ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೆಲೆಯನ್ನು ಕಂಡುಕೊಳ್ಳಲು ಇಂದು
ನೆಲವನ್ನು ಅಗೆದು ಕಲ್ಲು ಹಾಸಿ
ಮನೆಯ ಕಟ್ಟಿದರೆ ಮೆಚ್ಚದವರು
ನೆಮ್ಮದಿಯ ಕೊರೆಯಲೆಂದು ತಲೆಗೆ
ವಾಸ್ತು ದೋಷವೆಂಬ ಹುಳ ಬಿಟ್ಟರು

ಗ್ರಹಚಾರವೆ ಇರದ ಮನೆಗೆ
ಮನೆ ಮಂದಿಗೆ ಗ್ರಹ ದೋಷವೆಂದರು
ಸಂತಸದ ಬಾಗಿಲ ತೆರೆಯುವಷ್ಟರಲಿ
ಅನುಮಾನದ ಕಿಂಡಿ ಕೊರೆದರು
ಎಲ್ಲವನ್ನು ಲಾಭಕ್ಕಾಗಿ ಬಳಸಿದರು

ಜಾಗ ಸರಿಯಿಲ್ಲ ಮಕ್ಕಳ ಭಾಗ್ಯವಿಲ್ಲ
ಪ್ರೇತದ ಬಾಧೆ ದೈವದ ನೆಲವೆಂದು
ಹಣಕ್ಕಾಗಿ ಸುಳ್ಳಿನ ಕಂತೆ ಹೆಣೆದರು
ಮನೆ, ಮನಸಿನ ಮೂಲೆ ಒಡೆದರು
ಜೀವನ ಬೀದಿಪಾಲು ಮಾಡಿದರು

ಬೇರೆಯವರ ಮಾತು ನಂಬಬೇಕು ಮನುಜ
ಮೋಸ ಹೋಗಿ ಮೂರ್ಖರಾಗುವವರೆಗಲ್ಲ
ಯಾರು ಇಲ್ಲಿ ನಮ್ಮ ಏಳಿಗೆ ಬಯಸಲ್ಲ
ತನ್ನ ಒಳಿತು ಮಾತ್ರ ಬಯಸುವ ಕಾಲವಿದು
ಎಚ್ಚರನಾಗು ಯಾರೂ ಇಲ್ಲಿ ನಮ್ಮವರಲ್ಲ


About The Author

Leave a Reply

You cannot copy content of this page

Scroll to Top