ಕಾವ್ಯ ಸಂಗಾತಿ
ಶಿ ಕಾ ಬಡಿಗೇರ ಕೊಪ್ಪಳ
ʼಬಸಿರಾಗುವುದೆಂದರೆʼ


ಬಸಿರಾಗುವುದೆಂದರೆ ಸುಮ್ಮನೆಯೇ?
ಅದಕ್ಕೂ ನಿಟ್ಟುಸಿರು ಬಿಡಬೇಕಲ್ಲವೇ?
ಗೋಡೆ ಕಾವಲಾಗಿರಬೇಕು ಕಿಟಕಿ
ಮುಚ್ಚಿ ಕೊಳ್ಳಬೇಕು…
ಬೆಳ್ಳಕ್ಕಿ ಸಾಲು ಒಗ್ಗಟ್ಟಿಗೆ ಬಲ ತುಂಬಬೇಕು; ಹೊಲದ ಬದುವಿನ
ಹುಲ್ಲು ದನ ಮೇಯ್ಯಲು ಬೇಕು
ಉಸಿರಿಗೆ ಉಸಿರು ತಾಗಬೇಕು…
ಬಸಿರೆಂದರೆ ಬಯಕೆ, ಪ್ರೀತಿ ಅದಕ್ಕೂ ಮಿಕ್ಕಿ ಹೊಂದಾಣಿಕೆ;
ಮಾತಿನಲಿ ಮಮತೆ ಇರಬೇಕು;
ತುತ್ತಿನಲಿ ಕಕ್ಕುಲಾತಿ ಕಾಣಬೇಕು…
ಶಿ ಕಾ ಬಡಿಗೇರ, ಕೊಪ್ಪಳ