ಕಾವ್ಯ ಸಂಗಾತಿ
ನಾಗರಾಜ್ ಹರಪನಹಳ್ಳಿ
ನಾಲ್ಕು ಹನಿ ಉದುರಬೇಕಿತ್ತು

1-
ಸುಡು ಬಿಸಿಲು
ಉರಿಬಿಸಿಲು
ಬಯಲು ಸುಡುತ್ತಿದೆ
ನಾಲ್ಕು ಹನಿ ಉದುರಬೇಕಿತ್ತು
ಪ್ರೀತಿಯಂತೆ
…ದೂರವಾದೆ
ಬಿಸಿಲು ಉಲ್ಬಣಿಸಿದೆ
-2-
ಉರಿ ಬಿಸಿಲ ದಾರಿ
ದಾರಿಯಲ್ಲಿ ಕಂಡವರು
ನಕ್ಕರು, ಮಾತಾಡಿದರು
ಆದರೂ
ಸಮಾಧಾನವಾಗಲಿಲ್ಲ

ಉರಿ ಬಿಸಿಲಿನದ್ದೇ ಮಾತು
ಒಂದು ಹನಿ ಪ್ರೀತಿಗಾಗಿ
ಎಲ್ಲರದ್ದೂ ಹುಡುಕಾಟವೇ
ಬಿಸಿಲಿನ ಅರ್ಥ
ಇಮ್ಮಡಿಸಿತು
-3-
ಭೂಮಿ ತಲ್ಲಣಿಸಿದೆ
ಕಾವ್ಯ ಕಾಣೆಯಾಗಿದೆ
ನೀನು ಹೋದ ಮೇಲೆ
ಯಾರಿಗೆ ಬೇಕು ಈ ಕಾವ್ಯ ?
ಅಕ್ಷರಗಳು ಸಹ
ಬಿಸಿನ ದಾಹಕ್ಕೆ
ಬಳಲಿವೆ
-4-
ನದಿ ದಂಡೆಗೆ ಬಂದೆ
ನದಿ ಬಾಯರಿಕೆ ಎಂದಿತು
ಕಡಲದಡಕ್ಕೆ ಬಂದೆ
ಅದು ಸಹ ಅಬ್ಬರಿಸಿತು
ಮೋಡ ಕಟ್ಟುವ ಮುಗಿಲಿಗಾಗಿ
ಕಾದಿದ್ದೇನೆ ಎಂದಿತು
ನನ್ನದು
ನಿನ್ನ ಹಸಿವೆಯೇ ಎಂದು
ಮೌನಿಯಾದೆ
ನಾಗರಾಜ್ ಹರಪನಹಳ್ಳಿ .

So nice, Awesome,very meaningful.
ಚೆಂದದ ಕವಿತೆ
Lovely