“ಬದುಕೆಂಬ ಮರೀಚಿಕೆ” ರೇವತಿ ಶ್ರೀಕಾಂತ್

ಜೀವನದಲ್ಲಿ ನಾವು ಎದುರಿಸುವ ಸಮಸ್ಯೆಗಳು ನಮ್ಮನ್ನು ಸಾಕಷ್ಟು ಗಟ್ಟಿಗೊಳಿಸುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ  ಅರ್ಥ ಮಾಡಿಕೊಂಡಾಗ  ಮಾತ್ರ. ಎದುರಿಸುವ  ಗಟ್ಟಿತನ ಇಲ್ಲದಿದ್ದರೆ ನಮ್ಮನ್ನು  ಪಾತಾಳಕ್ಕೆ ತಳ್ಳುತ್ತದೆ. ಆದರೆ ಆಯ್ಕೆ ನಮ್ಮ ಕೈಲೇ ಇದೆ.


ನಮ್ಮ ಜೀವನದ ಸಮಸ್ಯೆಗಳನ್ನು 4 ಕಾಲಘಟ್ಟದಲ್ಲಿ ವಿಂಗಡಿಸಬಹುದು .
1. ಬಾಲ್ಯದ ಸಮಸ್ಯೆಗಳು
2. ಯವ್ವನದ ಸಮಸ್ಯೆಗಳು
3. ಮಧ್ಯವಯಸ್ಸಿನ ಸಮಸ್ಯೆಗಳು
4. ವೃಧಪ್ಯದ ಸಮಸ್ಯೆಗಳು


ಮೊದಲನೇ ವರ್ಗದ ಸಮಸ್ಯೆಗಳು….. ಎಂದರೆ ಬಾಲ್ಯದ ಸಮಸ್ಯೆಗಳ ಬಗ್ಗೆ ಮಾತನಾಡೋಣ
ಬಾಲ್ಯ ಎನ್ನುವುದು ಜೀವನದಲ್ಲಿ ಅತ್ಯಂತ ಸುಂದರವಾದ ಕಾಲ. ಆ ತುಂಟಾಟಗಳು ಬೇರೆಯವರಿಗೂ ನಮಗೂ ಒಂದು ಸಂಭ್ರಮ ತರುವುದು. ಏನೂ ಗೊತ್ತಿರದ ಆ ಸ್ಥಿತಿಯಲ್ಲಿ ಯಾವರೀತಿ ಕಷ್ಟದ ಅನುಭವ?
ತಂದೆ ತಾಯಿಯ ಸಂಬಂಧ  ಮಕ್ಕಳಮೇಲೆ ನೇರ ಪರಿಣಾಮ ಬೀರುತ್ತದೆ. ಮಗುವಿನ ಮುಂದೆ ಗಂಡ ಹೆಂಡತಿ ಏರು ದನಿಯಲ್ಲಿ ವಾದ, ವಿವಾದ ಮಾಡುವುದು ಜಗಳ ಆಡುವುದು ಮಕ್ಕಳ ಮನಸಿನಲ್ಲಿ ಅಘಾತ ಮೂಡಿಸುತ್ತದೆ..ಏಕೆಂದರೆ ಅದು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ವಯಸ್ಸಲ್ಲ  ಅದು. ವಿಷಯದ  ಸುಳಿವಿರದ  ಕಾರಣ ತನ್ನ ಮನಸಿಗೆ ತೋಚಿದ್ದು ಊಹಿಸುತ್ತದೆ ಮಕ್ಕಳ ಮನಸ್ಸು. ತಾನೇ ಏನಾದರೂ ಅಪ್ಪಾ ಅಮ್ಮನ ನಡುವೆ ಮನಸ್ತಾಪಕ್ಕೆ ಕಾರಣವೇನೋ ಎಂದು ಚಿಂತಿಸುತ್ತದೆ ಮಕ್ಕಳ ಮುಗ್ಧ
ಮನಸ್ಸು. ಅಲ್ಲದೆ, ಮಿತಿಇರದ  ಕೋಪ ಕಠೋರ ಮಾತು ಮಕ್ಕಳಲ್ಲಿ ಭಯ ಹುಟ್ಟಿಸುತ್ತದೆ.  ಅಂತಹ ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಾರೆ. ಉತ್ಸಾಹ ಕಳೆದುಕೊಳ್ಳುತ್ತಾರೆ. ಮಾನಸಿಕ ಒತ್ತಡಕ್ಕೆ ಒಳಹಾಗುತ್ತಾರೆ. ಯಾರೊಂದಿಗೂ ಬೇರೆಯದೆ ಬಬೇರೆಯಾಗುತ್ತಾರೆ. ಈ ಸಂದರ್ಭದಲ್ಲಿ. ತಂದೆ ತಾಯಿ ಮಕ್ಕಳ ಮುಂದೆ ತಾವು ಇಬ್ಬರೂ ಒಂದೇ ಎಂದು ತೋರಿಸಬೇಕು. ಅದೊಂದೇ ಇದಕ್ಕೆ ಪರಿಹಾರ. ಮಕ್ಕಳ ಭವಿಷ್ಯಕ್ಕಾಗಿ ತಮ್ಮ ವ್ಯಕ್ತಿಕ ಅಹಂಕಾರ ಬದಿಗಿಟ್ಟು ವ್ಯವಹಾರಿಸಬೇಕು.  ಇಲ್ಲದಿದ್ದರೆ  ಮಕ್ಕಳು ತಮಗೆ ಬೇಕಾದ್ದು ಮಾಡಿಕೊಳ್ಳುತ್ತಾರೆ.ಅಥವಾ ಯಾವಾಗಲೂ ದ್ವಂಧ್ವದಲ್ಲೇ ಇರುತ್ತಾರೆ..

ಮತ್ತೊಂದು ರೀತಿಯ ಸಮಸ್ಯೆ  ಶಾಲೆಯಲ್ಲಿ  ಎಲ್ಲ ಮನೋಭಾವದ ಮಕ್ಕಳೂ ಬರುತ್ತಾರೆ. ಕೆಲವು ಮಕ್ಕಳು,, ತುಂಬಾ ಮೃದು ಮನಸ್ಸಿನವರು. ಕೆಲವು ಮಕ್ಕಳು ಶಾಲೆಯಲ್ಲಿ ರೇಗಿಸುವುದು, ಪೆನ್ಸಿಲ್ ರಬ್ಬರ್ ಇತ್ಯಾದಿ ಕದಿಯುವುದು, ಹೀಗೆಲ್ಲ ಮಾಡುತ್ತಾರೆ ಮಕ್ಕಳಿಗೆ ಹೇಗೆ ಪ್ರಕೃಯಿಸುವುದು ಗೊತ್ತಾಗುವುದಿಲ್ಲ.. ತಂದೆ ತಾಯಿಯ ಬಳಿ ಹೇಳಿಕೊಳ್ಳುತ್ತಾರೆ. ಆಗ ಈ ಪರಿಸ್ಥಿತಿಯನ್ನು ನಿಭಾಯಿಸುವುದನ್ನು ಕಳಿಸಿಕೊಡಬೇಕಾಗುತ್ತದೆ. ಇಬ್ಬರೂ ಮಗುವಿಗೆ ಆತ್ಮ ವಿಶ್ವಾಸ  ಕೊಡಬೇಕು.. ಮೊದಲ ಮಾತು ನಾವಿದ್ದೇವೆ ನಿನ್ನ ಜೊತೆಗೆ ಎನ್ನುವ ಮಾತು ಅವಶ್ಯಕ.

ಮತ್ತೊಂದು ಭಯಾನಕವಾದ ಸಮಸ್ಯೆ ಎಂದರೆ ಪುಟ್ಟ ವಯಸಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗುವುದು. ಈ ಪ್ರರಿಸ್ಥಿತಿ  ಅಂತೂ ನರಕ ಎಂದರೆ ತಪ್ಪಲ್ಲ.ಏನಾಗಿದೆ ಎಂಬ ಅರಿವೂ ಇರದೇ, ಮುಜುಗರಕ್ಕೆ ಒಳಗಾಗಿ ಕ್ರಮೇಣ  ತನ್ನತನವನ್ನೇ ಕಳೆದುಕೊಳ್ಳುತ್ತದೆ. ಈ ಅಘಾತದಿಂದ ಹೊರಬರಲು ಎಷ್ಟೋ ವರ್ಷಗಳು ಹಿಡಿಯುತ್ತದೆ.ಕೆಲವೊಮ್ಮೆ ಅದೂ ಸಾಧ್ಯವಾಗುವುದಿಲ್ಲ.

ಈ ವಿಷಯದಲ್ಲಿ ತಂದೆತಾಯಿ ಮಕ್ಕಳಿಗೆ good touch ಮತ್ತು bad touch ನಡುವಿನ ಅಂತರವನ್ನು ಹೇಳಿಕೊಡಬೇಕು. ಮತ್ತು ಅಪರಿಚಿತರ ಜೊತೆಗೆ ವ್ಯವಹಾರ ನಡೆಸುವಾಗ ತಂದೆತಾಯಿಯ  ಉಪಸ್ಥಿತಿ ಇರಬೇಕು.
ಅಸಹಜ ಎನಿಸುವ  ಸ್ಪರ್ಶಕ್ಕೆ ಸ್ಪಷ್ಟವಾಗಿ  ನಿರಾಕರಿಸುವದಕ್ಕೆ ಹೇಳಿಕೊಡ ಬೇಕು. ಈ ರೀತಿ  ಅತ್ಯಾಚಾರಕ್ಕೆ ಒಳಗಾದವರಿಗಾಗಿ  helpline ಇರುತ್ತದೆ. ಅದಕ್ಕೆ ಸಂಪರ್ಕಿಸಬೇಕು. ಮಕ್ಕಳು ಪ್ರತಿಯೊಂದನ್ನು ತಂದೆತಾಯಿಯೊಂದಿಗೆ  ಹೇಳಿಕೊಳ್ಳಲು ಪ್ರೋತ್ಸಾಹಿಸಬೇಕು.

ನೈತಿಕತೆ  ಬಗ್ಗೆ  ಹೆಚ್ಚು ಹೇಳಿಕೊಡಬೇಕು. ಇದು ಕಷ್ಟದ ಆರಂಭ. ಮುಂದಿನ ಭಾಗದಲ್ಲಿ ಯವ್ವನದಲ್ಲಿ  ಉಂಟಾಗಬಹುದಾದ ಸಮಸ್ಯೆಗಳಬಗ್ಗೆ  ಚರ್ಚಿಸೋಣ.


Leave a Reply

Back To Top