸಿಕೊಂಡರು. ಈ ಸ್ಥಾನ ಸಿಕ್ಕಿದ್ದಕ್ಕೆ ಸರ್ಕಾರದ ಲೋಗೋ ಬಳಸಿ “ಸರ್ಕಾರದ ಸಚಿವದರ್ಜೆ ಸ್ಥಾನಮಾನದ ಅಧ್ಯಕ್ಷ ಸ್ಥಾನ!” ಅಂತ ಲೆಟರ್ ಹೆಡ್ ಮುದ್ರಿಸಿ, ಉನ್ನತದರ್ಜೆಯ ಅಧಿಕಾರಿಗಳನ್ನು  ಬ್ಲ್ಯಾಕ್ ಮೇಲ್ ಮಾಡಿದರು. ಅದರಲ್ಲು ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾಧಿಕಾರಿಗಳಿಗೆ ಧಮ್ಕಿ ಹಾಕಿದ ಉದಾಹರಣೆಯೂ ಇದೆ. ಸಚಿವದರ್ಜೆ ಸ್ಥಾನಮಾನ ಅತಿ ದುರುಪಯೋಗ ಆಗುವ‌ ದೂರುಗಳು ಬಂದಾಗ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಆ ಸಚಿವ ದರ್ಜೆ ಸ್ಥಾನಮಾನ ಕಿತ್ತಾಕಿಸಿದ್ದಾಯ್ತು. ಜೋಶಿ, ತನ್ನ ನಾಲ್ಕು ವರ್ಷದ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ವಿಚಾರ ಸಂಕಿರಣ, ಯುವ ಬರಹಗಾರರಿಗೆ ತರಬೇತಿ / ಶಿಬಿರ, ಮೌಲಿಕ ಪುಸ್ತಕ ಪ್ರಕಟಣೆ, ಶತಮಾನೋತ್ಸವ ಕಂಡ ಸಾಹಿತಿಗಳ ಸ್ಮರಣೆ – ಯಾವುದನ್ನೂ ಮಾಡಲಿಲ್ಲ. ಅಬ್ಬಾ! ಈ ಮನುಷ್ಯ ಎಷ್ಟೊಂದು ಮೆರೆದ…! ಹಲವು  ಜಿಲ್ಲಾಧ್ಯಕ್ಷರನ್ನು ಗಿರಿಗಿಟ್ಲೆ ಆಡಿಸಿ ಕಿರುಕುಳ ಕೊಟ್ಟಿದ್ದೇನು ಕಮ್ಮಿಯೆ? ಸಾಹಿತಿಗಳು, ಕನ್ನಡಪರ ಹೋರಾಟಗಾರರು ಪರಿಷತ್ತು ವಿರುದ್ಧ ಒಂದೆ ಒಂದು ಮಾತಾಡಲು ಅವಕಾಶ ಕೊಡದೆ, ಸಭೆ ಮಾಡಲೂ ಬಿಡದೆ ಅವರನ್ನು ಬೆದರಿಸಲು ಹಲವು ಲಾಯರ್ ನೋಟೀಸು ನೀಡಿದ್ದಾಯ್ತು. ಮಾನ ನಷ್ಟ ಮೊಕದ್ದಮೆ  ಹೂಡುವೆನೆಂದು ಬೆದರಿಸಿದ ಪತ್ರಗಳು ಬಂದವು. ತನ್ನ ವಿರುದ್ಧ   ಇದ್ದವರ ಆಜೀವ ಸದಸ್ಯತ್ವವನ್ನು ಏಕಪಕ್ಷೀಯವಾಗಿ ಕಿತ್ತಾಕಿದ್ದು ಆಯ್ತು. ಇದು ಆತನ ಸಣ್ಣತನ ಹಾಗೂ ಸೇಡಿನ ಮನೋಭಾವ ತೋರಿಸಿತ್ತು. *ಕೋಟಿಗಟ್ಟಲೆ ಹಣ ದುರುಪಯೋಗ!* ಆರಂಭದಿಂದಲೂ  ಕಸಾಪ  ಸಾಹಿತ್ಯ ಚಟುವಟಿಕೆಗಳಿಗೆ ಗಂಟುಮೂಟೆ ಕಟ್ಟಿ ಅಲ್ಲಿ “ಕಾನೂನಿನ ಕಡತಗಳ ಪೇರಿಸಿ”, ವಕೀಲರ ಕಚೇರಿಯನ್ನಾಗಿ ಮಾಡಿದ್ದನ್ನು ಯಾವ ಜಿಲ್ಲಾಧ್ಯಕ್ಷರು ಪ್ರಶ್ನೆ ಮಾಡದಂತೆ ಕಾಣಲಿಲ್ಲ. ಅವರನ್ನು ಭಯ, ಆತಂಕದಲ್ಲಿ ಇರಿಸಿದ್ದರು. ಕೇಂದ್ರ ಕಸಾಪ ಕಟ್ಟಡದ ಕಾಮಗಾರಿಯಲ್ಲಿ 7-8 ಕೋಟಿ ರೂ.ಗಳ ದುರುಪಯೋಗ ಆದ ಬಗ್ಗೆ ಸಾಹಿತಿಗಳು ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ಅದು ಭಾಗಶಃ ಸಾಬೀತು ಆಗಿದ್ದು ಈ ಅಪಾರ ನಷ್ಟವನ್ನು ಜೋಶಿ ತುಂಬಿಕೊಡಬೇಕು ಎಂಬ ಬೇಡಿಕೆಯನ್ನು ಇಡಲಾಗಿದೆ.ಕಸಾಪದ ಪುಟ್ಟ ಕಟ್ಟಡಕ್ಕೆ ಬರೋಬ್ಬರಿ 56 ಸಿಸಿ ಕ್ಯಾಮೆರಾ ಹಾಕಿಸಿ ಪರಿಷತ್ತನ್ನು ಕುಬ್ಜಗೊಳಿಸಿ ಕಣ್ಗಾವಲು ಇರಿಸಿದರು. (ಹೈಕೋರ್ಟು ನ್ಯಾಯಾಧೀಶರು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಿಸಿ ಕ್ಯಾಮೆರಾ ಬೇಕಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದರು!) *ನಾಲ್ವಡಿ ಅವರ ಫೋಟೋಗೆ ಖೋ!* ಅಧ್ಯಕ್ಷ ತಾನು ಕೂರುವ ಎ‌.ಸಿ. ಕೋಣೆ ಹಾಳು ಕೊಂಪೆಯನ್ನಾಗಿ ಮಾಡಲಾಗಿತ್ತು.  ಅಲ್ಲಿ ಕಬೋಡ್ ಕಂ ಬುಕ್ ರ್ಯಾಕಲ್ಲಿ  ಗಣಪತಿ ವಿಗ್ರಹ ಬಿಟ್ಟರೆ ಕಸಾಪದ ಒಂದು ಪ್ರಕಟಣೆಯೂ ಇಲ್ಲವಾಗಿತ್ತು! ಆ ಕೋಣೆಯಲ್ಲಿ ಕಸಾಪ ಹುಟ್ಟಿಗೆ ಕಾರಣರಾದ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋ ಸಹಾ ಇರಲಿಲ್ಲ! ಬದಲು ಭುವನೇಶ್ವರಿ ಫೋಟೋ, ಇನ್ನೊಂದು ಗೋಡೆಗೆ ಆಳೆತ್ತರದ ಗಣೇಶ ಫೋಟೊ ರಾರಾಜಿಸುತ್ತಿತ್ತು!  ಇದೆಲ್ಲ ಗಮನಿಸಿದ ಸಾಹಿತಿಗಳು ಆಡಳಿತಾಧಿಕಾರಿ ಕೆ‌.ಎ. ದಯಾನಂದ, ಐಎಎಸ್,  ಅವರಿಗೆ ಹೇಳಿದಾಗ, ಅವರಿಗೂ ಜೋಶಿ ಮಾಡಿದ ತಪ್ಪಿನ ಅರಿವಾಯ್ತು. ವಾರದಲ್ಲೇ ಖಾಲಿ ರ್ಯಾಕಿಗೆ ಕಸಾಪ ಪ್ರಕಟಣೆಗಳಾದ ನಿಘಂಟು, ಮೌಲಿಕ ಪುಸ್ತಕಗಳನ್ನು ಇರಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋಗೆ ವ್ಯವಸ್ಥೆ  ಮಾಡಿದರು. ಹಾಗೆಯೇ ಕಸಾಪ ಮಹಾದ್ವಾರದಲ್ಲಿ ಇದ್ದ ಮಹಾಕವಿ ಪಂಪನ  “ಮನುಷ್ಯ ಜಾತಿ ತಾನೊಂದೆ ವಲಂ” ಎಂಬ ಉದಾತ್ತ ಧ್ಯೇಯ ಹೊಂದಿದ್ದ ಕಮಾನನ್ನು ಜೋಶಿ, ಅಧಿಕಾರಕ್ಕೆ ಬಂದ ದಿನವೆ ಕಿತ್ತಾಕಿಸಿದ್ದನ್ನು ನೋವಿನಿಂದ ಹೇಳಿದ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು “ಮತ್ತೆ ಅದನ್ನು ಬರೆಯಿಸಿ ಮರು ಸ್ಥಾಪಿಸಿ” ಅಂದದ್ದನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಈಗ ಕಸಾಪ ಆಡಳಿತ ಕಚೇರಿ ಪ್ರವೇಶ ದ್ವಾರದಲ್ಲೆ ಹಾಕಿಸಿದ್ದಕ್ಕೆ ನಮಗೆಲ್ಲ ಸಂತೋಷವಾಗಿದೆ. ಆಡಳಿತಾಧಿಕಾರಿಗೆ ನಮ್ಮ “ಕನ್ನಡ ನಾಡು ನುಡಿ ಜಾಗೃತ ಸಮಿತಿ”  ಪರವಾಗಿ  ಧನ್ಯವಾದ ಹೇಳಲೆ ಬೇಕು. ಹಣ ದುರುಪಯೋಗದಿಂದಾಗಿ  ಜೋಶಿ ಮೇಲೆ ೧೭ ಗುರುತರವಾದ ಆಪಾದನೆ  ಮಾಡಿ ಸಹಕಾರ ಇಲಾಖೆಗೆ, ನ್ಯಾಯಾಲಯಕ್ಕೆ  ದೂರು ಸಲ್ಲಿಸಿದಾಗ, ಎಲ್ಲವೂ “ಸಾಬೀತಾಗಿ”; ಇದೇ ಈಗ  ಪ್ರಾಥಮಿಕ ಸದಸ್ಯತ್ವ ರದ್ದಾಗಲು ಕಾರಣವಾಯಿತು ಎಂಬುದು ವಾಸ್ತವದ ಸಂಗತಿ. ನ್ಯಾಯಾಲಯ ಜೋಶಿಯ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿದಂತೆ, ಭ್ರಷ್ಟಾಚಾರಕ್ಕು ಶಿಕ್ಷೆ ಕೊಟ್ಟು ಜೈಲಿಗೆ ಹಾಕಬೇಕು. ಜೋಸಿ  ನುಂಗಿದ ೭-೮ ಕೋಟಿ ರೂ.ಗಳ ವಸೂಲಿ ಮಾಡಬೇಕು. ಆಗಲೆ ನ್ಯಾಯಪರ ಹೋರಾಟಗಾರರಿಗೆ ಸಮಾಧಾನ ಎಂದು ಸಾಹಿತಿಗಳು ಹೇಳಿದ್ದಾರೆ. *ಸಾಹಿತಿಯನ್ನೆ ಆಯ್ಕೆ ಮಾಡಿ* ಕಸಾಪದ ೧೧೨ ವರ್ಷಗಳ ಪರಂಪರೆ, ಇತಿಹಾಸ ಇಬ್ಬರು “ಅಧಕ್ಷರ” ಕೈಗೆ ಸಿಕ್ಕು ಹಾಳಾಗಿ ಹೋಯ್ತು. ಮುಂದೆ ಬರುವವರಾದರೂ ಕಸಾಪ ಅಧಿಕಾರವನ್ನು ಬೈಲಾ ತಿದ್ದುಪಡಿ ಮಾಡಿ 3 ವರ್ಷಕ್ಕೆ ತರಲಿ. ಮುಂದೆ ಸಾಹಿತಿಯೊಬ್ಬರು ಅಧ್ಯಕ್ಷರಾಗಿ ಬಂದರೆ,  ಸರ್ವಾಧಿಕಾರಿ ಆಗಲಾರರು. ಎರಡು ಅವಧಿಯ ಅಧಿಕಾರಶಾಹಿ ಆಡಳಿತ ನೋಡಿದ ಸದಸ್ಯರು ಮೂರನೇಬಾರಿಯೂ ಅಧಿಕಾರಶಾಹಿ ಆಯ್ಕೆ ಮಾಡದೆ

“ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ವಿಶೇಷ ಲೇಖನ,ಆರ್ ಜಿ ಹಳ್ಳಿ ನಾಗರಾಜ Read Post »

You cannot copy content of this page

Scroll to Top