ವ್ಯಾಸ ಜೋಶಿ ಅವರ ತನಗಗಳು

ಸುಮಕೆ ಮುತ್ತನಿಟ್ಟು
ಮಕರಂದವ ಹೀರಿ,
ಜೇನು ಕೊಟ್ಟ ದುಂಬಿಯು
ಮಹಾ ಪರೋಪಕಾರಿ.

ಎಲ್ಲ ಜೀವಿಗಳಿಗೆ
ಅನ್ನ ತಯಾರಿಸುವ
ವಿಶ್ವದ ಬಾಣಸಿಗ
ಗೆಳೆಯ ಸೂರ್ಯದೇವ.

ಅನ್ನ ಆಹಾರ ಕೊಟ್ಟು
ಸಲಹುವೇನು ನಿನ್ನ,
ರಕ್ಷಿಸು ಅನಗಾಲ
ಕಡಿಯದಿರು ಎನ್ನ.

ಸ್ವಚ್ಛ ವಕ್ಕಲುಮಾಡಿ
ನೀರುಣಿಸಿದ ರೈತ,
ಪೂರ್ಣ ಫಸಲನಿತ್ತು
ಋಣಮುಕ್ತ ಭೂತಾಯಿ .

ಇಳೆಯ ಇಳುವರಿ
ಹಣ್ಣು ಹಂಪಲು ಹೂವು
ಯಾವುದು ತನಗಲ್ಲ
ಮಾನವನಿಗೇ ಎಲ್ಲ.

ಬೆಳಕಿನ ಕಿರಣ
ಜಲ, ಆಮ್ಲಜನಕ
ಕೊಟ್ಟು ಪೋಷಿಸುವ
ಪ್ರಕೃತಿಗೆ ವಂದನೆ.

——————————————————————————-

2 thoughts on “ವ್ಯಾಸ ಜೋಶಿ ಅವರ ತನಗಗಳು

Leave a Reply