ಕಾವ್ಯ ಸಂಗಾತಿ
![](https://sangaati.in/wp-content/uploads/2023/09/kadajji-768x1024.jpg)
ಕಾಡಜ್ಜಿ ಮಂಜುನಾಥ ಅವರ ಕವಿತೆ-
ಮತದ ನೆರೆಗೆ ಕರದ ಬರೆ….!!
![](https://sangaati.in/wp-content/uploads/2024/06/images-1-9.jpg)
ಬದುಕಿನಲಿ
ಏರಿಳಿತ ಸಹಜ
ತಾಳ್ಮೆ ಮನುಜ !
ಜಯವಾದಾಗ
ಹಿಗ್ಗದಿರು ,ಸೋತಾಗ
ಕುಗ್ಗದೆ ಇರು !
ವಾಸ್ತವತೆಯ
ಜೀವನ ಅರಿತುಕೋ
ಬದಲಾಗದೆ !
ಕಷ್ಟಗಳೇನು
ನಮ್ಮ ಮನೆದೇವರೆ
ಕೇಳಿ ಬರಲು !
ಏರಿಳಿತದ
ಜೀವನ ಎದುರಿಸಿ
ವಿಜಯಿಯಾಗು
ತಾಳ್ಮೆಮನದಿ
ಬದುಕು, ಎದುರಿಸಿ
ಗೆಲುವಾಗಿಸು !!
ಕಾಡಜ್ಜಿ ಮಂಜುನಾಥ