ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೈಯಲ್ಲಿ ಸುದರ್ಶನ ಚಕ್ರ ದಂಥ ಆಯುಧ
ಆದರೂ ಕೊಳಲನ್ನು ಹಿಡಿದು ನಿಂತವನ್ಯಾರದರೂ
ಇದ್ದರೆ ಅವನು ಕೃಷ್ಣನೇ ಆಗಿದ್ದ

ಸಾವಿರಸಸೈನ್ಯದ ಬಲವಿದ್ದರೂ ಯುದ್ಧದಲ್ಲಿ
ಶಸ್ತ್ರವನ್ನು ಬಿಟ್ಟು ಸಾರಥಿಯಾಗುವನೆಂದರೇ
ಅವನು ಕೃಷ್ಣನೇ ಆಗಿದ್ದ

ಅರಮನೆ ಸಕಲ ಸಂಪತ್ತು ವೈಭೋಗದಲ್ಲಿ
ಸುಧಾಮನಂತಹ ಗೆಳೆಯನನ್ನು ಹೊಂದಿದ್ದರೇ
ಅವನು ಕೃಷ್ಣನೇ ಆಗಿದ್ದ.

ಮೃತ್ಯುತನ್ನ ಕಾಲ್ಕೆಳಗೆ ಹಾವಾಗಿ ನಿಂತಾಗ
ನೃತ್ಯವ ಮಾಡಿ ನಗುತನಿಂತವನು ಯಾರಿದ್ದರೇ
ಅವನು ಕೃಷ್ಣನೇ ಆಗಿದ್ದ.

ಒಂದೇ ತಪ್ಪಿಗೆ ತಲೆ ಉರಳಿಸುವ ತಾಕತ್ತು
ನೂರುತಪ್ಪು ಎಣಿಸುತ ತಾಳ್ಮೆಯಲಿ ಕಳೆದವನು
ಅವನು ಕೃಷ್ಣನೇ ಆಗಿದ್ದ

ದ್ವೇಷಿಸುವ ಸಾವಿರ ದಾರಿಯ ಜಗದಲಿ
ಪ್ರೀತಿಸುತ ನಿಲ್ಲು ಎಂದು ಹೇಳಿದವನ್ಯಾರೆಂದರೇ
ಅವನು ಕೃಷ್ಣನೇ ಆಗಿದ್ದ.


About The Author

4 thoughts on “ಸಾಕ್ಷಿ ಶ್ರೀಕಾಂತ ತಿಕೋಟಿಕರ ಅವರ ಕವಿತೆ-ಕೃಷ್ಣ.”

  1. ಶ್ರೀ ಕೃಷ್ಣಂ ವಂದೇ ಜಗದ್ಗುರುಂ
    (ಆಪ್ಯಾಯಮಾನವಾದ ಭಕ್ತಿಯ ಲಹರಿ)

Leave a Reply

You cannot copy content of this page

Scroll to Top