ಏಷ್ಯಾದ ಅತಿ ದೊಡ್ಡ ಕೊಳಚೆ ‌ಪ್ರದೇಶ  ಗಳಲ್ಲಿ ಎರಡನೇ ಸ್ಥಾನ ಪಡೆದ ಮತ್ತು ಭಾರತ ದೇಶದಲ್ಲಿನ ಅತ್ಯಂತ ದೊಡ್ಡ ಕೊಳಚೆ ಪ್ರದೇಶವೆಂದೇ ಪ್ರಸಿದ್ಧಿ ಪಡೆದಿರುವ ಮುಂಬೈನ ಧಾರಾವಿ ಕೊಳೆಗೇರಿ ಇವತ್ತಿಗೂ ಜಗತ್ತಿನ ಸಮಾಜ ವಿಜ್ಞಾನಿಗಳ ಪಾಲಿಗೆ ವಿಸ್ಮಯದ ಪ್ರಪಂಚವಾಗಿದೆ. ಧಾರಾವಿ ಇತಿಹಾಸ ನಿನ್ನೆ ಮೊನ್ನೆಯದಲ್ಲ. ಅದು ಮುಂಬೈನಗರದ ಇತಿಹಾಸದೊಂದಿಗೆ ಹುಟ್ಟಿ ಬೆಳೆದು ಬಂದಿದೆ. ಇಂದಿನ ಸಾಯನ್, ಮಾಟುಂಗಾ, ಬಾಂದ್ರಾ, ಕುರ್ಲಾ, ಕಲಿನಾ ಎಂಬ ಪ್ರತಿಷ್ಟಿತ ಪ್ರದೇಶಗಳ ನಡುವೆ 175 ಹೆಕ್ಟೇರ್ ಪ್ರದೇಶದಲ್ಲಿ ಈ ಧಾರಾವಿ ಕೊಳೆಗೇರಿ ನೆಲೆಗೊಂಡಿದೆ..ಇದಲ್ಲದೆ ಅಂಬೇಡ್ಕರ್ ನಗರ (ಚೆಂಬೂರ್),ಅಂಜುಮನ್ ನಗರ (ಮಲಾಡ್)..
ಕುರ್ಲಾ ಜೋಪಡಿಪಟ್ಟಿ.. ಸಾಂತಾ ಕ್ರೂಜ್ ಜೋಪಡಿಪಟ್ಟಿ.. ಹೀಗೆಯೇ ಇನ್ನೂ ಹತ್ತಾರು ಕೊಳಚೆ ಪ್ರದೇಶಗಳಿಂದ‌ ನಗರವು ಆವೃತ್ತವಾಗಿದೆ..ಈ ಜೋಪಡಿಪಟ್ಟಿಗಳು ಮುಂಬೈನ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿವೆ..

 ವಿವಿಧ ಮೂಲಗಳ ಪ್ರಕಾರ, ಧಾರಾವಿ ಜನಸಂಖ್ಯೆ ೧೪ ರಿಂದ 15 ಲಕ್ಷದವರೆಗೆ ಇರುವುದಾಗಿ ಅಂದಾಜಿಸಲಾಗಿದೆ. ಧಾರಾವಿಯ ಜನಸಂಖ್ಯೆಯು ವಿವಿಧ ಧರ್ಮಗಳ ಜನರನ್ನು ಒಳಗೊಂಡಿದೆ..ಹಿಂದೂ, ಮುಸ್ಲಿಮರು, ಕ್ರಿಶ್ಚಿಯನ್ನರು,
ಬೌದ್ಧರು ಮತ್ತು ಇತರರು..ಆದಾಗ್ಯೂ ‌ಇವರಲ್ಲಿನ ಒಗ್ಗಟ್ಟು ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ..ಇಲ್ಲಿನ ಜನಸಂಖ್ಯೆಯ ಸಾಂದ್ರತೆ ಪ್ರತಿ ಚದರ ಮೈಲಿಗೆ 8 ಲಕ್ಷಕ್ಕಿಂತ ಹೆಚ್ಚು ಜನರನ್ನು ಹೊಂದಿದೆ, ಇದು ಧಾರಾವಿಯನ್ನು ವಿಶ್ವದ ಅತ್ಯಂತ ಜನಸಾಂದ್ರತೆಯ ಪ್ರದೇಶಗಳಲ್ಲಿ ಒಂದಾಗಿಸುತ್ತದೆ. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು, ಅರ್ಥಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರಜ್ಞರಿಗೆ ಧಾರಾವಿ ಒಂದು ಅಧ್ಯಯನ ಕೇಂದ್ರವಾಗಿದೆ.

ಈ ಅಪೂರ್ವ ವಾಸ್ತವಕ್ಕೆ ಸಾಕ್ಷಿಯಾಗಿ, ಬಿ.ಬಿ.ಸಿ., ಡಿಸ್ಕವರಿ ಚಾನೆಲ್, ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಸೇರಿ ಐವತ್ತಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳು ಧಾರಾವಿಯ ಕುರಿತು ನಿರ್ಮಾಣಗೊಂಡಿವೆ. ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳಿಂದ ಇಪ್ಪತ್ತಕ್ಕೂ ಹೆಚ್ಚು ಅಧ್ಯಯನ ಪ್ರಬಂಧಗಳು ಪ್ರಕಟವಾಗಿವೆ. ಬಾಲಿವುಡ್ ನ ಹಲವಾರು ಸಿನಿಮಾಗಳು ತಯಾರಾಗಿವೆ…

ನಮ್ಮವರೇ ಆದ, ಹಿಂದೂ ಇಂಗ್ಲೀಷ್ ದಿನಪತ್ರಿಕೆಯ ಮುಂಬೈ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತೆ ಕಲ್ಪನಾ ಶರ್ಮ ಅವರು “Rediscovering Dharavi” ಎಂಬ ಮಹತ್ವದ ಕೃತಿಯನ್ನು ರಚಿಸಿದ್ದು, ಅದು ಪೆಂಗ್ವಿನ್ ಪ್ರಕಾಶನದಿಂದ ಪ್ರಕಟಗೊಂಡಿದೆ.

ಭಾರತದ ವಿವಿಧ ಭಾಗಗಳಿಂದ, ವಿಶೇಷವಾಗಿ ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಧಾರಾವಿ ಕೊಳಚೆ ಪ್ರದೇಶದಲ್ಲಿ ಬಡತನ, ಹಸಿವು ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಸಹ ಇದರ ನಡುವೆ ಅಲ್ಲಿನ ಜನರು ತಾವು ಕಟ್ಟಿಕೊಂಡಿರುವ ಘನತೆಯುಳ್ಳ, ಸೃಜನಶೀಲ ಬದುಕು ಆಶ್ಚರ್ಯ ಮೂಡಿಸುತ್ತದೆ..

“ಮುಂಬಯಿಯ ಜೋಪಡಿಗಳು ಸಂಕಷ್ಟದ ಬೀಜಗಳಿಂದ ಬಿತ್ತಲ್ಪಟ್ಟ  ಕನಸುಗಳ ತೋಟಗಳು.”

ಪರ ಊರಿನಿಂದ ವಿಮಾನದಲ್ಲಿ ಬರಲಿ, ರೈಲಿನಲ್ಲಿ ಬರಲಿ, ಬಸ್‌ನಲ್ಲಿ ಬರಲಿ, ಮುಂಬಯಿ ಮಹಾನಗರಿಗೆ ನಮ್ಮನ್ನು ಸ್ವಾಗತ ಮಾಡುವುದು, ಮೂಗು ಮುಚ್ಚಿಕೊಳ್ಳಲು ಆಗ್ರಹಿಸುವ ಈ ಜೋಪಡಪಟ್ಟಿಗಳೇ.‌.ಮುಂಬಯಿಯ ಜೋಪಡಪಟ್ಟಿ ಪ್ರದೇಶಗಳು ಕೇವಲ ಬಡತನದ ಸಂಕೇತವಲ್ಲ, ಅವು ಹೋರಾಟ, ನಿರೀಕ್ಷೆ, ಸಹನೆ, ತಾಳ್ಮೆ, ಮತ್ತು ಕನಸುಗಳ ಜೀವಂತ ಸಾಕ್ಷಿಗಳಾಗಿವೆ. ಇಲ್ಲಿ ಜನರು ಸಣ್ಣ ಸಣ್ಣ ಸ್ಥಳಗಳಲ್ಲಿ ವಾಸಿಸುತ್ತಾರೆ. ಸಮಸ್ಯೆಗಳು, ಆಪತ್ತುಗಳು ಈ ಜನರ ನಿತ್ಯಸಂಗಾತಿಗಳಾಗಿವೆ..ಬದುಕು ನಿರಂತರ ಹೋರಾಟದ ಹಾದಿಯಾಗಿದೆ..ಆದರೂ ಎದೆಗುಂದದೆ ಕಷ್ಟಪಟ್ಟು ದುಡಿದು ಬಾಳುವ‌ ಧೈರ್ಯವಂತರು ಇವರು..

ಒಂದು ಚಿಕ್ಕ ಕೋಣೆಯಲ್ಲಿ 4-6 ಜನರು (ಇನ್ನೂ ಹೆಚ್ಚು )ಸೇರಿ ವಾಸಿಸುವುದು ಸಾಮಾನ್ಯ. ಸ್ವಚ್ಛ ಹವಾ, ಶುದ್ಧ ನೀರಿನ ಕೊರತೆ, ಸಮರ್ಪಕ ವ್ಯವಸ್ಥೆ ಇಲ್ಲದ ಚರಂಡಿಗಳು, ಮಳೆಗಾಲದಲ್ಲಿ ನೀರು ತುಂಬುವ ಸಮಸ್ಯೆಗಳು ಅವರ ದಿನನಿತ್ಯದ ಭಾಗ. ಗಾಳಿಯಾಡದ ಕೋಣೆಗಳಲ್ಲಿ ಬೇಸಿಗೆಯಲ್ಲಿ ಕೆಂಡದಂತೆ ಬಿಸಿ ಹಬೆ ತುಂಬಿರುತ್ತದೆ..  

ಈ ಜೋಪಡಿಗಳಲ್ಲಿ ವಾಸಿಸುವ ಜನರಲ್ಲಿ ಹೆಚ್ಚಿನವರು ಕಾರ್ಮಿಕರು, ದಿನಗೂಲಿ ಮಾಡುವವರು, ಮೆಕಾನಿಕ್, ಪ್ಲಂಬಿಂಗ್, ಡ್ರೈವರ್ , ಸಣ್ಣ ಪುಟ್ಟ ರಿಪೇರಿಗಳನ್ನು ಮಾಡುವವರು, ಸಣ್ಣ ಸಣ್ಣ ವ್ಯಾಪಾರಿಗಳು ಅಥವಾ ಸಣ್ಣ ಉದ್ಯೋಗಗಳಲ್ಲಿರುವವರು ಆಗಿರುತ್ತಾರೆ.. ಕೆಲವರು ಹೋಟೆಲ್ ಕೆಲಸ, ಮನೆಯ ಸಹಾಯಕಾರರು, ಆಟೋಚಾಲಕರು, ಪುಟ್ಟ ಅಂಗಡಿಗಳಲ್ಲಿ ಕೆಲಸ ಮಾಡುವವರೂ ಇರುತ್ತಾರೆ ,ದಿನದ ಕೂಲಿ ಆ ದಿನದ ಊಟ ಎಂಬ ಸ್ಥಿತಿಯಲ್ಲಿ, ಪ್ರತಿದಿನವೂ ಹೊಸ ಹೋರಾಟ. ಹೊಸ ಸಂಕಷ್ಟಗಳಲ್ಲಿ ಮುಳುಗೇಳುತ ಬದುಕುವವರು ಇವರು..

ಬಡತನದ ನಡುವೆಯೂ ಇಲ್ಲಿಯ‌ ಬಹಳಷ್ಟು  ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಹಗಲು-ರಾತ್ರಿ ದುಡಿಯುತ್ತಾರೆ. ಆದರೆ, ಬಹುತೇಕ ಮಕ್ಕಳು ಬಾಲ್ಯದಲ್ಲಿಯೇ ದುಡಿಮೆಗೆ ಇಳಿಯುತ್ತಾರೆ. ಉತ್ತಮ ವಿದ್ಯಾಭ್ಯಾಸ ಇಲ್ಲದ ಕಾರಣ ಬಹುಸಂಖ್ಯೆಯವರ ಭವಿಷ್ಯವೂ ಸೀಮಿತವಿರುತ್ತದೆ. ಕಲುಷಿತ ಗಾಳಿ,
ಕುಡಿಯಲು ಪರಿಷ್ಕೃತ ನೀರಿನ ಕೊರತೆ, ಸ್ವಚ್ಚತೆಯ ಅಭಾವ, ಆರೋಗ್ಯ ಸಮಸ್ಯೆಗಳಿಂದ ತುಂಬಿದ ಜೀವನದ ಒತ್ತಡದಲ್ಲಿ ಆಸ್ಪತ್ರೆಗಳಿಗೆ ಹೋಗುವುದು ದುರ್ಬರವಾಗಿರುತ್ತದೆ. ಹೀಗಾಗಿ, ಬಹಳಷ್ಟು ಜನರು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಾರೆ.

ಜೋಪಡಿಗಳ ಜನರು ಪರಸ್ಪರ ಸ್ನೇಹ, ಹೊಂದಿಕೆ, ಬೆಂಬಲಗಳನ್ನು ನೀಡುತ್ತ ಒಗ್ಗಟ್ಟಿನಿಂದ  ಬದುಕುತ್ತಾರೆ. ಒಬ್ಬರ ದುಃಖಕ್ಕೆ ಇನ್ನೊಬ್ಬರು ಕೈ ಹಚ್ಚುವ ಬಾಂಧವ್ಯ ಇಲ್ಲಿ ಗಟ್ಟಿಯಾಗಿದೆ. ಹಬ್ಬ-ಹರಿದಿನಗಳಲ್ಲಿ, ಎಲ್ಲರೂ ಒಂದಾಗಿ ಸಂಭ್ರಮಿಸುತ್ತಾರೆ, ಬಡತನವನ್ನೂ ಮರೆತು ನಗುತ್ತಾರೆ.
ಇಲ್ಲಿ ಹಬ್ಬಗಳ ಆಚರಣೆಗೇನೂ ಕಡಿಮೆ ಇರುವುದಿಲ್ಲ..ಜಾತಿ,ಮತ ಭೇದ ವಿಲ್ಲದೆ ಎಲ್ಲರೂ ಎಲ್ಲಾ ಹಬ್ಬಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ..
ಗಣೇಶ ಚತುರ್ಥಿ..ಪಂಡಾಲುಗಳು, ವಿಸರ್ಜನೆ, ಸಂಭ್ರಮ..
ಈದ್-ರಮಜಾನ್ ..ವಿಶೇಷ ನಮಾಜ್, ಮಿಠಾಯಿ, ಕುಟುಂಬದವರೊಡನೆ ಓಡಾಟ,
ನವರಾತ್ರಿ-ದೀಪಾವಳಿ..ಗರ್ಬಾ, ದೀಪ, ರಂಗೋಲಿ, ಪಟಾಕಿ..ಕ್ರಿಸ್ಮಸ್..ಚರ್ಚು ಪ್ರಾರ್ಥನೆ, ಕೇಕ್, ಉಡುಗೊರೆ..ಹೀಗೆ ಸಂಭ್ರಮಿಸುವುದೇ ಇವರ ವಿಶೇಷತೆ..ಈ ಹಬ್ಬದ ದಿನಗಳಲ್ಲಿ ಧಾರಾವಿಯ ಗಲ್ಲಿ, ಸಂದಿಗೊಂದಿ ಬೀದಿಗಳು ಮೆರುಗು ಹೊತ್ತಿರುತ್ತವೆ. ಮಾರುಕಟ್ಟೆಗಳು ಜನಸಂದಣಿಯಿಂದ ತುಂಬುತ್ತವೆ, ಅಲ್ಲಲ್ಲಿ ಬೀದಿ ಅಂಗಡಿಗಳು, ತಾತ್ಕಾಲಿಕ ಫುಡ್ ಸ್ಟಾಲ್‌ಗಳು ಕಾಣಸಿಗುತ್ತವೆ. ತಮ್ಮ ಕಷ್ಟಕರ ಬದುಕಿನ ನಡುವೆಯೂ ಧಾರಾವಿಯ ಜನರು ಹಬ್ಬವನ್ನು ಸಂಪೂರ್ಣ ಉತ್ಸಾಹದಿಂದ ಆಚರಿಸುತ್ತಾರೆ, ಅದೇ ಅವರ ಬದುಕಿನ ನಿಜವಾದ ಶಕ್ತಿ ಎನ್ನಬಹುದು..

ಬಡತನದ ನಡುವೆಯೂ ಹಸಿರು ಕನಸುಗಳು ಮೂಡುತ್ತವೆ. ಹಲವರು ತಮ್ಮ ಮಕ್ಕಳನ್ನು ಓದಿಸಿ ದೊಡ್ಡವರಾಗಿಸುವ ಆಸೆಯೊಂದಿಗೆ ಬದುಕುತ್ತಾರೆ. ಕೆಲವರು ತಮ್ಮ ಸ್ವಂತ ಮನೆ, ಉತ್ತಮ ಜೀವನಕ್ಕಾಗಿ ಹಗಲು-ರಾತ್ರಿ ದುಡಿಯುತ್ತಾರೆ.

ಮುಂಬಯಿಯ ಜೋಪಡಪಟ್ಟಿ ಪ್ರದೇಶಗಳು ಕೇವಲ ಬಡತನದ ಸಂಕೇತವಲ್ಲ, ಅವು ಹೋರಾಟ, ನಿರೀಕ್ಷೆ, ಸಹನೆ, ತಾಳ್ಮೆ, ಮತ್ತು ಕನಸುಗಳ ಜೀವಂತ ಸಾಕ್ಷಿಗಳಾಗಿವೆ. ಇಲ್ಲಿ ಜನರು ಸಣ್ಣ ಸ್ಥಳಗಳಲ್ಲಿ ವಾಸಿಸುತ್ತಾರೆ. ಸಮಸ್ಯೆಗಳು, ಆಪತ್ತುಗಳು ಈ ಜನರ ನಿತ್ಯಸಂಗಾತಿಗಳಾಗಿವೆ..ಬದುಕು ನಿರಂತರ ಹೋರಾಟದ ಹಾದಿಯಾಗಿದೆ..ಆದರೂ ಎದೆಗುಂದದೆ ಕಷ್ಟಪಟ್ಟು ದುಡಿದು ಬಾಳುವ‌ ಧೈರ್ಯವಂತರು ಇವರು..

ಒಂದು ಚಿಕ್ಕ ಕೋಣೆಯಲ್ಲಿ 4-6 ಜನರು (ಇನ್ನೂ ಹೆಚ್ಚು )ಸೇರಿ ವಾಸಿಸುವುದು ಸಾಮಾನ್ಯ. ಸ್ವಚ್ಛ ಹವಾ, ಶುದ್ಧ ನೀರಿನ ಕೊರತೆ, ಸಮರ್ಪಕ ವ್ಯವಸ್ಥೆ ಇಲ್ಲದ ಚರಂಡಿಗಳು, ಮಳೆಗಾಲದಲ್ಲಿ ನೀರು ಸೋರುವ, ನೀರು ತುಂಬುವ ಸಮಸ್ಯೆಗಳು ಅವರ ದಿನನಿತ್ಯದ ಭಾಗ. ಗಾಳಿಯಾಡದ ಕೋಣೆಗಳಲ್ಲಿ ಬೇಸಿಗೆಯಲ್ಲಿ ಕೆಂಡದಂತೆ ಬಿಸಿ ಹಬೆ ತುಂಬಿರುತ್ತದೆ..  

ಈ ಜೋಪಡಿಗಳಲ್ಲಿ ವಾಸಿಸುವ ಜನರಲ್ಲಿ ಹೆಚ್ಚಿನವರು ಕಾರ್ಮಿಕರು, ದಿನಗೂಲಿ ಮಾಡುವವರು, ಮೆಕಾನಿಕ್, ಪ್ಲಂಬಿಂಗ್, ಡ್ರೈವರ್ , ಸಣ್ಣ ಪುಟ್ಟ ರಿಪೇರಿಗಳನ್ನು ಮಾಡುವವರು, ಸಣ್ಣ ಸಣ್ಣ ವ್ಯಾಪಾರಿಗಳು ಅಥವಾ ಸಣ್ಣ ಉದ್ಯೋಗಗಳನ್ನು ಮಾಡುವವರು ಆಗಿರುತ್ತಾರೆ..ಕೆಲವರು ಹೋಟೆಲ್ ಕೆಲಸ, ಮನೆಯ ಸಹಾಯಕಾರರು, ಆಟೋಚಾಲಕರು, ಪುಟ್ಟ ಅಂಗಡಿಗಳಲ್ಲಿ ಕೆಲಸ ಮಾಡುವವರೂ ಇರುತ್ತಾರೆ ,ದಿನದ ಕೂಲಿ ದಿನದ ಊಟ ಎಂಬ ಸ್ಥಿತಿಯಲ್ಲಿ, ಪ್ರತಿದಿನವೂ ಹೊಸ ಹೋರಾಟ. ಹೊಸ ಸಂಕಷ್ಟಗಳಲ್ಲಿ ಮುಳುಗೇಳುತ ಬದುಕುವವರು ಇವರು..

ಬಡತನದ ನಡುವೆಯೂ ಇಲ್ಲಿಯ‌ ಬಹಳಷ್ಟು  ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಹಗಲು-ರಾತ್ರಿ ದುಡಿಯುತ್ತಾರೆ. ಆದರೆ, ಬಹುತೇಕ ಮಕ್ಕಳು ಬಾಲ್ಯದಲ್ಲಿಯೇ ದುಡಿಮೆಗೆ ಇಳಿಯುತ್ತಾರೆ. ಸಾವಿರಾರು ಜನ ಚಿಂದಿ, ಪ್ಲಾಸ್ಟಿಕ್,ಆರಿಸುವ ಕೆಲಸಗಳಲ್ಲಿ ತೊಡಗುತ್ತಾರೆ..ಉತ್ತಮ ವಿದ್ಯಾಭ್ಯಾಸ ಇಲ್ಲದ ಕಾರಣ ಬಹುಸಂಖ್ಯೆಯವರ ಭವಿಷ್ಯವೂ ಸೀಮಿತವಿರುತ್ತದೆ. ಕಲುಷಿತ ಗಾಳಿ, ಕುಡಿಯಲು ನೀರಿನ ಕೊರತೆ, ಸ್ವಚ್ಚತೆಯ ಅಭಾವ, ಆರೋಗ್ಯ ಸಮಸ್ಯೆಗಳಿಂದ ತುಂಬಿದ ಜೀವನದ ಒತ್ತಡದಲ್ಲಿ  ಹೋಗುವುದು ದುರ್ಬರವಾಗಿರುತ್ತದೆ. ಹೀಗಾಗಿ, ಬಹಳಷ್ಟು ಜನರು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಾರೆ. ಇಲ್ಲಿಯ ಬಡತನದ ನಡುವೆಯೂ ಹಲವರಿಗೆ ಹಸಿರು ಕನಸುಗಳು ಮೂಡುತ್ತವೆ. ಹಲವರು ತಮ್ಮ ಮಕ್ಕಳನ್ನು ಓದಿಸಿ ದೊಡ್ಡವರಾಗಿಸುವ ಆಸೆಯೊಂದಿಗೆ ಬದುಕುತ್ತಾರೆ. ಕೆಲವರು ತಮ್ಮ ಸ್ವಂತ ಮನೆ, ಉತ್ತಮ ಜೀವನ ಶೈಲಿಗಾಗಿ ಹಗಲು-ರಾತ್ರಿ ದುಡಿಯುತ್ತಾರೆ.

ಧಾರಾವಿ ಜೋಪಡಿಗಳ ನಕಾರಾತ್ಮಕ ಅಂಶಗಳು..ಸ್ವಚ್ಚತೆಯ ಕೊರತೆ , ನೀರು, ಶೌಚಾಲಯ, ಮತ್ತು ಆವರಣ ಸ್ವಚ್ಛತೆಯ ತೀವ್ರ ಅಭಾವ. ಅತಿಯಾದ ಜನಸಂದಣಿ, ಅತ್ಯಂತ ಇಕ್ಕಟ್ಟಾದ ಮನೆಗಳು, ತೀರಾ ಚಿಕ್ಕ ಚಿಕ್ಕ ಗಲ್ಲಿಗಳು, ವಾಸಕ್ಕೆ ಸರಿಯಲ್ಲದ ಚರಂಡಿಯ ಮಗ್ಗುಲಲ್ಲಿ ಕಟ್ಟಿದ ಖೋಲಿಗಳು.. ಅಸೌಕರ್ಯ,ಆರೋಗ್ಯ ಸಮಸ್ಯೆಗಳು..ಟಿಬಿ, ಶ್ವಾಸಕೋಶ ರೋಗಗಳು, ಡೆಂಗ್ಯೂ, ಚಿಕನ್ ಗುನಿಯಾ ಹೆಚ್ಚಾಗಿರುವ ಪ್ರದೇಶಗಳು
ಅಪರಾಧ ಮತ್ತು ದುಷ್ಕೃತ್ಯಗಳು, ಕಳ್ಳತನ, ಅಕ್ರಮ ಮದ್ಯ-ಮಾದಕ ವಸ್ತು ವ್ಯಾಪಾರಗಳೂ ಇಲ್ಲದಿಲ್ಲ..
ಅಕ್ರಮ ವಸತಿ,ಅನಧಿಕೃತ ಕಟ್ಟಡಗಳು, ಸರ್ಕಾರದ ನಿಯಂತ್ರಣದ ಹೊರಗಿರುವ ವಾಸಸ್ಥಾನಗಳು. ಕಡಿಮೆ ಆದಾಯದ ಜೀವನ, ಗೂಂಡಾಗಳ ಶೋಷಣೆ, ಕಡಿಮೆ ಕೂಲಿ, ಮೂಲಭೂತ ಸೌಕರ್ಯದ ಕೊರತೆ. ಅಗ್ನಿ ಅಪಾಯ, ಹೊಗೆಯಾದ ರಸ್ತೆ, ತೀವ್ರ ಬೇಸಿಗೆ ದಿನಗಳಲ್ಲಿ ಬೆಂಕಿ ಅವಘಡಗಳು ಸಾಮಾನ್ಯವಾಗಿರುತ್ತವೆ..ಮಳೆಗಾಲದ ದಿನಗಳಲ್ಲಿ ಖೋಲಿಯೊಳಗೆ ಸೊಂಟದೆತ್ತರ ಗಟಾರದ‌ ನೀರು ತುಂಬಿ ಅಲ್ಲಿಯೇ ಕುಳಿತು ದಿನ ತಳ್ಳಬೇಕಾದ ಪರಿಸ್ಥಿತಿ ಇರುತ್ತದೆ..
ಎಂಟು ಬೈ ಎಂಟು..ಅಥವಾ ಒಟ್ಟು ತೊಂಬತ್ತು ಚದುರ ಅಡಿ ಅಗಲದ ಖೋಲಿಯಲ್ಲಿಯೇ ಅಡುಗೆ, ಊಟ, ಸ್ನಾನ, ನಿದ್ರೆಗಳನ್ನು ಮುಗಿಸುವ‌ ಇವರು ನಿತ್ಯಕರ್ಮಗಳಿಗಾಗಿ ಸಾರ್ವಜನಿಕ ಶೌಚಾಲಯಗಳನ್ನು ಬಳಸುತ್ತಾರೆ..

ಧಾರಾವಿಯ ಕೊಳಚೆಗೇರಿಯನ್ನು ಹಾಂಗ್ ಕಾಂಗ್‌ನ ತಾಯ್ ಕಾಂಗ್ ಎಂಬ ಕೊಳೆಗೇರಿಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲು, ಮಹಾರಾಷ್ಟ್ರ ಸರ್ಕಾರವು 2004ರಲ್ಲಿ ಧಾರಾವಿ ಪುನರ್ ನಿರ್ಮಾಣ ಯೋಜನೆನ್ನು ಕೈಗೆತ್ತಿಕೊಂಡಿತು. ಈ ಯೋಜನೆಯ ಅಡಿಯಲ್ಲಿ ನಿವಾಸಿಗಳನ್ನು ಬಹುಮಡಿ ಕಟ್ಟಡಗಳಲ್ಲಿ ಪುನರ್ವಸತಿ ಮಾಡುವುದು ಉದ್ದೇಶಿತವಾಗಿತ್ತು.

ಆದರೆ, ಯೋಜನೆಯ ವಿನ್ಯಾಸ ಕುರಿತಂತೆ ವಿರೋಧದ ಸ್ವರಗಳು ಕೇಳಿಬಂದ ಕಾರಣ, 2010ರಲ್ಲಿ ಪ್ರಖ್ಯಾತ ವಾಸ್ತುಶಿಲ್ಪಿ ಹಾಗೂ ಅಮೇರಿಕೆಯಲ್ಲಿ ಶಿಕ್ಷಣ ಪಡೆದ ಮುಕೇಶ್ ಮೆಹತಾ ಅವರ ನೇತೃತ್ವದಲ್ಲಿ ಹೊಸ ಯೋಜನೆ ರೂಪಿಸಲಾಯಿತು. ಈ ಯೋಜನೆಯ ಪ್ರಕಾರ, ಪ್ರತಿಯೊಬ್ಬ ಫಲಾನುಭವಿಗೂ 13 ಅಡಿ ಅಗಲ ಮತ್ತು 20 ಅಡಿ ಉದ್ದದ ಮನೆಗಳನ್ನು ಬಹುಮಹಡಿ ಕಟ್ಟಡಗಳಲ್ಲಿ ನಿರ್ಮಿಸಲು ನಿರ್ಧರಿಸಲಾಯಿತು. ಅಲ್ಲದೆ, ಶಾಲೆಗಳು, ಉದ್ಯಾನವನಗಳು ಮತ್ತು ಸಾರ್ವಜನಿಕ ಉಪಯೋಗದ ಹಲವು ಸೌಲಭ್ಯಗಳಿಗೆ ಸ್ಥಳವನ್ನು ಮೀಸಲಾಗಿಡಲಾಯಿತು.

ಒಟ್ಟು 15 ಸಾವಿರ ಕೋಟಿ ರೂ. ವೆಚ್ಚದ ಈ ಪುನರ್ ನಿರ್ಮಾಣ ಯೋಜನೆಗೆ ಅಮೇರಿಕಾದ ಲೆಹ್ ಮನ್ ಬ್ರದರ್ಸ್, ಸಿಂಗಾಪುರ ಮತ್ತು ದುಬೈನ ಖಾಸಗಿ ಕಂಪನಿಗಳು ಬಂಡವಾಳ ಹೂಡಲು ಮುಂದಾದವು. ಆದರೆ, ಈ ಕಂಪನಿಗಳು ತಾವು ಹೂಡುವ ಬಂಡವಾಳದ ಪ್ರತಿಯಾಗಿ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಉಚಿತವಾಗಿ ಜಾಗ ನೀಡುವಂತೆ ಕೇಳಿದ ಕಾರಣ, ಈ ವಿಚಾರವು ವಿವಾದಕ್ಕೆ ಸಿಲುಕಿ ಸಧ್ಯಕ್ಕೆ ಸ್ಥಗಿತವಾಗಿದೆ..

ಧಾರಾವಿಯ ಆರ್ಥಿಕ ಚಟುವಟಿಕೆಗಳು ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸುತ್ತವೆ. ಚರ್ಮೋದ್ಯಮ ಇಲ್ಲಿಯ ಪ್ರಮುಖ ಉದ್ಯಮವಾಗಿದ್ದು, ಚಪ್ಪಲಿ, ಪರ್ಸ್ ಗಳು, ಬ್ಯಾಗ್, ಬೆಲ್ಟ್ ಹೀಗೆ ಹಲವು ಉತ್ಪನ್ನಗಳನ್ನು ದೇಶ-ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಕುಂಬಾರಿಕೆ ವೃತ್ತಿಯಲ್ಲಿ ಹಲವು ಕುಟುಂಬಗಳು ತೊಡಗಿದ್ದು, ದೇಶ ವಿದೇಶಗಳಿಗೆ ವಿವಿಧ ರೀತಿಯ ಮಣ್ಣಿನ ಪಾತ್ರೆಗಳನ್ನು ಪೂರೈಸಲಾಗುತ್ತದೆ..

ಧಾರಾವಿಯ ಪುನಃಪ್ರಕ್ರಿಯೆ ಉದ್ಯಮ ಮುಂಬೈನ ತ್ಯಾಜ್ಯ ನಿರ್ವಹಣೆಯಲ್ಲಿ ಮಹತ್ತರ ಪಾತ್ರವಹಿಸಿದ್ದು, ಪ್ಲಾಸ್ಟಿಕ್, ಲೋಹ, ಗಾಜು, ಈ-ವೇಸ್ಟ್ ಮುಂತಾದವುಗಳನ್ನು ಇಲ್ಲಿ ಸಂಸ್ಕರಿಸಲಾಗುತ್ತದೆ. ಅಡುಗೆಪದಾರ್ಥ ಉದ್ಯಮ, ಬೀದಿ ತಿನಿಸು ಅಂಗಡಿಗಳು, ಹೊಟೇಲ್‌ಗಳ ವ್ಯಾಪಾರವೂ ಇಲ್ಲಿನ ಜನರಿಗೆ ಜೀವನೋಪಾಯವಾಗಿವೆ. ಕೈಮಗ್ಗ ವಸ್ತ್ರ, ಹಸ್ತಕಲಾ ವಸ್ತುಗಳು, ಹೆಣಿಗೆ, ಕಸೂತಿ ಉದ್ಯಮಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿದ್ದಾರೆ.

ಬಾಲಿವುಡ್ ಚಿತ್ರೋದ್ಯಮಕ್ಕೆ ಸಹಾಯಕರಾಗಿ ಕೆಲಸ ಮಾಡುವವರನ್ನು ಇಲ್ಲಿ ಕಾಣಬಹುದು. ಆದರೆ, ಕಡಿಮೆ ವೇತನ, ಮೂಲಭೂತ ಸೌಕರ್ಯಗಳ ಕೊರತೆ, ಖಾಯಂ ಉದ್ಯೋಗದ ಅಲಭ್ಯತೆ, ಮಾಲಿನ್ಯ ಮೊದಲಾದ ಸಮಸ್ಯೆಗಳು ಎದುರಾಗುತ್ತವೆ. ಹಾಗಿದ್ದರೂ ಧಾರಾವಿಯ ಜನರು ತಮ್ಮ ಪರಿಶ್ರಮದಿಂದ ಮುಂಬೈನ ಆರ್ಥಿಕ ಶಕ್ತಿಯ ಕೇಂದ್ರವನ್ನು ನಿರ್ಮಿಸಿರುವುದು ಗಮನಾರ್ಹ.

ಇಲ್ಲಿಯ ಜನರು ಬವಣೆಯಲ್ಲಿ ಬದುಕುತ್ತಿದ್ದರೂ, ಅವರ ಹೃದಯಗಳು ಮಾತ್ರ ನಿರೀಕ್ಷೆಯ ಬೆಳಕಿನಲ್ಲಿ ಹೊಳೆಯುತ್ತವೆ. ಪ್ರತಿ ದಿನ ಹೊಸ ಹೋರಾಟ, ಹೊಸ ಕನಸು, ಹೊಸ ಆಶಯ ಇವೇ ಅವರ ಬದುಕಿನ ಕಥೆಯಾಗಿದೆ…


Leave a Reply

Back To Top