ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜನಜನಿತ ನಲ್ನುಡಿಯು ಒಂದು,
ತಿಳಿಹೇಳುವುದ ಕೇಳು , ಇನಿತು.
ಸಮುದ್ರವನು ಸೇರುವ ಮೊದಲು,
ಭಯದಿಂದ ನಡಗುವುದು ನದಿ
ಯು.

ಹಿಂತಿರುಗಿ ನೋಡಿತಾ ನದಿಯು,
ಹರಿದು ಬಂದ ಹಾದಿಯ ನೆನೆದು,
ಗಿರಿಯ ನೆತ್ತಿಯಿಂದಲಿ ಇಳಿದು ,
ಅಂಕು ಡೊಂಕು ಹಾದಿಯ ತುಳಿದು,
ಕಾಡು,ಹಾಡಿಯ, ಸುತ್ತ ಬಳಸಿ,
ಗೊತ್ತು ಗುರಿಯೋ! ಎನಿತು ಇರದು.

ಮಹಾಂಬುಧಿಯ ಬುಡದಲಿ ನದಿ ಯು,
ಅದೆ ಪಯಣದ ಅಂತಿಮ ತಾವು.
ಹಿನ್ನಡಿ ಇಡಲು ಸಾಧ್ಯವೆಂತು?
ಮುನ್ನಡಿ ಇಟ್ಟರೆ ತಾನ್ ಎಂತು?
ದೈರ್ಯದಿಂದ ನುಗ್ಗಿತು ನದಿಯು.
ಶರಧಿಯೊಳು ಶರಧಿಯೆ ಆಯಿತು.


About The Author

Leave a Reply

You cannot copy content of this page

Scroll to Top