ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನ್ನದಾತನಿಗೆ ಹೆಗಲಾಗಿ ನೊಗವನ್ನು ಹೊತ್ತಿಹುದು ವೃಷಭ
ಬೆನ್ನುಬಾಗಿಸಿ ಬೇಸರವಿರದೆ ಹೊಲವ ಉತ್ತಿಹುದು ವೃ಼ಷಭ

ಆಸರೆ ಬಯಸಿ ಬಾಳಯಾನವ ಕಂಡಿತಲ್ಲ ಕಾಮಧೇನು
ಓಸರಿಸಿ ಕಷ್ಟಗಳ ಅವಿರತ ಸುಖವನು ಮೆತ್ತಿಹುದು ವೃಷಭ

ಹಿಡಿಮೇವು ಹಾಕುತ ದರ್ಪವನು ಮೆರೆದಿಹರು ಜನರು
ಕಡುಪು ತೋರದೆ ತಲೆತಗ್ಗಿಸಿ ದುಡಿಯ ಹತ್ತಿಹುದು ವೃಷಭ

ಸಾರಿಸಲು ಸೆಗಣಿಯನು ಕ್ರಿಮಿಕೀಟಗಳ ಬಾಧೆ ತಪ್ಪಿಹುದು
ದೊರೆಯ ಏಳಿಗೆಗಾಗಿ ನಿತ್ಯವೂ ಜೀವವ ತೆತ್ತಿಹುದು ವೃ಼ಷಭ

ಅಭಯವಿತ್ತು ರೈತನನು ಅಹರ್ನಿಶಿ ಸಲಹುತ ನಿಂತಿಹುದಲ್ಲ
ಅಭಿನವನ ನೆನೆದು ಭೂತಾಯಿಯ ಸುತ್ತಿಹುದು ವೃಷಭ


About The Author

Leave a Reply

You cannot copy content of this page

Scroll to Top