ಕಾವ್ಯ ಸಂಗಾತಿ
ದೀಪಾ ಪೂಜಾರಿ ಕುಶಾಲನಗರ
ʼನನ್ನ ಪ್ರಾಣ ಪಕ್ಷಿʼ


ಎಲ್ಲರೂ ನಮ್ಮವರೇ,
ಯಾರೂ ನಮ್ಮವರಲ್ಲ
ನಗುವಲಿ ಹಿತವು, ಮಾತಿಗೆ
ಮಿತ್ರರು,
ನೋವಿನ ಹೊತ್ತಿಗೆ ನೆರಳು
ಮಾತ್ರರು!
ಸ್ನೇಹದ ನೆರಳು ಬೆಚ್ಚಗೆ
ಇರಬಹುದು,
ಸೂರ್ಯ ಬರಲೂ
ಮಾಯವಾಯಿತು ಮಂಜು
ಒಗ್ಗಟ್ಟಿನ ಹಾಡು ಎಲ್ಲರ
ಮಂತ್ರ,
ಹೃದಯಕೆ ಸೇರುವುದಿಲ್ಲ
ಅಂತ ಹಾಡು
ಎಲ್ಲರೂ ನಮ್ಮವರೇ,
ಯಾರೂ ನಮ್ಮವರಲ್ಲ,
ನಿಜವನು ಅರಿಯಲು
ಬಾಳೇ ಸಾಕ್ಷಿ
ಎಲ್ಲವೂ ದೈವವು
ನನ್ನ ಬಾಳಿನ ಅಕ್ಷಿ
ಹಿತವಾಗಿ ಗೂಡಲಿ
ನನ್ನ ಪ್ರಾಣ ಪಕ್ಷಿ
————————————————————————————-
ದೀಪಾ ಪೂಜಾರಿ ಕುಶಾಲನಗರ
