ಕಾವ್ಯ ಸಂಗಾತಿ
ಡಾ. ಮಹೇಂದ್ರ ಕುರ್ಡಿ
ಕಾಲಮಾನ

ಪ್ರೇಮಿಗಳ ಪಿಸು ಮಾತಿನಲ್ಲಿ
ಅಂಕುರಿಸುವ ಪ್ರೀತಿ ಛಾಯೆ
ಸೋತು ಸುಣ್ಣವಾಗಿ ಹೋಗುತ್ತಿದೆ
ಪ್ರೇಮಿಗಳ ಆತ್ಮಹತ್ಯೆ ಸಾಕ್ಷಿಯಾಗಿದೆ.
ಮನಸ್ಸುಗಳು ಅರ್ಥ ಮಾಡಿಕೊಳ್ಳುವಲ್ಲಿ
ವಿಫಲವಾದ ಕಾರಣಕ್ಕೆ ಮದುವೆಗಳು
ಮಧ್ಯಂತರದಲ್ಲಿ ಮುರಿದು ಬೀಳುತ್ತಿವೆ
ಪತಿ ಪತ್ನಿಯ ಸಂಬಂಧ ನೈಪೇತ್ಯವಾಗಿದೆ.
ಆಧುನಿಕತೆ ಭರಾಟೆ ಬೆಳವಣಿಗೆಯಲ್ಲಿ
ಮಕ್ಕಳಲ್ಲಿ ಮಮತೆ ಮಾಯವಾಗಿ
ಹೆತ್ತವರಿಗೆ ಒಂಟಿ ಜೀವನ ಕಾದಿದೆ
ವೃದ್ಧಾಶ್ರಮದ ಬಾಗಿಲು ಕರೆಯುತ್ತಿದೆ.
ಕಾಮವು ಕೊಲೆ ಹಂತ ತಲುಪಿ
ಜೀವನವೇ ಭಯಾನಕವಾಗಿ
ಅಪನಂಬಿಕೆಗೆ ಜೀವಗಳು ಕಂಗಾಲಾಗಿವೆ
ಬಂಧ ಸಂಬಂಧಗಳು ಕುರುಡಾಗಿವೆ.
ಯಾವ ಹುತ್ತದಲ್ಲಿ ಯಾವ ಹಾವು
ಯಾರ ಮನದೊಳಗೆ ಯಾವ ಸೇಡು
ಕಾಣದಾಗಿದೆ ಈ ಕಲಿಯುಗದಲ್ಲಿ
ಮೂಕವಾದರೆ ಅವನತಿ ಮನುಕುಲಕ್ಕೆ.
ಡಾ. ಮಹೇಂದ್ರ ಕುರ್ಡಿ

