ಮಾನಸ ಸಂಗಾತಿ
ರೇವತಿ ಶ್ರೀಕಾಂತ
ʼಮಾಯಾಮೃಗದ ಬೆನ್ನೇರಿʼ

ಮಕ್ಕಳು ಸ್ವಲ್ಪ ಬೆಳೆಯುತ್ತಿದ್ದಂತೆ ಅವರಿಗೆ ಒತ್ತಡ ಶುರು. ಕಾಣದ ಭವಿಷ್ಯವನ್ನು ರೂಪಿಸುವ ಸುಳ್ಳು ಭರವಸೆಯೊಂದಿಗೆ ಎಲ್ಲರೂ ಅಂಕಿಗಳ ಹಿಂದೆ ಅಲೆಯುತ್ತ ಮಕ್ಕಳನ್ನ ಅದರ ಹಿಂದೆ ಓಡಿಸುವ ಯತ್ನ ತಂದೆ ತಾಯಿಗಳಿಂದ. ಈ ನಿಟ್ಟಿನಲ್ಲಿ ಮಕ್ಕಳ ಮನಸಲ್ಲಿ ಎಷ್ಟು ಭಯಾನಕವಾದ ಒತ್ತಡ ಇದೆ ಎಂದು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುವುದೇ ಇಲ್ಲ. ಆ ಒತ್ತಡ ಎಷ್ಟೋ ವೇಳೆ ಮಕ್ಕಳನ್ನೇ ಬಲಿತೆಗೆದುಕೊಂದಮೇಲೆ ಏನು ಮಾಡಿದರೂ ಪ್ರಯೋಜನವಿಲ್ಲ.
ತಂದೆ ತಾಯಿಗಳು ಮಕ್ಕಳೊಂದಿಗೆ 3 C ಗಳನ್ನು ಯಾವತ್ತೂ ಉಪಯೋಗಿಸಬಾರದು. ಅವು
1.compare
2.criticize
3.Condem
ಮಕ್ಕಳ ಮನಸು ಹೂವಿನಂತೆ ತುಂಬಾ ಸೂಕ್ಷ್ಮ. ಅವರ ವಿದ್ಯಾಭ್ಯಾಸದ ವಿಷಯದಲ್ಲಾಗಲಿ ಅಥವಾ ಬೇರೆ ಪ್ರತಿಭೆಗಳ ಬಗ್ಗೆ ಆಗಲಿ ಯಾವತ್ತೂ ಯಾರೊಂದಿಗೂ ಹೋಲಿಕೆ ಮಾಡಬಾರದು. ಪ್ರತಿಯೊಂದು ಮಕ್ಕಳು ತನ್ನದೇ ವಿಷಯದಲ್ಲಿ ತನ್ನದೇ ಶಕ್ತಿಯನ್ನು ಹೊಂದಿರುತ್ತಾರೆ.
ಅವರನ್ನು ಮನಸು ನೋಯುವಂತೆ ಬೇರೆಯವರ ಮುಂದೆ ಬೈಯುವುದು ಮಾಡಬಾರದು. ಬೇರೆಯಾಗಿ ಕರೆದು ಹೇಳಬೇಕು.ಒಳ್ಳೆಯ ಮಾತಲ್ಲಿ ಬುದ್ದಿ ಹೇಳಬೇಕು.
ಮಕ್ಕಳಿಗೆ ಹೇಳುವಾಗ ನೀನು ಯಾವತ್ತೂ ಹೇಳಿದ್ದು ಮಾಡುವುದಿಲ್ಲ….. ಮತ್ತು ಯಾವಾಗಲೂ ಈ ತಪ್ಪು ಮಾಡುತ್ತೀಯ..,. ಎಂದು ಉಪಯೋಗಿಸಬಾರದು (nevar and always ). ನೀನು ಯಾವುದಕ್ಕೂ ಪ್ರಯೋಜನವಿಲ್ಲ….. ನಿನ್ನ ಕೈಯಲ್ಲಿ ಆಗುವುದಿಲ್ಲ…… ಎಂದು ಯಾವತ್ತೂ ಹೇಳಬಾರದು. ಕೆಲವು ತಂದೆ ತಾಯಿ ಮಕ್ಕಳಿಗೆ ಸವಾಲು ಹಾಕಿದರೆ ಹಠಕ್ಕೆ ಆದರೂ ಮಾಡುತ್ತಾರೆ ಎಂದು ಯೋಚಿಸಿ ಹೀಗೆ ಹೇಳುತ್ತಾರೆ ಆದರೆ ಅದು ನಾಕಾರಾತ್ಮಕ ಪರಿಣಾಮ ಬೀರುತ್ತದೆ…… ಆದ್ದರಿಂದ ಮಕ್ಕಳಿಗೆ ಮೂರು D ಕಲಿಸಿಕೊಡಬೇಕು. ಅದು
Decesion
Determination
Dedication
ಮಕ್ಕಳಿಗೆ ನಿರ್ಣಯ ತೆಗೆದುಕೊಳ್ಳುವುದನ್ನು ಚಿಕ್ಕ ವಯಸ್ಸಿನಿಂದಲೇ ಹೇಳಿಕೊಡಬೇಕು. ಅದಕ್ಕೆ ಅವರಿಗೆ ಸ್ವಾತಂತ್ರ್ಯ ಕೊಡಬೇಕು. ಅವರ ಮೇಲೆ ನಂಬಿಕೆ ಇಡಬೇಕು. ಅವರ ಜೊತೆಗಿದ್ದು ಅದರಪೂರ್ವಪರಗಳನ್ನು ವಿಮರ್ಶೆಸಲು ಸಹಾಯ ಮಾಡಬೇಕು ಅದೇ ಮಕ್ಕಳಿಗೆ ಸರಿ ತಪ್ಪುಗಳನ್ನು ವಿಮರ್ಶೆ ಮಾಡಲು ಕಲಿಸುವುದು. ಮುಂದೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬರುತ್ತದೆ ಅಲ್ಲದೆ ಬೇರೆಯವರ ಪ್ರಭಾವಕ್ಕೊಳಗಾಗದೆ ನಿರ್ಧಾರ ತೆಗೆದುಕೊಳ್ಳುವ ದೃಢತೆ ಬರುತ್ತದೆ.ಉದಾಹರಣೆ ಕೊಡುತ್ತೇನೆ. ನನ್ನ ಮಗ 5 ನೇ ಕ್ಲಾಸ್ ನಲ್ಲಿ ಓದುತ್ತಿದ್ದ. ರಜೆಗೆ ಊರಿಗೆ ಹೋಗಿದ್ದ. ಆ ಊರಲ್ಲಿ ಅವರ ಅತ್ತೆಯ ಮನೆ ಇತ್ತು ಹಾಗೂ ನನ್ನ ತಾಯಿಯೂ ಅದೇ ಊರಲ್ಲಿ ಇದ್ದರು. ಅವನು ಅಜ್ಜಿಯ ಜೊತೆಗೆ ಇದ್ದ. ಯುಗಾದಿ ಹಬ್ಬ ಬಂದಿತು. ಅತ್ತೆಯೂ ಮನೆಗೆ ಕರೆದಳು. ಅಜ್ಜಿಗೂ ಆಸೆ. ಏನು ಮಾಡುವುದೆಂದು ಯೋಚಿಸಿದ ಎಲ್ಲಿ ಬೇಕಾದರೂ ಇರಬಹುದಾದ ಸ್ವಾತಂತ್ರ್ಯ ಅವನಿಗೆ ಇತ್ತು ಆದರೂ ನನ್ನನ್ನು ಕೇಳಿಯೇ ಹೇಳುತ್ತೇನೆ ಎಂದು ಅವರ ಅಜ್ಜಿಗೆ ಹೇಳಿ ನನಗೆ ಫೋನ್ ಮಾಡಿದ ಅದಕ್ಕೆ ಅತ್ತೆ ಹತ್ತಿರ ಇರುವ ವಿಷಯ ಹೇಳು ಅವಳು ಹೇಗೆ ಹೇಳುತ್ತಾಳೋ ಹಾಗೇ ಮಾಡು ಎಂದೆ. ಅತ್ತೆ ಮನೆಗೆ ಯಾವಾಗಲೂ ಹೋಗುವುದರಿಂದ ಅಜ್ಜಿಗೆ ಅವನು ಸಿಗುವುದು ಅಪರೂಪ ಎಂದು ಅಜ್ಜಿ ಮನೆಯಲ್ಲಿ ಹಬ್ಬ ಮಾಡುವುದೆಂದು ತೀರ್ಮಾನ ಆಯಿತು…… ಇಲ್ಲಿ ನನ್ನ ಗಮನಕ್ಕೆ ನಂದಿದ್ದೆನೆಂದರೆ ಅವನಿಗೆ ಸ್ವಾತಂತ್ರ್ಯ ಕೊಟ್ಟರೂ ನನ್ನನ್ನು ಕೇಳಬೇಕೆಂದು ಅವನು ಯೋಚಿಸಿದ. ಇದೇ ಮುಖ್ಯ. ಸ್ವಾತಂತ್ರ್ಯ ನಂಬಿಕೆ ಮತ್ತು guidence ಎಲ್ಲವೂ ಇರಬೇಕು. ಆಗಲೇ ಮಕ್ಕಳು ಬೆಳೆಯುವುದು.
ನಾವು ಮಾಡಬೇಕೆಂದು ಇರುವುದನ್ನು ಏನೇ ಬಂದರೂ ಮಾಡಿಯೇ ಮಾಡುತ್ತೇಮೆಂನ್ನುವುದು ಇರಬೇಕು. ಯಾವುದನ್ನು ಮಾಡಬೇಕೆಂದು ತೀರ್ಮಾನಿಸುತ್ತಾರೋ ಅದರ ಪರಿಣಾಮದ ಬಗ್ಗೆ ಎಚ್ಚರಿಸಬೇಕಾಗಿರುವುದು ತಂದೆ ತಾಯಿ.
ಮಾಡಬೇಕಿದಿರುವುದನ್ನು ಕಾರ್ಯರೂಪಕ್ಕೆ ತರಲು ತಮ್ಮ ನೂರು ಪ್ರತಿಶತ ಪ್ರಯತ್ನ ಹಾಕುವುದನ್ನು ಮಕ್ಕಳಿಗೆ ಕಲಿಸಬೇಕು. ಎಲ್ಲಾ ತಾಯಿ ತಂದೆಗೂ ಮಕ್ಕಳು ಶಾಲೆಯಲ್ಲಿ ಚೆನ್ನಾಗಿ ಅಂಕ ಗಳಿಸಲಿ ಎನ್ನುವ ಆಸೆ ಇರುತ್ತದೆ. ಆ ರೀತಿ ಚೆನ್ನಾಗಿ ಓದಬೇಕೆನ್ನುವ ಬಯಕೆ ಮಕ್ಕಳಲ್ಲಿ ಮೂಡಿಸುವುದು ಪಾಲಕರ ಹೊಣೆ. ಅವರ ಕಡೆಯಿಂದ ಈ ಅಸೆ, ತೀರ್ಮಾನ ಎಲ್ಲಾ ಬಂದಾಗ ಯಾವುದೇ ತೊಂದರೆ ಇರುವುದಿಲ್ಲ. ತಂದೆ ತಾಯಿಯಕಡೆಯಿಂದ ಅದು ಒತ್ತಾಯವಾದರೆ ಅದರ ಪರಿಣಾಮ ಭೀಕರವಾಗಿರುತ್ತದೆ.
ಈ ರೀತಿಯ performence presure ಮಕ್ಕಳು ಆತ್ಮ ಹತ್ಯೆ ಮಾಡಿಕೊಳ್ಳುವಂತೆ ಪ್ರೇರಿಸುತ್ತದೆ. ನಂತರ ಏನೂ ಮಾಡಲು ಉಳಿದಿರುವುದಿಲ್ಲ. ಅರಳಿ ನಳ ನಳಿಸಬೇಕಿದ್ದ ಹುವೊಂದು ಉದುರಿ ಹೋದರೆ ಎಂಥ ಸಂಕಟ…..
ಪೋಷಕರು ಒಮ್ಮೆ ಯೋಚಿಸಿ……
ಒಂದು ಕಾಗದದ ತುಂಡಿನಲ್ಲಿ ಬರುವ ಅಂಕಿಗಳು ಜೀವನವನ್ನು ತೀರ್ಮಾನಿಸಬಲ್ಲದೇ? ಓದು ಜೀವನದ ಮುಖ್ಯ ಅಂಗ. ಆದರೆ ಬದುಕು ಅದಕ್ಕಿಂತ ತುಂಬಾ ದೊಡ್ಡದು.
ಜೀವನವನ್ನು ಜೀವಿಸಲು ಮುಖ್ಯವಾದದ್ದು ಸಾಮರ್ಥ್ಯ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬರುವುದಕ್ಕೆ ಮುಖ್ಯ ಅಂಶ ಸೋಲನ್ನು ಸ್ವೀಕರಿಸುವುದು.
ಈ ಸಮಸ್ಯೆಗೆ ಪರಿಹಾರ ಅದೇ. ಗೆಲುವನ್ನು ಸ್ವೀಕರಿಸಲು ಸಿದ್ಧತೆ ಬೇಕಿಲ್ಲ ಆದರೆ ಸೋಲನ್ನು ಸ್ವೀಕರಿಸಲು ಗೊತ್ತಿರದಿದ್ದರೆ ಮನಸಿನ ಮೇಲೆ ಎಂಥ ಏಟು ಬೀಳುತ್ತದೆಂದರೆ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಜೀವನದ ಮುಖ್ಯ ಪಾಠ, ಯಶಸ್ಸು ತಂದು ಕೊಡುವಂಥದ್ದು ಇದೇ.
ಕೊಡುವುದು ಬಿಟ್ಟುಕೊಡುವುದು ಇದೇ ಸುಂದರ ಜೀವನದ ಬುನಾದಿ
