ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಆಕಾಶ ಬೀಳುವಾಗ ಎಲ್ಲರ ತಲೆ ಒಂದೇ” ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ವಿಶೇಷ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಆಕಾಶ ಬೀಳುವಾಗ ಎಲ್ಲರ ತಲೆ ಒಂದೇ” ಸುನಾಮಿ ಎಂದರೇನು ಎಂಬುದು ನಮಗೆ ಅರಿವಿರಲಿಲ್ಲ.ನಟ್ಟ ನಡಾ ಕಡಲು ಉಕ್ಕೇರಿ ದಂಡೆಗಿರುವುದೆಲ್ಲವನು ನೆಕ್ಕುವುದೆಂದು ಗೊತ್ತಿರಲಿಲ್ಲ.ಹಾಗೆಯೆ ಕರೋನಾ ಕಾಲಘಟ್ಟದಲ್ಲಿ ಅದೆಷ್ಟು ದಿನಗಳವರೆಗೆ ಮೌನವನೊತ್ತು ಹಾಗೇ ಸುಮ್ಮನೆ ಮನೆಯಲ್ಲಿ ಮನೆಯ, ಮನದ ಕದವನ್ನು ಮುಚ್ಚಿಕೊಂಡಿದ್ದೆವು.ಇಡೀ ಜಗತ್ತಿಗೆ ಉಸಿರು ಕಟ್ಟಿ ಬಿಟ್ಟಿತ್ತು.ಒಂದು ಬಾರಿ ಕರೆಂಟು ಹೋದರೆ ಜೀವ  ಸಂಕಟಪಡುತ್ತಿತ್ತು. ವಿದ್ಯುತ್ ಇಲಾಖೆಯವರು ಅದೆಷ್ಟು ವೇಗದಲ್ಲಿ ದುರಸ್ತಿ ಕಾರ್ಯ ಕೈಗೊಂಡರು.ಒಂದಿನಿತು ಗಾಳಿಯಾಡದಿದ್ದರೆಹೃದಯ ತಲ್ಲಣಗೊಳ್ಳುತ್ತಿತ್ತು.ಯಾರಾದರೂ ಮನೆಯ ಮುಂದೆ ಬಂದು ಕೂಗಿ ಕರೆದರೆ ಎದೆ ಜಲ್ಲೆನ್ನುತಿತ್ತು.ಯಾರೋ ಸತ್ತರೋ…ಯಾರಿಗೇನು  ಉಸಿರು ಕಟ್ಟಿತೋ…..ಸಹಾಯಕ್ಕಾಗಿ ಕರೆಯುತ್ತಿದ್ದಾರೋ….ಎಂಬ ಭಯದಿಂದ ಮನೆಯ ಬಾಗಿಲನ್ನು ತೆರೆಯದೆ ಮುಚ್ಚಿಕೊಂಡು ಬಿಡುವುದೆಂದರೆ ಎಂತಹ ವಿಪರ್ಯಾಸ! ಯಾವಾವುದೋ ಕಾರಣ ಹೇಳಿಕೊಂಡು ಆಸ್ಪತ್ರೆಯ ಸಿಬ್ಬಂದಿಗಳು   ವಿನಾಕಾರಣ ಇಲ್ಲಸಲ್ಲದ ಸಲಹೆಗಳನ್ನು ಹೇಳುತ್ತಾ  ಉಸಿರು ಕಟ್ಟಿಸಿ ಹೋಗುತ್ತಿದ್ದರು. ಟಿ.ವಿ.ಯಲ್ಲೂ ಭಯಾನಕ ಘಟನೆಗಳು.ನೋಡ ನೋಡುತ್ತಲೆ ನೂರಾರು ಹೆಣಗಳನ್ನು ಒಮ್ಮೆಲೆ ಮಣ್ಣಿನೊಳಗೆ ಮುಚ್ಚುವ ಜೆಸಿಬಿಯ ರೌದ್ರಾವತಾರ ಅದೆಷ್ಟು ಕ್ರೂರ!ಹೀಗೆ………?ಸಾಗಿ….ಬಿಟ್ಟಿತು ಪ್ರಪಂಚದ ನಡುಕ.ಆ ದಿನಗಳು ಏಕಾಏಕಿ ಅತ್ಯಂತ  ಕೆಟ್ಟ ಗಳಿಗೆಯಲ್ಲಿ ಏನೇನೋ..‌‌ನಡೆದುಹೋಯಿತು.ಏನೂ ಮಾಡದ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.ಆದರೇನು ಮಾಡುವುದು? ಗಾಳಿಯ ತೊಯ್ದಾಟದ ರೋಗವು ಯಾರ ನಿಯಂತ್ರಣದಲ್ಲಿ ಇರಲಿಲ್ಲ.ತಕ್ಷಣಕ್ಕೆ ಮೂಗಿಗೆ ಕವಚ ಕಟ್ಟಿಕೊಳ್ಳುವುದೇ ಏಕೈಕ  ಮಾರ್ಗವಾಗಿತ್ತು. ನಮ್ಮ ದೇಶದ ಸುದೈವವೆ ಸರಿ.ಮತ್ತೇ ಹೊಸ ಗಾಳಿ ಬೀಸಿ ಬಂತು.ಎಲ್ಲವನೂ ಮರೆತು, ಮುಕ್ತವಾಗಿ ತಿರುಗಿದೆವು.ಮುಚ್ಚಿದ ಮನದ ಬಾಗಿಲನ್ನು ತೆರೆದಿಟ್ಟೆವು.ತಂಗಾಳಿ ಬೀಸಿ ತೀಡಿತು.ನಾವೆಲ್ಲರೂ ಉಳಿದೆವು.  ಕಷ್ಟ ಅಥವಾ ವಿಪತ್ತು ಬಂದಾಗ ಎಲ್ಲರೂ ಸಮಾನರು, ಅಲ್ಲಿ ಮೇಲು-ಕೀಳು ಎಂಬ ಭೇದಭಾವ ಇರುವುದಿಲ್ಲ  ನೂರಾರು ವರ್ಷಗಳ ಅನುಭವದ ನಿಷ್ಠುರ ಸತ್ಯಗಳು ಇಂತಹ ಪುಟ್ಟ ಸಾಹಿತ್ಯಿಕ ರೂಪಗಳಲ್ಲಿ ಅಡಕವಾಗಿರುತ್ತವೆ. ಆ ಸಾಲಿನಲ್ಲಿ ಅತ್ಯಂತ ಪ್ರಮುಖವಾದುದು “ಆಕಾಶ ಬೀಳುವಾಗ ಎಲ್ಲರ ತಲೆ ಒಂದೆ” ಎಂಬ ನಾಣ್ನುಡಿ.​ಇಲ್ಲಿ ‘ಆಕಾಶ ಬೀಳುವುದು’ ಎಂದರೆ ಜಗತ್ತಿಗೆ ಬರುವ ಮಹಾ ವಿಪತ್ತು, ಪ್ರಕೃತಿ ವಿಕೋಪ ಅಥವಾ ಅನಿವಾರ್ಯವಾದ ಸಂಕಷ್ಟ ಎಂದರ್ಥ. ಅಂತಹ ಬೃಹತ್ ಸಂಕಷ್ಟ ಎದುರಾದಾಗ ಶ್ರೀಮಂತ-ಬಡವ, ಜಾತಿ-ಮತ, ಬಲಿಷ್ಠ-ದುರ್ಬಲ ಎಂಬ ಭೇದಭಾವಗಳೆಲ್ಲವೂ ಮರೆತುಹೋಗುತ್ತವೆ. ಪ್ರಕೃತಿಯ ಅಥವಾ ಕಾಲದ ನಿಯಮದ ಮುಂದೆ ಎಲ್ಲ ಮಾನವರೂ ಒಂದೇ ಆಗಿಬಿಡುತ್ತಾರೆ ಎಂಬ ನಗ್ನ ಸತ್ಯವನ್ನು ಈ ಮಾತು ನಮಗೆ ನೆನಪಿಸುತ್ತದೆ. ಅಹಂಕಾರದ ವಿನಾಶ​ಮಾನವನು ತನ್ನ ದೈನಂದಿನ ಜೀವನದಲ್ಲಿ ಅಧಿಕಾರ, ಸಂಪತ್ತು, ಅಂತಸ್ತು ಮತ್ತು ರೂಪದ ಮದದಿಂದ ಅಹಂಕಾರಿಯಾಗುತ್ತಾನೆ. “ನಾನು ಎಲ್ಲರಿಗಿಂತ ಶ್ರೇಷ್ಠ” ಎಂಬ ಭ್ರಮೆಯಲ್ಲಿ ಬದುಕುತ್ತಾನೆ. ಆದರೆ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದರೆ, ಈ ಬ್ರಹ್ಮಾಂಡದ ಸೃಷ್ಟಿಯ ಮುಂದೆ ಮನುಷ್ಯ ತೀರ ಅತ್ಯಲ್ಪ ಜೀವಿ.​ಯಾವಾಗ ಕಾಲ ಅಥವಾ ಪ್ರಕೃತಿ ತನ್ನ ರೌದ್ರರೂಪವನ್ನು ಪ್ರದರ್ಶಿಸುತ್ತದೆಯೋ, ಆಗ ಮನುಷ್ಯನ ಅಹಂಕಾರವೆಲ್ಲ ಧೂಳೀಪಟವಾಗುತ್ತದೆ. ಮೃತ್ಯು ಅಥವಾ ಮಹಾ ವಿಪತ್ತು ಬಂದಾಗ ರಾಜನಿಗೂ ಒಂದೇ ನ್ಯಾಯ, ಭಿಕ್ಷುಕನಿಗೂ ಒಂದೇ ನ್ಯಾಯ. ಆಕಾಶವು ಯಾರಿಗೂ ತಾರತಮ್ಯ ಮಾಡದೆ ಎಲ್ಲರ ಮೇಲೂ ಒಟ್ಟಿಗೆ ಉರುಳಿ ಬೀಳುತ್ತದೆ. ಅಂತಿಮವಾಗಿ ನಾವೆಲ್ಲರೂ ಬರಿಗೈಲಿ ಬಂದು ಬರಿಗೈಲಿ ಹೋಗುವ ಸಾಮಾನ್ಯ ಮರ್ತ್ಯರು ಎಂಬುದನ್ನು ಈ ಮಾತು  ಧ್ರಡೀಕರಿಸುತ್ತದೆ.​ ಪ್ರಕೃತಿ ವಿಕೋಪಗಳು ಮತ್ತು ನೈಜ ಉದಾಹರಣೆಗಳು ಬಹಳಷ್ಟಿವೆ.​ಈ ಮೇಲಿನ ಮಾತಿಗೆ ಅತ್ಯಂತ ಸೂಕ್ತವಾದ ಪ್ರಾಯೋಗಿಕ ಉದಾಹರಣೆ ಎಂದರೆ ಪ್ರಕೃತಿ ವಿಕೋಪಗಳು.​ಭೂಕಂಪಗಳು ಮತ್ತು ಸುನಾಮಿಗಳು ಕೋವಿಡ್ ಕರೋನಾ ,ಭೂಮಿ ನಡುಗಿದಾಗ ಅಥವಾ ಸುನಾಮಿ ಅಪ್ಪಳಿಸಿದಾಗ, ಅದು ಶ್ರೀಮಂತರ ಬಂಗಲೆಯನ್ನಾಗಲಿ ಅಥವಾ ಬಡವರ ಗುಡಿಸಲನ್ನಾಗಲಿ ನೋಡುವುದಿಲ್ಲ. ಪ್ರಕೃತಿಯ ಮುನಿಸಿಗೆ ಎಲ್ಲವೂ ಕ್ಷಣಾರ್ಧದಲ್ಲಿ ನೆಲಸಮವಾಗುತ್ತವೆ.​ಮಹಾ ಪೆಡಂಭೂತಗಳಲ್ಲಿ ಒಂದಾದ ಈ  ಜಗತ್ತನ್ನು ಕಾಡಿದ ಕೋವಿಡ್-19 (ಕೊರೊನಾ) ಮಹಾಮಾರಿಯನ್ನೇ ಉದಾಹರಣೆಯಾಗಿ ಮೇಲೆ ತಿಳಿಸಿದಂತೆ  ಆ ವೈರಸ್ ಶ್ರೀಮಂತ ರಾಷ್ಟ್ರಗಳ ಪ್ರಧಾನ ಮಂತ್ರಿಗಳಿಗೂ ತಗುಲಿತು, ಬೀದಿಯಲ್ಲಿದ್ದ ಸಾಮಾನ್ಯ ಜನರಿಗೂ ತಗುಲಿತು. ಲಾಕ್‌ಡೌನ್ ಆದಾಗ ಮತ್ತು ಆಮ್ಲಜನಕದ ಕೊರತೆಯಾದಾಗ ಪ್ರತಿಯೊಬ್ಬರೂ ಜೀವ ಉಳಿಸಿಕೊಳ್ಳಲು ಹೆಣಗಾಡಿದರು. ಅಲ್ಲಿ ಹಣವಂತನ ಕಾರ್ಡ್ ಕೆಲಸ ಮಾಡಲಿಲ್ಲ, ಬಡವನ ಅಸಹಾಯಕತೆಯೂ ಮುಚ್ಚಿಹೋಗಲಿಲ್ಲ. ಎಲ್ಲರೂ ಸಾವಿನ ಭಯದಲ್ಲಿ ಒಂದೇ ತಟ್ಟೆಯ ದಾಸರಾದರು.  ಸಮಾನತೆಯ ಸಂದೇಶವು​ನಮ್ಮ ಸಮಾಜದಲ್ಲಿ ಜಾತಿ, ಧರ್ಮ, ವರ್ಗ ಮತ್ತು ಲಿಂಗದ ಆಧಾರದ ಮೇಲೆ ಹಲವಾರು ಕೃತಕ ಗೋಡೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಮನುಷ್ಯ ಮನುಷ್ಯನನ್ನೇ ದೂರ ಇಡುವ ಅಸ್ಪೃಶ್ಯತೆ, ಮೇಲು-ಕೀಳು ಎಂಬ ಭಾವನೆಗಳು ಇಂದಿಗೂ ಜೀವಂತವಾಗಿವೆ. ಆದರೆ ಈ ಮಾತಿನ  ಸಾಮಾಜಿಕ ಸಮಾನತೆಯ ಅತ್ಯುನ್ನತ ಪಾಠವನ್ನು ಬೋಧಿಸುತ್ತದೆ.​ಮಹಾ ಪ್ರವಾಹ ಬಂದಾಗ ಜನರು ತಮ್ಮ ಜಾತಿ ಯಾವುದು ಎಂದು ಕೇಳಿ ಜೀವ ಉಳಿಸಿಕೊಳ್ಳುವುದಿಲ್ಲ. ತೇಲಿ ಹೋಗುವಾಗ ಸಿಕ್ಕ ಪ್ರತಿಯೊಂದು ಕೈಯೂ ದೇವರೆಂದೇ ಭಾವಿಸುತ್ತಾರೆ. ಸಂಕಷ್ಟದ ಸಮಯದಲ್ಲಿ ಶತ್ರುಗಳೂ ಒಂದಾಗುತ್ತಾರೆ, ಭೇದ ಭಾವದ ಗೋಡೆಗಳು ಕುಸಿದು ಬೀಳುತ್ತವೆ. ವಿಪತ್ತುಗಳು ಮನುಷ್ಯನಿಗೆ ತನ್ನ ನೈಜ ಸಾಮಾಜಿಕ ಜವಾಬ್ದಾರಿಯನ್ನು ಮತ್ತು “ನಾವೆಲ್ಲರೂ ಒಂದೇ” ಎಂಬ ವಿಶ್ವಮಾನವ ತತ್ವವನ್ನು ನೆನಪಿಸಿಕೊಡುತ್ತವೆ. ​ರಾಜಕೀಯ ಮತ್ತು ಜಾಗತಿಕ ಆಯಾಮದ ದೃಷ್ಟಿಯಿಂದ ನೋಡುವುದಾದರೆ ಯುದ್ಧ ಮತ್ತು ಆರ್ಥಿಕ ಕುಸಿತಗಳು​ಜಾಗತಿಕ ಮಟ್ಟದಲ್ಲಿ ದೇಶಗಳು ತಾವೇ ಬಲಿಷ್ಠ ಎಂದು ಅಣುಬಾಂಬುಗಳನ್ನು ಹಿಡಿದು ಮೆರೆಯುತ್ತವೆ. ಆದರೆ ಮಹಾ ಯುದ್ಧಗಳು ಜರುಗಿದಾಗ ಅಥವಾ ಜಾಗತಿಕ ಆರ್ಥಿಕ ಕುಸಿತ  ಉಂಟಾದಾಗ ಅದರ ಬಿಸಿ ಕೇವಲ ಒಂದು ದೇಶಕ್ಕೆ ಸೀಮಿತವಾಗಿರುವುದಿಲ್ಲ.  ಮಹಾಯುದ್ಧಗಳು ನಡೆದಾಗ ಬಾಂಬ್‌ಗಳು ಕೇವಲ ಸೈನಿಕರ ಮೇಲೆ ಬೀಳುವುದಿಲ್ಲ, ನಾಗರಿಕರ ಮೇಲೂ ಬೀಳುತ್ತವೆ. ಹಸಿವು ಮತ್ತು ಸಾವು ಎಲ್ಲರನ್ನೂ ಸಮಾನವಾಗಿ ಕಾಡುತ್ತದೆ. ​ ಇಂದು ಇಡೀ ಜಗತ್ತನ್ನು ಕಾಡುತ್ತಿರುವ ಹವಾಮಾನ ವೈಪರೀತ್ಯವು ಕೇವಲ ಬಡ ದೇಶಗಳ ಸಮಸ್ಯೆಯಲ್ಲ. ಅತಿವೃಷ್ಟಿ, ಅನಾವೃಷ್ಟಿ ಮತ್ತು ಓಝೋನ್ ಪದರದ ನಾಶ ಇಡೀ ಭೂಮಂಡಲದ ಅಸ್ತಿತ್ವಕ್ಕೆ ಧಕ್ಕೆ ತಂದಿದೆ. ಆಕಾಶ ಬಿರುಕು ಬಿಟ್ಟರೆ ಶ್ರೀಮಂತ ದೇಶಗಳೂ ಬದುಕುಳಿಯಲಾರವು. ಹೀಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಎಲ್ಲ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯನ್ನು ಇದು ತೋರಿಸುತ್ತದೆ.​ಮಾನಸಿಕ ಮತ್ತು ವೈಯಕ್ತಿಕ ಜೀವನದ ಅನ್ವಯದೊಳಗೆ​ವೈಯಕ್ತಿಕ ಜೀವನದಲ್ಲಿ ಮನುಷ್ಯನಿಗೆ ದುಃಖ, ನಿರಾಸೆ, ಕಾಯಿಲೆ ಅಥವಾ ಸಾವು ಬಂದಾಗ ಆತನ ಮಾನಸಿಕ ಸ್ಥಿತಿ ಎಲ್ಲರಂತೆಯೇ ಇರುತ್ತದೆ. ಕೋಟ್ಯಧಿಪತಿಗೂ ಮನಸ್ಸಿನ ನೆಮ್ಮದಿ ಕೆಟ್ಟರೆ ನಿದ್ರೆ ಬರುವುದಿಲ್ಲ, ಬಡವನಿಗೂ ಅದೇ ಪರಿಸ್ಥಿತಿ.ನಮ್ಮ ವೈಯಕ್ತಿಕ ಜೀವನದಲ್ಲಿ ಬರುವ ಅನಿರೀಕ್ಷಿತ ತಿರುವುಗಳು ನಮ್ಮನ್ನು ಮಣ್ಣಿಗೆ ತರುತ್ತವೆ. ಸೋಲು ಎಲ್ಲರಿಗೂ ಒಂದೇ ರೀತಿಯ ನೋವನ್ನು ನೀಡುತ್ತದೆ. ಆದ್ದರಿಂದ ಯಶಸ್ಸಿನ ಉತ್ತುಂಗದಲ್ಲಿರುವಾಗ ಯಾರೂ ಕೂಡ ತಲೆಕೊಬ್ಬಿನಿಂದ ವರ್ತಿಸಬಾರದು, ಏಕೆಂದರೆ ಕಾಲದ ಚಕ್ರ ಉರುಳಿದಾಗ ಎಲ್ಲರೂ ಒಂದೇ ಮಟ್ಟಕ್ಕೆ ಬರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಈ ನಾಣ್ನುಡಿ ನೀಡುತ್ತದೆ.​​ಒಟ್ಟಿನಲ್ಲಿ  ಹೇಳುವುದಾದರೆ, “ಆಕಾಶ ಬೀಳುವಾಗ ಎಲ್ಲರ ತಲೆ ಒಂದೆ” ಎಂಬ ಮಾತು ಕೇವಲ ಒಂದು ಎಚ್ಚರಿಕೆಯಲ್ಲ, ಅದು ಮಾನವ ಕುಲಕ್ಕೆ ಪ್ರಕೃತಿ ನೀಡುವ ಮಹತ್ತರವಾದ ಸಂದೇಶ. ನಾವು ಸೃಷ್ಟಿಸಿಕೊಂಡಿರುವ ಕೃತಕ ಭಿನ್ನಾಭಿಪ್ರಾಯಗಳು, ಗಡಿಗಳು ಮತ್ತು ಅಹಂಕಾರಗಳು ಕೇವಲ ತಾತ್ಕಾಲಿಕ. ಪ್ರಕೃತಿಯ ನಿಯಮದ ಮುಂದೆ ನಾವೆಲ್ಲರೂ ಕೇವಲ ಸಹಪ್ರಯಾಣಿಕರು.​ವಿಪತ್ತು ಬಂದಾಗ ಒಂದಾಗುವುದಕ್ಕಿಂತ ಮುಂಚಿತವಾಗಿಯೇ, ಸುಸ್ಥಿತಿಯಲ್ಲಿರುವಾಗಲೇ ನಾವೆಲ್ಲರೂ ಪರಸ್ಪರ ಗೌರವದಿಂದ, ಪ್ರೀತಿಯಿಂದ ಮತ್ತು ಸಮಾನತೆಯಿಂದ ಬಾಳಲು ಕಲಿಯಬೇಕು. ಈ ಗಾದೆಯ ಆಳವಾದ ಅರ್ಥವನ್ನು ಅರಿತು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ನೆಲೆಸಲು ಸಾಧ್ಯ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

“ಆಕಾಶ ಬೀಳುವಾಗ ಎಲ್ಲರ ತಲೆ ಒಂದೇ” ಶರಣಪ್ಪ ತಳ್ಳಿ ಕುಪ್ಪಿಗುಡ್ಡ Read Post »

ಇತರೆ

“ಹೆಗಲಿಗೆ ಹೆಗಲಾದ ನಮ್ಮಪ್ಪ.” ದಯಾನ೦ದ ಎಂ ಪಾಟೀಲ.

ಕಾವ್ಯ ಸಂಗಾತಿ ದಯಾನ೦ದ ಎಂ ಪಾಟೀಲ. “ಹೆಗಲಿಗೆ ಹೆಗಲಾದ ನಮ್ಮಪ್ಪ.” ಅಪ್ಪ ತಾತ್ಯಾ ದಾದಾ ಡ್ಯಾಡ ಹೆಸರುಗಳಿಂದ ಕೂಡಿದ ತ೦ದೆ ಸ್ಟಾಭಿಮಾನಿ ಹಾಗೂ ನಿಸ್ವಾರ್ಥ ಪರೋಪಕಾರಿ ಜೀವಿಯೆ೦ದರೆ ತಪ್ಪಗಲಾರದು. ಹಗಲು ರಾತ್ರಿಯೆನ್ನದೇ ತನ್ನ ಕುಟುಂಬ ಗೋಸ್ಕರ ದುಡಿಯುತ್ತಾನೆ.ಬೇನೆ ಬಾಸರಿಕೆ ಇದ್ದರೂ ಕೂಡ ತನ್ನ ಮಕ್ಕಳು ಉಪವಾಸವನವಾಸ ಇರಬಾರದು ತಾನು ಉಪವಾಸ ಇದ್ದರೂ ಕೂಡ ಹೆ೦ಡತಿ ಮಕ್ಕಳಿಗೆ ಪ್ರತಿ ನಿತ್ಯ ಅವಶ್ಯಕತೆ ಪೂರೈಕೆ ಮಾಡುತ್ತಾನೆ. ತಾನು ಹರಿದ ಬಟ್ಟೆ ತೊಟ್ಟಿದ್ದರೂ ತನ್ನ ಮಕ್ಕಳು ಹೊಸ ಹೊಸ ಬಟ್ಟೆ ತೊಡಬೇಕು ತನ್ನ ಹತ್ತಿರ ಸಾದಾ ಪೋನ ಇದ್ದರೂ ಮಕ್ಕಳ ಹತ್ತಿರ IPOne ಇರಬೇಕು ತಾನು ಹಳಸಿದ ಅನ್ನ ತಿ೦ದರೂ ತನ್ನ ಮಕ್ಕಳು ಒಳ್ಳೆಯ ಆಹಾರ ತಿನ್ನಬೇಕು. ಪ್ರತಿಯೊಂದು ಕಾರಣಕ್ಕೂ ಒ೦ದೊಂದು ಕಣ್ಣೀರು ಕಥೆ ಇದೆ.ಇವುಗಳಿಗೆ ಬೆಲೆ ಕಟ್ಟಲು ಸಾಧ್ಯವೆ? ತಂದೆ ಹಿಮಾಲಯ ಪರ್ವತ ಇದ್ದ೦ತೆ ಇಡೀ ಕುಟುಂಬವನ್ನು ಕಾಪಾಡುವನು ಅವನೇ ಹೊಲದಲ್ಲಿ ಕಾರ್ಮಿಕರಿಂದ ಹಿಡಿದು ನಾನಾ ತರಹದ ಉದ್ಯೋಗ ಪತಿಗಳು ಸರ್ಕಾರಿ ನೌಕರರು ಹಿಡಿದು ಉನ್ನತ ಸ್ಥಾನಮಾನದಲ್ಲಿ ಅಧಿಕಾರಿಗಳು ಇಡೀ ಕುಟುಂಬದ ಜವಾಬ್ದಾರಿ ಹೊರುವ ತಂದೆ ಆಗಿರುತ್ತಾರೆ. ತ೦ದೆಯಾದವನು ಜೀವನ ಪಾತ್ರವನ್ನು ನಿರ್ವಹಣೆ ಮಾಡುತ್ತಾ ಇರುತ್ತಾನೆ. ಶಾಲೆ ಅಥವಾ ಪದವಿ ಶಿಕ್ಷಣಗೆ ಕಳಿಸಿ ಬರುವ ವೆಚ್ಚ ನಷ್ಟ ಬರಿಸುತ್ತಾ ಮಕ್ಕಳು ಶಿಕ್ಷಣ ಮುಗಿಸಿದ ಬಳಿಕ ಸ್ವಂತ ಸ್ವಾಲಂಬನೆ ಸಾಧಿಸುತ್ತಾರೆ. ಮಕ್ಕಳು ಸಹ ತಂದೆ ತಾಯಿಯ ಕಷ್ಟಕ್ಕೆ ಆಗುವುದು ಇಲ್ಲ ಚಿಕಿತ್ಸೆಗೆ ದಿನ ನಿತ್ಯ ದಿನಸಿಗೆ ಹಣ ಕೊಡುವುದೇ ಇಲ್ಲ. ಮಕ್ಕಳ ಕಷ್ಟಕ್ಕೆ ನೆರವು ನೀಡುವ ಅಪ್ಪ ಅದೇ ಮಕ್ಕಳು ಅಪ್ಪನಿಗೆ ಸಹಾಯ ಮಾಡುವುದು ಇಲ್ಲ.ನಯಾ ಪೈಸೆ ಕೊಡುವುದು ಇಲ್ಲ ಅಪ್ಪಂದಿರು ಜೀವನ ಪರ್ಯಾಂತ ಮಕ್ಕಳ ಗೋಸ್ಕರ ಜೀವ ಹಾಗೂ ಜೀವನವನ್ನು ತ್ಯಾಗ ಮಾಡುತ್ತಾರೆ. ಆದರೆ ಮಕ್ಕಳು ತಂದೆಯ ಕಣ್ಣೀರು ಒರಿಸುವುದು ಇಲ್ಲವೇ ಇಲ್ಲ ಇಂತಹ ಮಕ್ಕಳು ಜಾಲಿ ಮರಕ್ಕೆ ಸಮ. ಅಪ್ಪ ಯೆಂದರೆ ಹಠವಾದಿ ಸ್ವಾಭಿಮಾನಿ ಹೊರಗಿನ ಕಡೆ. ಸಾಲ ಮಾಡದೇ ಅಭಿಮಾನದಿಂದ ಜೀವನ ಮಾಡುವ ಅಪ್ಪನಿಂದ ಕಲಿಯಬೇಕಾಗಿದೆ. ಸಿಟ್ಟು ಏಕೆ? ಬರುತ್ತೆ ಗೊತ್ತೆ? ತನ್ನ ಮೇಲೆ ಶೋಷಣೆ ಅನ್ಯಾಯ ಮೋಸ ದಬ್ಬಾಳಿಕೆ ನಡೆದಾಗ ಹೋರಾಟ ಮಾಡುತ್ತಾನೆ. ಮಕ್ಕಳು ಸಹ ಚನ್ನಾಗಿ ನೋಡಿಕೊಳ್ಳಬೇಕು. ಕಣ್ಣಿನ ರಪ್ಪೆಯ0ತೆ ಕಾಪಾಡಬೇಕುಅಪ್ಪ ಎಂಬವಸ್ತು ಕಳೆದು ಹೋದರೆ ಮತ್ತೆ ಸಿಗುವುದೇಇಲ್ಲ. ಇಂದಿನ ದಿನಮಾನದಲ್ಲಿ ತಂದೆ ತಾಯಿಯನ್ನುಮನೆಯಿಂದ ಹೊರಗೆ ಹಾಕುವಕೆಟ್ಟ ಚಾಳಿ ಹೆಚ್ಚಾಗುವುದು ವಿಷಾದನೀಯ ಹಾಗೂ ಖಂಡನೀಯ ಇಡೀ ಮಾನವಕುಲ ತಲೆ ತೆಗಿಸುವ೦ತಅನೇಕ ಘಟನೆಗಳು ದೇಶದ ಅನೇಕ ಭಾಗದಲ್ಲಿ ನಡೆದಿವೆ ನಡೆಯುತ್ತಿವೆ. ನೋಡಿದಾಗ ಸಮಾಜ ಯತ್ತ ಸಾಗಿದೆ ಒಮ್ಮೆ ಎಲ್ಲರೂ ಆಲೋಚನೆ ಮಾಡಬೇಕಾಗಿದೆ. ಇದು ಹೆಚ್ಚಾಗಿ ವಿದ್ಯಾವಂತರಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಕಣ್ಣಾರೆ ನೋಡುತ್ತಿದ್ದೇವೆ. ಹಣ ಆಸ್ತಿ ಹೆಂ ಡರು ಮಕ್ಕಳು ಅಷ್ಟೆ ತಂದೆ ತಾಯಿ ಸಂಬಂಧಿಕರು ಬೇಡವೇ ಬೇಡ…ದಾರಿಗೆದಾರಿಯಾಗಿ ಕತ್ತಲಿನಿಂದ ಬೆಳಕು ತೋರಿಸಿದನಿವೃತ ಶಿಕ್ಷಕರಾದ ಮಲ್ಲಪ್ಪಾ ಬಿರಾದಾರ ಪಾಟೀಲಯವರಿಗೆ ಈ ಪುಟ್ಟ ಕವನ ಅರ್ಪಣೆ.ನನ್ನಪ್ಪ…ಗಾಳಿ ಬಿರುಗಾಳಿಯಲ್ಲಿ ಮಿ೦ಚು ಸಿಡಿಲಿನಂತೆ ಬೆರೆತು ಹೋದ ನನ್ನಪ್ಪ.ಹೆಜ್ಜೆ ಹೆಜ್ಜೆಯಲ್ಲಿ ಕಣ ಕಣದಲ್ಲಿ ಬೆರೆತು ಹೋದ ನನ್ನಪ್ಪ..ನಾಡಿನಾಡಿಯಲ್ಲಿ ಹೃದಯ ಹೃದಯದಲ್ಲಿ ಬೆರೆತು ಹೋದ ನನ್ನಪ್ಪ..ಜೀವ ಜೀವದಲ್ಲಿ ಮನ ಮನದಲ್ಲಿ ಬೆರೆತು ಹೋದ ನನ್ನಪ್ಪ…ದುಡಿಮೆಯಲ್ಲಿ ತ್ಯಾಗದ ಜೊತೆ ಬೆರೆತು ಹೋದ ನನ್ನಪ್ಪ..ಉಸಿರು ಉಸಿರಲ್ಲಿ ನೋವು ಸಂತೋಷದಲ್ಲಿ ಬೆರೆತು ಹೋದ ನನ್ನಪ್ಪ..ಆಕಾಶದಲ್ಲಿ ಕಾಣುವ ನಕ್ಷತ್ರದಂತೆ ಹುಣ್ಣಿಮೆಯ ಚಂದ್ರನಂತೆ ಬೆರೆತು ಹೋದ ನನ್ನಪ್ಪ..ಅಕ್ಷರಗಳು ನೂರಾರು ಸಾಲುಗಳು ಸಾವಿರಾರು ಸಾಲಿನಲ್ಲಿ ಬೆರೆತು ಹೋದ ನನ್ನಪ್ಪ…ತ್ಯಾಗದಲ್ಲಿ ಕರ್ಣನಂತೆ ಕಾಯಕದಲ್ಲಿ ಬೆರೆತು ಹೋದ ನನ್ನಪ್ಪ..ಭೂ ತಾಯಿಯ ಮಡಿಲಲ್ಲಿ ಮಣ್ಣಾದನನ್ನಪ್ಪಇ೦ಥ ಸ್ವಾರ್ಥ ಜೀವನ ಹೆಚ್ಚಾಗಿರುವುದು ಅಪ್ಪನ ಅಸ್ತಿ ಬೇಕು ಆದರೆ ತಂದೆ ತಾಯಿ ಬೇಡ ಇಂಥೆಂಥ ಮಕ್ಕಳು ಇದ್ದಾವೆ ನೋಡಿ. ಕಳೆದ 20 ವರುಷಗಳ ಹಿಂದಿನ ಅವಲೋಕನ ನೋಡಿದಾಗ ತಂದೆಗೆ ಒಳ್ಳೆಯ ಸ್ಥಾನಮಾನ ನೀಡಿದ್ದರು. ಅವಿಭಕ್ತ ಕುಟುಂಬಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದ್ದರು. ಹಿರಿಯರು ಕಿರಿಯರು ಭೇದ ಭಾವ ಇರುತ್ತಿರಲಿಲ್ಲ ಮದುವೆ ಮುಂಜಿ ಕಾರ್ಯಕ್ರಮ ಹಿರಿಯರ ಮುಂದಾಳುತನದಲ್ಲಿ ಮಾಡುತ್ತಿದ್ದರು. ಹೀಗೆ ಹಿಂದಿನ ಹಾಗೂ ಇಂದಿನ ಇತಿಹಾಸ ನೋಡಿದರೆ ಅಜಜಾಂತರ.ಮಠಾಧಿಪತಿಗಳು ತಿದ್ದುವ ಕಾಯ೯ ಮಾಡಬೇಕಾಗಿದೆ… ಲೇಖಕರು. ದಯಾನ೦ದ ಎಂ ಪಾಟೀಲ.ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ..

“ಹೆಗಲಿಗೆ ಹೆಗಲಾದ ನಮ್ಮಪ್ಪ.” ದಯಾನ೦ದ ಎಂ ಪಾಟೀಲ. Read Post »

ಇತರೆ, ಜೀವನ

“ರೇಡಿಯೇಷನ್ ಥೆರಪಿ: ನನ್ನ ಅನುಭವ” ಕವಿತಾ ಶ್ರೀನಿವಾಸ್‌ ನಾಯಕ್

ಅನುಭವ ಸಂಗಾತಿ ವಿಶ್ವ ರೆಡಿಯೇಷನ್ ಜಾಗೃತಿ ದಿನದಂದು — ರೇಡಿಯೇಷನ್ ಥೆರಪಿ: ನನ್ನ ಅನುಭವ ಕವಿತಾ ಶ್ರೀನಿವಾಸ್‌ ನಾಯಕ್ ವಿಶ್ವ ರೆಡಿಯೇಷನ್ ಜಾಗೃತಿ ದಿನದಂದು — ರೇಡಿಯೇಷನ್ ಥೆರಪಿ: ನನ್ನ ಅನುಭವ  ನಾನು ಲೇಖಕಿಯಾಗಿ ನನ್ನ ಕ್ಯಾನ್ಸರ್ ಚಿಕಿತ್ಸೆಯ ಅನುಭವವನ್ನು ನಾನೇ ಬರೆಯುವ ಪರಿಸ್ಥಿತಿ. ನನ್ನ ಕ್ಯಾನ್ಸರ್ ಪಯಣದಲ್ಲಿ ಸಾಕಷ್ಟು ಅನುಭವಗಳಾಗಿವೆ. ಸಾಧ್ಯವಾದಷ್ಟು ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿಕೊಂಡು ಮುಂದೆ ಸಾಗುತ್ತಿದ್ದೇನೆ.ಮೊದಲಿಗೆ ಕಿಮೋಥೆರಪಿ, ನಂತರ ಶಸ್ತ್ರಚಿಕಿತ್ಸೆ. ತದನಂತರ ಬಂದದ್ದು ರೆಡಿಯೇಷನ್ ಥೆರಪಿ.ನನಗೆ ಮೊದಲು ರೆಡಿಯೇಷನ್ ಥೆರಪಿ ಎಂದರೆ ಏನು ಎಂಬುದೇ ಗೊತ್ತಿರಲಿಲ್ಲ. ವೈದ್ಯರು ರೆಡಿಯೇಷನ್ ಥೆರಪಿ ಮಾಡಬೇಕೆಂದು ಹೇಳಿದಾಗ ನನ್ನಲ್ಲಿ ಕುತೂಹಲ ಹೆಚ್ಚಾಯಿತು. ಯೂಟ್ಯೂಬ್‌ನಲ್ಲಿ ಹುಡುಕಿದೆ. ಅಲ್ಲಿ ಸ್ವಲ್ಪಮಟ್ಟಿನ ಮಾಹಿತಿ ಸಿಕ್ಕಿತು. ಆದರೆ ನಿಜವಾದ ಅನುಭವ ಚಿಕಿತ್ಸೆ ಪಡೆಯಲು ಹೋದಾಗಲೇ ತಿಳಿಯಿತು.ಮೊದಲು ಸಿಟಿ ಸ್ಕ್ಯಾನ್ ಮಾಡಿ, ವೈದ್ಯರು ನಿಗದಿಪಡಿಸಿದ ದಿನಕ್ಕೆ ರೆಡಿಯೇಷನ್ ಥೆರಪಿಗಾಗಿ ಹೋದೆ. ಮೊದಲ ದಿನ ಸ್ವಲ್ಪ ಸಮಯ ಕಾಯಬೇಕಾಯಿತು. ನನ್ನ ಸರದಿ ಬಂದಾಗ ಅವರು ನೀಡಿದ ವಸ್ತ್ರ ಧರಿಸಿ ರೆಡಿಯೇಷನ್ ಕೊಠಡಿಗೆ ಹೋದೆ.ಅದು ವಿಶಾಲವಾದ, ಎಸಿ ಇರುವ ಕೊಠಡಿ. ಮಧ್ಯದಲ್ಲಿ ರೆಡಿಯೇಷನ್ ಯಂತ್ರ. ಮೊದಲ ಬಾರಿ ನೋಡಿದಾಗ, ಯಾವುದೋ ಹೊಸ ಲೋಕಕ್ಕೆ ಬಂದಂತಾಯಿತು!ಚಳಿಯಾಗಿದ್ದರಿಂದ ಅಲ್ಲಿನ ಸಿಬ್ಬಂದಿ ಬೆಡ್‌ಶೀಟ್ ನೀಡಿದರು. ಮೊದಲ ದಿನ ವೈದ್ಯರು, ದಾದಿಯರು ಹಾಗೂ ರೆಡಿಯೇಷನ್ ಸಿಬ್ಬಂದಿ ನನ್ನ ರೆಡಿಯೇಷನ್ ನೀಡಬೇಕಾದ ಭಾಗವನ್ನು ಪರಿಶೀಲಿಸಿ, ಎಲ್ಲವನ್ನೂ ಸರಿಯಾಗಿ ಹೊಂದಿಸಿದರು. ನಂತರ ರೆಡಿಯೇಷನ್ ಯಂತ್ರ ತಿರುಗಲು ಆರಂಭಿಸಿತು.ಆ ಸಮಯದಲ್ಲಿ ನಮ್ಮ ದೇಹಕ್ಕೆ ಯಾವುದೇ ರೀತಿಯ ನೋವು ಅಥವಾ ವಿಶೇಷ ಅನುಭವವಾಗುವುದಿಲ್ಲ. ಆರಾಮವಾಗಿ ಮಲಗಿಕೊಂಡೇ ಇರಬಹುದು. ಕೆಲವೊಮ್ಮೆ ಸಣ್ಣ ನಿದ್ರೆಯೂ ಬರಬಹುದು. ಆದರೆ ರೆಡಿಯೇಷನ್ ನಡೆಯುವ ಸಂದರ್ಭದಲ್ಲಿ ನಮ್ಮ ದೇಹವನ್ನು ಅಲುಗಾಡಿಸದೆ ಸ್ಥಿರವಾಗಿರಬೇಕು.ಸಕಾರಾತ್ಮಕವಾಗಿ ಹೇಳಬೇಕೆಂದರೆ, ನಾನು ಆ ಸಮಯವನ್ನೂ ಒಳ್ಳೆಯ ರೀತಿಯಲ್ಲಿಯೇ ಕಳೆದಿದ್ದೇನೆ. ರೆಡಿಯೇಷನ್ — ಕ್ಯಾನ್ಸರ್ ಹೋರಾಟಗಾರರ ಮಿತ್ರರೆಡಿಯೇಷನ್ ಥೆರಪಿ ಕ್ಯಾನ್ಸರ್ ಚಿಕಿತ್ಸೆಯ ಪ್ರಮುಖ ಭಾಗವಾಗಿದೆ. ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿ ಅವುಗಳನ್ನು ನಿಯಂತ್ರಿಸಲು ಅಥವಾ ನಾಶಪಡಿಸಲು ರೆಡಿಯೇಷನ್ ಬಳಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಕ್ಯಾನ್ಸರ್ ಗುಣಪಡಿಸುವ ಚಿಕಿತ್ಸೆಯ ಭಾಗವಾಗಿರಬಹುದು; ಕೆಲವೊಮ್ಮೆ ರೋಗದ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹ ಬಳಸಲಾಗುತ್ತದೆ.ನನ್ನ ಅನುಭವದಲ್ಲಿ ರೆಡಿಯೇಷನ್ ಪಡೆಯುವ ಸಂದರ್ಭದಲ್ಲಿ ಯಾವುದೇ ವಿಶೇಷ ಸಮಸ್ಯೆಯಾಗಲಿಲ್ಲ. ಅಲ್ಲಿನ ವೈದ್ಯರು ಹಾಗೂ ರೆಡಿಯೇಷನ್ ಸಿಬ್ಬಂದಿ ಬಹಳ ಅಕ್ಕರೆಯಿಂದ ಪ್ರತಿಯೊಂದನ್ನೂ ಮಾಡುತ್ತಿದ್ದರು. ಅವರ ಮಾತು, ಕಾಳಜಿ ಮತ್ತು ಧೈರ್ಯ ತುಂಬುವ ರೀತಿಯೇ ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿತ್ತು.ನಾನು ಚಿಕಿತ್ಸೆ ಪಡೆಯುವುದರ ಜೊತೆಗೆ ಅಲ್ಲಿಗೆ ಬರುವ ಇತರ ಕ್ಯಾನ್ಸರ್ ಚಿಕಿತ್ಸಕರಿಗೂ, “ರೆಡಿಯೇಷನ್ ಬಗ್ಗೆ ಭಯಪಡಬೇಡಿ. ಧೈರ್ಯವಾಗಿ ಬನ್ನಿ. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಹೋಗಿ” ಎಂದು ಹೇಳುತ್ತಿದ್ದೆ. ಅವರೊಂದಿಗೆ ಮಾತನಾಡಿ ಅವರಲ್ಲೂ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದೆ.ರೆಡಿಯೇಷನ್ ಚಿಕಿತ್ಸೆಯಿಂದ ಉಂಟಾಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆಯೂ ವೈದ್ಯರು ಮೊದಲೇ ವಿವರವಾಗಿ ತಿಳಿಸುತ್ತಾರೆ. ಆದರೆ ಎಲ್ಲರಿಗೂ ಒಂದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಚಿಕಿತ್ಸೆ ನೀಡುವ ಭಾಗ ಮತ್ತು ವ್ಯಕ್ತಿಯ ದೇಹದ ಪ್ರತಿಕ್ರಿಯೆಗನುಗುಣವಾಗಿ ಅನುಭವ ಬದಲಾಗಬಹುದು.ನನ್ನದು ಸ್ತನ ಕ್ಯಾನ್ಸರ್ ಆಗಿದ್ದರಿಂದ ನನ್ನ ಗಂಟಲಿನವರೆಗೂ ರೆಡಿಯೇಷನ್ ಚಿಕಿತ್ಸೆ ನೀಡಬೇಕಾಯಿತು. ಅದರ ಪರಿಣಾಮವಾಗಿ ನನಗೆ ಸುಮಾರು ಎರಡು ತಿಂಗಳು ಗಂಟಲು ನೋವಿನ ಸಮಸ್ಯೆ ಇತ್ತು. ಆ ಸಮಯದಲ್ಲಿ ನೀರಾಹಾರ ಸೇವಿಸುತ್ತಿದ್ದೆ. ಇದನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ಪ್ರಮುಖ ಅಡ್ಡ ಪರಿಣಾಮಗಳು ಇರಲಿಲ್ಲ.ಇದು ನನ್ನ ವೈಯಕ್ತಿಕ ಅನುಭವ ಮಾತ್ರ. ಪ್ರತಿಯೊಬ್ಬರ ಚಿಕಿತ್ಸೆಯ ಅನುಭವವೂ ವಿಭಿನ್ನವಾಗಿರಬಹುದು. ಆದ್ದರಿಂದ ವೈದ್ಯರು ನೀಡುವ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವುದು ಅತ್ಯಂತ ಮುಖ್ಯ.ಭಯ ಬೇಡ… ಧೈರ್ಯದಿಂದ ಮುಂದೆ ಸಾಗೋಣಕ್ಯಾನ್ಸರ್ ಎಂಬ ಪದ ಕೇಳಿದಾಗ ಭಯ ಸಹಜ. ರೆಡಿಯೇಷನ್ ಥೆರಪಿ ಎಂದಾಗಲೂ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಬಹುದು. ಆದರೆ ತಿಳುವಳಿಕೆ, ವೈದ್ಯರ ಮೇಲಿನ ನಂಬಿಕೆ ಮತ್ತು ಸಕಾರಾತ್ಮಕ ಮನೋಭಾವ ನಮ್ಮ ಭಯವನ್ನು ಕಡಿಮೆ ಮಾಡಬಹುದು.ನನ್ನ ಅನುಭವದಲ್ಲಿ ರೆಡಿಯೇಷನ್ ಥೆರಪಿ ನನಗೆ ಭಯ ಹುಟ್ಟಿಸಿದ ಚಿಕಿತ್ಸೆಯಾಗಿರಲಿಲ್ಲ. ಅದು ನನ್ನ ಕ್ಯಾನ್ಸರ್ ಹೋರಾಟದ ಮತ್ತೊಂದು ಪ್ರಮುಖ ಹಂತವಾಗಿತ್ತು.ಆದ್ದರಿಂದ ರೆಡಿಯೇಷನ್ ಥೆರಪಿ ಪಡೆಯಬೇಕಾದ ಪ್ರತಿಯೊಬ್ಬ ಕ್ಯಾನ್ಸರ್ ಹೋರಾಟಗಾರರಿಗೂ ನನ್ನ ಒಂದೇ ಮಾತು—ಭಯಪಡಬೇಡಿ… ಧೈರ್ಯದಿಂದ ಮುಂದೆ ಬನ್ನಿ.ವೈದ್ಯರ ಮಾತು ಕೇಳಿ, ಚಿಕಿತ್ಸೆಯ ಮೇಲೆ ನಂಬಿಕೆ ಇಡಿ.ಪ್ರತಿಯೊಂದು ದಿನವೂ ನಾವು ಗೆಲುವಿನತ್ತ ಇಡುವ ಮತ್ತೊಂದು ಹೆಜ್ಜೆ ಎಂದು ಭಾವಿಸಿ.ಕ್ಯಾನ್ಸರ್ ಪಯಣ ಕಷ್ಟವಾದರೂ, ಧೈರ್ಯ, ನಂಬಿಕೆ ಮತ್ತು ಸಕಾರಾತ್ಮಕ ಮನೋಭಾವ ನಮ್ಮ ದೊಡ್ಡ ಶಕ್ತಿ.  ಕವಿತಾ ಶ್ರೀನಿವಾಸ ನಾಯಕ್ರೇಡಿಯೇಷನ್ ಥೆರಪಿ: ನನ್ನ ಅನುಭವ ಕಾರ್ಕಳ, ಉಡುಪಿ ಜಿಲ್ಲೆ

“ರೇಡಿಯೇಷನ್ ಥೆರಪಿ: ನನ್ನ ಅನುಭವ” ಕವಿತಾ ಶ್ರೀನಿವಾಸ್‌ ನಾಯಕ್ Read Post »

ಇತರೆ, ಜೀವನ

“ಐಫೋನ್‌ಗಾಗಿ ಜೀವವನ್ನೇ ಕಳೆದುಕೊಂಡ ಕುಟುಂಬ – ಇದು ಕೇವಲ ಸುದ್ದಿಯಲ್ಲ, ಎಚ್ಚರಿಕೆಯ ಗಂಟೆ” ವನಜ ಮಹಾಲಿಂಗಯ್ಯ ಮಾದಾಪುರ.

ಜೀವನ ಸಂಗಾತಿ ವನಜ ಮಹಾಲಿಂಗಯ್ಯ ಮಾದಾಪುರ. “ಐಫೋನ್‌ಗಾಗಿ ಜೀವವನ್ನೇ ಕಳೆದುಕೊಂಡ ಕುಟುಂಬ – ಇದು ಕೇವಲ ಸುದ್ದಿಯಲ್ಲ, ಎಚ್ಚರಿಕೆಯ ಗಂಟೆ” ಐಫೋನ್‌ಗಾಗಿ ಜೀವವನ್ನೇ ಕಳೆದುಕೊಂಡ ಕುಟುಂಬ – ಇದು ಕೇವಲ ಸುದ್ದಿಯಲ್ಲ, ಎಚ್ಚರಿಕೆಯ ಗಂಟೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ಎಲ್ಲರ ಮನಸ್ಸನ್ನು ಕಲಕುವಂತಿದೆ. “ಐಫೋನ್ ಕೊಡಿಸಲಿಲ್ಲ ಎಂದು ಯುವಕ ಸಾವಿಗೆ ಶರಣು, ಮಗನನ್ನು ರಕ್ಷಿಸಲು ಹೋಗಿ ತಂದೆ-ತಾಯಿಯೂ ಬಲಿ” ಎಂಬ ಶೀರ್ಷಿಕೆ ಕೇಳಿದರೆ ಯಾರಿಗಾದರೂ ಆಘಾತವಾಗುತ್ತದೆ.ಒಂದು ಮೊಬೈಲ್ ಫೋನ್‌ಗಾಗಿ ಇಡೀ ಕುಟುಂಬವೇ ಬಲಿಯಾಗಬೇಕಾ? ಈ ಪ್ರಶ್ನೆ ಇಂದು ಪ್ರತಿಯೊಬ್ಬ ಪೋಷಕರು ಮತ್ತು ಯುವಕರು ಯೋಚಿಸಬೇಕಾಗಿದೆ. ನಿಜವಾದ ಸಮಸ್ಯೆ ಏನು? “ನಾವು ಕಲಿಯಬೇಕಾದ ಪಾಠ”:“ಪೋಷಕರಿಗೆ” :ಮಕ್ಕಳಿಗೆ ಎಲ್ಲವನ್ನೂ ಕೊಡಿಸುವುದೇ ಪ್ರೀತಿಯಲ್ಲ. “ಇಲ್ಲ” ಎನ್ನಲು ಕಲಿಸಿ, ಹಣದ ಮೌಲ್ಯ, ಕಷ್ಟದ ಅರ್ಥ ತಿಳಿಸಿ. ಪ್ರತಿದಿನ ಅವರೊಂದಿಗೆ ಸ್ವಲ್ಪ ಸಮಯ ಮನಸ್ಸು ಬಿಚ್ಚಿ ಮಾತನಾಡಿ.“ಯುವಕರಿಗೆ” ಯುವತಿಯರಿಗೆ “:ನಿಮ್ಮ ಜೀವನ ಒಂದು ಫೋನ್‌ಗಿಂತ, ಒಂದು ವಸ್ತುವಿಗಿಂತ ಸಾವಿರ ಪಟ್ಟು ದೊಡ್ಡದು. ಸೋಲು, ನಿರಾಸೆ ಜೀವನದ ಒಂದು ಭಾಗ. ನಿಮಗೆ ಏನಾದರೂ ತೀವ್ರ ಬೇಸರ, ಒತ್ತಡ, ಹತಾಶೆ ಅನಿಸಿದರೆ ಒಬ್ಬಂಟಿಯಾಗಿ ಇರಬೇಡಿ. ನಿಮ್ಮ ದುಷ್ಟ ಕೆಟ್ಟದಾಗಿ ಚಟಗಳನ್ನು ಬಿಟ್ಟು, ತಂದೆ ತಾಯಿಯ ಮಾತು ಕೇಳಿ, ಕೆಟ್ಟುಹೋದಾಗ ನಿಮ್ಮನ್ನು ಎಲ್ಲರೂ ದೂರ ತಳ್ಳುತ್ತಾರೆ,. ನಿಮ್ಮನ್ನು ಬಿಟ್ಟುಕೊಡದ ಜೀವಗಳು ಅಂದ್ರೆ ಅದು ಅಪ್ಪ ಅಮ್ಮ. ಅವ್ರಿಗೆ ಸುಳ್ಳು ಹೇಳಿ ಮೋಸ ಮಾಡಿ ಹಾಳಾಗಬೇಡಿ. “ನೆನಪಿಡಿ, ಸಹಾಯ ಯಾವಾಗಲೂ ಲಭ್ಯವಿದೆ”:ನಿಮಗೆ ಅಥವಾ ನಿಮ್ಮ ಪರಿಚಯದವರಿಗೆ ಮಾನಸಿಕ ಒತ್ತಡ, ನಕಾರಾತ್ಮಕ ಯೋಚನೆಗಳು ಕಾಡುತ್ತಿದ್ದರೆ ದಯವಿಟ್ಟು ತಕ್ಷಣ ಮಾತನಾಡಿ:ಹತ್ತಿರದ ಆಪ್ತ ಸಮಾಲೋಚಕರು, ವೈದ್ಯರು ಅಥವಾ ನಿಮ್ಮ ನಂಬಿಕೆಯ ವ್ಯಕ್ತಿಯೊಂದಿಗೆ ಮಾತನಾಡಿ.ಒಂದು ಕ್ಷಣದ ಕೋಪ, ಒಂದು ಕ್ಷಣದ ನಿರ್ಧಾರ ಇಡೀ ಕುಟುಂಬವನ್ನೇ ಮುಗಿಸಿಬಿಡುತ್ತದೆ. ದಯವಿಟ್ಟು ಜೀವನವನ್ನು ಪ್ರೀತಿಸಿ.ಇಂತಹ ಸುದ್ದಿಗಳನ್ನು ಸೆನ್ಸೇಷನಲ್ ಆಗಿ ಹಂಚಿಕೊಳ್ಳುವ ಬದಲು, ಅದರ ಹಿಂದಿನ ಮಾನಸಿಕ ಆರೋಗ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳೋಣ. ವನಜ ಮಹಾಲಿಂಗಯ್ಯ ಮಾದಾಪುರ.

“ಐಫೋನ್‌ಗಾಗಿ ಜೀವವನ್ನೇ ಕಳೆದುಕೊಂಡ ಕುಟುಂಬ – ಇದು ಕೇವಲ ಸುದ್ದಿಯಲ್ಲ, ಎಚ್ಚರಿಕೆಯ ಗಂಟೆ” ವನಜ ಮಹಾಲಿಂಗಯ್ಯ ಮಾದಾಪುರ. Read Post »

ಇತರೆ, ಪ್ರಬಂಧ

ಶೈಲಜಾ ಪ್ರಸಾದ್‌ ಅವರ ಲಲಿತ ಪ್ರಬಂಧ “ಮೆಲುಕು”

ಪ್ರಬಂಧ ಸಂಗಾತಿ ಶೈಲಜಾ ಪ್ರಸಾದ್‌ “ಮೆಲುಕು” ನನ್ನ ಪತಿಯು ಕೂಡು ಕುಟುಂಬದಲ್ಲಿ ಬೆಳೆದವರು. ನಾನು ಮದುವೆಯಾಗಿ ಅತ್ತೆ ಮನೆಗೆ ಹೋದಾಗ,ನನಗೆ ತಿಳಿದಿದ್ದು ಅವರು ಕೇವಲ ೨/೩ ವರ್ಷದ ಹಿಂದೆಯಷ್ಟೇ ಬೇರೆ ಮನೆಗೆ ಬಾಡಿಗೆಗೆ ಬಂದಿದ್ದು   ಎಂದು.ನನ್ನ ಅತ್ತೆಯವರೇ ಮನೆಗೆ ಹಿರಿಯ ಸೊಸೆ, ಹಾಗಾಗಿ ಜವಾಬ್ದಾರಿ ತುಸು ಜಾಸ್ತಿಯೇ ಅವರ ಮೇಲಿತ್ತು.ನಮ್ಮ ಮಾವನವರಿಗೆ ತಮ್ಮಂದಿರು ನಾಲ್ಕು ಮಂದಿ ಮತ್ತು ಒಬ್ಬ ಅಕ್ಕ,ಇಬ್ಬರು ತಂಗಿಯರು ಇದ್ದರು. ನಮ್ಮ ಮದುವೆಯ ವೇಳೆಗೆ ಮಾವನವರ ತಂದೆ ತೀರಿ ಹೋಗಿದ್ದರು. ಅವರ ತಾಯಿ ( ನನ್ನವರ ಅಜ್ಜಿ) ಅನಾರೋಗ್ಯದಿಂದ ಬಳಲುತ್ತಿದ್ದರು.ಇನ್ನೊಂದು ವಿಶೇಷವೆಂದರೆ ಆ ಸಮಯದಲ್ಲಿ ನನ್ನ ಅತ್ತೆಯವರ ತಾಯಿಯವರೂ ಸಹ ನಮ್ಮ ಮದುವೆಯ ಸಮಯದಲ್ಲಿ ಹಾಜರಿದ್ದು , ಇಬ್ಬರು ಬೀಗಿತ್ತಿಯರೂ ಜೊತೆ ಜೊತೆಯಲ್ಲಿ ಕುಳಿತು ಮದುವೆಯ ಕಾರ್ಯ ಕಲಾಪಗಳೆಲ್ಲವನ್ನೂ ವೀಕ್ಷಿಸಿದ್ದು.ನಮ್ಮ ಮದುವೆಯಾಗಿ ೪೪ ವರ್ಷಗಳಾಗಿದ್ದು, ಈಗಲೂ ನನ್ನವರು ಆಗಾಗ್ಗೆ ( ನಮ್ಮ ಮದುವೆ ವಾರ್ಷಿಕೋತ್ಸವದ ದಿನ/ಮೊಮ್ಮಕ್ಕಳು ಮನೆಗೆ ಬಂದಾಗ ನಮ್ಮ  ಮದುವೆ ಫೋಟೋಗಳನ್ನು ತೋರಿಸುತ್ತಾರೆ)ಆ  ಸಿಹಿ ನೆನಪುಗಳ ಪೋಟೋಗಳನ್ನು ನೋಡುತ್ತಿರುತ್ತಾರೆ. ಮನೆಗೆ ಹಬ್ಬ ಹರಿದಿನಗಳಲ್ಲಿ ಅವರ ಅಣ್ಣ,ತಮ್ಮಂದಿರು ಬಂದಾಗ ಅಂದಿನ ಬಾಲ್ಯದ ದಿನಗಳ ಸವಿ ಸವಿ ನೆನಪುಗಳನ್ನು ಪರಸ್ಪರ ಹಂಚಿಕೊಳ್ಳುವುದು ಸರ್ವೇ ಸಾಮಾನ್ಯ ಸಂಗತಿ.ಸುಮಾರು ೩೦-೩೫ ಜನರಿದ್ದ ಆ ದೊಡ್ಡ ಕುಟುಂಬವನ್ನು ಈಗಿನ ಪೀಳಿಗೆಯ ಮಕ್ಕಳು ಊಹಿಸಿಕೂಳ್ಳಲೂ ಸಹಾ ಕಷ್ಟ!! ಗಂಡ,ಹೆಂಡತಿ ಮಗುವೊಂದಿರುವ ಕುಟುಂಬ(ವಿಭಕ್ತ ಕುಟುಂಬ) ಪ್ರಚಲಿತವಾಗಿರುವ  ಕಾಲವಿದು.ಐದು ಜನ ಅಣ್ಣ,ತಮ್ಮಂದಿರು ಅವರವರ ಹೆಂಡತಿ, ಮಕ್ಕಳೊಡನೆ ಇದ್ದರೆ ,ಆ ಜೀವನ ಹೇಗಿರುತ್ತದೆ ಎಂದು ಒಮ್ಮೆ ಕಲ್ಪಿಸಿಕೊಳ್ಳಿ!ಪ್ರತಿಯೊಂದು ದಂಪತಿಗೆ ಕನಿಷ್ಟ ೩/೪ ಮಕ್ಕಳು ಇರುವುದು ಅಂದಿನ ದಿನಗಳಲ್ಲಿ ಸಾಮಾನ್ಯವಾದ ಸಂಗತಿಯಾಗಿತ್ತು.ಹಾಗೆ ನೋಡಿದರೆ ನಮ್ಮ ಅತ್ತೆಗೆ ಇಬ್ಬರೇ ಗಂಡು ಮಕ್ಕಳು ! ಅತ್ತೆಯವರಿಗೆ ಸುಮಾರು ೮-೧೦ ವರುಷಗಳು ಮಕ್ಕಳಾಗದೇ ನಂತರ ನನ್ನ ಪತಿ ಜನಿಸಿದ್ದು , ನಮ್ಮ ಅತ್ತೆ ಇದ್ದಾಗ ಹೇಳುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ. ನಂತರ ಎರಡೇ ವರುಷಕ್ಕೆ ನನ್ನ ಮೈದುನ ಹುಟ್ಟಿದ್ದು ಎಂದು ಹೇಳಿ ಅತ್ತೆ ನಗುತ್ತಿದ್ದರು.ನನ್ನ ಅತ್ತೆಯ ಓರಗಿತ್ತಿಯರು ನಾಲ್ಕು ಜನ,ಅವರಿಗೆ ತಲಾ ೨/೩ ಮಕ್ಕಳೆಂದರೂ ೨೫ ಜನರು ಜೊತೆಗೆ ಮಾವನವರ ತಂದೆ ಮತ್ತು ತಾಯಿ ಎಲ್ಲಾ ಸೇರಿ ೩೦  ಮಂದಿಯಾಗುತ್ತಿದ್ದರು.೫-೬ ಜನರು ಹೆಚ್ಚಿಗೆ ಏಕೆ ಹೇಳಿದೆನೆಂದರೆ ಬಂದು ಹೋಗುವ ನೆಂಟರಿಷ್ಟರು ಆಗಿನ ಕಾಲದಲ್ಲಿ ನಿತ್ಯವೂ ಇರುತ್ತಿದ್ದರು.(ಇಪ್ಪತ್ತನೆ ಶತಮಾನದ ೫೦-೭೦ ದಶಕಗಳಲ್ಲಿ ಬಹಳ ಸಾಮಾನ್ಯ ಸಂಗತಿಯಾಗಿತ್ತು.ಈ ಪದ್ದತಿ ಇನ್ನೂ ಕೆಲವು ದಶಕಗಳ ಕಾಲ ಮುಂದುವರಿದಿತ್ತೆಂದು ನೆನಪಿದೆ.)ನಾವು ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರೂ, ನಮ್ಮ ಮನೆ ಬೆಂಗಳೂರಿನಲ್ಲಿ ಇದ್ದಾಗ ನಮ್ಮ ತಾಯ್ತಂದೆಯರ ಸಂಬಂಧಿಕರು ,ನೆಂಟರು ಮದುವೆ,ಮುಂಜಿಗಳಿಗೆ ಬಂದಾಗ ನಮ್ಮ ಮನೆಯಲ್ಲಿಯೇ ತಂಗುತ್ತಿದ್ದ ನೆನಪು ಈಗಲೂ ನನಗಿದೆ.ಆಗಿನ ಕಾಲದಲ್ಲಿ ಜನರು ಇದ್ದಿದ್ದೇ ಹಾಗೆ. ಕಾಯಿಲೆ-ಕಸಾಲೆಗಳಾದರೆ ತಮ್ಮ ಊರುಗಳಿಂದ ಬೆಂಗಳೂರು/ಹತ್ತಿರದ ಪಟ್ಟಣಗಳಿಗೆ  ವೈದ್ಯರ ತಪಾಸಣೆಗೆ ಬರುತ್ತಿದ್ದರು. ಒಬ್ಬರ ಕಷ್ಟ,ಸುಖಕ್ಕೆ ಇನ್ನೊಬ್ಬರು ಸ್ಪಂದಿಸಿ, ನೆರವಾಗುತ್ತಿದ್ದರು.ನಮ್ಮ ಬಾಡಿಗೆ ಮನೆ ಚಿಕ್ಕದಾಗಿದ್ದರೂ ,ಎಲ್ಲರ ಮನಸ್ಸು ದೊಡ್ಡದಾಗಿತ್ತು.ನಮ್ಮ ಅಜ್ಜಿಯು ನಮ್ಮೊಂದಿಗೆ ಇದ್ದುದರಿಂದ ,ಅವರನ್ನು ನೋಡಲು ನೆಂಟರಿಷ್ಟರು ಆಗಾಗ್ಗೆ ಬರುತ್ತಿದ್ದುದು ಸಾಮಾನ್ಯ ಹಾಗೂ ಸಹಜವಾಗಿತ್ತು.ಇನ್ನು ನನ್ನ ಪತಿಯ ಕೂಡುಕುಟುಂಬದ ಬಗ್ಗೆ , ಅವರ ಜೀವನಶೈಲಿಯ ಬಗ್ಗೆ ಹೇಳುತ್ತ ಹೋದರೆ ಅದೇ ಒಂದು ದೊಡ್ಡ ಪ್ರಹಸನವಾದೀತು! ಇರಲಿ …ತುಸು ಚಿಕ್ಕದಾಗಿ ಹೇಳುತ್ತೇನೆ.ಆ ಕೂಡುಕುಟುಂಬದಲ್ಲಿ ಎಷ್ಟೋ ರಸವತ್ತಾದ,ವಿನೋದಮಯವಾದ ಘಟನೆಗಳು ನಡೆದಿದ್ದವು. ಅವುಗಳಲ್ಲಿ ನಗೆಯುಕ್ಕಿಸುವಂತಹ ಕೆಲವು ಸನ್ನಿವೇಶಗಳು ಹೀಗಿವೆ.ಅವರೆಕಾಯಿಯ ಸೀಸನ್ನಿನ ರಸಮಯವಾದ ಚಿತ್ರಣವನ್ನು ನಿಮ್ಮ ಮುಂದಿಡುವೆ.ಆಗೆಲ್ಲಾ ಅವರೆಕಾಯಿಯ ಕಾಲದಲ್ಲಿ ಎಲ್ಲರಿಗೂ ಸಡಗರ, ಸಂಭ್ರಮವೋ ಸಂಭ್ರಮವು.ಹಬ್ಬದ ವಾತಾವರಣವೆಂದರೂ ತಪ್ಪಿಲ್ಲ.ಹಬ್ಬಗಳೆಲ್ಲಾ ಮುಗಿದ ನಂತರ ‘ಅವರೆಕಾಯಿ ಹಬ್ಬ” ಎಂದು ನಮ್ಮತ್ತೆ ನಗುತ್ತಿದ್ದುದು ನೆನಪಿಗೆ ಬರುತ್ತದೆ.ಆ ಸೀಸನ್ನಿನಲ್ಲಿ ಹೆಚ್ಚು ಕಡಿಮೆ ದಿನವೂ ಅವರೆಕಾಯಿಯನ್ನು ಬಳಸುತ್ತಿದ್ದರು. ಒಂದು ದಿನ ಅವರೆಕಾಳಿನ ಉಪ್ಪಿಟ್ಟು, ಇನ್ನೊಂದು ದಿನ ದೋಸೆ ಮತ್ತು ಹಿತಕವರೆ , ಈರುಳ್ಳಿ ರೊಟ್ಟಿ…ಇನ್ನೊಂದು ದಿನ ಅವರೆಕಾಳಿನ ಚಿತ್ರಾನ್ನ……ಹೀಗೆ ಪಟ್ಟಿ ಬೆಳೆಯುತ್ತ ಇರುತ್ತಿತ್ತು.ಇಲ್ಲಿ ಹಿತಕವರೆಯ ಬಗ್ಗೆ ಹೇಳದಿದ್ದರೆ ಈ ಪ್ರಸಂಗವೇ ಅಪೂರ್ಣವಾಗುತ್ತದೆ.ಹಿತಕವರೆಯನ್ನು ಮಾಡಬೇಕೆಂದರೆ ೨/೩ ದಿನಗಳ ಮುಂಚೆಯೇ ಪ್ಲಾನ್ ಮಾಡಬೇಕಿತ್ತು.ಹಿಂದಿನ ದಿನವೇ ಅವರೆಕಾಯಿಯನ್ನು ತಂದು ಕಾಳನ್ನು ಬಿಡಿಸಿಟ್ಟು ಕೊಳ್ಳಬೇಕಿತ್ತು. ನಂತರ ಅದನ್ನು ನೀರಿನಲ್ಲಿ ಅರ್ಧದಿನ ನೆನೆಸಿಡಬೇಕಾಗುತ್ತಿತ್ತು.ನಂತರ ಆ ಕಾಳುಗಳನ್ನು ಹಿಸುಕಿ, ಅದರ ಹೊಟ್ಟನ್ನು ತೆಗೆಯಬೇಕು. ಈ ಎಲ್ಲಾ ದೀರ್ಘ ಕಲಾಪದ ಬಳಿಕ ಇದಕ್ಕೆ ಮಸಾಲೆ ರುಬ್ಬುವ ಕಾರ್ಯಕ್ರಮ ಶುರುವಾಗಬೇಕಿತ್ತು.ಆ ಪ್ರೋಗ್ರಾಂ ಇನ್ನೂ ರಸವತ್ತಾಗಿ ಇರುತ್ತಿತ್ತು. ಮನೆಯ ಎಲ್ಲಾ ಸದಸ್ಯರು ಈ ಕೆಲಸಕ್ಕೆ ಕೈಗೂಡಿಸಬೇಕಾಗುತ್ತಿತ್ತು.ಹಿಂದಿನ ದಿನವೇ ಮನೆಯವರೆಲ್ಲಾ ಕಾಯಿಯನ್ನು ಬಿಡಿಸಿಟ್ಟು ಮಲಗುತ್ತಿದ್ದರು. ಮರುದಿನ ಮಕ್ಕಳ ಸಹಿತವಾಗಿ ಎಲ್ಲರೂ ಬೆಳಗ್ಗೆ ಬೇಗ ಎದ್ದು ನೆನೆಸಿದ ಕಾಳನ್ನು ಹಿಸುಕಲು ಕುಳಿತುಕೊಳ್ಳುತ್ತಿದ್ದರು. ಮಕ್ಕಳು ಪೈಪೋಟಿಗೆ ಬಿದ್ದವರಂತೆ ಎರಡೂ ಕೈಗಳಲ್ಲಿ ಕಾಳನ್ನು ಹಿಸುಕಿ ಸಿಪ್ಪೆಯನ್ನು ಬೇರ್ಪಡಿಸುತ್ತಿದ್ದರು.ಈಗ ಮಸಾಲೆ ರುಬ್ಬುವ ಕಾರ‍್ಯಕ್ರಮ ಶುರುವಾಗುತ್ತಿತ್ತು. ಮನೆಯ ಹೆಂಗಸರಿಗೆ ಕೈ ತುಂಬಾ ಕೆಲಸವೋ ಕೆಲಸ…..ಒಬ್ಬರು ಈರುಳ್ಳಿಯನ್ನು ಒಲೆಯ ಮೇಲಿಟ್ಟು ಸುಟ್ಟರೆ, ಇನ್ನೊಬ್ಬರು ತೆಂಗಿನಕಾಯಿಯನ್ನು ತುರಿಯುತ್ತಿದ್ದರು. ಇನ್ನಿಬ್ಬರು ಮಸಾಲೆ ರುಬ್ಬಲು ಕುಳಿತುಕೊಳ್ಳುತ್ತಿದ್ದರು. ಬಳಿಕ ಬೇಯಲು ಇಟ್ಟಿದ್ದ ಕಾಳಿಗೆ ಮಸಾಲೆಯನ್ನು ಸೇರಿಸುತ್ತಿದ್ದರು.ಹೀಗೆ ಸುದೀರ್ಘದ ತಯಾರಿಯ ನಂತರ ಹಿತಕವರೆ ಕೊನೆಗೆ ಅಂತೂ ಸಿದ್ದವಾಗುತ್ತಿತ್ತು.ಈಗ  ಇನ್ನೊಂದು ಪರ್ವ ಶುರುವಾಗುತ್ತಿತ್ತು. ಶೈಲಜಾ ಪ್ರಸಾದ್

ಶೈಲಜಾ ಪ್ರಸಾದ್‌ ಅವರ ಲಲಿತ ಪ್ರಬಂಧ “ಮೆಲುಕು” Read Post »

ಇತರೆ

“ಶಿಕ್ಷಕ ದಿನಾಚರಣೆಯ ಶುಭಾಶಯಗಳು”ಕಾವ್ಯ ಸುಧೆ. (ರೇಖಾ ಶಂಕರ್ )

ಶಿಕ್ಷಕ ಸಂಗಾತಿ ಕಾವ್ಯ ಸುಧೆ. ( ರೇಖಾ ಶಂಕರ್ ) “ಶಿಕ್ಷಕ ದಿನಾಚರಣೆಯ ಶುಭಾಶಯಗಳು” ಶಿಕ್ಷಣ ಮತ್ತು ಜ್ಞಾನಕ್ಕೆ ಅತ್ಯುನ್ನತ ಗೌರವವನ್ನು ನೀಡಲಾಗುವ ಭಾರತ ದೇಶವಾಸಿಯಾಗಿರುವ  ನಮ್ಮ ಹೃದಯದಲ್ಲಿ ” ಶಿಕ್ಷಕರ ದಿನ’ವು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಅಸಂಖ್ಯಾತ ವಿದ್ಯಾರ್ಥಿಗಳ ಮನಸ್ಸು ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಆಳವಾದ ಪ್ರಭಾವ ಬೀರುವ ಶಿಕ್ಷಕರನ್ನು ಗೌರವಿಸಲು ಮೀಸಲಾದ ಈ ದಿನವನ್ನು, ಭಾರತವು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಆಚರಿಸುತ್ತದೆ. ಇದು ಕೇವಲ ಸಂಭ್ರಮಾಚರಣೆಯ ದಿನವಷ್ಟೇ ಅಲ್ಲ, ಬದಲಾಗಿ ಭಾರತದ ಅತ್ಯಂತ ಗೌರವಾನ್ವಿತ ವಿದ್ವಾಂಸರು, ಶಿಕ್ಷಣತಜ್ಞರು ಮತ್ತು ನಾಯಕರಲ್ಲೊಬ್ಬರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪರಂಪರೆಯೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಒಂದು ಮಹತ್ವದ ಸಂದರ್ಭವಾಗಿದೆ. ಶಿಕ್ಷಕರ ದಿನವು ಕೇವಲ ಮೆಚ್ಚುಗೆಯನ್ನು ವ್ಯಕ್ತಪಡಿಸುವ ದಿನವಲ್ಲ; ಬದಲಾಗಿ, ನಮ್ಮ ಜೀವನದಲ್ಲಿ ಶಿಕ್ಷಕರು ವಹಿಸುವ ನಿರ್ಣಾಯಕ ಪಾತ್ರವನ್ನು ಅದು ನಮಗೆ ನೆನಪಿಸುತ್ತದೆ. ಶಿಕ್ಷಕರು ಸಮಾಜದ ಶಿಲ್ಪಿಗಳಾಗಿದ್ದು, ಯುವ ಮನಸ್ಸುಗಳನ್ನು ರೂಪಿಸುವ ಮತ್ತು ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅವರು ಕೇವಲ ಶೈಕ್ಷಣಿಕ ವಿಷಯಗಳನ್ನು ಬೋಧಿಸುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಹಾಗೂ ಅವರ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಮೂಲಕ, ಅವರನ್ನು ಪರಿಪೂರ್ಣ ವ್ಯಕ್ತಿಗಳಾಗಿ ಬೆಳೆಯಲು ಸಹಾಯ ಮಾಡುತ್ತಾರೆ. ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಶಿಕ್ಷಕರ ಪಾತ್ರ ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ. ಕ್ಷಿಪ್ರ ತಾಂತ್ರಿಕ ಪ್ರಗತಿ, ಜಾಗತೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯ ಅಗತ್ಯತೆಯಂತಹ 21ನೇ ಶತಮಾನದ ಸವಾಲುಗಳನ್ನು ಎದುರಿಸಲು, ಈ ಸಂಕೀರ್ಣ ಜಗತ್ತಿನಲ್ಲಿ ಮುನ್ನಡೆಯಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಿರುವ ಹೊಸ ತಲೆಮಾರಿನ ಚಿಂತಕರು ಹಾಗೂ ನಾಯಕರ ಅವಶ್ಯಕತೆಯಿದೆ. ವಿದ್ಯಾರ್ಥಿಗಳನ್ನು ಈ ಸವಾಲುಗಳನ್ನು ಎದುರಿಸಲು ಮತ್ತು ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡಲು ಸಿದ್ಧಪಡಿಸುವ ಮೂಲಕ, ಶಿಕ್ಷಕರು ಈ ಮಹತ್ವದ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ.ಶಿಕ್ಷಕರ ದಿನವು ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿರುವ ಶಿಕ್ಷಕರಿಗೆ ಕೃತಜ್ಞತೆಯನ್ನು ಸಲ್ಲಿಸಲು ನಮಗೆಲ್ಲರಿಗೂ ಸಿಗುವ ಒಂದು ಅವಕಾಶವಾಗಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣವನ್ನು ಒದಗಿಸಲು ಶಿಕ್ಷಕರು ಪಡುವ ಶ್ರಮ, ಅವರ ಬದ್ಧತೆ ಮತ್ತು ಅವರು ಮಾಡುವ ತ್ಯಾಗವನ್ನು ಗುರುತಿಸುವ ದಿನವಿದು. ಜೊತೆಗೆ, ಶಿಕ್ಷಣದ ಮಹತ್ವವನ್ನು ಅವಲೋಕಿಸಲು ಹಾಗೂ ಶಿಕ್ಷಕರ ಪ್ರಮುಖ ಪಾತ್ರಕ್ಕೆ ಬೆಂಬಲ ನೀಡುವ ಮತ್ತು ಅವರನ್ನು ಸಬಲೀಕರಣಗೊಳಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನವೂ ಇದಾಗಿದೆ. ಕೊನೆಯದಾಗಿ, ಶಿಕ್ಷಕರ ದಿನಾಚರಣೆಯು ತಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿಕ್ಷಕರನ್ನು ಗೌರವಿಸುವ ದಿನವಾಗಿದೆ. ಬೋಧನೆಯು ಎಲ್ಲಾ ವೃತ್ತಿಗಳಲ್ಲೇ ಅತ್ಯಂತ ಶ್ರೇಷ್ಠವಾದುದು ಎಂದು ನಂಬಿದ್ದ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಪರಂಪರೆಯನ್ನು ಸ್ಮರಿಸುವ ದಿನವಿದು. ಶಿಕ್ಷಕರ ದಿನವನ್ನು ಆಚರಿಸುವ ಈ ಸಂದರ್ಭದಲ್ಲಿ, ಶಿಕ್ಷಣದ ಮಹತ್ವ ಮತ್ತು ನಮ್ಮ ಜೀವನದಲ್ಲಿ ಶಿಕ್ಷಕರ ಪಾತ್ರದ ಕುರಿತು ನಾವು ಒಮ್ಮೆ ಚಿಂತಿಸೋಣ. ನಮಗೆ ಸ್ಫೂರ್ತಿ ನೀಡಿದ, ನಮ್ಮನ್ನು ಸವಾಲುಗಳಿಗೆ ಒಡ್ಡಿದ ಮತ್ತು ನಮಗೆ ಮಾರ್ಗದರ್ಶನ ನೀಡಿದಶಿಕ್ಷಕರಿಗೆ ಕೃತಜ್ಞತೆಯನ್ನು ಸಲ್ಲಿಸೋಣ. ಹಾಗೆಯೇ, ಮುಂದಿನ ಪೀಳಿಗೆಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಕಾರ್ಯವನ್ನು ಶಿಕ್ಷಕರು ಮುಂದುವರಿಸಲು ಅವರಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡಲು ಸಂಕಲ್ಪ ಮಾಡೋಣಅಲ್ಲವೇ…………. ಕಾವ್ಯ ಸುಧೆ. ( ರೇಖಾ ಶಂಕರ್ )

“ಶಿಕ್ಷಕ ದಿನಾಚರಣೆಯ ಶುಭಾಶಯಗಳು”ಕಾವ್ಯ ಸುಧೆ. (ರೇಖಾ ಶಂಕರ್ ) Read Post »

ಇತರೆ

ಗೊರೂರು ವಸಂತಿ ಮೂರ್ತಿ (ಕೆನಡಾ) ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ಅವರ ಬರಹ “ದಂತ ದೇವತೆ”

ವಿಶೇಷ ಸಂಗಾತಿ ಗೊರೂರು ವಸಂತಿ ಮೂರ್ತಿ (ಕೆನಡಾ) ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ಅವರ ಬರಹ “ದಂತ ದೇವತೆ” {ಪಾಶ್ಚಾತ್ಯ ದೇಶಗಳಲ್ಲಿ ಒಂದು ದಂತ ಕಥೆ ಜನಪ್ರಿಯವಾಗಿದೆ.  ಮಕ್ಕಳ ಹಾಲು ಹಲ್ಲುಗಳು ಬಿದ್ದಾಗ ಆ ಹಲ್ಲನ್ನು ದಿಂಬಿನ ಕೆಳಗೆ ಇಟ್ಟು ಮಲಗಿದರೆ ದಂತ ದೇವತೆ ಎಂಬ ಕಾಲ್ಪನಿಕ ಯಕ್ಷಿಣಿ (tooth fairy) ಬಂದು ಅದನ್ನು ತೆಗೆದುಕೊಂಡು ಅದರ ಜಾಗದಲ್ಲಿ ಹಣ ಇಟ್ಟು ಹೋಗುತ್ತಾಳೆ.  ಈ ಲೇಖನ ಆ ದಂತಕಥೆಯ ಮೇಲೆ ಆಧಾರಿತವಾಗಿದೆ.} ಮಗು ಹುಟ್ಟುವಾಗ ಅದರ ಬಾಯಲ್ಲಿ ಒಂದು ಹಲ್ಲೂ ಇರುವುದಿಲ್ಲ.  ಇದು ಮಾನವನಿಗೆ ಮಾತ್ರ ಅನ್ವಯಿಸುವ ಒಂದು ವೈಶಿಷ್ಟ್ಯ. ಮಿಕ್ಕ ಪ್ರಾಣಿಗಳಿಗೆಲ್ಲಾ ಅವು ಹುಟ್ಟುವಾಗಲೇ ಬಾಯಿನಲ್ಲಿ ಹಲ್ಲು ತಯಾರಿಮಾಡಿಕೊಂಡೇ ಬರುತ್ತವೆ.  ದೇವರು ಈ ರೀತಿ ತಾರತಮ್ಯವನ್ನು ಏಕೆ ಮಾಡಿದ್ದಾನೆ ಎಂದು ನೀವು ಕೇಳಬಹುದು.  ಅದಕ್ಕೆ ಅನೇಕ ಕಾರಣಗಳು ಇವೆ. ಅದಿರಲಿ, ಪುಟ್ಟ ಮಗುವಿನ ಬಾಯಲ್ಲಿ ಹಲ್ಲು ಕಾಣುವುದಕ್ಕೆ ಹೆಚ್ಚು ಕಡಿಮೆ ಒಂದು ವರ್ಷವೇ ಬೇಕಾಗುತ್ತದೆ.  ಹಿಂದಿನಕಾಲದಲ್ಲಿ ಮಗುವಿಗೆ ಹಲ್ಲು ಬರುವವರೆಗೆ ಅದಕ್ಕೆ ಸಿಕ್ಕುತ್ತಿದ್ದುದು ಬರಿಯ ತಾಯಿಯಹಾಲು ಅಥವಾ ಹಸುವಿನ ಹಾಲು; ದ್ರವ್ಯ ಪದಾರ್ಥಗಳು ಮಾತ್ರ. ಈಚೆಗೆ ಚಿಕ್ಕ ಮಗುವಿಗೆ ತಿನ್ನಿಸಬಹುದಾದ ಖಾದ್ಯ ಪದಾರ್ಥಗಳು ಮಾರಾಟಕ್ಕೆ ಬಂದಿವೆ.  ಮಗುವಿಗಾಗಿಯೇ ತಯಾರಿಸಿದ ಬಿಸ್ಕೆಟ್ಗಳು, ಹಣ್ಣು, ತರಕಾರಿಗಳನ್ನು ಅರೆದು ಸಣ್ಣ ಚಮಚದಲ್ಲಿ ಮಗುವಿಗೆ ತಿನ್ನಿಸುವ ತಿನಿಸುಗಳು, ಇವೆಲ್ಲ ರೂಢಿಗೆ ಬಂದಿವೆ.  ಅಲ್ಲದೇ ಮಗುವನ್ನು ಪುಷ್ಟಿಯಾಗಿ ಬೆಳೆಸಬೇಕೆಂಬ ಉದ್ದೇಶದಿಂದ ಪೋಷಕರು ಮನೆಯಲ್ಲಿಯೇ ಹಣ್ಣು ಮತ್ತು ತರಕಾರಿಗಳನ್ನು ಬೇಯಿಸಿ ಅರೆಯುವ ಮೆಶೀನ್ (ಬ್ಲೆಂಡರ್)ನಲ್ಲಿ ಹಾಕಿ ಮಗುವಿಗೆ ತಿನ್ನಿಸುವ ಅಭ್ಯಾಸ ಕೂಡ ಬಳಕೆಗೆ ಬಂದಿದೆ.  ಇದರಿಂದ ಮಗುವಿಗೆ ಹೆಚ್ಚು ಪುಷ್ಟಿಯಾದ ಆಹಾರ ದೊರೆತು ಅದರ ಬೆಳವಣಿಗೆಗೆ ಉತ್ತೇಜನವನ್ನು ಕೊಡುತ್ತದೆ.  ಅಲ್ಲದೇ ಬರಿಯ ಹಾಲನ್ನೇ ಕುಡಿಯುತ್ತಿದ್ದಾಗ ಮಗುವಿಗೆ ಊಟದಲ್ಲಿ ಅಭಿರುಚಿ ಬೆಳೆಯುತ್ತಿರಲಿಲ್ಲ.  ಊಟದ ಸಮಯ ಬಂದಾಗ ಮಗು ಉತ್ಸಾಹ ತೋರಿಸುತ್ತಿರಲಿಲ್ಲ.  ತಾಯಂದಿರಿಗೆ ಇದೊಂದು ತಲೆನೋವು.  ಮಗುವನ್ನು ರಮಿಸಿ, ಪುಸಲಾಯಿಸಿ, ಅಲ್ಲಿ ಇಲ್ಲಿ ಓಡಿಯಾಡಿಸುತ್ತಾ ಹಕ್ಕಿ, ಹೂವು, ಸೂರ್ಯ, ಚಂದ್ರರನ್ನು ತೋರಿಸುತ್ತಾ ಕಥೆ ಹೇಳಿ ಊಟವನ್ನು ಮಗುವಿನ ಹೊಟ್ಟೆಗೆ ಸೇರಿಸುವವೇಳೆಗೆ ತಾಯಿ ಕುಸ್ತಿಮಾಕುಸ್ತಿಮಾಡಿದವಳಂತೆ ಸುಸ್ತಾಗಿ ಬಿಡುತ್ತಾಳೆ.  ಊಟದ ಸಮಯ ಬೇಸರದ ಸಮಯವಾಗುತ್ತದೆ.  ಆದರೆ ಮಗುವಿಗೆ ಹಲ್ಲು ಬರುವ ಮೊದಲೇ ಅದು ಚೂರು ಉಪ್ಪು, ಹುಳಿ, ಸಕ್ಕರೆಗಳ ಸ್ವಾದವನ್ನು ಅನುಭವಿಸಿ ಚಪ್ಪರಿಸಿದ್ದರೆ ಅದಕ್ಕೆ ಊಟದಲ್ಲಿ ಖುಷಿ ಇರುತ್ತದೆ.  ಆಹಾರವನ್ನು ಕಂಡಕೂಡಲೆ ಕೈಹಾಕಿ ಬಾಯಿಗೆ ಹಾಕಿಕೊಳ್ಳುತ್ತದೆ.  ಹೀಗೆ ಆಹಾರದಲ್ಲಿ ಅಭಿರುಚಿಯನ್ನು ಪಡೆದ ಮಗು ಬೆಳೆಯುತ್ತಾ ಬೆಳೆಯುತ್ತಾ ತಿಂಡಿಪೋತನಾಗುತ್ತದೆ.  ಕೈಕಾಲು ಪುಷ್ಟವಾಗಿ ಬೆಳೆದು ಆರು ತಿಂಗಳ ಮಗು ಮಕ್ಕಳ ಕುರ್ಚಿಯಲ್ಲಿ ಭರ್ತಿಯಾಗಿ ಕುಳಿತು ಪುಟ್ಟ ಗಣೇಶನಂತೆ ಮುದ್ದಾಗಿ ಕಾಣಿಸುತ್ತದೆ. ಮುಖ್ಯವಾಗಿ ಮೊದಲ ಎರಡು ವರ್ಷದಲ್ಲಿ ಮಗು ಸಿಕ್ಕಿದ್ದನ್ನೆಲ್ಲ ರುಚಿನೋಡಿ ಆನಂದಿಸುತ್ತದೆ.  ಇದರ ಆನಂದಕ್ಕೆ ಉಂಟಾಗುವ ತಡೆ ಎಂದರೆ ಮಗುವಿಗೆ ಆರೋಗ್ಯ ಕೆಡಬಹುದೆಂಬ ಭಯದಿಂದ ಪೋಷಕರು ಸಾಕು ಎಂದಾಗ.  ಮಗುವಿಗೆ ಎರಡು ವರ್ಷವಾಗುತ್ತಾ ಬಂದಾಗ ಅದಕ್ಕೆ ಊಟದ ದಾಹ ಸ್ವಲ್ಪ ಕಡಿಮೆಯಾಗುತ್ತದೆ.  ಆಗಲೇಬೇಕು.  ಇಲ್ಲದಿದ್ದರೆ ಅದು ಅಡ್ಡಾದಿಡ್ಡಿಯಾಗಿ ಬೆಳೆದು ಒಂದು ದೈತ್ಯಾಕಾರದ ವ್ಯಕ್ತಿ ಆಗುವ ಸಂಭವವಿದೆ. ಕೆನಡದಲ್ಲಿ ನನ್ನ ಪಾಶ್ಚಾತ್ಯ ಸ್ನೇಹಿತ ದಂಪತಿಗಳು ಮೇರಿ ಮತ್ತು ಪಾಲ್ ಎಂಬುವವರಿದ್ದಾರೆ. ಅವರಿಗೆ ಐದು ವರ್ಷದ ಒಬ್ಬ ಮುದ್ದಾದ ಮಗ ಇದ್ದಾನೆ.  ಅವನನ್ನು Junior Paul ಅಥವಾ JP ಯೆಂದು ಕರೆಯುತ್ತಾರೆ.  JP ಬಹಳ ಬುದ್ಧಿವಂತನಾದ ಹುಡುಗ.  ಖುಷಿಗಾರ. ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಾನೆ. ನನ್ನನ್ನು “ಮಿಸೆಸ್ ಮುರಟಿ” ಎಂದು ಸಂಬೋಧಿಸುತ್ತಾನೆ.  JPಗೆ ಐದು ವರ್ಷವಾದಾಗ kindergarten ಗೆ ಸೇರಿಸಿದರು.  JP ಖುಷಿಯಾಗಿ ಸ್ಕೂಲ್ ಗೆ ಹೋಗಿಬರುತ್ತಿದ್ದ.  ಮನೆಗೆ ಬಂದಕೂಡಲೇ ಅಮ್ಮನ ಪಕ್ಕದಲ್ಲಿ ಕುಳಿತು ತಡೆಬಡೆ ಇಲ್ಲದೆ ಮಾತನಾಡಿ ಶಾಲೆಯಲ್ಲಿ ನಡೆದಿದ್ದನ್ನೆಲ್ಲ ಅಮ್ಮನಿಗೆ ವರದಿ ಒಪ್ಪಿಸುತ್ತಿದ್ದ.  ಅವನು ಮನೆಗೆ ಬರುವವೇಳೆಗೆ ಸರಿಯಾಗಿ ಮೇರಿ ತನ್ನ ಮನೆಕೆಲಸಗಳನ್ನು ಮುಗಿಸಿ ಸ್ವಲ್ಪ ವಿರಾಮಕ್ಕಾಗಿ ಕುಳಿತುಕೊಳ್ಳುವ ಸಮಯ.  ಅವಳು ಕುಳಿತು ಮುಗುಳುನಗುತ್ತಾ ಎಲ್ಲವನ್ನೂ ಕೇಳಿಸಿಕೊಳ್ಳುವಳು. ಮಧ್ಯೆ ಮಧ್ಯೆ ಸ್ವಲ್ಪ ಕಣ್ಣನ್ನೂ ಮುಚ್ಚುವಳು.  JP ಒಂದೊಂದು ದಿನ ತಾಯಿಗೆ ಸುಸ್ತಾಗಿದೆ ಎಂದು ಯೋಚಿಸಿ, “ನೀನು ಕಣ್ಣು ಮುಚ್ಚಿ ಮಲಗು. ನಾನು ಮಾತನಾಡುವುದಿಲ್ಲ.” ಎಂದು ತನ್ನ ತುಟಿಗಳನ್ನು ಬಿಗಿಯಾಗಿ ಮುಚ್ಚಿ ತೋರಿಸುತ್ತಾನೆ.  ತಾನೇ ಅವಳ ಕಣ್ಣಿನ ರೆಪ್ಪೆಯಮೇಲೆ ತನ್ನ ಪುಟ್ಟ ಕೈಇಟ್ಟು ಅವಳ ಕಣ್ಣು ಮುಚ್ಚುತ್ತಾನೆ.  ಮೇರಿ ತನ್ನ ಕಣ್ಣನ್ನು ಮುಚ್ಚಿ ನಿದ್ದೆಮಾಡುವವಳಂತೆ ನಟಿಸುತ್ತಾಳೆ.  ತಕ್ಷಣವೇ ಪುಟ್ಟ JP ಕೊಟ್ಟ ಭಾಷೆಯನ್ನು ಮರೆತು ಹರಟೆ ಹೊಡೆಯಲು ಶುರುಮಾಡುತ್ತಾನೆ. ಸ್ಕೂಲ್ ನಲ್ಲಿ JPಗೆ ಒಬ್ಬ ಸ್ನೇಹಿತನಿದ್ದಾನೆ.  ಅವನ ಹೆಸರು ಜಾನ್ (John) ಎಂದು. ಜಾನ್ JP ಗಿಂತ ಆರು ತಿಂಗಳು ದೊಡ್ಡವನು.  JP ಗೆ ಜಾನ್ ಒಬ್ಬ ಹೀರೋ.  ಜಾನ್ಗೆ ಗೊತ್ತಿಲ್ಲದ ವಿಚಾರವೇ ಇಲ್ಲ ಎಂದು ಅವನ ಭಾವನೆ. ಜಾನ್ ಹೇಳಿದ್ದೇ ವೇದವಾಕ್ಯ.  ಪ್ರತಿದಿನವೂ ಸ್ಕೂಲ್ ನಿಂದ ಬಂದಮೇಲೆ ಜಾನ್ ಹೀಗೆ ಹೇಳಿದ ಜಾನ್ ಹಾಗೆ ಹೇಳಿದ ಎಂದು ಮೇರಿಗೆ ವರದಿ ಒಪ್ಪಿಸುತ್ತಾನೆ. ಒಂದು ದಿನ JP ಮನೆಗೆ ಬಂದಕೂಡಲೇ ಅಮ್ಮನ ಪಕ್ಕದಲ್ಲಿ ಕುಳಿತು ತುಂಬಾ ಉತ್ಸಾಹದಿಂದ ನನ್ನ ಸ್ನೇಹಿತ ಜಾನ್ಗೆ ಬಾಯಲ್ಲಿ ಒಂದು ಹಲ್ಲು ಅಲ್ಲಾಡುತ್ತಿದೆ.  ಜಾನ್ ತಾಯಿ ಅವನ ಬಾಯಲ್ಲಿರುವ ಎಲ್ಲ ಹಲ್ಲುಗಳೂ ಒಂದೊಂದಾಗಿ ಬಿದ್ದುಹೋಗುತ್ತವೆ ಎಂದು ಹೇಳಿದಳಂತೆ.  JP ಅಮ್ಮನ ಮುಖವನ್ನು ನೇರವಾಗಿ ನೋಡುತ್ತಾ “ಅದು ಸುಳ್ಳು ರೈಟ್?” ಎಂದು ತಲೆ ಅಲ್ಲಾಡಿಸುತ್ತಾ ಕೇಳಿದ.  ಮೇರಿ ಮಗನ ಮುಖವನ್ನು ದಿಟ್ಟಿಸಿ ನೋಡಿದಳು.  JPಯ ಮುಖ ಮತ್ತು ಕಣ್ಣುಗಳಲ್ಲಿ ಸ್ವಲ್ಪ ಭಯ ಕಾಣಿಸುತ್ತಿತ್ತು.  ಧ್ವನಿಯೂ ಅದನ್ನೇ ಸೂಚಿಸಿತು.  ಮೇರಿ ತಕ್ಷಣವೇ ಅವನನ್ನು ತಬ್ಬಿ ಮುತ್ಟುಕೊಟ್ಟು ದೊಡ್ಡದಾಗಿ ನಗುತ್ತಾ, “ಅದು ಹಾಗಲ್ಲ.  ಮಗು ಚಿಕ್ಕದಾಗಿದ್ದಾಗ ಅದು ಬರೀ ಮೃದುವಾಗಿರುವ ಪದಾರ್ಥಗಳನ್ನು ತಿನ್ನುತ್ತದೆ.  ಹಾಲನ್ನು ಕುಡಿಯುತ್ತದೆ.  ಆಗ ಅದಕ್ಕೆ ಬರೀ  ಮೆದುಪದಾರ್ಥಗಳನ್ನು ತಿನ್ನುವ ಹಲ್ಲು ಬಾಯಿನಲ್ಲಿರುತ್ತದೆ.  ಆ ಹಲ್ಲಿಗೆ ಮಿಲ್ಕ್ ಟೀತ್  (ಹಾಲು ಕುಡಿಯುವ ಹಲ್ಲು ) ಎಂದು ಹೆಸರು.   ಆದರೆ ನೀನು ಈಗ ದೊಡ್ಡವರು ತಿನ್ನುವ ಎಲ್ಲ ಆಹಾರವನ್ನೂ ತಿಂದು ಕಟ್ಟುಮಸ್ತಾಗಿ ಶಕ್ತಿಶಾಲಿಯಾಗಿ ಬೆಳೆಯಬೇಕು. ನೀನು ನಿನ್ನ ಡ್ಯಾಡಿಗಿಂತ ಎತ್ತರವಾಗಿ ಬೆಳೆಯಬೇಕು.  ಬಾಸ್ಕೆಟ್ ಬಾಲ್, ವಾಲಿಬಾಲ್ ಎಲ್ಲ ಆಡಬೇಕಲ್ಲವೇ?  ಅದರಿಂದಲೇ ಈ ಬೇಬಿ ಹಲ್ಲುಗಳು ಬಿದ್ದಕೂಡಲೇ ದಂತದೇವತೆಯು ನಿನಗಾಗಿಯೇ ಮಾಡಿರುವ ಮುತ್ತಿನಂತೆ ಅಂದವಾಗಿರುವ ಹಲ್ಲುಗಳನ್ನು ಕೊಡುತ್ತಾಳೆ. ಎಂದು ತುಂಬಾ ಪ್ರೀತಿಯಿಂದ ವಿವರಿಸಿದಳು.  ಕೂಡಲೇ JP ಕುಳಿತಲ್ಲಿಂದ ಎದ್ದು ನಿಂತು ಕುಪ್ಪಳಿಸಿ ಕೈಯನ್ನು ಆಕಾಶದೆಡೆಗೆ ಎತ್ತಿ ನಾನು ಇಷ್ಟು ಎತ್ತರ ಬೆಳೆಯುತ್ತೇನೆ, ಹೀಗೆ ಬಾಸ್ಕೆಟ್ ಬಾಲ್ ಆಡುತ್ತೇನೆ ಎಂದು ಕೈ ಬೀಸಿ ಎದೆ ತಟ್ಟಿಕೊಂಡ.  ಮೇರಿಗೆ  ಹಿಡಿಸಲಾರದಷ್ಟು ಸಂತೋಷವಾಯಿತು.  ಅವಳು ಮಗನನ್ನು ಎತ್ತಿ ಮುದ್ದಾಡಿದಳು. ಆಮೇಲೆ JP ಸ್ಕೂಲ್ನಿಂದ ಮನೆಗೆ ಬಂದಮೇಲೆ ಪ್ರತಿದಿನವೂ ಜಾನ್ ನ ಹಲ್ಲಿನ ಕಥೆಯೇ.  ಈ ದಿನ ಜಾನ್ ಹಲ್ಲಿನಲ್ಲಿ ಸ್ವಲ್ಪ ರಕ್ತ ಬಂತು.  ಇನ್ನೊಂದು ದಿನ ಜಾನ್ ಕೈ ಬೆರಳನ್ನು ಬಾಯಲ್ಲಿ ಹಾಕಿ ಹಲ್ಲನ್ನು ಬೀಳಿಸುವುದಕ್ಕೆ ಪ್ರಯತ್ನಿಸಿದ.  ಆದರೆ ಟೀಚರ್ “ಹಾಗೆ ಮಾಡಬಾರದು.  ಅದಾಗಿಯೇ ಬೀಳುವವರೆಗೆ ಕಾಯಬೇಕು” ಎಂದರು. ಹೀಗೆ ಎರಡುವಾರ ಕಳೆದಮೇಲೆ ಜಾನ್ ನ ಹಲ್ಲು ಬಿದ್ದಿತು.  ಅವನು ಅದನ್ನು ತನ್ನ ಕೈನಲ್ಲಿ ಹಿಡಿದುಕೊಂಡು ಟೀಚರ್ ಬಳಿಗೆ ಬಂದು ತೋರಿಸಿದ.  ಆಕೆ ಅದನ್ನು ಒಂದು ಪೇಪರ್ ಕವರಿನಲ್ಲಿ ಹಾಕಿ “ನೀನು ಇದನ್ನು ನಿನ್ನ ತಾಯಿಯ ಕೈನಲ್ಲಿ ಜೋಪಾನವಾಗಿ ಕೊಡು.  ಈ ಕವರನ್ನು ನಿನ್ನ ದಿಂಬಿನ ಕೆಳಗೆ ಇಟ್ಟು ಮಲಗಬೇಕು.  ನೀನು ನಿದ್ದೆ ಮಾಡುತ್ತಿರುವಾಗ ದಂತದೇವತೆ ಬಂದು ಅದನ್ನು ತೆಗೆದುಕೊಂಡು ಹೋಗುತ್ತಾಳೆ.  ನಿನ್ನ ತಲೆದಿಂಬಿನ ಕೆಳಗೆ ದುಡ್ಡು ಇಡುತ್ತಾಳೆ.  ನೀನು ನಿನ್ನ ಬೇಬೀ ಹಲ್ಲನ್ನು ಚೆನ್ನಾಗಿ ನೋಡಿಕೊಂಡು ಅವಳಿಗೆ ವಾಪಸ್ಸು ತಲಪಿಸಿದ್ದಕ್ಕೆ ಅವಳಿಗೆ ಸಂತೋಷವಾಗಿದೆ ಎಂದು ಅರ್ಥ” ಎಂದು ಹೇಳಿದಳು.  ಇದನ್ನೆಲ್ಲಾ ಕಣ್ಣಾರೆ ನೋಡಿದ JP ಗೆ ಆಶ್ಚರ್ಯಯವೋ ಆಶ್ಚರ್ಯ.  ದಂತದೇವಿ ದುಡ್ಡು ಕೊಡುತ್ತಾಳೆಯೇ?  ಹಾಗಾದರೆ ನನ್ನ ಹಲ್ಲೂ ಬೇಗ ಬಿದ್ದರೆ ನನಗೂ ದುಡ್ಡು ಸಿಗುತ್ತದೆ ಎಂದು ಖುಷಿಪಟ್ಟ.  ಸ್ಕೂಲ್ನಿಂದ ಮನೆಗೆ ಓಡಿಬಂದು “ನನ್ನ ಹಲ್ಲು ಬಿದ್ದಾಗ ನನಗೂ ದುಡ್ಡು ಸಿಗುತ್ತದೆಯೇ ಎಂದು ಮೇರಿಯ ಮುಖವನ್ನು ಕಾತರದಿಂದ ನೋಡಿದ.  ಅವಳು “ಖಂಡಿತ ದಂತದೇವಿ ಎಲ್ಲರಿಗೂ ದುಡ್ಡು ಕೊಡುತ್ತಾಳೆ.  ನೀನು ಅವಳು ಕೊಟ್ಟ ಹಲ್ಲನ್ನು ಅವಳಿಗೆ ಹಿಂತಿರುಗಿಸುತ್ತಿರುವುದು ಅವಳಿಗೆ ತುಂಬಾ ಸಂತೋಷವನ್ನುಂಟು ಮಾಡುತ್ತದೆ.  ಅದಕ್ಕೇ ಎಲ್ಲ ಮಕ್ಕಳಿಗೂ ದುಡ್ಡು ಸಿಕ್ಕುತ್ತದೆ.” ಎಂದು ಪೂರ್ಣ ವಿಶ್ವಾಸದಿಂದ ಹೇಳಿದಳು.  ಈಗ  JP ಗೆ ಹಲ್ಲು ಬೀಳುವ ಭಯ ಹೊರಟುಹೋಯಿತು.  ಎಷ್ಟುಬೇಗ ಹಲ್ಲು ಬಿದ್ದರೆ ಅಷ್ಟು ಒಳ್ಳೆಯದು.  ನನಗೆ ದಂತದೇವಿಯಿಂದ ದುಡ್ಡು ಸಿಗುತ್ತದೆ ಮತ್ತು ಅವಳಿಗೆ ನನ್ನ ವಿಚಾರದಲ್ಲಿ  ಸಂತೋಷವಾಗುತ್ತದೆ ಎಂದು ನಿರೀಕ್ಷಿಸತೊಡಗಿದ. ಹೀಗೆ ಒಂದೆರಡು ವಾರ ಕಳೆದಮೇಲೆ JP ಒಂದು ದಿನ ಸ್ಕೂಲ್ನಿಂದ ವಾಪಸ್ಸು ಬರುವಾಗ ಬಿರುಗಾಳಿಯಂತೆ ಓಡಿಬಂದು ಅಮ್ಮನ ಮೇಲೆ ಬಿದ್ದು   ತಬ್ಬಿಕೊಂಡ.  ಅವನು ಬಿದ್ದ ರಭಸಕ್ಕೆ ಮೇರಿ ಹಿಂದಕ್ಕೆ ವಾಲಿದಳು.  ಕಾರಣ ಇಷ್ಟೇ. JPಯ ಹಲ್ಲು ಅಲ್ಲಾಡುತ್ತಿದೆ.  ಆದಿನ JP ಎಲ್ಲರಿಗೂ ತನ್ನ ಅಲ್ಲಾಡುತ್ತಿರುವ ಹಲ್ಲನ್ನು ಮತ್ತೆ ಮತ್ತೆ ಅಲ್ಲಾಡಿಸಿ ತೋರಿಸಿದ.  ಸಂಜೆಎಲ್ಲಾ ಹಲ್ಲಿನ ವಿಚಾರವೇ.  ಅದು ಬಿದ್ದುಹೋಗಿ ಹೊಸಹಲ್ಲು ಬರುವ ವಿಚಾರವಾಗಿ JP, ಮೇರಿ ಮತ್ತು ಪಾಲ್ ಯಥೇಚ್ಚವಾಗಿ ಚರ್ಚೆ ಮಾಡಿದರು.  ಮೇರಿ ಗೂಗಲ್ನಲ್ಲಿ ಸಂಶೋಧನೆ ಮಾಡಿ JP ಮತ್ತು ಪಾಲ್ ಮುಂದೆ ಮಾಹಿತಿಯನ್ನು  ಓದಿದಳು.  ಎಲ್ಲರಿಗೂ ಖುಷಿ ಆಯಿತು.  ಆಮೇಲೆ JP ದಿನವೂ ಹಲ್ಲನ್ನು ಮುಟ್ಟುವುದು, ಅಲ್ಲಾಡಿಸುವುದು ಶುರು ಮಾಡಿದ.  ಮೇರಿ ಸ್ವಲ್ಪ ಧ್ವನಿ ಎತ್ತರಿಸಿ “JP!! ನೀನು ಸದಾ ಹಲ್ಲನ್ನು ಮುಟ್ಟುತ್ತಿರುವುದು ಸರಿಯಲ್ಲ.  ಅದನ್ನು ನಿಲ್ಲಿಸು” ಎಂದು ಖಚಿತವಾದ ಧ್ವನಿಯಲ್ಲಿ ಹೇಳಿದಳು.  ಅದೂ ಸಫಲವಾಗದಿದ್ದಾಗ, “ನೀನು ಅಲ್ಲಾಡಿಸಿ ಹಲ್ಲನ್ನು ಬೀಳಿಸಿದರೆ ದಂತ ದೇವತೆಗೆ ಇಷ್ಟವಾಗುವುದಿಲ್ಲ.  ಆ ಹಲ್ಲು ಬಿದ್ದಾಗ ಅವಳು ನಿನಗೆ ದುಡ್ಡು ಕೊಡುವುದಿಲ್ಲ.” ಎಂದು ಬೆದರಿಸಿದಳು.  ಅಂತೂ ಇಂತೂ JPಯ ಹಲ್ಲು ಸಡಿಲವಾಗಿ ಒಂದೇ ಒಂದು ಎಳೆಯಲ್ಲಿ ಅವನ ಒಸಡಿಗೆ ಅಂಟಿಕೊಂಡಿತ್ತು.  JP ಸ್ಕೂಲ್ಗೆ ಹೋಗುವಾಗ “ಅಮ್ಮ ಈದಿನ ನನ್ನ ಹಲ್ಲು ಬೀಳುತ್ತದೆ.  ನೋಡು ಅದು ಒಂದು ಚೂರು ಮಾತ್ರ ಅಂಟಿಕೊಂಡಿದೆ ಎಂದು ಬಾಯಿಬಿಟ್ಟು ತನ್ನ ಹಲ್ಲನ್ನು ಮೇರಿಗೆ ತೋರಿಸಿದ.  ಅವಳು ಮುಗುಳು ನಕ್ಕು, “ಅದನ್ನ ಮುಟ್ಟಬೇಡ” ಎಂದು ಎಚ್ಚರಿಸಿದಳು. JPಯ ಸ್ಕೂಲ್ನಲ್ಲಿ ಬೆಳಿಗ್ಗೆ 10:30ಕ್ಕೆ ಆಟಕ್ಕೆ ಬಿಡುವು.  ಬೆಲ್ ಆದಕೂಡಲೇ ಎಲ್ಲ ಮಕ್ಕಳೂ ಹೊರಗೆ ಓಡಿಹೋಗಿ ಆಟದ ಮೈದಾನದಲ್ಲಿ ಜೂಟಾಟ, ಮೆಟ್ಟಲು ಹತ್ತುವುದು, ಜಾರೋಬಂಡೆ, sandbox (ಮರಳು ಪೆಟ್ಟಿಗೆ), ಇವುಗಳಲ್ಲಿ ಆಟವಾಡಿ ಮತ್ತೆ ಬೆಲ್ ಆದಕೂಡಲೇ ಒಳಕ್ಕೆ ಹೋಗಬೇಕು.  ಬೆಲ್ ಶಬ್ದ ಕೇಳಿದಕೂಡಲೇ ಎಲ್ಲ ಮಕ್ಕಳೂ ಹಿಂದಿನಬಾಗಿಲಿಗೆ ಹೋಗಿ ಅಲ್ಲಿ ಟೀಚರ್ ಅಟ್ಟೆಂಡನ್ಸ್ ತೆಗೆದುಕೊಂಡು ಮಕ್ಕಳನ್ನು ಒಳಕ್ಕೆ ಬಿಡುತ್ತಾಳೆ.  ಈದಿನ ಮಾತ್ರ JP ಬಾಗಿಲಿನ ಕಡೆ ಓಡಲಿಲ್ಲ.  ಟೀಚರ್ “ಯಾಕೆ JP ಬಂದಿಲ್ಲ” ಎಂದು ವಿಚಾರಿಸಿದಾಗ JPಯ ಸ್ನೇಹಿತ

ಗೊರೂರು ವಸಂತಿ ಮೂರ್ತಿ (ಕೆನಡಾ) ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ ಅವರ ಬರಹ “ದಂತ ದೇವತೆ” Read Post »

ಇತರೆ

“ಬದಲಾವಣೆ ನಮ್ಮಿಂದಲೇ”ವಿಶೇಷ ಲೇಖನ ಡಾ.ಪಿ.ಸುಮತಿ

ವಿಶೇಷ ಸಂಗಾತಿ ಡಾ.ಪಿ.ಸುಮತಿ “ಬದಲಾವಣೆ ನಮ್ಮಿಂದಲೇ” “ನೀನು ಜಗತ್ತಿನಲ್ಲಿ ಯಾವ ಬದಲಾವಣೆಯನ್ನು ನೋಡಬಯಸುವೆಯೋ, ಮೊದಲು ಆ ಬದಲಾವಣೆ ನಿನ್ನಲ್ಲೇ ಆಗಲಿ.”ಎಂಬ ಮಹಾತ್ಮ ಗಾಂಧೀಜಿಯವರ ಮಾತು ಬದಲಾವಣೆ ನಮ್ಮಿಂದಲೇ ಎಂಬ ಮಾತನ್ನು ಪುಷ್ಠಿಕರಿಸುತ್ತದೆ . ಬದಲಾವಣೆ’ ಎಂಬುದು ಜಗತ್ತಿನ ಶಾಶ್ವತ ನಿಯಮ. ಆದರೆ, ಬಾಹ್ಯ ಜಗತ್ತಿನ ಬದಲಾವಣೆಯ ಮುನ್ನ ವ್ಯಕ್ತಿಯ ಅಂತರಂಗದ ಬದಲಾವಣೆ ಅತ್ಯಂತ ಮುಖ್ಯವಾದುದು. “ಬದಲಾವಣೆ ನಮ್ಮಿಂದಲೇ” ಎಂಬ ಪರಿಕಲ್ಪನೆಯು ಆಳವಾದ ತಾತ್ವಿಕ ತಳಹದಿಯನ್ನು ಹೊಂದಿರುವ ಜೀವನ ದರ್ಶನವಾಗಿದೆ. ಸಮಾಜವೆಂಬುವುದು ನಿಂತ ನೀರಲ್ಲ. ಪ್ರತಿ ದಿನ ದಿನವೂ, ಕ್ಷಣ ಕ್ಷಣವೂ ಹೊಸ ಹೊಸ ಬದಲಾವಣೆಗಳು ಆಗುತ್ತಲೇ ಇರಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆಲ್ಲ,ಮನುಷ್ಯನ ವಿಚಾರ ಶಕ್ತಿಯೂ ಬೆಳೆದು, ಇಂದು ಜಗತ್ತು ಕ್ಷಣ ಕ್ಷಣವೂ ಬದಲಾಗುತ್ತಿದೆ, ಬದಲಾವಣೆಯ ಜಗತ್ತಿನೊಂದಿಗೆ ನಾವು ಕೂಡ ವೇಗವಾಗಿ ಹೆಜ್ಜೆ ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ಬದಲಾವಣೆಯನ್ನು ಮಾಡಬೇಕಾಗಿದೆ, ಬದಲಾವಣೆಗೆ ನಾವು ಹೊಂದಿಕೊಂಡು ಬದುಕಬೇಕಾಗಿದೆ. ಅಂದರೆ ಬದಲಾಗುತ್ತಿರುವ ಸಮಾಜದ ಜೊತೆ ಜೊತೆಯಲಿ ಹೆಜ್ಜೆ ಹಾಕಿಕೊಂಡು ಮುನ್ನಡೆಯುವಂತಹ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು.ಇದು ಒಂದು ರೀತಿಯ ಬದಲಾವಣೆಯಾದರೆ,ಇನ್ನೊಂದು ರೀತಿಯ ಬದಲಾವಣೆಯಿದೆ ಅದು ನಮ್ಮ ಮಾನಸಿಕವಾದ ಬದಲಾವಣೆ ಅರ್ಥಾತ್ ತ್ಯಾಗ ಮಾಡಬೇಕಾದ ನಮ್ಮತನ. ಮನುಷ್ಯ ಸಂಗ ಜೀವಿ, ಸಮಾಜ ಜೀವಿ. ಸಮಾಜದಲ್ಲಿ ಕೂಡು ಜೀವನ ನಡೆಸುತ್ತಿರುವಾಗ ಭಿನ್ನಾಭಿಪ್ರಾಯಗಳು ಬಂದೇ ಬರುತ್ತವೆ. ಅಂತಹ ಸಂದರ್ಭದಲ್ಲಿ ಸಮಷ್ಟಿಯ ಸುಖಕ್ಕಾಗಿ ನಾವು ನಮ್ಮತನವನ್ನು ತ್ಯಾಗ ಮಾಡಬೇಕಾಗುತ್ತದೆ. ಅಂದರೆ ನಾವು ಬದಲಾಗಬೇಕಾಗುತ್ತದೆ. ಬದಲಾವಣೆ ನಮ್ಮಿಂದಲೇ ಆಗಬೇಕಾಗಿದೆ. ಬುದ್ಧಿವಂತನಾದ ಮನುಜ ಇನ್ನೊಬ್ಬರಲ್ಲಿ ಹುಳುಕು ಹುಡುಕುವುದರಲ್ಲಿ ಕಾಲ ಕಳೆಯುತ್ತಾನೆ.ಆದರೆ ತನ್ನಲ್ಲಿರುವ ತಪ್ಪುಗಳನ್ನು ಅರಿತುಕೊಂಡು ತಿದ್ದಿಕೊಳ್ಳುವಲ್ಲಿ ಮನಸ್ಸು ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಬದಲಾವಣೆ ನನ್ನಿಂದಲೇ ಎಂಬ ಮಾತು ಅರ್ಥವನ್ನು ಪಡೆದುಕೊಳ್ಳುತ್ತದೆ.ಪ್ರತಿಯೊಬ್ಬರೂ ಪರಿಸ್ಥಿತಿ ಬದಲಾವಣೆ ಆಗಬೇಕೆಂದೂ, ಇನ್ನೊಬ್ಬರು ಬದಲಾಗಲಿ ಎಂದು ಕಾದು ಕುಳಿತರೆ, ಪರಿಸ್ಥಿತಿ ಬದಲಾಗದು. ಅದರ ಬದಲಾಗಿ ಬದಲಾವಣೆ ನನ್ನಿಂದಲೇ ಆಗಲಿ ಎಂದು ಎಲ್ಲರೂ ತಾವು ಬದಲಾದರೆ, ಪರಿಸ್ಥಿತಿ ಖಂಡಿತ ಬದಲಾಗುತ್ತದೆ.ನಾವು ಯೋಚಿಸುವ ರೀತಿ, ಮಾಡುವ ಕೆಲಸ ಮತ್ತು ನಮ್ಮ ನಡವಳಿಕೆಯಲ್ಲಿ ಬದಲಾವಣೆ ತಂದುಕೊಂಡಾಗ ಮಾತ್ರ ಸಮಾಜದಲ್ಲಿ ದೊಡ್ಡ  ಬದಲಾವಣೆ ಸಾಧ್ಯ. ಒಂದು ಸಣ್ಣ ಬದಲಾವಣೆಯೂ ಸಹ ನಮ್ಮಿಂದಲೇ ಆರಂಭವಾಗಬೇಕು. ನಾವು ನಮ್ಮ ಜವಾಬ್ದಾರಿಗಳನ್ನು ಅರಿತು ನಡೆದರೆ, ಸುಂದರ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ.”ಯದ್ಭಾವಂ ತದ್ಭವತಿ” ಅಂದರೆ ನಾವು ಹೇಗೋ, ಜಗತ್ತು ನಮಗೆ ಹಾಗೆಯೇ ಕಾಣುತ್ತದೆ. ನಾವು ಸಮಾಜದಲ್ಲಿ ಶಾಂತಿ, ಪ್ರಾಮಾಣಿಕತೆ ಮತ್ತು ಪ್ರೀತಿಯನ್ನು ನೋಡಬಯಸಿದರೆ, ಮೊದಲು ಆ ಗುಣಗಳು ನಮ್ಮ ಆತ್ಮದಲ್ಲಿ ಜಾಗೃತಗೊಳ್ಳಬೇಕು. ವ್ಯಕ್ತಿಯೊಬ್ಬನ ಮನಸ್ಸಿನ ಪರಿವರ್ತನೆಯೇ ಸಮಾಜದ ಪರಿವರ್ತನೆಗೆ ಮೊದಲ ಹೆಜ್ಜೆಯಾಗಬೇಕು. ವ್ಯವಸ್ಥೆಯನ್ನು ಅಥವಾ ಇತರರನ್ನು ದೂಷಿಸುವುದು ಅತ್ಯಂತ ಸುಲಭದ ಕೆಲಸ. ಆದರೆ, ತಾತ್ವಿಕ ದೃಷ್ಟಿಕೋನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವ್ಯಕ್ತಿತ್ವಕ್ಕೆ ತಾನೇ ಜವಾಬ್ದಾರನಾಗಿರುತ್ತಾನೆ. ನಾವು ಮಾಡುವ ಪ್ರತಿಯೊಂದು ಸಣ್ಣ ಸತ್ಕಾರ್ಯವೂ ಜಗತ್ತಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. “ನಾನೊಬ್ಬ ಬದಲಾದರೆ ಏನು ಪ್ರಯೋಜನ?” ಎಂಬ ನಕಾರಾತ್ಮಕ ಚಿಂತನೆಯನ್ನು ಬಿಟ್ಟು, ಬದಲಾವಣೆಯ ನನ್ನ ಕರ್ತವ್ಯವನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ನಿಜವಾದ ಧರ್ಮ. “ಬದಲಾವಣೆ ಜಗತ್ತಿನ ನಿಯಮ” ಎಂಬುದು ಎಷ್ಟು ಸತ್ಯವೋ, “ಆ ಬದಲಾವಣೆಯ ಜವಾಬ್ದಾರಿ ನಮ್ಮದು” ಎಂಬುದು ಅಷ್ಟೇ ಸತ್ಯ. ಸಮಾಜದಲ್ಲಿ ಬದುಕುವ ಮನುಷ್ಯ ವ್ಯವಸ್ಥೆಯ ಲೋಪದೋಷಗಳನ್ನು, ಸಮಾಜದ ನೈತಿಕ ಅಧಃಪತನವನ್ನು ಕಂಡು ನಿರಂತರವಾಗಿ ದೂರುತ್ತಿರುತ್ತಾನೆ. ಆದರೆ, ಇಡೀ ವ್ಯವಸ್ಥೆಯನ್ನು ಸರಿಪಡಿಸುವ ಶಕ್ತಿ ಮತ್ತು ನೈತಿಕ ಹಕ್ಕು ಪ್ರತಿಯೊಬ್ಬ ವ್ಯಕ್ತಿಗಿದೆ ಎಂಬುದನ್ನು ಅರಿತುಕೊಳ್ಳಬೇಕು. ಪ್ರತಿಯೊಬ್ಬರೂ ತನ್ನ ಸ್ವಂತ ಜೀವನದಲ್ಲಿ ಬದಲಾವಣೆಯನ್ನು ತಂದುಕೊಂಡಾಗ ಮಾತ್ರ ಸಮಾಜಿಕ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ. ಶರಣರು ಹೇಳುವಂತೆ “ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ” ಒಟ್ಟಿಗೆ ಸಾಗಿದಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ನಮ್ಮ ಅಹಂಕಾರ, ಜಾತಿವಾದ ಮತ್ತು ಮೂಢನಂಬಿಕೆಗಳನ್ನು ನಾವೇ ತೊರೆದು ನಡೆದಾಗ, ಸಮಾಜ ತಾನಾಗಿಯೇ ಪರಿವರ್ತನೆ ಹೊಂದುತ್ತದೆ. ಯಾವುದೇ ವ್ಯವಸ್ಥೆಯನ್ನು ನಿಂದಿಸುವುದರಿಂದ ಕಹಿತನ ಹೆಚ್ಚುತ್ತದೆಯೇ ಹೊರತು, ಪರಿಹಾರ ಸಿಗದು. ನಮ್ಮ ಆಲೋಚನೆಗಳು, ಮಾತುಗಳು ಮತ್ತು ಕರ್ಮಗಳನ್ನು ನಾವೇ ಜಾಗೃತವಾಗಿ ಗಮನಿಸಿ, ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದೇ ಜಗತ್ತನ್ನು ತಿದ್ದುವ ಮೊದಲ ಹೆಜ್ಜೆಯಾಗಿದೆ. ಸಮಾಜ ಎಂಬುದು ವ್ಯಕ್ತಿಗಳ ಸಮೂಹ.ಬಿಂದುಗಳೇ ಸೇರಿ ಸಿಂಧುವಾಗುವಂತೆ, ವೈಯಕ್ತಿಕ ನೈತಿಕತೆಯೇ ಸಾಮಾಜಿಕ ವ್ಯವಸ್ಥೆಯಾಗಿ ಮಾರ್ಪಡುತ್ತದೆ. ಪ್ರಪಂಚದಲ್ಲಿ ಕ್ರಾಂತಿಗಳು ಕೇವಲ ಯುದ್ಧಭೂಮಿಯಲ್ಲಿ ಆಗಲಿಲ್ಲ. ಅವು ಮೊದಲು ಮನುಷ್ಯನ ಆಲೋಚನಾ ಲಹರಿಯಲ್ಲಿ ಮೊಳಕೆಯೊಡೆಯುತ್ತವೆ. ಆದ್ದರಿಂದ, ಸಮಾಜದ ಉದ್ಧಾರಕ್ಕೆ ಕಾಯುವ ಬದಲು, ನಮ್ಮ ಅಂತರಂಗದ ದೀಪವನ್ನು ಮೊದಲು ಬೆಳಗಿಸೋಣ. ಬದಲಾವಣೆ ನಮ್ಮಿಂದಲೇ ಆರಂಭವಾಗಲಿ. ಡಾ.ಸುಮತಿ ಪಿ

“ಬದಲಾವಣೆ ನಮ್ಮಿಂದಲೇ”ವಿಶೇಷ ಲೇಖನ ಡಾ.ಪಿ.ಸುಮತಿ Read Post »

ಇತರೆ

“ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಸಾಹಿತ್ಯ ಸರಣಿ  ವಂಶವೃಕ್ಷ ನಾಟಕ” ಗೊರೂರು ಅನಂತರಾಜು

ರಂಗ ಸಂಗಾತಿ ಗೊರೂರು ಅನಂತರಾಜು “ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಸಾಹಿತ್ಯ ಸರಣಿ  ವಂಶವೃಕ್ಷ ನಾಟಕ” ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ  ಜಿಲ್ಲೆಯ ಹೆಸರಾಂತ ಸಾಹಿತಿಗಳಾದ ಡಾ. ಗೊರೂರು, ಡಾ.ಎಸ್.ಎಲ್. ಭೈರಪ್ಪ, ಶ್ರೀಮತಿ ಭಾನು ಮುಷ್ತಾಕ್ ಅವರ ಸಾಹಿತ್ಯ ಸಹವಾಸ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಸಂಘಟಿಸಿತ್ತು. ಈ ಮೂವರು ಸಾಹಿತಿಗಳ ಸಾಹಿತ್ಯವನ್ನು ಮೂರು ವಿಭಿನ್ನ ನೆಲೆಯಲ್ಲಿ ಪ್ರೇಕ್ಷಕ ಪ್ರಭುಗಳಿಗೆ  ತಲುಪಿಸಲು ಸಾಫಲ್ಯ ಸಾಧಿಸಿತು. ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸಾಹಿತಿಗಳಷ್ಟೇ ಅಗಿ ಉಳಿಯಲಿಲ್ಲ. ಸ್ವಾತಂತ್ರö್ಯ ಹೋರಾಟದಲ್ಲಿ ಗಾಂಧಿ ಪ್ರಭಾವಕ್ಕೆ ಒಳಗಾದವರು. ಆ ದಿಶೆಯಲ್ಲಿ ಬದುಕು ರೂಪಿಸಿಕೊಂಡವರು. ತಾವು ಜನ್ಮ ತಳೆದ ಊರು ನದಿಯನ್ನು ಆವರಿಸಿಕೊಂಡು  ಗ್ರಾಮ್ಯ ಬದುಕನ್ನು ಪ್ರಬಂಧ ಸಾಹಿತ್ಯದಲ್ಲಿ ಹಾಸ್ಯ ಪ್ರಜ್ಞೆಯಲ್ಲಿ ಚಿತ್ರಿಸಿದವರು. ಆ ಕಾಲದ  ಬದುಕನ್ನು ಇಂದಿಗೆ ಹೋಲಿಸಿ   ಮಾತನಾಡಿದವರು ಡಾ.ರಶ್ಮಿ ಪಿ. ಅವರು. ಇವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಪು.ತಿ.ನರಸಿಂಹಾಚಾರ್ ಅವರ ಲಲಿತ ಪ್ರಬಂಧಗಳು ತೌಲನಿಕ ಅಧ್ಯಯನ ಪ್ರಬಂಧಕ್ಕೆ ಪಿಹೆಚ್‌ಡಿಯನ್ನು ಇದೇ ಆಗಸ್ಟ್ ೧೭ರಂದು ಪಡೆದಿದ್ದಾರೆ.  ಇವರು ಗೊರೂರರ ಸಾಹಿತ್ಯ ಸಮಕಾಲೀನ ದೃಷ್ಟಿಕೋನ ವಿಷಯವಾಗಿ ಪ್ರಬಂಧ ಮಂಡಿಸುವಲ್ಲಿ  ಪ್ರಚಲಿತ ಬದುಕನ್ನು ನೋಡಿದ್ದಾರೆ ನಿಜ. ಆ ಕಾಲಘಟ್ಟದ  ಬದುಕನ್ನು ಓದಿ ತಿಳಿದಿದ್ದಾರೆ ಖರೆ. ನಮ್ಮೂರ ಜನರನ್ನು ಬಂದು ಮಾತನಾಡಿಸಿ  ಮಾತನಾಡಿದ್ದರೆ ಚೆಂದಿತ್ತು ಎನಿಸಿತು.  ಶ್ರೀಮತಿ ವಾಸಂತಿಮೂರ್ತಿ  ಅವರು ಹೊಸ ತಲೆಮಾರಿಗೆ ಗೊರೂರರ ಸಾಹಿತ್ಯ ಕೆಲವು ಆಲೋಚನೆಗಳು ಮತ್ತು ಯೋಜನೆಗಳು ವಿಷಯದಲ್ಲಿ ಮಾತನಾಡಿದ ವಿಡಿಯೋವನ್ನು  ಪ್ರದರ್ಶಿಸಲಾಯಿತು. ಮೇಡಂ ಕೆನಡದಲ್ಲಿ ನೆಲೆಸಿದ್ದಾರೆ. ಮರ‍್ನಾಲ್ಕು ವರ್ಷಗಳಿಂದ ಡಾ.ಗೊರೂರರ ಜನ್ಮ ದಿನ ಜುಲೈ೪ರ ಸಂಧರ್ಭ  ಭಾರತಕ್ಕೆ ಬಂದು  ಡಾ.ಗೊರೂರು ಸಾಹಿತ್ಯ ಗೋಷ್ಟಿಗಳಲ್ಲಿ  ಭಾಗಿಯಾಗಿದ್ದಾರೆ.  ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ ಪ್ರತಿಷ್ಠಾನ ಟ್ರಸ್ಟ್ ಇತ್ತೀಚಿಗೆ ನೋಂದಣಿ ಕೂಡ ಮಾಡಿಸಿದ್ದಾರೆ. ಇವರು ತಮ್ಮ ತಂದೆ ಜೊತೆಗಿನ ಒಡನಾಟ ನೆನಪಿಸಿಕೊಂಡರು ಜೊತೆಗೆ  ಸರ್ಕಾರಕ್ಕೆ ಹೀಗೆ ಮನವಿ ಮಾಡಿದರು. ಹಾಸನ ಹೇಮಗಂಗೋತ್ರಿಯಲ್ಲಿ  ಗೊರೂರು ಅಧ್ಯಯನ ಪೀಠ ಸ್ಥಾಪಿಸಿ, ಬೆಂಗಳೂರು ಗೊರೂರರು ವಾಸವಿದ್ದ  ರಾಜಾಜಿನಗರ ಮೆಟ್ರೊ ಸ್ಟೇಷನ್‌ಗೆ ಗೊರೂರರ ಹೆಸರು ಇಡಬೇಕೆಂದು ಮತ್ತು  ಗೊರೂರು ಮನೆಯನ್ನು ಸರ್ಕಾರ ಪಡೆದು  ಸ್ಮಾರಕ ಮಾಡಲೆಂಬುದು ಅವರ ಬೇಡಿಕೆ ಆಗಿತ್ತು.  ಶ್ರೀಮತಿ ಭಾನುಮುಷ್ತಾಕ್ ಲಂಕೇಶ್ ಪತ್ರಿಕೆ ವರದಿಗಾರ್ತಿ ಜೊತೆಗೆ  ವಕೀಲ ವೃತ್ತಿ   ನಿರ್ವಹಿಸಿದವರು.  ಇವರ ಎದೆಯ ಹಣತೆ ಕಥಾ ಸಂಕಲನವು ಮಡಿಕೇರಿ ದೀಪಾ ಭಾಸ್ತಿ ಇವರಿಂದ ಇಂಗ್ಲೀಷ್‌ಗೆ ಹಾರ್ಟ್ ಲ್ಯಾಂಪ್ ಹೆಸರಿನಲ್ಲಿ ಅನುವಾದವಾಗಿ ಈ ಕೃತಿಗೆ ೨೦೨೫ರ ಪ್ರತಿಷ್ಠಿತ ಅಂತರರಾಷ್ಟಿçÃಯ ಬೂಕರ್ ಪ್ರಶಸ್ತಿ ಲಭಿಸಿದೆ. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಸಿಕ್ಕ ದೊಡ್ಡ ಗೌರವ.   ಗೋಷ್ಠಿ ೧ರಲ್ಲಿ ಶ್ರೀಮತಿ ಬಾನು ಮುಷ್ತಾಕ್ ಅವರೊಂದಿಗೆ ಡಾ.ರೇಖಾದತ್ತ, ದಯಾನಂದ ಸಾಗರ್ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಸಂವಾದ ನಡೆಸಿದರು.  ಬಾನು ಮೇಡಂ ಬೂಕರ್ ಪ್ರಶಸ್ತಿ ಸ್ವೀಕಾರಕ್ಕೆ ಹೋದ ದಿನ ಸೂಟ್ ಕೇಸ್ ಕಳೆದುಕೊಂಡ ಫಜೀತಿ ಹೇಳುವಾಗ ಡಾ.ಗೊರೂರರ ಅಮೇರಿಕಾದಲ್ಲಿ ಗೊರೂರು ಕಾದಂಬರಿ  ನೆನಪಾಗುತ್ತದೆ. ಈ ಕೃತಿ ೧೯೮೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಇರಲಿ ಎದೆಯ ಹಣತೆ ಕೃತಿಯಲ್ಲಿ ಬಾನು ಮೇಡಂ ಹೇಳಿದ್ದಾರೆ.  ಇದು ನನ್ನ ಬದುಕಿನ ಅತ್ಯಂತ ಸಂತೋಷದ ಸಂದರ್ಭ. ನನ್ನ ಬದುಕು ಮತ್ತು ಬರಹವು ಅತ್ಯಂತ ಕ್ರಿಯಾಶೀಲವಾಗಿ ಕವಲೊಡೆದ ಸಂದರ್ಭ. ಬುಕರ್ ಅದು ಕೈಗೆಟುಕಲಾರದ ಗಗನ ಕುಸುಮ ಎಂದೇ ನನ್ನ ಎಣಿಕೆಯಾಗಿತ್ತು. ಅದರ ಆರಂಭಿಕ ಹಂತದ ಸ್ಫರ್ಧೆಯೇ ನಾನು ಕಂಡು ಕೇಳಲರಿಯದ ಅನೇಕ ಸವಾಲುಗಳಿಂದ ಕೂಡಿತ್ತು. ಯಾವುದೇ ಭಾಷೆಯಿಂದ ಇಂಗ್ಲೀಷಿಗೆ ಅನುವಾದವಾದ ಕೃತಿಯಾಗಿರಬೇಕು. ಆಯಾ ವರ್ಷ ಮೇನಿಂದ  ಸೆಪ್ಟಂಬರ್ ತಿಂಗಳಲ್ಲಿ ಪ್ರಕಟವಾಗಿರಬೇಕು. ಇಂಗ್ಲೆAಡ್ ಅಥವಾ ಐರ್ಲೆಂಡಿನ ಪ್ರಕಾಶನ ಸಂಸ್ಥೆಯಿAದ ಪ್ರಕಟವಾಗಿರಬೇಕು. ಹೀಗೆ ಅರ್ಹತೆಯ ಹಣೆಪಟ್ಟಿಯಲ್ಲಿ ಭಾಗವಹಿಸಿದ ಪುಸ್ತಕಗಳು ೧೫೪.  ಜ್ಯೂರಿಗಳ ತಂಡ ೧೩ ಪುಸ್ತಕ ಆಯ್ಕೆ ಮಾಡಿ, ಬಿಡುಗಡೆಯಾದ  ಪಟ್ಟಿ ಕಂಡು ನನಗೆ ಏನೇನೂ ಅನಿಸಲಿಲ್ಲ. ನನಗೆ ನನ್ನ ಮಕ್ಕಳ ಪೋನ್ ಕರೆ ಮರುದಿನದಿಂದ ಆರಂಭವಾಗಿ  ಪತ್ರಕರ್ತರ  ಸಂದರ್ಶನ ನಡೆದವು. ಪುಸ್ತಕ ಸಂಸ್ಕೃತಿ ಕ್ಷೀಣಿಸುತ್ತಿದೆ ಎಂಬ ಅಪವಾದ ಸುಳ್ಳು ಮಾಡುವ ದಿಕ್ಕಿನಲ್ಲಿ ನನ್ನ  ಪುಸ್ತಕಗಳು ಓದುಗರ ಕೈ ಸೇರುತ್ತಿವೆ. ಪುಸ್ತಕ ಪ್ರೀತಿಯ ನೈಜ ಅನುಭವ ನನಗೆ ಇಂಗ್ಲೆAಡ್ ನಲ್ಲಿ ದೊರಕಿತು. ಅಲ್ಲಿಯ ಜನರ ಪುಸ್ತಕ ಪ್ರೀತಿ ಲೇಖಕರ ಬಗೆಗಿನ ಅಭಿಮಾನವು ನನ್ನಲ್ಲಿ ಅಚ್ಚರಿಯನ್ನು ಮೂಡಿಸಿತು. ಪುಸ್ತಕ ಮತ್ತು ಕಲೆಯನ್ನು ಜೀವಂತ ಇರಿಸುವ ಅವರ ಪ್ರಯತ್ನ ಎಂಥಾ ಸ್ಫೂರ್ತಿದಾಯಕ..?  ಡಾ.ಎಸ್.ಎಲ್.ಬೈರಪ್ಪನವರು ಕಾದಂಬರಿಕಾರರಾಗಿ ಜನಪ್ರಿಯರು. ಇವರ ಕೃತಿಗಳು ಇಂಗ್ಲೀಷ್ ಭಾರತೀಯ ಭಾಷೆಗಳಿಗೆ ಅನುವಾದವಾಗಿವೆ. ಇವರಿಗೆ ಭಾರತ ಸರ್ಕಾರದ  ಪದ್ಮಭೂಷಣ ಪ್ರಶಸ್ತಿ ೨೦೨೩ರಲ್ಲಿ ಲಭಿಸಿದೆ. ಇವರ ಗೃಹಭಂಗ, ವಂಶವೃಕ್ಷ, ನಾಯಿ ನೆರಳು, ದಾಟು ಕಾದಂಬರಿಗಳನ್ನು ನನ್ನ ಓದಿನ ದಿನಗಳಲ್ಲೇ ಓದಿದ್ದೆನು. ಇವರ ವಂಶವೃಕ್ಷ ಕಾದಂಬರಿಯ ನಾಟಕ ರೂಪಾಂತರವನ್ನು  ಮೈಸೂರಿನ  ಕಲಾಸುರುಚಿ ತಂಡದವರು ನಾಗಭೂಷಣ್ ಪಿ. ನಿರ್ದೇಶನದಲ್ಲಿ ಪ್ರದರ್ಶಿಸಿದರು. ಹಿಂದಿ ರೂಪಾಂತರ ಪ್ರತಿಭಾ ಅಗರವಾಲ್ ಅವರದು ಮತ್ತೇ  ಕನ್ನಡಕ್ಕೆ  ಶಾರದಾ ವೆಂಕಟಸುಬ್ಬಯ್ಯ ತಂದಿದ್ದಾರೆ. ವಂಶವೃಕ್ಷ ಒಂದು ವಂಶದ ಪರಂಪರೆಯ ಕಥೆ. ಈ ಪರಂಪರೆಯಲ್ಲಿ ಕಂಡುಬರುವ ಬಿರುಕಿನ ಕಥೆ ಇಂದಿನ ನಮ್ಮ ಬದುಕಿನಲ್ಲೂ ಪ್ರತಿಫಲಿಸುತ್ತದೆ. ನಂಜನಗೂಡಿನ ಶ್ರೀನಿವಾಸ ಶ್ರೋತ್ರಿಯವರದು ಆತ್ರೇಯ ಗೋತ್ರಕ್ಕೆ ಸೇರಿದ ಸಂಸ್ಕಾರ ಸಂಪ್ರದಾಯನಿಷ್ಠ ಮನೆತನ. ಈ ಪಾತ್ರದಲ್ಲಿ ಎನ್.ಧನಂಜಯ ಅವರು ತುಂಬು ಗಾಂಭೀರ್ಯ ನಡೆನುಡಿ ಅಭಿನಯದಲ್ಲಿ ಜೀವ ತುಂಬಿದರು. ಇವರ ಧರ್ಮಪತ್ನಿ ಭಾಗೀರಥಿ ಪಾತ್ರದಲ್ಲಿ ದೀಪಾ ರವಿಶಂಕರ್ ಕೂಡ ಅಷ್ಟೇ ಗಮನ ಸೆಳೆದರು. ಇವರ  ಮಗ ನಂಜುAಡ ಆಕಸ್ಮಿಕವಾಗಿ ಕಪಿಲಾ ನದಿಯಲ್ಲಿ ಜಾರಿಬಿದ್ದು ಸಾವಿಗೀಡಾಗಿದ್ದಾನೆ.  ಸೊಸೆ ಕಾತ್ಯಾಯಿನಿ ಚಿಕ್ಕ ವಯಸ್ಸಿಗೆ ವಿಧವೆ ಆಗಿದ್ದಾಳೆ. ಅವಳ ಓದಿನ ಆಕಾಂಕ್ಷೆಗೆ  ಮಾವ ಅಡ್ಡಿಯಾಗದೇ ಕಾಲೇಜಿಗೆ ಕಳಿಸುತ್ತಾನೆ. ಈ ಪಾತ್ರವನ್ನು ಅದಿತಿ ಕೂಡ ಸಮರ್ಥವಾಗಿ ನಿಭಾಯಿಸಿದರು.  ಅಲ್ಲಿ  ರಾಜಾರಾವ್ ಎಂಬ ಅಧ್ಯಾಪಕನ ಪರಿಚಯ ಪ್ರೇಮಕ್ಕೆ ತಿರುಗಿ ಗಂಡನ ಮನೆ ತೊರೆಯುತ್ತಾಳೆ. ಇತ್ತ ನಂಜುAಡ ಶ್ರೋತ್ರಿಯ ಮಗ ಚೀನಿ ತನ್ನ ತಾತ ಶ್ರೀನಿವಾಸ ಶ್ರೋತ್ರಿಗಳ ಆರೈಕೆಯಲ್ಲಿ ಬೆಳೆದು ದೊಡ್ಡವನಾಗುತ್ತಾನೆ.  ಶ್ರೀನಿವಾಸ ಶ್ರೋತ್ರಿಗಳಿಗೆ ತಮ್ಮ ಹುಟ್ಟಿನ ರಹಸ್ಯ ಮನೆಯಲ್ಲೇ ಇದ್ದ ಲಕ್ಷಿö್ಮÃಯಿಂದ ತಿಳಿಯುತ್ತದೆ. ತಾನು ಶ್ರೋತ್ರೀಯ ವಂಶದವನಲ್ಲವೆAಬ, ತನ್ನದು ಆತ್ರೇಯ ಗೋತ್ರವೂ ಅಲ್ಲ ಬದಲು ಶಾಮದಾಸನೆಂಬ ಹರಿಕಥೆದಾಸರಿಗೆ ತನ್ನ ತಾಯಿಯ ಅನೈತಿಕ ಸಂಬAಧದಿAದ ಹುಟ್ಟಿದÀವನೆಂದು ತಿಳಿದು ಹತ್ತಾನಾಗುತ್ತಾನೆ. ತಾನು ಆವರೆಗೂ  ನಂಬಿಕೊAಡು ಬಂದ ಆಚಾರ ವಿಚಾರ ಸಂಸ್ಕಾರಗಳೆಲ್ಲಾ ಎಷ್ಟು ಸುಳ್ಳು ಎಂಬ ಕಟು ಸತ್ಯ ಅರಿವಾಗಿ ಅತನ ಸ್ವಾಭಿಮಾನಿ ಕಟ್ಟಡÀ ತಳಹದಿ ಕುಸಿಯುತ್ತದೆ.  ಜಿಗುಪ್ಸೆಗೊಂಡು  ಶ್ರೋತ್ರಿಗಳು ವಾರಸುದಾರರು ಸಿಗದೆ ಎಲ್ಲವನ್ನೂ ದಾನ ಮಾಡುತ್ತಾರೆ.  ಇತ್ತ ಕಾತ್ಯಾಯಿನಿಯಾದರೂ  ಓದಿನ ನಂತರ  ಕಾಲೇಜು ಅದ್ಯಾಪಕಿಯಾಗಿದ್ದಾಳೆ. ಅದೇ ಕಾಲೇಜು ಸೇರುವ ಚೀನಿ ಅವಳನ್ನು ಗುರುತಿಸಲೂ ಇಷ್ಟಪಡದೆ ಕಾಲೇಜು ತೊರೆಯುತ್ತಾನೆ. ಮರುಮದುವೆದ ಕಾತ್ಯಾಯಿನಿಗೆ ಮಕ್ಕಳಾದೆ ಕರ್ತವ್ಯ ಧರ್ಮಗಳ ತೊಳಲಾಟದಲ್ಲಿ ಸಿಲುಕಿ ಸಾವನ್ನಪ್ಪುತ್ತಾಳೆ. ಮುಂದೆ  ಶ್ರೋತ್ರಿಗಳು ರಾಜಾರಾವ್‌ರನ್ನು ಭೇಟಿಯಾಗಿ ಆತ ತನ್ನ ಚಿಕ್ಕಪ್ಪನ ಮೊಮ್ಮಗನೇ ಎಂದು ತಿಳಿದು ಖಿನ್ನರಾಗುತ್ತಾರೆ. ಪ್ರಬುದ್ಧ ಮನಸ್ಸಿನ ಪರಿಪಕ್ವ ವ್ಯಕ್ತಿತ್ವದ ಶ್ರೀನಿವಾಸ ಶ್ರೋತ್ರಿಗಳು ಲೌಕಿಕ ಬದುಕಿನ ವ್ಯಾಮೋಹ ತೊರೆದು ಬೆಳಕಿನ ಪಥದತ್ತ ಸಾಗುತ್ತಾರೆ.  ಪ್ರಯೋಗದಲ್ಲಿ ಕೆಲವು ಬದಲಾವಣೆಗಳನ್ನು ಸನ್ನಿವೇಶಕ್ಕೆ ಪೂರಕ ಹಾಡುಗಳನ್ನು ಸಂಯೋಜಿಸಿದ್ದು (ರಚನೆ: ಪ್ರೊ.ಡಿ.ಎ.ಶಂಕರ್) ಗಂಭೀರ ನಾಟಕಕ್ಕೆ ರಂಜನೆ ನೀಡಿದೆ.   ಹಾಡುಗಾರಿಕೆಯಲ್ಲಿ ಸುಮನಾ, ನಿಸರ್ಗಾ, ವಿಸ್ಮಯ ತಂಡ ಮತ್ತು ಇವರಿಗೆ ಸಂಗೀತ ಸಾಂಗತ್ಯದಲ್ಲಿ ವಿದ್ವಾನ್ ಪುಟ್ಟಣ್ಣಯ್ಯ ವೈ.ಎಂ. ಅವರ  ಹರ‍್ಮೋನಿಯಂ ಕೀಬೋರ್ಡ್ನ್ನು ಮೀರಿಸುತ್ತದೆ. ಮಹದೇವ್ ತಬಲ ಸಾತ್ ನೀಡಿದರು.  ನಾಟಕದಲ್ಲಿ ಬರುವ ಲಕ್ಷಿö್ಮ ಪಾತ್ರದಲ್ಲಿ ವಿಜಯಲಕ್ಷಿö್ಮ ಎಂ. ಚೀನಿಯಾಗಿ ಬಾಲಾಜಿ ಎಂ.ಎನ್. ಹಾಗೂ ಸದಾಶಿವರಾವ್ ಪಾತ್ರವನ್ನು ಮಂಜುನಾಥ್ ಎಂ.ಎನ್ ನಿಭಾಯಿಸಿದರು.   ರಾಜಾರಾವ್ ಆಗಿ  ಉಲ್ಲಾಸ್ ಎಚ್.ಎಸ್. ಹಾಗೂ ಅನಂತ ಮೇಷ್ಟುç ಪಾತ್ರವನ್ನು ಪ್ರದೀಪ್ ಎಂ. ನಿರ್ವಹಿಸಿದರು. ಬೆಳಕು: ಮಧುಸೂದನ್ ನೀನಾಸಂ,  ರಂಗಸಜ್ಜಿಕೆ ನರಸಿಂಹಕುಮಾರ್. ಕಾರ್ಯಕ್ರಮದ ಉದ್ಘಾಟನೆ ಮತ್ತು ಆಶಯ ನುಡಿಯಲ್ಲಿ ಸಾಹಿತಿ ವಿಮರ್ಶಕರು ಕೆ.ಸತ್ಯನಾರಾಯಣ ಅರ್ಥಪೂರ್ಣವಾಗಿ  ಮೂವರು ಸಾಹಿತಿಗಳ ಒಟ್ಟಾರೆ ಸಾಹಿತ್ಯವನ್ನು ತಮ್ಮ ಟೈಮ್ ಲಿಮಿಟ್‌ನಲ್ಲಿ ಚೆನ್ನಾಗಿಯೇ ಕಟ್ಟಿಕೊಟ್ಟರು. ಸುಧೀಶ್ ವೆಂಕಟೇಶ್, ಮುಖ್ಯ ಸಂವಹನಾಧಿಕಾರಿಗಳು ಪ್ರಾಸ್ತಾವಿಕ ನುಡಿ, ಸಂಸ್ಥೆಯ ಮಹೇಶ್ ಕುಮಾರ್ ಸಿ.ಎಸ್. ರಾಘವೇಂದ್ರ ಹೇರ್ಳೆ, ಎಸ್.ವಿ.ಮಂಜುನಾಥ್ ಅವರ ಕಾರ್ಯ ತತ್ಪರತೆ ಮೂವರು ಸಾಹಿತಿಗಳ ಚಿತ್ರಪಟಗಳ ಸಂಗ್ರಹಣೆ ಪ್ರದರ್ಶನ ಏರ್ಪಾಡು ಮೆಚ್ಚತಕ್ಕದ್ದು. ಇದು ಅಜೀಂ ಪ್ರೇಮ್‌ಜಿ ವಿಶ್ವ ವಿದ್ಯಾಲಯ, ಬೆಂಗಳೂರು ಇವರ ೮ನೇ ಸಾಹಿತ್ಯ ಸಹವಾಸ ಕಾರ್ಯಕ್ರವಾಗಿದೆ. ಮುಂದಿನ ದಿನಗಳಲ್ಲಿ ಇನ್ನು ವಿಶೇಷವಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯಕ್ರಮ ರೂಪಿಸಲು ಕಾರ್ಯಕ್ರಮ ಯಶಸ್ವಿಯೇ ನಮಗೆ ಸ್ಫೂರ್ತಿ, ಪ್ರೇರಣೆಯಾಗುತ್ತದೆ ಎಂಬ ಸಂಸ್ಥೆಯ ಆಶಯಕ್ಕೆ ಕಾಲೇಜು, ಸಂಘ ಸಂಸ್ಥೆಗಳು ಕೈ ಜೋಡಿಸಬೇಕಾಗಿದೆ.  

“ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಸಾಹಿತ್ಯ ಸರಣಿ  ವಂಶವೃಕ್ಷ ನಾಟಕ” ಗೊರೂರು ಅನಂತರಾಜು Read Post »

ಇತರೆ

“ಎಸ್ .ವಿ‌.ಪರಮೇಶ್ವರ ಭಟ್ಟರ ಕೆಲವು‌ ಮುಕ್ತಕಗಳು”ಒಂದು ಓದು,ಡಾ.ವೈ.ಎಂ.ಯಾಕೊಳ್ಳಿ

ಸಾಹಿತ್ಯ ಸಂಗಾತಿ ಡಾ.ವೈ.ಎಂ.ಯಾಕೊಳ್ಳಿ “ಎಸ್ .ವಿ‌.ಪರಮೇಶ್ವರ ಭಟ್ಟರ ಕೆಲವು‌ ಮುಕ್ತಕಗಳು” ಹಿರಿಯ ಕವಿ ಎಸ್ ವಿ‌.ಪರಮೇಶ್ವರ ಭಟ್ಟರು‌ ಕನ್ನಡದಲ್ಲಿ ಮುಕ್ತ ಕ ಸಾಹಿತ್ಯವನ್ನು ಬೆಳೆಸಿದವರು. ಅವರು ಆಧುನಿಕ ವಚನಕಾರರೆಂದೂ,ಅನುವಾದಕರೆಂದೂ ಕೂಡ ಹೆಸರಾದ ವರು. ಅವರ ಅನುವಾದಗಳು ತುಂಬ  ಮೌಲಿಕವಾಗಿವೆ ಸಂಸ್ಕೃತದ ,ಪ್ರಾಕೃತದ ಮಹಾಮಹಾ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.ಅವುಗಳಲ್ಲಿ ಕನ್ನಡ ಕಾಳಿದಾಸ ಮಹಾಸಂಪುಟ,ಭಾಸ ಕವಿ ಮಹಾಸಂಪುಟ ,ಅಮರು ಶತಕ,ಗಾಥಾ ಸಪ್ತಶತಿ,ಭತೃಹರಿ ಕಾವ್ಯ ಸಂಪುಟ, ಗೀತಗೋವಿಂದ ಮೊದಲಾದ ಮಹತ್ವದ ಕೃತಿ ಸಂಪುಟ ಗಳನ್ನು ಅವರು‌ ಕನ್ನಡ ಓದುಗರಿಗೆ‌ ನೀಡಿದ್ದಾರೆ. ಹೊಸಗನ್ನಡದ ಆದ್ಯ ವಚನಕಾರ ರಲ್ಲಿ ಒಬ್ಬರಾದ ಅವರು‌ ಎಂಟು ಆಧುನಿಕ ವಚನ ಸಂಕಲನಗಳನ್ನು‌ ಪ್ರಕಟಿಸಿದ್ದು ಅವುಗಳಲ್ಲಿ ‘ಉಪ್ಪು ಕಡಲು’,  ‘ಇಂದ್ರ ಗೋಪ’ ಮೊದಲಾದವು ಪ್ರಸಿದ್ಧವಿವೆ.  ಹಾಗೆಯೆ ಕನ್ನಡದಲ್ಲಿ ಮುಕ್ತಕಗಳನ್ನು ಬರೆದ ಆದ್ಯರಲ್ಲಿ ಒಬ್ಬರಾದ ಅವರು ಐದು ಮುಕ್ತಕ ಸಂಕಲನ ಪ್ರಕಟಿಸಿದ್ದು’ ಇಂದ್ರಚಾಪ’,’ಚಂದ್ರವೀಧಿ,’ ‘ಸುರಗಿ ಸುರಹೊನ್ನೆ’, ‘ ತುಂಬೆ ಹೂವು’  ..ಮೊದಲಾದವು ಪ್ರಸಿದ್ಧವಾಗಿವೆ. ಅವರ ಇಂದ್ರಚಾಪ ಸಂಕಲನದ ಕೆಲವು ಮುಕ್ತಕಗಳ ಓದು ಇಲ್ಲಿದೆ. ಅವರಿಗೆ ಕವಿತೆಯೇ ಇಂದ್ರಚಾಪ ವಾಗಿ ( ಮಳೆ ಮೋಡ) ವಾಗಿ ಕಂಡಿದೆ.ತಮ್ಮ ಒಂದು ಮುಕ್ತಕದಲ್ಲಿ ಮನವೇ ಬಾನಂಗಣ,ದುಗುಡವೇ ಮಳೆ ಮೋಡಕವಿಗಣ ಸೂಕ್ತಿಯೆ ದಿನಪಮೂಡಿತು ಮಳೆ ಬಿಸಿಲಿನ ಮೇಳದೊಳು ನೋಡಾಕವಿತೆಯ ಇಂದ್ರಚಾಪ ಕವಿಗೆ ಬಾನಂಗಣವನ್ನು ಸುಂರಗೊಳಿಸುವಂತೆ ಮೂಡಿದ ಕಾಮನಬಿಲ್ಲು ,ಕವಿಯ ಮನದಲ್ಲಿ ಉದಿಸಿದ ಕವಿತೆ ಎರಡೂ ಅಷ್ಟೇ ಸುಂದರವಾಗಿ ಕಂಡಿವೆ.ಇಲ್ಲ ಕವಿತೆ ಮೂಡಲು ಮನವೇ ಬಾನಂಗಣವಾದರೆ ಅವನ ಮನದ ಭಾವಗಳ  ರೂಪುಗೊಂಡು ಕವಿತೆಯಂಬ ಇಂದ್ರಚಾಪ ವಾಗಿವೆ ಎನ್ನುತ್ತಾರೆ‌ ಕವಿ. ಅವರ ಇನ್ನೊಂದು‌ ಮುಕ್ತಕ ಸಾಹಿತ್ಯ ಮತ್ತು ಮಿತ್ರರ ಗುಂಪಿನ ಮಹತ್ವ ಸಾರಿದೆ.ಕವಿಗೆ‌ ಕವಿತೆಯೆ ಸಂಜಿವಿನಿ ಶಕ್ತಿಯಾಗಿದೆ. ಅದನ್ನು ಕವಿ ಸಾಹಿತ್ಯವೊಂದೆಯೆನ್ನ ಸಂಜೀವಿನಿಅದೆ ನನ್ನ ತಾರಕಶಕ್ತಿಮಿತ್ರಸಲ್ಲಾಪವೆ ಚಿತ್ತಾಹ್ಲಾದಿನಿಅದರಿಂದಲೆಯೆ ನನ್ನ‌ಮುಕ್ತಿ ತನ್ನೊಳಿರುವ ಸಾಹಿತ್ಯ ಶಕ್ತಿಯೆ ನನ್ನ ಬಲ ಎನ್ನುವ ಕವಿ ಅಷ್ಟೇ ಮಹತಗವದ ಸ್ಥಾನವನ್ನು ಮಿತ್ರರೊಡನೆ ಆಡುವ ಸಲ್ಲಾಪಕ್ಕೂ ನೀಡುತ್ತಾರೆ.ಮಿತ್ರರೊಡನೆ ಆಡುವ ಮಾತು ವ್ಯರ್ಥ ಸಲ್ಲಾಪವಲ್ಲ ಅದು ಕವಿಯ ಮನಸಿಗೆ ಆಹ್ಲಾದ ವನ್ಬು ಕೊಡುವ ಚಿತ್ತಾಹ್ಲಾದಿನಿ,ಮಾತ್ರವಲ್ಲ ಅದರಿಂದಲೇ ಕವಿಗೆ ಮುಕ್ತಿ  ಎನ್ನುತ್ತಾರೆ. ಕವಿತೆ‌ಮಾತ್ರವಲ್ಲ ಕವಿಗೆ ಮಿತ್ರ ಗಣ ಸಲ್ಲಾಪವೂ ಮುಖ್ಯವೆನಿಸಿದೆ. ಇರುವ ಬಾಳಿನಲಿ ಆನಂದ ಹುಡುಕದಿದ್ದರೆ ಸಂಸಾರ ನಿಸ್ಸಾರವೆನಿಸುತ್ತದೆ.ಕಷ್ಟ ಸುಖ ಗಳ ನಡುವೆಯೆ ಸಂತಸವ ಹುಡುಕಿದರೆ ಸಂಸಾರವೂ ರಸಮಯವೆನಿಸುತ್ತದೆ.ಕವಿ ತನ್ನ ಕವಿತೆಯೊಡನೆ ಸಂಸಾರವನ್ನು ಮೇಳವಿಸುವದು ಹೀಗೆ. ಸಾಹಿತ್ಯವನು ಕಂಡೆ ಸಂಸಾರದೊಳು ಹೀಗೆಸಾಂಗತ್ಯವಾಗಿಸಿ ಕೊನೆಗೆಇಲ್ಲದೆ ಹೋದರೆ ಉಸಿರಾಡುವುದು ಹೇಗೆಹೊಗೆಗಟ್ಟಿದೀ ಗೂಡಿನೊಳಗೆ ಇರುವ ಬಾಳಿನಲ್ಲಿಯೆ ಸುಖ ಕಾಣಬೇಕು.ಹೇ ಇದರಲ್ಲೇನಿ ದೆ ? ಎಂದು ಅಲಕ್ಷಿಸುತ್ತಾ ಹೋದರೆ ಅದು ಹೊಗೆಗಟ್ಟಿದ ಗೂಡಾಗುತ್ತದೆ.ಅದನ್ನೆ ಬಹಳ ಹಿಂದೆ  ಮಹಾಕವಿ ಪಂಪ “ಸಾರಂ ಅನಂಗ ಜಂಗಮ‌ಲಲಿತಾಲತಾಂಗಿಯರಿಂದಮಲ್ತೇ ಸಂಸಾರಂ ” ಎಂದು ಸಂಸಾರವನ್ನು ಸಾರವಾಗಿಸುವ ದಾರಿ ಕಂಡಿದ್ದ‌ನು.ಇಲ್ಲ ಕವಿ ಪರಮೇಶ್ವರಭಟ್ಟರೂ ಕೂಡ ಅದೇ ಮಾರ್ಗವನ್ನು ಹೇಳುತ್ತಾರೆ. ಬಾಳು ಎಂದ ಮೇಲೆ ಕಷದಟಗಳು ಬರುವವೇ.ಆದರೆ ಅವು‌ ಹೇಳಿ‌ಕೇಳಿ ಬರುವದಿಲ್ಲ.ಆಕಸ್ಮಿಕವಾಗಿಯೆ ಬರುತ್ತವೆ. ಕೆಲವೊಮ್ಮೆ ಒಳ್ಳೆಯವರೇ ಇಲ್ಲಿ ತೊಂದರೆಗೀಡಾಗುತ್ತಾರೆ. ಅವರದೇನೂ ತಪ್ಪಿರುವದಿಲ್ಲ.ಆದರೂ ತೊಂದರೆಗಳು ಅವರಿಗೆ ಬರುತ್ತವೆ. ಅದನ್ನು ಸುಂದರವಾದ ರೂಪಕದಿಂದ ಕವಿ ಬಣ್ಣಿಸುತ್ತಾರೆ. ಬಾಳೆ ಹಣ್ಣನು ತಿಂದವರೆಸೆದರು ಸಿಪ್ಪೆಯ  ಬೀದಿಯ ಕೊನೆಗೆಕಾಣದೆ ಕಾಲಿಟ್ಟು ಜಾರುವನ್ಯರುಕಷ್ಟವು‌ ಬರುವುದೆ ಹೀಗೆ ಯಾರೋಬಾಳೆ ಹಣ್ಣನು ತಿಂದು ಸಿಪ್ಪೆಯನ್ನು ಬೀದಿಯಲ್ಲಿ ಎಸೆದು ಬಿಡುತ್ತಾರೆ.ಆದರೆ ಅದನ್ನು ನೋಡದ ಇನ್ನು ಯಾರೊ ಅದರ‌ ಮೇಲೆ‌ ಕಾಲಿಟ್ಟು ಜಾರಿ ಬೀಳುತ್ತಾರೆ. ಅವರದೇನು ತಪ್ಪೇ ಇರದು ಆದರೂ ಕೆಲವು ಸಲ ತೊಂದರೆ ಅವರನ್ನು ಹುಡುಕಿ ಬಂದು ಬಿಡುತ್ತವೆ.ಇದೇ ಬಾಳಿನ ವೈಚಿತ್ರ್ಯ. ಕವಿ ಎಷ್ಟೇ ಶ್ರೇಷ್ಠವಾದ ಕವಿತೆ ಬರೆಯಲಿ ಅದನ್ನು ಮೆಚ್ಚುವವರು ಎಲ್ಲ‌ಕಾಲಕ್ಕೂ ಸಿಗುವದು ಅಸಾಧ್ಯ.ಎಲ್ಲೊ‌ಕೆಲವು ಭಾಗ್ಯವಂತರಿಗೆ ಮಾತ್ರ ಅವರ ಕವಿತೆಯ ಕುರಿತು ಸರಿಯಾದ ವಿಮರ್ಶೆ,ಮೆಚ್ಚಿಕೆ ಗೌರವ ಗಳು ಸಿಗುತ್ತವೆ .ಆಧುನಿಕ‌ಕಾಲದ ಕವಿಗಳು ತಮ್ಮ ಕವಿತೆಯನ್ನು  ಕುರಿತು ತಾವೇ ಜಾಹಿರಾತು ಕೊಟ್ಟು ಇತರರಿಗೆ ಪರಿಚಯ‌ ಮಾಡಿಕೊಡುತ್ತಾರೆ.ಇಂಥ ಪರಿಚಯಅವರಿಗೆ ಗೌರವವನ್ನು‌ ತಂದುಕೊಡುತ್ತದೆ. ನನಗೆ ಯಾರ ಗೌರವ ಪ್ರಶಸ್ತಿ ಬೇಡ ಎಂದು‌ ಕವಿತೆ ಬರೆಯುತ್ತ ಕೂಡ್ರುವ ಜನ ಆಧುನಿಕ ಕಾಲಕ್ಕಂತೂ ಕಡಿಮೆ. ಎಲ್ಲರೂ ಏನಾದರೂ‌ ಪ್ರಯತ್ನ‌ ಮಾಡುವವರೆ .ಇಂಥವರನ್ನು‌ ಕಂಡು ಕವಿ ಪರಮೇಶ್ವರ ಭಟ್ಟರು ಪ್ರತಿಭೆಯೊಂದಿರಬೇಕು, ವುತ್ಪನ್ನಮತಿಅಭ್ಯಾಸ, ಗುರುಸೇವೆ ಬೇಕುಈ ಹಳೆಯ ಪಟ್ಟಿಗಿನ್ನೊಂದು ಸೇರಬೇಕುಕವಿಗೆ ಜಾಹಿರಾತು ಬೇಕು ಕವಿತೆ ಬರೆಯಲು ಏನೆನು ಬೇಕು ಎಂದು ಪ್ರಶಗನಿನಿಸ ಕಾವ್ಯ‌ಮೀಮಾಂಸಕರು ಪ್ರತಿಭೆ,ವುತ್ಪತ್ತಿ,ಗುರುಸೇವೆ ,ಅಭಾಸ ಹೀಗೆ ಆರು ಗುಣಗಳು ಬೇಕು ಎಂದು ಹೇಳಿದ್ದರು .ಆದರೆ ಆಧುನಿಕ‌ಕಾಲಕ್ಕೆ  ಇಷ್ಟೇ ಸಾಕಾಗೊಲ್ಲ. ಎಷ್ಟೇ ಪ್ರತಿಭಾವಂತ ರಿದ್ದರೂ ಜಾಹಿರಾತು ಇಲ್ಲದೆ ಕವಿ ಯ ಕಾವ್ಯ ‌ಪ್ರಸಿದ್ಧಿಗೆ ಬಾರದು ಎಂಬ ನೈರಾಸ್ಯ ಬಾವವನ್ನು ವ್ಯಕ್ತ ಮಾಡಿದ್ದಾರೆ.ಒಮ್ಮೊಮ್ಮೆ ಜಾಹಿರಾತಿನ ಬಲದಿಂದ ಅಂಥ ಶ್ರೇಷ್ಟ ಕಾವ್ಯವಲ್ಲದ್ದೂ ಕೂಡ ಮಿಂಚತೊಡಗುತ್ತದೆ. ಇಂಥದನ್ನು ಕಂಡು ನಿಜ ಕವಿಗಳು ಮರುಗಬೇಕಾಗುತ್ತದೆಯಷ್ಠೆ. ಇವು ಕೆಲವು ಅರ್ಥಪೂರ್ಣ ಮುಕ್ತಕಗಳ ಉದಾಹರ ಣೆ ಯಷ್ಟೇ.ಇಂಥ ಹಲವಾರು ಸುಂದರ ಮುಕ್ತಕಗಳ ಕಣಜವೇ ಅವರ ಸಂಕಲನಗಳಲ್ಲಿದೆ.ಓದುವ , ಸವಿಯುವ ಗುಣ ನಮ್ಮದಾಗಬೇಕಷ್ಟೇ. ಡಾ.ವೈ.ಎಂ.ಯಾಕೊಳ್ಳಿ

“ಎಸ್ .ವಿ‌.ಪರಮೇಶ್ವರ ಭಟ್ಟರ ಕೆಲವು‌ ಮುಕ್ತಕಗಳು”ಒಂದು ಓದು,ಡಾ.ವೈ.ಎಂ.ಯಾಕೊಳ್ಳಿ Read Post »

You cannot copy content of this page

Scroll to Top